ಗುರುವಂದನೆ

ಗುರುವಂದನೆ

Wednesday, October 7th, 2015

ದಿನಾಂಕ 6-10-2015 ರಂದು ಸರಕಾರಿ ಜೂನಿಯರ್ ಕಾಲೇಜುಗಳಲ್ಲಿ ಉಪನ್ಯಾಸಕರಾಗಿದ್ದು ಈಗ ನಿವೃತ್ತ ಶಿಕ್ಷಕರಾಗಿರುವ ಶ್ರೀಯುತ ಜನಾರ್ದನ ಪೂಜಾರಿಯವರಿಗೆ ಅವರ ವಸತಿಗೆ ತೆರಳಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ 10 ನೇ ತರಗತಿ ವಿದ್ಯಾರ್ಥಿ ವೃಂದ ಮತ್ತು ಶಿಕ್ಷಕ ಬಳಗ ಗುರುವಂದನೆಯನ್ನು ಸಲ್ಲಿಸಿದರು. ಗುರುವಂದನೆ ಸ್ವೀಕರಿಸಿದ ಶ್ರೀಯುತರು ಮಕ್ಕಳು ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿ ವಾರ್ತಾಪತ್ರಿಕೆ ಓದಿ ಪ್ರಚಲಿತ ವಿಷಯದ ಜ್ಞಾನ ಸಂಪನ್ನತೆಯನ್ನು ಪಡೆಯಿರಿ, ಕಲಿಕೆಯನ್ನು ವೇಳಾಪಟ್ಟಿಯೊಂದಿಗೆ ಜೋಡಿಸಿಕೊಂಡಾಗ ಕಲಿಕಾ ಫಲಿತಾಂಶ ಉತ್ತಮವಾಗುವುದು. ದುಶ್ಚಟಕ್ಕೆ ಬಲಿಯಾಗಬೇಡಿ ನಿಮ್ಮನ್ನು ಸಾಕಿ ಸಲಹಿ ನಿಮ್ಮ […]

ದಕ್ಷಿಣ ಕ್ಷೇತ್ರೀಯ ಮಟ್ಟದಲ್ಲಿ ದ್ವಿತೀಯ

ದಕ್ಷಿಣ ಕ್ಷೇತ್ರೀಯ ಮಟ್ಟದಲ್ಲಿ ದ್ವಿತೀಯ

Tuesday, October 6th, 2015

ವಿದ್ಯಾಭಾರತಿ ಭಾರತೀಯ ಶಿಕ್ಷಣ ಸಂಸ್ಥಾನ ನವದೆಹಲಿ ಆಶ್ರಯದಲ್ಲಿ ಹೈದರಾಬಾದ್‌ನಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಕ್ರೀಡಾಕೂಟ ’ಖೇಲ್‌ಕೂಟ್ 2015-16’ ರಲ್ಲಿ ಪ್ರಾಥಮಿಕ ವಿಭಾಗದ ಬಾಲಕಿಯರ ಕಬಡ್ಡಿ ಪಂದ್ಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಯಶಸ್ವಿ, ಕೃತಿ, ಶ್ವೇತಾ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ್, ಹರಿಣಾಕ್ಷಿ ಮತ್ತು ಮಮತಾತರಬೇತಿ ನೀಡಿದ್ದರು.

ಭಾಷಣದಲ್ಲಿ ಪ್ರಥಮ ಸ್ಥಾನ

ಭಾಷಣದಲ್ಲಿ ಪ್ರಥಮ ಸ್ಥಾನ

Tuesday, October 6th, 2015

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಇವರು ಆಯೋಜಿಸಿದ ತಾಲೂಕು ಮಟ್ಟದ ಮಕ್ಕಳಲ್ಲಿ ಪ್ರಾಚ್ಯ ಪ್ರಜ್ಞೆಯ ಅರಿವು ಮೂಡಿಸಲು ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಅಂಕಿತಾ ವಿ.ಕೆ. ’ನಾನು ನೋಡಿದ ಐತಿಹಾಸಿಕ ಸ್ಥಳ’ ಎಂಬ ವಿಷಯದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಗ್ರಾಮದರ್ಶನ - ಒಂದು ಪರಿಕಲ್ಪನೆ : ಕೆದಿಲ ಗ್ರಾಮ

ಗ್ರಾಮದರ್ಶನ – ಒಂದು ಪರಿಕಲ್ಪನೆ : ಕೆದಿಲ ಗ್ರಾಮ

Monday, October 5th, 2015

  Click on image to view the details

ವೃತ್ತಿ ಮಾರ್ಗದರ್ಶನ ಮತ್ತು ಪರೀಕ್ಷಾ ತಯಾರಿ

ವೃತ್ತಿ ಮಾರ್ಗದರ್ಶನ ಮತ್ತು ಪರೀಕ್ಷಾ ತಯಾರಿ

Monday, October 5th, 2015

ರೋಟರಿಕ್ಲಬ್ ಪುತ್ತೂರು ಇದರ ಸಹಭಾಗಿತ್ವದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ಪರೀಕ್ಷಾ ತಯಾರಿ ಎಂಬ ವಿಷಯದ ಬಗ್ಗೆ ಸಂತ ಅಲೋಶಿಯಸ್ ಕಾಲೇಜಿನ ಉಪಪ್ರಾಂಶುಪಾಲರಾದ ರೋನಾಲ್ಡ್ ಪಿಂಟೋ ಇವರು ಹತ್ತನೇ ತರಗತಿಯ ಮಕ್ಕಳಿಗೆ ಮಾಹಿತಿ ನೀಡಿದರು. ಅವರು ಕನ್ನಡ ಮಾಧ್ಯಮ ಕಲಿಕೆಯ ಹೆಮ್ಮೆಯೊಂದಿಗೆ ಎಲ್ಲ ಕ್ಷೇತ್ರಗಳಲ್ಲಿ ಕೂಡ ಸಾಧನೆಯನ್ನು ಮಾಡಬೇಕು ಮತ್ತು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ನಂತರದ ವಿವಿಧ ಶಿಕ್ಷಣ ಅವಕಾಶಗಳು, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವ ಹಾಗೂ ವಿವಿಧ ಕ್ಷೇತ್ರದ ಹುದ್ದೆಗಳ ಪರಿಚಯವನ್ನು […]

ಆರ್ಲಪದವು ಗಣೇಶೋತ್ಸವದಲ್ಲಿ ಮಕ್ಕಳ ಕಾರ್ಯಕ್ರಮ

ಆರ್ಲಪದವು ಗಣೇಶೋತ್ಸವದಲ್ಲಿ ಮಕ್ಕಳ ಕಾರ್ಯಕ್ರಮ

Thursday, October 1st, 2015

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆರ್ಲಪದವು, ಪಾಣಾಜೆ ಇಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ನಮ್ಮ ಶಾಲಾ ಮಕ್ಕಳು ನೀಡಿದ ನೃತ್ಯ ಕಾರ್ಯಕ್ರಮ ವೈವಿಧ್ಯ.

