ತಂತ್ರಜ್ಞಾನ ಆಧಾರಿತ ಶಿಕ್ಷಣದ ಉದ್ಘಾಟನೆ

ತಂತ್ರಜ್ಞಾನ ಆಧಾರಿತ ಶಿಕ್ಷಣದ ಉದ್ಘಾಟನೆ

Saturday, August 3rd, 2019

ಖ್ಯಾತ ಸೌರವಿಜ್ಞಾನಿ ಡಾ. ಹರೀಶ್ ಹಂದೆಯವರಿಂದ ಸ್ಥಾಪನೆಯಾದ ಸೆಲ್ಕೋ ಸೋಲಾರ್ ಲೈಟ್ ಪ್ರೈ.ಲಿಮಿಟೆಡ್ ಕಳೆದ 25 ವರ್ಷಗಳಿಂದ ಗ್ರಾಮೀಣ ಭಾಗಗಳನ್ನು ಕೇಂದ್ರವಾಗಿಟ್ಟುಕೊಂಡು ಅಲ್ಲಿನ ಜನರ ಜೀವನಮಟ್ಟವನ್ನು ಉತ್ತಮವಾಗಿಸಲು ವಿವಿಧ ಕಾರ್ಯಕ್ಷೇತ್ರಗಳಲ್ಲಿ ನೆರವಾಗುವಂತಹ ಸೋಲಾರ್‌ಚಾಲಿತ ಯಂತ್ರಗಳನ್ನು ಒದಗಿಸುತ್ತ ಬಂದಿದೆ. ’ಇಶಾಲಾ’ ಎಂಬ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡುತ್ತಿದೆ. 2000 ಕ್ಕಿಂತಲೂ ಅಧಿಕ ಶಾಲೆಗಳಲ್ಲಿ ಸೆಲ್ಕೋ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡುವ ಸಾಧನಗಳನ್ನು ಅಳವಡಿಸುವ ಮೂಲಕ ಸಾಮಾಜಿಕ ಬದ್ಧತೆಯನ್ನು ಮೆರೆದಿದೆ. ಇದೇ ನಿಟ್ಟಿನಲ್ಲಿ ಸೆಲ್ಕೋ ಸಂಸ್ಥೆಯು […]

ವಿದ್ಯಾಭಾರತಿ ಕಬಡ್ಡಿ ಪಂದ್ಯಾಟ - ರಾಜ್ಯಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ಕಬಡ್ಡಿ ಪಂದ್ಯಾಟ – ರಾಜ್ಯಮಟ್ಟಕ್ಕೆ ಆಯ್ಕೆ

Wednesday, July 31st, 2019

ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ಇದರ ಸಹಯೋಗದಲ್ಲಿ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ನಡೆದ ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಾಲವರ್ಗದ ಬಾಲಕಿಯರು ಮತ್ತು ಕಿಶೋರವರ್ಗದ ಬಾಲಕಿಯರು ಪ್ರಥಮ ಸ್ಥಾನ ಹಾಗೂ ಕಿಶೋರವರ್ಗದ ಬಾಲಕರು ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಬಾಲವರ್ಗದ ಬಾಲಕರ ವಿಭಾಗದಲ್ಲಿ ಧನುಷ್ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ತಂಡಗಳೆರಡೂ ಮುಂಡಾಜೆಯಲ್ಲಿ ನಡೆಯುವ ಪ್ರಾಂತ (ರಾಜ್ಯ)ಮಟ್ಟ ಪ್ರತಿನಿಧಿಸಲಿದ್ದಾರೆ. ಇವರಿಗೆ ಶ್ರೀ ಮನೋಹರ್ ನುಳಿಯಾಲು ಮತ್ತು ಶಾಲಾ […]

ಕ್ರೀಡಾ ಶಿಕ್ಷಣದ ಜೊತೆಗೆ ನೈತಿಕ ವಿಚಾರ ಅಳವಡಿಸಿಕೊಂಡಾಗ ಸಾಧನೆಗೆ ಗೌರವ ಹಾಗೂ ಮನ್ನಣೆ

ಕ್ರೀಡಾ ಶಿಕ್ಷಣದ ಜೊತೆಗೆ ನೈತಿಕ ವಿಚಾರ ಅಳವಡಿಸಿಕೊಂಡಾಗ ಸಾಧನೆಗೆ ಗೌರವ ಹಾಗೂ ಮನ್ನಣೆ

Monday, July 29th, 2019

ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ವಿವೇಕಾನಂದ ಕನ್ನದ ಮಾಧ್ಯಮ ಶಾಲೆ ಪುತ್ತೂರು ಇದರ ಆಶ್ರಯದಲ್ಲಿ ನಡೆದ ದಕ್ಷಿಣ ಮಧ್ಯಕ್ಷೇತ್ರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ದರ್ಬೆ ಅಧಿಕಾರಿಗಳ ಕ್ಲಬ್‌ನಲ್ಲಿ ಪುತ್ತೂರು ಉಪವಿಭಾಗದ ಅಧಿಕಾರಿಗಳಾದ ಶ್ರೀ ಎಚ್. ಕೆ. ಕೃಷ್ಣಮೂರ್ತಿ ಉದ್ಘಾಟಿಸಿ ಮಕ್ಕಳು ಆಸಕ್ತಿಯಿಂದ ಪಾಲ್ಗೊಳ್ಳುವುದು ನೋಡುವುದೇ ಮನಸ್ಸಿಗೆ ಮುದ ನೀಡುತ್ತದೆ. ಇನ್ನೂ ಹೆಚ್ಚಿನ ಮಕ್ಕಳು ಕ್ರೀಡಾಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಬೇಕು ಎಂದು ಶುಭ ಹಾರೈಸಿದರು. ಶಿಕ್ಷಣದ ಜೊತೆಗೆ ಶಾರೀರಿಕ ಶಿಕ್ಷಣವನ್ನು ಅಳವಡಿಸಿ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ […]

ಕೆದಿಲ ಗ್ರಾಮದಲ್ಲಿ ವೃಕ್ಷಾರೋಪಣ

ಕೆದಿಲ ಗ್ರಾಮದಲ್ಲಿ ವೃಕ್ಷಾರೋಪಣ

Saturday, July 27th, 2019

ನಮ್ಮ ಸುತ್ತಲಿನ ಪರಿಸರ ಭಗವಂತನ ಸೃಷ್ಠಿ ಈ ಪರಿಸರವನ್ನು ಉಳಿಸಿದರೆ ಮಾತ್ರ ಮಾನವನು ಭವಿಷ್ಯದಲ್ಲಿ ಉತ್ತಮವಾಗಿರಲು ಸಾಧ್ಯ. ಮಾನವನ ಸ್ವಾರ್ಥಕ್ಕಾಗಿ ನಾಶಪಡಿಸಿದ ಪರಿಸರದ ಮುಖ್ಯ ಭಾಗವಾಗಿರುವ ಮರ-ಗಿಡಗಳನ್ನು ಪುನಃ ಬೆಳೆಸುವ ಉದ್ದೇಶದಿಂದ ತನ್ಮೂಲಕ ಸುಂದರ ನೆಮ್ಮದಿಯ ನಾಳೆಯನ್ನು ಪಡೆಯಬೇಕು. ಅಲ್ಲದೇ ನಮ್ಮ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಉಂಟಾಗಬೇಕು ಎಂಬ ಸತ್‌ಚಿಂತನೆಯಿಂದ ವಿವೇಕಾನಂದ ವಿದ್ಯಾವರ್ಧಕ ಸಂಘವು ಗ್ರಾಮ ವಿಕಾಸ ಯೋಜನೆಯ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮವೇ ‘ವೃಕ್ಷಾರೋಪಣ’ ಕಾರ್ಯಕ್ರಮ. ವಿವೇಕಾನಂದಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆಡಳಿತ […]

ಸ್ಪರ್ಧೆಗಳಲ್ಲಿ ಅನುಭವವೇ ಗೆಲುವು ಎನ್ನುವ ಭಾವನೆ ಬೆಳೆಯಬೇಕು -ರಾಧಾಕೃಷ್ಣ ಬೋರ್ಕರ್

ಸ್ಪರ್ಧೆಗಳಲ್ಲಿ ಅನುಭವವೇ ಗೆಲುವು ಎನ್ನುವ ಭಾವನೆ ಬೆಳೆಯಬೇಕು -ರಾಧಾಕೃಷ್ಣ ಬೋರ್ಕರ್

Saturday, July 27th, 2019

ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಬಾಲವರ್ಗ, ಕಿಶೋರ ವರ್ಗ ಮತ್ತು ತರುಣ ವರ್ಗದ ಪ್ರಾಂತ ಮತ್ತು ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಅಧಿಕಾರಿಗಳ ಕ್ಲಬ್‌ ದರ್ಬೆಯಲ್ಲಿ ಉದ್ಘಾಟನೆಗೊಂಡಿತು. ಮನಸ್ಸು ಇಚ್ಛೆಯ ತುತ್ತತುದಿಯನ್ನೇರಿದಾಗ ಸಾಫಲ್ಯತೆ ಸಾಧ್ಯ. ಸ್ಪರ್ಧೆಯ ಮಾನಸಿಕ ಸ್ಥಿತಿ ಗೆಲುವೇ ಆಗಿರಬೇಕು. ಸೋತಾಗ ದುಡುಕುತನ ಬೇಡ. ಸ್ಪರ್ಧೆಗಳಲ್ಲಿ ಅನುಭವವೇ ಗೆಲುವು ಎನ್ನುವ ಭಾವನೆ ಬೆಳೆಯಬೇಕು ಎಂದು ಉದ್ಘಾಟಕರ ನೆಲೆಯಲ್ಲಿ ಪುತ್ತೂರು ತಾಲೂಕು ಪಂಚಾಯತ್‌ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಬೋರ್ಕರ್ […]

