ವಾರ್ಷಿಕ ಕ್ರೀಡಾಕೂಟ

ವಾರ್ಷಿಕ ಕ್ರೀಡಾಕೂಟ

Wednesday, December 2nd, 2015

ದಿನಾಂಕ 1-12-2015 ನೇ ಮಂಗಳವಾರದಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ- 2015 ನಡೆಯಿತು. ಕಾರ್ಯಕ್ರಮವನ್ನು ಬಲೂನ್ ಹಾರಿಸುವುದರ ಮೂಲಕ ಉದ್ಫಾಟಿಸಿದ ಪುತ್ತೂರುದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀ ಸುಂದರಗೌಡ ಇವರು ಸಂಸ್ಥೆಯ ಕ್ರೀಡಾಪ್ರತಿಭೆಗಳ ಕೀರ್ತಿ ಎತ್ತರೆತ್ತರಕ್ಕೆ ಹಾರುತ್ತಿರಲಿ ಸಂಸ್ಥೆಯ ಹೆಸರನ್ನು ಬೆಳಗುವ ಕ್ರೀಡಾಪ್ರತಿಭೆಗಳಿಗೆ ಈ ಕ್ರೀಡಾಂಗಣ ಅವಕಾಶ ಮಾಡಿಕೊಡಲಿ. ಉತ್ತಮ ಕಾರ್ಯಕ್ರಮವನ್ನು ಸಂಘಟಿಸಿದ ಸಂಸ್ಥೆ ಅಭಿನಂದನಾರ್ಹ ಎಂದು ನುಡಿದರು. ಕಾರ್ಯಕ್ರಮದ ಆರಂಭದಲ್ಲಿ ಬ್ಯಾಂಡ್ ಸೆಟ್, ಸ್ಕೌಟ್ಸ್‌ಗೈಡ್‌ತಂಡ, ರಾಷ್ಟ್ರ- ರಾಜ್ಯಮಟ್ಟದ ಕ್ರೀಡಾಪಟುಗಳೊಂದಿಗೆ ಶಾಲಾ ವಿದ್ಯಾರ್ಥಿಗಳ […]

ನಿರಂತರ ಕಲಿಕೆ ವಿಕಾಸದ ಹಾದಿಯನ್ನು ತೆರೆಯುತ್ತದೆ- ಶಾಲಿನಿ ಶೆಟ್ಟಿ

ನಿರಂತರ ಕಲಿಕೆ ವಿಕಾಸದ ಹಾದಿಯನ್ನು ತೆರೆಯುತ್ತದೆ- ಶಾಲಿನಿ ಶೆಟ್ಟಿ

Thursday, November 26th, 2015

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ 2015-16 ನೇ ಸಾಲಿನಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಗಳಿಸಿದ ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಶಾಲಿನಿ ಶೆಟ್ಟಿ ಇವರು ನೆರವೇರಿಸಿ ಪ್ರತಿಭೆಗಳಿಗೆ ಶುಭ ಹಾರೈಸಿ ನಿರಂತರವಾದ ಕಲಿಕೆ ವಿಕಾಸದ ಹಾದಿಯನ್ನು ತೆರೆಯುವುದರ ಮೂಲಕ ಉತ್ತಮ ಭವಿಷ್ಯ ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಸ್ಪರ್ಧೆಗಳಲ್ಲಿ ನಿರಂತರ ಭಾಗವಹಿಸಿ ಎಂದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರಿಯದರ್ಶಿನಿ […]

ವಾರ್ಷಿಕ ಕ್ರೀಡಾಕೂಟದ ಆಮಂತ್ರಣ

ವಾರ್ಷಿಕ ಕ್ರೀಡಾಕೂಟದ ಆಮಂತ್ರಣ

Thursday, November 26th, 2015
ಯುಕ್ತಿಕಾ ರಾಜ್ಯಮಟ್ಟಕ್ಕೆ

ಯುಕ್ತಿಕಾ ರಾಜ್ಯಮಟ್ಟಕ್ಕೆ

Saturday, November 21st, 2015

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದಿರೆ ಇದರ ಸಹಭಾಗಿತ್ವದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮೂಡಬಿದಿರೆಯಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಯುಕ್ತಿಕಾ 14 ರ ವಯೋಮಾನದ ವಿಭಾಗದ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಅನಂತಾಡಿಯ ಗಣೇಶ್ ಪೂಜಾರಿ ಮತ್ತು ಯೋಗಿನಿಯವರ ಪುತ್ರಿ.

ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

Friday, November 20th, 2015

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದಿರೆ ಇದರ ಸಹಭಾಗಿತ್ವದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮೂಡಬಿದಿರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿವೇಕಾನಂದಕನ್ನಡ ಮಾಧ್ಯಮ ಶಾಲೆಯ 17 ರ ವಯೋಮಾನದ ವಿಭಾಗದಲ್ಲಿ ರಕ್ಷಿತಾ ಐ – 3000 ಮೀ ನಡಿಗೆ (ಪ್ರಥಮ) ಇವರು ಅಜೇಯನಗರದ ಈಶ್ವರಗೌಡ ಮತ್ತು ದೇವಕಿಯವರ ಪುತ್ರಿ, ಶ್ರದ್ಧಾ – 3000 ಮೀ ನಡಿಗೆ(ದ್ವಿತೀಯ)ಇವರು ಅಜೇಯನಗರ ಮನೋಜ್‌ಕುಮಾರ್ ಮತ್ತು ಅನುರಾಧರವರ ಪುತ್ರಿ, ಪ್ರಜ್ವಲ್- 100 ಮೀ(ದ್ವಿತೀಯ), 200 ಮೀ (ತೃತೀಯ) ಇವರು ಬಲ್ನಾಡುಜನಾರ್ಧನ ಮತ್ತು ಕುಸುಮವತಿಯವರ ಪುತ್ರ, […]

ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ - ಭಾವಗೀತೆ ದ್ವಿತೀಯ

ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ – ಭಾವಗೀತೆ ದ್ವಿತೀಯ

Wednesday, November 18th, 2015

ಸುಬ್ರಹ್ಮಣ್ಯದ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪ್ರೌಢಶಾಲಾ ಪ್ರತಿಭಾಕಾರಂಜಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಕು. ಕೀರ್ತಿ ಕುಡ್ವ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕೂರ್ನಡ್ಕ ವಾಸುದೇವ ಕುಡ್ವ ಮತ್ತು ಶ್ರೀಮತಿ ವಂದನಾ ಕುಡ್ವ ದಂಪತಿ ಪುತ್ರಿ.

ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಶಾಲೆಗೆ 2 ಪ್ರಶಸ್ತಿ

ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಶಾಲೆಗೆ 2 ಪ್ರಶಸ್ತಿ

Tuesday, November 17th, 2015

ಮಂಗಳೂರು ವಿಶ್ವವಿದ್ಯಾನಿಲಯ(ಡಾ|| ಎನ್.ಜಿ. ಪಾವಂಜೆ ಲಲಿತಾ ಕಲಾ ಪೀಠ) ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು ಇದರ ಪ್ರಾಯೋಜಕತ್ವದಲ್ಲಿ ನಡೆದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಅಗಮ್ಯ – ಕಿರಿಯ ಪ್ರಾಥಮಿಕ ವಿಭಾಗದಲ್ಲಿ (ಪ್ರಥಮ) ಇವರು ಬನ್ನೂರು ನೆಕ್ಕಿಲ ಶ್ರೀ ಗಣೇಶ್ ಆಚಾರ್ಯ ಮತ್ತು ಮಂಜುಳ ದಂಪತಿಗಳ ಪುತ್ರಿ, ಮತ್ತು ಪ್ರೌಢಶಾಲಾ ವಿಭಾಗದಲ್ಲಿ ರಾಮ್ ಪ್ರಸಾದ್ (ದ್ವಿತೀಯ) ಇವರು ಪುತ್ತೂರು ನಿವಾಸಿ ಮಲ್ಲೇಶ್ ಮತ್ತು ಅನುರಾಧ ದಂಪತಿಗಳ ಪುತ್ರ. ಇವರಿಗೆ ಶಾಲಾ ಚಿತ್ರಕಲಾ […]

ರಾಜ್ಯಮಟ್ಟದ ಕರಾಟೆಯಲ್ಲಿ ಸಾತ್ವಿಕ್‌ಗೆ 2 ಚಿನ್ನ 1 ಕಂಚು

ರಾಜ್ಯಮಟ್ಟದ ಕರಾಟೆಯಲ್ಲಿ ಸಾತ್ವಿಕ್‌ಗೆ 2 ಚಿನ್ನ 1 ಕಂಚು

Monday, November 9th, 2015

ದಿನಾಂಕ 7-11-2015 ರಿಂದ 8-11-2015 ರವರೆಗೆ ಸುರತ್ಕಲ್‌ನ ರಾಮಾನುಗ್ರಹ ಸಭಾಭವನದಲ್ಲಿ ನಡೆದ 26 ನೇ ರಾಜ್ಯಮಟ್ಟದ ಇಂಟರ್‌ ದೋಜೊ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8 ನೇ ತರಗತಿ ವಿದ್ಯಾರ್ಥಿ ಸಾತ್ವಿಕ್ ಶರ್ಮ 2 ಚಿನ್ನ 1 ಕಂಚು ಪಡೆದಿರುತ್ತಾನೆ. ಬ್ರೌನ್ ಬೆಲ್ಟ್ 14 ರ ವಯೋಮಾನದ ಟೀಮ್‌ಕಟಾ ಪ್ರಥಮ, ವೈಯಕ್ತಿಕ ಕುಮಿಟೆ 30-35 ಕೆ.ಜಿ ವಿಭಾಗದಲ್ಲಿ ಪ್ರಥಮ, ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಕಂಚಿನ ಪದಕ ಪಡೆದಿರುತ್ತಾನೆ. ಈತ ಇನ್ಸ್‌ಸ್ಟಿಟ್ಯೂಟ್ ಆಫ್ ಬುಡೋಕಾನ್‌ ಕರಾಟೆ ಎಲೈಡ್‌ ಆರ್ಟಸ್ ಪುತ್ತೂರಿನ ಕೋಚ್‌ಎಮ್. ಸುರೇಶ್‌ರವರಲ್ಲಿ ತರಬೇತಿ […]

ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ 16 ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ

ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ 16 ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ

Saturday, November 7th, 2015

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಪುತ್ತೂರು ಹಾಗೂ ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ 2015-16 ನೇ ಸಾಲಿನ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ. 14 ರ ವಯೋಮಾನದ 8 ನೇತರಗತಿಯ ಪ್ರೌಢಶಾಲಾ ಬಾಲಕಿಯರ ವಿಭಾಗದ ತಂಡ ಪ್ರಶಸ್ತಿಯೊಂದಿಗೆ: ದೀಕ್ಷಾ -80 ಮೀ ಹರ್ಡಲ್ಸ್, 400 ಮೀ ,ರಿಲೇಯಲ್ಲಿ (ಪ್ರಥಮ) ಇವರು ಪೆರಿಗೇರಿಯ ಕಮಲಾಕ್ಷ ಮತ್ತು […]

ಶಾಂತಿವನ ಟ್ರಸ್ಟ್ ಪುಸ್ತಕಾಧಾರಿತ ಸ್ಪರ್ಧೆಗಳಲ್ಲಿ ಶಾಲೆಗೆ ಹಲವು ಪ್ರಶಸ್ತಿ

ಶಾಂತಿವನ ಟ್ರಸ್ಟ್ ಪುಸ್ತಕಾಧಾರಿತ ಸ್ಪರ್ಧೆಗಳಲ್ಲಿ ಶಾಲೆಗೆ ಹಲವು ಪ್ರಶಸ್ತಿ

Saturday, November 7th, 2015

’ಶಾಂತಿವನಟ್ರಸ್ಟ್’ಇದರ ಆಶ್ರಯದಲ್ಲಿ ನಡೆದ ’ಜ್ಞಾನಸಿಂಧು’ ಮತ್ತು’ಜ್ಞಾನ ಬಂಧು’ ಪುಸ್ತಕಾಧಾರಿತವಾಗಿ ವಿವಿಧ ಸ್ಪರ್ಧೆಗಳನ್ನು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ಇದರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಗಳಿಸಿರುತ್ತಾರೆ. ಪ್ರಾಥಮಿಕ ವಿಭಾಗದ ಸ್ಪರ್ಧೆಗಳಲ್ಲಿ ಚಿತ್ರಕಲೆ- ಗೌತಮ್.ಎಸ್ (ದ್ವಿತೀಯ) ಇವರು ನೆಹರೂನಗರ ನಿವಾಸಿಯಾದ ಗಣೇಶ್ ಪೂಜಾರಿ ಮತ್ತು ಮಮತಾ ದಂಪತಿಗಳ ಪುತ್ರ, ಭಾಷಣ – ಪೃಥಾ(ದ್ವಿತೀಯ) ಇವರು ದಕ್ಷ ಕನ್‌ಸ್ಟ್ರಕ್ಷನ್‌ನ ಮಾಲಕರಾದ ರವೀಂದ್ರ ಪಿ. ಮತ್ತು ಉಷಾ ದಂಪತಿಗಳ ಪುತ್ರಿ, ಶ್ಲೋಕ ಕಂಠಪಾಠ – ಸಂಸ್ಕೃತಿ […]

ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆ

ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆ

Tuesday, November 3rd, 2015

2015 ನೇ ಸಾಲಿನಲ್ಲಿ ರಾಷ್ಟ್ರಪತಿ ಪುರಸ್ಕಾರ ಪರೀಕ್ಷಾ ಶಿಬಿರವು ದಾವಣಗೆರೆಯ ಕೊಂಡಜ್ಜಿ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರದಲ್ಲಿ ಜರುಗಿದ್ದು ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾಗಿರುವ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಂಕಿತಾ ಎ.ಆರ್, ಅಂಕಿತಾ ವಿ.ಕೆ, ಅಶ್ವಿನಿ ಯು. ನಾಯಕ್, ಶ್ವೇತಾ.ಎಸ್. ಭಟ್, ವರಶ್ರೀ.ಕೆ.