ಐ.ಟಿ. ಕ್ವಿಜ್- ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

ಐ.ಟಿ. ಕ್ವಿಜ್- ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

Tuesday, September 29th, 2015

ಶಿಕ್ಷಣ ಇಲಾಖೆ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಸಹಯೋಗದೊಂದಿಗೆ ಸೆಪ್ಟೆಂಬರ್ 23 ರಂದು ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನಡೆದ ಜಿಲ್ಲಾ ಮಟ್ಟದ ಗ್ರಾಮೀಣ ಐ.ಟಿ. ಕ್ವಿಜ್‌ನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಯಶಸ್ವಿ ನಾರಾಯಣ ಯು.ಎ ಮತ್ತು ವಿಘ್ನೇಶ್ ಇವರ ತಂಡ ವಿಜೇತರಾಗಿ ಅಕ್ಟೋಬರ್ 17 ರಂದು ಮೈಸೂರಿನಲ್ಲಿ ನಡೆಯುವ ಮೈಸೂರು ವಿಭಾಗ ಮಟ್ಟದ ಐ.ಟಿ. ಕ್ವಿಜ್‌ಗೆ ಆಯ್ಕೆಯಾಗಿರುತ್ತಾರೆ.

ದಕ್ಷಿಣ ಭಾರತ ಮಟ್ಟದ ಕಬಡ್ಡಿ, ಖೋಖೋ ಪಂದ್ಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ತಂಡ ಪ್ರಥಮ

ದಕ್ಷಿಣ ಭಾರತ ಮಟ್ಟದ ಕಬಡ್ಡಿ, ಖೋಖೋ ಪಂದ್ಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ತಂಡ ಪ್ರಥಮ

Saturday, September 26th, 2015

ವಿದ್ಯಾಭಾರತಿ ಭಾರತೀಯ ಶಿಕ್ಷಣ ಸಂಸ್ಥಾನ ನವದೆಹಲಿ ಆಶ್ರಯದಲ್ಲಿ ಹೈದರಾಬಾದ್‌ನಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಕ್ರೀಡಾಕೂಟ ‘ಖೇಲ್ ಕೂಟ್? 2015-16’ ರಲ್ಲಿ ಪ್ರೌಢಶಾಲಾ ವಿಭಾಗದ ಬಾಲಕಿಯರ ಕಬಡ್ಡಿ ಮತ್ತು ಖೋಖೋ ಪಂದ್ಯದಲ್ಲಿ ಇಲ್ಲಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತಂಡ ಪ್ರಥಮ ಸ್ಥಾನ ಪಡೆದುಕೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ಕಬಡ್ಡಿ ತಂಡದಲ್ಲಿ ಸುಶ್ಮಿತಾ, ರಕ್ಷಾ, ಶ್ರೀಲಕ್ಷ್ಮೀ, ಲಿಖಿತ, ಕಾವ್ಯ, ಗಾಯತ್ರಿ, ಲೋಲಾಕ್ಷಿ, ಮೋಕ್ಷಿತಾ, ಪ್ರತಿಕ್ಷಾ, ರಕ್ಷಿತಾ ರೈ, ವಿನುಶ್ರೀ ಪಾಲ್ಗೊಂಡಿದ್ದರು. ಖೋಖೋ ತಂಡದಲ್ಲಿ ಸುಶ್ಮಿತಾ, ರಮ್ಯಶ್ರೀ, ರಕ್ಷಿತಾ, ಶ್ರಾವ್ಯ, […]

ರಾಷ್ಟ್ರೀಯ ಈಜು ಸ್ಪರ್ಧೆ - ಪ್ರಥಮ

ರಾಷ್ಟ್ರೀಯ ಈಜು ಸ್ಪರ್ಧೆ – ಪ್ರಥಮ

Saturday, September 26th, 2015

ಮಧ್ಯಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತ್ರಿಶೂಲ್ 50 ಮೀ ಬ್ಯಾಕ್ ಸ್ಟ್ರೋಕ್‌ನಲ್ಲಿ ಚಿನ್ನ ಹಾಗೂ 50 ಮೀ ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ದ್ವಿತೀಯ ಸ್ಥಾನ ಪಡೆದು ನವೆಂಬರ್ ೨ರಂದು ಕೋಲ್ಕತ್ತಾದಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ದಕ್ಷಿಣ ಭಾರತ ಮಟ್ಟದ ಖೋಖೋ ಪಂದ್ಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ತಂಡ ಪ್ರಥಮ

ದಕ್ಷಿಣ ಭಾರತ ಮಟ್ಟದ ಖೋಖೋ ಪಂದ್ಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ತಂಡ ಪ್ರಥಮ

Friday, September 25th, 2015

ವಿದ್ಯಾಭಾರತಿ ಭಾರತೀಯ ಶಿಕ್ಷಣ ಸಂಸ್ಥಾನ ನವದೆಹಲಿ ಆಶ್ರಯದಲ್ಲಿ ಹೈದರಾಬಾದ್‌ನಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಕ್ರೀಡಾಕೂಟ ’ಖೇಲ್‌ಕೂಟ್- 2015-16’ ರಲ್ಲಿ ಪ್ರೌಢಶಾಲಾ ವಿಭಾಗದ ಬಾಲಕಿಯರ ಖೋಖೋ ಪಂದ್ಯದಲ್ಲಿಇಲ್ಲಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತಂಡ ಪ್ರಥಮ ಸ್ಥಾನ ಪಡೆದುಕೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ಖೋಖೋ ತಂಡದಲ್ಲಿ ಸುಶ್ಮಿತಾ, ರಮ್ಯಶ್ರೀ, ರಕ್ಷಿತಾ, ಶ್ರಾವ್ಯ, ಪೂಜಾಶ್ರೀ, ಧನ್ಯಶ್ರೀ, ಗುಣಶ್ರೀ, ದೀಪಶ್ರೀ, ಅನುಶ್ರೀ, ಪ್ರತಿಮಾ ಪಾಲ್ಗೊಂಡಿದ್ದರು. ರಾಷ್ಟ್ರಮಟ್ಟದ ಖೋಖೋ ಪಂದ್ಯಾಟವು ಉತ್ತರ ಪ್ರದೇಶದಲ್ಲಿ ಸೆ. 28 ರಿಂದ 30 ರ ತನಕ ನಡೆಯಲಿದೆ.

ಚೆಸ್ - ದಕ್ಷಿಣ ಕ್ಷೇತ್ರೀಯ ಮಟ್ಟದಲ್ಲಿ - ದ್ವಿತೀಯ

ಚೆಸ್ – ದಕ್ಷಿಣ ಕ್ಷೇತ್ರೀಯ ಮಟ್ಟದಲ್ಲಿ – ದ್ವಿತೀಯ

Tuesday, September 15th, 2015

ಚೆನ್ನೈನ ಎಸ್.ವಿ.ವಿ.ವಿ. ಕಾಲೇಜಿನಲ್ಲಿ ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನಮ್ ಅವರು ನಡೆಸಿದ ದಕ್ಷಿಣ ಕ್ಷೇತ್ರಿಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8 ನೇ ತರಗತಿ ವಿದ್ಯಾರ್ಥಿ ಸಾತ್ವಿಕ್ ಶರ್ಮ ಬಾಲವರ್ಗದ ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಇವರು ಜೀನಿಯಸ್ ಚೆಸ್ ಸ್ಕೂಲ್‌ನ ವಿದ್ಯಾರ್ಥಿ. ಶ್ರೀ ರಾಜೇಶ್ ಶರ್ಮ ಮತ್ತು ಸೀಮಾ ದಂಪತಿ ಪುತ್ರ.

