ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಮಂಗಳೂರು ಇಲ್ಲಿ ನಡೆದ Shell NXplorers ಮತ್ತು Learning Links Foundation ನವರ ShellNXplorers sciencecarnival – 2026 ವಿಜ್ಞಾನ ಮಾದರಿ ಪ್ರದರ್ಶನದ ಸ್ಪರ್ಧೆಯಲ್ಲಿ ಶಾಲೆಯ ಅಭಿನವ್ ಪಿ.ಎನ್ ಮತ್ತು ವೈಭವ್ ಎನ್ ಭಾಗವಹಿಸಿ ಪ್ರಥಮ ಬಹುಮಾನ ಪಡೆದಿದ್ದಾರೆ.
ಬೀರಮಲೆಬೆಟ್ಟ ಅಭಿವೃದ್ಧಿ ಯೋಜನೆ (ರಿ) ಪುತ್ತೂರು ಇದರ ವತಿಯಿಂದ ಬೀರಮಲೆ ಬೆಟ್ಟದಲ್ಲಿ ನಡೆದ ಬೀರಮಲೆ ಉತ್ಸವ – 2026 ಕಾರ್ಯಕ್ರಮದಲ್ಲಿ ಆಯೋಜಿಸಿದ ಸ್ಪರ್ಧೆಗಳಲ್ಲಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿ ಪಡೆದಿದ್ದಾರೆ. ಪ್ರಾಥಮಿಕ ವಿಭಾಗದಲ್ಲಿ : ಹಿಮಾದ್ರಿ – ಗಾಳಿಪಟ ತಯಾರಿ (ಪ್ರಥಮ), ಪ್ರೌಢ ವಿಭಾಗದಲ್ಲಿ : ವಿಘ್ನೇಶ್ ವಿಶ್ವಕರ್ಮ – ಚಿತ್ರಕಲೆ (ಪ್ರಥಮ), ಭೂಮಿಕಾ – ಚಿತ್ರಕಲೆ (ಸಮಾಧಾನಕರ ಬಹುಮಾನ), ತನ್ಮಯ್ – ಗಾಳಿಪಟ ತಯಾರಿ (ಸಮಾಧಾನಕರ ಬಹುಮಾನ) ಪಡೆದಿದ್ದಾರೆ.
ಸಂಸ್ಕಾರ ಭಾರತೀ ದಕ್ಷಿಣ ಕನ್ನಡ ಜಿಲ್ಲೆ , ಪುತ್ತೂರು ಇನ್ನರ್ ವೀಲ್ ಕ್ಲಬ್ ಪುತ್ತೂರು ಜಂಟಿ ಆಶ್ರಯದಲ್ಲಿ ಸಂಘ ಶತಾಬ್ದಿಯ ಪ್ರಯುಕ್ತ ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಮೂಹ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತಂಡ ಪ್ರಾಥಮಿಕ ಮತ್ತು ಪ್ರೌಢ ಎರಡೂ ವಿಭಾಗಗಳಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾg. ಪ್ರಾಥಮಿಕ ವಿಭಾಗದ ತಂಡದಲ್ಲಿ : ಗರಿಮಾ ಬಿ, ಅಹಲ್ಯ ಕಾಮತ್, ಶ್ರುತಿ ಎಸ್ ನಾಯಕ್, ಮಾತಾಂಗಿ ದಿಶಾ, ಸಹನಾ ಲಕ್ಷ್ಮೀ ಪ್ರೌಢಶಾಲಾ […]
ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ವಿವೇಕ ನಗರ ತೆಂಕಿಲ ಆವರಣದಲ್ಲಿರುವ ವಿವೇಕಾನಂದ ಕನ್ನಡ ಮಾಧ್ಯಮ ಹಾಗೂ ಆಂಗ್ಲಮಾಧ್ಯಮ ಶಾಲೆಗಳಲ್ಲಿ ವಿವೇಕಾನಂದ ಜಯಂತಿ ಕಾರ್ಯಕ್ರಮ ಜರುಗಿತು. ಭಾರತದ ರಾಷ್ಟ್ರೀಯ ಗೀತೆಯಾದ ವಂದೇ ಮಾತರಂ 150ರ ಸಂಭ್ರಮಾಚರಣೆಯೊಂದಿಗೆ ವಿದ್ಯಾಸಂಸ್ಥೆಗಳ 3600 ಮಕ್ಕಳು, ಶಿಕ್ಷಕರು, ಆಡಳಿತ ಮಂಡಳಿಯವರು ಸಾಮೂಹಿಕವಾಗಿ ವಂದೇ ಮಾತರಂ ಹಾಗೂ ದೇಶಭಕ್ತಿಗೀತೆಗಳನ್ನು ಹಾಡಿದರು. ಶಾಲಾ ಆವರಣದಲ್ಲಿ ಪಾಳು ಬಿದ್ದಿದ್ದ ಬಾವಿಯನ್ನು ಶುದ್ಧೀಕರಣಗೊಳಿಸುವ ಅದರ ನೀರನ್ನು ಬಳಸುವ ಸಲುವಾಗಿ ಆಯೋಜಿಸಲಾಗಿದ್ದ ಗಂಗಾ ಪೂಜೆಯಂದು ಪುತ್ತೂರು ಹಾಗೂ […]
ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರ ಅಭಿದಾನವನ್ನು ಇಟ್ಟುಕೊಂಡಿರುವುದಲ್ಲದೇ ಅವರ ತತ್ವಾದರ್ಶಗಳನ್ನೂ ವಿವೇಕಾನಂದ ಶಿಕ್ಷಣ ಸಂಸ್ಥೆ ನಿರಂತರವಾಗಿ ಪಾಲಿಸಿಕೊಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಪ್ರತಿವರ್ಷವೂ ವಿವೇಕಾನಂದ ಜಯಂತಿಯನ್ನು ಬಹಳ ಅದ್ದೂರಿಯಾಗಿ ಆಚರಿಸಿಕೊಂಡು ಬಂದಿದೆ. ಈ ಬಾರಿ ವಿಶೇಷವಾಗಿ ವಿವೇಕಾನಂದ ಜಯಂತಿಯ ಅಂಗವಾಗಿ ಜ.13ರಂದು ಬೆಳಗ್ಗೆ ‘ಶತ ಜಯ ಘೋಷ್’ ಎನ್ನುವ ಪರಿಕಲ್ಪನೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಿದ್ಯಾಸಂಸ್ಥೆಗಳ ಸುಮಾರು 1500 ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಲ್ಲಿ ಘೋಷ್ ವಾದನದೊಂದಿಗೆ ಸಂಚಲನ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ […]
ಪರಿಪೂರ್ಣ ಸನಾತನ ಟ್ರಸ್ಟ್ ವತಿಯಿಂದ ನಡೆದ “ಸ್ವದೇಶಿ ಬಳಸಿ ದೇಶ ಉಳಿಸಿ “ಸೈಕಲ್ ಜಾಥಾವು ಡಿಸೆಂಬರ್ 13 ರಂದು ಬೆಂಗಳೂರಿನಿಂದ ಹೊರಟು ಡಿಸೆಂಬರ್ 17 ರಂದು ಪುತ್ತೂರಿಗೆ ತಲುಪಿತು. ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ಪುತ್ತೂರಿನ ನಾಗರಿಕರು ಭವ್ಯ ಸ್ವಾಗತ ನೀಡಿ ಸೈಕಲಿಂಗ್ ನಲ್ಲಿ ಭಾಗವಹಿಸಿರುವ ಎಲ್ಲರಿಗೂ ಬೆಂಬಲ ನೀಡಿದರು. ನಿವೃತ್ತ ಯೋಧರಿಗೆ ನಮ್ಮ ಶಾಲೆಯ ವಿದ್ಯಾರ್ಥಿನಿಯರು ಆರತಿ ಬೆಳಗಿ ತಿಲಕವಿಟ್ಟು ಬರಮಾಡಿಕೊಂಡರು, ಬಳಿಕ ಯೋಧರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪುತ್ತೂರಿನ ನಿವೃತ್ತ ಯೋಧರು […]
ಈಶ ಯೋಗ ಕೇಂದ್ರವು ಮಹಾಶಿವರಾತ್ರಿ ಶಿವಾಂಗ ಸಾಧನದ ಭಾಗವಾಗಿ ಉಡುಪಿಯಿಂದ ಕೊಯಂಬತ್ತೂರಿನ ಈಶ ಯೋಗ ಕೇಂದ್ರಕ್ಕೆ ಆದಿಯೋಗಿ ರಥದ 70ದಿನಗಳ ಶಿವಯಾತೆಯನ್ನು ಹಮ್ಮಿಕೊಂಡಿದೆ. ಈ ಯಾತ್ರೆಯು ಶಾಲೆಯ […]
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಪುತ್ತೂರು ನಗರ ಠಾಣೆ ಇದರ ವತಿಯಿಂದ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಅಪರಾಧ ತಡೆ ಮಾಸಾಚರಣೆ ಡಿಸೆಂಬರ್ 2025 ಎಂಬ ಕಾರ್ಯಕ್ರಮವನ್ನು ನಡೆಸಲಾಯಿತು. ಸೈಬರ್ ಸುರಕ್ಷತೆಯ ಬಗ್ಗೆ ಮಾತನಾಡಿದ ಪುತ್ತೂರು ನಗರ ಠಾಣೆಯ ಪೊಲೀಸ್ ಉಪನೀರಿಕ್ಷಕರಾದ ಶ್ರೀ ಆಂಜನೇಯ ರೆಡ್ಡಿಯವರು “ಪ್ರತಿಯೊಂದು ಮಗುವಿನಲ್ಲಿಯೂ ಅಸಾಮಾನ್ಯವಾದ ಶಕ್ತಿ ಇದೆ. ಆದರೆ ಆ ಶಕ್ತಿ ಹೊರತರುವಲ್ಲಿ ನಮ್ಮ ಪ್ರಯತ್ನ ಬೇಕು. ಆಗ ಮಾತ್ರ ಸಾಧನೆ ಸಾಧ್ಯ” ಎಂದು ತಿಳಿಸುತ್ತಾ, ಅನಗತ್ಯ ವಿದ್ಯುನ್ಮಾನ ಉಪಕರಣಗಳ ಮಿತಬಳಕೆಯ ಬಗ್ಗೆ […]
