ರಾಷ್ಟ್ರ ರಕ್ಷೆಯ ರಕ್ಷಾಬಂಧನ ಉತ್ಸವ

ರಾಷ್ಟ್ರ ರಕ್ಷೆಯ ರಕ್ಷಾಬಂಧನ ಉತ್ಸವ

Monday, August 11th, 2014

ನಮ್ಮ ಮತ್ತು ಸಮಾಜದ ನಡುವೆ ಸಂಬಂಧ ಬಲಗೊಳಿಸುವ ಕೊಂಡಿ ರಕ್ಷಾಬಂಧನ ಉತ್ಸವ ಎಂದು ವಿವೇಕಾನಂದ ವಿದ್ಯಾಸಂಸ್ಥೆಗಳು ವಿವೇಕನಗರ, ತೆಂಕಿಲದಲ್ಲಿ ನಡೆದ ರಕ್ಷಾಬಂಧನ ಉತ್ಸವದಲ್ಲಿ ‘ಸಂಸ್ಕೃತ ಭಾರತೀಯ’ ಸಂಚಾಲಕರಾದ ಶ್ರೀ ಆದರ್ಶ ಗೋಖಲೆ ನುಡಿದರು. ಅವರು ಮಾತನಾಡುತ್ತ ಮರ ಹಾಗೂ ಗೋವು ಪರರಿಗೋಸ್ಕರ ಜೀವಿಸುತ್ತದೆ. ಆದರೆ ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂಬುದನ್ನು ಯೋಚಿಸಬೇಕು ಎಂದರು. ರಕ್ಷಾಬಂಧನಕ್ಕೆ ತನ್ನದೇ ಇತಿಹಾಸ ಇದೆ. ಗುರು ಭಗವಧ್ವಜ ದೇಶದ ಮೌಲ್ಯಗಳ ಪ್ರತೀಕ. ರಕ್ಷೆ ನಮಗೆ ವೈಯಕ್ತಿಕ ಜೀವನದ ಜತೆಗೆ ಸಾಮಾಜಿಕ ಜವಾಬ್ದಾರಿಯನ್ನು […]

ಇನ್‌ಸ್ಪೈರ್ ಆವಾರ್ಡ್ ರಾಜ್ಯಮಟ್ಟಕ್ಕೆ ಆಯ್ಕೆ

ಇನ್‌ಸ್ಪೈರ್ ಆವಾರ್ಡ್ ರಾಜ್ಯಮಟ್ಟಕ್ಕೆ ಆಯ್ಕೆ

Saturday, August 9th, 2014

ದಿನಾಂಕ 4-8-2014 ಹಾಗೂ 5-8-2014 ರಂದು ಎಂ.ಜಿ.ಸಿ ಪ್ರೌಢಶಾಲೆ, ಬೋಂದೆಲ್ ಇಲ್ಲಿ ನಡೆದ ಇನ್‌ಸ್ಪೈರ್ ಅವಾರ್ಡ್ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಮಾದರಿ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅರ್ಪಿತಾ ಸಿ.ಪಿ. ಇವರು ಮಂಡಿಸಿದ ‘SMART REFRIGERATOR CUM WATER HEATER’ ಮಾದರಿಯು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.

ವಿದ್ಯಾಭಾರತಿ ಪ್ರಾಂತ ಕ್ರೀಡೆ- ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ- ಪ್ರಥಮ

ವಿದ್ಯಾಭಾರತಿ ಪ್ರಾಂತ ಕ್ರೀಡೆ- ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ- ಪ್ರಥಮ

Thursday, July 31st, 2014

ಬೀದರ್ ನಗರದ ಬಿವಿಬಿ ಕಾಲೇಜು ಆವರಣದಲ್ಲಿ ನಡೆದ ವಿದ್ಯಾಭಾರತಿ ಪ್ರಾಂತೀಯ (ರಾಜ್ಯ)ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತಿನಿಧಿಸಿದ್ದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕಿಶೋರ ವರ್ಗದ ಬಾಲಕಿಯರು ಪ್ರಥಮ ಸ್ಥಾನ ಗಳಿಸಿ ಆಗಸ್ಟ್ 8, 9, 10 ರಂದು ಕೇರಳದ ಪಾಲ್ಕಟ್‌ನಲ್ಲಿ ನಡೆಯುವ ದಕ್ಷಿಣ ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಾಮೂಹಿಕ ಹುಟ್ಟುಹಬ್ಬ ಆಚರಣೆ

ಸಾಮೂಹಿಕ ಹುಟ್ಟುಹಬ್ಬ ಆಚರಣೆ

Monday, July 28th, 2014

ಸಾಮೂಹಿಕ ಹುಟ್ಟುಹಬ್ಬದಂತಹ ಆಚರಣೆಗಳು ಭಾರತದ ಸಂಸ್ಕೃತಿ ಹಾಗೂ ಏಕತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಖ್ಯಾತ ಸಾಹಿತಿ, ನಿವೃತ್ತ ಅಧ್ಯಾಪಕರಾದ ವಿದ್ವಾನ್ ಮಧುರಕಾನನ ಗೋಪಾಲಕೃಷ್ಣ ಭಟ್ ಅವರು ಹೇಳಿದರು. ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 26-07-2014 ರಂದು ನಡೆದ ಸಾಮೂಹಿಕ ಹುಟ್ಟುಹಬ್ಬಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಯುತ ಶ್ಯಾಮ್ ಪ್ರಸಾದ್ ಶಾಸ್ತ್ರಿ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಸುವರ್ಣ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಅನೀಶ್ ಬಡೆಕ್ಕಿಲ, […]

2014-15 ನೇ ಸಾಲಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕ- ರಕ್ಷಕ ಸಂಘಕ್ಕೆ ಆಯ್ಕೆ

2014-15 ನೇ ಸಾಲಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕ- ರಕ್ಷಕ ಸಂಘಕ್ಕೆ ಆಯ್ಕೆ

Monday, July 21st, 2014

2014-15 ನೇ ಸಾಲಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಶ್ರೀ ವಸಂತ ಸುವರ್ಣ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಅಂಬಿಕಾ ಆಯ್ಕೆಯಾದರು.

ಗುರುಪೂರ್ಣಿಮೆ

ಗುರುಪೂರ್ಣಿಮೆ

Tuesday, July 15th, 2014

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 10-7-2014 ರಂದು ಗುರುಪೂರ್ಣಿಮೆ ಆಚರಣೆ ನಡೆಯಿತು. ಶಾಲೆಯ ಹಿರಿಯ ಮಾತಾಜಿ ದುರ್ಗಾದೇವಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಫಾಟಿಸಿದರು. ವಿದ್ಯಾರ್ಥಿಗಳಾದ ಅಕ್ಷಯ್, ಆಶಿಕಾ, ಅಂಕಿತಾ, ಅಶ್ವಿನಿ ಗುರುಪೂರ್ಣಿಮೆ ಆಚರಣೆ ವಿಚಾರದ ಬಗ್ಗೆ ಭಾಷಣಗೈದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವೀಣಾಸರಸ್ವತಿ ಮಾತಾಜಿ ವೇದವ್ಯಾಸರ ಕಥೆಯನ್ನು ಮಕ್ಕಳಿಗೆ ತಿಳಿಸಿದರು. ಶಿಕ್ಷಕಿ ಪೃಥ್ವಿ ಮಾತಾಜಿ ಕಾರ್ಯಕ್ರಮ ನಿರ್ವಹಿಸಿದರು.

