ಗಾನ -ನೃತ್ಯ - ಯಕ್ಷ ಸಂಭ್ರಮ

ಗಾನ -ನೃತ್ಯ – ಯಕ್ಷ ಸಂಭ್ರಮ

Thursday, January 8th, 2015

ವಿವೇಕಾನಂದ ಕನ್ನಡ ಶಾಲೆಯ – ಅಪೂರ್ವ ಮತ್ತು ವಿಶಿಷ್ಟ ಕಾರ್ಯಕ್ರಮ ಗಾನ -ನೃತ್ಯ – ಯಕ್ಷ ಸಂಭ್ರಮ 2013-14 ರಿಂದ ಶಾಲೆಯಲ್ಲಿ ಆರಂಭವಾದ ಸಂಗೀತ ಭರತನಾಟ್ಯ ಯಕ್ಷಗಾನ ತರಗತಿಗಳ ಸಮನ್ವಯ ವಾರ್ಷಿಕೋತ್ಸವವು ನಡೆಯುತ್ತಾ ಬಂದಿದ್ದು ಪ್ರಸ್ತುತ ವರ್ಷದ ಕಾರ್ಯಕ್ರಮ ಸಂಬಂಧಿ ಪೂರ್ವಭಾವಿ ಸಭೆಯು ದಿನಾಂಕ 6-1-2015 ರಂದು ನಡೆಯಿತು. ಈ ಸಂದರ್ಭದಲ್ಲಿ ಸಂಗೀತ , ಭರತನಾಟ್ಯ ಜ್ಯೂನಿಯರ್ ಹಾಗೂ ಸೀನಿಯರ್ ಗ್ರೇಡ್ ಪರೀಕ್ಷೆಗೆ ಹಾಜರಾದ ಮಕ್ಕಳ 100% ಫಲಿತಾಂಶ ವಿವಿಧ ವೇದಿಕೆಯಲ್ಲಿ ನೀಡಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶಾಂಭವೀ ವಿಜಯ […]

ಮಕ್ಕಳೊಂದಿಗೆ ಸಂವಾದ

ಮಕ್ಕಳೊಂದಿಗೆ ಸಂವಾದ

Monday, January 5th, 2015

ಪ್ರಸ್ತುತ ಸಾಲಿನ ಹತ್ತನೇ ತರಗತಿಯ ಮಕ್ಕಳೊಂದಿಗೆ ಕಲಿಕಾ ಪ್ರಕ್ರಿಯೆ ಹಾಗೂ ವಾತಾವರಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಬಗ್ಗೆ ಶಾಲಾ ಸಂಚಾಲಕರಾದ ರವೀಂದ್ರ ಪಿ. ಇವರು ಸಂವಾದ ನಡೆಸಿದರು. ಕಾರ್ಯತತ್ಪರತೆ ಸೃಜನಶೀಲತೆ, ಕಲಾತ್ಮತೆಗಳಿಗೆ ಜೀವನದಲ್ಲಿ ಒತ್ತು ನೀಡಬೇಕಾದ ಅವಶ್ಯಕತೆಯನ್ನು ಮಕ್ಕಳೊಂದಿಗೆ ಚರ್ಚಿಸಿದರು.

ಯಕ್ಷ ಚಿಣ್ಣರ ಬಳಗದಿಂದ ಕಾರ್ಯಕ್ರಮ

ಯಕ್ಷ ಚಿಣ್ಣರ ಬಳಗದಿಂದ ಕಾರ್ಯಕ್ರಮ

Wednesday, December 31st, 2014

ದಿನಾಂಕ 25-12-2014 ರಂದು ‘ಶ್ರೀ ನಿಲಯ’ ಬೊಳ್ಳಂದೂರು ಇಲ್ಲಿ ಗೃಹಪ್ರವೇಶದ ಪ್ರಯುಕ್ತ ಯಕ್ಷ ಚಿಣ್ಣರ ಬಳಗ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇವರಿಂದ ಶಾಂಭವಿ ವಿಜಯ ಎಂಬ ಯಕ್ಷಗಾನ ಬಯಲಾಟವು ಗುರುಗಳಾದ ಶ್ರೀ ಬಾಲಕೃಷ್ಣ ಉಪ್ಪಂಗಳ ಮತ್ತು ಶ್ರೀ ಚಂದ್ರಶೇಖರ ಇವರ ನಿರ್ದೇಶನದಲ್ಲಿ ನಡೆಯಿತು.

ಗ್ರಂಥಾಲಯಕ್ಕೆ ಪುಸ್ತಕ -ದೇಣಿಗೆ

ಗ್ರಂಥಾಲಯಕ್ಕೆ ಪುಸ್ತಕ -ದೇಣಿಗೆ

Saturday, December 27th, 2014

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಇಲ್ಲಿನ ಶಾಲಾ ಸ್ಥಾಪಕಾಧ್ಯಕ್ಷರಾದ ಶಿವರಾಮ ಭಟ್ ಕರಿಯಾಲ ಇವರು ಶಾಲಾ ಗ್ರಂಥಾಲಯಕ್ಕೆ ಸುಮಾರು 5,000 ರೂ. ಗಳ ಪುಸ್ತಕಗಳ ದೇಣಿಗೆ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಅಚ್ಯುತ ನಾಯಕ್, ಶಾಲಾ ಮುಖ್ಯಗುರುಗಳು, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಾರ್ಷಿಕೋತ್ಸವದ ಅವಲೋಕನ

ವಾರ್ಷಿಕೋತ್ಸವದ ಅವಲೋಕನ

Saturday, December 27th, 2014

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 12-12-2014 ರಂದು ನಡೆದಿದ್ದ ಶಾಲಾ ವಾರ್ಷಿಕೋತ್ಸವ ‘ವಿವೇಕೋತ್ಸವ’ದ ಕುರಿತು ಅವಲೋಕನ ನಡೆಯಿತು. ಈ ಸಂದರ್ಭದಲ್ಲಿ ಸಮಾಜಕ್ಕೆ ಸಂದೇಶವನ್ನು ಕೊಡುವ ಕಾರ್ಯಕ್ರಮಗಳನ್ನು ನೀಡಿದ್ದು ಇನ್ನು ಮುಂದೆಯೂ ಇದರ ಕಡೆ ಹೆಚ್ಚಿನ ಗಮನ ನೀಡುವಂತೆ ಶಾಲಾ ಆಡಳಿತ ಮಂಡಳಿ, ಶಾಲಾ ಶಿಕ್ಷಕರು ಹಾಗು ಆಯ್ದ ಪೋಷಕರ ಸಭೆಯಲ್ಲಿ ಚರ್ಚಿಸಲಾಯಿತು.

ಪೋಷಕರ ಸಭೆ

ಪೋಷಕರ ಸಭೆ

Saturday, December 27th, 2014

ಹತ್ತನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆಯಲ್ಲಿ ಮಕ್ಕಳ ಪ್ರಗತಿಯ ಬಗ್ಗೆ ಪೋಷಕರೊಂದಿಗೆ ಸಮಾಲೋಚನೆ ನಡೆಸಲಾಯಿತು. ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಪಡೆಯುವಲ್ಲಿ ಶಿಕ್ಷಕರು ಮಕ್ಕಳು ಹಾಗೂ ಪೋಷಕರ ಜವಾಬ್ದಾರಿಯನ್ನು ನೆನಪಿಸಲಾಯಿತು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಾರ್ಷಿಕ ಮೇಳ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಾರ್ಷಿಕ ಮೇಳ

Monday, December 22nd, 2014

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ, ಪುತ್ತೂರು ದ.ಕ ವಾರ್ಷಿಕ ಮೇಳ 2014-15 ದಿನಾಂಕ 17-12-2014 ಮತ್ತು 18-12-2014 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚೂರಿಪದವು ಇಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಾರ್ಷಿಕ ಮೇಳದಲ್ಲಿ ಭಾಗವಹಿಸಿದ ನಮ್ಮ ಶಾಲಾ ಸ್ಕೌಟ್ಸ್ – ಗೈಡ್ಸ್ ತಂಡ.