ಕಾರ್ಗಿಲ್ ವಿಜಯ ಸುಲಭದಲ್ಲಿ ಸಿಕ್ಕಿದ್ದಲ್ಲ - ಶ್ರೀ ಸುರೇಶ್

ಕಾರ್ಗಿಲ್ ವಿಜಯ ಸುಲಭದಲ್ಲಿ ಸಿಕ್ಕಿದ್ದಲ್ಲ – ಶ್ರೀ ಸುರೇಶ್

Friday, July 26th, 2019

ಕಾರ್ಗಿಲ್ ವಿಜಯೋತ್ಸವ- 20 ರ ಅಂಗವಾಗಿ ವಿವೇಕಾನಂದ ಕನ್ನಡ ಶಾಲೆ- ತೆಂಕಿಲದಲ್ಲಿ ನಡೆದ’ಯೋಧರಿಗೆ ನುಡಿ ನಮನ’ ಕಾರ್ಯಕ್ರಮದಲ್ಲಿ ಅಭ್ಯಾಗತರ ನೆಲೆಯಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ವಿಭಾಗದ ಸಾಮರಸ್ಯ ಪ್ರಮುಖರಾದ ಶ್ರೀ ಸುರೇಶ್‌ ಇವರು ’ಕಾರ್ಗಿಲ್ ವಿಜಯವು ಭಾರತದ ಶಕ್ತಿಯನ್ನು ವಿಶ್ವಕ್ಕೆ ತೋರಿಸಿದ ವಿಜಯವಾಗಿದೆ. ಇದು ಸುಲಭದಲ್ಲಿ ದೊರೆತದ್ದಲ್ಲ. ಇದರ ಹಿಂದಿನ ಮುಂದಿನ ತ್ಯಾಗ, ಬಲಿದಾನ, ಮನೋಸ್ಥೈರ್ಯವು ನಮಗೆ ಮಾದರಿಯಾಗಿದೆ’ ಎಂದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಅಚ್ಯುತನಾಯಕ್, ಸಂಚಾಲಕರಾದ ಶ್ರೀ ರವಿ […]

ಚಿತ್ರಕಲಾ ಸ್ಪರ್ಧೆ -ಪ್ರಶಸ್ತಿ

ಚಿತ್ರಕಲಾ ಸ್ಪರ್ಧೆ -ಪ್ರಶಸ್ತಿ

Wednesday, July 17th, 2019

ದಕ್ಷಿಣ ಕನ್ನಡ ಜಿಲ್ಲಾಮಟ್ಟದ ವಿಜಯ ಕರ್ನಾಟಕ ದಿನಪತ್ರಿಕೆಯವರು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ನಡೆಸಿದ ಚಿತ್ರಕಲಾ ಸ್ಪರ್ಹೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಶಿಶಿರ್ (ಸುಂದರ ಪೂಜಾರಿ ಮತ್ತು ಮಮತಾ ಪಿ ದಂಪತಿಗಳ ಪುತ್ರ) -10ನೇ ತರಗತಿ ವಿಭಾಗದಲ್ಲಿ – ದ್ವಿತೀಯ, ಅಗಮ್ಯ (ಗಣೇಶ್ ಪೂಜಾರಿ ಮತ್ತು ಮಂಜುಳಾ ಗಣೇಶ್ ದಂಪತಿಯ ಪುತ್ರಿ) – 7ನೇ ತರಗತಿ ವಿಭಾಗದಲ್ಲಿ – ತೃತೀಯ ಸ್ಥಾನ ಪಡೆದಿದ್ದಾರೆ.

ಸಮರ್ಪಣಾ ಭಾವದಿಂದಲೇ ರಾಷ್ಟ್ರದ ಉನ್ನತಿ - ಮೀನಾಕ್ಷಿ ಮಾತಾಜಿ

ಸಮರ್ಪಣಾ ಭಾವದಿಂದಲೇ ರಾಷ್ಟ್ರದ ಉನ್ನತಿ – ಮೀನಾಕ್ಷಿ ಮಾತಾಜಿ

Tuesday, July 16th, 2019

ನಾವೆಲ್ಲರೂ ಒಂದು, ನಾವೆಲ್ಲರೂ ಭಾರತೀಯರು ಎಂದು ಅರಿವಾದಾಗ ಸಮರ್ಪಣಾ ಭಾವ ಜಾಗೃತವಾಗುತ್ತದೆ. ಇದರಿಂದಲೇ ರಾಷ್ಟ್ರದ ಉನ್ನತಿ ಸಾಧ್ಯ. ಭಾರತದೇಶವು ಪ್ರತಿಯೊಂದು ಮನೆಯ ಮಾತೆಯಿಂದ ಪ್ರಾರಂಭಿಸಿ ಹಲವಾರು ದೇಶಭಕ್ತರ ವೀರಯೋಧರ ತ್ಯಾಗ ಬಲಿದಾನಗಳಿಂದಲೇ ಇಂದು ಸ್ವತಂತ್ರ ಹಾಗೂ ಶ್ರೇಷ್ಠ ದೇಶವೆನಿಸಿಕೊಂಡಿರುವುದು. ಇಂತಹ ತ್ಯಾಗಗಳ ಬಗ್ಗೆ ತಿಳಿದುಕೊಳ್ಳುತ್ತಾ ಜೀವನ ಮೌಲ್ಯಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಾಗ ನಮ್ಮ ರಾಷ್ಟ್ರ ಸರ್ವಾಂಗೀಣವಾಗಿ ಬೆಳೆಯುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ಸಂಸ್ಕಾರ ಪರಿವೀಕ್ಷಣಾ ಪ್ರಮುಖರಾದ ಮೀನಾಕ್ಷಿ ಮಾತಾಜಿ ಇವರು ವಿವೇಕಾನಂದ […]

ಶಿಕ್ಷಕ- ರಕ್ಷಕ ಸಂಘ ಹಾಗೂ ಮಾತೃಭಾರತಿ - ಪದಗ್ರಹಣ ಸಮಾರಂಭ

ಶಿಕ್ಷಕ- ರಕ್ಷಕ ಸಂಘ ಹಾಗೂ ಮಾತೃಭಾರತಿ – ಪದಗ್ರಹಣ ಸಮಾರಂಭ

Tuesday, July 16th, 2019

ಶಾಲಾ ಮಾತೃಭಾರತಿಯ ಮೂಲಕ ವೇದಿಕೆಯಲ್ಲಿ ನಿಂತು ಮಾತನಾಡುವ ಧೈರ್ಯ ಬಂದಿದೆ. ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಪೋಷಕರನ್ನು ಜೋಡಿಸುತ್ತಾ ನಮ್ಮಲ್ಲೂ ಸಂಸ್ಕಾರವನ್ನು ತರುವ ಇಲ್ಲಿನ ರೀತಿಯು ನಮಗೆಲ್ಲಾ ಪ್ರೇರಣೆಯಾಗಿದೆ ಎಂದು ನುಡಿದವರು ಶಾಲಾ ಮಾತೃಭಾರತಿಯ ಕಳೆದ ಸಾಲಿನ ಅಧ್ಯಕ್ಷೆಯಾದ ಶ್ರೀಮತಿ ರೇಖಾ ಇವರು ವಿವೇಕಾನಂದ ಕನ್ನಡ ಶಾಲೆಯ ಶಿಕ್ಷಕ-ರಕ್ಷಕ ಸಂಘ, ಮಾತೃಭಾರತಿಯ ಪದಗ್ರಹಣ ಸಮಾರಂಭದಲ್ಲಿ ಉಪಸ್ಥಿತರಿದ್ದ ಶ್ರೀಯುತ ಹರಿಕೃಷ್ಣ ಹಾಗೂ ರೇಖಾ ಇವರು ಈ ಸಾಲಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಕೃಷ್ಣ ಭಟ್ ಹಾಗೂ ಮಾತೃಭಾರತಿಯ ಅಧ್ಯಕ್ಷರಾಗಿ […]

ಯೋಗಾಸನ ಸ್ಪರ್ಧೆ - ಜಿಲ್ಲಾಮಟ್ಟದಲ್ಲಿ ಪ್ರಥಮ

ಯೋಗಾಸನ ಸ್ಪರ್ಧೆ – ಜಿಲ್ಲಾಮಟ್ಟದಲ್ಲಿ ಪ್ರಥಮ

Monday, July 15th, 2019

ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮತ್ತು ವಿವೇಕಾನಂದ ವಿದ್ಯಾಸಂಸ್ಥೆ ವಿನೋಬ ನಗರ ಜಾಲ್ಸೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಭಾಗವಹಿಸಿ ಪ್ರೌಢ ಶಾಲಾ ವಿಭಾಗದ ಬಾಲಕರು ಹಾಗೂ ಬಾಲಕಿಯರು ಸಮಗ್ರ ತಂಡ ಪ್ರಶಸ್ತಿ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕರ ವಿಭಾಗದಲ್ಲಿ ಪುನೀತ್ ರಾಜ್, ಲಿಖಿತ್, ಕೌಶಿಕ್, ರಕ್ಷಿತ್ ಮತ್ತು ಬಾಲಕಿಯರ ವಿಭಾಗದಲ್ಲಿ ಹೇಮಶ್ರೀ, ಸುಚಿತಾ, ಸೌಜನ್ಯ, ರಶ್ಮಿ, ದೇವಿಕಾ ಮತ್ತು ಬಾಲಕರ ವೈಯಕ್ತಿಕ […]

