ಕಬಡ್ಡಿ ತಾಲೂಕು ಮಟ್ಟಕ್ಕೆ ಆಯ್ಕೆ

ಕಬಡ್ಡಿ ತಾಲೂಕು ಮಟ್ಟಕ್ಕೆ ಆಯ್ಕೆ

Tuesday, January 17th, 2023

ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಲ್ನಾಡು, ಪುತ್ತೂರು. ಇಲ್ಲಿ ನಡೆದ ವಲಯ ಮಟ್ಟದ ಬಾಲಕ- ಬಾಲಕಿಯರ(ಪ್ರಾಥಮಿಕ) ಕಬಡ್ಡಿ ಪಂದ್ಯಾಟದಲ್ಲಿ ನಮ್ಮ ಶಾಲಾ ಬಾಲಕಿಯರ ತಂಡವು ದ್ವಿತೀಯ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿರುತ್ತದೆ.

ವಿವೇಕ ಜಯಂತಿ ಆಚರಣೆ

ವಿವೇಕ ಜಯಂತಿ ಆಚರಣೆ

Tuesday, January 17th, 2023

” ಭಾರತದ ಹಿರಿಮೆ- ಗರಿಮೆಯನ್ನು ಜಗತ್ತಿನಾತ್ಯಂತ ಸಾರಿದ ಸ್ವಾಮಿ ವಿವೇಕಾನಂದರ ಜನುಮ ದಿನವನ್ನು ರಾಷ್ಟ್ರೀಯ ಯುವದಿನವನ್ನಾಗಿ ಆಚರಿಸಲು ರಾಷ್ಟ್ರದಾತ್ಯಂತ ಕರೆಕೊಟ್ಟಿರುವ ಹಿನ್ನೆಲೆಯನ್ನು ವಿದ್ಯಾರ್ಥಿ ದಿಶೆಯಿಂದ ನಾವೆಲ್ಲರೂ ತಿಳಿದುಕೊಳ್ಳಬೇಕಾಗಿದೆ” – ಶ್ರೀ ಹರಿಪ್ರಸಾದ್, ತೃತೀಯ ಬಿಎ ವಿದ್ಯಾರ್ಥಿ, ವಿವೇಕಾನಂದ ಪದವಿ ಕಾಲೇಜು ನೆಹರುನಗರ ಪುತ್ತೂರು.     ದಿನಾಂಕ 12.01.2023ರಂದು ನಮ್ಮ ಶಾಲೆಯಲ್ಲಿ ಜರುಗಿದ ವಿವೇಕಾನಂದ ಜಯಂತಿಗೆ ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಹರಿಪ್ರಸಾದ್ ಇವರು ಸ್ವಾಮೀಜಿಯವರ ದೃಢಸಂಕಲ್ಪದ ದೃಷ್ಟಾಂತಗಳು ನಮ್ಮಲ್ಲಿ ಭಾರತೀಯತೆಯ ದೃಷ್ಟಿಕೋನ ಬೆಳೆಸಿಕೊಳ್ಳಲು ಸಹಕಾರಿಯಾಗುವ ಬಗೆಯನ್ನು ತಿಳಿಸಿದರು. […]

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

Wednesday, January 11th, 2023

ಕ್ರೀಡಾ ಭಾರತಿ ಮಂಗಳೂರು ವಿಭಾಗದ ವತಿಯಿಂದ ಮಡಿಕೇರಿಯ ಕುಶಾಲನಗರದ ರೈತಭವನದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಶಾಲಾ ವಿದ್ಯಾರ್ಥಿಯಾದ ಲಿತಿನ್ ಎಸ್ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಕಬಡ್ಡಿ - ರಾಜ್ಯ ಮಟ್ಟಕ್ಕೆ ಆಯ್ಕೆ

ಕಬಡ್ಡಿ – ರಾಜ್ಯ ಮಟ್ಟಕ್ಕೆ ಆಯ್ಕೆ

Wednesday, January 11th, 2023

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇಲ್ಲಿ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪ್ರಾಥಮಿಕ ಬಾಲಕಿಯರು, ಪ್ರೌಢಶಾಲಾ ಬಾಲಕರು ಮತ್ತು ಪ್ರೌಢಶಾಲಾ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.

ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಬಾಲಕಿಯರ ಖೋ-ಖೋ ತಂಡ

ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಬಾಲಕಿಯರ ಖೋ-ಖೋ ತಂಡ

Wednesday, January 11th, 2023

ಶ್ರೀದೇವಿ ಶಾಲೆ ಪುಣಚದಲ್ಲಿ ನಡೆದ ವಿದ್ಯಾಭಾರತಿಯ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶಾಲಾ ಬಾಲಕಿಯರ ತಂಡ.

ಶ್ರೀಕೃಷ್ಣ ಭಜನಾ ಮಂದಿರ ಕೌಡಿಚ್ಚಾರು ಇಲ್ಲಿ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಸಮನ್ವಯ

ಶ್ರೀಕೃಷ್ಣ ಭಜನಾ ಮಂದಿರ ಕೌಡಿಚ್ಚಾರು ಇಲ್ಲಿ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಸಮನ್ವಯ

Tuesday, January 10th, 2023

ಶ್ರೀಕೃಷ್ಣ ಭಜನಾ ಮಂದಿರ ಕೌಡಿಚ್ಚಾರು ಇಲ್ಲಿ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸಮನ್ವಯ ಕಾರ್ಯಕ್ರಮ ನಡೆಯಿತು. ಇದು ಭಕ್ತ ಬಾಂಧವರ ಮನಸ್ಸಿಗೂ ಮುದವನ್ನು ನೀಡಿರುತ್ತದೆ. ತನ್ಮೂಲಕ ಮಕ್ಕಳು ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಿ ಕೃತಾರ್ಥರಾಗಿರುತ್ತಾರೆ.

ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮೂಲ ವಿಜ್ಞಾನದ ಪ್ರಾಯೋಗಿಕ ಕಾರ್ಯಾಗಾರ

ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮೂಲ ವಿಜ್ಞಾನದ ಪ್ರಾಯೋಗಿಕ ಕಾರ್ಯಾಗಾರ

Tuesday, January 10th, 2023

ವಿವೇಕಾನಂದ ಪದವಿ ಕಾಲೇಜು ವತಿಯಿಂದ ವಿಜ್ಞಾನ ಹಾಗೂ ಗಣಿತ ಪಠ್ಯ ವಿಷಯಗಳ ಸುಲಭ ಹಾಗೂ ಪರಿಣಾಮಕಾರಿ ಕಲಿಕೆಗೆ ಸಂಬಂಧಿಸಿ ಪ್ರಾಯೋಗಿಕ ಕಾರ್ಯಗಾರ ನಡೆಯಿತು. ವಿವೇಕಾನಂದ ಪದವಿ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಮಕ್ಕಳು ಅತ್ಯುತ್ತಮ ರೀತಿಯಲ್ಲಿ ಮಕ್ಕಳಿಗೆ ತಿಳಿಸಿಕೊಟ್ಟರು. ಪರೀಕ್ಷಾ ತಯಾರಿ ಹಾಗೂ ತಿಳುವಳಿಕೆಯ ದೃಷ್ಟಿಯಿಂದ ಎಲ್ಲಾ 10ನೇ ತರಗತಿ ವಿದ್ಯಾರ್ಥಿಗಳಿಗೆ ಕಾರ್ಯಗಾರವು ತುಂಬಾ ಸಹಕಾರಿಯಾಗಿತ್ತು. ನಮ್ಮ ಶಾಲಾ ವಿಜ್ಞಾನ ಶಿಕ್ಷಕರುಗಳಾದ ಶ್ರೀಮತಿ ಪೂರ್ಣಿಮ, ಶ್ರೀಮತಿ ಶ್ವೇತಾ, ಶ್ರೀಮತಿ ಪುಷ್ಪಾವತಿ ಭಾಗವಹಿಸಿದರು.

ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಗಣಿತ ಕಾರ್ಯಗಾರ

ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಗಣಿತ ಕಾರ್ಯಗಾರ

Tuesday, January 10th, 2023

ಶಾಲಾ ಹತ್ತನೇ ತರಗತಿಯ ಮಕ್ಕಳ ಗಣಿತ ಕಲಿಕೆಗೆ ಸಂಬಂಧಿಸಿದಂತೆ ದಿನಾಂಕ 07-01-2023 ಮತ್ತು 08-01-2023ರಂದು ಪ್ರಾಯೋಗಿಕ ಗಣಿತ ಕಾರ್ಯಗಾರ ನಡೆಯಿತು. ಹತ್ತನೇ ತರಗತಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾದ ಶ್ರೀ ಟಿ. ಎನ್ ಪ್ರಸನ್ನಮೂರ್ತಿ ಕಾರ್ಯಗಾರವನ್ನು ನಡೆಸಿಕೊಟ್ಟರು. ಮಕ್ಕಳ ಗಣಿತ ಪಠ್ಯದ ಕಠಿಣ ಕಲಿಕಾಂಶಗಳನ್ನು ಸುಲಭ ಹಾಗೂ ಸರಳ ರೀತಿಯಲ್ಲಿ ಕಲಿಯುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಪ್ರಯೋಗಗಳನ್ನು ಹಾಗೂ ಪ್ರಾತ್ಯಕ್ಷಿಕೆಗಳನ್ನು ಪ್ರಸ್ತುತಪಡಿಸುತ್ತಾ ಮಕ್ಕಳ ಗಣಿತ ಸಂಬಂಧಿ ಸಂಶಯಗಳಿಗೆ ಉತ್ತರಿಸಿದರು. ಮಕ್ಕಳ ಕ್ರಿಯಾತ್ಮಕ ಭಾಗವಹಿಸುವಿಕೆ ಹಾಗೂ ಅವರ ಆಸಕ್ತಿ ,ಪ್ರತಿಭೆಗಳನ್ನು […]

ಕಬಡ್ಡಿ - ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಕಬಡ್ಡಿ – ರಾಷ್ಟ್ರ ಮಟ್ಟಕ್ಕೆ ಆಯ್ಕೆ

Tuesday, January 3rd, 2023

                                                        ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ) ಬೆಂಗಳೂರು ಮತ್ತು ಉಡುಪಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ). ಉಡುಪಿ 3ನೇ ರಾಜ್ಯ ಸಬ್ ಜೂನಿಯರ್ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10ನೇ ತರಗತಿಯ […]

10ನೇ ತರಗತಿಯ ವಿದ್ಯಾರ್ಥಿ ಕೃಷ್ಣ.ಜಿ ಇವರು ಗುಂಡುಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

10ನೇ ತರಗತಿಯ ವಿದ್ಯಾರ್ಥಿ ಕೃಷ್ಣ.ಜಿ ಇವರು ಗುಂಡುಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Thursday, November 17th, 2022

                            ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಸೈಂಟ್ ಜೋಕಿಮ್ ವಿದ್ಯಾಸಂಸ್ಥೆಗಳು, ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆ ಕಡಬ ಇದರ ಸಹಯೋಗದಲ್ಲಿ ನಡೆದ ಅವಿಭಜಿತ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿನ ೧೦ನೇ ತರಗತಿಯ ವಿದ್ಯಾರ್ಥಿ ಕೃಷ್ಣ […]

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಅನುರಣನ ಪ್ರತಿಭೋತ್ಸವ 2022

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಅನುರಣನ ಪ್ರತಿಭೋತ್ಸವ 2022

Thursday, November 17th, 2022

ಅನುರಣನ ಪ್ರತಿಭೋತ್ಸವ 2022-23 ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತಂತಹ ಮಕ್ಕಳು ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಅನುರಣನ ಪ್ರತಿಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಶ್ರೀ ಸತೀಶ್ ರಾವ್ ನುಡಿದರು. ಶಾಲಾ ಪೋಷಕರಾದ ಶ್ರೀ ವಿಷ್ಣು ಭಟ್ ಪಾದೆ ಕಲ್ಲು ಮಾತನಾಡಿ ಗುರುಹಿರಿಯರ ಮಾರ್ಗದರ್ಶನದೊಂದಿಗೆ ಬದುಕುತ್ತಾ ಉತ್ತಮ ಕೆಲಸ ಕಾರ್ಯಗಳ ಸಫಲತೆಗೆ ಒಗ್ಗಟ್ಟಿನಲ್ಲಿ ಬಲವಿದ್ದರೆ ಮಾತ್ರ ಸಾಧ್ಯ ಎಂಬುದನ್ನು ಕಥೆಯ […]

ಪ್ರತಿಭಾ ಕಾರಂಜಿ 2022 ಜಿಲ್ಲಾಮಟ್ಟಕ್ಕೆ ಆಯ್ಕೆ.

ಪ್ರತಿಭಾ ಕಾರಂಜಿ 2022 ಜಿಲ್ಲಾಮಟ್ಟಕ್ಕೆ ಆಯ್ಕೆ.

Thursday, November 3rd, 2022

ವಿವೇಕಾನಂದ ಕನ್ನಡ ಶಾಲೆ ತೆಂಕಿಲ ಪುತ್ತೂರು ‘ಆಶುಭಾಷಣ’ – ಶ್ರೀ ಕೃಷ್ಣ ಪ್ರಥಮ’ ‘ಕ್ಲೇ ಮಾಡಲಿಂಗ್ ‘ – ಕಿಶಾನ್ ತೃತೀಯ ‘ಆಶುಭಾಷಣ’ – ಶಿವಾನಿ ರೈ ಪ್ರಥಮ ‘ಕಂಠಪಾಠ ‘ – ಶ್ರೀಶ ನಿದ್ವಣ್ಣಾಯ ಪ್ರಥಮ ‘ರಂಗೋಲಿ’ – ಕವನ ಪ್ರಥಮ , ‘ಭರತನಾಟ್ಯ’ – ಅವನಿ ಪ್ರಥಮ ,’ ‘ಸಂಸ್ಕೃತ ಭಾಷಣ’ – ಸಿಂಚನ ದ್ವಿತೀಯ, ‘ಚಿತ್ರಕಲೆ’ – ಅಗಮ್ಯ ದ್ವಿತೀಯ , ‘ಹಾಸ್ಯ’ –  ಭವಿಶ್ ತೃತೀಯ ಗುಂಪು ಸ್ಪರ್ಧೆ ‘ಕವಾಲಿ ‘ಅಮೃತ […]

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 'ನವದಂಪತಿ ಸಮಾವೇಶ'

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ‘ನವದಂಪತಿ ಸಮಾವೇಶ’

Thursday, November 3rd, 2022

“ಕುಟುಂಬ ವ್ಯವಸ್ಥೆ ವ್ಯಕ್ತಿ ಬೆಳವಣಿಗೆಯಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತದೆ ಇದರಲ್ಲೂ ಮದುವೆ ಎಂಬ ಪವಿತ್ರ ಬಾಂಧವ್ಯ ಭಾರತೀಯ ಕುಟುಂಬದ ಭದ್ರ ಬುನಾದಿಯಾಗಿದೆ” – ಸು.ರಾಮಣ್ಣ , ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ‘ಕುಟುಂಬ ಪ್ರಬೋಧನ್ ಪುತ್ತೂರು’ ವತಿಯಿಂದ ನಡೆದ ನವದಂಪತಿ ಸಮಾವೇಶಕ್ಕೆ ಅಭ್ಯಾಗತರಾಗಿ ಆಗಮಿಸಿದ ಹಿರಿಯರಾದ ಸು.ರಾಮಣ್ಣ ಇವರು ‘ಪ್ರಕೃತಿಯ ಕೊಡುಗೆಗಳಲ್ಲಿ ಸಂಸ್ಕೃತಿಯನ್ನು ಪೋಷಿಸುತ್ತಾ ಸಮೃದ್ಧ ಜೀವನ ನಡೆಸುತ್ತಿರುವ ಕುಟುಂಬಗಳು ಭಾರತದ ಶಕ್ತಿ’ ಎಂದರು. ಕುಟುಂಬ ಪ್ರಬೋಧನ್ ನ […]

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ – ಕನ್ನಡ ರಾಜ್ಯೋತ್ಸವ ಆಚರಣೆ ೨೦೨೨. ರಂಜಿಸಿದ ಕಾವ್ಯ-ನಾಟ್ಯ-ರಂಗ-ಕಥಾ ಹಾಗೂ ಕವಿ-ಕಾವ್ಯ-ಕುಂಚ ಕಾರ್ಯಕ್ರಮಗಳು.

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ – ಕನ್ನಡ ರಾಜ್ಯೋತ್ಸವ ಆಚರಣೆ ೨೦೨೨. ರಂಜಿಸಿದ ಕಾವ್ಯ-ನಾಟ್ಯ-ರಂಗ-ಕಥಾ ಹಾಗೂ ಕವಿ-ಕಾವ್ಯ-ಕುಂಚ ಕಾರ್ಯಕ್ರಮಗಳು.

