ಚಿತ್ರಕಲಾ ಸ್ಪರ್ಧೆ ರಾಜ್ಯಮಟ್ಟದಲ್ಲಿ: ದ್ವಿತೀಯ

ಚಿತ್ರಕಲಾ ಸ್ಪರ್ಧೆ ರಾಜ್ಯಮಟ್ಟದಲ್ಲಿ: ದ್ವಿತೀಯ

Friday, March 14th, 2014

ಶಾಂತಿವನ ಟ್ರಸ್ಟ್ ಧರ್ಮಸ್ಥಳ ಇವರು ನಡೆಸಿದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ನಮ್ಮ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿ ರಾಮ್ ಪ್ರಸಾದ್ ದ್ವಿತೀಯ ಬಹುಮಾನ ಪಡೆದಿರುತ್ತಾನೆ.

ಕರಾಟೆ - ರಾಷ್ಟ್ರಮಟ್ಟದಲ್ಲಿ ಚಿನ್ನ

ಕರಾಟೆ – ರಾಷ್ಟ್ರಮಟ್ಟದಲ್ಲಿ ಚಿನ್ನ

Monday, February 24th, 2014

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ವಿಶಾಖ ಬುಡೋಕಾನ್ ಕರಾಟೆ ಫೆಡರೇಶನ್ ವತಿಯಿಂದ ಫೆ.7 ರಿಂದ 9 ರ ತನಕ ನಡೆದ 11ನೇ ರಾಷ್ಟ್ರಮಟ್ಟದ ಮುಕ್ತ ಚಾಂಪಿಯನ್‌ಶಿಪ್‌ನಲ್ಲಿ 35-40 ಕೆ.ಜಿ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ 8ನೇ ತರಗತಿ ವಿದ್ಯಾರ್ಥಿ ಶ್ರಮಿತ್ ಕೆ. ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಪ್ರತಿಭಾ ಪುರಸ್ಕಾರ

ಪ್ರತಿಭಾ ಪುರಸ್ಕಾರ

Monday, February 24th, 2014

ದಿನಾಂಕ 12-02-2014 ರಂದು ‘ವಿವೇಕಾನಂದ ಜಯಂತಿ’ಯ ಶುಭ ಸಂದರ್ಭದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀಮತಿ ಡಾ|ಆಶಾ ರವರು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು, ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷರು, ಶಾಲಾ ಆಡಳಿತ ಮಂಡಳಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  

ಗಾನ- ನೃತ್ಯ- ಯಕ್ಷ ಸಂಭ್ರಮ -2014

ಗಾನ- ನೃತ್ಯ- ಯಕ್ಷ ಸಂಭ್ರಮ -2014

Saturday, February 22nd, 2014

ಶಾಲಾ ದಿನಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಸಂಗೀತ, ಭರತನಾಟ್ಯ, ಯಕ್ಷಗಾನ ತರಗತಿಗಳಿಗೊಂದು ವಾರ್ಷಿಕ ವೇದಿಕೆಯೇ ಗಾನ – ನೃತ್ಯ ಯಕ್ಷ ಸಂಭ್ರಮ. ಸುಮಾರು 200 ರಷ್ಟು ಮಕ್ಕಳು ಈ ತರಗತಿಗಳ ಉಪಯೋಗ ಪಡೆಯುತ್ತಿದ್ದು ಪ್ರತಿವರ್ಷ ನಡೆಯುತ್ತಿರುವ ಗಾನ – ನೃತ್ಯ – ಯಕ್ಷ ಸಂಭ್ರಮದ ಪ್ರಸ್ತುತ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿದುಷಿ ಸೌಮ್ಯ ಸುದೀಂದ್ರ ರಾವ್, ದೀಪ ಬೆಳಗಿಸಿ ಪ್ರಾರ್ಥಿಸಿದ ಶಾಲೆಯ ಹಿರಿಯ ವಿದ್ಯಾರ್ಥಿನಿ ಕು.ಅದಿತಿ.ಕೆ.ಟಿ. ಹಾಗೂ ಸಭಾಧ್ಯಕ್ಷರಾಗಿ ಅಧ್ಯಕ್ಷೀಯ ಮಾತುಗಳನ್ನಾಡಿದ ಯಕ್ಷಗಾನ ಕಲಾವಿದ […]

1-3-2013 ರಂದು ಅಪರಾಧ ಶಾಸ್ತ್ರ ಮತ್ತು ನ್ಯಾಯ ವಿಜ್ಞಾನ ಶಾಸ್ತ್ರ ವಿಭಾಗದಿಂದ ಪ್ರಾತ್ಯಕ್ಷಿಕೆ ಹಾಗೂ ಪ್ರದರ್ಶನ

1-3-2013 ರಂದು ಅಪರಾಧ ಶಾಸ್ತ್ರ ಮತ್ತು ನ್ಯಾಯ ವಿಜ್ಞಾನ ಶಾಸ್ತ್ರ ವಿಭಾಗದಿಂದ ಪ್ರಾತ್ಯಕ್ಷಿಕೆ ಹಾಗೂ ಪ್ರದರ್ಶನ

Saturday, February 22nd, 2014
ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ

Tuesday, January 28th, 2014

65ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆಯನ್ನು ಜನವರಿ 26ರಂದು ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಮಾಧವ ಬಿ.ಕೆ (ಮಾಜಿ ಸೈನಿಕರು) ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಪುತ್ತೂರು ಇವರು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಅದೇ ರೀತಿ ಶ್ರೀಯುತ ವಸಂತ ಸುವರ್ಣ- ಲೇತ್ ಉದ್ಯಮಿ ಸುವರ್ಣ ಇಂಡಸ್ಟ್ರೀಸ್ ಬನ್ನೂರು ಇವರು ಮುಖ್ಯ ಅತಿಥಿಯಾಗಿ ಆಗಮಿಸಿ, ಗಣರಾಜ್ಯೋತ್ಸವದ ಮಹತ್ವದ ಕುರಿತು ಶುಭಸಂದೇಶ ನೀಡಿದರು. ಕಾರ್ಯಕ್ರಮದ ಅಧ್ಯಕ್ಷರಾಗಿ ವಿವೇಕಾನಂದ ವಿದ್ಯಾಸಂಸ್ಥೆಗಳು ತೆಂಕಿಲ ಇಲ್ಲಿನ […]