ಶಾಲಾ ಮಂತ್ರಿಮಂಡಲ 2019

ಶಾಲಾ ಮಂತ್ರಿಮಂಡಲ 2019

Tuesday, July 2nd, 2019

ಶಾಲಾ ನಾಯಕ ಶಿಶಿರ್ ಎಸ್. ಶಾಲಾ ಉಪನಾಯಕ ಸುಹಾಸ್ ಪ್ರಭು ಪ್ರಾಥಮಿಕ ಶಾಲಾ ನಾಯಕ ಅಕ್ಷಯ್ ಪ್ರಾಥಮಿಕ ಶಾಲಾ ಉಪನಾಯಕಿ ಅಭೀಕ್ಷ ಪ್ರತಿಪಕ್ಷ ನಾಯಕ ರಾಮನಾಥ ಪ್ರತಿಪಕ್ಷ ನಾಯಕಿ ಶ್ರೇಯಾ ಆಚಾರ್ ಸಭಾಪತಿ ಅನುಷಾ ಗೃಹಮಂತ್ರಿ ಹೇಮಶ್ರೀ ಯಂ. ನೈರ್ಮಲ್ಯ ಮಂತ್ರಿ ರಕ್ಷಿತ್ ಸಾಂಸ್ಕೃತಿಕ ಮಂತ್ರಿ ಪ್ರಣಮ್ಯ ಕಾನೂನು ಮಂತ್ರಿ ಸಿಂಚನಾ ಟಿ. ಸಾರಿಗೆ ಮಂತ್ರಿ ಪ್ರೀತೇಶ್ ಕುಮಾರ್ ನೀರಾವರಿ ಮಂತ್ರಿ ಯತೀನ್ ವಾರ್ತಾ ಮಂತ್ರಿ ಕ್ಷಮಾ ಅಂಬೆಕಲ್ಲು ಆರೋಗ್ಯ ಮಂತ್ರಿ ಅನುಜ್ಞಾ ವೈ. ಟಿ. ವಿದ್ಯಾಮಂತ್ರಿ […]

ಪೋಷಕರು ಶಿಕ್ಷಕರಾಗಬೇಕು, ಶಿಕ್ಷಕರು ಪೋಷಕರಾಗಬೇಕು - ನಾರಾಯಣ ಭಟ್

ಪೋಷಕರು ಶಿಕ್ಷಕರಾಗಬೇಕು, ಶಿಕ್ಷಕರು ಪೋಷಕರಾಗಬೇಕು – ನಾರಾಯಣ ಭಟ್

Wednesday, June 26th, 2019

ಮಾತೃಭಾಷೆಯನ್ನೇ ಸರಿಯಾಗಿ ಬಳಸಲು ಬಾರದ ನಾವು ಆಂಗ್ಲಭಾಷೆಗೆ ಜೋತು ಬೀಳುವುದೇಕೆ? ನಮ್ಮ ಮಾತೃಭಾಷೆ ಮಾತನಾಡುವ ಜೊತೆಗೆ ಹಿರಿಯರ ಬಗ್ಗೆ ಪ್ರೀತಿ, ಗೌರವ ಮೂಡುವಂತೆ ಮಕ್ಕಳನ್ನು ಬೆಳೆಸಿದಾಗ ವಯಸ್ಸಾದ ತಂದೆ-ತಾಯಿಯರು ’ವೃದ್ಧಾಶ್ರಮ’ ಸೇರುವುದನ್ನು ತಪ್ಪಿಸಬಹುದು. ಪ್ರರಿಶ್ರಮ, ಪ್ರಾಮಾಣಿಕತೆ, ಸಂಸ್ಕಾರಗಳಂತಹ ಸದ್ಗುಣಗಳು ಎಳೆಯ ಪ್ರಾಯದಲ್ಲೇ ದೊರೆತಾಗ ತಮ್ಮ ತಾಯ್ನಾಡಲ್ಲೇ ಬೇಕಾದ ಸಂಪತ್ತನ್ನು ಗಳಿಸಬಹುದು. ಮಕ್ಕಳ ಉತ್ತಮ ಕಾರ್ಯಗಳನ್ನು ಪ್ರಶಂಸಿಸಿ, ಹುರಿದುಂಬಿಸಿ, ಪ್ರೋತ್ಸಾಹಿಸಿ, ಮನೆಯಲ್ಲಿ ಕಲಿಕಾ ಪರಿಸರ ನಿರ್ಮಿಸಿ ಸಾಮರ್ಥ್ಯಕ್ಕೆ ತಕ್ಕ ಕನಸನ್ನು ಕಾಣಬೇಕು. ಕಷ್ಟ ಎದುರಿಸುವ ತರಬೇತಿ ನೀಡಬೇಕು. ಪೋಷಕರು […]

ಹಿಂದಿ ಪರೀಕ್ಷೆ -ಅನ್ವಿತ್ ರೈಗೆ ರಾಜ್ಯದಲ್ಲಿ ದ್ವಿತೀಯ ರ್‍ಯಾಂಕ್

ಹಿಂದಿ ಪರೀಕ್ಷೆ -ಅನ್ವಿತ್ ರೈಗೆ ರಾಜ್ಯದಲ್ಲಿ ದ್ವಿತೀಯ ರ್‍ಯಾಂಕ್

Monday, June 24th, 2019

ಫೆಬ್ರವರಿ ತಿಂಗಳಲ್ಲಿ ನಡೆದ ’ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ’ದ ’ಹಿಂದಿ ಪ್ರಾಥಮಿಕ’ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಒಟ್ಟು ೨೨ ವಿದ್ಯಾರ್ಥಿಗಳು ಹಾಜರಾಗಿದ್ದು ಶೇ. 100 ಫಲಿತಾಂಶ ಬಂದಿರುತ್ತದೆ. ಇದರಲ್ಲಿ 9ನೇ ತರಗತಿಯ ವಿದ್ಯಾರ್ಥಿ ಅನ್ವಿತ್ ರೈ ಇವರು ರಾಜ್ಯಮಟ್ಟದಲ್ಲಿ ೨ನೇ ರ್‍ಯಾಂಕ್‌ನ್ನು ಪಡೆದಿರುತ್ತಾರೆ. ಇವರಿಗೆ ’ದಕ್ಷಿಣ ಭಾರ್‌ತ ಹಿಂದಿ ಪ್ರಚಾರ ಸಭಾ’ದ ಪ್ರಚಾರಕಿ ಶ್ರೀಮತಿ ಪ್ರಫುಲ್ಲಾ ಹಾಗೂ ಹಿಂದಿ ಶಿಕ್ಷಕಿ ದಾಕ್ಷಾಯಿಣಿ ಮಾರ್ಗದರ್ಶನ ನೀಡಿರುತ್ತಾರೆ. ಇವರು ಶಶಿಧರ್ ರೈ ಮತ್ತು ಶ್ರೀಮತಿ ಭಾರತಿ […]

ಯೋಗವು ಸ್ವ- ಅನುಶಾಸನವಾಗಿದೆ - ಜಯರಾಂ ಭಟ್

ಯೋಗವು ಸ್ವ- ಅನುಶಾಸನವಾಗಿದೆ – ಜಯರಾಂ ಭಟ್

Friday, June 21st, 2019

ಯೋಗವು ಪುರಾತನ ಭಾರತದ ಅಮೂಲ್ಯ ಕೊಡುಗೆ. ಇದು ಮನಸ್ಸು, ಬುದ್ಧಿ ಮತ್ತು ಶರೀರದ ನಡುವೆ ಐಕ್ಯತೆ ಸಾಧಿಸುವ ಯೋಗ ವಿಜ್ಞಾನವು ನಾವು ನಮ್ಮೊಳಗೆ ಮತ್ತು ಪ್ರಕೃತಿಯೊಡನೆ ಒಂದಾಗಿ ಕಾಣುವುದಕ್ಕೆ ಸಹಕಾರಿಯಾಗಿದೆ. ಇದನ್ನರಿತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಪಠ್ಯವಿಷಯದೊಂದಿಗೆ ಯೋಗಾಭ್ಯಾಸವನ್ನು ಜೋಡಿಸಿರುತ್ತೇವೆ ಎಂದು ನುಡಿದವರು ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀಯುತ ಜಯರಾಂ ಭಟ್ ಇವರು. ವಿವೇಕಾನಂದ ಕನ್ನಡ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆಯ ಪ್ರಯುಕ್ತ ನಡೆದ ಸಾಮೂಹಿಕ ಅಗ್ನಿಹೋತ್ರ, ಸೂರ್ಯನಮಸ್ಕಾರ, ಚಿಕಿತ್ಸಾತ್ಮಕ ಸರಳ ಆಸನಗಳು ಹಾಗೂ ಪ್ರಾಣಾಯಾಮ […]

ಬಯಸಿದ್ದು ಸಿಗದಿದ್ದಲ್ಲಿ ಬಂದದ್ದನ್ನು ಸ್ವೀಕರಿಸಿ ಸಂತೋಷವಾಗಿರಬೇಕು. ಸಣ್ಣ-ಸಣ್ಣ ವಿಷಯಗಳಲ್ಲೂ  ಖುಷಿ ಕಾಣುವಂತಾಗಲಿ- ಡಾ| ಸುಧಾ ರಾವ್

ಬಯಸಿದ್ದು ಸಿಗದಿದ್ದಲ್ಲಿ ಬಂದದ್ದನ್ನು ಸ್ವೀಕರಿಸಿ ಸಂತೋಷವಾಗಿರಬೇಕು. ಸಣ್ಣ-ಸಣ್ಣ ವಿಷಯಗಳಲ್ಲೂ  ಖುಷಿ ಕಾಣುವಂತಾಗಲಿ- ಡಾ| ಸುಧಾ ರಾವ್