ಮಣ್ಣಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ - ಪುಲಸ್ತ್ಯಾರೈ

ಮಣ್ಣಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ – ಪುಲಸ್ತ್ಯಾರೈ

Friday, September 11th, 2015

ತಾಲೂಕು ಮಟ್ಟದ ಪ್ರೌಢ ಶಾಲಾ ಕಬಡ್ಡಿ ಪಂದ್ಯಾಟ ಕಬಡ್ಡಿ ಮಣ್ಣಿನ ಸಂಸ್ಕೃತಿ, ಇದನ್ನು ಉಳಿಸಿ ಬೆಳೆಸುವ ಎಂದು ತಾ.ಪಂ. ಅಧ್ಯಕ್ಷೆ ಪುಲಸ್ತ್ಯಾರೈ ಹೇಳಿದರು. ಜಿ.ಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಸೆ. 10 ರಂದು ತೆಂಕಿಲ ವಿವೇಕಾನಂದ ಶಾಲೆಯ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢ ಶಾಲಾ ಮಟ್ಟದ ಕಬಡ್ಡಿ ಪಂದ್ಯಾಟವನ್ನು ಉದ್ಫಾಟಿಸಿ ಮಾತನಾಡಿದರು. ಸ್ವಾಮಿ ವಿವೇಕಾನಂದರು ಸ್ವಾತಂತ್ರ್ಯದ ಜಾಗೃತಿ ಮೂಡಿಸಲು ಧರ್ಮವೊಂದೇ ಸಾಲದು ತೋಲುಗಳಿಗೆ ಶಕ್ತಿ ಬೇಕು ಇದಕ್ಕಾಗಿ ಕಬಡ್ಡಿಗೆ […]

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ರಕ್ಷಾಬಂಧನ

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ರಕ್ಷಾಬಂಧನ

Friday, September 4th, 2015

ವಿವೇಕಾನಂದ ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ರಕ್ಷಾಬಂಧನ ಕಾರ್ಯಕ್ರಮ ಆಚರಿಸಲಾಯಿತು. ಗಜಾನನ ಪೈ ಬೌದ್ಧಿಕ ಮಂಗಳೂರು ವಿಭಾಗ ಇವರು ರಕ್ಷಾಬಂಧನದ ಬೌದ್ಧಿಕ್ ನೀಡಿದರು. ಭಾರತದಲ್ಲಿ 7-8 ಶತಮಾನಗಳ ಕಾಲ ವಿದೇಶಿಯರು ಆಕ್ರಮಣ ಮಾಡಿ ಆಳ್ವಿಕೆ ನಡೆಸಿ ಆಸ್ತಿಪಾಸ್ತಿ ದೋಚಿದರು. ಗುಡಿಗೋಪುರ ಹಾಳು ಮಾಡಿ ಸ್ತ್ರೀಯರನ್ನು ಅವಮಾನಿಸಿ ನಮ್ಮ ಸಂಸ್ಕೃತಿಯನ್ನು ಧ್ವಂಸಗೊಳಿಸಿದರು. ಇದರಿಂದ ನಮ್ಮ ಸ್ತ್ರೀಯರಿಗೆ, ಅಕ್ಕ–ತಂಗಿಯರಿಗೆ ಪ್ರಾಣಮಾನದ ರಕ್ಷಣೆಗೆ ರಕ್ಷಾಬಂಧನ ಎಂಬ ಹಬ್ಬವನ್ನು ಆಚರಿಸಲು ಪ್ರಾರಂಭಿಸಲಾಯಿತೆಂದು ಹೇಳಿದರು. ವೇದಿಕೆಯಲ್ಲಿ ಶಾಲಾಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ಉಪಸ್ಥಿತರಿದ್ದರು. ಮತ್ತು ವಿದ್ಯಾರ್ಥಿಗಳು- […]

ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಸ್ಪರ್ಧೆಗಳಲ್ಲಿ ವಿಜೇತರು

ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಸ್ಪರ್ಧೆಗಳಲ್ಲಿ ವಿಜೇತರು

Saturday, August 29th, 2015

ದಿನಾಂಕ 29-08-2019ರಂದು ಉಪ್ಪಿನಂಗಡಿ ಪದವಿಪೂರ್ವ ಕಾಲೇಜಿನಲ್ಲಿ ಪುತ್ತೂರು ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಬಹುಮಾನವನ್ನು ಪಡೆದಿರುತ್ತಾರೆ. ಪ್ರೌಢಶಾಲಾ ವಿಭಾಗದ ಲಘುಸಂಗೀತದಲ್ಲಿ ಕು.ಕೀರ್ತಿ ಕುಡ್ವ- ಪ್ರಥಮ ಹಾಗೂ ಅರ್ಪಿತಾ ಸಿ.ಪಿ – ತೃತೀಯ ಸ್ಥಾನ ಪಡೆದಿರುತ್ತಾರೆ. ಪ್ರಾಥಮಿಕ ವಿಭಾಗದ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಧನ್ಯಕುಮಾರ್ ತೃತೀಯ ಸ್ಥಾನ ಪಡೆದಿರುತ್ತಾನೆ.

ರಕ್ಷಕ - ಶಿಕ್ಷಕ ಸಂಘಕ್ಕೆ ಆಯ್ಕೆ

ರಕ್ಷಕ – ಶಿಕ್ಷಕ ಸಂಘಕ್ಕೆ ಆಯ್ಕೆ

Thursday, August 27th, 2015

2015-16ನೇ ಸಾಲಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ರಕ್ಷಕ – ಶಿಕ್ಷಕ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಶ್ರೀ ವಿನೋದ್ ಕುಮಾರ್ ರೈ ,ಬೆಟ್ಟಂಪಾಡಿ ಗುತ್ತು ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಸುರೇಖಾ ಮತ್ತು ಜತೆ ಕಾರ್ಯದರ್ಶಿಯಾಗಿ ಶ್ರೀ ರಮೇಶ್ಚಂದ್ರ ಎಂ ಮತ್ತು ಶ್ರೀಮತಿ ಸುನಂದ ಆಯ್ಕೆಯಾದರು.ಶಾಲಾ ಸಂಚಾಲಕರು, ಮುಖ್ಯೋಪಾಧ್ಯಾಯರ ಮತ್ತು ಆಯ್ದ ಪೋಷಕರ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪ್ರಶಸ್ತಿ

ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪ್ರಶಸ್ತಿ

Thursday, August 27th, 2015

ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘ (ರಿ) ಪುತ್ತೂರು, ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮೀಜಿಯವರ 161ನೇ ಜನ್ಮ ದಿನಾಚರಣೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಶ್ವಿನಿ .ಯು. ನಾಯಕ್ – ಭಾಷಣ – ಪ್ರಥಮ, ಆಶಿಕಾ ರೈ.ಬಿ.ಜಿ – ಭಾಷಣ – ದ್ವಿತೀಯ, ಕೀರ್ತಿ ಕುಡ್ವ – ಭಾವಗೀತೆ – ಪ್ರಥಮ, ಅರ್ಪಿತಾ ಸಿ.ಪಿ – ಭಾವಗೀತೆ – ದ್ವಿತೀಯ, ಅರ್ಚನಾ – ಚಿತ್ರಕಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ […]

