ಮಕ್ಕಳ ಸಮಗ್ರ ತಪಾಸಣಾ ಶಿಬಿರ

ಮಕ್ಕಳಲ್ಲಿ ಕಲಿಕಾ ವೈವಿಧ್ಯತೆ ಸಾಮಾನ್ಯವಾಗಿದ್ದು, ಪೋಷಕರು-ಶಿಕ್ಷಕರು ಇದನ್ನು ಗುರುತಿಸಿ ಪರಿಣಿತರ ಸಹಕಾರ ಪಡೆದು ಸಕಾಲಕ್ಕೆ ಪರಿಣಾಮಕಾರಿ ವಿಧಾನಗಳನ್ನು ಅನುಸರಿಸಿದ್ದಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಎತ್ತರಿಸಲು ಸಾಧ್ಯವಿದೆ-ಡಾ| ಕೃಷ್ಣ ಭಟ್ ಕೊಂಕೋಡಿ. ಕಾರ್ಯದರ್ಶಿಗಳು, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು.

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾದ ಅಸಮರ್ಪಕ ಹಾಗೂ ನಿಧಾನಗತಿಯ ಕಲಿಕಾ ಮಕ್ಕಳ ಸಮಗ್ರ ತಪಾಸಣಾ ಶಿಬಿರಕ್ಕೆ ಉದ್ಘಾಟಕರಾಗಿ ಆಗಮಿಸಿದ ಡಾ| ಕೃಷ್ಣ ಭಟ್ ಕೊಂಕೋಡಿಯವರು ಈ ಬಗೆಯ ತಪಾಸಣಾ ಕಾರ್ಯಗಳು ನಿರಂತರವಾಗಿ ನಡೆಯಬೇಕಿದ್ದು, ಶಾಲೆ-ಶಿಕ್ಷಕರು-ಪೋಷಕರು ಹಾಗೂ ವಿದ್ಯಾವರ್ಧಕ ಸಂಘ ಜೋಡಿಕೊಳ್ಳುವುದಾಗಿ ತಿಳಿಸಿದರು.

ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್ಟಿಟ್ಯೂಶನ್ಸ್ ಮಂಗಳೂರು ವತಿಯಿಂದ ಡಾ| ಅಖಿಲೇಶ್ ಅವರ ಮಾರ್ಗದರ್ಶನದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಲಾದ ಈ ಶಿಬಿರದಲ್ಲಿ ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ಶ್ರೀ ವಸಂತ ಸುವರ್ಣ, ಖಜಾಂಜಿ ಅಶೋಕ್ ಕುಂಬ್ಳೆ ಉಪಸ್ಥಿತರಿದ್ದರು.

ಶಾಲೆಯ ನಿಧಾನಗತಿಯ ಕಲಿಕೆ, ಮಾತು ಮತ್ತು ಭಾಷಾ ಸಂಬಂಧಿ ದೋಷಗಳುಳ್ಳ ಮಕ್ಕಳ ಸಮಗ್ರ ತಪಾಸಣೆ ನಡೆಯಿತು. ಗುರುತಿಸಲ್ಪಟ್ಟ ಮಕ್ಕಳ ಪೋಷಕರೊಂದಿಗೆ ಅನಂತರದ ಅವಧಿಯಲ್ಲಿ ಆಪ್ತ ಸಮಾಲೋಚನೆ ನಡೆಸಲಾಯಿತು. ಮುಂದುವರಿದ ಭಾಗವಾಗಿ ಮುಂದಿನ ದಿನಗಳಲ್ಲಿ ಯೋಜಿಸಬೇಕಾಗಿರುವ ಕಾರ್ಯವಿಧಾನಗಳ ಬಗ್ಗೆ ಶಿಕ್ಷಕರಿಗೆ ಹಾಗೂ ಪೋಷಕರಿಗೆ ಮಾಹಿತಿ ನೀಡಲಾಯಿತು.

Highslide for Wordpress Plugin