ಭಾವಗೀತೆ / ಜಾನಪದ ಗೀತೆ ಸ್ಪರ್ಧಾ ವಿಜೇತರು

ಭಾವಗೀತೆ / ಜಾನಪದ ಗೀತೆ ಸ್ಪರ್ಧಾ ವಿಜೇತರು

Saturday, January 25th, 2014

14 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಈಶ್ವರಮಂಗಲ, ಪುತ್ತೂರು ಇಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳು, ಶ್ರೀಲಕ್ಷ್ಮೀ – ಜನಪದ ಗೀತೆ – ದ್ವಿತೀಯ ಕೀರ್ತಿ ಕುಡ್ವ – ಭಾವಗೀತೆ – ಪ್ರಥಮ ಅರ್ಪಿತಾ ಸಿ.ಪಿ – ಭಾವಗೀತೆ – ದ್ವಿತೀಯ

ಸ್ಪರ್ಧಾ ವಿಜೇತರು

ಸ್ಪರ್ಧಾ ವಿಜೇತರು

Saturday, January 25th, 2014

ವಿವೇಕಾನಂದರ 150ನೇ ವರ್ಷಾಚರಣೆ ಪ್ರಯುಕ್ತ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಜರುಗಿದ ಸ್ಪರ್ಧೆಗಳ ವಿಜೇತರು. ಪಲ್ಲವಿ – ದೇಶಭಕ್ತಿ ಗೀತೆ – ದ್ವಿತೀಯ ವರುಣ್ ಕುಮಾರ್ – ದೇಶಭಕ್ತಿಗೀತೆ – ತೃತೀಯ ಸಾತ್ವಿಕ್ ಶರ್ಮ – ಭಾಷಣ – ದ್ವಿತೀಯ ಅರ್ಪಿತಾ ಸಿ.ಪಿ – ದೇಶಭಕ್ತಿ ಗೀತೆ – ಪ್ರಥಮ ಕೀರ್ತಿ ಕುಡ್ವ – ದೇಶಭಕ್ತಿ ಗೀತೆ – ದ್ವಿತೀಯ ಯಶಸ್ವಿ ನಾರಾಯಣ, ಶ್ರೇಯಸ್ ಆಚಾರ್, ವಿಘ್ನೇಶ್- ರಸಪ್ರಶ್ನೆ ಪ್ರಥಮ.  

ಎಸ್.ಎಸ್.ಎಲ್.ಸಿ ಪರೀಕ್ಷೆ ನಮ್ಮ ಸ್ನೇಹಿತ - ಬಿ.ವಿ. ಸೂರ್ಯನಾರಾಯಣ

ಎಸ್.ಎಸ್.ಎಲ್.ಸಿ ಪರೀಕ್ಷೆ ನಮ್ಮ ಸ್ನೇಹಿತ – ಬಿ.ವಿ. ಸೂರ್ಯನಾರಾಯಣ

Saturday, January 25th, 2014

ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಬದುಕಿನ ಒಂದು ಭಾಗವಾಗಿ ಗ್ರಹಿಸಬೇಕಾಗಿದೆ. ಪರೀಕ್ಷಾ ಪೂರ್ವ ತಯಾರಿಯು ಸಮರ್ಪಕವಾಗಿದ್ದು ಯಾವುದೇ ಒತ್ತಡವಿಲ್ಲದೆ ನಮ್ಮ ಸ್ನೇಹಿತನಂತೆ ಪರೀಕ್ಷೆಯನ್ನು ಕಾಣಬೇಕು. ಎಂದು ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಬಿ.ವಿ. ಸೂರ್ಯನಾರಾಯಣ ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ಮಕ್ಕಳೊಂದಿಗೆ ಪರೀಕ್ಷಾ ಪೂರ್ವ ತಯಾರಿಯ ಬಗ್ಗೆ ಸಂವಾದ ನಡೆಸಿ ಮಾತನಾಡಿದರು.

ಐಟಿ ಕ್ಷೇತ್ರದ ನನ್ನ ಅನುಭವ

ಐಟಿ ಕ್ಷೇತ್ರದ ನನ್ನ ಅನುಭವ

Tuesday, January 21st, 2014

‘ಎಂಜಿನೀಯರಿಂಗ್ ನನ್ನ ಆಸಕ್ತಿಯ ಕ್ಷೇತ್ರ ಪ್ರೀತಿಯಿಂದ ಕಲಿತಾಗ ಯಾವುದೇ ಕ್ಷೇತ್ರದ ಕೆಲಸ ಭಾರವೆನಿಸುವುದಿಲ್ಲ’ ಎಂದು ನಾರಾಯಣ ಸ್ವಾಮಿ ಎಂ.ಕೆ ನುಡಿದರು. ಮಕ್ಕಳೊಂದಿಗೆ ಸಂವಾದ ನಡೆಸಿ ಐಟಿ ಕ್ಷೇತ್ರದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅಂತರ್ ರಾಷ್ಟ್ರೀಯ ಪೇಟಂಟ್(ಸ್ವಾಮ್ಯತ) ಹೊಂದಿರುವ ಶ್ರೀಯುತರು ಇಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಐ.ಟಿ, ಎನ್.ಐ.ಟಿ, ಬಿ.ಐ.ಟಿ ಕಾಲೇಜುಗಳಿಗೆ ತರಬೇತು ನೀಡುತ್ತಿದ್ದು ಮೈಸೂರಿನಲ್ಲಿ ಎಂಬಡೆಡ್ ಟೆಕ್ನಾಲಜಿ ಇನ್ಸಿಟ್ಯೂಟ್ ಹೊಂದಿರುತ್ತಾರೆ. ಶ್ರೀಯುತರನ್ನು ಶಾಲಾ ಶಿಕ್ಷಕಿ ಮಾಧವಿ ಸ್ವಾಗತಿಸಿ ಪರಿಚಯಿಸಿ ವಂದಿಸಿದರು.

