ಶಾಲಾ ಪ್ರವೇಶೋತ್ಸವ

ಶಾಲಾ ಪ್ರವೇಶೋತ್ಸವ

Saturday, June 13th, 2015

ಭಾರತೀಯ ಶಿಕ್ಷಣ ಪದ್ದತಿಯು ಮಗುವಿನಲ್ಲಿ ದೇವರನ್ನು ಕಾಣುವಂತಿದ್ದು ಇಂದಿನ ದಿನ ಶಾಲಾ ಶಿಕ್ಷಕರು ಮಕ್ಕಳಿಗೆ ತಿಲಕವಿಟ್ಟು, ಆರತಿ ಬೆಳಗಿ ಸ್ವಾಗತಿಸುವ ಮೂಲಕ ಮಗುವನ್ನು ಬರಮಾಡಿಕೊಳ್ಳುವ ಪದ್ದತಿಯು ನಮ್ಮ ಶಾಲೆಯಲ್ಲಿ ವಿಶೇಷವಾಗಿರುತ್ತದೆ. ಕೇವಲ ಪಠ್ಯ ಮಾತ್ರವಲ್ಲದೆ ಪಠ್ಯಪೂರಕ ಶಿಕ್ಷಣದ ಅಗತ್ಯತೆಯನ್ನು ಅರಿತು ಸಮಾಜಮುಖಿಯಾಗಿ ತೊಡಗಿಸಿಕೊಳ್ಳಬೇಕು; ಎಂದು ವಿವೇಕಾನಂದ ಕನ್ನಡ ಮಾಧ್ಯಮಶಾಲಾ ಸಂಚಾಲಕರಾದ ರವೀಂದ್ರ ಪಿ. ಇವರು ಶಾಲಾ ಪ್ರವೇಶೋತ್ಸವದಂದು ನುಡಿದರು. ದೀಪಪ್ರಜ್ವಲನೆ, ಸರಸ್ವತಿ ವಂದನೆ, ಹಾಗೂ ಘೃತಾಹುತಿ ವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷರಾದ ವಸಂತ […]

ಶಾಲಾ ಚುನಾವಣೆ

ಶಾಲಾ ಚುನಾವಣೆ

Thursday, June 11th, 2015

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಇಲ್ಲಿ 2015-16 ನೇ ಸಾಲಿನ ಶಾಲಾ ಚುನಾವಣೆಯು ಮುಖ್ಯ ಗುರುಗಳ ಸಮ್ಮುಖದಲ್ಲಿ ನಡೆಯಿತು. ಪ್ರೌಢಶಾಲಾ ವಿಭಾಗದ ನಾಯಕಿಯಾಗಿ ಕು. ಅಂಕಿತಾ ಮತ್ತು ಉಪನಾಯಕನಾಗಿ ಪ್ರಜ್ವಲ್ ಆಯ್ಕೆಯಾದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕನಾಗಿ ಚೇತಕ್ ಟಿ.ಕೆ. ಮತ್ತು ಉಪನಾಯಕಿಯಾಗಿ ಕು. ಶೈಲಶ್ರೀ ಆಯ್ಕೆಯಾದರು. ಚುನಾವಣೆಯ ಉಸ್ತುವಾರಿಯನ್ನು ಶಿಕ್ಷಕರಾದ ಶ್ರೀಯುತ ವಿಶ್ವನಾಥ ಮುಡೂರು ವಹಿಸಿದರು ಎಲ್ಲಾ ಶಿಕ್ಷಕರು ಸಹಕರಿಸಿದರು.

ಎಸ್‌ಎಸ್‌ಎಲ್‌ಸಿ 100 % ಫಲಿತಾಂಶ ತಂದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

ಎಸ್‌ಎಸ್‌ಎಲ್‌ಸಿ 100 % ಫಲಿತಾಂಶ ತಂದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

Monday, June 1st, 2015

ಎಸ್‌ಎಸ್‌ಎಲ್‌ಸಿ 100% ಫಲಿತಾಂಶ ತಂದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಹಿರಿಯ ವಿದ್ಯಾರ್ಥಿನಿ ಡಾ. ರಮ್ಯಾ ಇವರು ಸನ್ಮಾನ ಸ್ವೀಕರಿಸಿ ಶುಭ ಹಾರೈಸಿದರು.

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ - ಶಾಲಾ ಆರಂಭೋತ್ಸವ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ – ಶಾಲಾ ಆರಂಭೋತ್ಸವ

Monday, June 1st, 2015

ಗಣಹೋಮದೊಂದಿಗೆ ಆರಂಭಗೊಂಡ ಶಾಲೆಯ ಹಬ್ಬದ ವಾತಾವರಣವು ಮಕ್ಕಳಲ್ಲಿ ಹರುಷ ತಂದಿದೆ. ಶಾಲಾ ಮಾತಾಜಿಯವರು ಹಾಗೂ ಹಿರಿಯ ವಿದ್ಯಾರ್ಥಿಗಳು ಮಕ್ಕಳನ್ನು ತಿಲಕವಿಟ್ಟು ಪುಷ್ಪಾರ್ಚನೆಯೊಂದಿಗೆ ಬರಮಾಡಿಕೊಂಡ ರೀತಿ ಖುಷಿ ತಂದಿದೆ. ಹೀಗೆಂದು ಮನದ ಮಾತನ್ನು ಬಿಚ್ಚಿಟ್ಟವರು ಪೋಷಕರು. ವಿವೇಕಾನಂದ ಕನ್ನಡ ಶಾಲೆಯ ಆರಂಭೋತ್ಸವದಂದು ಎಲ್ಲಾ ಮಕ್ಕಳನ್ನು ಸ್ವಾಗತಿಸಿ ಸಿಹಿನೀಡಿ ಬರಮಾಡಿಕೊಳ್ಳಲಾಯಿತು. ಹಬ್ಬದ ವಾತಾವರಣವು ವಿದ್ಯೆಯ ವಿಕಾಸಕ್ಕೆ ಪೂರಕವಾಗಲಿ ಎಂದು ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಬಿರ್ಮಣ್ಣಗೌಡ ಹಾರೈಸಿದರು. ಶಾಲಾ ಆಡಳಿತಮಂಡಳಿಯ ಅಧ್ಯಕ್ಷರು, ಸಂಚಾಲಕರು, ಸದಸ್ಯರು, ಶಿಕ್ಷಕ – ರಕ್ಷಕ ಸಂಘದ […]