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿವೇಕೋತ್ಸವ - ಸಾಂಸ್ಕೃತಿಕ ಹಬ್ಬ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿವೇಕೋತ್ಸವ – ಸಾಂಸ್ಕೃತಿಕ ಹಬ್ಬ

Thursday, December 18th, 2014

ಕನ್ನಡ ಮಾಧ್ಯಮದಿಂದ ಪಾಶ್ಚಾತ್ಯೀಕರಣಕ್ಕೆ ತಡೆ – ದಾಮ್ಲೆ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆಯುವ ಮಕ್ಕಳಿರುವ ಮನೆಯಲ್ಲಿ ಉತ್ತಮ ಸಂಸ್ಕಾರವಿರುತ್ತದೆ. ಅವರಿಂದ ಪಾಶ್ಚಾತ್ಯೀಕರಣದ ಅನುಕರಣೆ ಬಹಳ ವಿರಳ ಎಂದು ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ದಾಮ್ಲೆ ಹೇಳಿದರು. ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದ. 12 ರಂದು ನಡೆದ ಮಕ್ಕಳ ವಾರ್ಷಿಕ ಸಾಂಸ್ಕೃತಿಕ ಹಬ್ಬ ‘ವಿವೇಕೋತ್ಸವ’ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ಮಕ್ಕಳ ಪೋಷಕರು ಭಯ […]

ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರತಿಭಾ ಪುರಸ್ಕಾರ

ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಪ್ರತಿಭಾ ಪುರಸ್ಕಾರ

Tuesday, December 16th, 2014

ವಿವೇಕಾನಂದ ಕನ್ನಡ ಶಾಲೆಯ ಪ್ರಸಕ್ತ ಶೈಕ್ಷಣಿಕ ವರ್ಷದ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮವು ಮೂರು ವಿಭಾಗದಲ್ಲಿ ನಡೆಯಿತು. ಕಿರಿಯ ಪ್ರಾಥಮಿಕ ವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಬಿರ್ಮಣ್ಣ ಗೌಡ ಸಭಾಧ್ಯಕ್ಷರಾಗಿದ್ದರು. ಅವರು ಮಕ್ಕಳಿಗೆ ತಮ್ಮ ಉಜ್ವಲ ಭವಿಷ್ಯಕ್ಕೆ ನಿಮ್ಮಲ್ಲಿರುವ ಪ್ರತಿಭೆಯು ಪೂರಕವಾಗಿದೆ. ಅದಕ್ಕೆ ಶ್ರೀದೇವರ ಆಶೀರ್ವಾದ ಸದಾ ಇರಲಿ ಎಂದು ಹಾರೈಸಿದರು. ವೇದಿಕೆಯಲ್ಲಿ ಶಾಲಾ ಹಿರಿಯ ವಿದ್ಯಾರ್ಥಿನಿ ಕು.ದೀಪಿಕಾ ಮಾತನಾಡುತ್ತ ಅವರ ಹಳೆ ಶಾಲಾ ದಿನಗಳನ್ನು ನೆನಪಿಸಿಕೊಂಡರು. ವೇದಿಕೆಯಲ್ಲಿ ಹಿರಿಯ ಶಿಕ್ಷಕಿ ಶ್ರೀಮತಿ ವೀಣಾಸರಸ್ವತಿ […]

ಪ್ರತಿಭಾ ಪುರಸ್ಕಾರ

ಪ್ರತಿಭಾ ಪುರಸ್ಕಾರ

Tuesday, December 16th, 2014

ವಿವೇಕಾನಂದ ಕನ್ನಡ ಶಾಲೆಯ ಪ್ರಸಕ್ತ ಶೈಕ್ಷಣಿಕ ವರ್ಷದ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮವು ಮೂರು ವಿಭಾಗದಲ್ಲಿ ನಡೆಯಿತು. ಹಿರಿಯ ಪ್ರಾಥಮಿಕ ವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶೋಭಾ ಕೊಳತ್ತಾಯ ಸಭಾಧ್ಯಕ್ಷರಾಗಿ ಮಕ್ಕಳಿಗೆ ಸೋಲು – ಗೆಲುವು ಸಾಮಾನ್ಯ. ಸೋತರೂ ಗೆದ್ದ ಹಾಗೆ ಮುಂದುವರಿಯಬೇಕು ಎಂದರು. ಉಪಸಿತರಿದ್ದ ಶಿಕ್ಷಕ – ರಕ್ಷಕ ಸಂಘದ ಸದಸ್ಯರಾದ ಆಶಾ.ಕೆ.ರೈ ಮಕ್ಕಳಿಗೆ ಶುಭ ಹಾರೈಸಿದರು ಮತ್ತು ಹಿರಿಯ ವಿದ್ಯಾರ್ಥಿ ಪ್ರಜ್ವಲ್ ಚಂದ್ರ ಪ್ರತಿಭಾ ಪುರಸ್ಕಾರವು ವಾರ್ಶಿಕೋತ್ಸವದ ದಿನದಂದು ಮಾಡುವ ಬದಲು […]

ಪ್ರತಿಭಾ ಪುರಸ್ಕಾರ

ಪ್ರತಿಭಾ ಪುರಸ್ಕಾರ

Tuesday, December 9th, 2014

ವಿವೇಕಾನಂದ ಕನ್ನಡ ಶಾಲೆಯ ಪ್ರಸಕ್ತ ಶೈಕ್ಷಣಿಕ ವರ್ಷದ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮವು ಮೂರು ವಿಭಾಗದಲ್ಲಿ ನಡೆಯಿತು. ಪ್ರೌಢವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆ ವಹಿಸಿದ್ದ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ವಸಂತ ಸುವರ್ಣರವರು ವಿಜೇತ ಮಕ್ಕಳಿಗೆ ಶುಭಹಾರೈಸುತ್ತ ಮಕ್ಕಳ ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು. ಈ ಸಂದರ್ಭದಲ್ಲಿ 10 ನೇ ತರಗತಿಯ ಫಲಿತಾಂಶವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ 95+ ನ ‘ದಾರಿ ದೀಪ’ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಸದಸ್ಯರಾದ ರವಿನಾರಾಯಣ ಎಮ್ ಉಪಸ್ಥಿತರಿದ್ದರು. ಹಿರಿಯ […]