ಸ್ವಗೃಹದಲ್ಲಿ ಗುರುವಂದನಾ ಕಾರ್ಯಕ್ರಮ - 'ಅಧ್ಯಯನ ಮತ್ತು ಅಧ್ಯಾಪನ ಅಗತ್ಯ : ವೇದವ್ಯಾಸ

ಸ್ವಗೃಹದಲ್ಲಿ ಗುರುವಂದನಾ ಕಾರ್ಯಕ್ರಮ – ‘ಅಧ್ಯಯನ ಮತ್ತು ಅಧ್ಯಾಪನ ಅಗತ್ಯ : ವೇದವ್ಯಾಸ

Tuesday, July 15th, 2014

ವ್ಯಕ್ತಿಯು ತಾನು ಕಲಿತಿರುವುದನ್ನು ಇನ್ನೊಬ್ಬರಿಗೆ ಹಂಚಿಕೊಳ್ಳುವ ಮತ್ತು ತಾನು ಕಲಿಯುವ ಮೂಲಕ ಜ್ಞಾನವನ್ನು ಬೆಳೆಸಿಕೊಳ್ಳುವ ಕೈಕಂರ್ಯದಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬನಲ್ಲೂ ಅಗಾಧವಾದ ಶಕ್ತಿಹುದುಗಿರುತ್ತದೆ. ಆದರೆ ಆತನಿಗೆ ಅದರ ಅರಿವಿರುವುದಿಲ್ಲ ಅದನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಆ ಶಕ್ತಿಯು ಸಾಗರೋಲ್ಲಂಘನ ಮಾಡಿದ ಹನುಮಂತನಂತೆ ಹೊರ ಚಿಮ್ಮುತ್ತದೆ. ಎಂದು ಗುರುವಂದನೆಯನ್ನು ಸ್ವೀಕರಿಸಿದ ವಿವೇಕಾನಂದ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಶ್ರೀಯುತ ವೇದವ್ಯಾಸರು ಮಕ್ಕಳನ್ನು ಆಶೀರ್ವದಿಸುತ್ತ ಹೇಳಿದರು. ದಿನಾಂಕ 11-07-2014 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು […]

ವಿವೇಕಾನಂದ ಕನ್ನಡ ಮಾಧ್ಯಮದಲ್ಲಿ ಗುರುಪೂಜೆ

ವಿವೇಕಾನಂದ ಕನ್ನಡ ಮಾಧ್ಯಮದಲ್ಲಿ ಗುರುಪೂಜೆ

Thursday, July 10th, 2014

ದಿನಾಂಕ 03-07-2014 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಗುರುಪೂಜೆ ನಡೆಯಿತು. ಗುರು ವ್ಯಾಸರ ಆದರ್ಶ ಪಥದ ಕಥೆಯನ್ನು ಗುರು ಪೂಜೆಗೆ ಔಚಿತ್ಯವೆಂಬತೆ ಹೇಳುವುದರ ಮೂಲಕ ಗುರು ಪೂಜೆಯ ಮಹತ್ವವನ್ನು ಶ್ರೀರಾಮ ಕಲ್ಲಡ್ಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೃಷ್ಣಪ್ರಸಾದ್‌ರವರು ತಿಳಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸ್ವಯಂಸೇವಕರು ಧ್ವಜವಂದನೆ ಸಲ್ಲಿಸಿ ಗುರುಕಾಣಿಕೆ ಅರ್ಪಿಸಿದರು.

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಾನೂನು ಮಾಹಿತಿ ಕಾರ್ಯಾಗಾರ, ಚಿತ್ರಕಲಾ ಸ್ಪರ್ಧೆ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಾನೂನು ಮಾಹಿತಿ ಕಾರ್ಯಾಗಾರ, ಚಿತ್ರಕಲಾ ಸ್ಪರ್ಧೆ

Wednesday, July 2nd, 2014

ಮಾನವನ ಜೀವನಕ್ಕೆ ಪೂರಕವಾದ ಮೂಲಭೂತ ಸೌಲಭ್ಯಗಳು ಅಗತ್ಯವಿರುವಂತೆ ಕಾನೂನಿನ ತಿಳುವಳಿಕೆ ಹೊಂದಿರುವುದು ಅತೀ ಅವಶ್ಯಕ ಎಂದು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಯಾದವ ವನಮಾಲ ಆನಂದರಾವ್ ತಿಳಿಸಿದರು. ಕಾನೂನು ಸೇವಾ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ವಕೀಲರ ಸಂಘ, ಅನಿಕೇತನ ಎಜ್ಯುಕೇಶನಲ್ ಟ್ರಸ್ಟ್ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಜೂ. 28 ರಂದು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆದ ತಾಲೂಕಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ […]

ಭಾರತವು ಸಾಂಸ್ಕೃತಿಕ ಸಮೃದ್ಧ ದೇಶ- ಕಾಂಚನ ಈಶ್ವರ ಭಟ್

ಭಾರತವು ಸಾಂಸ್ಕೃತಿಕ ಸಮೃದ್ಧ ದೇಶ- ಕಾಂಚನ ಈಶ್ವರ ಭಟ್

Monday, June 23rd, 2014

ನಾದಮಯ ಜಗತ್ತಿನಲ್ಲಿರುವ ಪ್ರತಿಯೊಬ್ಬರೂ ಸಂಗೀತ ಪ್ರಿಯರೇ ಸಂಗೀತ ಮನಸ್ಸನ್ನು ಅರಳಿಸುವ ಕೆಲಸ ಮಾಡುತ್ತದೆ ಎಂದು ವಿದ್ವಾನ್ ಕಾಂಚನ ಈಶ್ವರ ಭಟ್ ಹೇಳಿದರು. ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಆಶ್ರಯದಲ್ಲಿ ಸ್ವರಮಾದುರ್ಯ ಸುಗಮ ಸಂಗೀತ ಬಳಗ ದ.ಕ ಇವರ ಸಂಯೋಜನೆಯಲ್ಲಿ ದಿನಾಂಕ 21-6-2014 ೪ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಹಾಡೋಣ ಬನ್ನಿ ಪ್ರೌಢ ಶಾಲಾ ಪಠ್ಯ ಆಧಾರಿತ ಹಾಡುಗಳ ಗಾಯನ ಕಾರ್ಯಕ್ರಮದಲ್ಲಿ ಉದ್ಫಾಟಕರಾಗಿ ಆಗಮಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಶಾಲಾ ಅಧ್ಯಕ್ಷರಾದ ಡಾ.ಕೃಷ್ಣ ಭಟ್ […]

ಪೋಷಕಾಂಶ ಮತ್ತು ಪೋಷಕತ್ವ ಅಗತ್ಯ - ಬಿ.ವಿ ಸೂರ್ಯನಾರಾಯಣ

ಪೋಷಕಾಂಶ ಮತ್ತು ಪೋಷಕತ್ವ ಅಗತ್ಯ – ಬಿ.ವಿ ಸೂರ್ಯನಾರಾಯಣ

Monday, June 23rd, 2014

ಗುಣಾತ್ಮಕ ಸಮಯ ಮತ್ತು ಪ್ರೀತಿ ನೀಡಬೇಕಾದದ್ದು ಪೋಷಕರ ಕೆಲಸ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಬಿ.ವಿ.ಸೂರ್ಯನಾರಾಯಣ ಹೇಳಿದರು. .ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆರು ಮತ್ತು ಏಳನೇ ತರಗತಿ ವಿದ್ಯಾರ್ಥಿಗಳ ಪೋಷಕರಿಗಾಗಿ ‘ಪರಿಣಾಮಕಾರಿ ಪೋಷಕತ್ವ’ ಎಂಬ ವಿಷಯದಲ್ಲಿ ಮಾತನಾಡುತ್ತಾ ಈ ಮೇಲಿನ ಮಾತನ್ನು ಹೇಳಿದರು. ಶಿಕ್ಷಕ ಚಂದ್ರಶೇಖರ್ ಸ್ವಾಗತಿಸಿ, ಪರಿಚಯಿಸಿ ವಂದಿಸಿದರು.