ವಿಶ್ವಯೋಗ ದಿನಾಚರಣೆಯ ಪೂರ್ವಭಾವಿ ತರಬೇತಿ

ವಿಶ್ವಯೋಗ ದಿನಾಚರಣೆಯ ಪೂರ್ವಭಾವಿ ತರಬೇತಿ

Wednesday, May 27th, 2015

ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಚಿತ್ತಶಾಂತಿ, ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಯೋಗ ಶಿಕ್ಷಣದ ಅವಶ್ಯಕತೆ ವಿದ್ಯಾಸಂಸ್ಥೆಗಳಲ್ಲಿ ಇಂದು ನಡೆಯಬೇಕಾದ ಪ್ರಮುಖ ಪ್ರಕ್ರಿಯೆಯಾಗಿದೆ ಎಂದು ಅಂತರರಾಷ್ಟ್ರೀಯ ಯೋಗ ತರಬೇತುದಾರ, ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ತಿಳಿಸಿದರು. ಇವರು ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ವಿಶ್ವಯೋಗ ದಿನದ ಪೂರ್ವಭಾವಿಯಾಗಿ ನಡೆದ ‘ಉತ್ತಮಜೀವನ ಶೈಲಿಗಾಗಿ ಯೋಗ’ ಎಂಬ ಕಾರ್ಯಾಗಾರವನ್ನು ನಡೆಸುತ್ತಾಆಧುನಿಕ ಜೀವನ ಪದ್ಧತಿಯಲ್ಲಿ ಯೋಗ ಶಿಕ್ಷಣವು ಸರಳ ವ್ಯಾಯಾಮ, ಪ್ರಾಣಾಯಾಮ, ಯೋಗಾಸನ, ಮುದ್ರಾವಿಜ್ಞಾನ, ಕಲರ್‌ಥೆರಪಿ (ಬಣ್ಣಚಿಕಿತ್ಸೆ) ಆಹಾರ ಪದ್ದತಿಯ ಬಗ್ಗೆ ಮಾಹಿತಿ ಹಾಗೂ ತರಬೇತಿಯನ್ನು […]

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಶೇಕಡ 100% ಫಲಿತಾಂಶ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಶೇಕಡ 100% ಫಲಿತಾಂಶ

Friday, May 15th, 2015

ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ವಿಭಾಗಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಗೈದು ಶೇ. 100% ಫಲಿತಾಂಶ ತಂದ ವಿದ್ಯಾರ್ಥಿಗಳು. ಹಾಜರಾದವರು ಒಟ್ಟು ವಿದ್ಯಾರ್ಥಿಗಳು-128    

ಮಾಹಿತಿ ಕಾರ್ಯಾಗಾರ

ಮಾಹಿತಿ ಕಾರ್ಯಾಗಾರ

Wednesday, May 6th, 2015

ದಿನಾಂಕ 5-5-2015 ರಂದು ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾದ ಶ್ರೀಯುತ ನಾ.ಕಾರಂತ ಪೆರಾಜೆ ಇವರು ನಮ್ಮ ಮಕ್ಕಳಿಗೆ ‘ಅನ್ನದ ಬಟ್ಟಲಿನಲ್ಲಿ ವಿಷ’ ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.

ದೀಪ ಪ್ರದಾನ ಕಾರ್ಯಕ್ರಮ

ದೀಪ ಪ್ರದಾನ ಕಾರ್ಯಕ್ರಮ

Wednesday, April 15th, 2015

ದಿನಾಂಕ 14-04-2015 ರಂದು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಜರುಗಿತು. ಈ ಸಂದರ್ಭದಲ್ಲಿ ಶಾಲಾ ಅಧ್ಯಕ್ಷರು, ಸಂಚಾಲಕರು, ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದು ಮಕ್ಕಳಿಗೆ ಶುಭ ಹಾರೈಸಿದರು. ಹತ್ತನೇ ತರಗತಿಯ ಮಕ್ಕಳು 9ನೇ ತರಗತಿಯ ವಿದ್ಯಾರ್ಥಿಗಳಿಗೆ ದೀಪಪ್ರದಾನ ಮಾಡಿ 59,287 ರೂ. ಶಾಲೆಗೆ ದೇಣಿಗೆ ರೂಪದಲ್ಲಿ ನೀಡಿರುತ್ತಾರೆ.

ಮಾಹಿತಿ ಕಾರ್ಯಾಗಾರ

ಮಾಹಿತಿ ಕಾರ್ಯಾಗಾರ

Monday, April 13th, 2015

ಸುಕನ್ಯ ಸಮೃದ್ಧಿ ಯೋಜನೆಯ ಕುರಿತು ಅಂಚೆ ಕಛೇರಿ ಸಿಬ್ಬಂದಿಯವರು ಶಾಲೆಗೆ ಭೇಟಿನೀಡಿ 1 ರಿಂದ 4 ನೇ ತರಗತಿಯವರೆಗಿನ ಹೆಣ್ಣು ಮಕ್ಕಳ ಪೋಷಕರಿಗೆ ಮಾಹಿತಿ ನೀಡಿದರು.

ವರ್ಲಿ ಆರ್ಟ್ ತರಬೇತಿ

ವರ್ಲಿ ಆರ್ಟ್ ತರಬೇತಿ

Sunday, April 5th, 2015

ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾದ ರುಕ್ಮಯ ಇವರು ಮಕ್ಕಳಿಗೆ ವರ್ಲಿ ಆರ್ಟ್ ತರಬೇತಿ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಕ್ಕಳೊಂದಿಗೆ ಸಂವಾದ

ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಕ್ಕಳೊಂದಿಗೆ ಸಂವಾದ

Thursday, April 2nd, 2015

ಮಿಷನ್ 95+ ಪ್ರಯುಕ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಹತ್ತನೇತರಗತಿ ಮಕ್ಕಳೊಂದಿಗೆ ಸಂವಾದ ನಡೆಸಿದರು.

ಕ್ರೀಡಾ ತರಬೇತಿ ಶಿಬಿರ

ಕ್ರೀಡಾ ತರಬೇತಿ ಶಿಬಿರ

Thursday, April 2nd, 2015

ದ.ಕ. ಜಿಲ್ಲಾ ಪಂಚಾಯತು, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು. ತಾಲೂಕುದೈಹಿಕ ಶಿಕ್ಷಣ ಶಿಕ್ಷಕರ ಸಂಘ ಪುತ್ತೂರು ಮತ್ತು ನಮ್ಮ ಶಾಲಾ ಸಂಯುಕ್ತ ಆಶ್ರಯದಲ್ಲಿ ಮಾನ್ಯಕ್ಷೇತ್ರ ಶಿಕ್ಷಣಾಧಿಕಾರಿಗಳ ಕನಸಾದಗೊಬ್ಬುದ ಪುತ್ತೂರ್ದ ಮುತ್ತುಲು ಯೋಜನೆಯಡಿಯಲ್ಲಿ ದಿನಾಂಕ 1-4-2015 ರಿಂದ 5-4-2015 ರವರೆಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಉಚಿತ ಕ್ರೀಡಾ ತರಬೇತಿ ಶಿಬಿರ ಉದ್ಫಾಟನೆಗೊಂಡಿತು.