ವಿಜ್ಞಾನ ಮಾದರಿ ಪ್ರದರ್ಶನ - ದ್ವಿತೀಯ

ವಿಜ್ಞಾನ ಮಾದರಿ ಪ್ರದರ್ಶನ – ದ್ವಿತೀಯ

Monday, October 19th, 2015

ವಿದ್ಯಾಭಾರತಿ ಕರ್ನಾಟಕ ಇದರ ಆಶ್ರಯದಲ್ಲಿ ವಿಕಾಸ ಪ್ರೌಢಶಾಲೆ ಶಿವಮೊಗ್ಗ ಇಲ್ಲಿ ನಡೆದ ಪ್ರಾಂತೀಯ ಮಟ್ಟದ ಜ್ಞಾನ ವಿಜ್ಞಾನ ಮೇಳ ಸ್ಪರ್ಧೆಯ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿ ಅಬಕಾರಿ ಉಪನೀರಿಕ್ಷಕ ವಿಶ್ವನಾಥ ಪಟ್ಟೆ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಶಿಕ್ಷಕಿ ರೇವತಿ ದಂಪತಿ ಪುತ್ರ ಆಶ್ರಯ್ ಪಿ.ವಿ. ಮತ್ತು ಬಲ್ನಾಡು ಗಿರಿಯಪ್ಪ ಬಿ. ಮತ್ತು ಲಲಿತಾ ದಂಪತಿಗಳ ಪುತ್ರ ಧನುಷ್.ಬಿ ಇವರು ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ ಎಂದು ಶಾಲಾ […]

ಪ್ರೌಢಶಾಲಾ ಪ್ರತಿಭಾಕಾರಂಜಿ - ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

ಪ್ರೌಢಶಾಲಾ ಪ್ರತಿಭಾಕಾರಂಜಿ – ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

Friday, October 9th, 2015

ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಮತ್ತು ಸರಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಬೆಳಿಯೂರುಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ವೃತ್ತ ಮಟ್ಟದ ಪ್ರೌಢಶಾಲಾ ಪ್ರತಿಭಾಕಾರಂಜಿ- 2015-16 ರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಗಳಿಸಿದ್ದಾರೆ. ಸ್ಪರ್ಧಾ ವಿಜೇತರು: ಅಶ್ವಿನಿ.ಯು.ನಾಯಕ್ -ಕನ್ನಡ ಭಾಷಣ(ಪ್ರಥಮ), ಆಶಿಕಾ ರೈ.ಬಿ.ಜಿ- ತುಳು ಭಾಷಣ(ಪ್ರಥಮ), ಮಿಥುನ್‌ರಾಜ್- ಯೋಗಾಸನ(ದ್ವಿತೀಯ), ಅರ್ಪಿತಾ ಸಿ.ಪಿ – ಜನಪದಗೀತೆ(ದ್ವಿತೀಯ), ಕೀರ್ತಿಕುಡ್ವ – ಭಾವಗೀತೆ(ಪ್ರಥಮ), […]

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ -’ಸುಜ್ಞಾನ-ಓದುವ ಯಜ್ಞ’

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ -’ಸುಜ್ಞಾನ-ಓದುವ ಯಜ್ಞ’

Friday, October 9th, 2015

ದೇಶ ಸುತ್ತಿ ನೋಡು ಕೋಶ ಓದಿ ನೋಡು ಎನ್ನುವುದು ನಾಣ್ಣುಡಿ. ವಿವೇಕಾನಂದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಕೋಶ ಓದುವುದರ ಮೂಲಕ ದೇಶ ವಿದೇಶಗಳ ಪರಿಸರ ವಿಶೇಷಗಳ ಅರಿಯುವಿಕೆಗೆ ಸುಜ್ಞಾನ -ಓದುವ ಯಜ್ಞ ಉತ್ತಮ ವೇದಿಕೆ ಕಲ್ಪಿಸಿತು. ಅಕ್ಟೋಬರ್ 8 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಸುಜ್ಞಾನ – ಓದುವ ಯಜ್ಞ ನಡೆಯಿತು. ಮಕ್ಕಳಲ್ಲಿ ವಾಚನಾಸಕ್ತಿ ಬೆಳೆಸುವ ಉದ್ದೇಶಕ್ಕಾಗಿಯೇ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಗುವಿನ ಜ್ಞಾನದ ರಚನೆಯಲ್ಲಾಗುವ ಧನಾತ್ಮಕ ಬೆಳವಣಿಗೆಗೆ ವಾಚನಾಸಕ್ತಿ ಪ್ರಮುಖ ಸಾಧನವೆಂದು ಕೊಂಡು ಶಿಕ್ಷಕ – […]

18 ರಂದು ನವದಂಪತಿ ಸಮಾವೇಶ

18 ರಂದು ನವದಂಪತಿ ಸಮಾವೇಶ

Thursday, October 8th, 2015
ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ - ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಸಮಗ್ರ ಪಶಸ್ತಿ

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ – ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಸಮಗ್ರ ಪಶಸ್ತಿ

Wednesday, October 7th, 2015

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಪುತ್ತೂರು ಮತ್ತು ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಕೆಮ್ಮಿಂಜೆ ಇದರ ಸಹಯೋಗದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯಲ್ಲಿ ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಪಡೆದುಕೊಂಡಿರುತ್ತಾರೆ. ಕಿರಿಯ ಪ್ರಾಥಮಿಕ ವಿಭಾಗ: ಲಘು ಸಂಗೀತ -ಆಕಾಂಕ್ಷ ಪಾರ್ವತಿ (ಪ್ರಥಮ), ಚಿತ್ರಕಲೆ – ಅಗಮ್ಯ (ಪ್ರಥಮ), ಕೋಲಾಟ – ಪ್ರಾಪ್ತಿ ಮತ್ತು ತಂಡ(ಪ್ರಥಮ), ಹಿಂದಿ ಕಂಠಪಾಠ […]

ಗುರುವಂದನೆ

ಗುರುವಂದನೆ

Wednesday, October 7th, 2015

ದಿನಾಂಕ 6-10-2015 ರಂದು ಸರಕಾರಿ ಜೂನಿಯರ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿದ್ದು ಈಗ ನಿವೃತ್ತ ಶಿಕ್ಷಕರಾಗಿರುವ ಶ್ರೀಯುತ ಜನಾರ್ದನ ಪೂಜಾರಿಯವರಿಗೆ ಅವರ ವಸತಿಗೆ ತೆರಳಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ 10 ನೇ ತರಗತಿ ವಿದ್ಯಾರ್ಥಿ ವೃಂದ ಮತ್ತು ಶಿಕ್ಷಕ ಬಳಗ ಗುರುವಂದನೆಯನ್ನು ಸಲ್ಲಿಸಿದರು. ಗುರುವಂದನೆ ಸ್ವೀಕರಿಸಿದ ಶ್ರೀಯುತರು ಮಕ್ಕಳು ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿ ವಾರ್ತಾಪತ್ರಿಕೆ ಓದಿ ಪ್ರಚಲಿತ ವಿಷಯದ ಜ್ಞಾನ ಸಂಪನ್ನತೆಯನ್ನು ಪಡೆಯಿರಿ, ಕಲಿಕೆಯನ್ನು ವೇಳಾಪಟ್ಟಿಯೊಂದಿಗೆ ಜೋಡಿಸಿಕೊಂಡಾಗ ಕಲಿಕಾ ಫಲಿತಾಂಶ ಉತ್ತಮವಾಗುವುದು. ದುಶ್ಚಟಕ್ಕೆ ಬಲಿಯಾಗಬೇಡಿ ನಿಮ್ಮನ್ನು ಸಾಕಿ ಸಲಹಿ ನಿಮ್ಮ […]