ದಾರಿದೀಪ ಪುಸ್ತಕದ ಕೈಪಿಡಿ ವಿತರಣೆ

ದಾರಿದೀಪ ಪುಸ್ತಕದ ಕೈಪಿಡಿ ವಿತರಣೆ

Tuesday, December 9th, 2014

ದಿನಾಂಕ 4-12-2014 ನೇ ಗುರುವಾರ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 95+ ಮಿಷನ್ ಇದರ ಪ್ರಾಯೋಜಕತ್ವದಲ್ಲಿ ಮುದ್ರಿತಗೊಂಡ ‘ದಾರಿದೀಪ, ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಸುವರ್ಣ, ಪೋಷಕರಾದ ರವಿನಾರಾಯಣ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅನೀಶ್ ಬಡೆಕ್ಕಿಲ ಹಾಗೂ ಮುಖ್ಯೋಪಾಧ್ಯಾಯರಾದ ಆಶಾ ಬೆಳ್ಳಾರೆ ಉಪಸ್ಥಿತರಿದ್ದರು. ಶ್ರೀಮತಿ ರೇವತಿ ಮಾತಾಜಿ ಇವರು ಪ್ರಸ್ತಾವನೆಗೈದು ದಾರಿದೇಪ ಎಂಬ ವಿದ್ಯಾರ್ಥಿ ಸ್ನೇಹಿ ಕಲಿಕಾ ಮಾರ್ಗದರ್ಶಿ ಕೈಪಿಡಿಯು 2015 ನೇ ಎಪ್ರಿಲ್ ತಿಂಗಳಲ್ಲಿ […]

ವಾರ್ಷಿಕ ಕ್ರೀಡಾಕೂಟ

ವಾರ್ಷಿಕ ಕ್ರೀಡಾಕೂಟ

Monday, December 8th, 2014

ವಿವೇಕಾನಂದ ಕನ್ನಡ ಶಾಲೆಯು ಶಿಕ್ಷಣದೊಂದಿಗೆ ಪಠ್ಯಪೂರಕ ಚಟುವಟಿಕೆಗಳಿಗೆ ಮಹತ್ವ ನೀಡುತ್ತಿದ್ದು ಇಲ್ಲಿನ ಮಕ್ಕಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಲು ನೆರವಾಗುತ್ತಿದೆ ಎಂದು ಕ್ರೀಡಾಜ್ಯೋತಿ ಬೆಳಗಿಸಿ ಸ.ಹಿ.ಪ್ರಾಥಮಿಕ ಶಾಲೆ ದರ್ಬೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ರೈಯವರು ನುಡಿದರು. ದೀಪ ಬೆಳಗಿಸಿ ಉದ್ಫಾಟಿಸಿದ ಬಿ.ಇ.ಎಂ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಮಾಧವ ಇವರು ಶುಭ ಹಾರೈಸಿದರು. ಕಾವು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿಯಾದ ವಸಂತಿ ಇವರು ತಮ್ಮ ಬಾಲ್ಯದ ನೆನಪುಗಳನ್ನು ಮಕ್ಕಳ ಮುಂದಿರಿಸಿದರು. ಶಾಲಾ ಅಧ್ಯಕ್ಷರಾದ ಡಾ.ಕೃಷ್ಣಭಟ್ ಕೊಂಕೋಡಿ, […]

ವಿವೇಕೋತ್ಸವ - ಮಕ್ಕಳ ಸಾಂಸ್ಕೃತಿಕ ಹಬ್ಬ 12-12-2014

ವಿವೇಕೋತ್ಸವ – ಮಕ್ಕಳ ಸಾಂಸ್ಕೃತಿಕ ಹಬ್ಬ 12-12-2014

Wednesday, December 3rd, 2014
ಪ್ರತಿಭಾ ಪುರಸ್ಕಾರ ಹಾಗೂ ಕ್ರೀಡಾಕೂಟದ ಆಹ್ವಾನಪತ್ರಿಕೆ

ಪ್ರತಿಭಾ ಪುರಸ್ಕಾರ ಹಾಗೂ ಕ್ರೀಡಾಕೂಟದ ಆಹ್ವಾನಪತ್ರಿಕೆ

Saturday, November 29th, 2014
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿವೇಕಾನಂದ ಕನ್ನಡ ಶಾಲೆಯ ವಿದ್ಯಾರ್ಥಿಗಳು - ಜಿಲ್ಲಾ ಮಟ್ಟಕ್ಕೆ

ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿವೇಕಾನಂದ ಕನ್ನಡ ಶಾಲೆಯ ವಿದ್ಯಾರ್ಥಿಗಳು – ಜಿಲ್ಲಾ ಮಟ್ಟಕ್ಕೆ

Monday, November 24th, 2014

ಡಿ.ಎಸ್.ಇ.ಆರ್.ಟಿ ಯ ರಾಜ್ಯ ವಿಜ್ಞಾನ ಸಂಸ್ಥೆ ವತಿಯಿಂದ ನಡೆದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿವೇಕಾನಂದ ಕನ್ನಡ ಶಾಲೆಯ ವಿದ್ಯಾರ್ಥಿಗಳಾದ ಅಶ್ವಿನಿ ನಾಯಕ್ ಮತ್ತು ಅರ್ಪಿತಾ ಸಿ.ಪಿ -ತ್ಯಾಜ್ಯ ನಿರ್ವಹಣೆ – ಪ್ರಥಮ, ಶ್ರೀಪ್ರದ ಎ.ಎಂ ಮತ್ತು ಚರಣ್‌ರಾಜ್ – ಶಕ್ತಿಯ ಮೂಲ ಮತ್ತು ಸಂರಕ್ಷಣೆ -ದ್ವಿತೀಯ, ವಿಜ್ಞಾನ ಮತ್ತು ಗಣಿತದಲ್ಲಿ ಯುಗಾಂತರಿಕ ಐತಿಹಾಸಿಕ ಘಟನೆಗಳು – ಸಿಂಧೂರಲಕ್ಷ್ಮೀ.ಕೆ, ಆಶಿಕಾ ರೈ.ಬಿ.ಜಿ – ದ್ವಿತೀಯ, ಸಾರಿಗೆ – ವಿಶಾಲ್ ಎನ್, ಅಕ್ಷಯ್ ಕುಮಾರ್ ಎಸ್ – […]

ಬಲ್ಲಿರೇನಯ್ಯ

ಬಲ್ಲಿರೇನಯ್ಯ

Saturday, November 22nd, 2014

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಯಕ್ಷ ಚಿಣ್ಣರ ಬಳಗ, ತೆಂಕಿಲ, ಪುತ್ತೂರು ಮತ್ತು ಯಕ್ಷನಂದನ ಕಲಾ ಸಂಘ ಕ್ಯೊಲ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 22-11-2014 ರಂದು ‘ಯಕ್ಷಗಾನ ಮುಖರ್ವಣಿಕೆ’ ಕಾರ್ಯಾಗಾರದ ಒಂದು ನೋಟ.

ಯಕ್ಷಗಾನ ಮುಖವರ್ಣಿಕೆ ಕಾರ್ಯಾಗಾರ

ಯಕ್ಷಗಾನ ಮುಖವರ್ಣಿಕೆ ಕಾರ್ಯಾಗಾರ

Saturday, November 22nd, 2014

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಯಕ್ಷ ಚಿಣ್ಣರ ಬಳಗ, ತೆಂಕಿಲ, ಪುತ್ತೂರು ಮತ್ತು ಯಕ್ಷನಂದನ ಕಲಾ ಸಂಘ ಕ್ಯೊಲ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 22-11-2014 ರಂದು ‘ಯಕ್ಷಗಾನ ಮುಖವರ್ಣಿಕೆ ಕಾರ್ಯಾಗಾರ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ಯಕ್ಷಗಾನ ಕಲಾವಿದ ಶ್ರೀ ಶ್ರೀಧರ ಭಂಡಾರಿ ಯಕ್ಷಗಾನದಲ್ಲಿ ಮುಖವರ್ಣಿಕೆ ಮಹತ್ವದ ಬಗ್ಗೆ ತಿಳಿಸಿದರು. ಸಭಾಧ್ಯಕ್ಷತೆ ವಹಿಸಿದ ಯಕ್ಷನಂದನ ಕಲಾ ಸಂಘದ ಅಧ್ಯಕ್ಷರಾದ ಶ್ರೀ ಹರಿಕಿರಣ್ ಕ್ಯೊಲ ಸಂಘವು ಯಕ್ಷಗಾನದ ಬಗ್ಗೆ ಅಳವಡಿಸಿಕೊಂಡ ಕಾರ್ಯಾಗಾರದ ಉದ್ದೇಶ, ಅನುಕೂಲಗಳ […]