‘ಕರ್ನಾಟಕ ರಾಮಕೃಷ್ಣ- ವಿವೇಕಾನಂದ ಭಾವ ಪ್ರಚಾರ ಪರಿಷತ್’ ಸಂಸ್ಥೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಮಕೃಷ್ಣ-ವಿವೇಕಾನಂದ ಆಶ್ರಮಗಳು, ಶಾರದಾಶ್ರಮಗಳು ಮತ್ತು ಸೇವಾ ಸಂಸ್ಥೆಗಳು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ವಿವೇಕ -ವಿದ್ಯಾರ್ಥಿ’ ಎಂಬ ವ್ಯಕ್ತಿತ್ವ ನಿರ್ಮಾಣಕಾರಿ ಲಿಖಿತ ಪರೀಕ್ಷೆಯಲ್ಲಿ 10ನೇ ತರಗತಿಯ ರಾಜ್ಯಮಟ್ಟದಲ್ಲಿ ತೃತೀಯ ರ್ಯಾಂಕ್ ಪಡೆದಿರುತ್ತಾಳೆ. ಹಾಗೆಯೇ 9ನೇ ತರಗತಿಯ ಮುಕುಂದ. ಎಸ್ ಜಿಲ್ಲಾಮಟ್ಟದಲ್ಲಿ ಎರಡನೇ ರ್ಯಾಂಕ್ ಗಳಿಸಿರುತ್ತಾನೆ. ಎಂಟನೇ ತರಗತಿಯ ತ್ರಿಸ್ತಾ ಮತ್ತು 9ನೇ ತರಗತಿಯ ಮೌಲ್ಯ.ಜಿ ತಾಲೂಕು ಮಟ್ಟದಲ್ಲಿ ಮೊದಲನೇ ಸ್ಥಾನ ಪಡೆದಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ ಮತ್ತು ಶಾಲಾ ಶಿಕ್ಷಣ ಇಲಾಖೆ, ದ.ಕ ಜಿಲ್ಲೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮೂಡಬಿದಿರೆ ಇವರ ಆಶ್ರಯದಲ್ಲಿ ಸೈಂಟ್ […]
ನಡೆದ ಪ್ರೌಢವಿಭಾಗದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಆಗಮಿಸಿದ ಶಾಲಾ ಹಿರಿಯ ವಿದ್ಯಾರ್ಥಿನಿ ಡಾ. ಸುಷ್ಮಾ ಎಂ, ಬಿಡಿಎಸ್ ಇವರು ಮಾತಾನಾಡಿ “ಪ್ರತಿಯೊಬ್ಬ ವಿದ್ಯಾರ್ಥಿಗೂ ಪಠ್ಯ-ಪಠ್ಯಪೂರಕ ಚಟುವಟಿಕೆಯಲ್ಲಿ ಭಾಗವಹಿಸಲು ಸಾಕಷ್ಟು ಅವಕಾಶವನ್ನಿ ಈ ಶಾಲೆ ಕಲ್ಪಿಸಿಕೊಡುತ್ತದೆ. ಈ ಎಲ್ಲಾ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡಾಗ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು” ಎಂದರು . ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀಯುತ ತಿರುಮಲೇಶ್ವರ ಭಟ್ ಇವರು ಮಾತನಾಡಿ “ ಪ್ರತಿಯೊಂದು ಮಗುವಿನಲ್ಲಿ ಕೂಡ ಅಗಾಧವಾದ ಶಕ್ತಿಯಿದೆ. ಅದನ್ನು […]
ವಿವೇಕಾನಂದ ಸಿ.ಬಿ.ಎಸ್.ಇ ಸಂಸ್ಥೆಯಲ್ಲಿ ನಡೆದ ಆವಿಷ್ಕಾರ್ -2025, ಚಿಣ್ಣರ ಚಿತ್ತಾರ ವಿವಿಧ ಸ್ಪರ್ಧೆಯಲ್ಲಿಶಾಲೆಯ ಶಿಶುಮಂದಿರದ ಪುಟಾಣಿಗಳು ಭಾಗವಹಿಸಿ ಹಲವು ಪ್ರಶಸ್ತಿ ಪಡೆದಿದ್ದಾರೆ. ಮೌಲ್ಯ ಕೆ.ಎಸ್ – ಚಿತ್ರಕಲೆ(ದ್ವಿತೀಯ), ಆಯುಷಿ ನಾಯಕ್ – ಅಭಿನಯ ಗೀತೆ (ತೃತೀಯ), ಇಶಾನಿ ಆಚಾರ್ಯ -ನ್ಯೂಟ್ರಿಷಿಯನ್ ಗೇಮ್ (ದ್ವಿತೀಯ), ವನ್ಶಿಕ್ – ಪಿಶಿಂಗ್ ಪ್ರೆನ್ಹಿ (ದ್ವಿತೀಯ), ರಾಹಿತ್ಯ -ಪಿಶಿಂಗ್ ಪ್ರೆನ್ಹಿ (ತೃತೀಯ), ಆಯುಷಿ ನಾಯಕ್ – ಝಿಗ್ ಝ್ಯಾಗ್(ತೃತೀಯ) ಸ್ಥಾನ ಪಡೆದಿದ್ದಾರೆ.