ವಿಶ್ವ ಪರಿಸರ ದಿನಾಚರಣೆ

ವಿಶ್ವ ಪರಿಸರ ದಿನಾಚರಣೆ

Monday, June 23rd, 2014

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಧ್ಯೇಯ ವಾಕ್ಯದಂತೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜಿಡೆಕಲ್ಲು ಇಲ್ಲಿ ದಿನಾಂಕ 5-6-2014 ರಂದು ವಿಶ್ವಪರಿಸರ ದಿನಾಚರಣೆಯನ್ನು ವಿವಿಧ ತಳಿಯ ಸಸಿಗಳನ್ನು ಸುಮಾರು 1 ಎಕ್ರೆ ನೆಡುವುದರ ಮೂಲಕ ಪರಿಸರ ಕಾಳಜಿಯನ್ನು ವ್ಯಕ್ತಪಡಿಸಿದರು. ಇದರ ಮೊದಲು ನಡೆದ ಸಭಾಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಜಿಡೆಕಲ್ಲು ಶಾಲೆಯ ಮುಖ್ಯಗುರುಗಳು ಮತ್ತು ರಾಷ್ಟ್ರೀಯ ಸೇವಾಯೋಜನಾ ಅಧ್ಯಕ್ಷರಾದ ಶ್ರೀರಘುವೀರ್ ಉಬರಡ್ಕ ಹಾಗೂ ಊರಿನ ಗಣ್ಯರಾದ ಶ್ರೀ […]

ಅಪ್ಪ ಅಮ್ಮ ಮಗುವಿಗೆ ಮಾದರಿ - ಎಸ್.ಜಿ.ಭಟ್

ಅಪ್ಪ ಅಮ್ಮ ಮಗುವಿಗೆ ಮಾದರಿ – ಎಸ್.ಜಿ.ಭಟ್

Monday, June 23rd, 2014

ಮಕ್ಕಳು ನಾವು ಹೇಳಿದ ಹಾಗೆ ಮಾಡುವುದಿಲ್ಲ ನಾವು ಮಾಡಿದ ಹಾಗೆ ಮಾಡುತ್ತಾರೆ. ಹಿರಿಯರ ಅನುಕರಣೆಯಿಂದಲೇ ಮಗು ವಿಕಾಸವಾಗುತ್ತದೆ ಎಂದು ಉಜಿರೆಯ ಬೆನಕ ಆಸ್ಪತ್ರೆಯ ಪಬ್ಲಿಕ್ ರಿಲೇಷನ್ ಆಫೀಸರ್ ಆಗಿರುವ ಎಸ್.ಜಿ.ಭಟ್ ಹೇಳಿದರು. ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ನಾಲ್ಕು ಮತ್ತು ಐದನೇ ತರಗತಿ ಮಕ್ಕಳ ಪೋಷಕರಿಗೆ ಪರಿಣಾಮಕಾರಿ ಪೋಷಕತ್ವ ಎಂಬ ವಿಷಯದಲ್ಲಿ ಮಾತನಾಡಿದರು. ಶಿಕ್ಷಕ ರಾಜೇಶ್ ಸ್ವಾಗತಿಸಿ, ಪರಿಚಯಿಸಿ ವಂದಿಸಿದರು.

ಶಾಲಾ ಮಂತ್ರಿಮಂಡಲ 2014-15

ಶಾಲಾ ಮಂತ್ರಿಮಂಡಲ 2014-15

Monday, June 23rd, 2014

ಪ್ರೌಢಶಾಲಾ ನಾಯಕ – ಅಣ್ಣಪ್ಪ ಉಪನಾಯಕ – ರಂಜಿತ್.ಪಿ.ವಿ ಪ್ರಾಥಮಿಕ ಶಾಲಾ ನಾಯಕ – ಶ್ರೇಯಸ್.ಕೆ ಉಪನಾಯಕಿ – ಅಮಿತಾ.ಎಸ್.ಎನ್ ಪ್ರತಿಪಕ್ಷನಾಯಕ – ಪ್ರಣವ ಬೆಳ್ಳಾರೆ ಸ್ಪೀಕರ್ – ರುಫೈದಾ ಗೃಹಮಂತ್ರಿ – ಕೃಷ್ಣ ಶೈಣೈ ಆರೋಗ್ಯ ಮಂತ್ರಿ – ಕಾವ್ಯರತ್ನ ನೈರ್ಮಲ್ಯ ಮಂತ್ರಿ – ವೈದೇಹಿ ಭಟ್.ಪಿ ಸಾಂಸ್ಕೃತಿಕ ಮಂತ್ರಿ – ಸ್ವಾತಿ.ಎನ್.ವಿ ಸಾರಿಗೆ ಮಂತ್ರಿ – ಗುರುಪ್ರಸಾದ್ .ಟಿ ಕ್ರೀಡಾಮಂತ್ರಿ – ವಾಣಿ ನೀರಾವರಿ ಮಂತ್ರಿ – ಪೂಜಾ.ಟಿ.ಎನ್ ವಾರ್ತಾಮಂತ್ರಿ – ಉಬೈದ್ ಶಿಕ್ಷಣ […]

ಹದಿಹರೆಯದ ಮಕ್ಕಳು ನಮ್ಮ ಗೆಳೆಯರು- ಎನ್.ಸಿ. ಪಾಂಡುರಂಗ

ಹದಿಹರೆಯದ ಮಕ್ಕಳು ನಮ್ಮ ಗೆಳೆಯರು- ಎನ್.ಸಿ. ಪಾಂಡುರಂಗ

Monday, June 23rd, 2014

ಮಕ್ಕಳಿಗೆ ವ್ಯಾವಹಾರಿಕ ಜ್ಞಾನವನ್ನು, ಉತ್ತಮ ವಾತಾವರಣವನ್ನು ಕೊಡಬಲ್ಲವರೇ ಪೋಷಕರು. ಮಗುವನ್ನು ಅಂಕಗಳನ್ನು ಗಳಿಸುವ ಯಂತ್ರವೆಂದು ತಿಳಿದು ನಿಮ್ಮ ಆಲೋಚನೆಗಳನ್ನು ಅವರ ಮೇಲೆ ಹೇರದಿರಿ ಎಂದು ರಾಜ್ಯ ತರಬೇತುದಾರರಾದ ಎನ್.ಸಿ.ಪಾಂಡುರಂಗ ಶೃಂಗೇರಿ ಇವರು ಹೇಳಿದರು. ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8, 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳ ಪೋಷಕರಿಗಾಗಿ ‘ಪರಿಣಾಮಕಾರಿ ಪೋಷಕತ್ವ’ ಎಂಬ ವಿಷಯದಲ್ಲಿ ಮಾತನಾಡುತ್ತಾ ಈ ಮೇಲಿನ ಮಾತನ್ನು ಹೇಳಿದರು. ಶಿಕ್ಷಕಿ ಕು.ನಿಶ್ಚಿತಾ ಸ್ವಾಗತಿಸಿ, ಪರಿಚಯಿಸಿ ವಂದಿಸಿದರು.