Thursday, June 20th, 2019

ಬದುಕಿನಲ್ಲಿ ನಾವು ಎಣಿಸದಂತೆ ನಡೆಯದಿರುವ ಅದೆಷ್ಟೋ ಸಂದರ್ಭಗಳಿವೆ. ಅದಕ್ಕಾಗಿ ಕೊರಗುತ್ತಾ ಕೂರುವುದಲ್ಲ. ಬದಲಾಗಿ ಬಂದಂತಹ ವಿಷಯಗಳಲ್ಲಿ ಖುಷಿ ಕಾಣುವಂತಾಗಬೇಕು ಎಂದು ಡಾ| ಸುಧಾರಾವ್ ಹತ್ತನೇ ತರಗತಿ ಮಕ್ಕಳಿಗೆ ಹೇಳಿದರು. ಇವರು ವಿವೇಕಾನಂದ ಕನ್ನಡ ಶಾಲೆಯ ಹತ್ತನೇ ತರಗತಿಯ ಮಕ್ಕಳಿಗೆ ಮೇಲಿನ ನುಡಿಗಳನ್ನಾಡಿದರು. ಈ ಸಂದರ್ಭ ಶಾಲಾ ವಿದ್ಯಾನಿಧಿಗೆ 2 ಮಕ್ಕಳ ಪ್ರವೇಶ ಶುಲ್ಕ ನೀಡಿದ ಅನೀಶ್ ಬಡೆಕ್ಕಿಲ ಹಾಗೂ ಪೋಷಕರೂ ಆಟೋ ಚಾಲಕರೂ ಆದ ಮೋಹನ್ ಇವರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿ ಬದುಕಿನ ಕಾಲೇಜು ಹಂತದಲ್ಲಿರುವ ಮಕ್ಕಳಲ್ಲಿ ಸಾಮಾಜಿಕ ಸನ್ಮಂಗಳದ […]

ಶಾಲಾ ಚುನಾವಣೆ

ಶಾಲಾ ಚುನಾವಣೆ

Wednesday, June 19th, 2019

ಳವೆಯಿಂದಲೇ ನಾಯಕತ್ವ ಗುಣವನ್ನು ಬೆಳೆಸಲು ಶಾಲಾ ಚುನಾವಣೆಯು ಉತ್ತಮ ವೇದಿಕೆಯಾಗಿದೆ. ನಾಯಕತ್ವದ ಗುಣವು ವೈಯಕ್ತಿಕ ಮತ್ತು ಸಾಮಾಜಿಕ ಒಳಿತಿಗೆ ಪ್ರೇರಕವಾಗಿದೆ. ಚುನಾವಣೆಯಲ್ಲಿ ಆಯ್ಕೆಯಾದ ಮಕ್ಕಳು ತಮ್ಮ ಜವಾಬ್ದಾರಿ ತಿಳಿದು ನಿರಂತರ ಕಾರ್ಯೋನ್ಮುಖರಾಗಿರಬೇಕು ಎಂದು ಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆಯವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿ ಚುನಾವಣೆಯಲ್ಲಿ ಆಯ್ಕೆಯಾದ ಮಕ್ಕಳಿಗೆ ತಿಳಿಸುತ್ತಾ ಪ್ರಮಾಣವಚನ ಮಾಡಿಸಿದರು. ಪ್ರೌಢಶಾಲಾ ವಿಭಾಗದ ನಾಯಕನಾಗಿ ಶಿಶಿರ್ ಎಸ್. ಮತ್ತು ಉಪನಾಯಕನಾಗಿ ಸುಹಾಸ್ ಪ್ರಭು ಆಯ್ಕೆಯಾದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕನಾಗಿ ಅಕ್ಷಯ್ […]

ಮನೆಯು ಸಂಸ್ಕಾರದ ಕೆಂದ್ರ ಬಿಂದು -ಕಜಂಪಾಡಿ ಸುಬ್ರಹ್ಮಣ್ಯ ಭಟ್

ಮನೆಯು ಸಂಸ್ಕಾರದ ಕೆಂದ್ರ ಬಿಂದು -ಕಜಂಪಾಡಿ ಸುಬ್ರಹ್ಮಣ್ಯ ಭಟ್

Wednesday, June 19th, 2019

ಸಂಸ್ಕಾರಯುತ ಮತ್ತು ಮಾತೃಭಾಷೆಯ ಶಿಕ್ಷಣ ದೊರೆತಲ್ಲಿ ಮಗುವಿನ ಸರ್ವಾಂಗೀಣ ಏಳಿಗೆ ಸಾಧ್ಯ. ಭಾರತೀಯ ಪರಿಕಲ್ಪನೆ ಹೊಂದಿರುವ, ವೈಜ್ಞಾನಿಕ ಭಾಷೆಯಾದ ಕನ್ನಡ ಭಾಷೆಯು ಅರ್ಥಪೂರ್ಣವಾದ ಸಂಬಂಧಗಳನ್ನು ಬೆಸೆಯುವ ಹೃದಯದ ಭಾಷೆಯಾಗಿದೆ. ಮಾತೃ ಭಾಷೆಯ ಶಿಕ್ಷಣದಿಂದ ಮಗುವಿನಲ್ಲಿ ಆನಂದದ ಕಲಿಕೆ ಸಾಧ್ಯ ಎಂದು ಅಖಿಲ ಭಾರತೀಯ ಕುಟುಂಬ ಪ್ರಬೋಧನ್ ಪ್ರಮುಖರಾದ ಶ್ರೀಯುತ ಕಜಂಪಾಡಿ ಸುಬ್ರಹ್ಮಣ್ಯ ಭಟ್ ನುಡಿದರು. ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ನಡೆದ ಪೋಷಕರ ಸಭೆಯಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷೀಯ […]

ಯಕ್ಷಗಾನ ನಾಟ್ಯ ತರಗತಿ ಪ್ರಾರಂಭ

ಯಕ್ಷಗಾನ ನಾಟ್ಯ ತರಗತಿ ಪ್ರಾರಂಭ

Tuesday, June 4th, 2019

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ 2019-20 ನೇ ಸಾಲಿನ ಯಕ್ಷಗಾನ ನಾಟ್ಯ ತರಗತಿ ಪ್ರಾರಂಭವಾಯಿತು. ಯಕ್ಷಗುರು ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಇವರ ನಿರ್ದೇಶನದಲ್ಲಿ ಶ್ರೀ ಚಂದ್ರಶೇಖರ ಸುಳ್ಯಪದವು ಇವರ ಸಂಯೋಜನೆಯಲ್ಲಿ ಈ ತರಗತಿಗಳು ನಡೆಯಲಿವೆ. ದಿನಾಂಕ 8-6-2019 ರಂದು ಯಕ್ಷಗಾನ ಹಿಮ್ಮೇಳ ತರಗತಿ (ಭಾಗವತಿಕೆ, ಚೆಂಡೆ) ಗಳು ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರೀ ಇವರ ನಿರ್ದೇಶನದಲ್ಲಿ ಆರಂಭವಾಗಲಿದೆ. ಆಸಕ್ತರು ಸೇರಲು ಅವಕಾಶವಿದೆ.

ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಪ್ರಾರಂಭೋತ್ಸವ

ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಪ್ರಾರಂಭೋತ್ಸವ

Tuesday, May 28th, 2019

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲದಲ್ಲಿ 27-05-2019 ರಂದು 2019-20 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಆಚರಿಸಲಾಯಿತು. ಗಣಹೋಮದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳನ್ನು ಮಾತಾಜಿಯವರು ತಿಲಕವಿಟ್ಟು ಸಿಹಿ ನೀಡಿ ಸ್ವಾಗತಿಸಿದರು. ಎಲ್ಲಾ ಮಕ್ಕಳೂ ಭಾರತಾಂಬೆಯ ಚರಣಗಳಿಗೆ ನಮಸ್ಕರಿಸಿ ಪುಷ್ಪಾರ್ಚನೆಗೈದು ತಮ್ಮ ಮುಂದಿನ ವಿದ್ಯಾರ್ಜನೆಗೆ ಶುಭಾರಂಭಗೈದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು, ಸಂಚಾಲಕರು, ಸದಸ್ಯರು, ಶಿಕ್ಷಕ -ರಕ್ಷಕ ಸಂಘದ ಪದಾಧಿಕಾರಿಗಳು, ಪೋಷಕರು – ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

2018-19 ನೇ ಸಾಲಿನ 10 ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಮಕ್ಕಳಿಗೆ ಅಭಿನಂದನೆಗಳು

2018-19 ನೇ ಸಾಲಿನ 10 ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಮಕ್ಕಳಿಗೆ ಅಭಿನಂದನೆಗಳು

Wednesday, May 1st, 2019
2018-19 ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ

2018-19 ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ

Tuesday, April 30th, 2019

2018-19 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕು. ಅನುಷಾ ಲಕ್ಷ್ಮೀ ಎಂ.ಎಸ್ 603 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ಸತ್ಯಪ್ರಸಾದ್ ಎಂ. ಮತ್ತು ಉಮಾಶಂಕರಿ ಎಂ.ಎಸ್. ದಂಪತಿಗಳ ಪುತ್ರಿ. ಶರಣ್‌ ಎಸ್. ಶೆಟ್ಟಿ- 593 (ಗೆಣಸಿನ ಕುಮೇರು ತೋಟ ನಿವಾಸಿ ಶ್ರೀನಿವಾಸ ಶೆಟ್ಟಿ ಮತ್ತು ಜಿ. ಲಕ್ಷ್ಮೀ ಎಸ್. ಶೆಟ್ಟಿ ದಂಪತಿಗಳ ಪುತ್ರ), ಪಿ. ಪ್ರತೀಕ್‌ ಗಣಪತಿ- 584 (ಡಾ. ರಾಮಚಂದ್ರ ಪಿ. ಮತ್ತು ಚೈತ್ರಾ ರಾಮಚಂದ್ರ ಪಿ. […]