ದೀಕ್ಷಾ ಸಮಾರಂಭ

ದೀಕ್ಷಾ ಸಮಾರಂಭ

Tuesday, January 21st, 2014

ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಹತ್ತು ವರ್ಷದ ನಂತರದ ವಿದ್ಯಾರ್ಥಿನಿಯರಿಗೆ ಗೈಡ್ಸ್ ವಿಭಾಗಕ್ಕೆ ಸೇರಿದ ನಂತರ ಅವರಿಗೆ ಪ್ರವೇಶ ಮಾಡಿ ಸದಸ್ಯತ್ವ ಬ್ಯಾಡ್ಜ್ ನೀಡುವ ಸಮಾರಂಭವೇ ದೀಕ್ಷಾ ಸಮಾರಂಭ. ದಿನಾಂಕ 10-01-2014 ನೇ ಶುಕ್ರವಾರ ನಮ್ಮ ಶಾಲಾ ಕ್ರೀಡಾಂಗಣದಲ್ಲಿ ಗೈಡ್ಸ್ ಕ್ಯಾಪ್ಟನ್ ಶ್ರೀಮತಿ ಹರಿಣಾಕ್ಷಿಯವರು ಗೈಡ್ಸ್‌ಗಳಿಗೆ ಪ್ರವೇಶ ಪರೀಕ್ಷೆ ಮಾಡಿ ಮೆಂಬರ್‌ಶಿಪ್ ಬ್ಯಾಡ್ಜ್ ನೀಡಿದರು. ಹಿರಿಯ ಶಿಕ್ಷಕಿ ನಳಿನಿ ಮಾತಾಜಿಯವರು ಸ್ಕೌರ್ಪ್ ಹಾಕಿ ಮಕ್ಕಳಿಗೆ ಶುಭ ಹಾರೈಸಿದರು. ಸ್ವಾತಿ ಮಾತಾಜಿಯವರು ಸಹಕರಿಸಿದರು. ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆ […]

ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ 100% ಫಲಿತಾಂಶ

ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ 100% ಫಲಿತಾಂಶ

Friday, January 17th, 2014

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯವರು ಏರ್ಪಡಿಸಿದ ಡ್ರಾಯಿಂಗ್ ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮಾ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಪ್ರಣವ ಬೆಳ್ಳಾರೆ, ಸಂಗೀತ, ಚಂದನ್ ಎ. ಉಳಿದಂತೆ 23 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಮತ್ತು ಲೋಯರ್ ಗ್ರೇಡ್ ಪರೀಕ್ಷೆಯಲ್ಲಿ ಭಾಗವಹಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಚನಾ.ಕೆ, ನಿಖಿಲ್ ಎಂ.ವಿ, ಮನೀಷ್ ಕುಮಾರ್ ಉಳಿದ 24 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.  

ಸಾಹಿತಿ ಅಮೃತಸೋಮೇಶ್ವರರ ಮಾಹಿತಿ ಸಂಗ್ರಹ

ಸಾಹಿತಿ ಅಮೃತಸೋಮೇಶ್ವರರ ಮಾಹಿತಿ ಸಂಗ್ರಹ

Thursday, January 16th, 2014

ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ಧಾರವಾಡ ಸಂಸ್ಥೆಯು ನಮ್ಮ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇದೂ ಸೇರಿದಂತೆ ರಾಜ್ಯದ ಹಲವಾರು ಶಾಲೆಗಳಿಗೆ ಪಠ್ಯಪೂರಕ ಚಟುವಟಿಕೆಯ ಮಾಹಿತಿ ಪುಸ್ತಕ, ಕೈಪಿಡಿ ಮತ್ತು ಚಾರ್ಟು ಇತ್ಯಾದಿಗಳನ್ನು ಕಳೆದ ನಾಲ್ಕು ವರ್ಷಗಳಿಂದ ನೀಡುತ್ತಾ ಬಂದಿದೆ. ಪಾಠದಲ್ಲಿ ಬರುವ ಕವಿ- ಲೇಖಕರ ಬಗ್ಗೆ ಆಳವಾದ ಸ್ಥೂಲವಾದ ಸಮಗ್ರ ಮಾಹಿತಿಯನ್ನು ಪರಿಚಯ ಮಾಡಿಕೊಡುವುದು ಧ್ವನಿ ಸಂಸ್ಥೆಯ ಉದ್ದೇಶ. ಆ ಪ್ರಯುಕ್ತ ಆರನೇ ತರಗತಿಯ ಪಠ್ಯ ಪುಸ್ತಕದಲ್ಲಿರುವ ಹೃದಯ ವಚನಗಳು ಪದ್ಯದ ಕವಿ ಶ್ರೀ […]

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಗೆ ಶಿಲಾನ್ಯಾಸ ಮತ್ತು ಭೂಮಿ ಪೂಜೆ

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಗೆ ಶಿಲಾನ್ಯಾಸ ಮತ್ತು ಭೂಮಿ ಪೂಜೆ

Friday, January 10th, 2014

ವಿವೇಕಾನಂದ ವಿದ್ಯಾಸಂಸ್ಥೆಗಳು, ವಿವೇಕನಗರ, ಪುತ್ತೂರು, ಇಲ್ಲಿ ನೂತನವಾಗಿ ನಿರ್ಮಿಸಲಾಗುವ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವರ ಕಟ್ಟೆಗೆ ದಿನಾಂಕ 09.12.2013ರ ಸೋಮವಾರ ಶಿಲಾನ್ಯಾಸ ಮತ್ತು ಭೂಮಿ ಪೂಜೆಯನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀ ನನ್ಯ ಅಚ್ಯುತ ಮೂಡಿತ್ತಾಯ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶ್ರೀ ಎಸ್.ಆರ್.ರಂಗಮೂರ್ತಿ, ಕಾರ್ಯದರ್ಶಿ ಶ್ರೀ ಶಿವಪ್ರಸಾದ್.ಇ, ಕಾರ್ಯ ನಿರ್ವಹಣಾ ನಿರ್ದೇಶಕರಾದ ಪ್ರೋ| ಎ.ವಿ.ನಾರಾಯಣ ಹಾಗೂ ಸಂಸ್ಥೆಯ ಸಂಚಾಲಕ ಶ್ರೀ ರವೀಂದ್ರ.ಪಿ, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಪೋಷಕರು, ಮುಖ್ಯೋಪಾಧ್ಯಾಯರು, ಶಿಕ್ಷಕ-ಶಿಕ್ಷಕೇತರ […]

ಕಬ್ಬಡಿ- ದ್ವಿತೀಯ ಸ್ಥಾನ

ಕಬ್ಬಡಿ- ದ್ವಿತೀಯ ಸ್ಥಾನ

Friday, January 10th, 2014

ದಿನಾಂಕ 5-1-2014 ರಂದು ತೆಂಕಿಲ ವಿದ್ಯಾಸಂಸ್ಥೆಯಲ್ಲಿ ನಡೆದ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನಿಂದ ತಾಲೂಕು ಚಾಂಪಿಯನ್ ಶಿಪ್‌ನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿನಿಯರು ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿರುತ್ತಾರೆ.