ಜಿ.ಎಂ ಕೀರ್ತಿ ಗುಣಶ್ರೀ ಪ್ರತೀಕ್ಷಾ ತ್ರಿಷಾ ರುತಿಕ್ ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ , ರಾಜ್ಯಮಟ್ಟದ ಶಾಲಾ ಮಕ್ಕಳ ಆಟೋಟಗಳ ಸ್ಪರ್ಧೆ 2025-26, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದಿದ್ದು ಇದರಲ್ಲಿ ಶಾಲೆಯ 17ರ ವಯೋಮಾನದ ಬಾಲಕಿಯರ ಮತ್ತು 4×100 ಮೀ ರಿಲೇ […]
ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರ, ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ, ಪುತ್ತೂರು, ಇದರ ವತಿಯಿಂದ ಡಾ.ಕೆ ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಪುತ್ತೂರು ವಲಯ ಮಟ್ಟದ ಪ್ರತಿಭಾ ಕಾರಂಜಿ ‘ಪ್ರತಿಭಾ ದರ್ಪಣ’ ಸ್ಪರ್ಧೆಯಲ್ಲಿ ನಮ್ಮ ಪ್ರೌಢಶಾಲಾ ತಂಡ ಪ್ರಥಮ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ವಿಜೇತ ವಿದ್ಯಾರ್ಥಿಗಳು : ದರ್ಶಿನಿ – ಕನ್ನಡ ಭಾಷಣ (ಪ್ರಥಮ), ವಿಘ್ನೇಶ್ ವಿಶ್ವಕರ್ಮ – ಚಿತ್ರಕಲೆ (ಪ್ರಥಮ), ಸಾಯೀಶ್ವರಿ –ಚರ್ಚಾಸ್ಪರ್ಧೆ (ಪ್ರಥಮ), ಮೌಲ್ಯ.ಜಿ […]
ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇಲ್ಲಿ ನಡೆದ ಅಟಲ್ ಟಿಂಕರಿಂಗ್ ಫೆಸ್ಟ್ -2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಗಳಿಸಿದ್ದಾರೆ. ವಿಜ್ಞಾನ ಮಾದರಿ ಪ್ರದರ್ಶನ – ಅಭಿನವ್ (ಪ್ರಥಮ) ವಿಜ್ಞಾನ ರಸಪ್ರಶ್ನೆ – ಶ್ರೀಕೃಷ್ಣ, ಸಿಂಚನ ಪಿ ಮತ್ತು ಅಹಲ್ಯ ಕಾಮತ್ (ಪ್ರಥಮ) ಗಣಿತ ಫಝಲ್ – ಶ್ರೇಯಸ್ (ದ್ವಿತೀಯ) ಲೆಡ್ ಆರ್ಟ್ ಮತ್ತು ಗ್ಲೋ – ಶ್ರೇಯಸ್ ಜಿ ಆಚಾರ್ಯ ಮತ್ತು ಯದುನಂದನ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ
ಶಾಲೆಯ ವಾರ್ಷಿಕ ಕ್ರೀಡಾಕೂಟಕ್ಕೆ ಉದ್ಘಾಟಕರಾಗಿ ಆಗಮಿಸಿದ ರಾಷ್ಟ್ರೀಯ ಕ್ರೀಡಾಪಟು ಆನಂದ ಶೆಟ್ಟಿ ಕಲ್ಲಡ್ಕ ಇವರು ಶಾಲಾ ಸರಸ್ವತಿ ಬಳಿ ಪ್ರಜ್ವಲಿತ ದೀಪದಿಂದ ಬೆಳಗಿಸಿ ತಂದ ಕ್ರೀಡಾ ಜ್ಯೋತಿಯಿಂದ ಕ್ರೀಡಾಕೂಟದ ದೀಪ ಬೆಳಗಿಸಿ “ ಬಾಲ್ಯದಿಂದಲೇ […]
ಶಾಲೆಯಲ್ಲಿ ತುಳಸಿ ಪೂಜಾ ಕಾರ್ಯಕ್ರಮ ನಡೆಯಿತು. ತುಳಸಿ ಕಟ್ಟೆಯನ್ನು ಹೂವುಗಳಿಂದ ಅಲಂಕರಿಸಿ ತುಳಸಿಗೆ ಆರತಿ, ಪುಷ್ಪಾರ್ಚನೆ ಮಾಡಿ ಪ್ರಸಾದ ವಿತರಣೆ ಮಾಡಲಾಯಿತು. ಭಜನೆ, ಶ್ಲೋಕದಿಂದ ಆರಂಭವಾದ ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಕ್ಕಳ ಕಲಿಕೆಯಲ್ಲಿ ಪೋಷಕರ ಪಾತ್ರ ಪ್ರಮುಖವಾದುದು. ಸ್ಪರ್ಧೆಗಳಲ್ಲಿ ಆಸಕ್ತಿ ಹಾಗೂ ಉತ್ಸಾಹದಿಂದ ಭಾಗವಹಿಸಿದಾಗ […]
ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರ, ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ, ಪುತ್ತೂರು, ಇದರ ವತಿಯಿಂದ ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ದರ್ಬೆ ಇಲ್ಲಿ ನಡೆದ ಪುತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿ ಮತ್ತು ಹಿರಿಯ ಪ್ರಾಥಮಿಕ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಕಿರಿಯ ಪ್ರಾಥಮಿಕ ವಿಭಾಗದಲ್ಲಿ :ಕೀರ್ತನ್ ಪಿ.ಯು – ಚಿತ್ರಕಲೆ (ಪ್ರಥಮ), ಸನ್ಮಯ […]
ಶಾಲಾ ಶಿಕ್ಷಣ ಇಲಾಖಾ ವತಿಯಿಂದ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ಈಜುಸ್ಪರ್ಧೆಯಲ್ಲಿ ಲಿಖಿತ್ ಎಸ್ ಗೌಡ 50ಮೀ ಬ್ರೆಸ್ಟ್ ಸ್ಟ್ರೋಕ್ ಮತ್ತು 100ಮೀ ಬ್ರೆಸ್ಟ್ ಸ್ಟ್ರೋಕ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಮತ್ತು ಮೈಸೂರು ವಿಶ್ವವಿದ್ಯಾಲಯ ಕಾರ್ಯಸೌಧ ಕೆ.ಜಿ ಕೊಪ್ಪಳ, ಸರಸ್ವತಿಪುರಂ ಮೈಸೂರು ಇಲ್ಲಿ ನಡೆದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾನೆ.