ವಿದ್ಯಾದದಾತಿ ವಿನಯಂ -ಶ್ರೀ ಕೃಷ್ಣಪ್ರಸಾದ್

ವಿದ್ಯಾದದಾತಿ ವಿನಯಂ -ಶ್ರೀ ಕೃಷ್ಣಪ್ರಸಾದ್

Monday, April 8th, 2019

ಪಡೆದ ಶಿಕ್ಷಣ ಮನೆ, ಶಾಲೆ ಸಮಾಜವನ್ನು ಬೆಳಗುವಂತಾಗಬೇಕು. ಪ್ರಾಮಾಣಿಕತೆ ಇರಬೇಕು. ವಿದ್ಯೆಯಿಂದ ಸದ್ಗುಣ ಸಂಪನ್ನ, ಶೀಲವಂತರಾಗಬೇಕು. ವಿದ್ಯೆಯು ಸಂಸ್ಕಾರ, ವಿವೇಚನೆ ನೀಡುತ್ತದೆ ಅದೇ ರೀತಿ ಉತ್ತಮವಾದದ್ದನ್ನು ಆರಿಸಿಕೊಳ್ಳುವ, ಕೆಟ್ಟದನ್ನು ತ್ಯಜಿಸುವ ಗುಣವನ್ನು ನೀಡುತ್ತದೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ 10 ನೇ ತರಗತಿ ವಿದ್ಯಾರ್ಥಿಗಳ ’ದೀಕ್ಷಾಂತ’ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣಪ್ರಸಾದ್ ನುಡಿದರು. ಇವರು ಶ್ರೀರಾಮ ಪದವಿ ಕಾಲೇಜಿನ ಪ್ರಾಂಶುಪಾಲರಾಗಿದ್ದು ಈ ಕಾರ್ಯಕ್ರಮದ ಮುಖ್ಯ ಅತಿಥಿ ನೆಲೆಯಲ್ಲಿ ಈ ಮಾತುಗಳನ್ನಾಡಿದರು. ಎಲ್ಲಾ ವಿದ್ಯಾರ್ಥಿಗಳು ತಮ್ಮ ಪೋಷಕರ […]

ಅನ್ವೇಷಣೆ ಸಂಶೋಧನೆಯ ತಾಯಿ - ಡಾ. ಕೃಷ್ಣ ಭಟ್‌ ಕೊಂಕೋಡಿ

ಅನ್ವೇಷಣೆ ಸಂಶೋಧನೆಯ ತಾಯಿ – ಡಾ. ಕೃಷ್ಣ ಭಟ್‌ ಕೊಂಕೋಡಿ

Friday, April 5th, 2019

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ’ಅಟಲ್‌ ಟಿಂಕರಿಂಗ್‌ ಉತ್ಸವ- 2019’ ಕಾರ್ಯಕ್ರಮವನ್ನು ವಿವೇಕಾನಂದ ಇಂಜಿನಿಯರಿಂಗ್‌ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸತೀಶ್‌ರವರು ಉದ್ಘಾಟಿಸಿ ಶುಭ ಹಾರೈಸಿದರು. ಸಭಾಧ್ಯಕ್ಷರೂ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳೂ ಆದ ಡಾ. ಕೃಷ್ಣ ಭಟ್‌ ಕೊಂಕೋಡಿಯವರು ಮಾತನಾಡಿ ಅನ್ವೇಷಣೆ ಎಂಬುದು ಸಂಶೋಧನೆಯ ತಾಯಿ. ನಿತ್ಯ ಜೀವನದಲ್ಲಿ ಅಗತ್ಯವಾದ ಸಣ್ಣಪುಟ್ಟ ಕೌಶಲ್ಯಗಳನ್ನು ಅಳವಡಿಸಿಕೊಳ್ಳುತ್ತಾ ಪ್ರಶ್ನಿಸುವ ಮನೋಭಾವ, ಕುತೂಹಲ ಪ್ರವೃತ್ತಿ, ಪರಿಶ್ರಮ, ಆಧುನಿಕ ಸೌಲಭ್ಯಗಳ ಬಳಕೆಯ ಜೊತೆಗೆ ಆತ್ಮವಿಶ್ವಾಸದಿಂದ ಹಂತಹಂತವಾಗಿ ಮೇಲೇರಿದಾಗ ಜೀವನದಲ್ಲಿ […]

ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳಿಗೆ ಶಿಬಿರಗಳೇ ಉತ್ತಮ ವೇದಿಕೆ- ಅಶೋಕ್

ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳಿಗೆ ಶಿಬಿರಗಳೇ ಉತ್ತಮ ವೇದಿಕೆ- ಅಶೋಕ್

Wednesday, March 27th, 2019

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ 6 ದಿನಗಳ ’ಕಲರವ’ ಮತ್ತು ಬಣ್ಣ’ ಈ ಶಿಬಿರಗಳ ಸಮಾರೋಪ ಸಮಾರಂಭದಲ್ಲಿ ಶ್ರೀರಾಮ ಪದವಿಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಶ್ರೀಯುತ ಅಶೋಕ್ ಮಾತನಾಡಿ, ‘ಮಕ್ಕಳ ಬೆಳವಣಿಗೆಗೆ ಒಬ್ಬ ಉತ್ತಮ ಗುರುವಿನ ಪ್ರೇರಣೆ ಅತೀ ಅಗತ್ಯ. ಶಿಬಿರಗಳಂತಹ ವೇದಿಕೆಗಳು ದೊರೆತಾಗ ಮಕ್ಕಳ ಸುಪ್ತ ಪ್ರತಿಭೆಗಳು ಹೊರಹೊಮ್ಮಿ ಅವರಲ್ಲಿ ಆತ್ಮವಿಶ್ವಾಸ, ಧೈರ್ಯ, ಉತ್ತಮ ಚಟುವಟಿಕೆಗಳ ಅಭ್ಯಾಸಗಳು ಬೆಳೆಯುತ್ತವೆ’ ಎಂದು ನುಡಿದರು. ಶಾಲಾ ಅಧ್ಯಕ್ಷರಾದ ಶ್ರೀಯುತ ಅಚ್ಯುತ ನಾಯಕ್ ಮಾತನಾಡಿ, ’ಮಗುವಿನ ಬೆಳವಣಿಗೆಗೆ ಹಿರಿಯರ […]

ಆಸಕ್ತಿದಾಯಕ ಚಟುವಟಿಕೆಗಳಿಂದ ರಜಾಕಾಲದ ಸದುಪಯೋಗ ಸಾಧ್ಯ - ಶ್ರೀಮತಿ ಮಂಗಳ ಗೌರಿ

ಆಸಕ್ತಿದಾಯಕ ಚಟುವಟಿಕೆಗಳಿಂದ ರಜಾಕಾಲದ ಸದುಪಯೋಗ ಸಾಧ್ಯ – ಶ್ರೀಮತಿ ಮಂಗಳ ಗೌರಿ

Wednesday, March 20th, 2019

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗಾಗಿ ಒಂದು ವಾರದ ’ಕಲರವ’ಮತ್ತು’ಬಣ್ಣ’ಎಂಬ ಎರಡು ವಿಭಾಗಗಳಲ್ಲಿ ಬೇಸಿಗೆ ಶಿಬಿರಗಳನ್ನು ಮಾರ್ಚ್ 20 ರಿಂದ ಆರಂಭಿಸಲಾಯಿತು. ಈ ಶಿಬಿರದ ಉದ್ಘಾಟನೆಗೈದು ಮಾತನಾಡಿದ ಶಾಲಾ ಪೋಷಕರಾದ ಶ್ರೀಮತಿ ಮಂಗಳ ಗೌರಿ ಮಾತನಾಡಿ ಮಕ್ಕಳು ದೂರದರ್ಶನ, ಮೊಬೈಲ್ ಇತ್ಯಾದಿಗಳಿಂದ ದೂರವಿದ್ದು, ಬೇಸಿಗೆ ಶಿಬಿರಗಳಂತಹ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಆಸಕ್ತಿಯುತ ಕಲಿಕೆಯನ್ನು ವೃದ್ಧಿಸಿಕೊಳ್ಳುವುದು ಒಳ್ಳೆಯ ವಿಚಾರವಾಗಿದೆ ಎಂದು ನುಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಮಕ್ಕಳ ಸಾಹಿತಿ ಉಲ್ಲಾಸ್ ಪೈ (ಉಲ್ಲಾಸಣ್ಣ) ಶಿಬಿರಗಳು ಮಕ್ಕಳಲ್ಲಿ ಹೆಚ್ಚಿನ ಜ್ಞಾನಾಭಿವೃದ್ಧಿಗೆ […]

ಡ್ರಾಯಿಂಗ್ ಸ್ಪರ್ಧೆಯಲ್ಲಿ ಪ್ರಶಸ್ತಿ

ಡ್ರಾಯಿಂಗ್ ಸ್ಪರ್ಧೆಯಲ್ಲಿ ಪ್ರಶಸ್ತಿ

Tuesday, March 5th, 2019

ಮಂಗಳೂರಿನ ಇಸ್ಕಾನ್ ಸಂಸ್ಥೆಯವರು ನಡೆಸಿದ ಗೋ-ಲೋಕ ಶೇಡ್ಸ್‌ ಡ್ರಾಯಿಂಗ್ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿ ಗೌತಮ್ ಎಸ್. ಪ್ರಥಮ ಸ್ಥಾನ, 6 ನೇ ತರಗತಿಯ ಅಗಮ್ಯ-ತೃತೀಯ ಸ್ಥಾನ ಮತ್ತು 3ನೇ ತರಗತಿಯ ಅನುಷ ಬಿ. ಎಸ್. ಸಮಾಧಾನಕರ ಬಹುಮಾನ ಪಡೆದಿರುತ್ತಾರೆ.