ದಕ್ಷಿಣ ಕ್ಷೇತ್ರೀಯ ಮಟ್ಟದಲ್ಲಿ ದ್ವಿತೀಯ

ದಕ್ಷಿಣ ಕ್ಷೇತ್ರೀಯ ಮಟ್ಟದಲ್ಲಿ ದ್ವಿತೀಯ

Tuesday, October 6th, 2015

ವಿದ್ಯಾಭಾರತಿ ಭಾರತೀಯ ಶಿಕ್ಷಣ ಸಂಸ್ಥಾನ ನವದೆಹಲಿ ಆಶ್ರಯದಲ್ಲಿ ಹೈದರಾಬಾದ್‌ನಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಕ್ರೀಡಾಕೂಟ ’ಖೇಲ್‌ಕೂಟ್ 2015-16’ ರಲ್ಲಿ ಪ್ರಾಥಮಿಕ ವಿಭಾಗದ ಬಾಲಕಿಯರ ಕಬಡ್ಡಿ ಪಂದ್ಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಯಶಸ್ವಿ, ಕೃತಿ, ಶ್ವೇತಾ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ್, ಹರಿಣಾಕ್ಷಿ ಮತ್ತು ಮಮತಾತರಬೇತಿ ನೀಡಿದ್ದರು.

ಭಾಷಣದಲ್ಲಿ ಪ್ರಥಮ ಸ್ಥಾನ

ಭಾಷಣದಲ್ಲಿ ಪ್ರಥಮ ಸ್ಥಾನ

Tuesday, October 6th, 2015

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಇವರು ಆಯೋಜಿಸಿದ ತಾಲೂಕು ಮಟ್ಟದ ಮಕ್ಕಳಲ್ಲಿ ಪ್ರಾಚ್ಯ ಪ್ರಜ್ಞೆಯ ಅರಿವು ಮೂಡಿಸಲು ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಅಂಕಿತಾ ವಿ.ಕೆ. ’ನಾನು ನೋಡಿದ ಐತಿಹಾಸಿಕ ಸ್ಥಳ’ ಎಂಬ ವಿಷಯದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಗ್ರಾಮದರ್ಶನ - ಒಂದು ಪರಿಕಲ್ಪನೆ : ಕೆದಿಲ ಗ್ರಾಮ

ಗ್ರಾಮದರ್ಶನ – ಒಂದು ಪರಿಕಲ್ಪನೆ : ಕೆದಿಲ ಗ್ರಾಮ

Monday, October 5th, 2015

  Click on image to view the details

ವೃತ್ತಿ ಮಾರ್ಗದರ್ಶನ ಮತ್ತು ಪರೀಕ್ಷಾ ತಯಾರಿ

ವೃತ್ತಿ ಮಾರ್ಗದರ್ಶನ ಮತ್ತು ಪರೀಕ್ಷಾ ತಯಾರಿ

Monday, October 5th, 2015

ರೋಟರಿಕ್ಲಬ್ ಪುತ್ತೂರು ಇದರ ಸಹಭಾಗಿತ್ವದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ಪರೀಕ್ಷಾ ತಯಾರಿ ಎಂಬ ವಿಷಯದ ಬಗ್ಗೆ ಸಂತ ಅಲೋಶಿಯಸ್ ಕಾಲೇಜಿನ ಉಪಪ್ರಾಂಶುಪಾಲರಾದ ರೋನಾಲ್ಡ್ ಪಿಂಟೋ ಇವರು ಹತ್ತನೇ ತರಗತಿಯ ಮಕ್ಕಳಿಗೆ ಮಾಹಿತಿ ನೀಡಿದರು. ಅವರು ಕನ್ನಡ ಮಾಧ್ಯಮ ಕಲಿಕೆಯ ಹೆಮ್ಮೆಯೊಂದಿಗೆ ಎಲ್ಲ ಕ್ಷೇತ್ರಗಳಲ್ಲಿ ಕೂಡ ಸಾಧನೆಯನ್ನು ಮಾಡಬೇಕು ಮತ್ತು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ನಂತರದ ವಿವಿಧ ಶಿಕ್ಷಣ ಅವಕಾಶಗಳು, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವ ಹಾಗೂ ವಿವಿಧ ಕ್ಷೇತ್ರದ ಹುದ್ದೆಗಳ ಪರಿಚಯವನ್ನು […]

ಆರ್ಲಪದವು ಗಣೇಶೋತ್ಸವದಲ್ಲಿ ಮಕ್ಕಳ ಕಾರ್ಯಕ್ರಮ

ಆರ್ಲಪದವು ಗಣೇಶೋತ್ಸವದಲ್ಲಿ ಮಕ್ಕಳ ಕಾರ್ಯಕ್ರಮ

Thursday, October 1st, 2015

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆರ್ಲಪದವು, ಪಾಣಾಜೆ ಇಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ನಮ್ಮ ಶಾಲಾ ಮಕ್ಕಳು ನೀಡಿದ ನೃತ್ಯ ಕಾರ್ಯಕ್ರಮ ವೈವಿಧ್ಯ.

ಐ.ಟಿ. ಕ್ವಿಜ್- ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

ಐ.ಟಿ. ಕ್ವಿಜ್- ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

Tuesday, September 29th, 2015

ಶಿಕ್ಷಣ ಇಲಾಖೆ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಸಹಯೋಗದೊಂದಿಗೆ ಸೆಪ್ಟೆಂಬರ್ 23 ರಂದು ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನಡೆದ ಜಿಲ್ಲಾ ಮಟ್ಟದ ಗ್ರಾಮೀಣ ಐ.ಟಿ. ಕ್ವಿಜ್‌ನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಯಶಸ್ವಿ ನಾರಾಯಣ ಯು.ಎ ಮತ್ತು ವಿಘ್ನೇಶ್ ಇವರ ತಂಡ ವಿಜೇತರಾಗಿ ಅಕ್ಟೋಬರ್ 17 ರಂದು ಮೈಸೂರಿನಲ್ಲಿ ನಡೆಯುವ ಮೈಸೂರು ವಿಭಾಗ ಮಟ್ಟದ ಐ.ಟಿ. ಕ್ವಿಜ್‌ಗೆ ಆಯ್ಕೆಯಾಗಿರುತ್ತಾರೆ.