ವಿದ್ಯಾಭಾರತಿ ವತಿಯಿಂದ ಮಧ್ಯಪ್ರದೇಶದ ಭಾರತ್ ಭಾರತಿ ರೆಸಿಡೆನ್ಯಿಯಲ್ ಸ್ಕೂಲ್ ಬೇತೂಲ್ನಲ್ಲಿ ನಡೆದ 14ರ ವಯೋಮಾನದ ರಾಷ್ಟ್ರಮಟ್ಟದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಕುಶನ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾನೆ.
ದಿವ್ಯ ಸಿಂಚನ ಎಂ ಜ್ಯೋತಿ ದೀಕ್ಷಿತಾ ಸುಶ್ರಾವ್ಯ ಚೈತನ್ಯ ವಿದ್ಯಾಭಾರತಿ ವತಿಯಿಂದ ಮಧ್ಯಪ್ರದೇಶದ ಭಾರತ್ ಭಾರತಿ ರೆಸಿಡೆನ್ಯಿಯಲ್ ಸ್ಕೂಲ್ ಬೇತೂಲ್ನಲ್ಲಿ ನಡೆದ 14ರ ವಯೋಮಾನದ ರಾಷ್ಟ್ರಮಟ್ಟದ […]
ಜಿ.ಎಂ.ಕೀರ್ತಿ ರುತಿಕ್ ಪ್ರತೀಕ್ಷ ಗುಣಶ್ರೀ ತ್ರಿಷಾ ಸ್ವಾತಿ ಪ್ರಗತಿ ಜಿಲ್ಲಾಡಳಿತ […]
ಅಭಿಷೇಕ್ ಚಿನ್ಮಯ್ ರುತಿಕ್ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಡಾ. ಅಂಬೇಡ್ಕರ್ ಕ್ರೀಡಾಂಗಣ ಬಸವೇಶ್ವರ ನಗರ ಬೆಂಗಳೂರು ಇಲ್ಲಿ ನಡೆದ ರಾಜ್ಯಮಟ್ಟದ 17ರ ವಯೋಮಾನದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ತಂಡದಲ್ಲಿ ರುತಿಕ್, ಅಭಿಷೇಕ್ ಹೊಸಮನಿ […]
ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಡಾ. ಅಂಬೇಡ್ಕರ್ ಕ್ರೀಡಾಂಗಣ ಬಸವೇಶ್ವರ ನಗರ ಬೆಂಗಳೂರು ಇಲ್ಲಿ ನಡೆದ ರಾಜ್ಯಮಟ್ಟದ 14ರ ವಯೋಮಾನದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದ ತಂಡದಲ್ಲಿದ್ದ ಶಾಲೆಯ 8ನೇ ತರಗತಿ ವಿದ್ಯಾರ್ಥಿ ತರುಣ್ ಕೃಷ್ಣ ರಾಷ್ಟ್ರಮಟ್ಟದ(ಎಸ್.ಜಿ.ಎಫ್.ಐ) ಪಂದ್ಯಾಟಕ್ಕೆ ಆಯ್ಕೆಗೊಂಡಿದ್ದಾನೆ.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಸುಳ್ಯ ಇವರ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು ಪಂಜ ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕು. ಜಿ.ಎಂ.ಕೀರ್ತಿ17ರ ವಯೋಮಾನದ ಬಾಲಕಿಯರ ಎತ್ತರ ಜಿಗಿತದಲ್ಲಿ 1.60 ಮೀಟರ್, ತ್ರಿವಿಧ ಜಿಗಿತದಲ್ಲಿ 11.34ಮೀ ಹಾಗೂ ಹರ್ಡಲ್ಸ್ ನಲ್ಲಿ 15.2 ಸೆಕೆಂಡಿನಲ್ಲಿ ಗುರಿತಲುಪಿ ಕೂಟದಲ್ಲಿ ವಿಶೇಷ ದಾಖಲೆ ಮಾಡಿ ವೈಯಕ್ತಿಕ […]
ಆಕಾಂಕ್ಷ ಚಾರಿಟೇಬಲ್ ವತಿಯಿಂದ ರಾಮಕೃಷ್ಣ ಪ್ರೌಢಶಾಲೆ, ಕೊಂಬೆಟ್ಟು ಇಲ್ಲಿ ನಡೆಸಲ್ಪಟ್ಟ ಕೋಡ್ ಕ್ರಾಪ್ಟ್ ವಿಜ್ಞಾನ ಮೇಳದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಾಥಮಿಕ ವಿಭಾಗದಲ್ಲಿ ಅಭಿನವ್-ಪ್ರಥಮ ಸ್ಥಾನ ಪಡೆದು 7000 ನಗದು ಬಹುಮಾನ ಪಡೆದಿರುತ್ತಾನೆ. ಪ್ರೌಢ ವಿಭಾಗದಲ್ಲಿ ವೈಭವ್ ಮತ್ತು ಯಶಸ್ ತೃತೀಯ ಸ್ಥಾನ ಪಡೆದು 3000 ನಗದು ಬಹುಮಾನ ಪಡೆದಿರುತ್ತಾನೆ. ಕೌಶಿಕ್ ಸಮಾಧಾನಕರ ಬಹುಮಾನದೊಂದಿಗೆ 1000 ನಗದು ಬಹುಮಾನ ಪಡೆದಿರುತ್ತಾನೆ. ಮತ್ತು ಈ ಮೂರು ವಿದ್ಯಾರ್ಥಿಗಳು ಮಂಗಳೂರಿನ ಕೋಡ್ ಕ್ರಾಪ್ಟ್ ಟೆಕ್ನಾಲಜಿ ಸಂಸ್ಥೆಗೆ ಭೇಟಿ […]
ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆಗಳ ಮಾದರಿ ಯೋಜನೆ ಭವಿಷ್ಯದ ಕನಸಿಗೆ ಹಸಿರಿನ ಹೆಜ್ಜೆ – ಗಂಗಾಪೂಜೆ, ತೀರ್ಥಧಾರಾ ಕಾರ್ಯಕ್ರಮ ನೀರಿಲ್ಲದೆ ಜೀವನವಿಲ್ಲ. ನೀರಿದ್ದರೆ ಭವಿಷ್ಯವೂ ಇರುತ್ತದೆ. ನೀರು ಮನುಷ್ಯರಿಗೆ ಮಾತ್ರವಲ್ಲದೆ ಇಡೀ ಪರಿಸರ ವ್ಯವಸ್ಥೆಗೆ ಮುಖ್ಯವಾಗಿದೆ. ಸಾಕಷ್ಟು ನೀರಿಲ್ಲದೆ, ಮಾನವರ ಹಾಗೂ ಪ್ರಾಣಿಗಳ ಅಸ್ತಿತ್ವವು ಅಸಾಧ್ಯವಾಗಿದೆ. ಜಲಸಂರಕ್ಷಣೆಯ ಮಹತ್ವ ಜೀವ ಉಳಿಸಲು, ಆರ್ಥಿಕತೆಯನ್ನ್ ಬಲಪಡಿಸಲು ಮತ್ತು ಪರಿಸರವನ್ನು […]
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ (ರಿ) ಇವರು ನಡೆಸುವ ಜ್ಞಾನ ರಥ ಮತ್ತು ಜ್ಞಾನ ಪಥ ಪುಸ್ತಕಾಧಾರಿತ ತಾಲೂಕುಮಟ್ಟದ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ವಿಭಾಗ- ಶ್ರೀಕೃಷ್ಣ – ಭಾಷಣ (ಪ್ರಥಮ), ಲಿಖಿತಾ-ಚಿತ್ರಕಲೆ (ದ್ವಿತೀಯ), ಗರಿಮಾ- ಶ್ಲೋಕ ಕಂಠಪಾಠ (ತೃತೀಯ) ಪ್ರೌಢವಿಭಾಗದಲ್ಲಿ ಅದ್ವಿತ್ ಜಿ – ಚಿತ್ರಕಲೆ (ದ್ವಿತೀಯ), ಶ್ರೀರಕ್ಷಾ – ಶ್ಲೋಕ ಕಂಠಪಾಠ (ತೃತೀಯ)
ವಿವೇಕಾನಂದ ಪದವಿಪೂರ್ವ ಕಾಲೇಜುನಲ್ಲಿ ನಡೆದ ಕನಸುಗಳು – 2025 ಸ್ಪರ್ಧಾ ಕಾರ್ಯಕ್ರಮದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ. ವಿಜೇತರ ವಿವರ : ಯುವ ಪತ್ರಕರ್ತೆ – ಮೌಲ್ಯ ಜಿ (ಪ್ರಥಮ), ಮುಖವರ್ಣಿಕೆ -ಸಾಯೀಶ್ವರಿ ಮತ್ತು ದೀಕ್ಷಾ (ಪ್ರಥಮ), ಯುವ ವಾಣಿಜ್ಯೋಧ್ಯಮಿ – ಮಧುಶ್ರೀ ಮತ್ತು ತರುಣ್ ನಾಯ್ಕ (ಪ್ರಥಮ), ಜಾಹೀರಾತು – ದರ್ಶಿನಿ ಮತ್ತು ತಂಡ (ಪ್ರಥಮ), ಪ್ರಾಕೃತಿಕ ರಂಗೋಲಿ- ಶ್ರಾವ್ಯ ಮತ್ತು ಕೃತಿ (ಪ್ರಥಮ), ಕಲರವ ಸಾಂಸ್ಕೃತಿಕ ವೈವಿಧ್ಯ – […]
ಶಾಲಾ ‘ಮಹತಿ’ ಕನ್ನಡ ಸಂಘದ ವತಿಯಿಂದ ನವೆಂಬರ್ 1ರಂದು ಕವಿ-ಕಾವ್ಯ-ಯಾನ ಎಂಬ ಶೀರ್ಷಿಕೆಯಡಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಶಾಲಾ ಮುಖ್ಯಗುರುಗಳು ಮತ್ತು ಶಿಕ್ಷಕ ವೃಂದದವರು ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಾಲಾ ಮುಖ್ಯಗುರು ಶ್ರೀಮತಿ ಆಶಾ ಬೆಳ್ಳಾರೆ ಮಾತಾನಾಡಿ ‘ಜೀವನದಲ್ಲಿ […]
ಅಕ್ಷಯ ಪದವಿಪೂರ್ವ ಕಾಲೇಜು, ಸಂಪ್ಯ ಇಲ್ಲಿ ನಡೆದ ‘ವಿದಿಶಾ- 2025’ರ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಶಾಲಾ ತಂಡ ಪ್ರಥಮ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ವಿಜೇತರಾದ ವಿದ್ಯಾರ್ಥಿಗಳ ವಿವರ :ಜನಪದ ನೃತ್ಯ – ವೈಷ್ಣವಿ ಮತ್ತು ತಂಡ (ಪ್ರಥಮ), ಕ್ಲೇ ಮಾಡೆಲಿಂಗ್ – ಯಶ್ವಿತ್ ಮತ್ತು ವಿಘ್ನೇಶ್ (ಪ್ರಥಮ), ಲೋಗೋ ರಂಗೋಲಿ – ಶ್ರಾವ್ಯ ಮತ್ತು ಕೃತಿ (ಪ್ರಥಮ), ರಸಪ್ರಶ್ನೆ – ಧನುಷ್ ಡಿ.ಜಿ, ಚರಿತ್ ಮತ್ತು ಶ್ರೀನಂದನ (ಪ್ರಥಮ), ವಿಡಿಯೋ ಎಡಿಟಿಂಗ್ – […]
ಅಂಬಿಕಾ ಶಿಕ್ಷಣ ಸಂಸ್ಥೆಯ ರಜತ ವರ್ಷಾಚರಣೆ ಪ್ರಯುಕ್ತ ಬಪ್ಪಳಿಗೆ ಅಂಬಿಕಾ ಕಾಲೇಜಿನ ಶ್ರೀ ಶಂಕರ ಸಭಾಭವನದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಅರೇಮ್ಯ- 2025 ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪಡೆದಿರುತ್ತಾರೆ. ಭಗವದ್ಗೀತಾ ಪಠಣ –ಮುಕುಂದ (ಪ್ರಥಮ), ಜನಪದ ನೃತ್ಯ- ವೈಷ್ಣವಿ ಮತ್ತು ತಂಡ (ಪ್ರಥಮ), ಪೊಸ್ಟರ್ ಮೇಕಿಂಗ್ – ಅದ್ವಿತ್ ಜಿ ಮತ್ತು ದ್ವಿಜನ್ (ಪ್ರಥಮ), ಭರತನಾಟ್ಯ- ಲಾಸ್ಯ ಎನ್ ವಿ(ದ್ವಿತೀಯ), ವಿಡಿಯೋ ಎಡಿಟಿಂಗ್- ವಿನಿಲ್ ವಿಶ್ವಕರ್ಮ ಮತ್ತು ಮನೀಷ್ (ದ್ವಿತೀಯ) ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ (ಆಡಳಿತ), ಶಾಲಾ ಶಿಕ್ಷಣ ಇಲಾಖೆ, ಮಂಗಳೂರು ಇವರ ವತಿಯಿಂದ ಕಪಿತಾನಿಯೋ ಪ್ರೌಢಶಾಲೆ, ಕಂಕನಾಡಿ, ಮಂಗಳೂರು ಇಲ್ಲಿ ನಡೆದ ಜಿಲ್ಲಾಮಟ್ಟದ ಐ.ಟಿ ಕ್ವಿಜ್ ನಲ್ಲಿ ಶಾಲೆಯ ಧನುಷ್.ಡಿ.ಜಿ(ಗಣೇಶ್ ಡಿ.ಎಸ್ ಮತ್ತು ಉಷಾ ಎಸ್.ಟಿ ದಂಪತಿಗಳ ಪುತ್ರ) ಮೈಸೂರಿನಲ್ಲಿ ನಡೆಯುವ ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ.
ಇನ್ನರ್ ವಿಲ್ ಕ್ಲಬ್ ಪುತ್ತೂರು ಇವರ ನೇತೃತ್ವದಲ್ಲಿ ‘ಅಗ್ನಿ ಸುರಕ್ಷತೆ ಕುರಿತು ಪ್ರಾತ್ಯಕ್ಷಿಕೆ ಮತ್ತು ಜಾಗೃತಿ ಕಾರ್ಯಕ್ರಮ’ ವಿವೇಕಾನಂದ ವಿದ್ಯಾಸಂಸ್ಥೆಗಳ ತೆಂಕಿಲ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಅಗ್ನಿಶಾಮಕ ಠಾಣಾಧಿಕಾರಿ ಶಂಕರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಇನ್ನರ್ ವೀಲ್ ಅಧ್ಯಕ್ಷೆ ರೂಪಲೇಖ ದೀಪ ಬೆಳಗಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯಾವ ರೀತಿ ಅಗ್ನಿ ಅವಘಡ ಸಂಭವಿಸಿದಾಗ ಜಾಗರೂಕರಾಗಬೇಕು. ಯಾವ ರೀತಿ ಪ್ರಾಣ ರಕ್ಷಣೆ ಮಾಡಿಕೊಳ್ಳಬೇಕು. ಬೆಂಕಿ ನಂದಿಸುವ ವಿವಿಧ ವಿಧಾನಗಳ ಕುರಿತು ಪುತ್ತೂರು ಅಗ್ನಿ ಶಾಮಕ ಠಾಣೆಯ […]
ಇನ್ನರ್ ವೀಲ್ ಕ್ಲಬ್ ಪುತ್ತೂರು ಇದರ ವತಿಯಿಂದ ಹೆಣ್ಣು ಮಕ್ಕಳಿಗೆ ‘ದೇಹದ ಸುರಕ್ಷತೆ, ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶ’ ಎಂಬ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿವೇಕಾನಂದ ಕಾಲೇಜ್ ಆಫ್ ಆಟ್ರ್ಸ್, ಸೈನ್ಸ್, ಕಾಮರ್ಸ್ ಇದರ ಪಿ.ಜಿ ಪ್ರೊಗ್ರಾಮ್ ಡೀನ್ ಡಾ. ವಿಜಯ ಸರಸ್ವತಿ ಮಾತಾನಾಡಿ ‘ಹೆಣ್ಣು ಮಕ್ಕಳು ತಾವು ಪರಿಚಯವಿಲ್ಲದ ವ್ಯಕ್ತಿಯಲ್ಲಿ ಯಾವ ರೀತಿಯಲ್ಲಿ ಮಾತನಾಡಬೇಕು ಮತ್ತು ಪರಿಚಯವಿದ್ದರೂ ಕೂಡ ಮಾತನಾಡುವಾಗ ನಮ್ಮ ವರ್ತನೆ ,ದೇಹ, ನಡವಳಿಕೆ ಯಾವ ರೀತಿ ಇರಬೇಕು […]
ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಕಬಡ್ಡಿ ಪಂದ್ಯಾಟದ 14ರ ವಯೋಮಾನದ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತರುಣ್ ಕೃಷ್ಣ ರಾಜ್ಯಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾನೆ.
ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಕೊಣಾಲು ಇವರ ಸಹಯೋಗದಲ್ಲಿ ನಡೆದ 17ರ ವಯೋಮಾನದ ಖೋ-ಖ್_ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಾಲಕ – ಬಾಲಕಿಯರ ಎರಡೂ ತಂಡಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.
ವಿದ್ಯಾಭಾರತಿ ದಕ್ಷಿಣ ಮಧ್ಯ ಕ್ಷೇತ್ರ (ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ) ವಿದ್ಯಾ ಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ, ಶ್ರೀರಾಮ ಪದವಿಪೂರ್ವ ಕಾಲೇಜು ಕಲ್ಲಡ್ಕ ಆಯೋಜನೆಯಲ್ಲಿ ನಡೆದ ಕ್ಷೇತ್ರಿಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ 17ರ ವಯೋಮಾನದ ಬಾಲಕರ ತಂಡ ಹಾಗೂ 14ರ ವಯೋಮಾನದ […]
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪುತ್ತೂರು ಪುರಸಭೆಯಲ್ಲಿ 6ರಿಂದ 8ನೇ ತರಗತಿಯ ಮಕ್ಕಳಿಗೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆದ ‘ನನ್ನ ಮತ ನನ್ನ ಹಕ್ಕು’ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಶಾಲೆಯ ಲಿಖಿತಾ ಕೆ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಅದ್ವಿತ್ ಜಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿರುತ್ತಾನೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ (ಆಡಳಿತ ) ಮಂಗಳೂರು ಪಿ.ಎಂ. ಶ್ರೀ ಸರಕಾರಿ ಪ್ರೌಢಶಾಲೆ (ಆರ್.ಎಂ.ಎಸ್.ವಿ) ವಿಟ್ಲ ಹಾಗೂ ಕ್ರೀಡಾಭಾರತಿ ಮಂಗಳೂರು ಇವರ ಸಹಯೋಗದಲ್ಲಿ ಮಂಗಳೂರಿನ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ 17ರ ವಯೋಮಾನದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತದೆ. ಇವರಿಗೆ ತರಬೇತುದಾರರಾಗಿ ಶ್ರೀ ಮನೋಹರ್ ಮತ್ತು ಶಾಲಾ ದೈಹಿಕ […]
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಹಾಗೂ ಪಿ.ಎಂ.ಶ್ರೀ ಸರಕಾರಿ ಪ್ರೌಢಶಾಲೆ (ಆರ್.ಎಂ.ಎಸ್) ವಿಟ್ಲ ಇದರ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ 14ರ ವಯೋಮಾನದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಶಾಲೆಯ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದು ಪಡೆದುಕೊಂಡಿದೆ. ತಂಡದಲ್ಲಿದ್ದ ತರುಣ್ ಕೃಷ್ಣ, ಸುಭಾಷ್, ಕುಶನ್, ಲತೇಶ್ ಇವರು ಮೈಸೂರು ವಿಭಾಗ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಲು ಅರ್ಹತೆ ಗಳಿಸಿದ್ದಾರೆ. ಇವರಿಗೆ ತರಬೇತುದಾರರಾಗಿ ಶ್ರೀ ಮನೋಹರ್ ಮತ್ತು […]