ವೆಂಕಟೇಶ್ವರ ಅಮೈ ಅವರಿಗೆ ಶ್ರದ್ಧಾಂಜಲಿ ಸಭೆ

ವೆಂಕಟೇಶ್ವರ ಅಮೈ ಅವರಿಗೆ ಶ್ರದ್ಧಾಂಜಲಿ ಸಭೆ

Monday, February 25th, 2019

ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರೂ, ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಟ್ಲ ತಾಲೂಕಿನ ಸಂಘಚಾಲಕರೂ ಆಗಿದ್ದ ಶ್ರೀ ವೆಂಕಟೇಶ್ವರ ಅಮೈ ಅವರು ಇತ್ತೀಚೆಗೆ ನಿಧನರಾಗಿದ್ದು, ಅವರಿಗೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ.ಕೃಷ್ಣ ಭಟ್‌ ಕೊಂಕೋಡಿ ಮಾತನಾಡಿ ಹಿರಿಯರಾದ ವೆಂಕಟೇಶ್ವರ ಅಮೈ ಅವರ ವ್ಯಕ್ತಿತ್ವ ಇತರರಿಗೆ ಮಾದರಿಯಾಗಿತ್ತು. ತಾಯಿ ಪ್ರೀತಿಯನ್ನು ಪ್ರತಿಯೊಬ್ಬರಲ್ಲೂ ತೋರಿಸುತ್ತಿದ್ದರು. ತನ್ನ ಪ್ರೀತಿಯ ಮಾತಿನಿಂದಲೇ ಇತರರಿಗೆ ಮಾರ್ಗದರ್ಶನ ನೀಡುತ್ತಿದ್ದರು ಎಂದರು. ಶಾಲಾ ಆಡಳಿತ ಮಂಡಳಿ ಕೋಶಾಧಿಕಾರಿ […]

ರಥಸಪ್ತಮಿ ಆಚರಣೆಯು ಅತ್ಯಂತ ಅರ್ಥಪೂರ್ಣವಾಗಿದೆ- ಶ್ರೀಮತಿ ಪೂರ್ಣಿಮಾ

ರಥಸಪ್ತಮಿ ಆಚರಣೆಯು ಅತ್ಯಂತ ಅರ್ಥಪೂರ್ಣವಾಗಿದೆ- ಶ್ರೀಮತಿ ಪೂರ್ಣಿಮಾ

Wednesday, February 13th, 2019

’ಜಗತ್ತಿನ ಎಲ್ಲಾ ಜೀವಿರಾಶಿಗೂ ಶಕ್ತಿಯ ಪ್ರಧಾನ ಮೂಲ ಸೂರ್ಯ. ಉತ್ತರಾಯಣದಲ್ಲಿ ಬರುವ ಮಾಘ ಶುದ್ಧ ಸಪ್ತಮಿಯಂದು ಆಚರಿಸುವ ರಥ ಸಪ್ತಮಿ ಹಬ್ಬವು ಅತ್ಯಂತ ಅರ್ಥಪೂರ್ಣವಾಗಿದೆ. ಮಹಾವಿಷ್ಣುವೇ ಸೂರ್ಯನಾರಾಯಣನೆಂದು ಪ್ರಾಚೀನ ಕಾಲದಿಂದಲೂ ಭಕ್ತಿಯಿಂದ ಆರಾಧಿಸುತ್ತಾ ಬಂದಿದ್ದೇವೆ. ಮಾಲಿನ್ಯರಹಿತವಾದ ಮುಗಿಯದ ಇಂಧನ ಮೂಲವಾಗಿ ಸೌರಶಕ್ತಿಯನ್ನು ನಾವು ಬಳಸುತ್ತಿದ್ದೇವೆ. ರೋಗರುಜಿಗಳಿಂದ ದೂರವಿರಲು ಸೂರ್ಯನ ಬೆಳಕು ಮತ್ತು ಶಾಖ ಅಗತ್ಯ. ಪ್ರಾಣಿ ಪ್ರಪಂಚಕ್ಕೆ ಆಹಾರ ಪೂರೈಸುವ ಹಸಿರು ಸಸ್ಯಗಳ ದ್ಯುತಿಸಂಶ್ಲೇಷಣೆ ಕ್ರಿಯೆಗೂ ಸೂರ್ಯನ ಕಿರಣಗಳು ಅವಶ್ಯಕ. ಪೂರ್ವಜನ್ಮದ ಪಾಪರೂಪವಾದ ಗುಣಪಡಿಸಲಾಗದ ವ್ಯಾಧಿಗಳ ಶಮನಕ್ಕೂ […]

ಪ್ರಬಂಧ ಸ್ಪರ್ಧೆಯಲ್ಲಿ ಪ್ರಶಸ್ತಿ

ಪ್ರಬಂಧ ಸ್ಪರ್ಧೆಯಲ್ಲಿ ಪ್ರಶಸ್ತಿ

Friday, February 8th, 2019

ಸಂತ ಫಿಲೋಮಿನಾ ಕಾಲೇಜಿನಲ್ಲಿ ನಡೆದ ಅಟಲ್‌ ಟಿಂಕರಿಂಗ್ ಫೆಸ್ಟ್‌ ಕಾರ್ಯಕ್ರಮದಲ್ಲಿ ವಿಜ್ಞಾನ ಮಾದರಿ ಸಂಬಂಧಿಸಿ ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಪ್ರಣೀತ್, ಗೌತಮ್, ಧನುಷ್, ಅಜಿತೇಶ್, ಮನೀಶ್‌ ಇವರ ತಂಡ ದ್ವಿತೀಯ ಸ್ಥಾನ ಪಡೆದಿರುತ್ತದೆ.

ಬಿ.ಎಸ್ಸಿ (ಇಂಟೀರಿಯರ್ ಡಿಸೈನ್) - ಪ್ರಥಮ ರ್‍ಯಾಂಕ್

ಬಿ.ಎಸ್ಸಿ (ಇಂಟೀರಿಯರ್ ಡಿಸೈನ್) – ಪ್ರಥಮ ರ್‍ಯಾಂಕ್

Thursday, February 7th, 2019

ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಬಿ.ಎಸ್ಸಿ (ಇಂಟಿರಿಯರ್ ಡಿಸೈನ್)ಪರೀಕ್ಷೆಯಲ್ಲಿ ಶ್ರೀದೇವಿ ಕಾಲೇಜ್ ಇಂಟೀರಿಯರ್ ಡಿಸೈನ್ ಮತ್ತು ಡೆಕೊರೇಶನ್, ಮಂಗಳೂರು ಇಲ್ಲಿನ ವಿದ್ಯಾರ್ಥಿನಿ ಕು. ವಾಣಿ ಶ್ರೀ ಇವರು 88.38% ಅಂಕಗಳೊಂದಿಗೆ ಪ್ರಥಮ ರ್‍ಯಾಂಕ್ ಗಳಿಸಿದ್ದಾರೆ. ಇವರು ಬಡೆಕಿಲ ಸುಬ್ಬಣ್ಣ ಭಟ್ ಮತ್ತು ಸಂಧ್ಯಾ ಭಟ್ ದಂಪತಿಗಳ ಪುತ್ರಿ. ಇವರು ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿನಿಯಾಗಿರುತ್ತಾರೆ.

ಕವಿ ಕಾವ್ಯ ಸಮನ್ವಯ

ಕವಿ ಕಾವ್ಯ ಸಮನ್ವಯ

Tuesday, February 5th, 2019

ಮನುಷ್ಯ ಜನ್ಮವು ಅತ್ಯಂತ ಅಮೂಲ್ಯ. ಹಲವು ಪುಣ್ಯಗಳನ್ನು ತೆತ್ತು ಈ ಜನ್ಮ ಪ್ರಾಪ್ತವಾಗುತ್ತದೆ. ಮಾನವ ತನ್ನ ಜೀವನವನ್ನು ಸತ್ಕಾರ್ಯಗಳಿಗೆ ಮೀಸಲಿಡಬೇಕು. ಅಜ್ಞಾನವನ್ನು ತೊರೆದು ಮೌಢ್ಯಾಅಚರಣೆಗಳ ಬಲೆಗೆ ಸಿಲುಕದೆ ಆತ್ಮಗೌರವವನ್ನು ಕಾಪಾಡಿಕೊಳ್ಳಬೇಕು ಎನ್ನುವ ಸಂದೇಶವನ್ನು ಸಾರುವ ಸಂತ ಶಿಶುನಾಳ ಶರೀಫ ಹಾಗೂ ಗೋಪಾಲಕೃಷ್ಣ ಅಡಿಗರ ಹಾಡುಗಳ ಸಿಂಚನ ಸ್ಫುರಣವಾದುದು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಭಾಂಗಣದಲ್ಲಿ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ| ಶೋಭಿತಾ ಸತೀಶ್ ಇವರು ಸಂತಶಿಶುನಾಳ ಶರೀಫರ ದ್ವಿಜನ್ಮ ಶತಾಬ್ಧಿ ಹಾಗೂ ಕವಿ ಶ್ರೀ ಗೋಪಾಲಕೃಷ್ಣ […]

ನಾಟಕೋತ್ಸವ- 2019

ನಾಟಕೋತ್ಸವ- 2019

Friday, February 1st, 2019

ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ (ರಿ.) ಮಂಗಳೂರು ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಆಶ್ರಯದಲ್ಲಿ ನಾಟಕೋತ್ಸವ – 2019 ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಎಂಟನೇಯ ಮಕ್ಕಳ ನಾಟಕೋತ್ಸವದ ಉದ್ಫಾಟಕರಾಗಿ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಗೌರವಾಧ್ಯಕ್ಷರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾದ ಶ್ರೀ ಮೂರ್ತಿ ದೇರಾಜೆ ಮಾತನಾಡಿ 40 ವರ್ಷಗಳ ಕಾಲ ರಂಗಭೂಮಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅನುಭವಗಳನ್ನು ವಿವರಿಸಿದರು. ವೇದಿಕೆಯಲ್ಲಿ ಮಕ್ಕಳ ಸಾಹಿತ್ಯ ಸಂಗಮದ ಸ್ಥಾಪಕ […]