Thursday, November 3rd, 2022

          ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವೇಕಾನಂದ ಕನ್ನಡ ಶಾಲೆ ತೆಂಕಿಲದಲ್ಲಿ ಕಾವ್ಯ-ನಾಟ್ಯ-ರಂಗ-ಕಥಾ ಎಂಬ ವಿನೂತನ ಕಾರ್ಯಕ್ರಮ ನಡೆಯಿತು. ನೃತ್ಯ ಗುರು ವಿದುಷಿ ಮಂಜುಳಾ ಸುಬ್ರಹ್ಮಣ್ಯಂ ಅವರ ನಾಟ್ಯ ರಂಗ ಪುತ್ತೂರು ವತಿಯಿಂದ ಪ್ರಸ್ತುತಿಗೊಂಡ ಕಾರ್ಯಕ್ರಮದ ತಂಡದಲ್ಲಿ ರಚನಾ ನರಿಯೂರು, ಅನ್ನಪೂರ್ಣ ರಾವ್ ಹಾಗೂ ವಿನಿತಾ ಶೆಟ್ಟಿ ಸಾಥ್ ನೀಡಿದರು. ಜಿ. ಎಸ್. ಶಿವರುದ್ರಪ್ಪ ಅವರ ‘ಹಣತೆ ಹಚ್ಚುತ್ತೇವೆ’ ಕವನ ವಾಚನದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಹಳೆಗನ್ನಡ ಪದ್ಯ, ಸಾಹಿತಿ ಎಸ್. ದಿವಾಕರ ಅವರ […]

ಕಬಡ್ಡಿ ಪಂದ್ಯಾವಳಿ -ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಕಬಡ್ಡಿ ಪಂದ್ಯಾವಳಿ -ರಾಷ್ಟ್ರ ಮಟ್ಟಕ್ಕೆ ಆಯ್ಕೆ

Tuesday, September 13th, 2022

ವಿಜಯಪುರದ ಮುದ್ದೇಬಿಹಾಳದಲ್ಲಿ ನಡೆದ ಪ್ರಾಂತೀಯ ಮತ್ತು ಕ್ಷೇತ್ರಿಯ ಮಟ್ಟದ ಹಿರಿಯ ಪ್ರಾಥಮಿಕ ವಿಭಾಗದ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು.  

ಕಬಡ್ಡಿ ಪಂದ್ಯಾಟ - ದ್ವಿತೀಯ ಸ್ಥಾನ

ಕಬಡ್ಡಿ ಪಂದ್ಯಾಟ – ದ್ವಿತೀಯ ಸ್ಥಾನ

Tuesday, September 13th, 2022

ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಲ್ನಾಡು, ಪುತ್ತೂರು. ಇಲ್ಲಿ ನಡೆದ ವಲಯ ಮಟ್ಟದ ಬಾಲಕ- ಬಾಲಕಿಯರ(ಪ್ರಾಥಮಿಕ) ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಬಾಲಕಿಯರ ತಂಡವು ದ್ವಿತೀಯ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿರುತ್ತದೆ.

ಕಬಡ್ಡಿ ಪಂದ್ಯಾಟ - ರಾಜ್ಯ ಮಟ್ಟಕ್ಕೆ ಆಯ್ಕೆ

ಕಬಡ್ಡಿ ಪಂದ್ಯಾಟ – ರಾಜ್ಯ ಮಟ್ಟಕ್ಕೆ ಆಯ್ಕೆ

Tuesday, September 13th, 2022

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇಲ್ಲಿ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪ್ರಾಥಮಿಕ ಬಾಲಕಿಯರು, ಪ್ರೌಢಶಾಲಾ ಬಾಲಕರು ಮತ್ತು ಪ್ರೌಢಶಾಲಾ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.

ಖೋ-ಖೋ ಪಂದ್ಯಾಟ - ರಾಜ್ಯ ಮಟ್ಟಕ್ಕೆ ಆಯ್ಕೆ

ಖೋ-ಖೋ ಪಂದ್ಯಾಟ – ರಾಜ್ಯ ಮಟ್ಟಕ್ಕೆ ಆಯ್ಕೆ

Tuesday, September 13th, 2022

ಶ್ರೀದೇವಿ ಶಾಲೆ ಪುಣಚದಲ್ಲಿ ನಡೆದ ವಿದ್ಯಾಭಾರತಿಯ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶಾಲಾ ಬಾಲಕಿಯರ ತಂಡ.

ದೇಶ ಭಕ್ತಿಗೀತೆ ಸ್ಪರ್ಧೆಯಲ್ಲಿ ಬಹುಮಾನ

ದೇಶ ಭಕ್ತಿಗೀತೆ ಸ್ಪರ್ಧೆಯಲ್ಲಿ ಬಹುಮಾನ

Tuesday, September 13th, 2022

ದಿವಂಗತ ಡಾ|ಕೆ.ಪಿ ಬಾಲಕೃಷ್ಣ ರೈ ಮಧುವನ ನೆಟ್ಟಣಿಗೆ ಇವರ ಸ್ಮರಣಾರ್ಥ ಸರ್ವೋದಯ ಪ್ರೌಢಶಾಲೆ ಸುಳ್ಯಪದವಿನಲ್ಲಿ ನಡೆದ ತಾಲೂಕು ಮಟ್ಟದ ಅಂತರ್ ಪ್ರೌಢಶಾಲಾ ದೇಶ ಭಕ್ತಿಗೀತೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಅಗಮ್ಯ ತೃತೀಯ 1200  ರೂ ನಗದು ಮತ್ತು ಚಿನ್ಮಯಿ ಮಜಿ ಪ್ರೋತ್ಸಾಹಕ ಬಹುಮಾನ ರೂಪಾಯಿ 1000 ಪಡೆದಿರುತ್ತಾರೆ.

ಗಣಿತ-ಪ್ರಯೋಗಾತ್ಮಕ ಬೋಧನೆ ಕಾರ್ಯಾಗಾರ

ಗಣಿತ-ಪ್ರಯೋಗಾತ್ಮಕ ಬೋಧನೆ ಕಾರ್ಯಾಗಾರ

Tuesday, September 13th, 2022

ಗಣಿತ ಬೋಧನೆ ಪ್ರಯೋಗಾತ್ಮಕ ಹಾಗೂ ಚಟುವಟಿಕಾತ್ಮಕ ಆದಲ್ಲಿ ಕಲಿಕೆ ಪರಿಣಾಮಕಾರಿಯಾಗುತ್ತದೆ-ಶ್ರೀ ಸುಬ್ರಹ್ಮಣ್ಯ ಭಟ್ ಆಡಳಿತ ಮಂಡಳಿ ಸದಸ್ಯರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು. ಆವರ್ತ-ಗಣಿತ ಸಂಘದ ವತಿಯಿಂದ ಏರ್ಪಡಿಸಲಾದ ಗಣಿತ-ಪ್ರಯೋಗಾತ್ಮಕ ಬೋಧನೆ ಎಂಬ ವಿಷಯದಲ್ಲಿ ಗಣಿತ ವಿಷಯ ಬೋಧಕ ಶಿಕ್ಷಕರಿಗೆ ಶಾಲಾ ಆಡಳಿತ ಮಂಡಳಿ ಸದಸ್ಯರಾದ ನಿವೃತ್ತ ಮುಖ್ಯೋಪಾಧ್ಯಾಯರೂ ಆದ ಶ್ರೀಯುತ ಸುಬ್ರಹ್ಮಣ್ಯ ಭಟ್ ಕೆದಿಲ ಇವರು ಗಣಿತ ಕಲಿಕೋಪಕರಣ ತಯಾರಿ ಬಗ್ಗೆ ಅವಧಿ ನಡೆಸಿಕೊಟ್ಟರು. ಶಾಲೆಯಲ್ಲಿ ಗಣಿತ ಪ್ರಯೋಗಾಲಯ ಮಾಡುವ ಯೋಜನೆಯಂತೆ ವಿಭಿನ್ನ […]