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿ

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿ

Friday, January 10th, 2014
ವಿವೇಕಾನಂದ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

ವಿವೇಕಾನಂದ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Friday, January 10th, 2014

ವಿವೇಕಾನಂದ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇದರ2013-14ನೇ ಸಾಲಿನ ವಾರ್ಷಿಕ ಕ್ರೀಡಾಕೂಟ 02.12.2013 ರಂದು ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು. ಶ್ರೀ ಪ್ರವೀಣ್‌ಚಂದ್ರ ಆಳ್ವ, ಖ್ಯಾತ ಕಬಡ್ಡಿ ಆಟಗಾರ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಕ್ರೀಡೆ ಜೀವನದಲ್ಲಿ ಶಿಸ್ತು ಮತ್ತು ಮಾನಸಿಕ ಒತ್ತಡಗಳನ್ನು ದೂರಮಾಡುತ್ತದೆ ಎಂದು ಹೇಳಿದರು. ಕ್ರೀಡಾ ಸ್ಪೂರ್ತಿಯನ್ನು ಬೆಳೆಸಿಕೊಂಡು ಸಮಾಜದಲ್ಲಿ ಶ್ರೇಷ್ಠ ಕ್ರೀಡಾಳುಗಳ ಸಾಲಿಗೆ ಸೇರುವುದರ ಜೊತೆಗೆ ದೈಹಿಕ ಕ್ಷಮತೆಯನ್ನು ಸಾಧಿಸಬಹುದು ಎಂದರು. ಶ್ರೀ ಸುಂದರ ಗೌಡ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳು, […]

ಜಿಲ್ಲಾ ಮಟ್ಟಕ್ಕೆ ಆಯ್ಕೆ

ಜಿಲ್ಲಾ ಮಟ್ಟಕ್ಕೆ ಆಯ್ಕೆ

Thursday, December 19th, 2013

ಅರಫಾ ವಿದ್ಯಾಕೇಂದ್ರ ಉಪ್ಪಿನಂಗಡಿಯಲ್ಲಿ ಜರುಗಿದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಜನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರೌಢ ಶಾಲಾ ತಂಡ.

ಜಿಲ್ಲಾ ಮಟ್ಟಕ್ಕೆ ಆಯ್ಕೆ

ಜಿಲ್ಲಾ ಮಟ್ಟಕ್ಕೆ ಆಯ್ಕೆ

Thursday, December 19th, 2013

ಅರಫಾ ವಿದ್ಯಾಕೇಂದ್ರ ಉಪ್ಪಿನಂಗಡಿಯಲ್ಲಿ ಜರುಗಿದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಜನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹಿರಿಯ ಪ್ರಾಥಮಿಕ ತಂಡ.

ವಿವೇಕನಗರದಲ್ಲಿ ವಿವೇಕೋತ್ಸವ - 853 ವಿದ್ಯಾರ್ಥಿಗಳಿಂದ ಬೃಹತ್ ಕಲಾ ಪ್ರದರ್ಶನ

ವಿವೇಕನಗರದಲ್ಲಿ ವಿವೇಕೋತ್ಸವ – 853 ವಿದ್ಯಾರ್ಥಿಗಳಿಂದ ಬೃಹತ್ ಕಲಾ ಪ್ರದರ್ಶನ

Wednesday, December 18th, 2013

ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವುದು ಪುತ್ತೂರಿಗೆ ಹೆಮ್ಮೆಯ ವಿಚಾರ. ತಂತ್ರಜ್ಞಾನ ಯುಗದಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂತಹ ಶಾಲೆಗಳಿಂದ ಸಾಧ್ಯ ಎಂದು ಬೆಂಗಳೂರಿನ ಸೌಂದರ್ಯ ಎಜುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಸೌಂದರ್ಯ ಮಂಜಪ್ಪ ಪಿ ಹೇಳಿದರು. ಅವರು ಡಿ. 13 ರಂದು ತೆಂಕಿಲ ವಿವೇಕನಗರದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಹೊನಲು ಬೆಳಕಿನ ವಿವೇಕೋತ್ಸವ ಕಾರ್ಯಕ್ರಮ ನಡೆದ ಬಳಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಅವರು ಧ್ವಜಾರೋಹಣ […]

ಭವಿಷ್ಯತ್ತಿಗಾಗಿ ಯೋಗ

ಭವಿಷ್ಯತ್ತಿಗಾಗಿ ಯೋಗ

Saturday, December 14th, 2013

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್,  ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ ಇವರ ಸಹಯೋಗದಲ್ಲಿ  ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಆಯ್ದ ಶಾಲೆಗಳಲ್ಲಿ ಚಾರಿತ್ರಿಕ ಗಿನ್ನೆಸ್ ದಾಖಲೆಗಾಗಿ ಆಯೋಜಿಸಲಾಗಿರುವ ಅಭೂತಪೂರ್ವ ಕಾರ್ಯಕ್ರಮ ‘ಭವಿಷ್ಯತ್ತಿಗಾಗಿ ಯೋಗ’ ದಿನಾಂಕ 13-12-2013 ರಂದು ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನಡೆಯಿತು.

ಹೊನಲು ಬೆಳಕಿನ ವಿವೇಕೋತ್ಸವ - 2013

ಹೊನಲು ಬೆಳಕಿನ ವಿವೇಕೋತ್ಸವ – 2013

Saturday, November 30th, 2013
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ರಾಷ್ಟ್ರಮಟ್ಟಕ್ಕೆ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ರಾಷ್ಟ್ರಮಟ್ಟಕ್ಕೆ

Friday, November 29th, 2013

ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಣ ಸಂಸ್ಥಾನಂ, ನವದೆಹಲಿ ಮತ್ತು ತಪಸ್ವಿ ಜಗಜೀವನ್ ಜಿ ಮಹಾರಾಜ್ ಸರಸ್ವತಿ ವಿದ್ಯಾಮಂದಿರ ಬೊಕಾರೋ ಸ್ಟೀಲ್ ಸಿಟಿ, ಜಾರ್ಖಾಂಡ್ ಇದರ ಆಶ್ರಯದಲ್ಲಿ ನ. 18 ರಿಂದ ನ. 22 ರವರೆಗೆ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಸೌಮ್ಯಶ್ರೀ.ಎಂ ತ್ರಿವಿಧ ಜಿಗಿತ ಪ್ರಥಮ ಮತ್ತು 100 ಮೀ ಅಡೆತಡೆ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಜನವರಿ 7 ರಿಂದ 12 ರವರೆಗೆ ಜಾರ್ಖಾಂಡ್‌ನ […]