ದಕ್ಷಿಣ ಭಾರತ ಮಟ್ಟದ ಕಬಡ್ಡಿ, ಖೋಖೋ ಪಂದ್ಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ತಂಡ ಪ್ರಥಮ

ದಕ್ಷಿಣ ಭಾರತ ಮಟ್ಟದ ಕಬಡ್ಡಿ, ಖೋಖೋ ಪಂದ್ಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ತಂಡ ಪ್ರಥಮ

Saturday, September 26th, 2015

ವಿದ್ಯಾಭಾರತಿ ಭಾರತೀಯ ಶಿಕ್ಷಣ ಸಂಸ್ಥಾನ ನವದೆಹಲಿ ಆಶ್ರಯದಲ್ಲಿ ಹೈದರಾಬಾದ್‌ನಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಕ್ರೀಡಾಕೂಟ ‘ಖೇಲ್ ಕೂಟ್? 2015-16’ ರಲ್ಲಿ ಪ್ರೌಢಶಾಲಾ ವಿಭಾಗದ ಬಾಲಕಿಯರ ಕಬಡ್ಡಿ ಮತ್ತು ಖೋಖೋ ಪಂದ್ಯದಲ್ಲಿ ಇಲ್ಲಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತಂಡ ಪ್ರಥಮ ಸ್ಥಾನ ಪಡೆದುಕೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ಕಬಡ್ಡಿ ತಂಡದಲ್ಲಿ ಸುಶ್ಮಿತಾ, ರಕ್ಷಾ, ಶ್ರೀಲಕ್ಷ್ಮೀ, ಲಿಖಿತ, ಕಾವ್ಯ, ಗಾಯತ್ರಿ, ಲೋಲಾಕ್ಷಿ, ಮೋಕ್ಷಿತಾ, ಪ್ರತಿಕ್ಷಾ, ರಕ್ಷಿತಾ ರೈ, ವಿನುಶ್ರೀ ಪಾಲ್ಗೊಂಡಿದ್ದರು. ಖೋಖೋ ತಂಡದಲ್ಲಿ ಸುಶ್ಮಿತಾ, ರಮ್ಯಶ್ರೀ, ರಕ್ಷಿತಾ, ಶ್ರಾವ್ಯ, […]

ರಾಷ್ಟ್ರೀಯ ಈಜು ಸ್ಪರ್ಧೆ - ಪ್ರಥಮ

ರಾಷ್ಟ್ರೀಯ ಈಜು ಸ್ಪರ್ಧೆ – ಪ್ರಥಮ

Saturday, September 26th, 2015

ಮಧ್ಯಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತ್ರಿಶೂಲ್ 50 ಮೀ ಬ್ಯಾಕ್ ಸ್ಟ್ರೋಕ್‌ನಲ್ಲಿ ಚಿನ್ನ ಹಾಗೂ 50 ಮೀ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ದ್ವಿತೀಯ ಸ್ಥಾನ ಪಡೆದು ನವೆಂಬರ್ ೨ರಂದು ಕೋಲ್ಕತ್ತಾದಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ದಕ್ಷಿಣ ಭಾರತ ಮಟ್ಟದ ಖೋಖೋ ಪಂದ್ಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ತಂಡ ಪ್ರಥಮ

ದಕ್ಷಿಣ ಭಾರತ ಮಟ್ಟದ ಖೋಖೋ ಪಂದ್ಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ತಂಡ ಪ್ರಥಮ

Friday, September 25th, 2015

ವಿದ್ಯಾಭಾರತಿ ಭಾರತೀಯ ಶಿಕ್ಷಣ ಸಂಸ್ಥಾನ ನವದೆಹಲಿ ಆಶ್ರಯದಲ್ಲಿ ಹೈದರಾಬಾದ್‌ನಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಕ್ರೀಡಾಕೂಟ ’ಖೇಲ್‌ಕೂಟ್- 2015-16’ ರಲ್ಲಿ ಪ್ರೌಢಶಾಲಾ ವಿಭಾಗದ ಬಾಲಕಿಯರ ಖೋಖೋ ಪಂದ್ಯದಲ್ಲಿಇಲ್ಲಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತಂಡ ಪ್ರಥಮ ಸ್ಥಾನ ಪಡೆದುಕೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ಖೋಖೋ ತಂಡದಲ್ಲಿ ಸುಶ್ಮಿತಾ, ರಮ್ಯಶ್ರೀ, ರಕ್ಷಿತಾ, ಶ್ರಾವ್ಯ, ಪೂಜಾಶ್ರೀ, ಧನ್ಯಶ್ರೀ, ಗುಣಶ್ರೀ, ದೀಪಶ್ರೀ, ಅನುಶ್ರೀ, ಪ್ರತಿಮಾ ಪಾಲ್ಗೊಂಡಿದ್ದರು. ರಾಷ್ಟ್ರಮಟ್ಟದ ಖೋಖೋ ಪಂದ್ಯಾಟವು ಉತ್ತರ ಪ್ರದೇಶದಲ್ಲಿ ಸೆ. 28 ರಿಂದ 30 ರ ತನಕ ನಡೆಯಲಿದೆ.

ಚೆಸ್ - ದಕ್ಷಿಣ ಕ್ಷೇತ್ರೀಯ ಮಟ್ಟದಲ್ಲಿ - ದ್ವಿತೀಯ

ಚೆಸ್ – ದಕ್ಷಿಣ ಕ್ಷೇತ್ರೀಯ ಮಟ್ಟದಲ್ಲಿ – ದ್ವಿತೀಯ

Tuesday, September 15th, 2015

ಚೆನ್ನೈನ ಎಸ್.ವಿ.ವಿ.ವಿ. ಕಾಲೇಜಿನಲ್ಲಿ ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನಮ್ ಅವರು ನಡೆಸಿದ ದಕ್ಷಿಣ ಕ್ಷೇತ್ರಿಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8 ನೇ ತರಗತಿ ವಿದ್ಯಾರ್ಥಿ ಸಾತ್ವಿಕ್ ಶರ್ಮ ಬಾಲವರ್ಗದ ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಇವರು ಜೀನಿಯಸ್ ಚೆಸ್ ಸ್ಕೂಲ್‌ನ ವಿದ್ಯಾರ್ಥಿ. ಶ್ರೀ ರಾಜೇಶ್ ಶರ್ಮ ಮತ್ತು ಸೀಮಾ ದಂಪತಿ ಪುತ್ರ.

ಮಣ್ಣಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ - ಪುಲಸ್ತ್ಯಾರೈ

ಮಣ್ಣಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ – ಪುಲಸ್ತ್ಯಾರೈ

Friday, September 11th, 2015

ತಾಲೂಕು ಮಟ್ಟದ ಪ್ರೌಢ ಶಾಲಾ ಕಬಡ್ಡಿ ಪಂದ್ಯಾಟ ಕಬಡ್ಡಿ ಮಣ್ಣಿನ ಸಂಸ್ಕೃತಿ, ಇದನ್ನು ಉಳಿಸಿ ಬೆಳೆಸುವ ಎಂದು ತಾ.ಪಂ. ಅಧ್ಯಕ್ಷೆ ಪುಲಸ್ತ್ಯಾರೈ ಹೇಳಿದರು. ಜಿ.ಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಸೆ. 10 ರಂದು ತೆಂಕಿಲ ವಿವೇಕಾನಂದ ಶಾಲೆಯ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢ ಶಾಲಾ ಮಟ್ಟದ ಕಬಡ್ಡಿ ಪಂದ್ಯಾಟವನ್ನು ಉದ್ಫಾಟಿಸಿ ಮಾತನಾಡಿದರು. ಸ್ವಾಮಿ ವಿವೇಕಾನಂದರು ಸ್ವಾತಂತ್ರ್ಯದ ಜಾಗೃತಿ ಮೂಡಿಸಲು ಧರ್ಮವೊಂದೇ ಸಾಲದು ತೋಲುಗಳಿಗೆ ಶಕ್ತಿ ಬೇಕು ಇದಕ್ಕಾಗಿ ಕಬಡ್ಡಿಗೆ […]