ಮಕ್ಕಳ ಸಮಗ್ರ ತಪಾಸಣಾ ಶಿಬಿರ

ಮಕ್ಕಳ ಸಮಗ್ರ ತಪಾಸಣಾ ಶಿಬಿರ

Tuesday, September 13th, 2022

ಮಕ್ಕಳಲ್ಲಿ ಕಲಿಕಾ ವೈವಿಧ್ಯತೆ ಸಾಮಾನ್ಯವಾಗಿದ್ದು, ಪೋಷಕರು-ಶಿಕ್ಷಕರು ಇದನ್ನು ಗುರುತಿಸಿ ಪರಿಣಿತರ ಸಹಕಾರ ಪಡೆದು ಸಕಾಲಕ್ಕೆ ಪರಿಣಾಮಕಾರಿ ವಿಧಾನಗಳನ್ನು ಅನುಸರಿಸಿದ್ದಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಎತ್ತರಿಸಲು ಸಾಧ್ಯವಿದೆ-ಡಾ| ಕೃಷ್ಣ ಭಟ್ ಕೊಂಕೋಡಿ. ಕಾರ್ಯದರ್ಶಿಗಳು, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾದ ಅಸಮರ್ಪಕ ಹಾಗೂ ನಿಧಾನಗತಿಯ ಕಲಿಕಾ ಮಕ್ಕಳ ಸಮಗ್ರ ತಪಾಸಣಾ ಶಿಬಿರಕ್ಕೆ ಉದ್ಘಾಟಕರಾಗಿ ಆಗಮಿಸಿದ ಡಾ| ಕೃಷ್ಣ ಭಟ್ ಕೊಂಕೋಡಿಯವರು ಈ ಬಗೆಯ ತಪಾಸಣಾ ಕಾರ್ಯಗಳು ನಿರಂತರವಾಗಿ ನಡೆಯಬೇಕಿದ್ದು, ಶಾಲೆ-ಶಿಕ್ಷಕರು-ಪೋಷಕರು ಹಾಗೂ ವಿದ್ಯಾವರ್ಧಕ ಸಂಘ […]

ಓಣಂ ಹಬ್ಬ ಆಚರಣೆ

ಓಣಂ ಹಬ್ಬ ಆಚರಣೆ

Friday, September 9th, 2022

“ಓಣಂ ಹಬ್ಬ ಸಮೃದ್ಧಿಯ ಸಂಕೇತ” – ವೀಣಾ ಸರಸ್ವತಿ. ಸಹ ಶಿಕ್ಷಕಿ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು. ನರೇಂದ್ರ ಪದವಿಪೂರ್ವ ಕಾಲೇಜಿನಲ್ಲಿ ಓಣಂ ಹಬ್ಬದ ಆಚರಣೆಯ ಅಂಗವಾಗಿ ಏರ್ಪಡಿಸಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಭಾಗವಹಿಸಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಹ ಶಿಕ್ಷಕಿ ವೀಣಾ ಸರಸ್ವತಿ ಇವರು ಬಲಿಚಕ್ರವರ್ತಿಯ ಕಥೆಯೊಂದಿಗೆ ಓಣಂ ಹಬ್ಬದ ಮಹತ್ವ ತಿಳಿಸಿದರು. ವೇದಿಕೆಯಲ್ಲಿ ಕಾಲೇಜು ಪ್ರಾಂಶುಪಾಲರಾದ ಶ್ರೀ ಪ್ರಸಾದ್ ಶ್ಯಾನ್ ಬಾಗ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಮಾದರಿ ಪ್ರದರ್ಶನ ವೀಕ್ಷಣೆ

ಮಾದರಿ ಪ್ರದರ್ಶನ ವೀಕ್ಷಣೆ

Tuesday, September 6th, 2022

“ಪ್ರಾಯೋಗಿಕ ಮಾದರಿಯ ಕಲಿಕಾ ವಿಧಾನ ಮಕ್ಕಳಲ್ಲಿ ಆಸಕ್ತಿ ಹಾಗೂ ನೆನಪಿನ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿರುತ್ತದೆ”- ಶ್ರೀ ಚಂದ್ರಕುಮಾರ್, ಪ್ರಾಂಶುಪಾಲರು. ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜ್ ನೆಹರು ನಗರ. ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಿಂದ ಆಯೋಜಿಸಲಾದ ಮೆಕ್ಯಾನಿಕಲ್ ಹಾಗೂ ಎಲೆಕ್ಟ್ರಾನಿಕ್ ಮಾದರಿ ಪ್ರದರ್ಶನ ವೀಕ್ಷಿಸಲು ತೆರಳಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೆ ಕಾಲೇಜು ಪ್ರಾಧ್ಯಾಪಕ ವೃಂದದವರು ಮಾದರಿಗಳ ಬಗೆಗಿನ ಪ್ರಾತ್ಯಕ್ಷಿಕಾ ಮಾಹಿತಿ ನೀಡಿದರು.

ಕಂಬಳಬೆಟ್ಟುವಿನ ಸುವರ್ಣ ಸಂಭ್ರಮದ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಕಂಬಳಬೆಟ್ಟುವಿನ ಸುವರ್ಣ ಸಂಭ್ರಮದ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

Tuesday, September 6th, 2022

51 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮ ನಗರ ಕಂಬಳಬೆಟ್ಟುವಿನ ಸುವರ್ಣ ಸಂಭ್ರಮದ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ರೂಪಾಯಿ 15,000 ನಗದು ಹಾಗೂ ಫಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳು.

ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ - ಸ್ಪರ್ಧೆಯಲ್ಲಿ ವಿಜೇತರು

ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ – ಸ್ಪರ್ಧೆಯಲ್ಲಿ ವಿಜೇತರು

Tuesday, September 6th, 2022

ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ, ವಿವೇಕಾನಂದ ಶಿಶುಮಂದಿರ ಇಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ. ಶಂಖನಾದ-ಗಗನ್ ದೀಪ್ ಹತ್ತನೇ ತರಗತಿ- ದ್ವಿತೀಯ, ಭಗವದ್ಗೀತೆ ಗೀತೆ ಕಂಠಪಾಠ- ಶ್ರೀ ನಂದನ್ ಒಂಬತ್ತನೇ ತರಗತಿ- ಪ್ರಥಮ, ಪ್ರಾರ್ಥನ ಶ್ಲೋಕ – ಕೃತಿಕಾ 6ನೇ ತರಗತಿ- ಪ್ರಥಮ, ವೈಷ್ಣವಿ 5ನೇ ತರಗತಿ- ದ್ವಿತೀಯ.  

ಶಿಕ್ಷಕ-ಪರ್ವ ವಿದ್ಯಾರ್ಥಿಗಳಿಂದ ಪ್ರಾತ್ಯಕ್ಷಿಕೆ

ಶಿಕ್ಷಕ-ಪರ್ವ ವಿದ್ಯಾರ್ಥಿಗಳಿಂದ ಪ್ರಾತ್ಯಕ್ಷಿಕೆ

Monday, September 5th, 2022

ವಿದ್ಯಾರ್ಥಿ ಶಿಕ್ಷಕರಾದಾಗ ಪಡೆಯುವ ಆನಂದ, ಪ್ರೌಢಿಮೆ, ಜ್ಞಾನ, ಕೌಶಲಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿ ಅನುಷ್ಠಾನಕ್ಕೆ ತಂದಿರುವ ಯೋಜನೆಯೇ ’ಶಿಕ್ಷಕ-ಪರ್ವ’. ಇದರ ಅನುಷ್ಠಾನ ಅವಧಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೆ ವಿಭಿನ್ನ ಪಠ್ಯ ವಿಷಯಗಳ ಪರಿಕಲ್ಪನೆ ನೀಡಲಾಗಿತ್ತು. ಕಲಿಕಾ ಉಪಕರಣಗಳನ್ನು ತಯಾರುಗೊಳಿಸಿ, ಸಾಮೂಹಿಕ ಜಾಲತಾಣಗಳ ಸಹಕಾರದೊಂದಿಗೆ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ, ಪ್ರಶ್ನೋತ್ತರ, ಚರ್ಚಾ ವಿಧಾನ, ಪ್ರಯೋಗಾತ್ಮಕ ವಿಧಾನಗಳ ಮೂಲಕ ಚಿಕ್ಕ ತರಗತಿಯ ಮಕ್ಕಳಿಗೆ ತಮಗೆ ನೀಡಲಾದ ವಿಷಯ ಬೋಧನೆ ನಡೆಸಿಕೊಟ್ಟರು. ಶಾಲೆಯು ಈ ಹಿಂದಿನಿಂದಲೇ ಈ […]