ಶ್ಲೋಕ ಕಂಠಪಾಠ - ದ್ವಿತೀಯ

ಶ್ಲೋಕ ಕಂಠಪಾಠ – ದ್ವಿತೀಯ

Monday, November 25th, 2013

ಶಾಂತಿವನ ಟ್ರಸ್ಟ್ ಧರ್ಮಸ್ಥಳ ಇವರು ನಡೆಸಿದ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ವಿಭಾಗದ ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅರ್ಪಿತಾ ಸಿ.ಪಿ ದ್ವಿತೀಯ ಸ್ಥಾನ ಪಡೆದಿದ್ದಾರೆ

ರಾಷ್ಟ್ರಮಟ್ಟದ ಕರಾಟೆಯಲ್ಲಿ ದ್ವಿತೀಯ ಸ್ಥಾನ

ರಾಷ್ಟ್ರಮಟ್ಟದ ಕರಾಟೆಯಲ್ಲಿ ದ್ವಿತೀಯ ಸ್ಥಾನ

Thursday, November 21st, 2013

ಗುಜರಾತಿನ ಸೂರತ್ ನಗರದಲ್ಲಿ All India Karate Fedaration  ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಸಾತ್ವಿಕ್ ಶರ್ಮ ಬಿ.ಎಸ್. 12 ವರ್ಷದ ಕೆಳಗಿನ ಕಟಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾನೆ. ಮತ್ತು  20 ಕೆ.ಜಿ. ಒಳಗಿನ ವಿಭಾಗದ ಕುಮಿಟೆಯಲ್ಲಿ  2ನೇ ತರಗತಿ ವಿದ್ಯಾರ್ಥಿನಿ ಸಂಹಿತಾ ಶರ್ಮ ಬಿ.ಎಸ್. ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಇವರು ಪುತ್ತೂರಿನ ಷಿಹಾನ್ ಎಂ. ಸುರೇಶ್ ಇವರಲ್ಲಿ ಕರಾಟೆ ಕಲಿಯುತ್ತಿದ್ದಾರೆ.

ಚಿತ್ರಕಲೆ - ಪ್ರಥಮ ಸ್ಥಾನ

ಚಿತ್ರಕಲೆ – ಪ್ರಥಮ ಸ್ಥಾನ

Tuesday, November 19th, 2013

ಶಾಂತಿವನ ಟ್ರಸ್ಟ್ ಧರ್ಮಸ್ಥಳ ಇವರು ನಡೆಸಿದ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ರಾಮ್‌ಪ್ರಸಾದ್ ದ್ವಿತೀಯ ಸ್ಥಾನ ಹಾಗೂ ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ಇವರು ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರು ಶ್ರೀಮಲ್ಲೇಶ್ ಆಚಾರ್ಯ ಮತ್ತು ಶ್ರೀಮತಿ ಅನುರಾಧ ಇವರ ಪುತ್ರ.

ಹಿರಿಯ ವಿದ್ಯಾರ್ಥಿಗಳು ಶಾಲೆಯ ಆಸ್ತಿ- ಡಾ. ಮೋಹನ್ ಕುಮಾರ್ ವೈ.ಎಸ್

ಹಿರಿಯ ವಿದ್ಯಾರ್ಥಿಗಳು ಶಾಲೆಯ ಆಸ್ತಿ- ಡಾ. ಮೋಹನ್ ಕುಮಾರ್ ವೈ.ಎಸ್

Tuesday, November 19th, 2013

ವಿವೇಕಾನಂದ ಕನ್ನಡ ಮಾಧ್ಯಮ ಹಿರಿಯ ವಿದ್ಯಾರ್ಥಿಗಳ ಸಭೆ ಹಿರಿಯ ವಿದ್ಯಾರ್ಥಿಗಳು ಶಾಲೆಯ ಆಸ್ತಿ, ಶಾಲೆಯ ಅಭಿವೃದ್ಧಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯ. ಕನ್ನಡ ಮಾಧ್ಯಮ ಶಾಲೆ ಎಂದು ಯಾವುದೇ ಕೀಳರಿಮೆ ಬೇಡ ಅಂತೆಯೇ ಬಾಲ್ಯದ ಶಾಲೆಯನ್ನು ಯಾರೂ ಮರೆಯಬಾರದು ಎಂದು ಎಂಡೋ ವಿರೋಧಿ ಹೋರಾಟಗಾರ ಡ.ಮೋಹನ್ ಕುಮಾರ್ ವೈ.ಎಸ್ ಹೇಳಿದರು. ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನವೆಂಬರ್ 1 ರಂದು ನಡೆದ ಹಿರಿಯ ವಿದ್ಯಾರ್ಥಿಗಳ ಸಭೆಯಲ್ಲಿ ಅತಿಥಿಯಾಗಿ ಆಗಮಿಸಿ ಯುವಜನತೆ ಹಳ್ಳಿ ತೊರೆದು ಪಟ್ಟಣ ವಾಸಿಗಳಾಗುತ್ತಿರುವುದು […]

ಚಂದನ್- ಸಮಗ್ರ ಪ್ರಶಸ್ತಿ

ಚಂದನ್- ಸಮಗ್ರ ಪ್ರಶಸ್ತಿ

Tuesday, November 19th, 2013

ಪುತ್ತೂರು ಚೆಸ್ ಅಕಾಡೆಮಿ ಆಯೋಜಿಸಿದ ಅಂತರ್ ತಾಲೂಕು ಮಟ್ಟದ ಚೆಸ್ ಸ್ಪರ್ಧೆ-2013 ಇದರಲ್ಲಿ ತೃತೀಯ ಸಮಗ್ರ ಪ್ರಶಸ್ತಿಯೊಂದಿಗೆ ಜೀನಿಯಸ್ ಟ್ರೋಫಿಯನ್ನು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10 ನೇ ತರಗತಿಯ ಚಂದನ್ ಪಡೆದುಕೊಂಡಿದ್ದಾರೆ. ಇವರು ಶಶಿ ಸ್ಟುಡಿಯೋ ಮಾಲಕ ಶ್ರೀ ಶಶಿಧರ್ ಮತ್ತು ಶ್ರೀಮತಿ ಭಾರತಿ ಇವರ ಪುತ್ರ.

