ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಪೂರ್ವ ಪ್ರಾಥಮಿಕ ಮಕ್ಕಳ ಪೋಷಕರಿಗೆ ಸಾನಿಧ್ಯ- ಪ್ರಶಿಕ್ಷಣ ಕಾರ್ಯಗಾರ ನಡೆಯಿತು. ‘ಆಟದ ಮೂಲಕ ಪಾಠ’ ಪರಿಕಲ್ಪನೆ ಆಧಾರಿತ ಕಾರ್ಯಾಗಾರದಲ್ಲಿ ಅಭಿನಯ ಗೀತೆ, ಕಥಾಯೋಗ, ಸಾಹಸ ಪ್ರದರ್ಶನ, ಕರಕುಶಲ ಕಲಾ ವಸ್ತು ಪ್ರದರ್ಶನ, ಕಲಿಕಾ ಉಪಕರಣಗಳು ಪ್ರದರ್ಶಿತಗೊಂಡವು. ಕಾರ್ಯಗಾರಕ್ಕೆ ಆಗಮಿಸಿದ್ದ ಹಿರಿಯ ದಂಪತಿಗಳಾದ ಪ್ರೊಫೆಸರ್ ನಾರಾಯಣ ಮಜಿ (ನಿವೃತ್ತ ಪ್ರಾಧ್ಯಾಪಕರು) ಹಾಗೂ ಸರಸ್ವತಿ ಪಿ (ನಿವೃತ್ತ ಮುಖ್ಯೋಪಾಧ್ಯಾಯರು) ಉಪಸ್ಥಿತರಿದ್ದು, ಶುಭ ಹಾರೈಸಿದರು. ಪೋಷಕರನ್ನು ಆಟ ಆಡಿಸುತ್ತಾ ನೀಡಿದ ಪ್ರಶಿಕ್ಷಣವು ಮಗುವಿನ ಜೊತೆಗೆ ಪೋಷಕರು […]
ವಿವೇಕಾನಂದ ಕನ್ನಡ ಶಾಲಾ 10ನೇ ತರಗತಿ ಮಕ್ಕಳ ದೀಪ ಪ್ರದಾನ ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿದ್ದ ಶ್ರೀರಾಮ ಹಾಗೂ ಇಂದ್ರಪ್ರಸ್ಥ ಶಾಲೆ ಉಪ್ಪಿನಂಗಡಿ ಇಲ್ಲಿನ ಸಂಚಾಲಕರು, ಹಿರಿಯ ಪೋಷಕರು ಆದ ಶ್ರೀಯುತ ಯು. ಜಿ. ರಾಧ ಮಾತನಾಡಿ “ಶಾಲಾ ದಿನಗಳ ಗುಣಮಟ್ಟದ ಕಲಿಕೆ ವಿದ್ಯಾರ್ಥಿಯಲ್ಲಿ ಗಟ್ಟಿಯಾದರೆ ಬದುಕಿನಲ್ಲಿ ಖುಷಿ ಕಾಣಲು ಸಾಧ್ಯವಿದೆ. ಉನ್ನತ ಶಿಕ್ಷಣ, ಉದ್ಯೋಗ ಮುಂತಾದವುಗಳಿಗಾಗಿ ಸರ್ಟಿಫಿಕೇಟ್ ಆಧಾರದ ಶಿಕ್ಷಣ ಸಹಕಾರಿಯಾಗುವುದು ಒಂದು ಭಾಗವಾದರೆ ಸಮಾಜ ಮುಖಿಯಾಗಿ […]
” ಅರ್ಥಪೂರ್ಣ ಚರ್ಚೆಗಳಿಂದ ಸಮರ್ಪಕ ಮಸೂದೆ ಮಂಡನೆ ಸಾಧ್ಯ” -ಶ್ರೀ ಲಕ್ಷ್ಮಿಕಾಂತ್, ಪ್ರಾಧ್ಯಾಪಕರು ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರು. ನಮ್ಮ ಶಾಲಾ ‘ಸಮನ್ವಯ‘ ಸಮಾಜ ವಿಜ್ಞಾನ ಸಂಘದ ವತಿಯಿಂದ ಪ್ರೌಢಶಾಲಾ ಮಕ್ಕಳಿಗೆ ನಡೆದಂತಹ ವಿಧಾನಸಭಾ ಅಧಿವೇಶನ ಕಾರ್ಯಕಲಾಪಗಳು ಯಾಕೆ ? ಹೇಗೆ ?ಎಂಬ ವಿಷಯದ ಕುರಿತು ಮಾತನಾಡಿದ ಶ್ರೀಯುತ ಲಕ್ಷ್ಮೀಕಾಂತ್ ಇವರು ಮಾದರಿ ಸಂಸತ್ತು ಮತ್ತು ಅಣಕು ಸಂಸತ್ತಿನ ನಡುವಿನ ಭಿನ್ನತೆಯನ್ನು ತಿಳಿಸುತ್ತಾ ಅಧಿವೇಶನದ ಪ್ರಾಮುಖ್ಯತೆಯ ಮಾಹಿತಿ ನೀಡಿದರು. ಸಂಘದ ಸಂಯೋಜಕ ಸಹಶಿಕ್ಷಕರಾದ ಲೀಲಾವತಿ ಹಾಗೂ ಶ್ರೀಮತಿ […]
ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಶ್ರೀರಾಮ ಪ್ರೌಢಶಾಲೆ ಪಟ್ಟೂರು ಇಲ್ಲಿ ನಡೆದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಿಶಾಂತ್ 6ನೇ ತರಗತಿ-ತೃತೀಯ,ಕರಣ್ ಗೌಡ 6ನೇ ತರಗತಿ -ಚತುರ್ಥ, ಪ್ರೌಢ ವಿಭಾಗದಲ್ಲಿ ಸ್ಕಂದ-8ನೇ ತರಗತಿ ದ್ವಿತೀಯ,ರಿತೇಶ್ ನಾಯಕ್ -8 ನೇ ತರಗತಿ-ಚತುರ್ಥ, ಪ್ರಜ್ಞಾ-8ನೇ ತರಗತಿ-ಚತುರ್ಥ ಹಾಗೂ ಪ್ರಾಥಮಿಕ ವಿಭಾಗದ ಬಾಲಕರು ಪ್ರಥಮ ಸ್ಥಾನದೊಂದಿಗೆ ಸಮಗ್ರ ಪ್ರಶಸ್ತಿ, ಪ್ರೌಢ ವಿಭಾಗದ ಬಾಲಕರು ಪ್ರಥಮ ಸ್ಥಾನದೊಂದಿಗೆ ಸಮಗ್ರ ಪ್ರಶಸ್ತಿ, ಪ್ರೌಢ ವಿಭಾಗದ ಬಾಲಕಿಯರು ಸಮಗ್ರ ದ್ವಿತೀಯ ಪ್ರಶಸ್ತಿ ಪಡೆದಿರುತ್ತಾರೆ.
ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ದ್ವಿತೀಯ ಸ್ಥಾನದೊಂದಿಗೆ ಸಮಗ್ರ ಪ್ರಶಸ್ತಿ ಪಡೆದು ಪ್ರಾಥಮಿಕ ವಿಭಾಗದಲ್ಲಿ ನಿಶಾಂತ್ 6ನೇ ತರಗತಿ, ಪ್ರೌಢಶಾಲಾ ವಿಭಾಗದಲ್ಲಿ ಸ್ಕಂದ 8ನೇ ತರಗತಿ ಬಂಟ್ವಾಳ ತಾಲೂಕಿನ ದಡ್ಡಲಕಾಡು ಇಲ್ಲಿ ನಡೆಯುವ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಾಂದೀಪನಿ ವಿದ್ಯಾಭವನ, ಬೆಂಗಳೂರು ಇಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಿಶೋರ ವರ್ಗದ ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡ ನಮ್ಮ ಶಾಲಾ ವಿದ್ಯಾರ್ಥಿಗಳಾದ ಸ್ಕಂದ ಬಳ್ಳಕ್ಕುರಾಯ, ರಿತೇಶ್ ನಾಯಕ್, ನಿಶಾಂತ್ ಎಚ್.ಸಿ, ಕರಣ್ ಗೌಡ.
ವಿವೇಕಾನಂದ ಪದವಿ ಕಾಲೇಜು ನೆಹರುನಗರ ಪುತ್ತೂರು ಇಲ್ಲಿನ ಬಿಬಿಎ ವಿಭಾಗದ ತೃತೀಯ ವರ್ಷದ ವಿದ್ಯಾರ್ಥಿಗಳಾದ ಚಿತ್ರಶ್ರೀ, ಸ್ವೀಕೃತ್ ಶೆಟ್ಟಿ, ವರುಣ್ ರೈ ಹಾಗೂ ಸುಬ್ರಹ್ಮಣ್ಯೇಶ್ವರ ಪ್ರಸಾದ್ ಇವರಿಂದ ನಮ್ಮ ಶಾಲೆಯಲ್ಲಿ ‘ಸ್ವಚ್ಛ ಭಾರತ್’ ಅಭಿಯಾನ ಕುರಿತು ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಯಿತು. ಕಾರ್ಯಾಗಾರದಲ್ಲಿ ಸ್ವಚ್ಛತೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಪ್ರಾತ್ಯಕ್ಷಿಕಾ ಮಾಹಿತಿ ನೀಡಲಾಯಿತು. ಅನಂತರ ಮಕ್ಕಳಿಗೆ ಏರ್ಷಡಿಸಿದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಶ್ರೀಮತಿ ನಳಿನಿವಾಗ್ಲೆ ಬಹುಮಾನ ವಿತರಿಸಿದರು. ಶಾಲಾ ವಿಜ್ಞಾನ […]
ದಿನಾಂಕ 26-01-2023ನೇ ಗುರುವಾರದಂದು ವಿವೇಕಾನಂದ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆ, ವಿವೇಕಾನಂದ ಬಿ.ಇಡಿ ಕಾಲೇಜು, ನರೇಂದ್ರ ಪದವಿ ಪೂರ್ವ ಕಾಲೇಜು ವಿವೇಕನಗರ ತೆಂಕಿಲ ಇವುಗಳ ಜಂಟಿ ಆಶ್ರಯದಲ್ಲಿ 74ನೇ ಗಣರಾಜ್ಯೋತ್ಸವವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಮ್ಮ ದೇಶದ ನಿವೃತ್ತ ಸೈನ್ಯಾಧಿಕಾರಿ ಹಾಗೂ ಪೋಷಕರಾದ ಶ್ರೀ ಕಿಶೋರ್ ಮಾವಜಿ ಅವರು ಧ್ವಜಾರೋಹಣಗೈದರು. ನಂತರ ಮಾತನಾಡಿದ ಅವರು ಮೂಲಭೂತ ಹಕ್ಕುಗಳ ಜೊತೆಗೆ ಮೂಲಭೂತ ಕರ್ತವ್ಯಗಳನ್ನು ಸೂಕ್ತವಾಗಿ ನಿರ್ವಹಿಸುವ ಅಗತ್ಯವಿದೆ. ಮಾತ್ರವಲ್ಲದೆ ಸಂವಿಧಾನದ ಗೌರವ […]