ವಿದ್ಯಾರ್ಥಿಗಳ ಪೋಷಕರಿಗಾಗಿ ಪರಿಣಾಮಕಾರಿ ಪೋಷಕತ್ವ - ಗಂಗಾಧರ ಬೆಳ್ಳಾರೆ

ವಿದ್ಯಾರ್ಥಿಗಳ ಪೋಷಕರಿಗಾಗಿ ಪರಿಣಾಮಕಾರಿ ಪೋಷಕತ್ವ – ಗಂಗಾಧರ ಬೆಳ್ಳಾರೆ

Friday, June 20th, 2014

ಮನೆಯು ಮಂದಿರವಾಗುವುದು ಮತ್ತು ಮಗುವು ದೇವರಾಗುವುದು ಪೋಷಕರ ಮಾತೆಂಬ ಮಂತ್ರಗಳಿಂದ ಎಂದು ಸಾಲ್ಮರ ಸ್ಕೋಪ್ ಕೌನ್ಸೆಲಿಂಗ್ ಸೆಂಟರ್ ನಿರ್ದೇಶಕ ಗಂಗಾಧರ ಬೆಳ್ಳಾರೆಯವರು ಹೇಳಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಒಂದು ಎರಡು ಮತ್ತು ಮೂರನೇ ತರಗತಿ ವಿದ್ಯಾರ್ಥಿಗಳ ಪೋಷಕರಿಗಾಗಿ ಪರಿಣಾಮಕಾರಿ ಪೋಷಕತ್ವ ಎಂಬ ವಿಷಯದಲ್ಲಿ ಅವರು ಮಾತನಾಡಿದರು. ಕೌಟುಂಬಿಕ ಪರಿಸರವು ಮಕ್ಕಳ ಮನೋವಿಕಾಸದ ಮೇಲೆ ಗಾಢ ಪರಿಣಾಮವನ್ನು ಬೀರುತ್ತದೆ ಎಂದ ಅವರು ಪೋಷಕರ ನೇತ್ಯಾತ್ಮಕ ವರ್ತನೆಗಳು ವಿದ್ಯಾರ್ಥಿಗಳ ಕಲಿಕೆ ಮತ್ತು ಮಾನಸಿಕ ಭದ್ರತೆಯ ಮೇಲೆ ದುಶ್ಪರಿಣಾಮ ಉಂಟುಮಾಡುತ್ತವೆ […]

ಶಾಲಾ ಚುನಾವಣೆ

ಶಾಲಾ ಚುನಾವಣೆ

Saturday, June 14th, 2014

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ದಿನಾಂಕ 12-06-2014 ರಂದು 2014-15 ನೇ ಪ್ರಸಕ್ತ ಶೈಕ್ಷಣಿಕ ಸಾಲಿನ ಶಾಲಾ ಚುನಾವಣೆಯಲ್ಲಿ ಮತದಾನದ ಪೂರ್ಣ ಅರಿವು ಮೂಡಿಸುವ ದೃಷ್ಟಿಯಲ್ಲಿ ಪ್ರಸ್ತುತ ಮತ ಚಲಾವಣೆಯ ರೀತಿಯನ್ನೇ ಅನುಸರಿಸಲಾಗಿತ್ತು. ವರ್ಷದ ಪ್ರೌಢಶಾಲಾ ವಿದ್ಯಾರ್ಥಿ ನಾಯಕನಾಗಿ ಅಣ್ಣಪ್ಪ – 10 ನೇ ತರಗತಿ, ಉಪನಾಯಕನಾಗಿ ರಂಜಿತ್.ಪಿ.ವಿ.- 10 ನೇ ತರಗತಿ ಆಯ್ಕೆಯಾದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿನಾಯಕನಾಗಿ ಶ್ರೇಯಸ್ ಕೆ. ಮತ್ತು ಉಪನಾಯಕಿಯಾಗಿ ಕು. ಅಮಿತಾ ಎಸ್.ಎನ್. ಆಯ್ಕೆಯಾದರು. ಅನಂತರ ಮಂತ್ರಿಮಂಡಲದ ಪ್ರತಿಜ್ಞಾ […]

ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆ

ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆ

Wednesday, June 4th, 2014

2013-14 ನೇ ಸಾಲಿನಲ್ಲಿ ರಾಷ್ಟ್ರಪತಿ ಪುರಸ್ಕಾರ ಪರೀಕ್ಷಾ ಶಿಬಿರವು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರ ಅನ್ನಿಬೆಸೆಂಟ್ ಪಾರ್ಕ್ ದೊಡ್ಡ ಬಳ್ಳಾಪುರ ಮತ್ತು ದಾವಣಗೆರೆ ಕೊಂಡಜ್ಜಿ ಸ್ಕೌಟ್ ಮತ್ತು ಗೈಡ್ಸ್ ತರಬೇತಿ ಕೇಂದ್ರದಲ್ಲಿ ಜರುಗಿದ್ದು ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆಗೆ ಹಾಜರಾಗಿ ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾಗಿರುವ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಕಿರಣ್ ಸುಬ್ರಹ್ಮಣ್ಯ, ನಿಖಿಲ್, ಅಪೂರ್ವ ಗೌರಿ ಮತ್ತು ಪ್ರಜ್ಞಾ ಪಿ.ಆರ್.

ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭ

Wednesday, June 4th, 2014

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇಲ್ಲಿ ಮೇ ತಿಂಗಳಲ್ಲಿ ಜರುಗಿದ ಇಂಗ್ಲಿಷ್ ಸಂವಹನಾ ತರಗತಿಗಳ ಸಮಾರೋಪ ಕಾರ್ಯಕ್ರಮ ಶ್ರೀ ರಾಮಚಂದ್ರ ಭಟ್ ಉಪನ್ಯಾಸಕರು – ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಇಂಗ್ಲಿಷ್ ವಾರ್ತಾ ಪತ್ರಿಕೆ ಓದುವಿಕೆ, ಉಚ್ಚಾರ, ವ್ಯಾಕರಣ, ಭಾಷಾ ತರ್ಜುಮೆ, ಮಾದರಿ ಪಠ್ಯ ಬೋಧನೆ ಮುಂತಾದವುಗಳ ಪ್ರಯೋಜನ ಪಡೆದ ವಿದ್ಯಾರ್ಥಿಗಳು ತಮ್ಮ ತರಬೇತಿಯ ಅನುಭವವನ್ನು ಹಂಚಿಕೊಂಡರು. ವಿದ್ಯಾರ್ಥಿನಿಯರಾದ ಕು.ಶ್ರೀಲಕ್ಷ್ಮೀ ಮತ್ತು ಕು.ದಿವ್ಯಜ್ಯೋತಿ ಇವರು ಕಾವ್ಯಗುಚ್ಛ ಕಾರ್ಯಕ್ರಮ ನಡೆಸಿಕೊಟ್ಟರು. […]

'ಗೀತ ಸಾಹಿತ್ಯ ಸಾಂಸ್ಕೃತಿಕ ವೈಭವ'

‘ಗೀತ ಸಾಹಿತ್ಯ ಸಾಂಸ್ಕೃತಿಕ ವೈಭವ’

Friday, May 30th, 2014

ಲಾಲಿ ಹಾಡು, ಭಜನೆ, ಸುಗಮ ಸಂಗೀತ, ಭಾವಗೀತೆ, ಗೀಗೀ ಪದ, ತತ್ವ ಪದ ಇತ್ಯಾದಿಗಳಲ್ಲಿರುವ ಸತ್ವ ಸಾರ, ಉತ್ತಮ ಜೀವನ ನಿರ್ವಹಣೆಗೆ ಸಹಕಾರಿಯಾಗಿವೆ. ಈ ಹಾಡುಗಳನ್ನು ಹಾಡುವ ಅಭ್ಯಾಸ ಮಾಡಿಕೊಂಡರೆ ನಮ್ಮ ಹತ್ತು ಹಲವು ಸಮಸ್ಯೆಗಳು ಪರಿಹಾರವಾಗುತ್ತವೆ. ಈಗಿನ ಜನಾಂಗದಲ್ಲಿ ಅಗಾಧವಾದ ಶಕ್ತಿ, ಸಾಮರ್ಥ್ಯ ಇದೆ. ಇದರ ಸದುಪಯೋಗದ ಹಾದಿ ತಾನೇ ತಾನಾಗಿ ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದವರು ಶ್ರೀ ವಿಠಲ ನಾಯಕ್- ಶಿಕ್ಷಕರು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ, ಬೊಳಂತಿಮೊಗರು ಇವರು ನಮ್ಮ ಶಾಲೆಯ ಗೀತ ಸಾಹಿತ್ಯ […]