ಶಿಕ್ಷಕರಿಗಾಗಿ ಶೈಕ್ಷಣಿಕ ಕಾರ್ಯಾಗಾರ

ಶಿಕ್ಷಕರಿಗಾಗಿ ಶೈಕ್ಷಣಿಕ ಕಾರ್ಯಾಗಾರ

Saturday, August 27th, 2022

ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಇದರ ಆಶ್ರಯದಲ್ಲಿ ಷಣ್ಮುಖದೇವ ಹಾಗೂ ವಿವೇಕಾನಂದ ವರ್ತುಲದ ಶಿಕ್ಷಕರಿಗಾಗಿ ಶೈಕ್ಷಣಿಕ ಕಾರ್ಯಾಗಾರ 2022-23 ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 27-08-2022 ರಂದು ನಡೆಯಿತು. ಕಾರ್ಯಾಗಾರದ ಉದ್ಘಾಟನೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಇದರ ನಿರ್ದೇಶಕರಾಗಿರುವ ಶ್ರೀ ಮುರಳೀಧರ ಕೆ. ಇವರು ನೆರವೇರಿಸಿದರು. ಕಾರ್ಯಾಗಾರದ ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದ ಶ್ರೀ ಮುನಿರಾಜ ರೆಂಜಾಳರವರು ಮಾತನಾಡುತ್ತಾ ಶಿಕ್ಷಕನಿಗಿರುವ ಜವಾಬ್ದಾರಿ, ಪರಿಣಾಮಕಾರಿ ಬೋಧನೆ, ವೃತ್ತಿಯಲ್ಲಿ ಪಕ್ವತೆಯನ್ನು ತರುವಲ್ಲಿ ಶಿಕ್ಷಕರಾಗಿ ನಮ್ಮ ಕರ್ತವ್ಯ, ದೇಶವನ್ನು ಕಟ್ಟಿ […]

Independence Day 2022

Independence Day 2022

Monday, August 15th, 2022
ಅಮೃತ ಭಾರತಿಗೆ ಕನ್ನಡದಾರತಿ - ಸ್ವಾತಂತ್ರ್ಯ ದಿನಾಚರಣೆ 

ಅಮೃತ ಭಾರತಿಗೆ ಕನ್ನಡದಾರತಿ – ಸ್ವಾತಂತ್ರ್ಯ ದಿನಾಚರಣೆ 

Monday, August 15th, 2022

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಆಗಸ್ಟ್ 15 ರಂದು ಧ್ವಜಾರೋಹಣಕ್ಕೆ ಅಭ್ಯಾಗತರಾಗಿ ಆಗಮಿಸಿ ಶ್ರೀಯುತ ವಿಜಯಕುಮಾರ್ ಇವರು ಶುಭ ಹಾರೈಸಿದರು. ನಿವೃತ್ತ ಸೇನಾನಿ ಎನ್ ಆರ್ ವಿಜಯಕುಮಾರ್ ಅವರು ಮಾತನಾಡಿ, ದೇಶ ರಕ್ಷಣೆ ಅನ್ನುವುದು ಸೈನ್ಯದಲ್ಲಿದ್ದವರು ಮಾತ್ರ ಮಾಡಬೇಕಾದ ಕೆಲಸ ಎಂದೇನಿಲ್ಲ, ಅದಕ್ಕೆ ವಯಸ್ಸು- ಅಂತಸ್ತಿನ ಅಂತರವಿಲ್ಲ ಪ್ರತಿಯೊಬ್ಬ ಪ್ರಜೆಯೂ ತಮ್ಮ ದೈನಂದಿನ ಕಾರ್ಯ ವಿಧಾನಗಳಲ್ಲೇ ಸ್ವ- ಪ್ರಜ್ಞೆಯೊಂದಿಗೆ ದೇಶರಕ್ಷಣೆಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದರು. ಅಮೃತ ಮಹೋತ್ಸವ ಪ್ರಯುಕ್ತ ನಡೆದ ಸ್ಪರ್ಧಾ ವಿಜೇತರಿಗೆ ವಿದ್ವಾನ್ ಗಿರೀಶ್ ಕುಮಾರ್ […]

ಹರ್ ಘರ್ ತಿರಂಗಾ ಅಭಿಯಾನ - ಧ್ವಜಾರೋಹಣ ಕಾರ್ಯಕ್ರಮ

ಹರ್ ಘರ್ ತಿರಂಗಾ ಅಭಿಯಾನ – ಧ್ವಜಾರೋಹಣ ಕಾರ್ಯಕ್ರಮ

Saturday, August 13th, 2022

ದಿನಾಂಕ 13-08-2022ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಹರ್ ಘರ್ ತಿರಂಗಾ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಶಾಲಾ ಹಿರಿಯ ವಿದ್ಯಾರ್ಥಿ, ವೃತ್ತಿಯಲ್ಲಿ ವಕೀಲರು ಆದ ವಿರೂಪಾಕ್ಷ ಇವರು ಧ್ವಜಾರೋಹಣ ನೆರವೇರಿಸಿದರು. ಶಾಲಾ ಮುಖ್ಯ ಗುರುಗಳಾದ ಆಶಾ ಬೆಳ್ಳಾರೆ ಇವರು ಧ್ವಜಕ್ಕೆ ಕೊಡುವ ಗೌರವ ಅದರ ನೀತಿ ಸಂಹಿತೆ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳ ವಂದೇ ಮಾತರಂನೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

ಶಾಲೆಗೆ ಆಗಮಿಸಿದ ದಿಶಾ-ಭಾರತ ಆಜಾದಿ ಕಾ ಅಮೃತ ಮಹೋತ್ಸವ ರಥ

ಶಾಲೆಗೆ ಆಗಮಿಸಿದ ದಿಶಾ-ಭಾರತ ಆಜಾದಿ ಕಾ ಅಮೃತ ಮಹೋತ್ಸವ ರಥ

Friday, August 12th, 2022

ದಿಶಾ-ಭಾರತ ಬೆಂಗಳೂರು ಆಯೋಜಿಸಲಾದ ಅನೇಕ ಕಾರ್ಯಕ್ರಮಗಳಲ್ಲಿ ಒಂದಾದ ಭಾರತದ ಅಮೃತ ಮಹೋತ್ಸವ ರಥ ಶಾಲಾ ಆವರಣಕ್ಕೆ ಆಗಮಿಸಿತು. ಪ್ರೌಢಶಾಲಾ ಮಕ್ಕಳು ಹಾಗೂ ಶಿಕ್ಷಕರ ಸಮ್ಮುಖದಲ್ಲಿ ಶಾಲಾ ಮುಖ್ಯಗುರುಗಳಾದ ಆಶಾ ಬೆಳ್ಳಾರೆ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ರಾಷ್ಟ್ರೀಯ ಧ್ವಜವನ್ನು ಹಾಕಿಸಿದರು. ವೀರ ಪುರುಷರ ಜೀವನಗಾಥಾ ಚಿತ್ರಣ, ಸ್ವತಂತ್ರ ಮಹೋತ್ಸವ ಸ್ಪರ್ಧೆಗಳು, ಭಾರತೀಯ ಸಾಧನಾ ಪರಿಚಯ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಬಗ್ಗೆ ದಿಶಾಭಾರತ ಪ್ರಚಾರಕರೂ, ವೃತ್ತಿಯಲ್ಲಿ ಇಂಜಿನಿಯರ್ ಆದ ಶ್ರೀಯುತ ಸುನಿಲ್ ಕುಮಾರ್ ಮಾಹಿತಿ ನೀಡಿದರು. ಸಾಮೂಹಿಕ ಘೋಷಣೆಯೊಂದಿಗೆ […]

ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ‘ಅಮೃತ ನಡಿಗೆ ದೇಶದ ಕಡೆಗೆ’ ಬೃಹತ್ ಮೆರವಣಿಗೆ

ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ‘ಅಮೃತ ನಡಿಗೆ ದೇಶದ ಕಡೆಗೆ’ ಬೃಹತ್ ಮೆರವಣಿಗೆ

