ಶಿಕ್ಷಕರಿಗಾಗಿ ಶೈಕ್ಷಣಿಕ ಕಾರ್ಯಾಗಾರ

ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಇದರ ಆಶ್ರಯದಲ್ಲಿ ಷಣ್ಮುಖದೇವ ಹಾಗೂ ವಿವೇಕಾನಂದ ವರ್ತುಲದ ಶಿಕ್ಷಕರಿಗಾಗಿ ಶೈಕ್ಷಣಿಕ ಕಾರ್ಯಾಗಾರ 2022-23 ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 27-08-2022 ರಂದು ನಡೆಯಿತು.

ಕಾರ್ಯಾಗಾರದ ಉದ್ಘಾಟನೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಇದರ ನಿರ್ದೇಶಕರಾಗಿರುವ ಶ್ರೀ ಮುರಳೀಧರ ಕೆ. ಇವರು ನೆರವೇರಿಸಿದರು. ಕಾರ್ಯಾಗಾರದ ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದ ಶ್ರೀ ಮುನಿರಾಜ ರೆಂಜಾಳರವರು ಮಾತನಾಡುತ್ತಾ ಶಿಕ್ಷಕನಿಗಿರುವ ಜವಾಬ್ದಾರಿ, ಪರಿಣಾಮಕಾರಿ ಬೋಧನೆ, ವೃತ್ತಿಯಲ್ಲಿ ಪಕ್ವತೆಯನ್ನು ತರುವಲ್ಲಿ ಶಿಕ್ಷಕರಾಗಿ ನಮ್ಮ ಕರ್ತವ್ಯ, ದೇಶವನ್ನು ಕಟ್ಟಿ ಮುನ್ನಡೆಸುವಲ್ಲಿ ಮತ್ತು ದೇಶದ ಅಭಿವೃದ್ಧಿಯೆಡೆಗೆ ಮಕ್ಕಳನ್ನು ಸುಸಂಸ್ಕೃತ ಪ್ರಜ್ಞಾವಂತ ನಾಗರೀಕರನ್ನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಇದರ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವಿವೇಕಾನಂದ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀಯುತ ವಸಂತ ಸುವರ್ಣ ಹಾಗೂ ವರ್ತುಲದ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಮುಂದೆ ಪಠ್ಯ ವಿಷಯವಾರು ಶೈಕ್ಷಣಿಕ ಸಮಾಲೋಚನೆಯಲ್ಲಿ ವಿವಿಧ ವಿಷಯಗಳಾದ ಕನ್ನಡ, ಇಂಗ್ಲಿಷ್, ಹಿಂದಿ, ಸಮಾಜ ವಿಜ್ಞಾನ, ವಿಜ್ಞಾನ, ಗಣಿತ ಇವುಗಳ ಬಗ್ಗೆ ತಿಳಿಸಲು ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಗೋಪಾಲಕೃಷ್ಣ, ಶ್ರೀ ಸದಾಶಿವ ನಾಯಕ್, ಶ್ರೀಮತಿ ಗೀತಾ, ಶ್ರೀಮತಿ ಚಿತ್ರಶ್ರೀ, ಶ್ರೀ ವೆಂಕಟರಮಣ ಆಚಾರ್ಯ, ಶ್ರೀ ಶರತ್ ಇವರು ಆಗಮಿಸಿ ಪಠ್ಯ ವಿಷಯವಾರು ಶೈಕ್ಷಣಿಕ ಸಮಾಲೋಚನೆಯನ್ನು ನಡೆಸಿಕೊಟ್ಟರು.

ಮುಂದೆ ಫ಼ಾದರ್ ಮುಲ್ಲರ್ ಹೊಸ್ಪಿಟಲ್ ಫ಼ಾರ್ ಸ್ಪೀಚ್ ಆಂಡ್ ಹಿಯರಿಂಗ್‌ನ ಪ್ರೊಫ಼ೆಸ್ಸರ್ ಆಗಿರುವ ಡಾ| ಅಖಿಲೇಶ್ ಇವರು ಕಲಿಕಾ ದೋಷ ಹಾಗೂ ಪರಿಹಾರ ಕ್ರಮಗಳ ಬಗ್ಗೆ ಶಿಕ್ಷಕರ ಜೊತೆ ಸಂವಾದ ನಡೆಸಿಕೊಟ್ಟರು.

ಷಣ್ಮುಖದೇವ ವರ್ತುಲದ ಸಂಯೋಜಕರಾಗಿರುವ ಶ್ರೀಯುತ ಚಂದ್ರಶೇಖರ್ ಸುಳ್ಯಪದವು ಇವರು ಸ್ವಾಗತ ಪರಿಚಯ ಮಾಡಿದರು. ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ ಇವರು ಶೈಕ್ಷಣಿಕ ಕಾರ್ಯಾಗಾರದ ಕುರಿತಾಗಿ ಪ್ರಸ್ಥಾವನೆಗೈದರು. ಶ್ರೀಮತಿ ಸೌಮ್ಯಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ರೇಖಾ ಆಚಾರ್ಯ ಇವರು ವಂದನಾರ್ಪಣೆಗೈದರು.

Highslide for Wordpress Plugin