ಶಾಲಾ ಪ್ರಾರಂಭೋತ್ಸವ

ಶಾಲಾ ಪ್ರಾರಂಭೋತ್ಸವ

Friday, May 30th, 2014

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ದಿನಾಂಕ 29-05-2014 ೪ರಂದು ಶಾಲೆ ಪ್ರಾರಂಭವಾಯಿತು. ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಶಾಲಾ ಶ್ರೀಮಾನ್ ಮತ್ತು ಮಾತಾಜಿಯವರು ಆದರದಿಂದ ಬರಮಾಡಿಕೊಂಡರು. ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ಮತ್ತು ಪಾನಕ ಹಂಚುವುದರ ಮೂಲಕ ಶಾಲೆಯಲ್ಲಿ ಹಬ್ಬದ ವಾತಾವರಣವನ್ನು ಕಾಣಬಹುದಾಗಿತ್ತು.

ಶಿಕ್ಷಕರ ಕಾರ್ಯಾಗಾರ

ಶಿಕ್ಷಕರ ಕಾರ್ಯಾಗಾರ

Wednesday, May 28th, 2014

ದಿನಾಂಕ 27-05-2014 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಭಾಷಾ ಶಿಕ್ಷಕರಿಗಾಗಿ ಸಿ.ಸಿ.ಇ ತರಬೇತಿ ಕಾರ್ಯಾಗಾರವು ನಡೆಯಿತು. ಶಿಕ್ಷಕರಾದ ಶ್ರೀ ಸದಾಶಿವ ನಾಯಕ್‌ರವರು ಸಿ.ಸಿ.ಇ ಯನ್ನು ಯಾವ ರೀತಿ ಭಾಷಾ ಮಾಧ್ಯಮದಲ್ಲಿ ತೊಡಗಿಸಿಕೊಳ್ಳಬಹುದು ಎಂಬುದಾಗಿ ಮಾಹಿತಿ ನೀಡಿದರು.

ಅಭಿನಂದನಾ ಕಾರ್ಯಕ್ರಮ

ಅಭಿನಂದನಾ ಕಾರ್ಯಕ್ರಮ

Tuesday, May 27th, 2014

ದಿನಾಂಕ 26-05-2014 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಇಲ್ಲಿ 2013-14 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಡಾ.ಶೋಭಿತಾ ಸತೀಶ್ ರವರು ಸಂದರ್ಬೋಚಿತವಾಗಿ ಮಾತನಾಡಿ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದರು. ಶಾಲಾ ಸಂಚಾಲಕರಾದ ಶ್ರೀ. ರವೀಂದ್ರ.ಪಿ ರವರು ಮಾತನಾಡಿ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಭಿರ್ಮಣ್ಣ ಗೌಡ, ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರಾದ […]

2014ರ ಶಾಲಾ ಫಲಿತಾಂಶ

2014ರ ಶಾಲಾ ಫಲಿತಾಂಶ

Thursday, May 15th, 2014
ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು -  2014ರ ಶಾಲಾ ಫಲಿತಾಂಶ 97%

ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು – 2014ರ ಶಾಲಾ ಫಲಿತಾಂಶ 97%

Monday, May 12th, 2014
ದೀಪ ಪ್ರದಾನ - ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ

ದೀಪ ಪ್ರದಾನ – ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ

Saturday, April 12th, 2014

‘ಅಂಕಗಳನ್ನು ಮೀರಿದ ಬದುಕನ್ನು ಕಲಿಸಿ ಆಂತರಿಕ ಶಿಸ್ತು, ಪ್ರೀತಿ, ಸಂಸ್ಕೃತಿಯನ್ನು ಕಲಿಸುವ ತಾಣವೇ ಶಾಲೆ, ಇದರ ಜೀವಂತ ಪಾತ್ರವೇ ಶಿಕ್ಷಕರು, ಸಾಕಾರ ರೂಪವೇ ಮಕ್ಕಳು’ ಎಂದು ಪೋಷಕರಾದ ಶ್ರೀಮತಿ ಸುನಿತಾ ಚಂದು ಶೆಟ್ಟಿ ನುಡಿದರು. ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿಯ ಮಕ್ಕಳಿಗೆ ನಡೆದ ದೀಪ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಸಂಚಾಲಕರು, ಆಯ್ದ ಪೋಷಕ ಸಮಿತಿಯ ಅಧ್ಯಕ್ಷರಾದ ಶ್ರೀ ವೆಂಕಪ್ಪ ನಾಯ್ಕ್ ಉಪಸ್ಥಿತರಿದ್ದರು. ಶಾಲಾ ಅಧ್ಯಕ್ಷರಾದ ಡಾ|| ಕೃಷ್ಣ […]

ಯಕ್ಷ ಚಿಣ್ಣರ ಬಳಗ ತೆಂಕಿಲ - ಯಕ್ಷಗಾನ ತರಬೇತಿ ಶಿಬಿರ

ಯಕ್ಷ ಚಿಣ್ಣರ ಬಳಗ ತೆಂಕಿಲ – ಯಕ್ಷಗಾನ ತರಬೇತಿ ಶಿಬಿರ

Saturday, April 12th, 2014

ದಿನಾಂಕ 1-4-2014 ರಿಂದ 10-4-2014 ರವರೆಗೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಯಕ್ಷ ಚಿಣ್ಣರ ಬಳಗದ ವತಿಯಿಂದ ಯಕ್ಷಗಾನ ತರಬೇತಿ ಶಿಬಿರವು ಶಿಕ್ಷಕ ಶ್ರೀ ಚಂದ್ರಶೇಖರ ಬಿ. ಇವರ ನೇತೃತ್ವದಲ್ಲಿ ನಡೆಯಿತು. ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಬಾಲಕೃಷ್ಣ ಪೂಜಾರಿ, ಶ್ರೀ ಅಪ್ಪಕುಂಞ ಯಾದವ್, ಶ್ರೀ ಜಯಪ್ರಕಾಶ್ ಕಲ್ಮಡ್ಕ ರವರು ನಾಟ್ಯ, ಯಕ್ಷಗಾನದ ಹಿನ್ನೆಲೆ, ಬಣ್ಣಗಾರಿಕೆ ಮೊದಲಾದ ವಿಷಯಗಳ ಬಗ್ಗೆ ತರಬೇತಿ ನೀಡಿದರು.