ಭಾಷಾಕಲಿಕೆಯ ಸರಳ ಸುಲಭ ಸೂತ್ರಗಳ ಕಾರ್ಯಾಗಾರ

ಭಾಷಾಕಲಿಕೆಯ ಸರಳ ಸುಲಭ ಸೂತ್ರಗಳ ಕಾರ್ಯಾಗಾರ

Wednesday, March 25th, 2015

ವಿವೇಕಾನಂದ ಕನ್ನಡ ಶಾಲೆಯಲ್ಲಿ ದಿನಾಂಕ 17-03-2015 ರಂದು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷಾ ಸಂವಹನದ ಸುಲಭ ಸೂತ್ರಗಳ ಬಗ್ಗೆ ಇಂಗ್ಲಿಷ್ ಉಪನ್ಯಾಸಕರಾದ ಶ್ರೀ ಬಿ.ವಿ ಸೂರ್ಯನಾರಾಯಣ ಇವರು ಮಕ್ಕಳೊಂದಿಗೆ ಸಂವಾದ ನಡೆಸಿದರು. ಭಾಷಾಜ್ಞಾನವನ್ನು ಬಳಸುತ್ತಾ ಬೆಳೆಸುವ ಪ್ರಕ್ರಿಯೆಯನ್ನು ಮಕ್ಕಳಿಗೆ ಮನದಟ್ಟು ಮಾಡಿ ಯಾವುದೇ ಭಾಷೆಯನ್ನು ಮಿತ್ರನಂತೆ ಕಾಣುವ ಕಿವಿಮಾತನ್ನು ಹೇಳಿದರು.

ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಚಿಣ್ಣರಮೇಳ

ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಚಿಣ್ಣರಮೇಳ

Wednesday, March 18th, 2015

ತೆಂಕಿಲ ವಿವೇಕಾನಂದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಣ್ಣರ ಮೇಳ ಮಾ. 14 ರಂದು ನಡೆಯಿತು. ಗ್ರಾಮೀಣ ಸೊಗಡಿನ ಆಟಗಳಾದ ಜಾರುಬಂಡಿ, ಸೇತುವೆ ದಾಟುವುದು, ದೋಣಿ ಆಟ, ಚಕ್ರದಾಟ, ಜೋಕಾಲಿ, ಗಾಳಿಪಟ ಹಾರಿಸುವುದು, ಚಿತ್ರ ಬಿಡಿಸುವುದು, ಕಥೆ ಹೇಳುವುದು, ಅಭಿನಯ ಗೀತೆ, ಮುಖವಾಡ, ಚಿತ್ರಕ್ಕೆ ಬಣ್ಣ ಹಾಕುವುದು, ಹಾಳೆಯಾಟ ಮುಂತಾದ 15 ಕ್ಕೂ ಮಿಕ್ಕಿ ಆಟಗಳಲ್ಲಿ ಸುಮಾರು 1700 ಮಕ್ಕಳು 4 ಗಂಟೆಗಳ ಕಾಲ ಬಿಸಿಲ ಧಗೆಯನ್ನು ಲೆಕ್ಕಿಸದೆ ಭಾಗವಹಿಸಿದ್ದರು. ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಎಂ.ಕೃಷ್ಣ ಭಟ್, […]

ಶಾರದಾ ಪೂಜೆ ಮತ್ತು ಭಜನಾ ಕಾರ್ಯಕ್ರಮ

ಶಾರದಾ ಪೂಜೆ ಮತ್ತು ಭಜನಾ ಕಾರ್ಯಕ್ರಮ

Friday, March 13th, 2015

ಮಾರ್ಚ್ 13 ರಂದು ಶಾಲೆಯಲ್ಲಿ ಶಾರದಾ ಪೂಜೆ ಮತ್ತು ಭಜನಾ ಕಾರ್ಯಕ್ರಮ ನಡೆಯಿತು.

ಕಪಾಟು ಕೊಡುಗೆ

ಕಪಾಟು ಕೊಡುಗೆ

Saturday, February 28th, 2015

ಶಾಲೆಯ 9 ನೇ ತರಗತಿಯ ವಿದ್ಯಾರ್ಥಿನಿ ಕು. ಆಶಿಕಾ ರೈ ಬಿ.ಜಿ ಇವರ ಪೋಷಕರಾದ ಶ್ರೀ ವಿನೋದ್ ರೈ ಇವರು ಶಾಲಾ ಗ್ರಂಥಾಲಯಕ್ಕೆ ಸುಮಾರು 3800 ರೂ. ಗಳ ಕಪಾಟುಗಳನ್ನು ನೀಡಿರುತ್ತಾರೆ.

ಪುಸ್ತಕ ದೇಣಿಗೆ

ಪುಸ್ತಕ ದೇಣಿಗೆ

Friday, February 27th, 2015

ಶಾಲಾ ಹಿರಿಯ ವಿದ್ಯಾರ್ಥಿಗಳಾದ ಕು. ಸ್ವಾತಿ ಮತ್ತು ಶ್ರೀಮತಿ ಶ್ವೇತಾ ಇವರು ಸುಮಾರು 1060 ರೂ. ಗಳ ಪುಸ್ತಕವನ್ನು ಶಾಲಾ ಗ್ರಂಥಾಲಯಕ್ಕೆ ನೀಡಿರುತ್ತಾರೆ.

ನೃತ್ಯ ವೈವಿಧ್ಯ

ನೃತ್ಯ ವೈವಿಧ್ಯ

Friday, February 27th, 2015

ಸಾಹಿತ್ಯ ಕಲಾಕುಶಲೋಪರಿ – ಇದರ ಅಂಗವಾಗಿ ಪುತ್ತೂರಿನ ಅನುರಾಗ ವಠಾರದಲ್ಲಿ ನಮ್ಮ ಶಾಲಾ ಮಕ್ಕಳಿಂದ ನೃತ್ಯವೈವಿಧ್ಯ ಕಾರ್ಯಕ್ರಮ ನಡೆದಿರುತ್ತದೆ.

ರಸಪ್ರಶ್ನೆ ಸ್ಪರ್ಧೆ - ತೃತೀಯ

ರಸಪ್ರಶ್ನೆ ಸ್ಪರ್ಧೆ – ತೃತೀಯ

Wednesday, February 25th, 2015

ಸಂತ ಫಿಲೋಮಿನಾ ಕಾಲೇಜು ಪುತ್ತೂರು ಇಲ್ಲಿನ ಮಾನವಿಕ ಸಂಘದಿಂದ ಏರ್ಪಡಿಸಿದ ಪುತ್ತೂರು ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಶಾಲೆಯ ಅಕ್ಷಯ್, ವಿಶಾಲ್, ಸ್ಕಂದನಾರಾಯಣ ಇವರ ತಂಡ ತೃತೀಯ ಬಹುಮಾನವನ್ನು ಪಡೆದಿದೆ.

ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಪ್ರಥಮ

ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಪ್ರಥಮ

Wednesday, February 25th, 2015

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸಿರುವ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಶಾಲೆಯ ಜಯಶ್ರೀ ಬಿ. ಇವರು ಲೋವರ್ ಗ್ರೇಡ್ ವಿಭಾಗದಲ್ಲಿ ಪುತ್ತೂರು ತಾಲೂಕು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರಿಗೆ ಚಿತ್ರಕಲಾ ಶಿಕ್ಷಕರಾದ ರುಕ್ಮಯ ಬಿ. ತರಬೇತಿ ನೀಡಿರುತ್ತಾರೆ. ಇವರು ನರಿಮೊಗರು – ಬಜಪ್ಪಾಳ ಬಾಬು ಗೌಡ ಮತ್ತು ಶ್ರೀಮತಿ ಲಲಿತಾ ದಂಪತಿಯ ಪುತ್ರಿ.

ಭಾಷಣ ಸ್ಪರ್ಧೆ - ದ್ವಿತೀಯ

ಭಾಷಣ ಸ್ಪರ್ಧೆ – ದ್ವಿತೀಯ

Tuesday, February 24th, 2015

ರೋಗ ವಾಹಕ ಆಶ್ರಿತಾ ರೋಗಗಳ ನಿಯಂತ್ರಣ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮಲೇರಿಯಾ ನಿಯಂತ್ರಣದಲ್ಲಿ ಮಕ್ಕಳ ಪಾತ್ರ ವಿಷಯದ ಬಗ್ಗೆ ಪುತ್ತೂರು ತಾಲೂಕು ಆರೋಗ್ಯಾಧಿಕಾರಿಗಳು ಫೆ. 13 ರಂದು ನೆಲ್ಲಿಕಟ್ಟೆ ಶಿವರಾಮ ಕಾರಂತ ಪ್ರೌಢಶಾಲೆಯಲ್ಲಿ ಏರ್ಪಡಿಸಿದ ಭಾಷಣ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಶಾಲೆಯ 9 ನೇ ತರಗತಿಯ ಕು. ಅಶ್ವಿನಿ ಯು. ನಾಯಕ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.

ವಿವೇಕಾನಂದ ಕನ್ನಡ ಶಾಲೆಯ ಆಶ್ರಯದಲ್ಲಿ 'ಸುಜ್ಞಾನ ಪುಸ್ತಕ ಜಾಥಾ- 2015'

ವಿವೇಕಾನಂದ ಕನ್ನಡ ಶಾಲೆಯ ಆಶ್ರಯದಲ್ಲಿ ‘ಸುಜ್ಞಾನ ಪುಸ್ತಕ ಜಾಥಾ- 2015’

Friday, February 20th, 2015

ವಿವೇಕಾನಂದ ಕನ್ನಡ ಶಾಲೆ, ತೆಂಕಿಲ, ಪುತ್ತೂರು ಇದರ ಆಶ್ರಯದಲ್ಲಿ ‘ಸುಜ್ಞಾನ ಪುಸ್ತಕ ಜಾಥಾ-2015’ ಜಾಥಾ ಪುತ್ತೂರು ನಗರದಲ್ಲಿ ಫೆಬ್ರವರಿ 19 ರಂದು ನಡೆಯಿತು. ಸುಜ್ಞಾನ ಜಾಥಾವನ್ನು ಶ್ರೀ ಸುಬ್ರಹ್ಮಣ್ಯ ಕೊಳತ್ತಾಯ ಶಾರದ ಮಾತೆಗೆ ಪುಸ್ತಕ ಅರ್ಪಿಸುವ ಮೂಲಕ ಉದ್ಫಾಟಿಸಿದರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ರವೀಂದ್ರ.ಪಿ, ಸದಸ್ಯರಾದ ಶೋಭಾ ಕೊಳತ್ತಾಯ, ಸುನೀತಾ ಚಂದು ಶೆಟ್ಟಿ, ಅಚ್ಚುತ ಭಟ್ ಸುಳ್ಯಪದವು, ಶಿಕ್ಷಕ – ರಕ್ಷಕ ಸಂಘದ ಉಪಾಧ್ಯಕ್ಷರಾದ ಅಂಬಿಕಾ, ಸದಸ್ಯರಾದ ಸುರೇಖಾ, ಪೋಷಕರಾದ ಮಹಾದೇವಶಾಸ್ತ್ರಿ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಗ್ರಂಥಪಾಲಕರಾದ […]

ಪುಸ್ತಕ ಜಾಥಾ ಕಾರ್ಯಕ್ರಮ ಪ್ರಚಾರ

ಪುಸ್ತಕ ಜಾಥಾ ಕಾರ್ಯಕ್ರಮ ಪ್ರಚಾರ

Thursday, February 19th, 2015

ಪುಸ್ತಕ ಜಾಥಾ ಕಾರ್ಯಕ್ರಮದಂಗವಾಗಿ ಪ್ರಚಾರ ಕಾರ್ಯವನ್ನು ಕೈಗೊಳ್ಳಲಾಯಿತು.

ದೇಣಿಗೆ

ದೇಣಿಗೆ

Monday, February 16th, 2015

ಪುಸ್ತಕ ಸಪ್ತಾಹದ ಉದ್ಫಾಟನಾ ಸಂದರ್ಭದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್‌ನ ಉಪನ್ಯಾಸಕರೂ ಶಿಕ್ಷಕ – ಶಿಕ್ಷಣ ಸಂಪನ್ಮೂಲ ಘಟಕದ ಸದಸ್ಯರೂ ಆದ ಶ್ರೀಮತಿ ಪೂರ್ಣಿಮಾ ತಮ್ಮ ಸಂಸ್ಥೆಯಿಂದ ಸಂಗ್ರಹಿಸಿದ ರೂ. 4168 ಮತ್ತು ಪುಸ್ತಕಗಳನ್ನು ಶಾಲೆಗೆ ನೀಡಿರುತ್ತಾರೆ. ಮತ್ತು ಶಿಕ್ಷಕ – ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಅಂಬಿಕಾ ಇವರು ಈ ಸಂದರ್ಭದಲ್ಲಿ ಶಾಲೆಗೆ ಕವಾಟು ದೇಣಿಗೆ ನೀಡಿ ಸಹಕರಿಸಿರುತ್ತಾರೆ.