ವಿವೇಕಾನಂದ ಕನ್ನಡ ಶಾಲೆಯ 13 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ವಿವೇಕಾನಂದ ಕನ್ನಡ ಶಾಲೆಯ 13 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

Wednesday, November 19th, 2014

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆ ಸಹಯೋಗದೊಂದಿಗೆ ಕೊಂಬೆಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಶಾಲೆಯ ವಿದ್ಯಾರ್ಥಿಗಳು ಪ್ರೌಢಶಾಲಾ ವಿಭಾಗದ ಬಾಲಕರು ಮತ್ತು ಬಾಲಕಿಯರು ತಂಡ ಪ್ರಶಸ್ತಿ ಮತ್ತು ಸಮಗ್ರ ಪ್ರಶಸ್ತಿ ಪಡೆದಿರುತ್ತಾರೆ. ಇವರಲ್ಲಿ 13 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಕರಾದ ಶ್ರೀ ದಾಮೋದರ ಬೆಟ್ಟಂಪಾಡಿ, ಶ್ರೀಮತಿ ಹರಿಣಾಕ್ಷಿ ಮತ್ತು ಶ್ರೀ ಕೃಷ್ಣಪ್ರಸಾದ್ ಬೆಟ್ಟಂಪಾಡಿ ಇವರು ತರಬೇತಿ ನೀಡಿರುತ್ತಾರೆ.

ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರು

ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರು

Tuesday, November 18th, 2014

ಮಕ್ಕಳ ದಿನಾಚರಣೆಯ ಪ್ರಯುಕ್ತ ಆಕ್ಸಿಸ್ ಬ್ಯಾಂಕ್ ಬೊಳುವಾರು ಇಲ್ಲಿ ನಡೆದ 12 ಮತ್ತು 13 ವರ್ಷ ವಯೋಮಾನದ ವಿದ್ಯಾರ್ಥಿಗಳ ಚಿತ್ರಕಲಾ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಶಾಲೆಯ ವಿದ್ಯಾರ್ಥಿಗಳಾದ ಅಮಿತಾ.ಎಸ್.ಎನ್- ಪ್ರಥಮ, ಗೌತಮ್ – ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಇವರಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ಶ್ರೀ ರುಕ್ಮಯ ಇವರು ತರಬೇತಿ ನೀಡಿರುತ್ತಾರೆ.

ವನ್ಯಜೀವಿ ಸಪ್ತಾಹ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿದ ವಿವೇಕಾನಂದ ಕನ್ನಡ ಶಾಲೆಯ ವಿದ್ಯಾರ್ಥಿಗಳು

ವನ್ಯಜೀವಿ ಸಪ್ತಾಹ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿದ ವಿವೇಕಾನಂದ ಕನ್ನಡ ಶಾಲೆಯ ವಿದ್ಯಾರ್ಥಿಗಳು

Monday, November 17th, 2014

ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘ ಮಂಗಳೂರು ವಿಭಾಗದ ವತಿಯಿಂದ ವನ್ಯಜೀವಿ ಸಪ್ತಾಹದ ಅಂಗವಾಗಿ ಏರ್ಪಡಿಸಿದ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಯಶಸ್ವಿ ನಾರಾಯಣ- ಪ್ರಥಮ (ರಸಪ್ರಶ್ನೆ) ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ತೃಷಾ.ಬಿ.ಭಟ್ – ಪ್ರಥಮ (ಜ್ಞಾಪಕ ಪರೀಕ್ಷೆ) ಪ್ರೌಢಶಾಲಾ ವಿಭಾಗದಲ್ಲಿ ವರಶ್ರೀ ಕೆ. ಪ್ರಥಮ (ಜ್ಞಾಪಕ ಪರೀಕ್ಷೆ), ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಶ್ರೇಯಸ್ ಆಚಾರ್ – ದ್ವಿತೀಯ (ಚಿತ್ರಕಲೆ) ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಮುಖೇಶ್ ಕೃಷ್ಣ- ತೃತೀಯ (ಚಿತ್ರಕಲೆ) , ವಿಘ್ನೇಶ್ – ತೃತೀಯ (ರಸಪ್ರಶ್ನೆ) […]

ವಿವೇಕಾನಂದ ಕನ್ನಡ ಶಾಲೆಯ ವಿದ್ಯಾರ್ಥಿಗಳು ಶಾಂತಿವನ ಟ್ರಸ್ಟ್ ಸ್ಪರ್ಧೆಗಳಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

ವಿವೇಕಾನಂದ ಕನ್ನಡ ಶಾಲೆಯ ವಿದ್ಯಾರ್ಥಿಗಳು ಶಾಂತಿವನ ಟ್ರಸ್ಟ್ ಸ್ಪರ್ಧೆಗಳಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

Wednesday, November 12th, 2014

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಶಾಂತಿವನ ಟ್ರಸ್ಟ್ ಧರ್ಮಸ್ಥಳ ಹಾಗೂ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳ ಶಾಲಾ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಚಿತ್ರಕಲೆ-ರಾಮ್ ಪ್ರಸಾದ್, ಶ್ಲೋಕ ಕಂಠಪಾಠ ಅರ್ಪಿತಾ .ಸಿ.ಪಿ ಮತ್ತು ಪ್ರಾಥಮಿಕ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ರಕ್ಷಿತಾ.ಡಿ, ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ಸಂಸ್ಕೃತಿ ಶಾಸ್ತ್ರೀ ಸಿ.ಎಮ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಜಿಲ್ಲಾ ಮಟ್ಟಕ್ಕೆ ಆಯ್ಕೆ

ಜಿಲ್ಲಾ ಮಟ್ಟಕ್ಕೆ ಆಯ್ಕೆ

Wednesday, November 12th, 2014

ತಾಲೂಕು ಮಟ್ಟದ ಪ್ರತಿಭಾಕಾರಂಜಿಯಲ್ಲಿ ಪ್ರೌಢ ವಿಭಾಗದ ಜನಪದ ನೃತ್ಯದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ನಮ್ಮ ಶಾಲಾ ತಂಡ.