Friday, August 12th, 2022

ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಸ್ವಾತಂತ್ರ್ಯ ದ ಅಮೃತೋತ್ಸವದ ಪ್ರಯುಕ್ತ ’ಅಮೃತ ನಡಿಗೆ ದೇಶದ ಕಡೆಗೆ’ ಎಂಬ ಧ್ಯೇಯದೊಂದಿಗೆ ಬೃಹತ್ ಮೆರವಣಿಗೆಯನ್ನು ಆ. 12 ರಂದು ನಡೆಯಿತು. ಪುತ್ತೂರಿನ ನೆಹರುನಗರದ ಆವರಣದಲ್ಲಿರುವ ವಿವೇಕಾನಂದ ವಿದ್ಯಾ ಸಂಸ್ಥೆಗಳು ಮತ್ತು ತೆಂಕಿಲದಲ್ಲಿರುವ ವಿವೇಕಾನಂದ ಸಮೂಹ ಸಂಸ್ಥೆಗಳ ಸುಮಾರು 8000 ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಈ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿದರು. ಭಾರತ ಮಾತೆಯ ಭಾವಚಿತ್ರ, ರಾಷ್ಟ್ರಜಾಗೃತಿಯ ಉತ್ತೇಜನ ಗೊಳಿಸುವ ಸ್ತಬ್ಧಚಿತ್ರಗಳು, ಪ್ರತಿ ವಿದ್ಯಾರ್ಥಿಯ ಕೈಯಲ್ಲೂ ತ್ರಿವರ್ಣ ಧ್ವಜ, ಎಪ್ಪತ್ತೈದು […]

ರಸಪ್ರಶ್ನೆ ಸ್ಪರ್ಧೆಯಲ್ಲಿ ಬಹುಮಾನ

ರಸಪ್ರಶ್ನೆ ಸ್ಪರ್ಧೆಯಲ್ಲಿ ಬಹುಮಾನ

Friday, August 12th, 2022

ರೇಡಿಯೋ ಪಾಂಚಜನ್ಯದಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಾದ ಸಂಜನ್ ಮತ್ತು ಶ್ರೀವತ್ಸ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

ದೇಶ ಭಕ್ತಿ ಗೀತೆ ಸ್ಪರ್ಧೆಯಲ್ಲಿ ಬಹುಮಾನ

ದೇಶ ಭಕ್ತಿ ಗೀತೆ ಸ್ಪರ್ಧೆಯಲ್ಲಿ ಬಹುಮಾನ

Friday, August 12th, 2022

ಪುತ್ತೂರು ತಾಲೂಕು ಸಂಸ್ಕಾರ ಭಾರತಿ ವತಿಯಿಂದ ನಡೆದ ತಾಲೂಕು ಮಟ್ಟದ ದೇಶ ಭಕ್ತಿ ಗೀತೆ ಸ್ಪರ್ಧೆಯ 1 ರಿಂದ 4 ನೇ ತರಗತಿ ವಿಭಾಗದಲ್ಲಿ ನಮ್ಮ ಶಾಲಾ ಮಕ್ಕಳು ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಅಜಾದಿ ಕಾ ಅಮೃತ್ ಮಹೋತ್ಸವ - ಸ್ಪರ್ಧೆಗಳಲ್ಲಿ ವಿಜೇತರು

ಅಜಾದಿ ಕಾ ಅಮೃತ್ ಮಹೋತ್ಸವ – ಸ್ಪರ್ಧೆಗಳಲ್ಲಿ ವಿಜೇತರು

Thursday, August 11th, 2022

ಅಂಬಿಕಾ ವಿದ್ಯಾಲಯದಲ್ಲಿ ಅಜಾದಿ ಕಾ ಅಮೃತ್ ಉತ್ಸವದ ಪ್ರಯುಕ್ತ ನಡೆಸಿದ ಸ್ಪರ್ಧೆಗಳಲ್ಲಿ ನಮ್ಮ ಶಾಲೆಯ ಮಕ್ಕಳು ಭಾಗವಹಿಸಿ ಬಹುಮಾನ ಪಡೆದಿರುತ್ತಾರೆ. ಪ್ರಬಂಧ : ಅವನಿ ಬೆಳ್ಳಾರೆ- ಪ್ರಥಮ ಚಿತ್ರಕಲೆ : ಅಗಮ್ಯ- ಪ್ರಥಮ ಭಾಷಣ : ಧಾತ್ರಿ- ಪ್ರಥಮ ದೇಶ ಭಕ್ತಿ ಗೀತೆ : ಹರಿಣಿ ಮತ್ತು ತಂಡ- ತೃತೀಯ

ವಿಜ್ಞಾನ ಪುನಶ್ಚೇತನ ಕಾರ್ಯಾಗಾರ

ವಿಜ್ಞಾನ ಪುನಶ್ಚೇತನ ಕಾರ್ಯಾಗಾರ

Wednesday, August 10th, 2022

ವಿವೇಕಾನಂದ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ನೆಹರು ನಗರ ಶಾಲೆಯಿಂದ ಆಯೋಜಿಸಲಾದ ವಿಜ್ಞಾನ ಪುನಶ್ಚೇತನ ಕಾರ್ಯಾಗಾರದಲ್ಲಿ  ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳು ಹಾಗೂ ಸಹಶಿಕ್ಷಕರು ಭಾಗವಹಿಸಿದರು. ಕಾರ್ಯಾಗಾರದಲ್ಲಿ IRISನ ಬೆಂಗಳೂರು ವಲಯದ ಸಂಯೋಜಕರಾದ ಶ್ರೀಮತಿ ಆನ್ನಾ ಮುರುಗನ್ ಅವರು ವಿಜ್ಞಾನ ಕಾರ್ಯಯೋಜನೆಗಳನ್ನು ಮಾಡುವ ವಿಧಾನ, ಆಯ್ಕೆಯ ವಿಷಯಗಳು ಹಾಗೂ ಅವುಗಳ ಪ್ರಸ್ತುತತೆಯ ಬಗ್ಗೆ ಮಾಹಿತಿ ನೀಡಿದರು. ಶಾಲಾ ಅಟಲ್ ಟಿಂಕರಿಂಗ್ ಪ್ರಯೋಗಾಲಯದ ನಿರ್ವಾಹಕರಾದ ಸಹಶಿಕ್ಷಕಿ ಪುಷ್ಪಾವತಿ ಹಾಗೂ ಕೀರ್ತನ್ ಇವರು ಕಾರ್ಯಾಗಾರದಲ್ಲಿ ಭಾಗವಹಿಸಿದರು.

ಸಂಸ್ಕೃತ ಭಾಷೆ ವೈಜ್ಞಾನಿಕ ಭಾಷೆ - ಕು. ಶೈಲಶ್ರೀ

ಸಂಸ್ಕೃತ ಭಾಷೆ ವೈಜ್ಞಾನಿಕ ಭಾಷೆ – ಕು. ಶೈಲಶ್ರೀ

Tuesday, August 9th, 2022

ಭಾಷೆಯು ವ್ಯವಹಾರಕ್ಕೆ ಒಂದು ಪ್ರಮುಖ ಮಾಧ್ಯಮ. ಅದರಲ್ಲಿ ಸಂಸ್ಕೃತ ಭಾಷೆಯು ಸರಳ, ಸುಂದರ, ಮಧುರವಾದ ದೇವ ಭಾಷೆಯಾಗಿದೆ. ಈ ಭಾಷೆಯು ಭಾರತೀಯ ಭಾಷೆಗಳಲ್ಲದೆ ವಿದೇಶೀಯ ಭಾಷೆಗಳ ಮೇಲೂ ಪ್ರಭಾವ ಬೀರಿದೆ. ಹಾಗೂ ಇದು ಅತ್ಯಂತ ವೈಜ್ಞಾನಿಕವಾದ ಭಾಷೆಯಾಗಿದೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಸಂಸ್ಕೃತ ಸಪ್ತಾಹ ನಿಮಿತ್ತ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮೂರ್ಕಜೆ ಗುರುಕುಲದ ವಿದ್ಯಾರ್ಥಿನಿಯಾದ ಕು. ಶೈಲಶ್ರೀಯವರು ಹೇಳಿದರು. ಶಾಲಾ ಸ್ಮೃತಿ-ಸಂಸ್ಕೃತ ಸಂಘದ ವತಿಯಿಂದ ಆಯೋಜನೆಗೊಂಡ ಕಾರ್ಯಕ್ರಮವು ಮೈತ್ರೇಯಿ ಗುರುಕುಲದ ಪೂರ್ಣಿಮ ಮಾತಾಜಿ ಇವರಿಂದ ಭಾರತಮಾತೆಯ […]

ಹಿರಿಯ ವಿದ್ಯಾರ್ಥಿ ಸಭೆ

ಹಿರಿಯ ವಿದ್ಯಾರ್ಥಿ ಸಭೆ

Tuesday, August 9th, 2022

ಅಕ್ಟೋಬರ್ 2 ನೇ ದಿನಾಂಕದಂದು ನಡೆಯಲಿರುವ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಹಿರಿಯ ವಿದ್ಯಾರ್ಥಿ ಸಮಾವೇಶದ ಅಂಗವಾಗಿ ನಡೆದ ಹಿರಿಯ ವಿದ್ಯಾರ್ಥಿ ಸಭೆಯಲ್ಲಿ ಸಭಾ ಪ್ರಸ್ತುತತೆಯ ಬಗ್ಗೆ ಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ ಮಾತನಾಡಿದರು. 2002-03 ರಿಂದ 2021-22 ರವರೆಗಿನ ಹಿರಿಯ ವಿದ್ಯಾರ್ಥಿಗಳನ್ನು ಸೇರಲಿರುವ ಸಮಾವೇಶ ಇದಾಗಿದ್ದು ಪ್ರತೀ ಬ್ಯಾಚ್‌ನ ಮಕ್ಕಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವುದು ಶ್ಲಾಘನೀಯ ಎಂದರು. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಘಟಕ ಸಂಯೋಜಕರಾದ ಸಹಶಿಕ್ಷಕ ರಾಮ ನಾಯ್ಕ್ ಹಾಗೂ ಸಹಶಿಕ್ಷಕಿ ಲೀಲಾವತಿ […]

ಕಲಬುರಗಿಯ ಸೇಡಂನಲ್ಲಿ ಪ್ರಾಂತ ಸಾಧಾರಣಾ ಸಭಾ ಬೈಠಕ್‌

ಕಲಬುರಗಿಯ ಸೇಡಂನಲ್ಲಿ ಪ್ರಾಂತ ಸಾಧಾರಣಾ ಸಭಾ ಬೈಠಕ್‌

Monday, August 8th, 2022

ವಿದ್ಯಾಭಾರತಿ ಶಿಕ್ಷಾಸಂಸ್ಥಾನ ವತಿಯಿಂದ ಕಲಬುರಗಿಯ ಸೇಡಂನ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾದ ಪ್ರಾಂತ ಸಾಧಾರಣಾ ಸಭಾ ಬೈಠಕ್‌ನಲ್ಲಿ ಶಾಲಾ ಮುಖ್ಯಗುರುಗಳಾದ ಆಶಾ ಬೆಳ್ಳಾರೆ ಭಾಗವಹಿಸಿದರು. ಎರಡು ದಿನಗಳವರೆಗೆ ನಡೆದ ಈ ಕಾರ್ಯಾಗಾರದಲ್ಲಿ ವಿದ್ಯಾಭಾರತಿಯ ವಿಭಿನ್ನ ಪ್ರಕಲ್ಪಗಳ ಕಾರ್ಯಯೋಜನೆ ಹಾಗೂ ಅನುಷ್ಠಾನಗಳ ಬಗ್ಗೆ ಚರ್ಚೆ ನಡೆಯಿತು. 17 ಜಿಲ್ಲೆಗಳಿಂದ 158 ಮಂದಿ ಆಡಳಿತ ಮಂಡಳಿ, ಮುಖ್ಯಶಿಕ್ಷಕರು, ಜಿಲ್ಲಾ ಪ್ರಾಂತ ಜವಾಬ್ದಾರಿ ಪ್ರತಿನಿಧಿಗಳು ಭಾಗವಹಿಸಿದ ಕಾರ್ಯಾಗಾರದಲ್ಲಿ ಶೈಕ್ಷಣಿಕ ಗುಣಮಟ್ಟದ ದೃಷ್ಟಿಯಿಂದ ವಿದ್ಯಾಭಾರತಿಯ ಕಾರ್ಯಚಟುವಟಿಕೆಗಳ ವಿವಿಧ ಮಜಲುಗಳ ಬಗ್ಗೆ ವಿಷಯ […]

ಭಗವಂತನ ಗೀತೆ ಭಗವದ್ಗೀತೆ - ಶ್ರೀಯುತ ವಿಘ್ನೇಶ್ ಭಟ್

ಭಗವಂತನ ಗೀತೆ ಭಗವದ್ಗೀತೆ – ಶ್ರೀಯುತ ವಿಘ್ನೇಶ್ ಭಟ್

Friday, July 29th, 2022

ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಂಸ್ಕೃತ ಭಾಷಾ ಸಂಘ ‘ಸುರಭಿ’ಯಿಂದ ಆಯೋಜಿಸಲಾದ ಭಗವದ್ಗೀತಾ ಪಠನಾಭ್ಯಾಸದ ತರಗತಿ ಉದ್ಘಾಟನೆಗೆ ಅಭ್ಯಾಗತರಾಗಿ ಆಗಮಿಸಿದ ಶ್ರೀಯುತ ವಿಘ್ನೇಶ್ ಭಟ್ ಅವರು ಸಂಸ್ಕೃತ ಭಾಷೆ ಪ್ರಾಚೀನ ಹಾಗೂ ವೈಜ್ಞಾನಿಕ ಭಾಷೆಯಾಗಿದ್ದು ಎಳವೆಯಿಂದಲೇ ಸಂಸ್ಕೃತ ಭಾಷಾಭ್ಯಾಸ ಸಂಸ್ಕೃತಿ-ಸಂಸ್ಕಾರವನ್ನು ಮೂಡಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು. ಶಾಲಾ ಭಗವದ್ಗೀತಾ ಪಠನಾಭ್ಯಾಸ ತರಗತಿಗೆ ಶ್ರೀಯುತರು ಮಾರ್ಗದರ್ಶಕರಾಗಿ ಆಗಮಿಸಿ ಭಗವದ್ಗೀತೆಯು ಭಗವಂತನ ಗೀತೆಯಾಗಿದ್ದು, ಬದುಕಿನ ಸಾರವನ್ನು ತಿಳಿಸುತ್ತದೆ. ಶಾಲೆಯಿಂದ ಎಲ್ಲಾ ಮಕ್ಕಳಿಗೂ ಭಗವದ್ಗೀತಾ ಪಠನಾಭ್ಯಾಸ ಮೂಡಿಸುತ್ತಿರುವುದು ಉತ್ತಮ ಸಂಗತಿ ಎಂದರು. […]

ಹಿಂದಿ ಭಾಷೆಯು ದೇಶದ ಸಂಸ್ಕೃತಿ, ಏಕತೆ, ಉನ್ನತಿಗೆ ಪೂರಕವಾಗಿದೆ - ಶ್ರೀಮತಿ ಪ್ರಫುಲ್ಲಾ

ಹಿಂದಿ ಭಾಷೆಯು ದೇಶದ ಸಂಸ್ಕೃತಿ, ಏಕತೆ, ಉನ್ನತಿಗೆ ಪೂರಕವಾಗಿದೆ – ಶ್ರೀಮತಿ ಪ್ರಫುಲ್ಲಾ

Friday, July 29th, 2022

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ’ಸುರಭಿ’ ಹಿಂದಿ ಭಾಷಾ ಸಂಘದಿಂದ ಆಯೋಜಿಸಲ್ಪಟ್ಟ ರಾಷ್ಟ್ರಭಾಷಾ ಪರೀಕ್ಷಾ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಆಗಮಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀಮತಿ ಪ್ರಫುಲ್ಲಾ ಇವರು ಹಿಂದಿ ಪ್ರಚಾರ ಸಭಾ ವತಿಯಿಂದ ನಡೆಸಲ್ಪಡುವ ವಿವಿಧ ಪದವಿ ಕೋರ್ಸುಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುತ್ತಾ ಪರೀಕ್ಷಾ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಿದರು. ಹಿಂದಿ ಭಾಷಾ ಸಂಘದ ಸಂಯೋಜಕಿ ಶ್ರೀಮತಿ ದಾಕ್ಷಾಯಿಣಿಯವರು ಕಾರ್ಯಕ್ರಮ ಸಂಘಟಿಸಿದರು.