ತಾಲೂಕು ಮಟ್ಟದ ಖೋ- ಖೋ - ವಿವೇಕಾನಂದ ಕನ್ನಡ ಮಾಧ್ಯಮದ ಬಾಲಕಿಯರು ಜಿಲ್ಲಾ ಮಟ್ಟಕ್ಕೆ

ತಾಲೂಕು ಮಟ್ಟದ ಖೋ- ಖೋ – ವಿವೇಕಾನಂದ ಕನ್ನಡ ಮಾಧ್ಯಮದ ಬಾಲಕಿಯರು ಜಿಲ್ಲಾ ಮಟ್ಟಕ್ಕೆ

Thursday, August 27th, 2015

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಪುತ್ತೂರು ಇವರ ಆಶ್ರಯದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು, ಪುತ್ತೂರು ಇಲ್ಲಿ ನಡೆದ ತಾಲೂಕು ಮಟ್ಟದ ಖೋ- ಖೋ ಪಂದ್ಯಾಟದಲ್ಲಿ 17 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ಇವರಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ದಾಮೋದರ್ ಮತ್ತು ಶ್ರೀಮತಿ ಹರಿಣಾಕ್ಷಿ ತರಬೇತಿ […]

ತ್ರೋಬಾಲ್ - ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಬಾಲಕರು- ಜಿಲ್ಲಾಮಟ್ಟಕ್ಕೆ

ತ್ರೋಬಾಲ್ – ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಬಾಲಕರು- ಜಿಲ್ಲಾಮಟ್ಟಕ್ಕೆ

Thursday, August 27th, 2015

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಪುತ್ತೂರು ಇವರ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲಂದಡ್ಕ ಇಲ್ಲಿ ನಡೆದ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ೧೪ ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೇ ಇದೇ ತಂಡ ವಿದ್ಯಾಭಾರತಿ ಕರ್ನಾಟಕ ವತಿಯಿಂದ ನಡೆದ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ […]

ಖೋ - ಖೋ ಪಂದ್ಯಾಟ - ಪ್ರಥಮ ಸ್ಥಾನ

ಖೋ – ಖೋ ಪಂದ್ಯಾಟ – ಪ್ರಥಮ ಸ್ಥಾನ

Monday, August 24th, 2015

ವಿದ್ಯಾಭಾರತಿ ಕರ್ನಾಟಕ ವತಿಯಿಂದ ಮತ್ತು ಶ್ರೀ ವಿಷ್ಣುಮೂರ್ತಿ ಪ್ರೌಢಶಾಲೆ ಪಟ್ಟೂರು, ಪಟ್ರಮೆ ಇಲ್ಲಿ ದಿನಾಂಕ 21-08-2015ರಂದು ನಡೆದ ಕಿಶೋರ ವಿಭಾಗದ ಬಾಲಕಿಯರ ಖೋ-ಖೋ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕಿಶೋರ ವಿಭಾಗದ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿದೆ.

ವಲಯ ಮಟ್ಟದ ತ್ರೋಬಾಲ್- ವಿವೇಕಾನಂದ ಕನ್ನಡ ಮಾಧ್ಯಮ ಪ್ರಥಮ

ವಲಯ ಮಟ್ಟದ ತ್ರೋಬಾಲ್- ವಿವೇಕಾನಂದ ಕನ್ನಡ ಮಾಧ್ಯಮ ಪ್ರಥಮ

Saturday, August 22nd, 2015

ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬನ್ನೂರು ಇಲ್ಲಿ ನಡೆದ ಪುತ್ತೂರು ವಲಯ ಮಟ್ಟದ ಪ್ರಾಥಮಿಕ ಶಾಲಾ ಬಾಲಕರ ತ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಪ್ರಾಥಮಿಕ ವಿಭಾಗದ ಬಾಲಕರ ತಂಡ ಪ್ರಥಮ ಸ್ಥಾನ ಪಡೆದಿದೆ.

ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ತೆಂಕಿಲದಲ್ಲಿ 69 ನೇ ಸ್ವಾತಂತ್ರೋತ್ಸವದ ಆಚರಣೆ

ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ತೆಂಕಿಲದಲ್ಲಿ 69 ನೇ ಸ್ವಾತಂತ್ರೋತ್ಸವದ ಆಚರಣೆ

Saturday, August 15th, 2015

ಭಾರತೀಯ ಸೇನೆಯಲ್ಲಿ ದುಡಿಯುವುದು ಸಂತೋಷವನ್ನು ಕೊಡುವುದು, ಜೊತೆಗೆ ದೇಶಸೇವೆ ಮಾಡಿದ ಕೃತಾರ್ಥ ಭಾವನೆಯು ಉಂಟಾಗುತ್ತದೆ. ಭಾರತೀಯ ಸೇನೆಯ ಬಗ್ಗೆ ಎಲ್ಲರು ಅಂತೂ ದೇಶ ಸೇವೆಗೆ ಎಲ್ಲರೂ ಧುಮುಕಬೇಕೆಂದು ಭಾರತೀಯ ಸೇನೆಯ ನಿವೃತ್ತ ಲೆಪ್ಟಿನೆಂಟ್ ಕರ್ನಲ್ ಎಸ್.ಡಿ. ರಾಮಕಾಂತನ್ ಕರೆಕೊಟ್ಟರು. ಇವರು ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ, ಕನ್ನಡಮಾಧ್ಯಮ, ಬಿ.ಎಡ್ ಮತ್ತು ಡಿ.ಎಡ್ ಶಾಲಾ- ಕಾಲೇಜುಗಳ ಜಂಟಿ ಸ್ವಾತಂತ್ರೋತ್ಸವದ ಧ್ವಜಾರೋಹಣ ಗೈದು ಮಾತನಾಡುತ್ತಿದ್ದರು. ರವೀಂದ್ರ. ಪಿ ಸಂಚಾಲಕರು ವಿವೇಕಾನಂದ ಆಂಗ್ಲ ಮತ್ತು ಕನ್ನಡ ಮಾಧ್ಯಮ, ಪ್ರಾಸ್ತಾವಿಕಮಾತನಾಡಿದರು. […]

ಕರಾಟೆ-ತಾಲೂಕು ಮಟ್ಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ 2 ಚಿನ್ನ 1 ಬೆಳ್ಳಿ

ಕರಾಟೆ-ತಾಲೂಕು ಮಟ್ಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ 2 ಚಿನ್ನ 1 ಬೆಳ್ಳಿ

Thursday, August 13th, 2015

ದಿನಾಂಕ 10-8-2015 ರಂದು ಕೌಕ್ರಾಡಿ ಸಂತ ಜಾರ್ಜ್‌ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ನಡೆದ ತಾಲ್ಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿನ 8 ನೇ ತರಗತಿ ವಿದ್ಯಾರ್ಥಿ ಸಾತ್ವಿಕ್ ಶರ್ಮ ಬಿ.ಎಸ್. 30-35 ಕೆ.ಜಿ ವಿಭಾಗದ ಬಾಲಕರ ಕುಮಿಟೆಯಲ್ಲಿ ಪ್ರಥಮ ಸ್ಥಾನ, 8 ನೇ ತರಗತಿಯ ಲತೇಶ್‌ ಕೆ.ಎಸ್ 35-40 ಕೆ.ಜಿ ವಿಭಾಗದ ಬಾಲಕರ ಕುಮಿಟೆಯಲ್ಲಿ ಪ್ರಥಮ ಸ್ಥಾನ, 10ನೇ ತರಗತಿಯ ಅಮಿತ್ 30-35 ಕೆ.ಜಿ ಪ್ರೌಢಶಾಲಾ ಬಾಲಕರ ಕುಮಿಟೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಚೆಸ್ ರಾಜ್ಯಮಟ್ಟದಲ್ಲಿ ಸಾತ್ವಿಕ್ ಶರ್ಮ - ಪ್ರಥಮ

