2024-25ನೇ ಸಾಲಿನ ದಾಖಲಾತಿ ಆರಂಭಗೊಂಡಿದೆ.

2024-25ನೇ ಸಾಲಿನ ದಾಖಲಾತಿ ಆರಂಭಗೊಂಡಿದೆ.

Thursday, March 21st, 2024
ವಿಜ್ಞಾನ ಮಾದರಿ ಸ್ಪರ್ಧೆ – ಶಾಲೆಗೆ ಪ್ರಶಸ್ತಿ

ವಿಜ್ಞಾನ ಮಾದರಿ ಸ್ಪರ್ಧೆ – ಶಾಲೆಗೆ ಪ್ರಶಸ್ತಿ

Friday, March 15th, 2024

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ,ಬೆಂಗಳೂರು ಪಿಲಿಕುಳ ಅಭಿವೃದ್ದಿ ಪ್ರಾಧಿಕಾರ,ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ಮಂಗಳೂರು ಇವರು ನಡೆಸಿದ ಇನ್ನೋವೇಶನ್ ಹಬ್ ವಿಜ್ಞಾನ ಮಾದರಿಗಳ ಸ್ಪರ್ಧೆಯಲ್ಲಿ  ಶಾಲೆಯ 9 ನೇ ತರಗತಿಯ ಚಿರಂತನ. ಕೆ. ವಿ. ಮತ್ತು ಸ್ಕಂದ ಬಳ್ಳಕ್ಕುರಾಯ ಇವರು ಭಾಗವಹಿಸಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.

ಸಾನಿಧ್ಯ – ಮನೆ – ಮನ ಭೇಟಿ

ಸಾನಿಧ್ಯ – ಮನೆ – ಮನ ಭೇಟಿ

Thursday, March 14th, 2024

ಪ್ರಸಕ್ತ ಶೈಕ್ಷಣಿಕ ಸಾಲಿನ ೧೦ನೇ ಹಾಗೂ ೭ನೇ ತರಗತಿಯ ಮಕ್ಕಳ ಮನೆ – ಮನ ಭೇಟಿ -ಸಾನಿಧ್ಯದಲ್ಲಿ ಶಾಲಾ ಸಹಶಿಕ್ಷಕ ವೃಂದದ ಸಕ್ರಿಯ ಪಾಲ್ಗೊಳ್ಳುವಿಕೆ ಸೌಹಾರ್ದತೆ ಹಾಗೂ ವಿದ್ಯಾರ್ಥಿ ವಿಕಾಸದ ಮೂಲ ಉದ್ದೇಶದಿಂದ ನಡೆಯಬೇಕಿದೆ – ರಮೇಶ್ಚಂದ್ರ (ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು) ಪ್ರತೀ ವರ್ಷ ಶಾಲೆಯ ಮಕ್ಕಳ ಮನೆ ಭೇಟಿಯ ಸಂದರ್ಭ ಶಾಲೆಯ ಎಲ್ಲಾ ಶಿಕ್ಷಕ ವೃಂದ ಈ ಯೋಜನೆಯಲ್ಲಿ ಸಕ್ರಿಯರಾಗಿದ್ದು, ಶಾಲೆ – ಮನೆಯ ನಡುವಿನ ಸಂಬoಧ ಧನಾತ್ಮಕವಾಗುವಲ್ಲಿ ಸಹಕಾರಿಯಾಗುತ್ತಿದೆ ಎಂದು ಪೋಷಕರು ಅಭಿಪ್ರಾಯ […]

ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಗೋಡುಗೆ ಕಾರ್ಯಕ್ರಮ

ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಗೋಡುಗೆ ಕಾರ್ಯಕ್ರಮ

Thursday, March 14th, 2024

ಪ್ರಸಕ್ತ ಶೈಕ್ಷಣಿಕ ಸಾಲಿನ ಹತ್ತನೇ ತರಗತಿಯ ಮಕ್ಕಳ ಬೀಳ್ಕೋಡುಗೆ ಸಮಾರಂಭ ‘ದೀಪ ಪ್ರದಾನ’ ನೆರವೇರಿತು. ಕಾರ್ಯಕ್ರಮದ ಉದ್ಘಾಟಕರಾಗಿ ಪುತ್ತೂರಿನ ದಂತವೈದ್ಯರಾದ ಶ್ರೀಕೃಷ್ಣ ಭಟ್ ಆಗಮಿಸಿ ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ವಹಿಸಬೇಕಾದ ಪೂರ್ವಸಿದ್ಧತಾ ವಿಚಾರಗಳನ್ನು ತಿಳಿಸಿ ಶಾಲೆಯ ಧನಾತ್ಮಕ ಹಾಗೂ ಕ್ರಿಯಾತ್ಮಕ ಬೆಳವಣಿಗೆಯಲ್ಲಿ ಪೋಷಕರ ಹಾಗೂ ವಿದ್ಯಾರ್ಥಿಗಳ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಪ್ರಮುಖ ಅಂಗವಾದ ‘ಮಾತೃವಂದನೆ’ ಮಹತ್ವ ಹಾಗೂ ವಿಧಾನವನ್ನು ತಿಳಿಸಿದವರು ಉಡುಪಿಯ ವಿದ್ವಾನ್ ದಾಮೋದರ ಶರ್ಮಾ ಇವರು. ಭಾರತೀಯ ಸಂಸ್ಕತಿಯಲ್ಲಿ ತಾಯಿ-ತಂದೆ, ಗುರು-ಹಿರಿಯರ ಸ್ಥಾನಮಾನ, […]

ರಥಸಪ್ತಮಿ ಆಚರಣೆ

ರಥಸಪ್ತಮಿ ಆಚರಣೆ

Monday, February 19th, 2024

ಪ್ರತಿ ವರ್ಷ ಹೊಸತನವನ್ನು ಪಡೆಯುವ ಸೂರ್ಯನನ್ನು ನೋಡಿ ನಾವು ಬದುಕಲ್ಲಿ ಹೊಸತನವನ್ನು ಪಡೆಯಬೇಕು.                                                                                           […]

ರಾಮಾಯಣ ಆನ್ ಲೈನ್ ಸ್ಪರ್ಧೆಯಲ್ಲಿ ಪ್ರಶಸ್ತಿ

ರಾಮಾಯಣ ಆನ್ ಲೈನ್ ಸ್ಪರ್ಧೆಯಲ್ಲಿ ಪ್ರಶಸ್ತಿ

Friday, February 16th, 2024

ವಲ್ರ್ಡ್ ರಾಮಾಯಣ ಚಾಂಪಿಯನ್ ಶಿಪ್ – 2023 ನಡೆಸಿದ ಆನ್‍ಲೈನ್ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕು. ತ್ರಿಸ್ಥಾ ಭಟ್ ತೃತೀಯ ಸ್ಥಾನ ಪಡೆದಿದ್ದಾಳೆ

ಗಾನ - ನೃತ್ಯ – ಯಕ್ಷ ಸಂಭ್ರಮ – 2024

ಗಾನ – ನೃತ್ಯ – ಯಕ್ಷ ಸಂಭ್ರಮ – 2024

Wednesday, January 31st, 2024

ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು, ಗಾನ ಸರಸ್ವತಿ ಸಂಗೀತ ಶಾಲೆ ಪುತ್ತೂರು ಹಾಗೂ ಯಕ್ಷ ಚಿಣ್ಣರ ಬಳಗ ಪುತ್ತೂರು ಇವರ ಸಹಯೋಗದೊಂದಿಗೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ‘ಗಾನ-ನೃತ್ಯ-ಯಕ್ಷ ಸಂಭ್ರಮ-2024’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಶಾಲೆಯ ಹಿರಿಯ ವಿದ್ಯಾರ್ಥಿ ಪ್ರಸ್ತುತ ವೈದ್ಯ ವೃತ್ತಿಯಲ್ಲಿರುವ ಹಾಗೂ ಮೃದಂಗ ಕಲಾವಿದರೂ ಆದ ಶ್ರೀ ಅಕ್ಷಯ ನಾರಾಯಣ ಕಾಂಚನ ಪುತ್ತೂರು ರವರು ನೆರವೇರಿಸಿದರು. ವಿದ್ಯಾರ್ಥಿ ಜೀವನದಲ್ಲಿ ಪಠ್ಯಪೂರಕ ಚಟುವಟಿಕೆಗಳು ವಿದ್ಯಾರ್ಥಿಗಳ ಪಾಲಿಗೆ ಅವಶ್ಯಕ ಎಂಬುದಾಗಿ ತಿಳಿಸಿದರು. ಸಭಾ […]

ಗಣರಾಜ್ಯೋತ್ಸವ ಸ್ಪರ್ಧೆಗಳು – ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಗಣರಾಜ್ಯೋತ್ಸವ ಸ್ಪರ್ಧೆಗಳು – ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Monday, January 29th, 2024

ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಪುತ್ತೂರು ಇದರ ಆಶ್ರಯದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಶ್ರೀಕೃಷ್ಣ (ಪ್ರಾಥಮಿಕ ವಿಭಾಗದ ಭಾಷಣ ಸ್ಪರ್ಧೆಯಲ್ಲಿ – ಪ್ರಥಮ) ಸಾಯೀಶ್ವರಿ (ಪ್ರಾಥಮಿಕ ವಿಭಾಗದ ಚಿತ್ರಕಲೆಯಲ್ಲಿ-ದ್ವಿತೀಯ) ದರ್ಶಿನಿ ಎಂ (ಪ್ರೌಢಶಾಲಾ ವಿಭಾಗದ ಭಾಷಣ ಸ್ಪರ್ಧೆಯಲ್ಲಿ – ದ್ವಿತೀಯ) ಪೂಜಾ (ಪ್ರೌಢಶಾಲಾ ವಿಭಾಗದ ಚಿತ್ರಕಲೆಯಲ್ಲಿ – ದ್ವಿತೀಯ)ಸ್ಥಾನ ಪಡೆದುಕೊಂಡಿದ್ದಾರೆ.

ಕರಾಟೆ - ಸ್ಪರ್ಧೆ –  ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಕರಾಟೆ – ಸ್ಪರ್ಧೆ – ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Saturday, January 27th, 2024

                                                                                     ಇನ್‍ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಮಾರ್ಷಲ್ ಆಟ್ರ್ಸ್ ಇವರು ನಡೆಸಿದ ಜಿಲ್ಲಾ ಮಟ್ಟದ ಐ.ಕೆ.ಎಂ.ಎ ಕಪ್ 2023 8ನೇ ಇಂಟರ್ ಡೋಜೋ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅದ್ವಿತ್ ಪಿ 14 ವರ್ಷದೊಳಗಿನ ಕಟಾ ಮತ್ತು ಕುಮಿಟೆ ಕೆಟಗರಿಯಲ್ಲಿ ಪ್ರಥಮ ಸ್ಥಾನ ಹಾಗೂ ಲಿತಿನ್ […]

ವಿವೇಕಾನಂದ ವಿದ್ಯಾಸಂಸ್ಥೆಯಿಂದ 73ನೇ ಗಣರಾಜ್ಯೋತ್ಸವ ಆಚರಣೆ

ವಿವೇಕಾನಂದ ವಿದ್ಯಾಸಂಸ್ಥೆಯಿಂದ 73ನೇ ಗಣರಾಜ್ಯೋತ್ಸವ ಆಚರಣೆ

Saturday, January 27th, 2024

ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವೇಕನಗರ ತೆಂಕಿಲ ಸಂಕೀರ್ಣದಲ್ಲಿರುವ ವಿದ್ಯಾಸಂಸ್ಥೆಗಳಾದ ವಿವೇಕಾನಂದ ಕನ್ನಡ ಮಾಧ್ಯಮ, ಆಂಗ್ಲಮಾಧ್ಯಮ, ನರೇಂದ್ರ ಪದವಿ ಪೂರ್ವ ಕಾಲೇಜು ಮತ್ತು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ವಿದ್ಯಾಸಂಸ್ಥೆಗಳ ಆವರಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಘೋಷ್ ವೃಂದದೊಂದಿಗೆ ವೇದಿಕೆಗೆ ಆಗಮಿಸಿದ ಅತಿಥಿಗಳು ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಫ ನಮನ ಸಲ್ಲಿಸಿದರು ಭಾರತೀಯ ಸೇನಾಪಡೆಯ ಯೋಧ ಶ್ರೀ ಜಯ ನಾಯಕ್ ಧ್ವಜಾರೋಹಣಗೈದರು, ನಿವೃತ್ತ ಯೋಧ ಬಾಲಕೃಷ್ಣ ಪಟ್ಟೆ ಗಣರಾಜ್ಯೋತ್ಸವದ ಸಂದೇಶ […]

Highslide for Wordpress Plugin