ತಾಲೂಕು ಮಟ್ಟದ ಕ್ರೀಡಾಕೂಟ - ವಿವೇಕಾನಂದ ಕನ್ನಡ ಶಾಲೆಗೆ 3 ಸಮಗ್ರ ಪ್ರಶಸ್ತಿ

ತಾಲೂಕು ಮಟ್ಟದ ಕ್ರೀಡಾಕೂಟ – ವಿವೇಕಾನಂದ ಕನ್ನಡ ಶಾಲೆಗೆ 3 ಸಮಗ್ರ ಪ್ರಶಸ್ತಿ

Tuesday, November 11th, 2014

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಪುತ್ತೂರು, ದ.ಕ ಮತ್ತು ಪಟ್ಟೆ ವಿದ್ಯಾಸಂಸ್ಥೆಗಳು ಪುತ್ತೂರು ದ.ಕ ಇವರ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ, ಬಾಲಕಿಯರ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಶಾಲೆಯ ವಿದ್ಯಾರ್ಥಿಗಳು 17 ರ ವಯೋಮಾನದ ಬಾಲಕರು ಪ್ರಥಮ, 17ರ ವಯೋಮಾನದ ಬಾಲಕಿಯರು ಪ್ರಥಮ ಮತ್ತು ಪ್ರಾಥಮಿಕ ಶಾಲಾ ಬಾಲಕಿಯರು ಪ್ರಥಮ ಸ್ಥಾನ ಪಡೆದು ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. […]

ಕರಾಟೆ - ತೃತೀಯ ಸ್ಥಾನ

ಕರಾಟೆ – ತೃತೀಯ ಸ್ಥಾನ

Friday, November 7th, 2014

ಮಂಗಳೂರಿನ ಶ್ರೀನಿವಾಸ್ ಮಲ್ಯ ಇನ್‌ಡೋರ್ ಸ್ಟೇಡಿಯಂನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಸಾತ್ವಿಕ್ ಶರ್ಮ 35 ಕೆ.ಜಿ ಒಳಗಿನ ವಿಭಾಗದ ‘ಬ್ರೌನ್ ಬೆಲ್ಟ್ಸ್’ನ ಕುಮಿಟೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಮತ್ತು 8 ರಿಂದ 10 ವರ್ಷದ ಕಟಾವಿಭಾಗದಲ್ಲಿ ಸಂಹಿತಾ ಶರ್ಮ ದ್ವಿತೀಯ ಸ್ಥಾನ ಪಡೆದಿದ್ದಾಳೆ.

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸ್ವಚ್ಛಭಾರತ ಅಭಿಯಾನ

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸ್ವಚ್ಛಭಾರತ ಅಭಿಯಾನ

Wednesday, October 29th, 2014

ದಿನಾಂಕ 02-10-2014 ರ ಗುರುವಾರದಂದು ವಿವೇಕಾನಂದ ವಿದ್ಯಾಸಂಸ್ಥೆ, ತೆಂಕಿಲದಲ್ಲಿ ಗಾಂಧಿ ಜಯಂತಿ ಮತ್ತು ಸ್ವಚ್ಛಭಾರತ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರಿನ ಯುವ ಉದ್ಯಮಿ ಕೆ.ಎಸ್.ಅರ್ಜುನ್, ಇದೊಂದು ಅರ್ಥಪೂರ್ಣವಾದ ಕಾರ್ಯಕ್ರಮವಾಗಿದ್ದು ಸಮಾಜಕ್ಕೆ ನಾವೇನಾದರೂ ಕೊಡಬೇಕು. ಮನಸ್ಸು ಎಷ್ಟು ನಿರ್ಮಲವಾಗಿದೆಯೋ, ನಮ್ಮ ಸುತ್ತಲ ಪರಿಸರವು ಸ್ವಚ್ಛತೆಯಿಂದ ಇರಬೇಕು ಎಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ| ಕೆ.ಎಂ ಕೃಷ್ಣ ಭಟ್ ವಹಿಸಿ, ಮಾತನಾಡಿ, ಮುಂದಿನ ಭಾರತ ಯುವಕರ ಭಾರತ. ಸ್ವಯಂ ಪ್ರೇರಣೆಯಿಂದ ಸ್ವಚ್ಛಭಾರತವನ್ನಾಗಿ […]

ಪುತ್ತೂರು ವಿವೇಕಾನಂದದಲ್ಲಿ ಜಲಸಂರಕ್ಷಣಾ ಕಾರ್ಯಾಗಾರ

ಪುತ್ತೂರು ವಿವೇಕಾನಂದದಲ್ಲಿ ಜಲಸಂರಕ್ಷಣಾ ಕಾರ್ಯಾಗಾರ

Wednesday, October 29th, 2014

ಪುತ್ತೂರು: ಪುತ್ತೂರು ಎಸೋಸಿಯೇಶನ್ ಸಿವಿಲ್ ಇಂಜಿನಿಯರ್ಸ್ ಮತ್ತು ವಿವೇಕಾನಂದ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇದರ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಜಲಸಂರಕ್ಷಣಾ ಕಾರ್ಯಾಗಾರ ನಡೆಯಿತು. ಡಾ. ಕೆ.ಎಂ. ಕೃಷ್ಣ ಭಟ್ ಅಧ್ಯಕ್ಷರು ವಿವೇಕಾನಂದ ವಿದ್ಯಾಸಂಸ್ಥೆ ಪುತ್ತೂರು, ಪ್ರಪಂಚದಲ್ಲಿ ಅತೀ ಹೆಚ್ಚು ಮಳೆ ಬೀಳುವ ದೇಶ ಭಾರತ, ಇಂತಹ ದೇಶದಲ್ಲಿ ನಾವು ಮುಂದಿನ ಪೀಳಿಗೆಗೆ ನೀರು ಉಳಿಸುವಂತದ್ದು ನಮ್ಮ ಕರ್ತವ್ಯವಾಗಬೇಕೆಂದರು. ಶ್ರೀ ಶಶಿಧರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಪುತ್ತೂರು ಇವರು ಮಾತನಾಡುತ್ತಾ […]

ರಾಷ್ಡ್ರೀಯ ಕ್ರೀಡಾಕೂಟಕ್ಕೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 15 ಕ್ರೀಡಾಪಟುಗಳು ಆಯ್ಕೆ

ರಾಷ್ಡ್ರೀಯ ಕ್ರೀಡಾಕೂಟಕ್ಕೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 15 ಕ್ರೀಡಾಪಟುಗಳು ಆಯ್ಕೆ

Monday, October 13th, 2014

ವಿದ್ಯಾಭಾರತಿ ದಕ್ಷಿಣ ಕ್ಷೇತ್ರೀಯ ಮಟ್ಟದ ಕ್ರೀಡಾಕೂಟವು ದಿನಾಂಕ 10-10-2014 ರಿಂದ 12-10-2014 ರ ವರೆಗೆ ತಮಿಳುನಾಡಿನ ತಿರುನಲ್‌ವೆಲಿ ನಡೆದ ಅತ್ಲೆಟಿಕ್ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರೌಢ ಶಾಲಾ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಸಮಗ್ರ ತಂಡ ಪ್ರಸಸ್ತಿಯೊಂದಿಗೆ ದಿನಾಂಕ 16-11-2014 ರಿಂದ 18-11-2014 ರ ವರೆಗೆ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ನಡೆಯುವ ಅಖಿಲಾ ಭಾರತೀಯ ರಾಷ್ಟ್ರೀಯ ಕ್ರೀಡಾಕೂಟಕ್ಕೆ 15 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಇವರಿಗೆ ಶ್ರೀ ದಾಮೋದರ, ಬೆಟ್ಟಂಪಾಡಿ, ಶ್ರೀಮತಿ ಹರೀಣಾಕ್ಷಿ, ಬಲ್ನಾಡು ಮತ್ತು ಶ್ರೀ […]