ಯೋಗ - ಒಂದು ಚಿಕಿತ್ಸೆ

ಯೋಗ – ಒಂದು ಚಿಕಿತ್ಸೆ

Tuesday, November 19th, 2013

ಶಾರೀರಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ಯೋಗ ಹಾಗೂ ಪ್ರಾಣಾಯಾಮ ಮಾರ್ಗಸೂಚಿ ಎಂದು ನಿವೃತ್ತ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಹಾಗೂ ಯೋಗ ಚಿಕಿತ್ಸಕ ಶ್ರೀ ಶಂಕರನಾರಾಯಣ ಶಾಸ್ತ್ರೀ ನುಡಿದರು. ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲಾ ಮಕ್ಕಳಿಗೆ ಯೋಗ ಒಂದು ಚಿಕಿತ್ಸೆ ಎಂಬ ವಿಷಯದ ಕುರಿತು ಪ್ರಾತ್ಯಕ್ಷಿಕಾ ತರಗತಿ ನಡೆಸಿಕೊಟ್ಟರು.

ಅಭಿನಂದನೆಗಳು

ಅಭಿನಂದನೆಗಳು

Wednesday, November 13th, 2013
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

Tuesday, November 12th, 2013

ತಾಲೂಕು ಮಟ್ಟದ ಪ್ರಾಥಮಿಕ – ಪ್ರೌಢಶಾಲಾ ಕ್ರೀಡಾಕೂಟ- ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ ದಿನಾಂಕ 15-11-2013 ಮತ್ತು 16-11-2013 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ತಂಡ ಸಮಗ್ರ ಪ್ರಶಸ್ತಿ ಪಡೆದಿದೆ. ಇದರಲ್ಲಿ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ (17ರ ವಯೋಮಿತಿ) ಗುರುಪ್ರಸಾದ್ ಎಸ್.ಎನ್ ಬಾಲಕಿಯರ ವಿಭಾಗದಲ್ಲಿ ಸೌಮ್ಯಶ್ರೀ ಮತ್ತು ಪ್ರೌಢಶಾಲಾ ಬಾಲಕಿಯರ […]

ತಾಲೂಕು ಮಟ್ಟದ ಪ್ರಾಥಮಿಕ - ಪ್ರೌಢಶಾಲಾ ಕ್ರೀಡಾಕೂಟ- ವೈಯಕ್ತಿಕ ಚಾಂಪಿಯನ್ಸ್

ತಾಲೂಕು ಮಟ್ಟದ ಪ್ರಾಥಮಿಕ – ಪ್ರೌಢಶಾಲಾ ಕ್ರೀಡಾಕೂಟ- ವೈಯಕ್ತಿಕ ಚಾಂಪಿಯನ್ಸ್

Tuesday, November 12th, 2013

ದಿನಾಂಕ 05-11-2013 ಮತ್ತು  06-11-2013 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ತಂಡ ಸಮಗ್ರ ಪ್ರಶಸ್ತಿ ಪಡೆದಿದೆ. ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ (17ರ ವಯೋಮಿತಿ) ಗುರುಪ್ರಸಾದ್ ಎಸ್.ಎನ್ ಬಾಲಕಿಯರ ವಿಭಾಗದಲ್ಲಿ ಸೌಮ್ಯಶ್ರೀ ಮತ್ತು ಪ್ರೌಢಶಾಲಾ ಬಾಲಕಿಯರ (14 ರ ವಯೋಮಿತಿ) ವಿಭಾಗದಲ್ಲಿ ಅನುಷಾ.ಜಿ ವೈಯಕ್ತಿಕ ಚಾಂಪಿಯನ್ ಪಡೆದಿದ್ದಾರೆ.

೨೦೧೩-೧೪ ನೇ ಸಾಲಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘ

೨೦೧೩-೧೪ ನೇ ಸಾಲಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘ

Tuesday, November 12th, 2013

2013-14 ನೇ ಸಾಲಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀ ವೆಂಕಪ್ಪ ನಾಯ್ಕ  ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಭಾರತಿ ಕೆ.ಎನ್ ಆಯ್ಕೆಯಾಗಿದ್ದಾರೆ.

ಮೇಧಾ ಕಂಪ್ಯೂಟರ್ ಲ್ಯಾಬ್ ಉದ್ಫಾಟನೆ

ಮೇಧಾ ಕಂಪ್ಯೂಟರ್ ಲ್ಯಾಬ್ ಉದ್ಫಾಟನೆ

Friday, November 8th, 2013

ದಿನಾಂಕ ೩೦.೧೦.೧೩ ರಂದು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ  ಅಧ್ಯಕ್ಷರಾದ ಶ್ರೀ ಬಲರಾಮ ಆಚಾರ್ಯ ಇವರ ಅಧ್ಯಕ್ಷತೆಯಲ್ಲಿ ಡಾ.ಎ.ಪಿ. ಭಟ್, ಶಂಕರ ಭಟ್ ಬದನಾಜೆ ಶ್ರೀ ಶಶಿಧರ್ ಜಿ.ಎಸ್ ಇವರೆಲ್ಲರ ಗೌರವ ಉಪಸ್ಥಿತಿಯಲ್ಲಿ ‘ಮೇಧಾ’ ಕಂಪ್ಯೂಟರ್  ಪ್ರಯೋಗಾಲಯಗಳ ಉದ್ಫಾಟನೆ ಜರುಗಿತು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯವರು, ಮುಖ್ಯಗುರುಗಳು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆ

ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆ

Friday, November 8th, 2013

ಅನಿಬೆಸೆಂಟ್ ಪಾರ್ಕ್ ದೊಡ್ಡ ಬಳ್ಳಾಪುರದಲ್ಲಿ  ನಡೆದ 2012 –13 ಸ್ಕೌಟ್ಸ್ ವಿಭಾಗದ ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮಶಾಲೆಯ ವಿದ್ಯಾರ್ಥಿಯಾದ ಚರಣ್‌ ಬಿ. ಎಲ್ ತೇರ್ಗಡೆ ಹೊಂದಿ ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತಾನೆ. ಈತ ಸವಣೂರು ಶ್ರೀ ಲಿಂಗಪ್ಪ ಗೌಡ ಮತ್ತು ಶ್ರೀಮತಿ ಬಿ.ಎಲ್ ಕಸ್ತೂರಿ ದಂಪತಿಯ ಪುತ್ರ. ಪ್ರಸ್ತುತ ಈತ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಥಮ  ಪಿ.ಯು.ಸಿ ವಿದ್ಯಾರ್ಥಿ. ಗೈಡ್ಸ್ ವಿಭಾಗದಲ್ಲಿ  ಕು. ಅನುಷಾ ಕೆ ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತಾಳೆ. ಈಕೆ ಶ್ರೀ ಆನಂದ ಶರ್ಮ […]