ಚೆಸ್ ರಾಜ್ಯಮಟ್ಟದಲ್ಲಿ ಸಾತ್ವಿಕ್ ಶರ್ಮ – ಪ್ರಥಮ

Wednesday, August 12th, 2015

ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ಬೆಂಗಳೂರಿನ ಸಾಂದೀಪನ ವಿದ್ಯಾಲಯ ಶ್ರೀರಾಮಪುರದಲ್ಲಿ ನಡೆದ ಪ್ರಾಂತೀಯ ಕ್ರೀಡಾಕೂಟದ 14ರ ವಯೋಮಾನದ ಚೆಸ್ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿ ಸಾತ್ವಿಕ್ ಶರ್ಮ ಪ್ರಥಮ ಬಹುಮಾನ ಪಡೆದು ಸಪ್ಟೆಂಬರ್ 12 ಮತ್ತು 13 ರಂದು ಚೆನ್ನೈನಲ್ಲಿ ನಡೆಯುವ ದಕ್ಷಿಣ ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ರಾಜೇಶ್ ಶರ್ಮ ಮತ್ತು ಸೀಮಾ ಡಿ.ಎಸ್‌ರವರ ಪುತ್ರ.

ಈಜು ಸ್ಪರ್ಧೆ - ಚಿನ್ನದ ಪದಕ

ಈಜು ಸ್ಪರ್ಧೆ – ಚಿನ್ನದ ಪದಕ

Monday, August 10th, 2015

ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ಬೆಂಗಳೂರಿನಲ್ಲಿ ನಡೆದ ಪ್ರಾಂತೀಯ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತ್ರಿಶೂಲ್, 50 ಮೀ ಬ್ರೆಸ್ಟ್ ಸ್ಟ್ರೋಕ್ ಮತ್ತು 4×100  ಮೀ ರಿಲೇಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದು ದಕ್ಷಿಣ ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ವಿವಿಧ ಪ್ರಶಸ್ತಿ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ವಿವಿಧ ಪ್ರಶಸ್ತಿ

Monday, August 10th, 2015

ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ರೋಟರಿ ಕ್ಲಬ್ ಪುತ್ತೂರು ಮತ್ತು ರೋಟಾರ್‍ಯಾಕ್ಟ್ ಕ್ಲಬ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಪುತ್ತೂರು ತಾಲೂಕು ಮಟ್ಟದ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿನ ಅಂಕಿತಾ ವಿ.ಕೆ – ಭಾಷಣ – ಪ್ರಥಮ, ಅಮಲ್‌ಜಿತ್ – ಛದ್ಮವೇಷ – ದ್ವಿತೀಯ, ಪರೀಕ್ಷಿತ್ – ಛದ್ಮವೇಷ – ತೃತೀಯ ಮತ್ತು ಧನ್ಯಕುಮಾರ್ – ದೇಶಭಕ್ತಿಗೀತೆ – ದ್ವಿತೀಯ ಸ್ಥಾನ ಪಡೆದಿದ್ದಾರೆ.

ರಾಜ್ಯಮಟ್ಟದ ಗುಡ್ಡಗಾಡು ಓಟ - ವಿವೇಕಾನಂದದ ಚೈತ್ರ ಎ. - ಪ್ರಥಮ ಸ್ಥಾನ

ರಾಜ್ಯಮಟ್ಟದ ಗುಡ್ಡಗಾಡು ಓಟ – ವಿವೇಕಾನಂದದ ಚೈತ್ರ ಎ. – ಪ್ರಥಮ ಸ್ಥಾನ

Thursday, August 6th, 2015

ಕ್ರೀಡಾಭಿವೃದ್ಧಿ ಸಮಿತಿ (ರಿ) ಪಂಜ, ಸರಕಾರಿ ಪದವಿಪೂರ್ವ ಕಾಲೇಜು ಪಂಜ ಸುಳ್ಯ ತಾಲೂಕು ದ.ಕ, 15 ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಆಚರಣೆ ಪ್ರಯುಕ್ತ ರಾಜ್ಯಮಟ್ಟದ ಗುಡ್ಡಗಾಡು ಓಟ 2015 ರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 14 ವರ್ಷದ ಒಳಗಿನ ಬಾಲಕಿಯರ ವಿಭಾಗದ 2 ಕಿ.ಮೀ ಓಟದಲ್ಲಿ ಧನುಷ ಶೆಟ್ಟಿ- 6 ನೇ ಸ್ಥಾನ, ದೀಕ್ಷಾ- 5 ನೇ ಸ್ಥಾನ, ಚೈತ್ರಾ.ಎ- ಪ್ರಥಮ ಸ್ಥಾನ , 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ 4 ಕಿ.ಮೀ ಓಟದಲ್ಲಿ ಸುಶ್ಮಿತಾ – 9 ನೇ ಸ್ಥಾನ, […]

ತ್ರೋಬಾಲ್ ಪಂದ್ಯಾಟ - ಪ್ರಥಮ ಸ್ಥಾನ

ತ್ರೋಬಾಲ್ ಪಂದ್ಯಾಟ – ಪ್ರಥಮ ಸ್ಥಾನ

Thursday, August 6th, 2015

ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ಸರಸ್ವತಿ ವಿದ್ಯಾಲಯ ಕಡಬ, ಇಲ್ಲಿ ದಿನಾಂಕ 4-8-2015 ರಂದು ನಡೆದ ಜಿಲ್ಲಾಮಟ್ಟದ 14 ರವಯೋಮಾನದ ತ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಾಲವರ್ಗದ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಾಣ ವಿದ್ಯಾ ಯೋಗ ಚಿಕಿತ್ಸಾ - ಪ್ರಾತ್ಯಕ್ಷಿಕೆ

ಪ್ರಾಣ ವಿದ್ಯಾ ಯೋಗ ಚಿಕಿತ್ಸಾ – ಪ್ರಾತ್ಯಕ್ಷಿಕೆ

Saturday, August 1st, 2015

ಪ್ರಾಣ ವಿದ್ಯಾ, ಯೋಗ ಚಿಕ್ಸಿತೆಯ ಒಂದು ವಿಭಾಗವಾದ ಧ್ಯಾನ, ಪ್ರಾಣಾಯಮ, ಗಣೇಶಾಸನ ಮತ್ತು ವ್ಯಾಯಾಮದ ಮೂಲಕ ಸ್ಮರಣಶಕ್ತಿ, ಪ್ರಾಣಶಕ್ತಿ, ಏಕಾಗ್ರತೆಯನ್ನು ವೃದ್ಧಿಸಿಕೊಂಡು ಜ್ಞಾನಾರ್ಜನೆ ಮಾಡಿಕೊಳ್ಳುವುದು ಹೇಗೆ? ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ಪ್ರಾಣವಿದ್ಯಾ ಯೋಗ ಚಿಕಿತ್ಸಕರು ಮತ್ತು ಮುಡಿಪು – ಇನ್ಫೋಸಿಸ್‌ನ ಉದ್ಯೋಗಿಯಾಗಿರುವ ಶ್ರೀಯುತ ರಾಮಗೋಪಾಲ್ ಮತ್ತು ಅವರ ಸಹಾಯಕರಾದ ಶ್ರೀಯುತ ಸುಕೇಶ್ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಿದರು. ಕಾರ್ಯಕ್ರಮವನ್ನು ಶಿಕ್ಷಕಿ ವೀಣಾಸರಸ್ವತಿ ಮಾತಾಜಿ ನಿರ್ವಹಿಸಿದರು.