ಜೀವನ ಪ್ರೀತಿ ಕಲಿಸುವ ಶಿಕ್ಷಣ ಅಗತ್ಯ-ಕುಂಟಿನಿ

ಜೀವನ ಪ್ರೀತಿ ಕಲಿಸುವ ಶಿಕ್ಷಣ ಅಗತ್ಯ-ಕುಂಟಿನಿ

Friday, March 28th, 2014

ಬದುಕಿನ ಪ್ರತಿ ಅನುಭವವೂ ಯಾವುದೇ ಪದವಿಗೂ ಕಡಿಮೆಯಿಲ್ಲ. ಇದು ಶಿಕ್ಷಣ ಪ್ರಕ್ರಿಯೆಯ ಒಂದು ಭಾಗ. ನಿರಂತರ ಅಧ್ಯಯನ ಶೀಲತೆ ಶಿಕ್ಷಕರಿಗೆ ಅತಿ ಅಗತ್ಯ ಎಂದು ಪತ್ರಕರ್ತ ಹಾಗೂ ಲೇಖಕ ಗೋಪಾಲಕೃಷ್ಣ ಕುಂಟಿನಿ ನುಡಿದರು. ಇವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ‘ಶಿಕ್ಷಕರಿಗಾಗಿ ಶೈಕ್ಷಣಿಕ ಕಾರ್ಯಾಗಾರ’ದ ಉದ್ಫಾಟನೆಯನ್ನು ನೇರವೇರಿಸಿ ಕಾರ್ಯಾಗಾರದ ಪ್ರಸ್ತುತತೆಯನ್ನು ಮೆಚ್ಚಿಕೊಂಡರು. ಸಭಾಧ್ಯಕ್ಷತೆ ವಹಿಸಿದ ಶಾಲಾಧ್ಯಕ್ಷರಾದ ಡಾ.ಕೃಷ್ಣ ಭಟ್ ಕೊಂಕೋಡಿ ಇವರು ಮಕ್ಕಳು ಭತ್ತ ತುಂಬಿಸುವ ಚೀಲಗಳಾಗದೆ ಭತ್ತ ಬೆಳೆಯುವ […]

'ಅಪರಾಧ ಶಾಸ್ತ್ರ ಮತ್ತು ನ್ಯಾಯ ವಿಜ್ಞಾನ ಶಾಸ್ತ್ರ' ಪ್ರಾತ್ಯಕ್ಷಿಕೆ ಹಾಗೂ ಪ್ರದರ್ಶನ

‘ಅಪರಾಧ ಶಾಸ್ತ್ರ ಮತ್ತು ನ್ಯಾಯ ವಿಜ್ಞಾನ ಶಾಸ್ತ್ರ’ ಪ್ರಾತ್ಯಕ್ಷಿಕೆ ಹಾಗೂ ಪ್ರದರ್ಶನ

Friday, March 14th, 2014

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಹಾಗೂ ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯ, ಮಂಗಳೂರು ಇದರ ಸಹಪ್ರಾಯೋಜಕತ್ವದಲ್ಲಿ ‘ಅಪರಾಧ ಶಾಸ್ತ್ರ ಮತ್ತು ನ್ಯಾಯ ವಿಜ್ಞಾನ ಶಾಸ್ತ್ರ’ ವಿಭಾಗದಿಂದ ಪ್ರಾತ್ಯಕ್ಷಿಕೆ ಹಾಗೂ ಪ್ರದರ್ಶನವು ದಿನಾಂಕ 11-03-2014 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಜರುಗಿತು. ಶಾಲಾ ಅಧ್ಯಕ್ಷರಾದ ಡಾ|ಕೆ.ಎಂ ಕೃಷ್ಣ ಭಟ್ ಕೊಂಕೋಡಿ ಕಾರ್ಯಕ್ರಮವನ್ನು ಉದ್ಫಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾದ ಪುತ್ತೂರಿನ ಖ್ಯಾತ ವಕೀಲರಾದ ಶ್ರೀ ಕೆ.ಆರ್ ಆಚಾರ್ಯ ಇವರು ‘ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯ ಮಹತ್ವ […]

ಚಿತ್ರಕಲಾ ಸ್ಪರ್ಧೆ ರಾಜ್ಯಮಟ್ಟದಲ್ಲಿ: ದ್ವಿತೀಯ

ಚಿತ್ರಕಲಾ ಸ್ಪರ್ಧೆ ರಾಜ್ಯಮಟ್ಟದಲ್ಲಿ: ದ್ವಿತೀಯ

Friday, March 14th, 2014

ಶಾಂತಿವನ ಟ್ರಸ್ಟ್ ಧರ್ಮಸ್ಥಳ ಇವರು ನಡೆಸಿದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ನಮ್ಮ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿ ರಾಮ್ ಪ್ರಸಾದ್ ದ್ವಿತೀಯ ಬಹುಮಾನ ಪಡೆದಿರುತ್ತಾನೆ.

ಕರಾಟೆ - ರಾಷ್ಟ್ರಮಟ್ಟದಲ್ಲಿ ಚಿನ್ನ

ಕರಾಟೆ – ರಾಷ್ಟ್ರಮಟ್ಟದಲ್ಲಿ ಚಿನ್ನ

Monday, February 24th, 2014

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ವಿಶಾಖ ಬುಡೋಕಾನ್ ಕರಾಟೆ ಫೆಡರೇಶನ್ ವತಿಯಿಂದ ಫೆ.7 ರಿಂದ 9 ರ ತನಕ ನಡೆದ 11ನೇ ರಾಷ್ಟ್ರಮಟ್ಟದ ಮುಕ್ತ ಚಾಂಪಿಯನ್‌ಶಿಪ್‌ನಲ್ಲಿ 35-40 ಕೆ.ಜಿ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ 8ನೇ ತರಗತಿ ವಿದ್ಯಾರ್ಥಿ ಶ್ರಮಿತ್ ಕೆ. ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಪ್ರತಿಭಾ ಪುರಸ್ಕಾರ

ಪ್ರತಿಭಾ ಪುರಸ್ಕಾರ

Monday, February 24th, 2014

ದಿನಾಂಕ 12-02-2014 ರಂದು ‘ವಿವೇಕಾನಂದ ಜಯಂತಿ’ಯ ಶುಭ ಸಂದರ್ಭದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಮತಿ ಡಾ|ಆಶಾ ರವರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು, ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷರು, ಶಾಲಾ ಆಡಳಿತ ಮಂಡಳಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  

ಗಾನ- ನೃತ್ಯ- ಯಕ್ಷ ಸಂಭ್ರಮ -2014

ಗಾನ- ನೃತ್ಯ- ಯಕ್ಷ ಸಂಭ್ರಮ -2014

Saturday, February 22nd, 2014

ಶಾಲಾ ದಿನಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಸಂಗೀತ, ಭರತನಾಟ್ಯ, ಯಕ್ಷಗಾನ ತರಗತಿಗಳಿಗೊಂದು ವಾರ್ಷಿಕ ವೇದಿಕೆಯೇ ಗಾನ – ನೃತ್ಯ ಯಕ್ಷ ಸಂಭ್ರಮ. ಸುಮಾರು 200 ರಷ್ಟು ಮಕ್ಕಳು ಈ ತರಗತಿಗಳ ಉಪಯೋಗ ಪಡೆಯುತ್ತಿದ್ದು ಪ್ರತಿವರ್ಷ ನಡೆಯುತ್ತಿರುವ ಗಾನ – ನೃತ್ಯ – ಯಕ್ಷ ಸಂಭ್ರಮದ ಪ್ರಸ್ತುತ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿದುಷಿ ಸೌಮ್ಯ ಸುದೀಂದ್ರ ರಾವ್, ದೀಪ ಬೆಳಗಿಸಿ ಪ್ರಾರ್ಥಿಸಿದ ಶಾಲೆಯ ಹಿರಿಯ ವಿದ್ಯಾರ್ಥಿನಿ ಕು.ಅದಿತಿ.ಕೆ.ಟಿ. ಹಾಗೂ ಸಭಾಧ್ಯಕ್ಷರಾಗಿ ಅಧ್ಯಕ್ಷೀಯ ಮಾತುಗಳನ್ನಾಡಿದ ಯಕ್ಷಗಾನ ಕಲಾವಿದ […]