70 ನೇ ಗಣರಾಜ್ಯೋತ್ಸವ ದಿನಾಚರಣೆ

70 ನೇ ಗಣರಾಜ್ಯೋತ್ಸವ ದಿನಾಚರಣೆ

Saturday, January 26th, 2019

ಸಂವಿಧಾನ ಜನತೆಗೆ ನೀಡಿದ ಹಕ್ಕು ಮತ್ತು ಕರ್ತವ್ಯಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿ, ದೇಶದ ಒಗ್ಗಟ್ಟನ್ನು ಸಾಧಿಸಿದಾಗ ಗಣರಾಜ್ಯೋತ್ಸವ ಆಚರಣೆ ಅರ್ಥಪೂರ್ಣವಾಗುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ | ಕೃಷ್ಣ ಭಟ್ ಕೊಂಕೋಡಿ ಹೇಳಿದರು. ಅವರು ತೆಂಕಿಲ ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ 70 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಧ್ವಜಾರೋಹಣ ನಿರ್ವಹಿಸಿ ಮಾತನಾಡುತ್ತಿದ್ದರು. ಸಮಾರಂಭದ ಪ್ರಾರಂಭದಲ್ಲಿ ವಿವೇಕಾನಂದ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಆಕರ್ಷಕ ಪಥಸಂಚಲನ ನಡೆಯಿತು. ಕಾರ್ಯಕ್ರಮದಲ್ಲಿ ವಿವೇಕಾನಂದ ಆಂಗ್ಲ ಮತ್ತು ಕನ್ನಡ […]

ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶಾಲೆಗೆ 96% ಫಲಿತಾಂಶ

ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶಾಲೆಗೆ 96% ಫಲಿತಾಂಶ

Thursday, January 24th, 2019

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ಏರ್ಪಡಿಸಿದ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲ ವಿದ್ಯಾರ್ಥಿಗಳು ಲೋವರ್ ಗ್ರೇಡ್ ವಿಭಾಗದಲ್ಲಿ 10 ವಿಶಿಷ್ಟ ಶ್ರೇಣಿಯಲ್ಲಿ ಮತ್ತು 3 ಪ್ರಥಮ ಶ್ರೇಣಿ ತೇರ್ಗಡೆಯಾಗಿದ್ದಾರೆ. ಹೈಯರ್ ಗ್ರೇಡ್ ವಿಭಾಗದಲ್ಲಿ 17 ವಿದ್ಯಾರ್ಥಿಗಳು ಭಾಗವಹಿಸಿದ್ದು 2 ವಿಶಿಷ್ಟ ಶ್ರೇಣಿಯಲ್ಲಿ ಮತ್ತು 15 ಪ್ರಥಮ ಶ್ರೇಣಿ ತೇರ್ಗಡೆಯಾಗಿದ್ದಾರೆ. ಇವರಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ರುಕ್ಮಯ ಶೇರಾ ಇವರು ತರಬೇತಿ ನೀಡಿದ್ದರು. ಲೋವರ್ ಗ್ರೇಡ್ ವಿಭಾಗದಲ್ಲಿ ವಿಶಿಷ್ಟ ಶ್ರೇಣಿ ಪಡೆದವರು: ಮುಖೇಶ್ ಕೃಷ್ಣ (ಕೃಷ್ಣಪ್ಪಗೌಡ ಮತ್ತು ಭಾರತಿ ಕೆ ದಂಪತಿಗಳ […]

ಶಾಂತಿವನ ಟ್ರಸ್ಟ್ ಪುಸ್ತಕಾಧಾರಿತ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಪ್ರಶಸ್ತಿ

ಶಾಂತಿವನ ಟ್ರಸ್ಟ್ ಪುಸ್ತಕಾಧಾರಿತ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಪ್ರಶಸ್ತಿ

Saturday, January 12th, 2019

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ (ರಿ.) ಶ್ರೀ ಕ್ಷೇತ್ರ ಧರ್ಮಸ್ಥಳ, ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆಯವರು ಧರ್ಮಸ್ಥಳದ ಮಹೋತ್ಸವ ಭವನದಲ್ಲಿ ನಡೆಸಿದ ಜಿಲ್ಲಾ ಮಟ್ಟದ ಪ್ರೌಢ ವಿಭಾಗದ ’ಜ್ಞಾನತುಂಗೆ’ ಪುಸ್ತಕಾಧಾರಿತ ಸ್ಪರ್ಧೆಯ ಭಾಷಣದಲ್ಲಿ ಪೃಥಾ ಆರ್‌. ರೈ (ಶ್ರೀ ರವೀಂದ್ರ ರೈ ಪಿ. ಮತ್ತು ಉಷಾ ರವೀಂದ್ರ ದಂಪತಿಗಳ ಪುತ್ರಿ)- ಪ್ರಥಮ, ಚಿತ್ರಕಲಾ ಸ್ಪರ್ಧೆಯಲ್ಲಿ ಗೌತಮ್‌ ಎಸ್. (ಗಣೇಶ್ ಪೂಜಾರಿ ಮತ್ತು ಮಮತಾ […]

ವಿವೇಕಾನಂದ ಜಯಂತಿ-2019

ವಿವೇಕಾನಂದ ಜಯಂತಿ-2019

Saturday, January 12th, 2019

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ’ವಿವೇಕಾನಂದ ಜಯಂತಿ’ಯನ್ನು ಸಂಭ್ರಮದಿಂದ ಆಚರಿಸಲಾಯಿತು. ಪುಟಾಣಿ ಮಕ್ಕಳು ವಿವೇಕಾನಂದ ಉಡುಗೆ ಧರಿಸಿ ವಿವೇಕವಾಣಿ ಹೇಳಿದರು. ನಂತರ ಹಿರಿಯ ಶಿಕ್ಷಕಿ ಪೂರ್ಣಿಮಾ ಮಾತಾಜಿಯವರು ವಿವೇಕಾನಂದರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನವನ್ನು ಸಾರ್ಥಕತೆಗೊಳಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಹೇಳಿದರು. ಅನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.

ಶಾಲಾ ವಾರ್ಷಿಕೋತ್ಸವ ’ವಿವೇಕೋತ್ಸವ’ 2018

ಶಾಲಾ ವಾರ್ಷಿಕೋತ್ಸವ ’ವಿವೇಕೋತ್ಸವ’ 2018

Wednesday, December 19th, 2018

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತವರು ದೇಶವನ್ನು ಮುನ್ನಡೆಸಬಲ್ಲರು – ನಳಿನ್ ದೇಶದಲ್ಲಿನ ಮಹಾನ್ ಸಾಧಕರೆಲ್ಲ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರಲ್ಲ. ಪ್ರಧಾನಿ ಮೋದಿ ಗುಜರಾತಿ ಮಾತೃಭಾಷೆ ಗುಜರಾತಿಯಲ್ಲಿ ಕಲಿತರೆ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಟಾಟಾ ಸಂಸ್ಥೆಯ ಚಂದ್ರಶೇಖರ್ ತಮಿಳುನಾಡಿನ ಮಾತೃಭಾಷೆ ತಮಿಳಿನಲ್ಲಿ ವಿದ್ಯಾಭ್ಯಾಸ ಪಡೆದು ದೇಶದ ಮಹಾನ್ ಸಾಧಕರೆನಿಸಿದ್ದಾರೆ. ಮುಂದೊಂದು ದಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶವನ್ನು ಮುನ್ನಡೆಸಬಲ್ಲ ಶಕ್ತಿಯನ್ನು ಹೊಂದಿದವರಾಗಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ತೆಂಕಿಲ […]

ವಿವೇಕೋತ್ಸವ - ಸಾಂಸ್ಕೃತಿಕ ಹಬ್ಬ 2018-19

ವಿವೇಕೋತ್ಸವ – ಸಾಂಸ್ಕೃತಿಕ ಹಬ್ಬ 2018-19

Thursday, December 6th, 2018
ಆಟದೊಂದಿಗೆ ಪಾಠಕ್ಕೂ ಪ್ರಾಮುಖ್ಯತೆ ಇರಲಿ - ಶ್ರೀಮತಿ ಓಮನ

ಆಟದೊಂದಿಗೆ ಪಾಠಕ್ಕೂ ಪ್ರಾಮುಖ್ಯತೆ ಇರಲಿ – ಶ್ರೀಮತಿ ಓಮನ

Friday, November 30th, 2018

ಜೀವನದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆಯಬೇಕಾದರೆ ವಿದ್ಯಾರ್ಥಿಗಳು ಆಟೋಟಗಳಲ್ಲಿ ಭಾಗವಹಿಸಿ ಸಾಧನೆಗೈಯುವುದರ ಜೊತೆಗೆ ಶೈಕ್ಷಣಿಕ ಪ್ರಗತಿಗೂ ಅಷ್ಟೇ ಪ್ರಾಮುಖ್ಯತೆ ಕೊಡಬೇಕು ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ’ವಾರ್ಷಿಕ ಕ್ರೀಡಾಕೂಟ -2018’ರ ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ನಗರ ಮಹಿಳಾ ಆರಕ್ಷಕ ಠಾಣೆಯ ಉಪನಿರೀಕ್ಷಕರಾದ ಶ್ರೀಮತಿ ಓಮನ ಶುಭ ನುಡಿಗಳನ್ನಾಡಿದರು. ಇನ್ನೋರ್ವ ಅತಿಥಿಗಳಾದ ಅಲಂಕಾರು ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಚಂದ್ರಹಾಸರು ಧ್ವಜವಂದನೆ ಸ್ವೀಕರಿಸುತ್ತಾ ಕ್ರೀಡೆಯಲ್ಲಿ ಎದುರಾಗುವ ಸೋಲು ಗೆಲುವುಗಳನ್ನು ಸಮಭಾವದಿಂದ ಸ್ವೀಕರಿಸಿ. […]