ಮಾದರಿ ಪ್ರದರ್ಶನ - ರಾಷ್ಟ್ರಮಟ್ಟಕ್ಕೆ ಆಯ್ಕೆ

ಮಾದರಿ ಪ್ರದರ್ಶನ – ರಾಷ್ಟ್ರಮಟ್ಟಕ್ಕೆ ಆಯ್ಕೆ

Wednesday, October 30th, 2013

ಶಾರದಾ ವಿದ್ಯಾನಿಕೇತನ ತಲಪಾಡಿ  ಮಂಗಳೂರು ಇಲ್ಲಿ ನಡೆದ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಜೇಯ ಕೆ.ಎಚ್, ಅಂಕಿತಾ ವಿ.ಕೆ ಹಾಗೂ ಗಣಿತ ಪ್ರದರ್ಶನದಲ್ಲಿ ಪ್ರತೀಕ್ಷಾ.ಹೆಚ್ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಇವರಲ್ಲಿ ಅಜಯ್ ಕೆ.ಎಚ್ ಪ್ರದರ್ಶಿಸಿದ ‘ಬೆಳಕಿನ ವಕ್ರೀಭವನ ಮತ್ತು ಪ್ರತಿಫಲನ‘ ಮಾದರಿ ರಾಜ್ಯಮಟ್ಟದಲ್ಲಿ ಹಾಗೂ ಮಧ್ಯಕ್ಷೇತ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತದೆ.

ರಾಷ್ಟ್ರಮಟ್ಟಕ್ಕೆ ಆಯ್ಕೆ

ರಾಷ್ಟ್ರಮಟ್ಟಕ್ಕೆ ಆಯ್ಕೆ

Monday, October 28th, 2013

 

ಅಂತರಾಷ್ಟ್ರೀಯ ಚೆಸ್ ಪಂದ್ಯಾಟದಲ್ಲಿ ಪ್ರಶಸ್ತಿ

ಅಂತರಾಷ್ಟ್ರೀಯ ಚೆಸ್ ಪಂದ್ಯಾಟದಲ್ಲಿ ಪ್ರಶಸ್ತಿ

Monday, October 28th, 2013

ಅಕ್ಟೋಬರ್ 18ರಿಂದ 21 ರವರೆಗೆ ಕನ್ಯಾಕುಮಾರಿಯಲ್ಲಿ ಜರುಗಿದ ಅಂತರಾಷ್ಟ್ರೀಯ ಶ್ರೇಯಾಂಕಿತರ (FIDE RATED) ಚೆಸ್ ಪಂದ್ಯಾಟದಲ್ಲಿ ಭಾಗವಹಿಸಿದ್ದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10ನೇ ತರಗತಿಯ ಚಂದನ್ ಎ ಇವರಿಗೆ 15ರ ವಯೋಮಿತಿಯ ವಿಭಾಗದಲ್ಲಿ ಪ್ರಶಸ್ತಿ ಲಭಿಸಿರುತ್ತದೆ. ಪುತ್ತೂರಿನ ‘ಜೀನಿಯಸ್ ಚೆಸ್ ಸ್ಕೂಲ್’ ನಲ್ಲಿ ಚೆಸ್ ತರಬೇತಿಯನ್ನು ಪಡೆಯುತ್ತಿದ್ದಾರೆ. ಇವರು ಶಶಿ ಸ್ಟುಡಿಯೋ ಮಾಲಿಕ ಶ್ರೀ ಶಶಿಧರ್ ಮತ್ತು ಶ್ರೀಮತಿ ಭಾರತಿ ಇವರ ಪುತ್ರ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಅಭಿನಂದನೆ

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಅಭಿನಂದನೆ

Monday, October 28th, 2013

2012-13 ನೇ ಸಾಲಿನ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪುತ್ತೂರು ತಾಲೂಕಿಗೆ ದ್ವಿತೀಯ ಸ್ಥಾನಿಗಳಾಗಿರುವ ಜಯಶ್ರೀ-593 ಅಂಕ, ಶ್ರೀವಿದ್ಯಾ- 593 ಅಂಕ, ಈಶ್ವರ್ ಸಂದೇಶ್ -593 ಅಂಕ ಇವರು ಕರ್ನಾಟಕ ಸರಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದವರು  ನೀಡಿದ ನಗದು ರೂಪದ ಬಹುಮಾನ ಹಾಗೂ ಪ್ರಶಸ್ತಿ ಫಲಕಗಳನ್ನು ಪಡೆದಿರುತ್ತಾರೆ.

ಶೈಕ್ಷಣಿಕ ಪ್ರಯೋಗಗಳು ಅಂಕಿ ಅಂಶಗಳಿಗೆ ಸೀಮಿತವಾಗದಿರಲಿ - ಸಾವಿತ್ರಿ

ಶೈಕ್ಷಣಿಕ ಪ್ರಯೋಗಗಳು ಅಂಕಿ ಅಂಶಗಳಿಗೆ ಸೀಮಿತವಾಗದಿರಲಿ – ಸಾವಿತ್ರಿ

Monday, October 28th, 2013

ದಿನಾಂಕ 27-10-2013 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಶಿಕ್ಷಕರಿಗೆ ಮಕ್ಕಳ ಕಲಿಕಾ ದೋಷ, ಕಲಿಕಾ ನ್ಯೂನತೆ ತಿಳಿಯುವ ಮತ್ತು ನಿವಾರಣೆ ದೃಷ್ಟಿಯಿಂದ ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ಐ.ಇ.ಆರ್.ಟಿ ಪುತ್ತೂರು  ಇಲ್ಲಿನ ಸಂಪನ್ಮೂಲ ವ್ಯಕ್ತಿಯಾಗಿರುವ ಶ್ರೀಮತಿ ಸಾವಿತ್ರಿ ಇವರು ಮಾಹಿತಿ ಕಾರ್ಯಾಗಾರ  ನಡೆಸಿದರು.