1-3-2013 ರಂದು ಅಪರಾಧ ಶಾಸ್ತ್ರ ಮತ್ತು ನ್ಯಾಯ ವಿಜ್ಞಾನ ಶಾಸ್ತ್ರ ವಿಭಾಗದಿಂದ ಪ್ರಾತ್ಯಕ್ಷಿಕೆ ಹಾಗೂ ಪ್ರದರ್ಶನ

1-3-2013 ರಂದು ಅಪರಾಧ ಶಾಸ್ತ್ರ ಮತ್ತು ನ್ಯಾಯ ವಿಜ್ಞಾನ ಶಾಸ್ತ್ರ ವಿಭಾಗದಿಂದ ಪ್ರಾತ್ಯಕ್ಷಿಕೆ ಹಾಗೂ ಪ್ರದರ್ಶನ

Saturday, February 22nd, 2014
ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ

Tuesday, January 28th, 2014

65ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆಯನ್ನು ಜನವರಿ 26ರಂದು ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಮಾಧವ ಬಿ.ಕೆ (ಮಾಜಿ ಸೈನಿಕರು) ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಪುತ್ತೂರು ಇವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಅದೇ ರೀತಿ ಶ್ರೀಯುತ ವಸಂತ ಸುವರ್ಣ- ಲೇತ್ ಉದ್ಯಮಿ ಸುವರ್ಣ ಇಂಡಸ್ಟ್ರೀಸ್ ಬನ್ನೂರು ಇವರು ಮುಖ್ಯ ಅತಿಥಿಯಾಗಿ ಆಗಮಿಸಿ, ಗಣರಾಜ್ಯೋತ್ಸವದ ಮಹತ್ವದ ಕುರಿತು ಶುಭಸಂದೇಶ ನೀಡಿದರು. ಕಾರ್ಯಕ್ರಮದ ಅಧ್ಯಕ್ಷರಾಗಿ ವಿವೇಕಾನಂದ ವಿದ್ಯಾಸಂಸ್ಥೆಗಳು ತೆಂಕಿಲ ಇಲ್ಲಿನ […]

ಭಾವಗೀತೆ / ಜಾನಪದ ಗೀತೆ ಸ್ಪರ್ಧಾ ವಿಜೇತರು

ಭಾವಗೀತೆ / ಜಾನಪದ ಗೀತೆ ಸ್ಪರ್ಧಾ ವಿಜೇತರು

Saturday, January 25th, 2014

14 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಈಶ್ವರಮಂಗಲ, ಪುತ್ತೂರು ಇಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳು, ಶ್ರೀಲಕ್ಷ್ಮೀ – ಜನಪದ ಗೀತೆ – ದ್ವಿತೀಯ ಕೀರ್ತಿ ಕುಡ್ವ – ಭಾವಗೀತೆ – ಪ್ರಥಮ ಅರ್ಪಿತಾ ಸಿ.ಪಿ – ಭಾವಗೀತೆ – ದ್ವಿತೀಯ

ಸ್ಪರ್ಧಾ ವಿಜೇತರು

ಸ್ಪರ್ಧಾ ವಿಜೇತರು

Saturday, January 25th, 2014

ವಿವೇಕಾನಂದರ 150ನೇ ವರ್ಷಾಚರಣೆ ಪ್ರಯುಕ್ತ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಜರುಗಿದ ಸ್ಪರ್ಧೆಗಳ ವಿಜೇತರು. ಪಲ್ಲವಿ – ದೇಶಭಕ್ತಿ ಗೀತೆ – ದ್ವಿತೀಯ ವರುಣ್ ಕುಮಾರ್ – ದೇಶಭಕ್ತಿಗೀತೆ – ತೃತೀಯ ಸಾತ್ವಿಕ್ ಶರ್ಮ – ಭಾಷಣ – ದ್ವಿತೀಯ ಅರ್ಪಿತಾ ಸಿ.ಪಿ – ದೇಶಭಕ್ತಿ ಗೀತೆ – ಪ್ರಥಮ ಕೀರ್ತಿ ಕುಡ್ವ – ದೇಶಭಕ್ತಿ ಗೀತೆ – ದ್ವಿತೀಯ ಯಶಸ್ವಿ ನಾರಾಯಣ, ಶ್ರೇಯಸ್ ಆಚಾರ್, ವಿಘ್ನೇಶ್- ರಸಪ್ರಶ್ನೆ ಪ್ರಥಮ.  

ಎಸ್.ಎಸ್.ಎಲ್.ಸಿ ಪರೀಕ್ಷೆ ನಮ್ಮ ಸ್ನೇಹಿತ - ಬಿ.ವಿ. ಸೂರ್ಯನಾರಾಯಣ

ಎಸ್.ಎಸ್.ಎಲ್.ಸಿ ಪರೀಕ್ಷೆ ನಮ್ಮ ಸ್ನೇಹಿತ – ಬಿ.ವಿ. ಸೂರ್ಯನಾರಾಯಣ

Saturday, January 25th, 2014

ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಬದುಕಿನ ಒಂದು ಭಾಗವಾಗಿ ಗ್ರಹಿಸಬೇಕಾಗಿದೆ. ಪರೀಕ್ಷಾ ಪೂರ್ವ ತಯಾರಿಯು ಸಮರ್ಪಕವಾಗಿದ್ದು ಯಾವುದೇ ಒತ್ತಡವಿಲ್ಲದೆ ನಮ್ಮ ಸ್ನೇಹಿತನಂತೆ ಪರೀಕ್ಷೆಯನ್ನು ಕಾಣಬೇಕು. ಎಂದು ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಬಿ.ವಿ. ಸೂರ್ಯನಾರಾಯಣ ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ಮಕ್ಕಳೊಂದಿಗೆ ಪರೀಕ್ಷಾ ಪೂರ್ವ ತಯಾರಿಯ ಬಗ್ಗೆ ಸಂವಾದ ನಡೆಸಿ ಮಾತನಾಡಿದರು.

ಐಟಿ ಕ್ಷೇತ್ರದ ನನ್ನ ಅನುಭವ

ಐಟಿ ಕ್ಷೇತ್ರದ ನನ್ನ ಅನುಭವ

Tuesday, January 21st, 2014

‘ಎಂಜಿನೀಯರಿಂಗ್ ನನ್ನ ಆಸಕ್ತಿಯ ಕ್ಷೇತ್ರ ಪ್ರೀತಿಯಿಂದ ಕಲಿತಾಗ ಯಾವುದೇ ಕ್ಷೇತ್ರದ ಕೆಲಸ ಭಾರವೆನಿಸುವುದಿಲ್ಲ’ ಎಂದು ನಾರಾಯಣ ಸ್ವಾಮಿ ಎಂ.ಕೆ ನುಡಿದರು. ಮಕ್ಕಳೊಂದಿಗೆ ಸಂವಾದ ನಡೆಸಿ ಐಟಿ ಕ್ಷೇತ್ರದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅಂತರ್ ರಾಷ್ಟ್ರೀಯ ಪೇಟಂಟ್(ಸ್ವಾಮ್ಯತ) ಹೊಂದಿರುವ ಶ್ರೀಯುತರು ಇಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಐ.ಟಿ, ಎನ್.ಐ.ಟಿ, ಬಿ.ಐ.ಟಿ ಕಾಲೇಜುಗಳಿಗೆ ತರಬೇತು ನೀಡುತ್ತಿದ್ದು ಮೈಸೂರಿನಲ್ಲಿ ಎಂಬಡೆಡ್ ಟೆಕ್ನಾಲಜಿ ಇನ್ಸಿಟ್ಯೂಟ್ ಹೊಂದಿರುತ್ತಾರೆ. ಶ್ರೀಯುತರನ್ನು ಶಾಲಾ ಶಿಕ್ಷಕಿ ಮಾಧವಿ ಸ್ವಾಗತಿಸಿ ಪರಿಚಯಿಸಿ ವಂದಿಸಿದರು.