ವಿವೇಕಾನಂದ ಕನ್ನಡ ಶಾಲೆ - ಪುಸ್ತಕ ಸಪ್ತಾಹ

ವಿವೇಕಾನಂದ ಕನ್ನಡ ಶಾಲೆ – ಪುಸ್ತಕ ಸಪ್ತಾಹ

Monday, February 16th, 2015

ಮಕ್ಕಳಲ್ಲಿ ಬೆಳಗಲು ಜ್ಞಾನದೀವಿಗೆ, ಹಿರಿಯರೇ ನೀಡಿರಿ ನಿಮ್ಮಯ ಕೊಡುಗೆ ಎಂಬ ಧ್ಯೇಯ ವಾಕ್ಯದೊಂದಿಗೆ 16-02-2015  ರಿಂದ 22-02-2015 ರವರೆಗೆ ನಡೆಯಲಿರುವ ಪುಸ್ತಕ ಸಪ್ತಾಹ ಕಾರ್ಯಕ್ರಮಕ್ಕೆ ಶ್ರೀ ಕಶೆಕೋಡಿ ಸೂರ್ಯನಾರಾಯಣ ಭಟ್ ಇವರು ದೀಪಬೆಳಗಿಸಿ ಪುಷ್ಪಾರ್ಚನೆಯೊಂದಿಗೆ ಚಾಲನೆ ನೀಡಿದರು. ಶಾಲಾ ಅಧ್ಯಕ್ಷರಾದ ಡಾ| ಕೃಷ್ಣ ಭಟ್, ಸಂಚಾಲಕರಾದ ರವೀಂದ್ರ ಪಿ., ಶಿಕ್ಷ – ಶಿಕ್ಷಣ ಸಂಪನ್ಮೂಲ ಘಟಕದ ಸದಸ್ಯರಾದ ಶ್ರೀಮತಿ ವಂದನಾ, ಶ್ರೀಮತಿ ಉಷಾಕಿರಣ, ಉಪನ್ಯಾಸಕರಾದ ಶ್ರೀ ರೋಹಿಣಾಕ್ಷ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅನೀಶ್ ಬಡೆಕ್ಕಿಲ, ಪೋಷಕ ಸಮಿತಿಯ ಅಧ್ಯಕ್ಷರಾದ […]

ದೇಣಿಗೆ

ದೇಣಿಗೆ

Tuesday, February 10th, 2015

ಶಾಲಾ ಪೋಷಕರಾದ ಶ್ರೀ ಉಪೇಂದ್ರ ಬಲ್ಯಾಯ ಪುತ್ತೂರು ಇವರು ರೂ. 500 ರ ಪುಸ್ತಕವನ್ನು ‘ಪುಸ್ತಕ ಜಾಥ’ಕ್ಕಾಗಿ ಶಿಕ್ಷಕರಾದ ಶ್ರೀ ವಿಶ್ವನಾಥ ಮುಡೂರು ಹಾಗೂ ಚಂದ್ರಶೇಖರ್ ರವರಿಗೆ ಹಸ್ತಾಂತರಿಸಿದರು.

ಪುಸ್ತಕ ದೇಣಿಗೆ

ಪುಸ್ತಕ ದೇಣಿಗೆ

Tuesday, February 10th, 2015

ಶ್ರೀ ದುರ್ಗಾ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಪದಡ್ಕ ಇದರ ಅಧ್ಯಕ್ಷರಾದ ಶ್ರೀ ಜನಾರ್ಧನ ಪೂಜಾರಿ ಪದಡ್ಕ ಮತ್ತು ಸದಸ್ಯರು ‘ ಪುಸ್ತಕ ಜಾಥಾ’ ಕ್ಕೆ ರೂ 2,000 ದ ಪುಸ್ತಕವನ್ನು ಶಿಕ್ಷಕರಾದ ಚಂದ್ರಶೇಖರ್ ರವರಿಗೆ ಹಸ್ತಾಂತರಿಸಿದರು.

ಪುಸ್ತಕ ದೇಣಿಗೆ

ಪುಸ್ತಕ ದೇಣಿಗೆ

Tuesday, February 10th, 2015

ಪುಸ್ತಕ ಸಪ್ತಾಹದ ಅಂಗವಾಗಿ ಶಾಲಾ ಹಿರಿಯ ಪೋಷಕರಾದ ಶ್ರೀ ಗಣಪತಿ ಭಟ್ ಇವರು ಶಾಲಾ ಗ್ರಂಥಾಲಯಕ್ಕೆ ‘ಮಕ್ಕಳ ರಾಮಾಯಣ ಮತ್ತು ಮಕ್ಕಳಿಗಾಗಿ ಮಹಾಭಾರತ ಭಾಗ – 2’ ಎಂಬ ಸುಮಾರು 2,000 ರೂ. ಗಳ ಪುಸ್ತಕವನ್ನು ನೀಡಿ ಸಹಕರಿಸಿದ್ದಾರೆ.

ಕಪಾಟು ಕೊಡುಗೆ

ಕಪಾಟು ಕೊಡುಗೆ

Tuesday, February 10th, 2015

ಪುಸ್ತಕ ಸಪ್ತಾಹದ ಅಂಗವಾಗಿ ದಿ.ಶೀನ ಹಂದ್ರಟ್ಟ ಇವರ ಸ್ಮರಣಾರ್ಥ ಇವರ ಮಕ್ಕಳಾದ ಧನಂಜಯ ಹಂದ್ರಟ್ಟ ಮತ್ತು ಕು.ಲೀಲಾವತಿ ಹಂದ್ರಟ್ಟ (ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಹಿರಿಯ ಶಿಕ್ಷಕಿ) ಇವರು ಸುಮಾರು 10,000 ರೂ. ಗಳ ಕಪಾಟು ನೀಡಿ ಸಹಕರಿಸಲಿರುವರು.

ಗಾನ - ನೃತ್ಯ - ಯಕ್ಷ ಸಂಭ್ರಮ

ಗಾನ – ನೃತ್ಯ – ಯಕ್ಷ ಸಂಭ್ರಮ

Tuesday, February 10th, 2015

ಕಲಾ ಸಂಸ್ಕೃತಿಯು ಮನಸ್ಸನ್ನು ಅರಳಿಸುತ್ತದೆ ಭಾರತೀಯ ಕಲೆಯಲ್ಲಿ ಮಗುವಿನ ಬೌದ್ಧಿಕ ಜ್ಞಾನವನ್ನು ಪ್ರೇರೇಪಿಸುವ ತತ್ವ ಅಡಗಿದೆ. ಈ ನಿಟ್ಟಿನಲ್ಲಿ ಈ ಶಾಲೆಯು ಸಂಗೀತ, ಭರತನಾಟ್ಯ ಯಕ್ಷಗಾನದಂತಹ ಕಲೆಗಳ ಸಾಂಸ್ಕೃತಿಕ ಉತ್ಸವ ಆಚರಿಸುವ ಮೂಲಕ ಕಲಾ ಪೋಷಣೆ ಮಾಡುತ್ತಿದೆ ಎಂದು ನೂಪುರ ಭ್ರಮರಿಯ ನೃತ್ಯ ಸಂಶೋಧಕರು ಹಾಗೂ ಸಂಪಾದಕರಾಗಿರುವ ಶ್ರೀಮತಿ ಮನೋರಮ ಬಿ.ಎನ್ ನುಡಿದರು. ಇವರು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು. ಡಾ| ಕೃಷ್ಣಭಟ್ ಕೊಂಕೋಡಿ ಸಭಾಧ್ಯಕ್ಷತೆ ವಹಿಸಿ ಗುರುವೃಂದದವರಿಗೆ ಹಾಗೂ ಮಕ್ಕಳ ಪೋಷಕರಿಗೆ ಅಭಿವಂದಿಸಿದರು. ಶಾಲಾ […]