ಗುರುಪೂರ್ಣಿಮೆ ಆಚರಣೆ

ಗುರುಪೂರ್ಣಿಮೆ ಆಚರಣೆ

Saturday, August 1st, 2015

ದಿನಾಂಕ 29-07-2015 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ಸರಸ್ವತಿ ವಿದ್ಯಾಲಯ ಕಡಬ ಇಲ್ಲಿನ ಸಂಚಾಲಕರಾದ ವೆಂಕಟರಮಣ ಭಟ್ ಮಂಕುಡೆ ಬೌದ್ಧಿಕ್ ನೀಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಹಿರಿಯ ಶಿಕ್ಷಕರಾದ ವಿಶ್ವನಾಥ ಮುಡೂರು ವಹಿಸಿದ್ದರು. ಶಾಖಾ ಮುಖ್ಯಶಿಕ್ಷಕ ವಿಘ್ನೇಶ್ ಹಾಗೂ ಪ್ರಜ್ವಲ್ ಪ್ರಾರ್ಥಿಸಿದರು. ಎಲ್ಲಾ ವಿದ್ಯಾರ್ಥಿಗಳು ಗುರುದಕ್ಷಿಣೆಯನ್ನು ಅರ್ಪಣೆ ಮಾಡಿದರು. ಕಾರ್ಯಕ್ರಮವನ್ನು ವಿಜಯ್ ಕುಮಾರ್ ನಿರೂಪಿಸಿದರು.

ಪುಸ್ತಕ ದೇಣಿಗೆ

ಪುಸ್ತಕ ದೇಣಿಗೆ

Thursday, July 30th, 2015

ವಿವೇಕಾನಂದ ಬಿ.ಎಡ್‌. ಕಾಲೇಜಿನ ವಿದ್ಯಾರ್ಥಿ- ಶಿಕ್ಷಕರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತರಗತಿ ಗ್ರಂಥಾಲಯಕ್ಕೆ ಪುಸ್ತಕ ರೂಪದಲ್ಲಿ ದೇಣಿಗೆ ನೀಡಿರುತ್ತಾರೆ.

ಚಿತ್ರಕಲಾ ಸ್ಪರ್ಧೆ - ಪ್ರಶಸ್ತಿ

ಚಿತ್ರಕಲಾ ಸ್ಪರ್ಧೆ – ಪ್ರಶಸ್ತಿ

Thursday, July 30th, 2015

ಅಂತರಾಷ್ಟ್ರೀಯ ಹುಲಿ ದಿನಾಚರಣೆಯ ಅಂಗವಾಗಿ ಸಾಂಸ್ಕೃತಿಕ ಕಲಾ ಕೇಂದ್ರ ಬೊಳುವಾರು ಅವರು ಏರ್ಪಡಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಗೌತಮ್ ಎಸ್. – ದ್ವಿತೀಯ ಮತ್ತು ಮುಖೇಶ್ ಕೃಷ್ಣ-ತೃತೀಯ ಸ್ಥಾನ ಪಡೆದಿದ್ದಾರೆ.

ಡಾ|| ಎಪಿಜೆ ಅಬ್ದುಲ್ ಕಲಾಂರವರಿಗೆ ಶ್ರದ್ಧಾಂಜಲಿ

ಡಾ|| ಎಪಿಜೆ ಅಬ್ದುಲ್ ಕಲಾಂರವರಿಗೆ ಶ್ರದ್ಧಾಂಜಲಿ

Tuesday, July 28th, 2015

ಮಾಜಿ ರಾಷ್ಟ್ರಪತಿ ಡಾ|| ಎಪಿಜೆ ಅಬ್ದುಲ್ ಕಲಾಂರವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.  

ತರಗತಿವಾರು ಪೋಷಕರು-ಶಿಕ್ಷಕರ ಸಭೆ

ತರಗತಿವಾರು ಪೋಷಕರು-ಶಿಕ್ಷಕರ ಸಭೆ

Friday, July 24th, 2015
'ಪರಿಸರ ಸಂರಕ್ಷಣೆಗಾಗಿ ಗಿಡನೆಡುವ' ಕಾರ್ಯಕ್ರಮ

‘ಪರಿಸರ ಸಂರಕ್ಷಣೆಗಾಗಿ ಗಿಡನೆಡುವ’ ಕಾರ್ಯಕ್ರಮ

Tuesday, July 21st, 2015

ವಿವೇಕಾನಂದ ಕಾಲೇಜು ಆವರಣದಲ್ಲಿ ನಡೆದ ‘ಪರಿಸರ ಸಂರಕ್ಷಣೆಗಾಗಿ ಗಿಡನೆಡುವ’ ಕಾರ್ಯಕ್ರಮದಲ್ಲಿ ಗೈಡ್ಸ್ ಮತ್ತು ಸ್ಕೌಟ್ಸ್ ಮಕ್ಕಳು ಹಾಗೂ ಶಿಕ್ಷಕರು ಭಾಗವಹಿಸಿರುತ್ತಾರೆ.

ಈಜು ಸ್ಪರ್ಧೆ - ಪ್ರಥಮ

ಈಜು ಸ್ಪರ್ಧೆ – ಪ್ರಥಮ

Monday, July 20th, 2015

ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ಇವರು ಶಾರದಾ ವಿದ್ಯಾನಿಕೇತನ ಮಂಗಳೂರು, ತಲಪಾಡಿ ಇಲ್ಲಿ ನಡೆಸಿದ ಜಿಲ್ಲಾಮಟ್ಟದ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿ ತ್ರಿಶೂಲ್ ಕಿಶೋರ ವರ್ಗದ 50 ಮೀ. ಬ್ರೇಕ್ ಸ್ಟೋಕ್ – ಪ್ರಥಮ, 50 ಮೀ. ಫೀಸ್ಟೈಲ್ ನಲ್ಲಿ ತೃತೀಯ, ಸ್ಥಾನ ಪಡೆದಿರುತ್ತಾರೆ.