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ರಕ್ಷಾಬಂಧನ

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ರಕ್ಷಾಬಂಧನ

Friday, September 4th, 2015

ವಿವೇಕಾನಂದ ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ರಕ್ಷಾಬಂಧನ ಕಾರ್ಯಕ್ರಮ ಆಚರಿಸಲಾಯಿತು. ಗಜಾನನ ಪೈ ಬೌದ್ಧಿಕ ಮಂಗಳೂರು ವಿಭಾಗ ಇವರು ರಕ್ಷಾಬಂಧನದ ಬೌದ್ಧಿಕ್ ನೀಡಿದರು. ಭಾರತದಲ್ಲಿ 7-8 ಶತಮಾನಗಳ ಕಾಲ ವಿದೇಶಿಯರು ಆಕ್ರಮಣ ಮಾಡಿ ಆಳ್ವಿಕೆ ನಡೆಸಿ ಆಸ್ತಿಪಾಸ್ತಿ ದೋಚಿದರು. ಗುಡಿಗೋಪುರ ಹಾಳು ಮಾಡಿ ಸ್ತ್ರೀಯರನ್ನು ಅವಮಾನಿಸಿ ನಮ್ಮ ಸಂಸ್ಕೃತಿಯನ್ನು ಧ್ವಂಸಗೊಳಿಸಿದರು. ಇದರಿಂದ ನಮ್ಮ ಸ್ತ್ರೀಯರಿಗೆ, ಅಕ್ಕ–ತಂಗಿಯರಿಗೆ ಪ್ರಾಣಮಾನದ ರಕ್ಷಣೆಗೆ ರಕ್ಷಾಬಂಧನ ಎಂಬ ಹಬ್ಬವನ್ನು ಆಚರಿಸಲು ಪ್ರಾರಂಭಿಸಲಾಯಿತೆಂದು ಹೇಳಿದರು. ವೇದಿಕೆಯಲ್ಲಿ ಶಾಲಾಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ಉಪಸ್ಥಿತರಿದ್ದರು. ಮತ್ತು ವಿದ್ಯಾರ್ಥಿಗಳು- […]

ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಸ್ಪರ್ಧೆಗಳಲ್ಲಿ ವಿಜೇತರು

ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಸ್ಪರ್ಧೆಗಳಲ್ಲಿ ವಿಜೇತರು

Saturday, August 29th, 2015

ದಿನಾಂಕ 29-08-2019ರಂದು ಉಪ್ಪಿನಂಗಡಿ ಪದವಿಪೂರ್ವ ಕಾಲೇಜಿನಲ್ಲಿ ಪುತ್ತೂರು ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಬಹುಮಾನವನ್ನು ಪಡೆದಿರುತ್ತಾರೆ. ಪ್ರೌಢಶಾಲಾ ವಿಭಾಗದ ಲಘುಸಂಗೀತದಲ್ಲಿ ಕು.ಕೀರ್ತಿ ಕುಡ್ವ- ಪ್ರಥಮ ಹಾಗೂ ಅರ್ಪಿತಾ ಸಿ.ಪಿ – ತೃತೀಯ ಸ್ಥಾನ ಪಡೆದಿರುತ್ತಾರೆ. ಪ್ರಾಥಮಿಕ ವಿಭಾಗದ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಧನ್ಯಕುಮಾರ್ ತೃತೀಯ ಸ್ಥಾನ ಪಡೆದಿರುತ್ತಾನೆ.

ರಕ್ಷಕ - ಶಿಕ್ಷಕ ಸಂಘಕ್ಕೆ ಆಯ್ಕೆ

ರಕ್ಷಕ – ಶಿಕ್ಷಕ ಸಂಘಕ್ಕೆ ಆಯ್ಕೆ

Thursday, August 27th, 2015

2015-16ನೇ ಸಾಲಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ರಕ್ಷಕ – ಶಿಕ್ಷಕ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಶ್ರೀ ವಿನೋದ್ ಕುಮಾರ್ ರೈ ,ಬೆಟ್ಟಂಪಾಡಿ ಗುತ್ತು ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಸುರೇಖಾ ಮತ್ತು ಜತೆ ಕಾರ್ಯದರ್ಶಿಯಾಗಿ ಶ್ರೀ ರಮೇಶ್ಚಂದ್ರ ಎಂ ಮತ್ತು ಶ್ರೀಮತಿ ಸುನಂದ ಆಯ್ಕೆಯಾದರು.ಶಾಲಾ ಸಂಚಾಲಕರು, ಮುಖ್ಯೋಪಾಧ್ಯಾಯರ ಮತ್ತು ಆಯ್ದ ಪೋಷಕರ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪ್ರಶಸ್ತಿ

ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪ್ರಶಸ್ತಿ

Thursday, August 27th, 2015

ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘ (ರಿ) ಪುತ್ತೂರು, ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮೀಜಿಯವರ 161ನೇ ಜನ್ಮ ದಿನಾಚರಣೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಶ್ವಿನಿ .ಯು. ನಾಯಕ್ – ಭಾಷಣ – ಪ್ರಥಮ, ಆಶಿಕಾ ರೈ.ಬಿ.ಜಿ – ಭಾಷಣ – ದ್ವಿತೀಯ, ಕೀರ್ತಿ ಕುಡ್ವ – ಭಾವಗೀತೆ – ಪ್ರಥಮ, ಅರ್ಪಿತಾ ಸಿ.ಪಿ – ಭಾವಗೀತೆ – ದ್ವಿತೀಯ, ಅರ್ಚನಾ – ಚಿತ್ರಕಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ […]

ತಾಲೂಕು ಮಟ್ಟದ ಖೋ- ಖೋ - ವಿವೇಕಾನಂದ ಕನ್ನಡ ಮಾಧ್ಯಮದ ಬಾಲಕಿಯರು ಜಿಲ್ಲಾ ಮಟ್ಟಕ್ಕೆ

ತಾಲೂಕು ಮಟ್ಟದ ಖೋ- ಖೋ – ವಿವೇಕಾನಂದ ಕನ್ನಡ ಮಾಧ್ಯಮದ ಬಾಲಕಿಯರು ಜಿಲ್ಲಾ ಮಟ್ಟಕ್ಕೆ

Thursday, August 27th, 2015

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಪುತ್ತೂರು ಇವರ ಆಶ್ರಯದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು, ಪುತ್ತೂರು ಇಲ್ಲಿ ನಡೆದ ತಾಲೂಕು ಮಟ್ಟದ ಖೋ- ಖೋ ಪಂದ್ಯಾಟದಲ್ಲಿ 17 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ಇವರಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ದಾಮೋದರ್ ಮತ್ತು ಶ್ರೀಮತಿ ಹರಿಣಾಕ್ಷಿ ತರಬೇತಿ […]

ತ್ರೋಬಾಲ್ - ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಬಾಲಕರು- ಜಿಲ್ಲಾಮಟ್ಟಕ್ಕೆ

ತ್ರೋಬಾಲ್ – ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಬಾಲಕರು- ಜಿಲ್ಲಾಮಟ್ಟಕ್ಕೆ

Thursday, August 27th, 2015

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಪುತ್ತೂರು ಇವರ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲಂದಡ್ಕ ಇಲ್ಲಿ ನಡೆದ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ೧೪ ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೇ ಇದೇ ತಂಡ ವಿದ್ಯಾಭಾರತಿ ಕರ್ನಾಟಕ ವತಿಯಿಂದ ನಡೆದ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ […]

ಖೋ - ಖೋ ಪಂದ್ಯಾಟ - ಪ್ರಥಮ ಸ್ಥಾನ

ಖೋ – ಖೋ ಪಂದ್ಯಾಟ – ಪ್ರಥಮ ಸ್ಥಾನ

Monday, August 24th, 2015

ವಿದ್ಯಾಭಾರತಿ ಕರ್ನಾಟಕ ವತಿಯಿಂದ ಮತ್ತು ಶ್ರೀ ವಿಷ್ಣುಮೂರ್ತಿ ಪ್ರೌಢಶಾಲೆ ಪಟ್ಟೂರು, ಪಟ್ರಮೆ ಇಲ್ಲಿ ದಿನಾಂಕ 21-08-2015ರಂದು ನಡೆದ ಕಿಶೋರ ವಿಭಾಗದ ಬಾಲಕಿಯರ ಖೋ-ಖೋ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕಿಶೋರ ವಿಭಾಗದ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿದೆ.