'ಪರೀಕ್ಷೆ - ಆಹಾರ - ಆರೋಗ್ಯ' - ಸಂವಾದ

‘ಪರೀಕ್ಷೆ – ಆಹಾರ – ಆರೋಗ್ಯ’ – ಸಂವಾದ

Monday, February 9th, 2015

ಪರೀಕ್ಷೆಯನ್ನು ಶತ್ರುವಾಗಿ ಕಾಣದೆ ಮಿತ್ರನಾಗಿ ಕಾಣಬೇಕು, ಈ ಸಂದರ್ಭದಲ್ಲಿ ನಮ್ಮ ಆರೋಗ್ಯದ ಕಡೆ ಗಮನ ಅತೀ ಅಗತ್ಯ ಎಂದು ಮಕ್ಕಳ ತಜ್ಞೆ ಡಾ| ಸುಲೇಖ ವರದರಾಜ್ ಅವರು ವಿವೇಕಾನಂದ ಕನ್ನಡ ಶಾಲೆಯ ೧೦ನೇ ತರಗತಿಯ ಮಕ್ಕಳಿಗೆ ‘ಪರೀಕ್ಷೆ – ಆಹಾರ – ಆರೋಗ್ಯ’ ಎಂಬ ವಿಷಯದ ಕುರಿತಾಗಿ ಮಾಹಿತಿ ನೀಡಿದರು.

ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿ ಪಡೆದ ವಿವೇಕಾನಂದ ಕನ್ನಡ ಶಾಲೆಯ ವಿದ್ಯಾರ್ಥಿಗಳು 2014-2015

ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿ ಪಡೆದ ವಿವೇಕಾನಂದ ಕನ್ನಡ ಶಾಲೆಯ ವಿದ್ಯಾರ್ಥಿಗಳು 2014-2015

Saturday, February 7th, 2015

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು 2014-15 ನೇ ಸಾಲಿನಲ್ಲಿ ನಡೆಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಲೋವರ್ ಗ್ರೇಡ್ ವಿಭಾಗದಲ್ಲಿ ವಿಶಿಷ್ಠ ಶ್ರೇಣಿ ಪಡೆದ ವಿದ್ಯಾರ್ಥಿಗಳು ಅಕ್ಷಯ್ ಡಿ. , ಚಿಂತನಾ .ಕೆ, ಧನುಷ್ ಎನ್, ಧನುಷ್.ಡಿ, ದೀಕ್ಷಾ.ಕೆ.ಎಸ್, ಜೀವನ್ ಕುಮಾರ್ ಕೆ, ಜಯಶ್ರೀ.ಬಿ, ಕಾರ್ತಿಕ್, ರಾಮ್ ಪ್ರಸಾದ್, ಅರ್ಪಿತಾ ಸಿ.ಪಿ, ಆಶಿಕ್, ಸ್ಕಂದ ನಾರಾಯಣ, ವಿಭಾ ಆಚಳ್ಳಿ, ವಿಶಂತಿ ಶೆಟ್ಟಿ, ಯಶಸ್ವಿ. ಹೈಯರ್ ಗ್ರೇಡ್ ವಿಭಾಗದಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅಂಕಿತಾ.ಎ.ಆರ್, ಆಶಿಕಾ ರೈ.ಬಿ.ಜಿ, ದೀಕ್ಷಾ […]

ರಾಮಾಯಣ ಪರೀಕ್ಷೆ - ತಾಲೂಕು ಪ್ರಥಮ

ರಾಮಾಯಣ ಪರೀಕ್ಷೆ – ತಾಲೂಕು ಪ್ರಥಮ

Friday, February 6th, 2015

ಭಾರತ ಸಂಸ್ಕೃತಿ ಪ್ರತಿಷ್ಠಾನ ಇವರು ನಡೆಸಿದ ಭಾರತ ಸಂಸ್ಕೃತಿ ರಾಮಾಯಣ ಪರಿಚಯ ಪರೀಕ್ಷೆಯ ಪ್ರೌಢಶಾಲಾ ವಿಭಾಗದಲ್ಲಿ ವಿವೇಕಾನಂದ ಕನ್ನಡ ಶಾಲೆಯ ಕು. ಶುಭಾ ಆಚಳ್ಳಿ ತಾಲ್ಲೂಕಿಗೆ ಪ್ರಥಮ ಸ್ಥಾನಿಯಾಗಿದ್ದಾರೆ.

ಪುಸ್ತಕ ಸಪ್ತಾಹ ಕಾರ್ಯಕ್ರಮ 16-02-2015 ರಿಂದ 22-02-2015

ಪುಸ್ತಕ ಸಪ್ತಾಹ ಕಾರ್ಯಕ್ರಮ 16-02-2015 ರಿಂದ 22-02-2015

Friday, February 6th, 2015
ಭಾರತ ಸಂಸ್ಕೃತಿ ಪರಿಚಯದಲ್ಲಿ ಶುಭಾ ಅಚಳ್ಳಿಗೆ ಉನ್ನತ ಶ್ರೇಣಿ

ಭಾರತ ಸಂಸ್ಕೃತಿ ಪರಿಚಯದಲ್ಲಿ ಶುಭಾ ಅಚಳ್ಳಿಗೆ ಉನ್ನತ ಶ್ರೇಣಿ

Wednesday, February 4th, 2015
ಪ್ರಾರ್ಥನಾ ಶ್ಲೋಕ

ಪ್ರಾರ್ಥನಾ ಶ್ಲೋಕ

Tuesday, January 27th, 2015

ಶಾಂತಿವನ ಟ್ರಸ್ಟ್ (ರಿ), ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ದ.ಕ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲಾ ಪಂಚಾಯತ್,  ಸಾರ್ವಜನಿಕ ಶಿಕ್ಷಣ ಇಲಾಖೆ ಅವರು ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಖಂಡ ದ.ಕ ಜಿಲ್ಲಾ ಶ್ರೀ ಗುರು ಯೋಗ ಸಂಘದ ಸಹಕಾರದೊಂದಿಗೆ ನಡೆಸಿದ ಜ್ಞಾನ ಸಿಂಧೂರ ಎಂಬ ನೈತಿಕ ಮೌಲ್ಯಾಧಾರಿತ ಪುಸ್ತಕದ ಅಧ್ಯಯನದ ಆಧಾರದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪ್ರಾರ್ಥನಾ ಶ್ಲೋಕ ಕಂಠಪಾಠ […]