’ಚಟುವಟಿಕೆಯಿಂದ ಕೂಡಿದ ಕಲಿಕೆ ಶಾಶ್ವತ ಕಲಿಕೆ’ - ಸತ್ಯಮೂರ್ತಿ ಹೆಬ್ಬಾರ್

’ಚಟುವಟಿಕೆಯಿಂದ ಕೂಡಿದ ಕಲಿಕೆ ಶಾಶ್ವತ ಕಲಿಕೆ’ – ಸತ್ಯಮೂರ್ತಿ ಹೆಬ್ಬಾರ್

Tuesday, July 26th, 2022

ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತಕ್ಕೆ ಸಂಬಂಧಿಸಿದ ಚಟುವಟಿಕಾ ಕಾರ್ಯಗಾರದಲ್ಲಿ ವಿವಿಧ ಮಾದರಿಗಳನ್ನು ಪ್ರದರ್ಶಿಸುತ್ತಾ ಗಣಿತ ತರಗತಿಯು ಚಟುವಟಿಕೆಯುಕ್ತವಾಗಿ, ಇದ್ದಾಗ ಮಕ್ಕಳು ಕಲಿಕೆಯ ಕಡೆ ಹೆಚ್ಚಿನ ಗಮನ ಕೊಡುತ್ತಾರೆ. ಸಣ್ಣ ಪರಿಕಲ್ಪನೆಯನ್ನು ವಿವಿಧ ಮಜಲುಗಳಲ್ಲಿ ಆಲೋಚಿಸಿ ಅಭ್ಯಾಸ ನಡೆಸಿದಾಗ ಗಣಿತವೆಂದರೆ ಕಠಿಣವಲ್ಲ. ಅದು ಸಂತಸದ ರಸದೂಟ ಎಂದೆನಿಸುತ್ತದೆಯೆಂದು ಸತ್ಯಮೂರ್ತಿ ಹೆಬ್ಬಾರ್ ನುಡಿದರು. ಪಠ್ಯವಿಷಯಕ್ಕೆ ಸಂಬಂಧಿಸಿದಂತೆ ಪೈಥಾಗೊರಸ್ ಪ್ರಮೇಯಕ್ಕೆ ಸಂಬಂಧಿಸಿದ ಮಾದರಿ, ಥೇಲ್ಸ್ ಪ್ರಮೇಯ ಆಧಾರಿತ ಕಲಿಕಾ ಉಪಕರಣ, ಸ್ಪರ್ಶಕಗಳ ರಚನೆ, ತ್ರಿಕೋನಮಿತಿ ಅನುಪಾತಗಳು, ನಿರ್ದಿಷ್ಟ ಕೋನಗಳಿಗೆ ತ್ರಿಕೋನಮಿತಿ ಬೆಲೆ […]

ಯೋಧರ ಸ್ಮರಣೆ ನಿರಂತರವಾಗಿ ಮಾಡುವುದೇ ನಿಜವಾದ ದೇಶಾಭಿಮಾನ - ಕು.ಹೇಮಸ್ವಾತಿ

ಯೋಧರ ಸ್ಮರಣೆ ನಿರಂತರವಾಗಿ ಮಾಡುವುದೇ ನಿಜವಾದ ದೇಶಾಭಿಮಾನ – ಕು.ಹೇಮಸ್ವಾತಿ

Tuesday, July 26th, 2022

ಉತ್ತಮ ಜೀವನ ಮೌಲ್ಯಗಳೊಂದಿಗೆ ಶಿಸ್ತನ್ನು ಅಳವಡಿಸಿಕೊಂಡು ಶಾಲಾ ದಿನಗಳಲ್ಲಿ ವಿವಿಧ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಾಗ ಮುಂದೆ ದೇಶ ಸೇವೆಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಕಾರ್ಗಿಲ್ ವಿಜಯೋತ್ಸವವು ಒಂದೇ ದಿನಕ್ಕೆ ಸೀಮಿತವಾಗದೆ ಪ್ರತಿದಿನವು ನಮ್ಮ ದೇಶಕ್ಕಾಗಿ ಹುತಾತ್ಮರಾದ ಅನೇಕ ಸೈನಿಕರ ತ್ಯಾಗವನ್ನು ಸ್ಮರಿಸಿಕೊಂಡು ನಮ್ಮನ್ನು ನಾವು ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದೇ ನಿಜವಾದ ದೇಶಪ್ರೇಮ ಎಂದು ವಿವೇಕಾನಂದ ಪದವಿ ಕಾಲೇಜಿನ ಎನ್‌ಸಿಸಿ ವಿಭಾಗದ ಸೀನಿಯರ್ ಅಂಡರ್ ಆಫೀಸರ್ ಆಗಿರುವ ಕುಮಾರಿ ಹೇಮಸ್ವಾತಿ ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ’ಕಾರ್ಗಿಲ್ ವಿಜಯೋತ್ಸವ’ […]

ಅಟಲ್ ಟಿಂಕರಿಂಗ್ ಪ್ರಯೋಗಾಲಯದ ನೋಡಲ್ ಶಿಕ್ಷಕರ, ವಿದ್ಯಾರ್ಥಿಗಳ ಕಾರ್‍ಯಾಗಾರ

ಅಟಲ್ ಟಿಂಕರಿಂಗ್ ಪ್ರಯೋಗಾಲಯದ ನೋಡಲ್ ಶಿಕ್ಷಕರ, ವಿದ್ಯಾರ್ಥಿಗಳ ಕಾರ್‍ಯಾಗಾರ

Saturday, July 23rd, 2022

2022-23 ನೇ ಶೈಕ್ಷಣಿಕ ವರ್ಷದ ಜಿಲ್ಲೆಯ ಅಟಲ್ ಟಿಂಕರಿಂಗ್ ಪ್ರಯೋಗಾಲಯದ ನೋಡಲ್ ಶಿಕ್ಷಕರ, ವಿದ್ಯಾರ್ಥಿಗಳ ಒಂದು ದಿನದ ಕಾರ್‍ಯಾಗಾರವು 22-7-2022 ರಂದು ಸಹ್ಯಾದ್ರಿ ಇಂಜೀನಿಯರಿಂಗ್ ಕಾಲೇಜು ಅಡ್ಯಾರು, ಮಂಗಳೂರು ಇಲ್ಲಿ ನಡೆದಿರುತ್ತದೆ. ಇದು ಶೈಕ್ಷಣಿಕ ವರ್ಷದ 2ನೇ ಕಾರ್‍ಯಾಗಾರವಾಗಿದೆ. ಈ ಕಾರ್‍ಯಾಗಾರದಲ್ಲಿ Exploring Circuitory and Coding with Arduino ದ ಬಗ್ಗೆ ಇಂಜೀನಿಯರಿಂಗ್ ಪದವಿ ಮುಗಿಸಿ ಡ್ರೀಮ್‌ಕಿಟ್ ಲ್ಯಾಬ್‌ನ್ನು ನಿರ್ವಹಿಸುತ್ತಿರುವ ಪದವೀಧರರು ಪ್ರಾಯೋಗಿಕವಾಗಿ ಮಾಹಿತಿ ತಿಳಿಸಿಕೊಟ್ಟರು. ಕಾರ್ಯಾಗಾರದಲ್ಲಿ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿರುತ್ತಾರೆ.

ತಾಲೂಕು ಮಟ್ಟದ ಶಟ್ಲ್-ಬ್ಯಾಡ್ಮಿಂಟನ್ ಪಂದ್ಯಾಟ

ತಾಲೂಕು ಮಟ್ಟದ ಶಟ್ಲ್-ಬ್ಯಾಡ್ಮಿಂಟನ್ ಪಂದ್ಯಾಟ

Wednesday, July 20th, 2022

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಹಯೋಗದಲ್ಲಿ ಒಳಾಂಗಣ ಆಫೀಸರ್‍ಸ್ ಕ್ಲಬ್ ಪರ್ಲಡ್ಕದಲ್ಲಿ ನಡೆದ ತಾಲೂಕು ಮಟ್ಟದ ಶಟ್ಲ್-ಬ್ಯಾಡ್ಮಿಂಟನ್ ಪಂದ್ಯಾಟದ ಉದ್ಘಾಟನೆ ನೆರವೇರಿಸಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಲೋಕೇಶ್ ಎಸ್. ಆರ್ ಅವರು ಕ್ರೀಡಾ ಮನೋಭಾವ ವ್ಯಕ್ತಿ ವಿಕಾಸದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಸೋಲು-ಗೆಲುವುಗಳನ್ನು ಸಮಾನ ಮನಸ್ಕತೆಯಿಂದ ಸ್ವೀಕರಿಸುವ ಗುಣ ಕ್ರೀಡೆಯಲ್ಲಿ ಮನ್ನಡೆಯಲು ಸಹಕಾರಿಯಾಗಲಿದೆ ಎಂದರು. ಪಂದ್ಯಾಟದ ಸಭಾಧ್ಯಕ್ಷತೆ ವಹಿಸಿ ಶಾಲಾ ಅಧ್ಯಕ್ಷರಾದ ಶ್ರೀಯುತ ರಮೇಶ್ಚಂದ್ರ ಇವರು ಕ್ರೀಡಾ ಕ್ಷೇತ್ರದಲ್ಲಿ ನಿರಂತರತೆ […]

Highslide for Wordpress Plugin