ಕನಕ ಜಯಂತಿ ಆಚರಣೆ

ಕನಕ ಜಯಂತಿ ಆಚರಣೆ

Tuesday, November 27th, 2018

ಕನಕ ಜಯಂತಿಯ ಪ್ರಯುಕ್ತ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಕನಕದಾಸರ ಜೀವನ ವೃತ್ತಾಂತವನ್ನು ಹರಿಕಥೆ ಮೂಲಕ ಶ್ರೀ ರಾಧಾಕೃಷ್ಣ ಅಡ್ಯಂತಾಯ ಮತ್ತು ಬಳಗ ಇವರ ನೇತೃತ್ವದಲ್ಲಿ ನಡೆಸಲಾಯಿತು. ಹಿಮ್ಮೇಳದಲ್ಲಿ ಹಾರ್ಮೋನಿಯಂನಲ್ಲಿ ಶ್ರೀಯುತ ಬಾಲಕೃಷ್ಣ ಆಳ್ವ, ತಬಲದಲ್ಲಿ ಶ್ರೀಯುತ ದಿನೇಶ್ ಕುಕ್ಕಿಲ ಸಹಕರಿಸಿದರು.

ವಿದ್ಯಾರ್ಥಿಗಳು ಗುರಿ ತಲುಪಲು ಶ್ರಮಿಸಬೇಕು - ಗಣೇಶ್ ವಾಗ್ಲೆ

ವಿದ್ಯಾರ್ಥಿಗಳು ಗುರಿ ತಲುಪಲು ಶ್ರಮಿಸಬೇಕು – ಗಣೇಶ್ ವಾಗ್ಲೆ

Wednesday, November 14th, 2018

ವಿದ್ಯಾರ್ಥಿಗಳು ಉತ್ತಮ ಗುಣಗಳನ್ನು ರೂಢಿಸಿಕೊಳ್ಳಲು ಶ್ರಮಿಸಿದರೆ ಉತ್ತಮ ಭವಿಷ್ಯವು ಅವರದಾಗುತ್ತದೆ. ಸಂಸ್ಕಾರಯುತ ವಿದ್ಯಾರ್ಥಿಗಳಿಂದ ನಮ್ಮ ದೇಶವು ವಿಶ್ವಗುರು ಎನಿಸಿಕೊಳ್ಳುವಲ್ಲಿ ಯಾವುದೇ ಸಂದೇಹವಿಲ್ಲ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕೆಂದು ಶ್ರೀರಾಮ ಪ್ರೌಢಶಾಲೆ ನೆಲ್ಯಾಡಿ ಇಲ್ಲಿನ ಮುಖ್ಯ ಗುರುಗಳಾದ ಶ್ರೀಯುತ ಗಣೇಶ್ ವಾಗ್ಲೆ ನುಡಿದರು. ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ, ಮಕ್ಕಳ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಂದರ್ಭದಲ್ಲಿ ಅಭ್ಯಾಗತರಾಗಿ ಆಗಮಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಉದ್ಫಾಟನೆಯನ್ನು ಶ್ರೀಮತಿ ಶ್ರೀಲಕ್ಷ್ಮೀ ಸುರೇಂದ್ರ ಕಿಣಿ ನೆರವೇರಿಸಿದರು. ವೇದಿಕೆಯಲ್ಲಿ ಶಾಲಾ […]

ಸಂಸ್ಕೃತ ಸಂಭಾಷಣಾ ಶಿಬಿರ

ಸಂಸ್ಕೃತ ಸಂಭಾಷಣಾ ಶಿಬಿರ

Tuesday, November 13th, 2018

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 10 ದಿವಸಗಳ ಕಾಲ ಕು. ನಾಗರತ್ನರವರ ಸಹಕಾರದೊಂದಿಗೆ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಡೆಸಿದ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಕಾರ್ಯಕ್ರಮ ಸಂಪನ್ನಗೊಂಡಿತು. ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ವೆಂಕಟೇಶ್ ಅಮೈ ಅಧ್ಯಕ್ಷತೆಯನ್ನು ವಹಿಸಿ ಸಂಸ್ಕೃತ ಭಾಷೆಯನ್ನು ಕಲಿಯಲು ಯಾವುದೇ ಹಿಂಜರಿಕೆ ಬೇಡ ಎಂದರು. ಮುಖ್ಯ ಅತಿಥಿಗಳಾಗಿ ಸರಸ್ವತಿ ವಿದ್ಯಾಲಯ ನರಿಮೊಗರು ಇದರ ಸಂಚಾಲಕರಾದ ಶ್ರೀ ಅವಿನಾಶ್ ಕೊಡೆಂಕಿರಿಯವರು ಮಾತನಾಡಿ ಸಂಸ್ಕೃತ ಭಾಷೆಯ ಹಿರಿಮೆ ಹಾಗೂ ಮಹತ್ವದ ಬಗ್ಗೆ ತಿಳಿಸಿದರು. […]

ಸಚಿವ ಅನಂತ್ ಕುಮಾರ್ ವಿಧಿವಶ - ಸಂತಾಪ ಸಭೆ

ಸಚಿವ ಅನಂತ್ ಕುಮಾರ್ ವಿಧಿವಶ – ಸಂತಾಪ ಸಭೆ

Tuesday, November 13th, 2018

ಕೇಂದ್ರ ಕೈಗಾರಿಕೆ ಮತ್ತು ರಸಗೊಬ್ಬರ ಸಚಿವರಾಗಿದ್ದ ಶ್ರೀ ಎಚ್. ಎನ್. ಅನಂತ್ ಕುಮಾರ್ ಅವರಿಗೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಮೌನ ಪ್ರಾರ್ಥನೆ ಮಾಡುವ ಮೂಲಕ ಸಂತಾಪ ಸೂಚಿಸಲಾಯಿತು. ಶಾಲಾ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಗೋಪಾಲಕೃಷ್ಣ ಹೇರಳೆ ಮೃತರಿಗೆ ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಚ್ಯುತ್ ನಾಯಕ್, ಮುಖ್ಯಗುರುಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

’ಕಲಾಶ್ರೀ’ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

’ಕಲಾಶ್ರೀ’ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

Monday, November 5th, 2018

ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಇವರುರಾಮಕೃಷ್ಣ ಸೇವಾ ಆಶ್ರಮ, ನೆಲ್ಲಿಕಟ್ಟೆ ಪುತ್ತೂರು ಇಲ್ಲಿ ನಡೆಸಿದ ತಾಲೂಕು ಮಟ್ಟದ ’ಕಲಾಶ್ರೀ’ ಆಯ್ಕೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಜನನಿ (ಸೃಜನಾತ್ಮಕ ಕಲೆ – ಪ್ರಥಮ), ಮುಖೇಶ್ ಕೃಷ್ಣ (ಸೃಜನಾತ್ಮಕ ಕಲೆ- ದ್ವಿತೀಯ), ಸಂಜನಾ (ಸೃಜನಾತ್ಮಕ ಬರವಣಿಗೆ- ಪ್ರಥಮ), ಹೇಮಶ್ರೀ (ಸೃಜನಾತ್ಮಕ ಬರವಣಿಗೆ- ದ್ವಿತೀಯ), ಪ್ರತೀಕ ಗಣಪತಿ (ವಿಜ್ಞಾನ ವಸ್ತು ಪ್ರದರ್ಶನ – ಪ್ರಥಮ), ಸ್ಕಂದಕುಮಾರ (ಸೃಜನಾತ್ಮಕ ಪ್ರದರ್ಶನ ಕಲೆ – ದ್ವಿತೀಯ) ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ […]

ಶಾಂತಿವನ ಟ್ರಸ್ಟ್ ಪುಸ್ತಕಾಧಾರಿತ ಸ್ಪರ್ಧೆ : ಶಾಲೆಗೆ ಹಲವು ಪ್ರಶಸ್ತಿ

ಶಾಂತಿವನ ಟ್ರಸ್ಟ್ ಪುಸ್ತಕಾಧಾರಿತ ಸ್ಪರ್ಧೆ : ಶಾಲೆಗೆ ಹಲವು ಪ್ರಶಸ್ತಿ

Monday, November 5th, 2018

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ (ರಿ) ಶ್ರೀ ಕ್ಷೇತ್ರ ಧರ್ಮಸ್ಥಳ, ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆಯವರು ನಡೆಸಿದ ತಾಲೂಕು ಮಟ್ಟದ ’ಜ್ಞಾನ ಗಂಗೆ’ ಎಂಬ ನೈತಿಕ ಮೌಲ್ಯಾಧಾರಿತ ಪುಸ್ತಕದ ಅಧ್ಯಯನದ ಆಧಾರದ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಗಮ್ಯ (ಶ್ರೀ ಗಣೇಶ್ ಆಚಾರ್ಯ ಮತ್ತು ಮಂಜುಳಾ ಗಣೇಶ್‌ರವರ ಪುತ್ರಿ) – ಪ್ರಾಥಮಿಕ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ-ಪ್ರಥಮ ಹಾಗೂ ಉದಯವಾಣಿ ಚಿಣ್ಣರ ಬಣ್ಣ […]

Highslide for Wordpress Plugin