ನೃತ್ಯ ವೈವಿಧ್ಯ

ನೃತ್ಯ ವೈವಿಧ್ಯ

Thursday, October 24th, 2013

ದಿನಾಂಕ 28-10-2013 ರಂದು ಶ್ರೀಕೃಷ್ಣ ಲೋಕ ಕಾರ್ಯಕ್ರಮದ ಪ್ರಯುಕ್ತ ನಮ್ಮ ಮಕ್ಕಳಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಮಕ್ಕಳಿಂದ ನಡೆಸಿದ ನೃತ್ಯ ವೈವಿಧ್ಯ ಕಾರ್ಯಕ್ರಮಗಳು.

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ

ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ

Thursday, October 24th, 2013

ಪುತ್ತೂರು:ಅಗೋಸ್ತು 15 :ವಿವೇಕಾನಂದ ವಿದ್ಯಾಸಂಸ್ಥೆ, ತೆಂಕಿಲದಲ್ಲಿ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ದೇಶ ಸೇವೆ ಮಾಡಲು ಸೈನಿಕನಾಗಬೇಕೆಂಬುದು ಸುಳ್ಳು, ದೇಶದ ಮೇಲೆ ಅಭಿಮಾನ ಹೊಂದಿರುವ ನಾವೆಲ್ಲರೂ ಸೈನಿಕರೇ ಆಗಿರುವುದರಿಂದ ದೇಶ ಕಾಯುವ, ರಕ್ಷಿಸುವ ಕಾಯಕ ಮಾಡಬೇಕು ಎಂದು ನಿವೃತ್ತ ಸೈನಿಕರಾದ ಶ್ರೀ ರಮಾನಾಥ ರೈ ವಿಟ್ಲ ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ. ಕೆ.ಎಂ ಕೃಷ್ಣ ಭಟ್, ಸಂಚಾಲಕ ಶ್ರೀ ರವೀಂದ್ರ.ಪಿ, ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಶೋಭಾ ಕೊಳತ್ತಾಯ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ […]

ಮನೆಯಂಗಳದಲ್ಲಿ ಭಜನೆ

ಮನೆಯಂಗಳದಲ್ಲಿ ಭಜನೆ

Thursday, October 17th, 2013

ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಂದ ನಡೆಸಲ್ಪಡುವ ಮನೆಂಯಂಗಳದಲ್ಲಿ  ಭಜನಾ ಕಾರ್‍ಯಕ್ರದ ಅಂಗವಾಗಿ ತೆಂಕಿಲದ ಕಟ್ಟತ್ತಾರು ಶ್ರೀ ನಾಗರಾಜ.ಟಿ ಎಂಬವರ ಮನೆಯಲ್ಲಿ ಶ್ರೀ ಶಾರದಾ ಪೂಜೆ ಹಾಗೂ ಭಜನಾ ಕಾರ್‍ಯಕ್ರಮ ನಡೆಯಿತು. ಡಾ. ಶೋಭಿತಾ ಸತೀಶ್ ಇವರ ಶ್ರೀ ಶಾರದಾ ಸ್ತುತಿಯೊಂದಿಗೆ ಆರಂಭಗೊಂಡ ಮಕ್ಕಳ ಭಜನೆಯಲ್ಲಿ ಶಾಲಾ ಶಿಕ್ಷಕರು ಹಾಗೂ ಪೋಷಕರು ಭಾಗವಹಿಸಿದ್ದರು.

ಹಿರಿಯ ವಿದ್ಯಾರ್ಥಿ ಸಭೆ

ಹಿರಿಯ ವಿದ್ಯಾರ್ಥಿ ಸಭೆ

Thursday, October 17th, 2013

1993-94 ರಲ್ಲಿ ಆರಂಭಗೊಂಡ ನಮ್ಮ ಶಾಲೆಯು ತನ್ನ ದ್ವಿಂಶತಿ ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಶಾಲಾ ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಕ್ರೀಡಾ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ಮೈಗೊಡಿಸಿಕೊಂಡು ತೆರಳಿರುವ ಶಾಲಾ ಹಿರಿಯ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು. ಪ್ರಸ್ತುತ ಶೈಕ್ಷಣಿಕ ವರ್ಷದ ಹಿರಿಯ ವಿದ್ಯಾರ್ಥಿ ಸಭೆಯನ್ನು ನವೆಂಬರ್ 1ನೇ ತಾರೀಕು ಶುಕ್ರವಾರದಂದು ನಡೆಸಲಾಗುವುದು. ಶಾಲೆಯ ಹಿರಿಯ ವಿದ್ಯಾರ್ಥಿಗಳು ಸಮಾಜದ ಹತ್ತು  ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುತ್ತೀರಿ, ನಿಮ್ಮೊಂದಿಗೆ ಬೆರೆತು, ಕಲಿತ ನಿಮ್ಮ ಸ್ನೇಹಿತರು ಹಾಗೂ ಶಿಕ್ಷಕರೊಂದಿಗೆ ಬೆರೆಯಲು ಈ ಸಂದರ್ಭದಲ್ಲಿ […]

ಆಹಾರ ಮತ್ತು ಆರೋಗ್ಯ ಮಾಹಿತಿ

ಆಹಾರ ಮತ್ತು ಆರೋಗ್ಯ ಮಾಹಿತಿ

Thursday, October 17th, 2013

‘ಆಹಾರ, ಮನಸ್ಸು, ದೇಹ ಇವುಗಳ ಪರಸ್ಪರ ಸಂಬಂಧ ಹಾಗೂ ಆರೋಗ್ಯಯುತ ಬೆಳವಣೆಗೆಯು ಅತೀ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿಷಮುಕ್ತ ಆಹಾರವನ್ನು ಸೇವಿಸಬೇಕಾದ ಬೌದ್ಧಿಕ ಎಚ್ಚರಿಕೆಯನ್ನು ನಾವಿಂದು ಬೆಳೆಸಿಕೊಳ್ಳಬೇಕಾಗಿದೆ’ ಎಂದು ಪುತ್ತೂರಿನ ಆಯುರ್ವೇದ ಮತ್ತು ಯೋಗ  ಚಿಕಿತ್ಸಾ ಕೇಂದ್ರದ   ವೈದ್ಯಾಧಿಕಾರಿಗಳಾದ ಡಾ | ಮನೋಜ್ ಇವರು ಹೇಳಿದರು ಇವರು ಶಾಲಾ ಮಕ್ಕಳೊಂದಿಗೆ ಆಹಾರ ಮತ್ತು ಆರೋಗ್ಯ ಎಂಬ ವಿಷಯದ ಕುರಿತು ಪ್ರಾತ್ಯಕ್ಷಿಕೆ ಹಾಗೂ ಸಂವಾದ ನಡೆಸಿದರು.

Highslide for Wordpress Plugin