ಸಂಭ್ರಮ - 2014

ಸಂಭ್ರಮ – 2014

Wednesday, October 8th, 2014

ಶೈಕ್ಷಣಿಕ ಕ್ಷೇತ್ರಕ್ಕೆ ಪೂರಕವಾದ ಕ್ರಿಯಾಶೀಲತೆ, ಸಮೂಹ ಮಾಧ್ಯಮದ ಸದ್ಬಳಕೆ, ಗೀತ ವೈವಿಧ್ಯ ದೇಶಭಕ್ತಿ, ಕರಕುಶಲ ಕಲೆ, ಕ್ರಿಯಾಶೀಲತೆ, ಶಿಕ್ಷಣ- ವೈಜ್ಞಾನಿಕ ಚಿಂತನೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ತಾಲೂಕಿನ ಹಾಗೂ ಜಿಲ್ಲೆಯ ಸಂಪನ್ಮೂಲ ವ್ಯಕ್ತಿಗಳನ್ನೊಳಗೊಂಡ ‘ಸಂಭ್ರಮ – 2014’ ಶಿಬಿರವು ದಿನಾಂಕ 8-10-2014 ರಂದು ವಿವೇಕಾನಂದ ಕನ್ನಡ ಶಾಲಾ ಸಭಾಂಗಣದಲ್ಲಿ ಆರಂಭಗೊಂಡಿತು. ಕಾರ್ಯಕ್ರಮವನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಕೃಷ್ಣ ಭಟ್ ಕೊಂಕೋಡಿ ಉದ್ಫಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲಾ ಹಿರಿಯ ವಿದ್ಯಾರ್ಥಿಗಳಾದ ಪ್ರಾರ್ಥನಾ ಕರ್ಗಲ್ಲು, ಸೌಮ್ಯಶ್ರೀ, ಅನೀಶ್ […]

ಪ್ರಬಂಧ ಸ್ಪರ್ಧೆ- ದ್ವಿತೀಯ

ಪ್ರಬಂಧ ಸ್ಪರ್ಧೆ- ದ್ವಿತೀಯ

Wednesday, October 1st, 2014

ಪುತ್ತೂರು ನಗರ ರಾಜಭಾಷಾ ಕಾರ್ಯಾನ್ವಯನ ಸಮಿತಿ ಮತ್ತು ಗೇರು ಸಂಶೋಧನಾಲಯ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ನಡೆಸಿದ ಹಿಂದಿ ಭಾಷಾ ಪ್ರಬಂಧ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 9ನೇ ತರಗತಿಯ ಚರಣ್‌ರಾಜ್ ಇವರು ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ.

ಸಂಭ್ರಮ - 2014

ಸಂಭ್ರಮ – 2014

Monday, September 29th, 2014
ರಾಜ್ಯ ಅಮೆಚೂರ್ ಕ್ರೀಡಾಕೂಟ : ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ರಾಜ್ಯ ಅಮೆಚೂರ್ ಕ್ರೀಡಾಕೂಟ : ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Thursday, September 25th, 2014

ರಾಜ್ಯ ಅಮೆಚೂರ್ ಕ್ರೀಡಾಕೂಟ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಗಂಣದಲ್ಲಿ ಸೆಪ್ಟೆಂಬರ್೧೮ ರಿಂದ ೨೦ರ ವರೆಗೆ ನಡೆದ ಕರ್ನಾಟಕ ರಾಜ್ಯ ಜೂನಿಯರ್ ಮತ್ತು ಸಿನೀಯರ್ ಅತ್ಲೆಟಿಕ್ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ರಂಜಿತ್.ಪಿ.ವಿ- ಜಾವೆಲಿನ ಎಸೆತದಲ್ಲಿ ತೃತೀಯ, ಗುರುಪ್ರಸಾದ್ ಎಸ್.ಎನ್-ಉದ್ದ ಜಿಗಿತ ಚತುರ್ಥ, ಯತೀಶ- ೩೦೦೦ಮೀ ಚತುರ್ಥ, ಸೌಮ್ಯಶ್ರೀ ೧೦೦ಮೀ ಹರ್ಡಲ್ಸ್ ತೃತೀಯ ಸ್ಥಾನ ಪಡೆದಿರುತ್ತಾರೆ.

ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ 2 ಸಮಗ್ರ ತಂಡ ಪ್ರಶಸ್ತಿ

ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ 2 ಸಮಗ್ರ ತಂಡ ಪ್ರಶಸ್ತಿ

Wednesday, September 17th, 2014

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ವಿದ್ಯಾಭಾರತಿ ಕರ್ನಾಟಕ ಮತ್ತು ಶಾರದಾ ವಿದ್ಯಾಪೀಠ ಕಲ್ಬುರ್ಗಿ ಗುಲ್ಬಾರ್ಗ ವಿಶ್ವ ವಿದ್ಯಾನಿಲಯ ಇಲ್ಲಿನ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಪುತ್ತೂರು ಇಲ್ಲಿನ ವಿದ್ಯಾರ್ಥಿಗಳು ಪ್ರೌಢ ಶಾಲಾ ವಿಭಾಗದ ಬಾಲಕಿಯರ ಮತ್ತು ಬಾಲಕರ ಸಮಗ್ರ ತಂಡ ಪ್ರಶಸ್ತಿ ಪಡೆದುಕೊಂಡಿದ್ದು ದಿನಾಂಕ 10-10-2014  ರಂದು ತಮಿಳುನಾಡಿನಲ್ಲಿ ನಡೆಯುವ ದಕ್ಷಿಣ ಕ್ಷೇತ್ರೀಯ ಕ್ರೀಡಾಕೂಟಕ್ಕೆ 20 ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.

ನವದಂಪತಿ ಸಮಾವೇಶ

ನವದಂಪತಿ ಸಮಾವೇಶ

Tuesday, September 16th, 2014

ಕುಟುಂಬವು ಭಾರತೀಯ ಸಂಸ್ಕೃತಿಯ ಜೀವಾಳ. ಇಲ್ಲಿ ಯಾರೂ ಮೇಲಲ್ಲ, ಕೀಳಲ್ಲ,. ಪ್ರತಿಯೊಬ್ಬರೂ ತಮ್ಮ ಕರ್ತವ್ಯ ಮಾಡುವ ಬದಲು ಧರ್ಮದಾಚರಣೆ ಅರಿವನ್ನು ಕಂಡುಕೊಳ್ಳುವುದು ಮುಖ್ಯ. ಆಗಲೇ ಸಾರ್ಥಕ್ಯ ಬದುಕು ಸಾಧ್ಯ ಎಂದು ಕುಟುಂಬ ಪ್ರಭೋಧಿನಿಯ ಅಖಿಲ ಭಾರತ ಪ್ರಮುಖರಾದ ಸು.ರಾಮಣ್ಣ ಇವರು ನುಡಿದರು. ವಿವೇಕಾನಂದ ವಿದ್ಯಾಸಂಸ್ಥೆ ತೆಂಕಿಲದಲ್ಲಿ ನಡೆದ ನವದಂಪತಿಗಳ ಸಮಾವೇಶದಲ್ಲಿ ಬೌದ್ಧಿಕ್ ನೀಡಿದ ಇವರು ಭಾಗವಹಿಸಿದ ಎಲ್ಲಾ ದಂಪತಿಗಳಿಗೆ ಜಗತ್ತಿಗೇ ಮಾದರಿಯಾದ ಭಾರತೀಯ ಕೌಟುಂಬಿಕ ಪರಂಪರೆಯ ಮಹತ್ವವನ್ನು ತಿಳಿಸಿದರು. ಅನಂತರ ಪುರುಷರಿಗೆ ಮತ್ತು ಮಹಿಳೆಯರಿಗೆ ನಡೆದ ಪ್ರತ್ಯೇಕ […]

ದಸರಾ ಕ್ರೀಡಾಕೂಟ - ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

ದಸರಾ ಕ್ರೀಡಾಕೂಟ – ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

Monday, September 15th, 2014

ದಸರಾ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಸಮಗ್ರ ತಂಡ ಪ್ರಶಸ್ತಿ ಬಂದಿರುತ್ತದೆ. ಖೋ-ಖೋ ದಲ್ಲಿ ಪ್ರಥಮ, ವಾಲಿಬಾಲ್ ಪ್ರಥಮ. ಇವರಿಗೆ ಶ್ರೀ ದಾಮೋದರ್ ಬೆಟ್ಟಂಪಾಡಿ , ಶ್ರೀಮತಿ ಹರಿಣಾಕ್ಷಿ ಮತ್ತು ಕೃಷ್ಣ ಪ್ರಸಾದ್ ಬೆಟ್ಟಂಪಾಡಿ ತರಬೇತಿ ನೀಡಿರುತ್ತಾರೆ.