ದೀಕ್ಷಾ ಸಮಾರಂಭ

ದೀಕ್ಷಾ ಸಮಾರಂಭ

Tuesday, January 21st, 2014

ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಹತ್ತು ವರ್ಷದ ನಂತರದ ವಿದ್ಯಾರ್ಥಿನಿಯರಿಗೆ ಗೈಡ್ಸ್ ವಿಭಾಗಕ್ಕೆ ಸೇರಿದ ನಂತರ ಅವರಿಗೆ ಪ್ರವೇಶ ಮಾಡಿ ಸದಸ್ಯತ್ವ ಬ್ಯಾಡ್ಜ್ ನೀಡುವ ಸಮಾರಂಭವೇ ದೀಕ್ಷಾ ಸಮಾರಂಭ. ದಿನಾಂಕ 10-01-2014 ನೇ ಶುಕ್ರವಾರ ನಮ್ಮ ಶಾಲಾ ಕ್ರೀಡಾಂಗಣದಲ್ಲಿ ಗೈಡ್ಸ್ ಕ್ಯಾಪ್ಟನ್ ಶ್ರೀಮತಿ ಹರಿಣಾಕ್ಷಿಯವರು ಗೈಡ್ಸ್‌ಗಳಿಗೆ ಪ್ರವೇಶ ಪರೀಕ್ಷೆ ಮಾಡಿ ಮೆಂಬರ್‌ಶಿಪ್ ಬ್ಯಾಡ್ಜ್ ನೀಡಿದರು. ಹಿರಿಯ ಶಿಕ್ಷಕಿ ನಳಿನಿ ಮಾತಾಜಿಯವರು ಸ್ಕೌರ್ಪ್ ಹಾಕಿ ಮಕ್ಕಳಿಗೆ ಶುಭ ಹಾರೈಸಿದರು. ಸ್ವಾತಿ ಮಾತಾಜಿಯವರು ಸಹಕರಿಸಿದರು. ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆ […]

ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ 100% ಫಲಿತಾಂಶ

ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ 100% ಫಲಿತಾಂಶ

Friday, January 17th, 2014

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯವರು ಏರ್ಪಡಿಸಿದ ಡ್ರಾಯಿಂಗ್ ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮಾ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಪ್ರಣವ ಬೆಳ್ಳಾರೆ, ಸಂಗೀತ, ಚಂದನ್ ಎ. ಉಳಿದಂತೆ 23 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಮತ್ತು ಲೋಯರ್ ಗ್ರೇಡ್ ಪರೀಕ್ಷೆಯಲ್ಲಿ ಭಾಗವಹಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಚನಾ.ಕೆ, ನಿಖಿಲ್ ಎಂ.ವಿ, ಮನೀಷ್ ಕುಮಾರ್ ಉಳಿದ 24 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.  

ಸಾಹಿತಿ ಅಮೃತಸೋಮೇಶ್ವರರ ಮಾಹಿತಿ ಸಂಗ್ರಹ

ಸಾಹಿತಿ ಅಮೃತಸೋಮೇಶ್ವರರ ಮಾಹಿತಿ ಸಂಗ್ರಹ

Thursday, January 16th, 2014

ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ಧಾರವಾಡ ಸಂಸ್ಥೆಯು ನಮ್ಮ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇದೂ ಸೇರಿದಂತೆ ರಾಜ್ಯದ ಹಲವಾರು ಶಾಲೆಗಳಿಗೆ ಪಠ್ಯಪೂರಕ ಚಟುವಟಿಕೆಯ ಮಾಹಿತಿ ಪುಸ್ತಕ, ಕೈಪಿಡಿ ಮತ್ತು ಚಾರ್ಟು ಇತ್ಯಾದಿಗಳನ್ನು ಕಳೆದ ನಾಲ್ಕು ವರ್ಷಗಳಿಂದ ನೀಡುತ್ತಾ ಬಂದಿದೆ. ಪಾಠದಲ್ಲಿ ಬರುವ ಕವಿ- ಲೇಖಕರ ಬಗ್ಗೆ ಆಳವಾದ ಸ್ಥೂಲವಾದ ಸಮಗ್ರ ಮಾಹಿತಿಯನ್ನು ಪರಿಚಯ ಮಾಡಿಕೊಡುವುದು ಧ್ವನಿ ಸಂಸ್ಥೆಯ ಉದ್ದೇಶ. ಆ ಪ್ರಯುಕ್ತ ಆರನೇ ತರಗತಿಯ ಪಠ್ಯ ಪುಸ್ತಕದಲ್ಲಿರುವ ಹೃದಯ ವಚನಗಳು ಪದ್ಯದ ಕವಿ ಶ್ರೀ […]

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಗೆ ಶಿಲಾನ್ಯಾಸ ಮತ್ತು ಭೂಮಿ ಪೂಜೆ

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಗೆ ಶಿಲಾನ್ಯಾಸ ಮತ್ತು ಭೂಮಿ ಪೂಜೆ

Friday, January 10th, 2014

ವಿವೇಕಾನಂದ ವಿದ್ಯಾಸಂಸ್ಥೆಗಳು, ವಿವೇಕನಗರ, ಪುತ್ತೂರು, ಇಲ್ಲಿ ನೂತನವಾಗಿ ನಿರ್ಮಿಸಲಾಗುವ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವರ ಕಟ್ಟೆಗೆ ದಿನಾಂಕ 09.12.2013ರ ಸೋಮವಾರ ಶಿಲಾನ್ಯಾಸ ಮತ್ತು ಭೂಮಿ ಪೂಜೆಯನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀ ನನ್ಯ ಅಚ್ಯುತ ಮೂಡಿತ್ತಾಯ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶ್ರೀ ಎಸ್.ಆರ್.ರಂಗಮೂರ್ತಿ, ಕಾರ್ಯದರ್ಶಿ ಶ್ರೀ ಶಿವಪ್ರಸಾದ್.ಇ, ಕಾರ್ಯ ನಿರ್ವಹಣಾ ನಿರ್ದೇಶಕರಾದ ಪ್ರೋ| ಎ.ವಿ.ನಾರಾಯಣ ಹಾಗೂ ಸಂಸ್ಥೆಯ ಸಂಚಾಲಕ ಶ್ರೀ ರವೀಂದ್ರ.ಪಿ, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಪೋಷಕರು, ಮುಖ್ಯೋಪಾಧ್ಯಾಯರು, ಶಿಕ್ಷಕ-ಶಿಕ್ಷಕೇತರ […]

ಕಬ್ಬಡಿ- ದ್ವಿತೀಯ ಸ್ಥಾನ

ಕಬ್ಬಡಿ- ದ್ವಿತೀಯ ಸ್ಥಾನ

Friday, January 10th, 2014

ದಿನಾಂಕ 5-1-2014 ರಂದು ತೆಂಕಿಲ ವಿದ್ಯಾಸಂಸ್ಥೆಯಲ್ಲಿ ನಡೆದ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನಿಂದ ತಾಲೂಕು ಚಾಂಪಿಯನ್ ಶಿಪ್‌ನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿನಿಯರು ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿರುತ್ತಾರೆ.

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿ

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿ

Friday, January 10th, 2014
Highslide for Wordpress Plugin