ವಲಯ ಮಟ್ಟದ ತ್ರೋಬಾಲ್- ವಿವೇಕಾನಂದ ಕನ್ನಡ ಮಾಧ್ಯಮ ಪ್ರಥಮ

ವಲಯ ಮಟ್ಟದ ತ್ರೋಬಾಲ್- ವಿವೇಕಾನಂದ ಕನ್ನಡ ಮಾಧ್ಯಮ ಪ್ರಥಮ

Saturday, August 22nd, 2015

ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬನ್ನೂರು ಇಲ್ಲಿ ನಡೆದ ಪುತ್ತೂರು ವಲಯ ಮಟ್ಟದ ಪ್ರಾಥಮಿಕ ಶಾಲಾ ಬಾಲಕರ ತ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಪ್ರಾಥಮಿಕ ವಿಭಾಗದ ಬಾಲಕರ ತಂಡ ಪ್ರಥಮ ಸ್ಥಾನ ಪಡೆದಿದೆ.

ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ತೆಂಕಿಲದಲ್ಲಿ 69 ನೇ ಸ್ವಾತಂತ್ರೋತ್ಸವದ ಆಚರಣೆ

ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ತೆಂಕಿಲದಲ್ಲಿ 69 ನೇ ಸ್ವಾತಂತ್ರೋತ್ಸವದ ಆಚರಣೆ

Saturday, August 15th, 2015

ಭಾರತೀಯ ಸೇನೆಯಲ್ಲಿ ದುಡಿಯುವುದು ಸಂತೋಷವನ್ನು ಕೊಡುವುದು, ಜೊತೆಗೆ ದೇಶಸೇವೆ ಮಾಡಿದ ಕೃತಾರ್ಥ ಭಾವನೆಯು ಉಂಟಾಗುತ್ತದೆ. ಭಾರತೀಯ ಸೇನೆಯ ಬಗ್ಗೆ ಎಲ್ಲರು ಅಂತೂ ದೇಶ ಸೇವೆಗೆ ಎಲ್ಲರೂ ಧುಮುಕಬೇಕೆಂದು ಭಾರತೀಯ ಸೇನೆಯ ನಿವೃತ್ತ ಲೆಪ್ಟಿನೆಂಟ್ ಕರ್ನಲ್ ಎಸ್.ಡಿ. ರಾಮಕಾಂತನ್ ಕರೆಕೊಟ್ಟರು. ಇವರು ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ, ಕನ್ನಡಮಾಧ್ಯಮ, ಬಿ.ಎಡ್ ಮತ್ತು ಡಿ.ಎಡ್ ಶಾಲಾ- ಕಾಲೇಜುಗಳ ಜಂಟಿ ಸ್ವಾತಂತ್ರೋತ್ಸವದ ಧ್ವಜಾರೋಹಣ ಗೈದು ಮಾತನಾಡುತ್ತಿದ್ದರು. ರವೀಂದ್ರ. ಪಿ ಸಂಚಾಲಕರು ವಿವೇಕಾನಂದ ಆಂಗ್ಲ ಮತ್ತು ಕನ್ನಡ ಮಾಧ್ಯಮ, ಪ್ರಾಸ್ತಾವಿಕಮಾತನಾಡಿದರು. […]

ಕರಾಟೆ-ತಾಲೂಕು ಮಟ್ಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ 2 ಚಿನ್ನ 1 ಬೆಳ್ಳಿ

ಕರಾಟೆ-ತಾಲೂಕು ಮಟ್ಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ 2 ಚಿನ್ನ 1 ಬೆಳ್ಳಿ

Thursday, August 13th, 2015

ದಿನಾಂಕ 10-8-2015 ರಂದು ಕೌಕ್ರಾಡಿ ಸಂತ ಜಾರ್ಜ್‌ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ನಡೆದ ತಾಲ್ಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿನ 8 ನೇ ತರಗತಿ ವಿದ್ಯಾರ್ಥಿ ಸಾತ್ವಿಕ್ ಶರ್ಮ ಬಿ.ಎಸ್. 30-35 ಕೆ.ಜಿ ವಿಭಾಗದ ಬಾಲಕರ ಕುಮಿಟೆಯಲ್ಲಿ ಪ್ರಥಮ ಸ್ಥಾನ, 8 ನೇ ತರಗತಿಯ ಲತೇಶ್‌ ಕೆ.ಎಸ್ 35-40 ಕೆ.ಜಿ ವಿಭಾಗದ ಬಾಲಕರ ಕುಮಿಟೆಯಲ್ಲಿ ಪ್ರಥಮ ಸ್ಥಾನ, 10ನೇ ತರಗತಿಯ ಅಮಿತ್ 30-35 ಕೆ.ಜಿ ಪ್ರೌಢಶಾಲಾ ಬಾಲಕರ ಕುಮಿಟೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಚೆಸ್ ರಾಜ್ಯಮಟ್ಟದಲ್ಲಿ ಸಾತ್ವಿಕ್ ಶರ್ಮ - ಪ್ರಥಮ

ಚೆಸ್ ರಾಜ್ಯಮಟ್ಟದಲ್ಲಿ ಸಾತ್ವಿಕ್ ಶರ್ಮ – ಪ್ರಥಮ

Wednesday, August 12th, 2015

ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ಬೆಂಗಳೂರಿನ ಸಾಂದೀಪನ ವಿದ್ಯಾಲಯ ಶ್ರೀರಾಮಪುರದಲ್ಲಿ ನಡೆದ ಪ್ರಾಂತೀಯ ಕ್ರೀಡಾಕೂಟದ 14ರ ವಯೋಮಾನದ ಚೆಸ್ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿ ಸಾತ್ವಿಕ್ ಶರ್ಮ ಪ್ರಥಮ ಬಹುಮಾನ ಪಡೆದು ಸಪ್ಟೆಂಬರ್ 12 ಮತ್ತು 13 ರಂದು ಚೆನ್ನೈನಲ್ಲಿ ನಡೆಯುವ ದಕ್ಷಿಣ ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ರಾಜೇಶ್ ಶರ್ಮ ಮತ್ತು ಸೀಮಾ ಡಿ.ಎಸ್‌ರವರ ಪುತ್ರ.