ಶಾಲಾ ಹಿರಿಯ ಕ್ರೀಡಾಪಟು ಅಶ್ವಥ್‌ರಿಂದ ಮಕ್ಕಳೊಂದಿಗೆ ಸಂವಾದ

ಶಾಲಾ ಹಿರಿಯ ಕ್ರೀಡಾಪಟು ಅಶ್ವಥ್‌ರಿಂದ ಮಕ್ಕಳೊಂದಿಗೆ ಸಂವಾದ

Friday, January 23rd, 2015

ಶಾಲಾ ಹಿರಿಯ ಕ್ರೀಡಾಪಟು ಪ್ರಸ್ತುತ ಬೆಂಗಳೂರಿನ ಮೈಕ್ರೋ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಅಶ್ವಥ್ ಇವರು 9 ಮತ್ತು ಹತ್ತನೇ ತರಗತಿಯ ಮಕ್ಕಳೊಂದಿಗೆ ಸಂವಾದ ನಡೆಸಿದರು. ಶಾಲಾ ದಿನಗಳಲ್ಲಿ ಕ್ರೀಡೆಯಲ್ಲಿ ಮಾಡಿದ ಸಾಧನೆಗಳಿಗೆ ಶಿಕ್ಷಕರು ನೀಡಿದ ಪ್ರೋತ್ಸಾಹವನ್ನು ಸ್ಮರಿಸುತ್ತಾ ಮುಂದಿನ ಕಾಲೇಜು ಮತ್ತು ವೃತ್ತಿ ಜೀವನದಲ್ಲಿ ಬೆಳೆಸಿಕೊಂಡ ನಾಯಕತ್ವ ಮತ್ತು ಸ್ಫೂರ್ತಿದಾಯಕ ಮನೋಭಾವವು ಈ ಸಂದರ್ಭದಲ್ಲಿ ಸಹಾಯಕವಾಯಿತು ಎಂದರು. ವೃತ್ತಿಗಾಗಿ ನಡೆಸಿದ ಹುಡುಕಾಟ ಮತ್ತು ಆ ಸಂದರ್ಭದಲ್ಲಿ ಎದುರಾದ ಕಷ್ಟಕರ ಸನ್ನಿವೇಶಗಳನ್ನು ಹೇಳುತ್ತಾ ಈಗ ದೊರೆತಿರುವ ಒಳ್ಳೆಯ ಕೆಲಸ ಆ […]

ವಿವೇಕಾನಂದ ಕನ್ನಡ ಶಾಲೆಯಲ್ಲಿ ಯೋಗ ತರಬೇತಿ ಶಿಬಿರ

ವಿವೇಕಾನಂದ ಕನ್ನಡ ಶಾಲೆಯಲ್ಲಿ ಯೋಗ ತರಬೇತಿ ಶಿಬಿರ

Friday, January 23rd, 2015

ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯ, ಜಿಗಣಿ, ಬೆಂಗಳೂರು ಇಲ್ಲಿ ಎಂ.ಎಸ್ಸಿ ಯೋಗ ಮಾಡುತ್ತಿರುವ ಸಂಜಯ್.ಪಿ ಇವರು ಪ್ರಸ್ತುತ ಬಿ.ಸಿ.ರೋಡ್‌ನಲ್ಲಿ ಯೋಗ ಸಂಜೀವಿನಿ ಯೋಗ ತರಬೇತಿ ಸಂಸ್ಥೆಯ ಮುಖಾಂತರ ಯೋಗ ತರಗತಿಗಳನ್ನು ಒಂದು ವರ್ಷದಿಂದ ನಡೆದಿಕೊಂಡು ಬರುತ್ತಿದ್ದು ಮುಖ್ಯವಾಗಿ ಖಾಯಿಲೆಗಳಿಗೆ ಚಿಕಿತ್ಸಾರೂಪವಾಗಿ ಯೋಗದ ಕೆಲವು ಅಭ್ಯಾಸಗಳನ್ನು ಜೋಡಿಸುತ್ತಾ ತರಗತಿಗಳನ್ನು ನಡೆಸುತ್ತಿದ್ದಾರೆ. ವೈದ್ಯರ್‍ಸ್ ಆರ್ಯುವೇದ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗಾಗಿ 10 ದಿನಗಳ ಯೋಗ ತರಗತಿಗಳನ್ನು ನಡೆಸುತ್ತಿರುವ ಇವರು ಅಭ್ಯಾಸದ ವೈಜ್ಞಾನಿಕ ಆಯಾಮಗಳು, ಅಭ್ಯಾಸ ಕ್ರಮಗಳು ಸೂರ್ಯನಮಸ್ಕಾರ ಮುಂತಾದವುಗಳ ಬಗ್ಗೆ ವಿವೇಕಾನಂದ ಕನ್ನಡ ಶಾಲೆಯ ಶಿಕ್ಷಕರು […]

100 ಮೀ. ಓಟದಲ್ಲಿ ಪೂಜಾಗೆ ಪ್ರಥಮ ಸ್ಥಾನ

100 ಮೀ. ಓಟದಲ್ಲಿ ಪೂಜಾಗೆ ಪ್ರಥಮ ಸ್ಥಾನ

Tuesday, January 20th, 2015

ಯುವ ಒಕ್ಕಲಿಗ ಗೌಡ ಸೇವಾ ಸಂಘ, ಪುತ್ತೂರು ಇದರ ಆಶ್ರಯದಲ್ಲಿ ರಾಮಕುಂಜೇಶ್ವರ ಪ.ಪೂ ಕಾಲೇಜು ರಾಮಕುಂಜ ಇಲ್ಲಿ ನಡೆದ ಯುವ ಒಕ್ಕಲಿಗರ ಕ್ರೀಡಾ ಸಂಭ್ರಮ – 2015 ರ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕು.ಪೂಜಾ 100 ಮೀ ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಆಮಂತ್ರಣ : ಗಾನ-ನೃತ್ಯ-ಯಕ್ಷ ಸಂಭ್ರಮ 2015

ಆಮಂತ್ರಣ : ಗಾನ-ನೃತ್ಯ-ಯಕ್ಷ ಸಂಭ್ರಮ 2015

Monday, January 19th, 2015
ಪುಸ್ತಕ - ದೇಣಿಗೆ

ಪುಸ್ತಕ – ದೇಣಿಗೆ

Thursday, January 15th, 2015

ನಮ್ಮ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇದೀಗ ಮದುವೆಯಾಗಿ ಜವಾಬ್ದಾರಿಯಿಂದ ತೆರಳಿರುವ ಕು.ಪೃಥ್ವಿ ಸುವರ್ಣ ಇವರು ‘ಪುಸ್ತಕ ಸಪ್ತಾಹದ ಅಂಗವಾಗಿ ಸುಮಾರು 1500 ರೂ. ಗಳ ಪುಸ್ತಕವನ್ನು ತಮ್ಮ ತರಗತಿ ಗ್ರಂಥಾಲಯಕ್ಕೆ ದೇಣಿಗೆಯಾಗಿ ನೀಡಿರುತ್ತಾರೆ.

ಯೋಗ ಭೂಷಣ ಪ್ರಬೋಧ ಪರೀಕ್ಷೆ - ಬೆಳ್ಳಿಪದಕ

ಯೋಗ ಭೂಷಣ ಪ್ರಬೋಧ ಪರೀಕ್ಷೆ – ಬೆಳ್ಳಿಪದಕ

Thursday, January 15th, 2015

ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನ, ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ನವದೆಹಲಿ, ಭಾರತ ಸರಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಹಾಗೂ ಸ್ವಾಮಿ ವಿವೇಕಾನಂದ ಯೋಗ ವಿಶ್ವವಿದ್ಯಾಲಯ ಬೆಂಗಳೂರು ಇದರ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ಜಿಲ್ಲಾ ಯೋಗ ಸ್ವಾಸ್ಥ್ಯ ಕೇಂದ್ರ, ಶ್ರೀ ವೇದವ್ಯಾಸ ಯೋಗ ಫೌಂಡೇಶನ್ ಮೈಸೂರು, ಉಡುಪಿ ಜಿಲ್ಲಾ ಯೋಗ ವೆಲ್ನೆಸ್ ಸೆಂಟರ್ ವತಿಯಿಂದ ನಡೆದ ಯೋಗ ಭೂಷಣ ಪ್ರಬೋಧ ಪರೀಕ್ಷೆಯಲ್ಲಿ ಶ್ರೀಮತಿ ಹರಿಣಾಕ್ಷಿ ಅವರು ಭೂಷಣ ಪ್ರಬೋಧ ಪತ್ರ ಹಾಗೂ ಬೆಳ್ಳಿ […]

ಸಂಗೀತ - ಭರತನಾಟ್ಯ ಪರೀಕ್ಷೆಯಲ್ಲಿ ಉತ್ತೀರ್ಣ

ಸಂಗೀತ – ಭರತನಾಟ್ಯ ಪರೀಕ್ಷೆಯಲ್ಲಿ ಉತ್ತೀರ್ಣ

Wednesday, January 14th, 2015

ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯವರು 2014 ರಲ್ಲಿ ಏರ್ಪಡಿಸಿದ ಸಂಗೀತ, ನೃತ್ಯ ಪರೀಕ್ಷೆ ಭರತನಾಟ್ಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮದ ವತಿಯಿಂದ ನಡೆಯುತ್ತಿರುವ ತರಗತಿಗಳಲ್ಲಿ ಜೂನಿಯರ್ ವಿಭಾಗದಲ್ಲಿ ಪಂಚಮಿ ಎಸ್., ಅಮಿತಾ ಎಸ್.ಎನ್, ಚೈತ್ರ.ಬಿ, ಸ್ಪೂರ್ತಿ.ಬಿ.ವಿ., ಮೋಕ್ಷಿತಾ.ಎಸ್, ಶ್ರಾವ್ಯ ಕೆ.ಎಸ್, ಕಾವ್ಯಶ್ರೀ ಮತ್ತು ಸೀನಿಯರ್ ವಿಭಾಗದಲ್ಲಿ ಸಿಂಚನಾದೇವ, ಪ್ರಜ್ಞಾ.ಪಿ.ಆರ್, ಅಶ್ವಿನಿ ನಾಯಕ್ ಆಶ್ರಯ್ ನಾಯಕ್, ಅಪೂರ್ವ ಗೌರಿ, ಕವನ ಬಿ.ಎಸ್, ಭುವನ ಸಿಂಚನ, ಸ್ವಾತಿ ಎನ್.ವಿ, ಅಂಕಿತಾ ವಿ.ಕೆ, ಆಶಿತಾ ಎಮ್, ಆಶಿತಾ ಬಿ ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆಯಾಗಿದ್ದಾರೆ. ಇವರೆಲ್ಲಾ ಶ್ರೀ […]

ವಿವೇಕಾನಂದ ಜಯಂತಿ - ಸಾಮೂಹಿಕ ಹುಟ್ಟುಹಬ್ಬ

ವಿವೇಕಾನಂದ ಜಯಂತಿ – ಸಾಮೂಹಿಕ ಹುಟ್ಟುಹಬ್ಬ

Monday, January 12th, 2015

ವಿದ್ಯೆ ಮತ್ತು ಸಂಸ್ಕಾರ ಜೀವನದ ಪ್ರಮುಖ ಘಟ್ಟವಿದ್ದಂತೆ. ಅವು ನಮ್ಮ ಜೀವನದ ಜೊತೆಗೇ ಇರಬೇಕು. ಅಂತಹ ವಿದ್ಯೆ ಮತ್ತು ಸಂಸ್ಕಾರವು ನಮ್ಮ ಶಾಲೆಯಲ್ಲಿ ದೊರಕುತ್ತಿದೆ ಎಂದು ವಿವೇಕಾನಂದ ಕನ್ನಡ ಶಾಲೆಯಲ್ಲಿ ನಡೆದ ವಿವೇಕಾನಂದ ಜಯಂತಿ – ಸಾಮೂಹಿಕ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಸಾಯಿಗೀತಾ ನುಡಿದರು. ವಿವೇಕಾನಂದ ಜಯಂತಿಯ ಪ್ರಯುಕ್ತ ಶಾಲಾ ವಿದ್ಯಾರ್ಥಿನಿ ಅಪೂರ್ವ ವಿವೇಕಾನಂದ ಬಾಲ್ಯ, ಆದರ್ಶಗಳ ಬಗ್ಗೆ ಮಾತನಾಡಿದರು. ಶ್ರೀಮತಿ ಉಮಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. […]

12-01-2015 ರಂದು ಸಾಮೂಹಿಕ ಹುಟ್ಟುಹಬ್ಬ ಆಚರಣೆ

12-01-2015 ರಂದು ಸಾಮೂಹಿಕ ಹುಟ್ಟುಹಬ್ಬ ಆಚರಣೆ

Saturday, January 10th, 2015
Highslide for Wordpress Plugin