ಪರೀಕ್ಷಾ ಪೂರ್ವ ತಯಾರಿ
Saturday, October 20th, 2012ಜೇಸಿಯ ರಾಷ್ಟ್ರ ತರಬೇತುದಾರ ರಾಜೇಂದ್ರ ಭಟ್ ಬೆಳ್ಮಣ್ಣು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ಮಕ್ಕಳಿಗೆ ಪರೀಕ್ಷಾ ಪೂರ್ವ ತಯಾರಿ, ಪ್ರೇರಣೆ ಹಾಗೂ ಧನಾತ್ಮಕ ಯೋಚನೆಗಳ ಬಗ್ಗೆ ದಿನಾಂಕ ೧೨.೧೦.೨೦೧೨ ರಂದು ಕಾರ್ಯಾಗಾರ ನಡೆಸಿದರು. ಶಾಲಾ ಸಂಚಾಲಕರಾದ ಶ್ರೀ ರವೀಂದ್ರ.ಪಿ ಕಾರ್ಯಾಗಾರವನ್ನು ಉದ್ಫಾಟಿಸಿ ಶುಭ ಹಾರೈಸಿದರು. ಆಡಳಿತ ಮಂಡಳಿಯ ಸದಸ್ಯರಾದ ಡಾ.ಸುಲೇಖಾ ವರದರಾಜ್ , ಮುಖ್ಯಗುರುಗಳು , ಶಿಕ್ಷಕ ವೃಂದ ಉಪಸ್ಥಿತರಿದ್ದರು.









