ಪ್ರಥಮ ರೂಪಣಾತ್ಮಕ ಮೌಲ್ಯ ಮಾಪನ ಪ್ರಶ್ನಾ ಪತ್ರಿಕೆ ಬಿಡುಗಡೆ

ಪ್ರಥಮ ರೂಪಣಾತ್ಮಕ ಮೌಲ್ಯ ಮಾಪನ ಪ್ರಶ್ನಾ ಪತ್ರಿಕೆ ಬಿಡುಗಡೆ

Monday, July 20th, 2015

ದಿನಾಂಕ 20-07-2015 ರಿಂದ 23-07-2015 ರ ವರೆಗೆ ನಡೆಯಲಿರುವ ಪ್ರಥಮ ರೂಪಣಾತ್ಮಕ ಮೌಲ್ಯ ಮಾಪನ ಪ್ರಶ್ನಾ ಪತ್ರಿಕೆಗಳನ್ನು ವಿವೇಕಾನಂದ ವಿದ್ಯಾವರ್ಧಕ ನಂಘದ ‘ಶಿಕ್ಷಕ-ರಕ್ಷಕ ಸಂಪನ್ಮೂಲ ಘಟಕ’ದಿಂದ ಪೂರೈಕೆಯಾಗಿರುತ್ತದೆ. ನಮ್ಮ ಶಾಲಾ ಪೋಷಕರೂ, ಶಿಕ್ಷಕ-ರಕ್ಷಕ ಸಂಘದ ಸದಸ್ಯರೂ, ವಕೀಲರೂ ಆದ ಶ್ರೀ ಜಯಪ್ರಕಾಶ್ ಎನ್. ಇವರು ಪ್ರಶ್ನಾ ಪತ್ರಕೆಗಳ ಪ್ರತಿಗಳನ್ನು ಬಿಡುಗಡೆಗೊಳಿಸಿ ‘ಪರೀಕ್ಷೆಗಳು ಸುಲಭವಾಗಿದ್ದು ಮಕ್ಕಳಲ್ಲಿ ಪರೀಕ್ಷೆಉ ಬಗ್ಗೆ ಧನಾತ್ಮಕ ಭಾವನೆ ಮೂಡಲಿ’ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರುಗಳು, ಪರೀಕ್ಷಾ ಸಂಯೋಜಕರಾದ ಲೀಲಾವತಿ ಮತ್ತು ಸೌಮ್ಯ ಮಾತಾಜಿಯವರು ಉಪಸ್ಥಿತರಿದ್ದರು.

ಮೌಲ್ಯಗಳನ್ನು ತುಂಬುವ ಸಾಮರ್ಥ್ಯ ಶಿಕ್ಷಕನಿಗೆ ಅಗತ್ಯ - ಶ್ರೀ ನಾರಾಯಣ ಭಟ್ ಟಿ.

ಮೌಲ್ಯಗಳನ್ನು ತುಂಬುವ ಸಾಮರ್ಥ್ಯ ಶಿಕ್ಷಕನಿಗೆ ಅಗತ್ಯ – ಶ್ರೀ ನಾರಾಯಣ ಭಟ್ ಟಿ.

Saturday, July 18th, 2015

ದಿನಾಂಕ 18-07-2015 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶ್ರೀರಾಮ ಕ್ಲಸ್ಟರ್ ಮತ್ತು ವಿವೇಕಾನಂದ ಕ್ಲಸ್ಟರ್‌ನ ಶಿಕ್ಷಕರಿಗಾಗಿ ನಡೆದ, ಶೈಕ್ಷಣಿಕ ಸಂಪನ್ಮೂಲ ಕಾರ್ಯಾಗಾರವನ್ನು ಉದ್ಘಾಟಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಮಕುಂಜದ ಮುಖ್ಯೋಪಾಧ್ಯಾಯರಾದ ಶ್ರೀ ನಾರಾಯಣ ಭಟ್ ಟಿ. ಇವರು ‘ಮಕ್ಕಳಲ್ಲಿ ಮೌಲ್ಯಗಳನ್ನು ತುಂಬುವ ಸಾಮರ್ಥ್ಯ ಶಿಕ್ಷಕನಿಗೆ ಅಗತ್ಯ ಮತ್ತು ಅದು ಶಿಕ್ಷಕರಿಗೆ ಮಾತ್ರ ಇರುವುದು ಎಂದು ನುಡಿದರು. ಅವರು ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಇಂತಹ ಕಾರ್ಯಾಗಾರಗಳನ್ನು ಸಂಘಟಿಸಿ ಶಿಕ್ಷಕರಲ್ಲಿನ ಮೌಲ್ಯಗಳನ್ನು ಉದ್ಧೀಪನಗೊಳಿಸುವ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ’ ಎಂದು […]

ಜನಪದ ಗೀತೆ ಸ್ಪರ್ಧೆ - ಪ್ರಥಮ ಸ್ಥಾನ

ಜನಪದ ಗೀತೆ ಸ್ಪರ್ಧೆ – ಪ್ರಥಮ ಸ್ಥಾನ

Thursday, July 9th, 2015

ಸರ್ವೋದಯ ವಿದ್ಯಾಸಂಸ್ಥೆಗಳು, ಸುಳ್ಯಪದವು ಪುತ್ತೂರು ತಾಲೂಕು, ದ.ಕ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಇವರ ಸಹಯೋಗದೊಂದಿಗೆ ದಿವಂಗತ ಡಾ| ಕೆ.ಪಿ. ಬಾಲಕೃಷ್ಣ ರೈ ಮಧುವನ ನೆಟ್ಟಣಿಗೆ ಇವರ ಸ್ಮರಣಾರ್ಥ ತಾಲೂಕು ಮಟ್ಟದ ‘ಅಂತರ್ ಪ್ರೌಢ ಶಾಲಾ ಜನಪದ ಗೀತೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿನಿ ಕು. ಅರ್ಪಿತಾ ಸಿ.ಪಿ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಶಾಲೆಯ ಪ್ರಗತಿಗೆ ಪೋಷಕರ ಸಹಕಾರ ಅಗತ್ಯ- ಶೋಭಾ ಕೊಳತ್ತಾಯ

ಶಾಲೆಯ ಪ್ರಗತಿಗೆ ಪೋಷಕರ ಸಹಕಾರ ಅಗತ್ಯ- ಶೋಭಾ ಕೊಳತ್ತಾಯ

Tuesday, July 7th, 2015

ಪೋಷಕರು, ಶಿಕ್ಷಕವೃಂದ ಹಾಗೂ ಆಡಳಿತ ಮಂಡಳಿ ಇವರೆಲ್ಲರೂ ಒಂದೇ ಕುಟುಂಬದ ಸದಸ್ಯರಿದ್ದಂತೆ. ಶಾಲೆಯ ಪ್ರಗತಿಗೆ ಪೋಷಕರ ಸಹಕಾರ ಅಗತ್ಯವಿದೆ ಮತ್ತು ಪೋಷಕರು ಶಾಲೆಯ ಎಲ್ಲ ಕಾರ್ಯಗಳಲ್ಲಿ ಭಾಗಿಯಾಗಬೇಕು ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಶೋಭಾ ಕೊಳತ್ತಾಯ ಅಭಿಪ್ರಾಯ ಪಟ್ಟರು. ಶಾಲೆಯ 5 ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆಗೆ ಮುಖ್ಯ ಅತಿಥಿಗಳಾಗಿ ಈ ಮೇಲಿನ ಆಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ಪೋಷಕರು – ಶಿಕ್ಷಕರೊಂದಿಗೆ ತಮ್ಮ ಮಕ್ಕಳ ಕುರಿತಾಗಿ ಸಂವಾದ ನಡೆಸಿದರು. ಸಭೆಯಲ್ಲಿ […]

1 ನೇ ತರಗತಿಯ ಪೋಷಕರ ಸಭೆ

1 ನೇ ತರಗತಿಯ ಪೋಷಕರ ಸಭೆ

Tuesday, July 7th, 2015

ದಿನಾಂಕ 20-6-2015 ನೇ ಶನಿವಾರ ಅಪರಾಹ್ನ 2-15 ಕ್ಕೆ ಸರಿಯಾಗಿ ಪೋಷಕರ ಸಭೆ ನಡೆಸಲಾಯಿತು. ನಮ್ಮ ಶಾಲಾ ಅಧ್ಯಕ್ಷರ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ವಿಭಾಗದ  ಮುಖ್ಯಗುರುಗಳು ಹಾಗೂ ಸಹಶಿಕ್ಷಕ ವೃಂದದವರು ಹಾಜರಿದ್ದರು. ಮುಖ್ಯಗುರುಗಳು ಮಾತನಾಡಿ ಪೋಷಕರು ಮತ್ತು ಶಿಕ್ಷಕರ ನಡುವೆ ಉತ್ತಮ ಬಾಂಧವ್ಯವಿದ್ದಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವೆಂದೂ, ಮಕ್ಕಳ ಹಿತಾಸಕ್ತಿಯನ್ನು ಗಮನಿಸಿ ಪ್ರೋತ್ಸಾಹಿಸಬೇಕೆಂದು ಹೇಳಿದರು. ನಮ್ಮ ಶಾಲಾ ಅಧ್ಯಕ್ಷರಾದ ಡಾ|| ಕೃಷ್ಣಭಟ್ ಕೊಂಕೋಡಿಯವರು ಪೋಷಕರ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು. […]