ಈಜು ಸ್ಪರ್ಧೆ - ಚಿನ್ನದ ಪದಕ

ಈಜು ಸ್ಪರ್ಧೆ – ಚಿನ್ನದ ಪದಕ

Monday, August 10th, 2015

ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ಬೆಂಗಳೂರಿನಲ್ಲಿ ನಡೆದ ಪ್ರಾಂತೀಯ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತ್ರಿಶೂಲ್, 50 ಮೀ ಬ್ರೆಸ್ಟ್ ಸ್ಟ್ರೋಕ್ ಮತ್ತು 4×100  ಮೀ ರಿಲೇಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದು ದಕ್ಷಿಣ ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ವಿವಿಧ ಪ್ರಶಸ್ತಿ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ವಿವಿಧ ಪ್ರಶಸ್ತಿ

Monday, August 10th, 2015

ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ರೋಟರಿ ಕ್ಲಬ್ ಪುತ್ತೂರು ಮತ್ತು ರೋಟಾರ್‍ಯಾಕ್ಟ್ ಕ್ಲಬ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿನ ಅಂಕಿತಾ ವಿ.ಕೆ – ಭಾಷಣ – ಪ್ರಥಮ, ಅಮಲ್‌ಜಿತ್ – ಛದ್ಮವೇಷ – ದ್ವಿತೀಯ, ಪರೀಕ್ಷಿತ್ – ಛದ್ಮವೇಷ – ತೃತೀಯ ಮತ್ತು ಧನ್ಯಕುಮಾರ್ – ದೇಶಭಕ್ತಿಗೀತೆ – ದ್ವಿತೀಯ ಸ್ಥಾನ ಪಡೆದಿದ್ದಾರೆ.

ರಾಜ್ಯಮಟ್ಟದ ಗುಡ್ಡಗಾಡು ಓಟ - ವಿವೇಕಾನಂದದ ಚೈತ್ರ ಎ. - ಪ್ರಥಮ ಸ್ಥಾನ

ರಾಜ್ಯಮಟ್ಟದ ಗುಡ್ಡಗಾಡು ಓಟ – ವಿವೇಕಾನಂದದ ಚೈತ್ರ ಎ. – ಪ್ರಥಮ ಸ್ಥಾನ

Thursday, August 6th, 2015

ಕ್ರೀಡಾಭಿವೃದ್ಧಿ ಸಮಿತಿ (ರಿ) ಪಂಜ, ಸರಕಾರಿ ಪದವಿಪೂರ್ವ ಕಾಲೇಜು ಪಂಜ ಸುಳ್ಯ ತಾಲೂಕು ದ.ಕ, 15 ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಆಚರಣೆ ಪ್ರಯುಕ್ತ ರಾಜ್ಯಮಟ್ಟದ ಗುಡ್ಡಗಾಡು ಓಟ 2015 ರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 14 ವರ್ಷದ ಒಳಗಿನ ಬಾಲಕಿಯರ ವಿಭಾಗದ 2 ಕಿ.ಮೀ ಓಟದಲ್ಲಿ ಧನುಷ ಶೆಟ್ಟಿ- 6 ನೇ ಸ್ಥಾನ, ದೀಕ್ಷಾ- 5 ನೇ ಸ್ಥಾನ, ಚೈತ್ರಾ.ಎ- ಪ್ರಥಮ ಸ್ಥಾನ , 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ 4 ಕಿ.ಮೀ ಓಟದಲ್ಲಿ ಸುಶ್ಮಿತಾ – 9 ನೇ ಸ್ಥಾನ, […]

ತ್ರೋಬಾಲ್ ಪಂದ್ಯಾಟ - ಪ್ರಥಮ ಸ್ಥಾನ

ತ್ರೋಬಾಲ್ ಪಂದ್ಯಾಟ – ಪ್ರಥಮ ಸ್ಥಾನ

Thursday, August 6th, 2015

ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ಸರಸ್ವತಿ ವಿದ್ಯಾಲಯ ಕಡಬ, ಇಲ್ಲಿ ದಿನಾಂಕ 4-8-2015 ರಂದು ನಡೆದ ಜಿಲ್ಲಾಮಟ್ಟದ 14 ರವಯೋಮಾನದ ತ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಾಲವರ್ಗದ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಾಣ ವಿದ್ಯಾ ಯೋಗ ಚಿಕಿತ್ಸಾ - ಪ್ರಾತ್ಯಕ್ಷಿಕೆ

ಪ್ರಾಣ ವಿದ್ಯಾ ಯೋಗ ಚಿಕಿತ್ಸಾ – ಪ್ರಾತ್ಯಕ್ಷಿಕೆ

Saturday, August 1st, 2015

ಪ್ರಾಣ ವಿದ್ಯಾ, ಯೋಗ ಚಿಕ್ಸಿತೆಯ ಒಂದು ವಿಭಾಗವಾದ ಧ್ಯಾನ, ಪ್ರಾಣಾಯಮ, ಗಣೇಶಾಸನ ಮತ್ತು ವ್ಯಾಯಾಮದ ಮೂಲಕ ಸ್ಮರಣಶಕ್ತಿ, ಪ್ರಾಣಶಕ್ತಿ, ಏಕಾಗ್ರತೆಯನ್ನು ವೃದ್ಧಿಸಿಕೊಂಡು ಜ್ಞಾನಾರ್ಜನೆ ಮಾಡಿಕೊಳ್ಳುವುದು ಹೇಗೆ? ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ಪ್ರಾಣವಿದ್ಯಾ ಯೋಗ ಚಿಕಿತ್ಸಕರು ಮತ್ತು ಮುಡಿಪು – ಇನ್ಫೋಸಿಸ್‌ನ ಉದ್ಯೋಗಿಯಾಗಿರುವ ಶ್ರೀಯುತ ರಾಮಗೋಪಾಲ್ ಮತ್ತು ಅವರ ಸಹಾಯಕರಾದ ಶ್ರೀಯುತ ಸುಕೇಶ್ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಿದರು. ಕಾರ್ಯಕ್ರಮವನ್ನು ಶಿಕ್ಷಕಿ ವೀಣಾಸರಸ್ವತಿ ಮಾತಾಜಿ ನಿರ್ವಹಿಸಿದರು.

ಗುರುಪೂರ್ಣಿಮೆ ಆಚರಣೆ

ಗುರುಪೂರ್ಣಿಮೆ ಆಚರಣೆ

Saturday, August 1st, 2015

ದಿನಾಂಕ 29-07-2015 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ಸರಸ್ವತಿ ವಿದ್ಯಾಲಯ ಕಡಬ ಇಲ್ಲಿನ ಸಂಚಾಲಕರಾದ ವೆಂಕಟರಮಣ ಭಟ್ ಮಂಕುಡೆ ಬೌದ್ಧಿಕ್ ನೀಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಹಿರಿಯ ಶಿಕ್ಷಕರಾದ ವಿಶ್ವನಾಥ ಮುಡೂರು ವಹಿಸಿದ್ದರು. ಶಾಖಾ ಮುಖ್ಯಶಿಕ್ಷಕ ವಿಘ್ನೇಶ್ ಹಾಗೂ ಪ್ರಜ್ವಲ್ ಪ್ರಾರ್ಥಿಸಿದರು. ಎಲ್ಲಾ ವಿದ್ಯಾರ್ಥಿಗಳು ಗುರುದಕ್ಷಿಣೆಯನ್ನು ಅರ್ಪಣೆ ಮಾಡಿದರು. ಕಾರ್ಯಕ್ರಮವನ್ನು ವಿಜಯ್ ಕುಮಾರ್ ನಿರೂಪಿಸಿದರು.

Highslide for Wordpress Plugin