ಕರಾಟೆ - ಪ್ರಥಮ ಸ್ಥಾನ

ಕರಾಟೆ – ಪ್ರಥಮ ಸ್ಥಾನ

Saturday, September 13th, 2014

ದ.ಕ.ಜಿ.ಪಂ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಪುತ್ತೂರು ತಾಲೂಕು ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ 17 ವರ್ಷದ ಒಳಗಿನ 41-46 ಕೆ.ಜಿ ವಿಭಾಗದ ಬಾಲಕರ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶ್ರಮಿತ್.ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಯೋಗಾಸನ ಜಿಲ್ಲಾಮಟ್ಟಕ್ಕೆ ಆಯ್ಕೆ

ಯೋಗಾಸನ ಜಿಲ್ಲಾಮಟ್ಟಕ್ಕೆ ಆಯ್ಕೆ

Thursday, September 11th, 2014

ದ.ಕ.ಜಿ.ಪ. ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಕಾಣಿಯೂರು, ಪ್ರಗತಿ ವಿದ್ಯಾಸಂಸ್ಥೆ(ರಿ) ಕಾಣಿಯೂರು ಇದರ ಆಶ್ರಯದಲ್ಲಿ 2-9-2014 ರಂದು ಪ್ರಗತಿ ವಿದ್ಯಾಸಂಸ್ಥೆ (ರಿ). ಕಾಣಿಯೂರು ಇಲ್ಲಿ ನಡೆದ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10 ನೇ ತರಗತಿ ವಿದ್ಯಾರ್ಥಿ ರಾಕೇಶ್ ಪಂಚಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರತಿಭಾ ಕಾರಂಜಿಯ ತಾಲೂಕು ಮಟ್ಟಕ್ಕೆ ಆಯ್ಕೆಯಾದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು

ಪ್ರತಿಭಾ ಕಾರಂಜಿಯ ತಾಲೂಕು ಮಟ್ಟಕ್ಕೆ ಆಯ್ಕೆಯಾದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು

Saturday, September 6th, 2014

ದಿನಾಂಕ 01-03-2014 ರಂದು ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಮಗ್ರ ತಂಡ ಪ್ರಶಸ್ತಿಯನ್ನು ಗಳಿಸಿರುತ್ತಾರೆ. ಕಿರಿಯ ಪ್ರಾಥಮಿಕ ವಿಭಾಗ – ಇಂಗ್ಲಿಷ್ ಕಂಠಪಾಠ – ಆದಿತ್ಯನಾರಾಯಣ – ತೃತೀಯ ಹಿಂದಿ ಕಂಠಪಾಠ – ಶ್ರೀಶ – ತೃತೀಯ ಛದ್ಮವೇಷ – ಅಮಲ್ ಜಿತ್ – ಪ್ರಥಮ ಚಿತ್ರಕಲೆ – ಮುಖೇಶ್ ಕೃಷ್ಣ – ಪ್ರಥಮ ಕಥೆ ಹೇಳುವುದು – ಅಭಿಲಾಷ – […]

ವಿದ್ಯಾಭಾರತಿ ಜಿಲ್ಲಾಮಟ್ಟದ ಕ್ರೀಡಾಕೂಟ-ವಿವೇಕಾನಂದ ಕನ್ನಡ ಮಾಧ್ಯಮಕ್ಕೆ 3 ಸಮಗ್ರ ತಂಡ ಪ್ರಶಸ್ತಿ

ವಿದ್ಯಾಭಾರತಿ ಜಿಲ್ಲಾಮಟ್ಟದ ಕ್ರೀಡಾಕೂಟ-ವಿವೇಕಾನಂದ ಕನ್ನಡ ಮಾಧ್ಯಮಕ್ಕೆ 3 ಸಮಗ್ರ ತಂಡ ಪ್ರಶಸ್ತಿ

Thursday, September 4th, 2014

ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆ ಇದರ 2014-15 ರ ಜಿಲ್ಲಾ ಮಟ್ಟದ ಕ್ರೀಡಾಕೂಟವು ವಿವೇಕಾನಂದ ವಿದ್ಯಾಸಂಸ್ಥೆಗಳು ತೆಂಕಿಲ ಇದರ ಕ್ರೀಡಾಂಗಣದಲ್ಲಿ ನಡೆದಿದ್ದು ಇದರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯು 3 ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಪ್ರಶಸ್ತಿ ಪಡೆದ ತಂಡಗಳು ಕಿಶೋರ ವರ್ಗದ ಬಾಲಕರು, ಬಾಲಕಿಯರು, ಬಾಲವರ್ಗದ ಬಾಲಕಿಯರು. ಮತ್ತು ಕಿಶೋರ ವರ್ಗದ ಬಾಲಕರಲ್ಲಿ ಗುರುಪ್ರಸಾದ್ ಮತ್ತು ಯತೀಶ್ ಬಾಲಕಿಯರ ವಿಭಾಗದಲ್ಲಿ ಸೌಮ್ಯಶ್ರೀ ಮತ್ತು ಬಾಲವರ್ಗದ ಬಾಲಕಿಯರ ಶ್ರದ್ಧಾ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದಿದ್ದಾರೆ.

ತೆಂಕಿಲ ವಿವೇಕಾನಂದಲ್ಲಿ ಶ್ಯಾಮ ಪ್ರಸಾದ ಶಾಸ್ತ್ರಿಯವರಿಗೆ ಶ್ರದ್ಧಾಂಜಲಿ

ತೆಂಕಿಲ ವಿವೇಕಾನಂದಲ್ಲಿ ಶ್ಯಾಮ ಪ್ರಸಾದ ಶಾಸ್ತ್ರಿಯವರಿಗೆ ಶ್ರದ್ಧಾಂಜಲಿ

Wednesday, September 3rd, 2014

ಪುತ್ತೂರು: ಹುಟ್ಟುವಾಗ ಉಸಿರು ಇರುತ್ತದೆ, ಹೆಸರು ಇರುವುದಿಲ್ಲ. ಸತ್ತಾಗ ಹೆಸರು ಉಳಿಯುತ್ತದೆ ಉಸಿರು ಇರುವುದಿಲ್ಲ. ಸಮಾಜದಲ್ಲಿ ಶಾಶ್ವತ ಹೆಸರನ್ನು ಉಳಿಸಿ ಎಲ್ಲರ ಪ್ರೀತಿಗೆ ಪಾತ್ರರಾಗುತ್ತಾರೆ. ವಿವೇಕಾನಂದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ಯಾಮ ಪ್ರಸಾದ ಶಾಸ್ತ್ರಿ ಇವರು ಈ ರೀತಿಯ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ನೆನಪಿಸುತ್ತಾ ವಿವೇಕಾನಂದ ಶಾಲಾ ಆಡಳಿತ ಮಂಡಳಿ ಸಂಚಾಲಕ ರವೀಂದ್ರ ಪಿ.ರವರು ಈ ಮೇಲಿನಂತೆ ನುಡಿದರು. ಸೆ. 1 ರಂದು ತೆಂಕಿಲ ವಿವೇಕಾನಂದ ಶಾಲಾ […]

ನೃತ್ಯ ವೈವಿಧ್ಯ

ನೃತ್ಯ ವೈವಿಧ್ಯ

Wednesday, September 3rd, 2014

ದಿನಾಂಕ 29-08-2014 ರಂದು ಗಣೇಶೋತ್ಸವದ ಪ್ರಯುಕ್ತ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ನಡೆದ ನೃತ್ಯ ವೈವಿಧ್ಯ.