ವಿಶ್ವ ಯೋಗ ದಿನಾಚರಣೆ

ವಿಶ್ವ ಯೋಗ ದಿನಾಚರಣೆ

Tuesday, June 23rd, 2015

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆಯನ್ನು ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಆಚರಿಸಲಾಯಿತು. ಓಂಕಾರ, ಸೂರ್ಯನಮಸ್ಕಾರ, ನಾಡಿಶೋಧನೆ, 5 ಸರಳ ಆಸನಗಳು, ಪ್ರಾಣಾಯಾಮ, ಸಂಕಲ್ಪ, ಧ್ಯಾನವನ್ನು ಈ ಸಂದರ್ಭದಲ್ಲಿ ಮಾಡಿಸಲಾಯಿತು. ಮತ್ತು ವಿದ್ಯಾರ್ಥಿಗಳಿಗೆ ‘ಆರೋಗ್ಯ ಮತ್ತು ಯೋಗ’ ಎಂಬ ವಿಷಯದ ಕುರಿತು ಪ್ರಬಂಧ ಮತ್ತು ಭಾಷಣ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಶ್ರೀಮತಿ ನಳಿನಿ ವಾಗ್ಲೆ ಇವರು ಬಹುಮಾನ ವಿತರಿಸಿದರು. ಎಲಾ ಶಿಕ್ಷಕರ ಸಹಕಾರದೊಂದಿಗೆ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿಯವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಶಾಲಾ ಮಂತ್ರಿಮಂಡಲ

ಶಾಲಾ ಮಂತ್ರಿಮಂಡಲ

Saturday, June 20th, 2015

ಪ್ರೌಢ ಶಾಲಾ ನಾಯಕಿ : ಅಂಕಿತ ಪ್ರೌಢಶಾಲಾ ಉಪನಾಯಕ: ಪ್ರಜ್ವಲ್ ಪ್ರಾಥಮಿಕ ಶಾಲಾ ನಾಯಕ: ಚೇತಕ್ ಟಿ.ಕೆ. ಪ್ರಾಥಮಿಕ ಶಾಲಾ ಉಪನಾಯಕಿ : ಶೈಲಶ್ರೀ ಪ್ರತಿಪಕ್ಷದ ನಾಯಕಿ: ಅಶ್ವಿನಿ ಯು. ನಾಯಕ್ ಸ್ಪೀಕರ್: ಆಶಿಕಾ ರೈ ಬಿ.ಜಿ. ಸಾಂಸ್ಕೃತಿಕ ಮಂತ್ರಿ: ನಳಿನಿ ವಿದ್ಯಾಮಂತ್ರಿ : ಸಿಂಧೂರ ಲಕ್ಷ್ಮೀ ನೀರಾವರಿ ಮಂತ್ರಿ : ಮನೀಶ್ ಗೃಹ ಮಂತ್ರಿ: ವರುಣ್ ಬಿ.ವೈ. ಕ್ರೀಡಾಮಂತ್ರಿ : ಅನುಷಾ ಆರೋಗ್ಯಮಂತ್ರಿ : ರಾಹುಲ್ ಕಾರ್ಯದರ್ಶಿ : ವಿಶಾಲ್ ನೈರ್ಮಲ್ಯ ಮಂತ್ರಿ : ಶ್ವೇತ ಎಸ್. […]

ಪಠ್ಯಪೂರಕ ಚಟುವಟಿಕೆಗಳ ವಿವರ

ಪಠ್ಯಪೂರಕ ಚಟುವಟಿಕೆಗಳ ವಿವರ

Saturday, June 20th, 2015
ಯೋಗ ಪ್ರಾತ್ಯಕ್ಷಿಕೆ

ಯೋಗ ಪ್ರಾತ್ಯಕ್ಷಿಕೆ

Saturday, June 20th, 2015

ವಿಶ್ವಯೋಗ ದಿನಾಚರಣೆಯ ಪ್ರಯುಕ್ತ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೆ ಯೋಗ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿಯಾದ ಹರಿಣಾಕ್ಷಿ ಹಾಗೂ ಶಾಲಾ ಯೋಗ ಪಟು ವಿದ್ಯಾರ್ಥಿಗಳಿಂದ ಸೂರ್ಯನಮಸ್ಕಾರ, ಸರಳ ವ್ಯಾಯಾಮ, ಪ್ರಾಣಾಯಾಮಗಳ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು. 5 ರಿಂದ 10 ನೇ ತರಗತಿಯ ಮಕ್ಕಳಿಗೆ ‘ಯೋಗ ಹಾಗೂ ಆರೋಗ್ಯ’ ಮತ್ತು’ಸರಳ ಕಲಿಕೆ -ಯೋಗ’ ಎಂಬ ವಿಷಯಗಳ ಬಗ್ಗೆ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳು ನಡೆದವು.

ಪ್ರಮಾಣ ವಚನ ಸ್ವೀಕಾರ

ಪ್ರಮಾಣ ವಚನ ಸ್ವೀಕಾರ

Tuesday, June 16th, 2015

ಚುನಾವಣಾ ಪ್ರಕ್ರಿಯೆ ಮತ್ತು ಮಂತ್ರಿಮಂಡಲದ ಪ್ರಮಾಣ ವಚನ ಸ್ವೀಕಾರ ದಿನಾಂಕ 12-06-2015 ರಂದು ನಡೆಯಿತು. ಶಾಲಾ ಸುಸ್ರುತ ಆಡಳಿತಕ್ಕೆ ಸಂಬಂಧಿಸಿ ಮಂತ್ರಿಮಂಡಲವು ರಚನೆಯಾಗಿದ್ದು ವಿಭಿನ್ನ ಕಾರ್ಯಯೋಜನೆಗಳ ಹಂಚಿಕೆ ಆಡಳಿತ ಹಾಗೂ ಪ್ರತಿಪಕ್ಷಗಳ ಸಂರಚನೆಯಾಗಿದ್ದು ಶಾಲಾ ಆಡಳಿತ ಮಂತ್ರಿಗಳಿಗೆ ಹಿರಿಯ ಸಹಶಿಕ್ಷಕಿ ಕು.ಲೀಲಾವತಿ ಇವರು ಪ್ರಮಾಣ ವಚನ ಬೋಧಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ್ ಇವರು ತತ್ಸಂಬಂಧಿ ಕಾರ್ಯಯೋಜನೆಗಳ ಸ್ವರೂಪವನ್ನು ತಿಳಿಸಿದರು. ಹಿರಿಯ ಸಹಶಿಕ್ಷಕಿ ರೇವತಿ ಇವರು ಉಪಸ್ಥಿತರಿದ್ದರು.

Highslide for Wordpress Plugin