ರೋಟರ್‍ಯಾಕ್ಟ್ ಪದಗ್ರಹಣ

ರೋಟರ್‍ಯಾಕ್ಟ್ ಪದಗ್ರಹಣ

Wednesday, September 3rd, 2014

ದಿನಾಂಕ 26-08-2014 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ರೋಟರ್‍ಯಾಕ್ಟ್ ಕ್ಲಬ್ ಪೂರ್ವದ ಪ್ರಾಯೋಜಿತ ‘ರೋಟರ್‍ಯಾಕ್ಟ್ ಕ್ಲಬ್ ಪದಗ್ರಹಣ’ ಸಮಾರಂಭ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟೇರಿಯನ್ ಶ್ರೀಯುತ ಡಾ|| ಸೂರ್ಯನಾರಾಯಣ ಭಟ್ ಇವರು ಇಂಟರ್‍ಯಾಕ್ಟ್ ಕ್ಲಬ್‌ನ ಪರಿಚಯ ಮತ್ತು ಧೈಯೋದ್ದೇಶಗಳನ್ನು ತಿಳಿಸಿದರು. ರೋಟೇರಿಯನ್ ಶ್ರೀ ಜಯರಾಮ ಭಟ್ ಹಾಗೂ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಆಶಾ ಬೆಳ್ಳಾರೆ ಮತ್ತು ಆಂಗ್ಲಮಾಧ್ಯಮ ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಮೋಹಿನಿ ಕಾರ್ಯಕ್ರಮಲ್ಲಿ ಉಪಸ್ಥಿತರಿದ್ದರು. ಇಂಟರ್‍ಯಾಕ್ಟ್ ಕ್ಲಬ್‌ನ […]

ರಕ್ಷಾಬಂಧನ ಉತ್ಸವ

ರಕ್ಷಾಬಂಧನ ಉತ್ಸವ

Monday, August 25th, 2014

ದಿನಾಂಕ 11-08-2014 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಒಂದನೇ ತರಗತಿಯ ಮಕ್ಕಳು ರಕ್ಷಾಬಂಧನದ ಪ್ರಯುಕ್ತ ಪುತ್ತೂರಿನ ಪ್ರಮುಖ ಕಚೇರಿಗಳಾದ ಪುತ್ತೂರು ಪುರಸಭೆ, ಪೋಲೀಸ್ ಸ್ಟೇಷನ್, ಅಂಚೆ ಕಚೇರಿ, ಕೆನರಾ ಬ್ಯಾಂಕ್‌ಗೆ ತೆರಳಿ ಅಲ್ಲಿನ ಸಿಬ್ಬಂದಿ ವರ್ಗದವರಿಗೆ ರಕ್ಷೆ ಕಟ್ಟಿ ಆಶಿರ್ವಾದ ಪಡೆದುಕೊಂಡರು. ಹೋದ ಎಲಾ ಕಚೇರಿಗಳಲ್ಲೂ ಸಿಬ್ಬಂದಿ ವರ್ಗದವರು ಉತ್ತಮವಾಗಿ ಸ್ಪಂದಿಸಿ ವಿದ್ಯಾರ್ಥಿಗಳ ಮನಸ್ಸನ್ನು ಸಂತಸಗೊಳಿಸಿದರು. ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಕರಾದ ಅಜಿತ್, ಹರಿಪ್ರಸಾದ್ ಮತ್ತು ಶಿಕ್ಷಕಿಯರಾದ ಶ್ರೀಮತಿ ವೀಣಾಸರಸ್ವತಿ, ಶ್ರೀಮತಿ ಭವ್ಯ ಮತ್ತು ಕು.ಲಾವಣ್ಯ ಉಪಸ್ಥಿತರಿದ್ದರು.

ಇನ್‌ಸ್ಪೈರ್ ಅವಾರ್ಡ್ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ

ಇನ್‌ಸ್ಪೈರ್ ಅವಾರ್ಡ್ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ

Thursday, August 21st, 2014

Solar Reflected water heater ದಿನಾಂಕ 4-8-2014 ಹಾಗೂ 5-8-2014 ರಂದು ಎಂ.ಜಿ.ಸಿ ಪ್ರೌಢಶಾಲೆ, ಬೋಂದೆಲ್ ಇಲ್ಲಿ ನಡೆದ ಇನ್‌ಸ್ಪೈರ್ ಅವಾರ್ಡ್ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಮಾದರಿ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಶ್ವಿನಿ .ಯು. ನಾಯಕ್ ಇವರು ‘Solar Reflected water heater’ ಎಂಬ ಮಾದರಿಯನ್ನು ಮಂಡಿಸಿದ್ದು ಇದನ್ನು ದೊಡ್ಡ ದೊಡ್ಡ ಇಂಡಸ್ಟ್ರೀಗಳಲ್ಲಿ ದೊಡ್ಡ ಪ್ರಮಾಣದ ವ್ಯಾಸವಿರುವ ಡಿಶ್ ಬಳಸಿ ಮಾಡಲಾಗುತ್ತದೆ. ಡಿಶ್‌ಗಳು ಸೋಲಾರ್ ಟ್ರಾಕರ್ ವಿಧಾನದಿಂದ ಸೂರ್ಯನ ದಿಕ್ಕಿಗನುಗುಣವಾಗಿ ತಿರುಗುತ್ತದೆ.ಸಣ್ಣ ಪ್ರಮಾಣದಲ್ಲಿ […]

ರಕ್ಷಾಬಂಧನ ಕಾರ್ಯಕ್ರಮ

ರಕ್ಷಾಬಂಧನ ಕಾರ್ಯಕ್ರಮ

Wednesday, August 13th, 2014

ದಿನಾಂಕ 11-08-2014 ರ ಸೋಮವಾರದಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ರಕ್ಷಾಬಂಧನ ಕಾರ್ಯಕ್ರಮ ನಡೆಸಲಾಯಿತು. ಅತಿಥಿಗಳಾಗಿ ಆಗಮಿಸಿದ ಶ್ರೀರಾಮ ಶಿಶುಮಂದಿರ, ಕಲ್ಲಡ್ಕ ಇಲ್ಲಿಯ ಗಂಗಾಮಾತಾಜಿ ಇವರು ವಿವಿಧ ಮೌಲ್ಯಯುತವಾದ ಕಥೆಗಳ ಮೂಲಕ ರಕ್ಷಾಬಂಧನ ಆಚರಣೆಯ ಅರ್ಥ, ಮಹತ್ವದ ಕುರಿತು ತಿಳಿಸಿಕೊಟ್ಟರು. ವೇದಿಕೆಯಲ್ಲಿ ಶ್ರೀಮತಿ ಸೀಮಾ ಕೃಷ್ಣ ಪ್ರಸಾದ್ ಮತ್ತು ಶ್ರೀಮತಿ ನಳಿನಿ ಮಾತಾಜಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು ಪ್ರಾಲ್ಗೊಂಡರು, ಶ್ರೀಮತಿ ಸ್ವಾತಿ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin