ಹೃದಯ ವೈಶಾಲ್ಯತೆ ಮೆರೆದ ’ಪಲ್ಲವಿ’

ಹೃದಯ ವೈಶಾಲ್ಯತೆ ಮೆರೆದ ’ಪಲ್ಲವಿ’

Monday, September 3rd, 2018

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 5 ನೇ ತರಗತಿಯ ವಿದ್ಯಾರ್ಥಿನಿ ಕು. ಪಲ್ಲವಿ ಕೊಡಗು ಜಿಲ್ಲೆಯ ಸಂತ್ರಸ್ತರ ನೋವಿಗೆ ಸ್ಪಂದಿಸುವ ಮೂಲಕ ಈಗ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ತನ್ನ ತಾತ, ಅಜ್ಜಿ, ಅತ್ತೆ, ಮಾವ ಹಿರಿಯರೆಲ್ಲ ನೀಡಿದ್ದ ಸುಮಾರು 1,102 ರೂ. ಹಣ (ಪಾಕೆಟ್ ಮನಿ)ವನ್ನು ಕೂಡಿಟ್ಟಿದ್ದ ಪಲ್ಲವಿ ಆ ಎಲ್ಲಾ ಹಣವನ್ನು ದೇಣಿಗೆಯಾಗಿ ನೀಡಿದ್ದಾಳೆ. ಶಾಲೆಯಲ್ಲಿ ಶಿಕ್ಷಕರ ಮೂಲಕ ಕೊಡಗಿನ ಪ್ರಾಕೃತಿಕ ವಿಕೋಪಗಳ ಬಗ್ಗೆ ತಿಳಿದುಕೊಂಡಿದ್ದ ಪುಟಾಣಿಗೆ ಅವರ ಕಷ್ಟ, ನೋವುಗಳು ಮನ ಕಲುಕಿದ್ದು ತಾನು […]

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ -ಚಿತ್ರಕಲೆಯಲ್ಲಿ - ಪ್ರಥಮ

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ -ಚಿತ್ರಕಲೆಯಲ್ಲಿ – ಪ್ರಥಮ

Thursday, August 30th, 2018

ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ಸಹಯೋಗದಲ್ಲಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ, ಹಾರಾಡಿ ಇಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಗಮ್ಯ -ಹಿರಿಯ ಪ್ರಾಥಮಿಕ ವಿಭಾಗದ ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಹ್ಯಾಕಾಶ ಕ್ಷೇತ್ರಕ್ಕೆ ಭಾರತೀಯ ವಿಜ್ಞಾನಿಗಳ ಕೊಡುಗೆ ಅಮೂಲ್ಯ - ’ವಿಜ್ಞಾನಿ’ ಶಂಕರ ಭಟ್

ಬಾಹ್ಯಾಕಾಶ ಕ್ಷೇತ್ರಕ್ಕೆ ಭಾರತೀಯ ವಿಜ್ಞಾನಿಗಳ ಕೊಡುಗೆ ಅಮೂಲ್ಯ – ’ವಿಜ್ಞಾನಿ’ ಶಂಕರ ಭಟ್

Monday, August 27th, 2018

ಭಾರತೀಯರ ವೈಜ್ಞಾನಿಕ ಪರಂಪರೆ ಪುರಾತನ ಹಾಗೂ ಶ್ರೇಷ್ಠವಾದುದು. ವಿಜ್ಞಾನಕ್ಷೇತ್ರದಲ್ಲಿ ಭಾರತೀಯರ ಗಣನೀಯ ಕೊಡುಗೆ ನಮಗೆಲ್ಲರಿಗೂ ಸ್ಫೂರ್ತಿದಾಯಕ ಎಂದು ಐ.ಆರ್.ಎಸ್ ಸರಣಿ ಉಪಗ್ರಹ – 1ಸಿ ಯಲ್ಲಿ ಪ್ರೋಜೆಕ್ಟ್ ಮ್ಯಾನೇಜರ್ ಆಗಿ ನಿವೃತ್ತರಾಗಿರುವ ಶ್ರೀಯುತ ಶಂಕರ ಭಟ್‌ ಇವರು ನುಡಿದರು. ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಟಲ್‌ಟಿಂಕರಿಂಗ್ ಪ್ರಯೋಗಾಲಯ ’ಸೃಜನ’ವನ್ನು ದೀಪ ಪ್ರಜ್ವಲಿಸಿ ಭಾರತ ಮಾತೆಗೆ ಪುಷ್ಪಾರ್ಚನೆಗೈದು ಉದ್ಘಾಟಿಸಿ ’ಬಾಹ್ಯಾಕಾಶ ಒಂದು ವಿಸ್ಮಯ’ವಿದ್ಯಾರ್ಥಿ-ವಿಜ್ಞಾನ ಸಂವಾದ ನಡೆಸಿಕೊಟ್ಟರು. ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಪ್ರಭಾಕರ ಭಟ್‌ ಕಲ್ಲಡ್ಕ ಇವರು […]

ಪ್ರತಿಭಾ ಕಾರಂಜಿ - ಯಕ್ಷಗಾನ ವೈಯಕ್ತಿಕದಲ್ಲಿ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ

ಪ್ರತಿಭಾ ಕಾರಂಜಿ – ಯಕ್ಷಗಾನ ವೈಯಕ್ತಿಕದಲ್ಲಿ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ

Monday, August 27th, 2018

ಸರಕಾರಿ ಉನ್ನತೀಕರಿಸಿದ ಹಿರಿಯಪ್ರಾಥಮಿಕ ಶಾಲೆ, ಹಾರಾಡಿ ಇಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಯಕ್ಷಗಾನ ವೈಯಕ್ತಿಕ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಯಕ್ಷಚಿಣ್ಣರು ಜಿಲ್ಲಾಮಟ್ಟಕ್ಕೆ ಆಯ್ಜೆಯಾಗಿದ್ದಾರೆ. ಕಿರಿಯ ವಿಭಾಗದಲ್ಲಿ ಧನುಷ್(3ನೇ ತರಗತಿ), ಹಿರಿಯ ವಿಭಾಗದಲ್ಲಿ ಪರೀಕ್ಷಿತ್ (7ನೇ ತರಗತಿ) ಮತ್ತು ಪ್ರೌಢ ವಿಭಾಗದಲ್ಲಿ ಕು.ಶ್ರೇಯಾ ಪ್ರಥಮ ಸ್ಥಾನ ಪಡೆದು ಸುರತ್ಕಲ್‌ನಲ್ಲಿ ನಡೆಯುವ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದು, ಇವರೆಲ್ಲರೂ ನಾಟ್ಯಗುರುಗಳಾದ ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಇವರಿಂದ ತರಬೇತಿ ಪಡೆಯುತ್ತಿದ್ದು, ಭಾಗವತಿಕೆಯಲ್ಲಿ ಶ್ರೀ […]

ಆಮಂತ್ರಣ : ‘ಸೃಜನ’ ಆಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ

ಆಮಂತ್ರಣ : ‘ಸೃಜನ’ ಆಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನೆ

Monday, August 20th, 2018
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪೇಯಿ ಅವರಿಗೆ ಶ್ರದ್ಧಾಂಜಲಿ ಸಭೆ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪೇಯಿ ಅವರಿಗೆ ಶ್ರದ್ಧಾಂಜಲಿ ಸಭೆ

Saturday, August 18th, 2018

ಇತ್ತೀಚೆಗೆ ನಿಧನರಾದ ರಾಷ್ಟ್ರ ಕಂಡ ಅಪ್ರತಿಮ ನಾಯಕ, ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಿಪೇಯಿ ಅವರಿಗೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಾಲಾ ಅಧ್ಯಕ್ಷರಾದ ಅಚ್ಯುತ್ ನಾಯಕ್ ಹಾಡಿನ ಮೂಲಕ ಶ್ರೀಯುತರಿಗೆ ನಮನ ಸಲ್ಲಿಸಿ, ಬಳಿಕ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಗಣಪತಿ ಭಟ್ ಅವರು ವಾಜಿಪೇಯಿಯವರ ಬಾಲ್ಯ, ಜೀವನ ಮತ್ತು ಅವರ ರಾಜಕೀಯ ಜೀವನದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರು, ಮುಖ್ಯಗುರುಗಳು, ಶಿಕ್ಷಕ ವೃಂದ ಮತ್ತು […]

ತಾಯಿತಂದೆಯರನ್ನು ಗೌರವಿಸಿ, ತಾಯ್ನಾಡನ್ನು ಪ್ರೀತಿಸಿ : ರಾಧಾಕೃಷ್ಣ ರೈ

ತಾಯಿತಂದೆಯರನ್ನು ಗೌರವಿಸಿ, ತಾಯ್ನಾಡನ್ನು ಪ್ರೀತಿಸಿ : ರಾಧಾಕೃಷ್ಣ ರೈ

Thursday, August 16th, 2018

’ಮಕ್ಕಳು ಹೆತ್ತ ತಾಯ್ತತಂದೆಯರನ್ನು ಪ್ರೀತಿ ಗೌರವದಿಂದ ಕಂಡಾಗ ಮುಂದೆ ಅವರಿಗೆ ತಮ್ಮ ಸುತ್ತಲಿನ ಪರಿಸರ, ಸಮಾಜ, ದೇಶ ಎಲ್ಲವನ್ನೂ ಪ್ರೀತಿಸುವ ಗೌರವಿಸುವ, ಅಭಿಮಾನ ಬೆಳೆಸಿಕೊಳ್ಳುವ ಅಭ್ಯಾಸ ತಾನೇ ತಾನಾಗಿ ರೂಢಿಯಾಗುತ್ತದೆ. ಜೈ ಜವಾನ್ ಜೈ ಕಿಸಾನ್‌ನೊಂದಿಗೆ ಜೈ ವಿಜ್ಞಾನ್ ಎಂಬ ಘೋಷವಾಕ್ಯದಂತೆ ನಡೆದು ದೇಶವನ್ನು ಪ್ರಗತಿಯ ಪಥದತ್ತ ಕೊಂಡೊಯ್ಯಬೇಕು’ ಎಂದು ಭಾರತೀಯ ಭೂಸೇನಾ ಮಾಜಿ ಸೈನಿಕರಾದ ರಾಧಾಕೃಷ್ಣ ರೈಯವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಜರುಗಿದ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣಗೈದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮೆಕಾಲೆ ಶಿಕ್ಷಣ […]

ದಕ್ಷಿಣ ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆ

ದಕ್ಷಿಣ ಕ್ಷೇತ್ರೀಯ ಮಟ್ಟಕ್ಕೆ ಆಯ್ಕೆ

Thursday, August 9th, 2018

ದಿನಾಂಕ 11-8-2018 ರಿಂದ 16-8-2018 ರವರೆಗೆ ತೆಲಂಗಾಣದಲ್ಲಿ ನಡೆಯಲಿರುವ ದಕ್ಷಿಣ ಕ್ಷೇತ್ರೀಯ ಮಟ್ಟದ ಕಬಡ್ಡಿ ಹಾಗೂ ಖೋ-ಖೋ ಸ್ಪರ್ಧೆಗಳಿಗೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 14 ರ ವಯೋಮಾನದ ಬಾಲಕಿಯರ ಕಬಡ್ಡಿ ತಂಡ, 17 ರ ವಯೋಮಾನದ ಬಾಲಕಿಯರ ಕಬಡ್ಡಿ, 17 ರ ವಯೋಮಾನದ ಬಾಲಕಿಯರ ಖೋ ಖೋ ಹಾಗೂ 17 ರ ವಯೋಮಾನದ ಬಾಲಕರ ಖೋ ಖೋ ತಂಡಗಳು ಆಯ್ಕೆಯಾಗಿರುತ್ತವೆ.

ಶಾಲಾ ಶಿಕ್ಷಕ -ರಕ್ಷಕ ಸಂಘಕ್ಕೆ ಆಯ್ಕೆ

ಶಾಲಾ ಶಿಕ್ಷಕ -ರಕ್ಷಕ ಸಂಘಕ್ಕೆ ಆಯ್ಕೆ

Tuesday, August 7th, 2018

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ 2018-19 ನೇ ಸಾಲಿನ ಶಿಕ್ಷಕ -ರಕ್ಷಕ ಸಂಘದ ಪದಗ್ರಹಣ ಸಮಾರಂಭ ನಡೆಯಿತು. ಪ್ರಸಕ್ತ ವರ್ಷದ ಅಧ್ಯಕ್ಷರಾಗಿ ಶ್ರೀ ಹರಿಕೃಷ್ಣ, ಉಪಾಧ್ಯಕ್ಷರಾಗಿ ಶ್ರೀಮತಿ ಮಂಜುಳಾ, ಕಾರ್ಯದರ್ಶಿಯಾಗಿ ಶ್ರೀ ಶಂಕರ ಭಟ್, ಉಪಕಾರ್ಯದರ್ಶಿಯಾಗಿ ಶ್ರೀ ಸತೀಶ್‌ರವರು ಆಯ್ಕೆಗೊಂಡರು. ಸಮಾರಂಭದಲ್ಲಿ ಅಧ್ಯಕ್ಷರಾಗಿ ಉಪಸ್ಥಿತರಿದ್ದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಅಚ್ಚುತ ನಾಯಕ್ ಮಾತನಾಡಿ ’ಪೋಷಕರು ಶಾಲೆಯ ಆಸ್ತಿ. ಪೋಷಕರ ಬಲದಿಂದಲೇ ಈ ಸಂಸ್ಥೆ ಇಷ್ಟಕ್ಕೆ ಬೆಳೆಯಲು ಸಾಧ್ಯವಾಯಿತು’ ಎಂದರು. ಸಮಾರಂಭದ ವೇದಿಕೆಯಲ್ಲಿ […]

ಗುರುಪೂರ್ಣಿಮೆ

ಗುರುಪೂರ್ಣಿಮೆ

Saturday, July 28th, 2018

ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಗುರುಪೂರ್ಣಿಮೆ ಕಾರ್ಯಕ್ರಮ ನಡೆಯಿತು. ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಮಾತಾಜಿ ಇವರು ಗುರು- ಶಿಷ್ಯರ ನಡುವಿನ ಸಂಬಂಧವನ್ನು ಧೌಮ್ಯ ಮಹರ್ಷಿ ಮತ್ತು ಉಪಮನ್ಯುವಿನ ಕಥೆಯನ್ನು ಹೇಳುವ ಮೂಲಕ ಗುರುಪೂರ್ಣಿಮೆಯ ಮಹತ್ವವನ್ನು ತಿಳಿಸಿದರು. ಮಕ್ಕಳು ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರತತ್ಪದಂ ದರ್ಶಿತಂ ಏನ ತಸ್ಮೈಶ್ರೀ ಗುರವೇ ನಮಃ ಎಂಬ ಸುಭಾಷಿತದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ದುರ್ಗಾದೇವಿ ಉಪಸ್ಥಿತರಿದ್ದರು. […]

ನಿವೃತ್ತ ಶಿಕ್ಷಕರಾದ ನಾರಾಯಣ ಮಜಿ ಇವರ ಸ್ವಗೃಹದಲ್ಲಿ ಗುರುವಂದನೆ

ನಿವೃತ್ತ ಶಿಕ್ಷಕರಾದ ನಾರಾಯಣ ಮಜಿ ಇವರ ಸ್ವಗೃಹದಲ್ಲಿ ಗುರುವಂದನೆ

Friday, July 27th, 2018

ಕಲಿಕೆ ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗಿರಬಾರದು. ಪರೀಕ್ಷೆ ಮತ್ತು ಅಂಕಗಳೇ ಅಂತಿಮವಲ್ಲ. ನಮ್ಮನ್ನು ಜ್ಞಾನಾತ್ಮಕವಾಗಿ ಬೆಳೆಸುವ ಗುಣ ನಿರ್ಮಾಣ ಮಾಡುವ ಕುಟುಂಬ ಪ್ರೇಮ, ದೇಶಪ್ರೇಮ ಬೆಳೆಸುವ ಅನುಭವಗಳಿಗೆ ಪ್ರಾಧ್ಯಾನತೆ ನೀಡಬೇಕು. ನಿಮ್ಮ ಬದುಕಿನಲ್ಲಿ ಹಿರಿಯರನ್ನು ಪ್ರೀತಿಸುವ ಮತ್ತು ಗೌರವಿಸುವ ಗುಣ ಬೆಳೆಯಬೇಕು. ತಂದೆ- ತಾಯಿಯರನ್ನು ಗೌರವದಿಂದ ಕಾಣಿ ಎಂದು ವಿವೇಕಾನಂದ ಕನ್ನಡ ಶಾಲೆಯಲ್ಲಿ ಹತ್ತನೇ ತರಗತಿಯ ಮಕ್ಕಳೊಂದಿಗೆ ತಮ್ಮ ಸ್ವ-ಗೃಹದಲ್ಲಿ ಅನುಭವ ಹಂಚಿಕೊಂಡವರು ನಿವೃತ್ತ ಶಿಕ್ಷಕರಾದ ಮಜಿ ನಾರಾಯಣ ಭಟ್ ಹಾಗೂ ಸರಸ್ವತಿ ದಂಪತಿಗಳು. ಗುರುಪೂರ್ಣಿಮೆಯ ಪ್ರಯುಕ್ತ ವಿವೇಕಾನಂದ […]

ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಸಂಘದಿಂದ ಅಭಿನಂದನೆ

ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಸಂಘದಿಂದ ಅಭಿನಂದನೆ

Friday, July 27th, 2018

ದಕ್ಷಿಣ ಕನ್ನಡ ಚಿತ್ರಕಲಾ ಶಿಕ್ಷಕರ ಸಂಘದಿಂದ 2017-18 ನೇ ಸಾಲಿನಲ್ಲಿ ಡ್ರಾಯಿಂಗ್ ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ಗೌತಮ್‌ ಎಸ್‌. ಪುತ್ತೂರು ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಇವನನ್ನು ಮಂಗಳೂರು ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದಿಂದ ಅಭಿನಂದಿಸಲಾಯಿತು.

ದೇವರ ಸ್ಥಾನದಲ್ಲಿರುವ ಇನ್ನೋರ್ವ ದೇವರೆಂದರೆ ಸೈನಿಕ - ಆದರ್ಶ ಗೋಖಲೆ

ದೇವರ ಸ್ಥಾನದಲ್ಲಿರುವ ಇನ್ನೋರ್ವ ದೇವರೆಂದರೆ ಸೈನಿಕ – ಆದರ್ಶ ಗೋಖಲೆ

Friday, July 27th, 2018

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಇಂದು ನಾವು ಸುಖಕರ ಜೀವನ ಸಾಗಿಸುತ್ತಿದ್ದರೆ ಅದಕ್ಕೆ ಪ್ರಮುಖ ಕಾರಣ ಹಗಲು -ರಾತ್ರಿ ಎನ್ನದೆ ಕೆಚ್ಚೆದೆಯಿಂದ ದೇಶ ಕಾಯುತ್ತಿರುವ ಸೈನಿಕರಾಗಿದ್ದಾರೆ. ನಮ್ಮ ದಿನನಿತ್ಯದ ಪ್ರಾರ್ಥನೆಯು ಸೈನಿಕರ ಆರೋಗ್ಯ, ಆಯುಷ್ಯಾಭಿವೃದ್ಧಿಗಾಗಿರಬೇಕು. ಸೈನಿಕರನ್ನು ಎಲ್ಲಿ ಕಂಡರೂ ಒಂದು ಗೌರವದ ನಮನ ನಮ್ಮ ಕಡೆಯಿಂದಿರಬೇಕು ಎನ್ನುತ್ತಾ ಕಾರ್ಗಿಲ್‌ ಕದನದಲ್ಲಿ ವಿಜಯ ಸಾಧಿಸಿದ ಸೈನಿಕರ ಯಶೋಗಾಥೆಯನ್ನು ಮುಂದಿಡುತ್ತಾ ದೇಹತ್ಯಾಗ ಮಾಡಿದ ಹುತಾತ್ಮರನ್ನು ಸ್ಮರಿಸಿಕೊಂಡವರು ಆದರ್ಶ ಗೋಖಲೆಯವರು ವಿವೇಕಾನಂದ ಕನ್ನಡ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ […]

ಯೋಗಾಸನ ಸ್ಪರ್ಧೆ - ರಾಜ್ಯಮಟ್ಟಕ್ಕೆ ಆಯ್ಕೆ

ಯೋಗಾಸನ ಸ್ಪರ್ಧೆ – ರಾಜ್ಯಮಟ್ಟಕ್ಕೆ ಆಯ್ಕೆ

Tuesday, July 24th, 2018

ವಿದ್ಯಾಭಾರತಿ ಕರ್ನಾಟಕ ದಕ್ಷಿಣಕನ್ನಡ ಜಿಲ್ಲೆ ಮತ್ತು ಶ್ರೀ ಷಣ್ಮುಕದೇವ ಪ್ರೌಢ ಶಾಲೆ ಪೆರ್ಲಂಪಾಡಿ ಇದರ ಸಹಯೋಗದಲ್ಲಿ ಪೆರ್ಲಂಪಾಡಿಯಲ್ಲಿ ನಡೆದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಾಲವರ್ಗದ ಬಾಲಕಿಯರಾದ ಸುಚಿತ, ಸೌಜನ್ಯ, ಕೀರ್ತನ, ದಿವ್ಯಶ್ರೀ, ರಶ್ಮಿ ಮತ್ತು ಕಿಶೋರವರ್ಗದ ಬಾಲಕರಾದ ಪುನೀತ್, ಕೌಶಿಕ್, ಭವಿಷ್, ರಾಜೇಶ್, ರಿತೇಶ್ ಹಾಗೂ ರಿದಮಿಕ್ ಯೋಗದಲ್ಲಿ ಲಿಖಿಲ್ ಮತ್ತು ಅತ್ಲೆಟಿಕ್ ಯೋಗದಲ್ಲಿ ರಕ್ಷಿತ್ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಶಿಷ್ಟಾಚಾರ ಮತ್ತು ಸಂಸ್ಕೃತಿ ಬದುಕಿಗೆ ಪೂರಕ-ಕೃಷ್ಣಮೋಹನ್

ಶಿಷ್ಟಾಚಾರ ಮತ್ತು ಸಂಸ್ಕೃತಿ ಬದುಕಿಗೆ ಪೂರಕ-ಕೃಷ್ಣಮೋಹನ್

Tuesday, July 24th, 2018

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 8 ಮತ್ತು 9 ನೇ ತರಗತಿಯ ಪೋಷಕರ ಸಭೆಯಲ್ಲಿ ಜೆ.ಸಿ.ಐ ರಾಷ್ಟ್ರೀಯ ತರಬೇತುದಾರರಾದ ಶ್ರೀಯುತ ಕೃಷ್ಣಮೋಹನ್ ಅತಿಥಿಗಳಾಗಿ ಆಗಮಿಸಿ, ಮೌಲ್ಯಯುತ ಶಿಕ್ಷಣದ ಜೊತೆಗೆ ಮಗುವಿನ ಆಸಕ್ತಿಗೆ ಪೂರಕವಾದ ಚಟುವಟಿಕೆಗಳನ್ನು ಪೋಷಿಸಿದರೆ ಆ ಮಗು ಅಭಿಮಾನ, ಸನ್ಮಾನಗಳಿಗೆ ಪಾತ್ರವಾಗುತ್ತದೆ ಎಂದು ಪೋಷಕರನ್ನು ಉದ್ದೇಶಿಸಿ ಮಾತನಾಡಿದರು. ಉತ್ತಮ ಆಹಾರ ಸೇವನೆಯಿಂದ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿಯೂ ಆರೋಗ್ಯವಂತರಾಗಿರುತ್ತಾರೆ. ಆಗ ಸಹಜವಾಗಿ ಮಗು ಪರಿಸ್ಥಿತಿಗೆ ತಕ್ಕ ಹಾಗೆ ಯೋಚನೆ ಮಾಡಿ ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳಲು ಸಹಾಯವಾಗುತ್ತದೆ. ಕೃಷಿ, […]

’ತಾಯಿ’ ಭಾರತೀಯ ಸಂಸ್ಕೃತಿಯ ಕೇಂದ್ರ - ಡಾ.ಪ್ರಭಾಕರ ಭಟ್ ಕಲ್ಲಡ್ಕ

’ತಾಯಿ’ ಭಾರತೀಯ ಸಂಸ್ಕೃತಿಯ ಕೇಂದ್ರ – ಡಾ.ಪ್ರಭಾಕರ ಭಟ್ ಕಲ್ಲಡ್ಕ

Saturday, July 21st, 2018

ಪ್ರಕೃತಿಯಲ್ಲಿ ಕಾಣುವ ನದಿ, ಗೋವು ಅಂತೆಯೇ ಹುಟ್ಟಿದ ನಾಡು ಎಲ್ಲವೂ ನಮಗೆ ಮಾತೃಸ್ವರೂಪಿ. ಈ ಮಾತೆಯರಲ್ಲಿ ಎಲ್ಲವನ್ನೂ ಧಾರಣೆಮಾಡುವ ಅಭೂತಪೂರ್ವವಾದ ಸಾಮರ್ಥ್ಯವಿದೆ. ತಾಯಂದಿರು ಕೇವಲ ತಮ್ಮ ಸಂಸಾರಕ್ಕೆ ಮಾತ್ರ ಸೀಮಿತವಾಗಿರಲಿ ತಮ್ಮ ಸುತ್ತಲಿನ ಪರಿಸರದಲ್ಲಿರುವ ಶಾಲೆ, ಸಂಘ ಸಂಸ್ಥೆಗಳ ಆಶೋತ್ತರಗಳಿಗೆ, ಅವಶ್ಯಕತೆಗಳಿಗೆ ತ್ರಿಕರಣಪೂರ್ವಕವಾಗಿ ಸ್ಪಂದಿಸುವುದರ ಮೂಲಕ ಈ ನೆಲದ ಭಾಷೆ, ಧರ್ಮ, ಸಂಸ್ಕೃತಿ ಜೀವನ ಮೌಲ್ಯಗಳ ಸೇವೆಗೆ ಮುಂದಾಗಬೇಕು ಎಂದು ಅಧ್ಯಕ್ಷೀಯ ಸ್ಥಾನದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ದಕ್ಷಿಣ ಮಧ್ಯಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯರೂ, ವಿವೇಕಾನಂದ ವಿದ್ಯಾವರ್ಧಕ ಸಂಘದ […]

ಸಾಂಸ್ಕೃತಿಕ ಸಮನ್ವಯ

ಸಾಂಸ್ಕೃತಿಕ ಸಮನ್ವಯ

Friday, July 20th, 2018

’ಸಾಂಸ್ಕೃತಿಕ ವೈವಿಧ್ಯತೆಯ ಅರಿವಿಗೊಂದು ವೇದಿಕೆ’- ಎಂಬ ಪರಿಕಲ್ಪನೆಯೊಂದಿಗೆ ಭರತನಾಟ್ಯ, ಸಂಗೀತ, ಯಕ್ಷಗಾನ, ನಾಟಕ, ಹರಿಕಥೆ ಮುಂತಾದ ಸಾಂಸ್ಕೃತಿಕ ವೈವಿಧ್ಯತೆಯ ಅರಿವನ್ನು ಮಕ್ಕಳಿಗೆ ತೆರೆದಿಡುವ ಸಲುವಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯು ’ಸಾಂಸ್ಕೃತಿಕ ಸಮನ್ವಯ’ ಎಂಬ ಕಾರ್ಯಕ್ರಮವನ್ನು ಸಂಘಟಿಸುವ ಪ್ರಯತ್ನಕ್ಕೆ ಮುಂದಾಗಿದೆ. ಓದಿನೊಂದಿಗೆ ಕಲೆಯ ತಿಳಿವಿನ ಅರಿವು ಕೂಡಾ ಮುಖ್ಯ ಎಂಬುದೇ ಕಲಾಸಕ್ತ ಆಡಳಿತ ಮಂಡಳಿ ಮತ್ತು ಶಿಕ್ಷಕರ ಅಭಿಪ್ರಾಯ. ಈ ನಿಟ್ಟಿನಲ್ಲಿ ವಾರ್ಷಿಕ ಯೋಜನೆಗಳನ್ನು ಹಮ್ಮಿಕೊಂಡು ಸಾಂಸ್ಕೃತಿಕ ಪ್ರಕಾರಗಳನ್ನು ಪ್ರಚುರಪಡಿಸುವ ಕಾರ್ಯದಲ್ಲಿ ತೊಡಗಿರುವ ಸಂಸ್ಥೆಯು ’ಶಿಕ್ಷಣದ ಜೊತೆಗೆ […]

ಶ್ರದ್ದಾಂಜಲಿ ಸಭೆ

ಶ್ರದ್ದಾಂಜಲಿ ಸಭೆ

Wednesday, July 18th, 2018

ಪುತ್ತೂರಿನ ಚಿನ್ನದ ಉದ್ಯಮಿ, ಹಿರಿಯ ಚೇತನ ಸ್ನೇಹಜೀವಿಯಾಗಿದ್ದ ಶ್ರೀ ಜಿ.ಎಲ್ ಆಚಾರ್ಯ ಇವರು ಸ್ವರ್ಗಸ್ಥರಾದ ಸಂದರ್ಭ ವಿವೇಕಾನಂದ ಕನ್ನಡ ಶಾಲೆಯಲ್ಲಿ ಆಡಳಿತ ಮಂಡಳಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಶ್ರೀಯುತರ ಆತ್ಮಕ್ಕೆ ಶಾಂತಿಕೋರಿ ಶ್ರದ್ದಾಂಜಲಿ ಸಭೆ ನಡೆಯಿತು. ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಮತ್ತು ವಿದ್ಯಾರ್ಥಿ ನಾಯಕರು ಶ್ರೀಯುತರ ಭಾವಚಿತ್ರಕ್ಕೆ ಪುಷ್ಫಾಂಜಲಿ ಅರ್ಪಿಸಿದರು. ಆಡಳಿತ ಮಂಡಳಿ ಆಧ್ಯಕ್ಷರಾದ ಶ್ರೀಯುತ ಅಚ್ಯುತ ನಾಯಕ್ ಇವರು ಶ್ರೀ ಜಿ.ಎಲ್ ಆಚಾರ್ಯರ ಸುಮಾರು 20 ವರ್ಷಗಳ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಶಿಕ್ಷಣ […]

ವಿಶೇಷ ಚಿತ್ರಕಲಾ ತರಗತಿಗೆ ಚಾಲನೆ

ವಿಶೇಷ ಚಿತ್ರಕಲಾ ತರಗತಿಗೆ ಚಾಲನೆ

Saturday, July 14th, 2018

ದಿನಾಂಕ 14-7-2018 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕನಗರ, ತೆಂಕಿಲ ಪುತ್ತೂರು ಇಲ್ಲಿ ಶೈಕ್ಷಣಿಕ ವರ್ಷದಿಂದ ವಿಶೇಷ ಚಿತ್ರಕಲಾ ತರಗತಿ ವಿದ್ಯುಕ್ತವಾಗಿ ಚಾಲನೆಗೊಂಡಿತು. ಮಾಜಿ ಸೈನಿಕ ಹಾಗೂ ಎಸ್.ಬಿ.ಐ. ಉದ್ಯೋಗಿ ಶ್ರೀ ರಾಮಕೃಷ್ಣ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯರು ಸತೀಶ್ ಕುಮಾರ್ ರೈ ಪ್ರಾಸ್ತಾವಿಕ ನುಡಿಗಳೊಂದಿಗೆ ಶುಭ ಕೋರಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ವೆಂಕಟೇಶ್ವರ ಅಮೈ ರವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಕ್ಕಳಿಗೆ […]

ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿ ಮಾಡುವ ಕಾರ್ಯ ಶಿಕ್ಷಕ ಹಾಗೂ ಪೋಷಕರದ್ದಾಗಿದೆ - ಶ್ರೀ ಬಾಲಕೃಷ್ಣ ಪೊರ್ದಾಲ್

ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿ ಮಾಡುವ ಕಾರ್ಯ ಶಿಕ್ಷಕ ಹಾಗೂ ಪೋಷಕರದ್ದಾಗಿದೆ – ಶ್ರೀ ಬಾಲಕೃಷ್ಣ ಪೊರ್ದಾಲ್

Saturday, July 7th, 2018

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರಸಕ್ತ ಸಾಲಿನ 4 ಮತ್ತು 5 ನೇ ತರಗತಿಯ ಪೋಷಕರ ಸಭೆಯು ದಿನಾಂಕ 4-7-2018 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಲಿಟ್ಲ್ ಫ್ಲವರ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ಬಾಲಕೃಷ್ಣ ಪೊರ್ದಾಲ್‌ರು ಮಾತನಾಡಿ ’ಮಕ್ಕಳ ಮನಸ್ಸು, ಸಾಮರ್ಥ್ಯವನ್ನು ಅರಿತು ಮಕ್ಕಳಿಗೆ ಜ್ಞಾನ ನೈಪುಣ್ಯತೆಯನ್ನು ಕಲಿಸುವುದರ ಜೊತೆಗೆ ಬದುಕಿನ ಶಿಕ್ಷಣವನ್ನು ನೀಡಬೇಕಾದ ಅನಿವಾರ್ಯತೆ ಇದೆ. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರ ಜವಾಬ್ದಾರಿ ಮಾತ್ರವಿರದೆ ಹೆತ್ತವರ ಜವಾಬ್ದಾರಿಯು ಇದೆ. ಇದನ್ನು ಅರಿತು […]

ಅಂತರ್ ಪ್ರೌಢಶಾಲಾ - ಸಮೂಹ ದೇಶಭಕ್ತಿ ಗೀತೆಯಲ್ಲಿ - ಪ್ರಥಮ

ಅಂತರ್ ಪ್ರೌಢಶಾಲಾ – ಸಮೂಹ ದೇಶಭಕ್ತಿ ಗೀತೆಯಲ್ಲಿ – ಪ್ರಥಮ

Tuesday, July 3rd, 2018

ದಿ. ಬಾಲಕೃಷ್ಣ ರೈ ಮಧುವನ ಇವರ ಸ್ಮರಣಾರ್ಥ ಪ್ರತಿವರ್ಷ ನಡೆಯುವ ಅಂತರ್ ಪ್ರೌಢಶಾಲಾ ಸಾಂಸ್ಕೃತಿಕ ಸ್ಪರ್ಧೆಯ ಪ್ರಯುಕ್ತ ನಡೆಸಿದ ತಾಲೂಕು ಮಟ್ಟದ ಸಮೂಹ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕು.ಶ್ರೇಯಾ ಎ, ಕು.ಪ್ರಣಮ್ಯ, ಕು.ಕೌಸಲ್ಯ ಇವರ ತಂಡ ಪ್ರಥಮ ಸ್ಥಾನ ಪಡೆದಿದೆ.

ಶಿಕ್ಷಕನಲ್ಲಿ ಯೋಚನೆ, ಮಾತು, ಕೃತಿ ಒಂದೇ ಆಗಿರಬೇಕು - ಡಾ. ಪ್ರಭಾಕರ್ ಭಟ್‌ ಕಲ್ಲಡ್ಕ

ಶಿಕ್ಷಕನಲ್ಲಿ ಯೋಚನೆ, ಮಾತು, ಕೃತಿ ಒಂದೇ ಆಗಿರಬೇಕು – ಡಾ. ಪ್ರಭಾಕರ್ ಭಟ್‌ ಕಲ್ಲಡ್ಕ

Saturday, June 30th, 2018

ಜಿಲ್ಲಾ ಶೈಕ್ಷಣಿಕ ಸಹಮಿಲನ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಹಾಗೂ ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಇದರ ಸಹಯೋಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಶಿಕ್ಷಕರ ಶೈಕ್ಷಣಿಕ ಸಹಮಿಲನ ನಡೆಯಿತು. ಸುಮಾರು 600 ಶಿಕ್ಷಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ, ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯರೂ ಆದ ಡಾ| ಕಲ್ಲಡ್ಕ ಪ್ರಭಾಕರ ಭಟ್‌ ಇವರು ಉದ್ಫಾಟನಾ ಮಾತುಗಳನ್ನಾಡಿ, ‘ಮಕ್ಕಳ ಮನಸ್ಸನ್ನು ಅರಿತು ಅವರ ಧನಾತ್ಮಕ […]

ಹಿಮ್ಮೇಳ, ನಾಟ್ಯ ತರಗತಿ ಉದ್ಘಾಟನೆ

ಹಿಮ್ಮೇಳ, ನಾಟ್ಯ ತರಗತಿ ಉದ್ಘಾಟನೆ

Thursday, June 28th, 2018

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ದಿನಾಂಕ 23-6-2018 ರಿಂದ ಯಕ್ಷಗಾನದ ಹಿಮ್ಮೇಳ (ಭಾಗವತಿಕೆ, ಮದ್ದಳೆ) ಮತ್ತು ನಾಟ್ಯ ತರಗತಿಯ ಉದ್ಘಾಟನೆಯನ್ನು ಯುವ ಭಾಗವತರಾದ ಕು.ಕಾವ್ಯಶ್ರೀ ಅಜೇರುರವರು ಗುರುಗಳಾದ ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಯವರ ಉಪಸ್ಥಿತಿಯಲ್ಲಿ ನೆರವೇರಿಸಿದರು. ಬಳಿಕ ಮಕ್ಕಳಿಗೆ ಸ್ಫೂರ್ತಿದಾಯಕ ಮಾತುಗಳಿಂದ ಕಲಿಕೆಗೆ ಪ್ರೇರಣೆ ನೀಡಿದರು. ಗುರುಗಳಾದ ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ಕಲಿಕೆಗೆ ಪೂರಕವಾದ ಮಾಹಿತಿಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಉಮೇಶ್ ಮಿತ್ತಡ್ಕ ಇವರು ಮಾತನಾಡಿ ಕಲೆ ಜೀವನದ ಅವಿಭಾಜ್ಯ […]

ಯೋಗಾರೋಗ್ಯ ಶಿಬಿರ

ಯೋಗಾರೋಗ್ಯ ಶಿಬಿರ

Thursday, June 21st, 2018

ಮಾತೃಸಂಸ್ಥೆಯಾದ ವಿವೇಕಾನಂದ ವಿದ್ಯಾವರ್ಧಕ ಸಂಘದ ಗ್ರಾಮ ಗ್ರಾಮಗಳಲ್ಲಿ ’ಯೋಗ’ ಎಂಬ ಪರಿಕಲ್ಪನೆಯಡಿ ಶಾಲಾ ಯೋಗ ಶಿಕ್ಷಕರಿಗೆ ನೀಡಲಾದ ತರಬೇತಿಯನ್ನು ಶಾಲೆಗಳಲ್ಲಿ ನಡೆಸಿ ಮಕ್ಕಳು ಮತ್ತು ಶಿಕ್ಷಕರಿಂದ ಗ್ರಾಮಗಳಲ್ಲಿ ಯೋಗ ನಡೆಸುವುದೆಂದು ನಿರ್ಣಯಿಸಲಾದ ಹಿನ್ನೆಲೆಯಲ್ಲಿ ದಿನಾಂಕ 15-6-2018 ನೇ ಶುಕ್ರವಾರ ಸಂಜೆ 6.30 ಕ್ಕೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಯೋಗ ಶಿಬಿರ ಆರಂಭಗೊಂಡಿತು. ಸುಮಾರು 50 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಂಡರು. ದೇವರ ಭಜನೆಯೊಂದಿಗೆ ಆರಂಭಗೊಂಡ ಶಿಬಿರವು ಯೋಗ ಪ್ರವೇಶದೊಂದಿಗೆ ಮುಂದುವರಿಯಿತು. ದಿನಾಂಕ 16-6-2018 ನೇ ಶನಿವಾರ ಮುಂಜಾನೆ […]

ಯಕ್ಷಗಾನ ನಾಟ್ಯತರಗತಿ ಪ್ರಾರಂಭ

ಯಕ್ಷಗಾನ ನಾಟ್ಯತರಗತಿ ಪ್ರಾರಂಭ

Tuesday, June 19th, 2018

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 15-6-2018 ರಂದು 2018-19 ನೇ ಸಾಲಿನ ಯಕ್ಷಗಾನ ನಾಟ್ಯತರಬೇತಿ ತರಗತಿಯು ನಾಟ್ಯಗುರು ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಇವರ ನಿರ್ದೇಶನದಲ್ಲಿ ಪ್ರಾರಂಭವಾಯಿತು. ದಿನಾಂಕ 23-6-2018 ರಂದು ಯಕ್ಷಗಾನ ಹಿಮ್ಮೇಳ ತರಗತಿಗಳು (ಭಾಗವತಿಕೆ, ಮದ್ದಳೆ) ಶ್ರೀ ತಿರುಮಲೇಶ್ವರ ಶಾಸ್ತ್ರೀ ತೆಂಕಬೈಲು ಇವರ ನಿರ್ದೇಶನದಲ್ಲಿ ಪ್ರಾರಂಭವಾಗಲಿದೆ ಎಂದು ಯಕ್ಷ ಸಂಯೋಜಕ ಶ್ರೀ ಚಂದ್ರಶೇಖರ್ ಸುಳ್ಯಪದವು ತಿಳಿಸಿದರು.

ಶಾಲಾ ಚುನಾವಣೆ 2018

ಶಾಲಾ ಚುನಾವಣೆ 2018

Wednesday, June 6th, 2018

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಇಲ್ಲಿ 2018-19 ನೇ ಸಾಲಿನ ಶಾಲಾ ಚುನಾವಣೆಯು ಮುಖ್ಯಗುರುಗಳ ಸಮ್ಮುಖದಲ್ಲಿ ನಡೆಯಿತು. ಪ್ರೌಢಶಾಲಾ ವಿಭಾಗದ ನಾಯಕಿಯಾಗಿ ಕು. ಶೈಲಶ್ರೀ ಮತ್ತು ಉಪನಾಯಕನಾಗಿ ಅನಿಕೇತ್ ಬದನಾಜೆ ಆಯ್ಕೆಯಾದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕನಾಗಿ ಮಿಥುನ್ ವಿ.ಕೆ ಮತ್ತು ಉಪನಾಯಕನಾಗಿ ಪರೀಕ್ಷಿತ್‌ ಆಯ್ಕೆಯಾದರು. ಚುನಾವಣೆಯ ಉಸ್ತುವಾರಿಯನ್ನು ಶಿಕ್ಷಕರಾದ ಶ್ರೀಯುತ ಚಂದ್ರಶೇಖರ್ ಸುಳ್ಯಪದವು ವಹಿಸಿದರು. ಎಲ್ಲಾ ಶಿಕ್ಷಕರು ಸಹಕರಿಸಿದರು.

ಸ್ವಚ್ಛ ಸುಂದರ ಪರಿಸರದಿಂದ ಸ್ವಾಸ್ಥ್ಯ ಸಮಾಜದ ನಿರ್ಮಾಣ

ಸ್ವಚ್ಛ ಸುಂದರ ಪರಿಸರದಿಂದ ಸ್ವಾಸ್ಥ್ಯ ಸಮಾಜದ ನಿರ್ಮಾಣ

Tuesday, June 5th, 2018

’ಪ್ಲಾಸ್ಟಿಕ್ ಬೇಡ ಎನ್ನೋಣ’ ಎಂಬ ಈ ವರ್ಷದ ವಿಶ್ವ ಪರಿಸರ ದಿನದ ಘೋಷವಾಕ್ಯದಂತೆ ಪ್ಲಾಸ್ಟಿಕ್ ಬಳಕೆಯನ್ನು ಮಿತಗೊಳಿಸಿ, ಪುನರ್ ಬಳಕೆ ಮಾಡುವತ್ತ ಗಮನಹರಿಸಬೇಕು ಸ್ವಚ್ಛ ಸುಂದರ ಪರಿಸರದ ನಿರ್ಮಾಣ ಕಾರ್ಯದಲ್ಲಿ ಎಲ್ಲರೂ ಧೃಢ ಮನಸ್ಸಿನಿಂದ ಕೈಜೋಡಿಸಿ ಸ್ವಾಸ್ಥ್ಯ ಸಮಾಜ ನಮ್ಮದಾಗಿಸೋಣ. ಇದಕ್ಕಾಗಿ ಕಸ ವಿಂಗಡಣೆ ಮಾಡುವಾಗಲೇ ಸರಿಯಾದ ಕ್ರಮ ಅನುಸರಿಸಿದಾಗ ಈ ಕಾರ್ಯ ಸರಳ ಸಾಧ್ಯವಾಗುತ್ತದೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಂದು ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಮಾತಾಜಿ […]

ಕನ್ನಡ ಭಾಷಾ ಕಲಿಕೆಯ ಮೂಲಕ ನಾಡ ಸಂಸ್ಕೃತಿಯ ಹರಿಕಾರರಾಗಿ - ಸಂಜೀವ ಮಠಂದೂರು

ಕನ್ನಡ ಭಾಷಾ ಕಲಿಕೆಯ ಮೂಲಕ ನಾಡ ಸಂಸ್ಕೃತಿಯ ಹರಿಕಾರರಾಗಿ – ಸಂಜೀವ ಮಠಂದೂರು

Monday, May 28th, 2018

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 2018-19 ನೇ ಸಾಲಿನ ಶೈಕ್ಷಣಿಕ ವರ್ಷವು ವಿದ್ಯಾಧಿಪತಿಯೂ, ವಿಘ್ನ ನಿವಾರಕನೂ ಆದ ಗಣಪತಿಗೆ ಗಣಹೋಮ ಸೇವೆ ಸಲ್ಲಿಸುವ ಮೂಲಕ ಪ್ರಾರಂಭವಾಯಿತು. ನಂತರದಲ್ಲಿ ಹೊಸದಾಗಿ ದಾಖಲೆಗೊಂಡಂತಹ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮವು ನಡೆಯಿತು. ಆ ಸಂದರ್ಭದಲ್ಲಿ ಅಭ್ಯಾಗತರಾಗಿ ಆಗಮಿಸಿದ್ದ ಪುತ್ತೂರಿನ ನೂತನ ಶಾಸಕರಾದ ಶ್ರೀಯುತ ಸಂಜೀವ ಮಠಂದೂರುರವರು ಮಾತನಾಡಿ ಮಾತೃಭಾಷೆಯ ಕಲಿಕೆಯು ದೇಶದ ಬಗ್ಗೆ ಅಭಿಮಾನ ಬರುವಂತಹ ಸಂಸ್ಕಾರಯುತರನ್ನು ರೂಪಿಸುತ್ತದೆ ಎಂದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಅಚ್ಯುತ್ ನಾಯಕ್, ಸಂಚಾಲಕರಾದ ವಿನೋದ್‌ […]

ಎಸ್.ಎಸ್.ಎಲ್.ಸಿ. ಫಲಿತಾಂಶ - 98%

ಎಸ್.ಎಸ್.ಎಲ್.ಸಿ. ಫಲಿತಾಂಶ – 98%

Monday, May 7th, 2018

2017-18 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಭವಿಷ್ಯ ಬಿ. – 596 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ನಿಡ್ಪಳ್ಳಿ ಗ್ರಾಮದ ಪೆಲತ್ತಡ್ಕ ನಿವಾಸಿ ಬಾಲಕೃಷ್ಣ ನಾಯ್ಕ ಮತ್ತು ಉಷಾ ದಂಪತಿಗಳ ಪುತ್ರಿ. ಉಳಿದಂತೆ ತೃಷಾ ಬಿ. ಭಟ್-590, ಗೌತಮಿ ಕೆ.ಟಿ.-578, ರಕ್ಷಿತಾ ಡಿ.-578, ದೀಕ್ಷಾ ಕೆ.-566, ಸಾತ್ವಿಕ್ ಶರ್ಮ ಬಿ.ಎಸ್. – 565, ವಿಘ್ನೇಶ್-557, ಅಕ್ಷಯ-555, ರಶ್ಮಿತಾ ಡಿ.ಶೆಟ್ಟಿ-547, ಕಾವ್ಯಶ್ರೀ ಯು.-543, ಅಮಿತಾ ಎಸ್. ಎನ್.-542, ಕೀರ್ತನ್ ಕೆ.-537, ಶಾರ್ವರಿ ಕೃಷ್ಣ-534, ಅಂಕಗಳೊಂದಿಗೆ 13 ವಿದ್ಯಾರ್ಥಿಗಳು ವಿಶಿಷ್ಠ […]

ಉನ್ನತ ವ್ಯಕ್ತಿತ್ವಕ್ಕೆ ಯೋಜನೆ, ಯೋಚನೆ ಅಗತ್ಯ - ಕೃಷ್ಣಪ್ರಸಾದ್

ಉನ್ನತ ವ್ಯಕ್ತಿತ್ವಕ್ಕೆ ಯೋಜನೆ, ಯೋಚನೆ ಅಗತ್ಯ – ಕೃಷ್ಣಪ್ರಸಾದ್

Saturday, April 7th, 2018

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10 ನೇ ತರಗತಿ ವಿದ್ಯಾರ್ಥಿಗಳ ದೀಕ್ಷಾಂತ ಕಾರ್ಯಕ್ರಮ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಮತ್ತು ಮಾತೃಪೂಜನಾ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಆಗಮಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗದ ಪ್ರಚಾರಕರಾದ ಶ್ರೀ ಕೃಷ್ಣಪ್ರಸಾದ್‌ ಇವರು ಮಾತನಾಡಿ ದೀಪವು ತಾನೊಂದು ಸುತ್ತಲೂ ಬೆಳಕನ್ನು ಚೆಲ್ಲಿ ಸಾರ್ಥಕತೆಯನ್ನು ಕಾಣುವಂತೆ ನಾವೂ ಸ್ವಾರ್ಥರಹಿತವಾಗಿ ಸಮಾಜ ದೇವನ ಕಾರ್ಯಕ್ಕೆ ಮುಂದಾಗಬೇಕು. ಜೀವನದಲ್ಲಿ ಬರುವ ಅವಕಾಶಗಳನ್ನು […]

ಅಭಿವ್ಯಕ್ತಿ ಮಂಟಪ - ರಜಾ ಮಜಾ ಬೇಸಿಗೆ ಶಿಬಿರದ ಸಮಾರೋಪ

ಅಭಿವ್ಯಕ್ತಿ ಮಂಟಪ – ರಜಾ ಮಜಾ ಬೇಸಿಗೆ ಶಿಬಿರದ ಸಮಾರೋಪ

Friday, April 6th, 2018

ದಿನಾಂಕ 22-03-2018 ರಿಂದ  31-03-2018 ರವರೆಗೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಅಭಿವ್ಯಕ್ತಿ ಮಂಟಪ-ರಜಾ ಮಜಾ ಶಿಬಿರದಲ್ಲಿ 56 ಮಕ್ಕಳು ಪಾಲ್ಗೊಂಡಿದ್ದು ಸಂಸ್ಕೃತಿ ಶಿಕ್ಷಣದೊಂದಿಗೆ ವಿವಿಧ ಕ್ರಿಯಾತ್ಮಕ ಚಟುವಟಿಕೆಗಳನ್ನು ಒಳಗೊಂಡಿತ್ತು. ಪೋಷಕರಾದ ಶ್ರೀ ಪ್ರಕಾಶ ವಾಗ್ಲೆಯವರು ಮಾತನಾಡಿ ಮಗುವಿಗೆ ಒಂದು ಉತ್ತಮ ವೇದಿಕೆಯನ್ನು ಈ ಶಿಬಿರವು ಒದಗಿಸಿಕೊಟ್ಟಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಂತರ ಶಿಬಿರಾರ್ಥಿಗಳಿಂದ ಪ್ರಹಸನವನ್ನು ಪ್ರದರ್ಶಿಸಲಾಯಿತು. ಶಿಬಿರಾರ್ಥಿಗಳಾದ ಅಮೃತ್ ವಿ. ಸ್ವಾಗತಿಸಿ ಆದಿತ್ಯ, ಲಹರಿ, ಹರಿಣಿ, ತನ್ಮಯ ವಾಗ್ಲೆ ಶಿಬಿರದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಸಹಶಿಕ್ಷಕಿ […]

ಮನಸ್ಸು ಸದಾ ಚಟುವಟಿಕೆಗಳಿಂದಿರಲು ರಜಾ ಶಿಬಿರಗಳು ಪೂರಕ- ಶ್ರೀ ಚಂದ್ರಶೇಖರ್ ಶೇಟ್

ಮನಸ್ಸು ಸದಾ ಚಟುವಟಿಕೆಗಳಿಂದಿರಲು ರಜಾ ಶಿಬಿರಗಳು ಪೂರಕ- ಶ್ರೀ ಚಂದ್ರಶೇಖರ್ ಶೇಟ್

Monday, March 26th, 2018

ವಿಶ್ರಾಂತ ಮನಸ್ಸುಗಳಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಅಸಾಧ್ಯ. ಮನಸ್ಸುಗಳನ್ನು ಖಾಲಿ ಬಿಡದೆ ಸದಾ ಚಟುವಟಿಕೆಗಳಿಂದಿರಲು ಪ್ರೇರಣೆ ನೀಡಿದರೆ ಮಕ್ಕಳ ಅಸಾಧಾರಣ ಪ್ರತಿಭೆಗಳು ಅನಾವರಣಗೊಳ್ಳುವುದು ಅದಕ್ಕಾಗಿ ರಜಾಶಿಬಿರಗಳು ಪೂರಕಎಂದು ಶ್ರೀ ವಿಷ್ಣುಮೂರ್ತಿಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಪಟ್ಟೂರುಇಲ್ಲಿನ ಮುಖ್ಯ ಗುರುಗಳಾದ ಶ್ರೀ ಚಂದ್ರಶೇಖರ್ ಶೇಟ್‌ಇವರು ವಿವೇಕಾನಂದಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಅಭಿವ್ಯಕ್ತಿ ಮಂಟಪ ರಜಾ- ಮಜಾ ಶಿಬಿರವನ್ನು ಉದ್ಫಾಟಿಸಿ ಮಾತನಾಡಿದರು. ’ಮಕ್ಕಳಿಗೆ ಪುಸ್ತಕವೇ ಮೊದಲ ಮಿತ್ರನಾಗಿರಬೇಕುಗುರು- ಹಿರಿಯರನ್ನು ಗೌರವಿಸಬೇಕು. ಸಮಾಜದಲ್ಲಿಆದರ್ಶ ವ್ಯಕ್ತಿಗಳಾಗಿ ಬದುಕಬೇಕು’ ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ನುಡಿಗಳನ್ನಾಡಿದರು. […]

ಯಕ್ಷವೈಭವ

ಯಕ್ಷವೈಭವ

Saturday, March 24th, 2018

ಕೆಮ್ಮಾರಿನ ನೆಕ್ಕರಾಜೆ ಶ್ರೀ ಬಾಬು ಗೌಡರವರ ಶ್ರೀ ರಾಮ ನಿಲಯ ಗೃಹಪ್ರವೇಶದ ಸಂದರ್ಭದಲ್ಲಿ ವಿವೇಕಾನಂದಕನ್ನಡ ಮಾಧ್ಯಮ ಶಾಲೆಯ ಯಕ್ಷ ಚಿಣ್ಣರ ಬಳಗದಿಂದ ’ ವೀರಮಣಿ ಕಾಳಗ- ವೀರ ಕುಶಲವ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು. ಈ ಕಾರ್ಯಕ್ರಮವು ಯಕ್ಷ ನಿರ್ದೇಶಕರಾದ ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಮತ್ತು ಸಂಯೋಜಕರಾದ ಶ್ರೀ ಚಂದ್ರಶೇಖರ್ ಸುಳ್ಯಪದವು ಇವರ ನೇತೃತ್ವದಲ್ಲಿ ನಡೆಯಿತು.

ಯಕ್ಷಚಿಣ್ಣರ ಯಕ್ಷ ವೈಭವ

ಯಕ್ಷಚಿಣ್ಣರ ಯಕ್ಷ ವೈಭವ

Saturday, March 24th, 2018

ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಯಕ್ಷ ಚಿಣ್ಣರ ಬಳಗದಿಂದ ’ಶಾಂಭವೀ ವಿಜಯ’ – ಶ್ರೀ ರಾಮ ದರ್ಶನ’ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನವು ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮನಸೆಳೆಯಿತು. ಈ ಕಾರ್ಯಕ್ರಮವು ಯಕ್ಷ ನಿರ್ದೇಶಕರಾದ ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಮತ್ತು ಸಂಯೋಜಕರಾದ ಶ್ರೀ ಚಂದ್ರಶೇಖರ್ ಸುಳ್ಯಪದವು ಇವರ ನೇತೃತ್ವದಲ್ಲಿ ನಡೆಯಿತು.

ಮನಸ್ಸು ಸದಾ ಚಟುವಟಿಕೆಗಳಿಂದಿರಲು ರಜಾ ಶಿಬಿರಗಳು ಪೂರಕ- ಶ್ರೀ ಚಂದ್ರಶೇಖರ್ ಶೇಟ್

ಮನಸ್ಸು ಸದಾ ಚಟುವಟಿಕೆಗಳಿಂದಿರಲು ರಜಾ ಶಿಬಿರಗಳು ಪೂರಕ- ಶ್ರೀ ಚಂದ್ರಶೇಖರ್ ಶೇಟ್

Thursday, March 22nd, 2018

ವಿಶ್ರಾಂತ ಮನಸ್ಸುಗಳಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಅಸಾಧ್ಯ. ಮನಸ್ಸುಗಳನ್ನು ಖಾಲಿ ಬಿಡದೆ ಸದಾ ಚಟುವಟಿಕೆಗಳಿಂದಿರಲು ಪ್ರೇರಣೆ ನೀಡಿದರೆ ಮಕ್ಕಳ ಅಸಾಧಾರಣ ಪ್ರತಿಭೆಗಳು ಅನಾವರಣಗೊಳ್ಳುವುದು ಅದಕ್ಕಾಗಿ ರಜಾಶಿಬಿರಗಳು ಪೂರಕಎಂದು ಶ್ರೀ ವಿಷ್ಣುಮೂರ್ತಿ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಪಟ್ಟೂರು ಇಲ್ಲಿನ ಮುಖ್ಯ ಗುರುಗಳಾದ ಶ್ರೀ ಚಂದ್ರಶೇಖರ್ ಶೇಟ್‌ ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಅಭಿವ್ಯಕ್ತಿ ಮಂಟಪರಜಾ- ಮಜಾ ಶಿಬಿರವನ್ನು ಉದ್ಫಾಟಿಸಿ ಮಾತನಾಡಿದರು. ’ಮಕ್ಕಳಿಗೆ ಪುಸ್ತಕವೇ ಮೊದಲ ಮಿತ್ರನಾಗಿರಬೇಕು ಗುರು- ಹಿರಿಯರನ್ನು ಗೌರವಿಸಬೇಕು. ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ […]

ಕೃಷ್ಣನಿಗೆ ಬಣ್ಣ ಹಚ್ಚುವ ಸ್ಪರ್ಧೆ - ಜಿಲ್ಲಾಮಟ್ಟದಲ್ಲಿ ಪ್ರಥಮ

ಕೃಷ್ಣನಿಗೆ ಬಣ್ಣ ಹಚ್ಚುವ ಸ್ಪರ್ಧೆ – ಜಿಲ್ಲಾಮಟ್ಟದಲ್ಲಿ ಪ್ರಥಮ

Monday, March 5th, 2018

ಇಸ್ಕಾನ್ ಸಂಸ್ಥೆಯ ಇಸ್ಕಾನ್ ಮಂಗಳೂರು ಇದರ ವತಿಯಿಂದ ನಡೆಸಲ್ಪಟ್ಟ ಕೃಷ್ಣನಿಗೆ ಬಣ್ಣಹಚ್ಚುವ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ಕು. ಕುಶಿತಾ ಬಿ. (ಬೆಳಿಯೂರುಕಟ್ಟೆ ನಿವಾಸಿ ಹರೀಶ್ ಬಿ ಮತ್ತು ಲಲಿತ.ಕೆ ದಂಪತಿಗಳ ಪುತ್ರಿ) ಇವಳು ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿ ಆಯ್ಕೆಯಾಗಿರುತ್ತಾಳೆ.

ಚಿತ್ರ ಕಲೆ ಗ್ರೇಡ್ ಪರೀಕ್ಷೆಯಲ್ಲಿ 100% ಫಲಿತಾಂಶ

ಚಿತ್ರ ಕಲೆ ಗ್ರೇಡ್ ಪರೀಕ್ಷೆಯಲ್ಲಿ 100% ಫಲಿತಾಂಶ

Monday, February 26th, 2018

ತಾಲೂಕಿಗೆ ಪ್ರಥಮ, ದ್ವಿತೀಯ ಸ್ಥಾನ ಪಡೆದ ಶಾಲಾ ವಿದ್ಯಾರ್ಥಿಗಳು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯವರು 2017-18 ರ ಸಾಲಿನಲ್ಲಿ ನಡೆಸಿದ ಚಿತ್ರಕಲೆ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಿಂದ ಲೋವರ್‌ಗ್ರೇಡ್‌ನಲ್ಲಿ 18 ಮಕ್ಕಳು ಹಾಜರಾಗಿದ್ದಾರೆ 9 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಮತ್ತು 9 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಹೈಯರ್ ಗ್ರೇಡ್ ವಿಭಾಗದಲ್ಲಿ 18 ಮಕ್ಕಳು ಹಾಜರಾಗಿ 2 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿ ತಾಲೂಕಿಗೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. 14 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಇವರಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ರುಕ್ಮಯ […]

ಯಕ್ಷ ಸಂಭ್ರಮ

ಯಕ್ಷ ಸಂಭ್ರಮ

Thursday, February 22nd, 2018

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ಯಕ್ಷ ಚಿಣ್ಣರ ಬಳಗದ ’ಯಕ್ಷ ಸಂಭ್ರಮ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಬಲ್ಲಿರೇನಯ್ಯಾ ಪತ್ರಿಕೆಯ ಸಂಪಾದಕರಾದ ಶ್ರೀ ತಾರಾನಾಥ ವರ್ಕಾಡಿಯವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಕ್ಕಳು ಇತ್ತೀಚೆಗೆ ಯಕ್ಷಗಾನ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಸಂತೋಷದ ವಿಚಾರ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧೀ ಶಕ್ತಿ ಮಹಿಳಾ ಯಕ್ಷಗಾನ ತಂಡದ ನಿರ್ದೇಶಕಿ ಶ್ರೀಮತಿ ಪದ್ಮ ಆಚಾರ್‌ರವರು ವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಕಲಾವಿದ ಶ್ರೀ ಉಜಿರೆ ನಾರಾಯಣ […]

ಚಿಣ್ಣರ ಪಾರ್ಕ್‌ಉದ್ಫಾಟನೆ

ಚಿಣ್ಣರ ಪಾರ್ಕ್‌ಉದ್ಫಾಟನೆ

Thursday, February 22nd, 2018

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ ’ಚಿಲಿಪಿಲಿ ಚಿಣ್ಣರ ಪಾರ್ಕ್’ನ್ನು ಕೇಂದ್ರ ಕೌಶಲ ಅಭಿವೃದ್ಧಿ ರಾಜ್ಯ ಸಚಿವರಾದ ಶ್ರೀ ಅನಂತ್‌ಕುಮಾರ್ ಹೆಗಡೆ ಅವರು ತೆಂಗಿನಕಾಯಿ ಒಡೆದು ಉದ್ಫಾಟಿಸಿದರು. ಬಳಿಕ ಪುಟಾಣಿಗಳನ್ನು ಉಯ್ಯಾಲೆಯಲ್ಲಿ ಕುಳ್ಳಿರಿಸುವ ಮುಖಾಂತರ ಪಾರ್ಕ್‌ಗೆ ಚಾಲನೆ ನೀಡಿದರು. ಸಚಿವರನ್ನು ಶಾಲಾ ವಿದ್ಯಾರ್ಥಿಗಳು ಆರತಿ ಬೆಳಗಿ ತಿಲಕವಿಟ್ಟು, ವೀಳ್ಯ ನೀಡಿ ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತಿಸಿದರು.

ಭಾರತೀಯತೆ ರಕ್ತಗತವಾಗಿ ನಮ್ಮ ವ್ಯಕ್ತಿತ್ವದಲ್ಲಿ ಒಡಮಾಡಬೇಕು - ಬಾಲಕೃಷ್ಣ ಹೊಸಮನೆ

ಭಾರತೀಯತೆ ರಕ್ತಗತವಾಗಿ ನಮ್ಮ ವ್ಯಕ್ತಿತ್ವದಲ್ಲಿ ಒಡಮಾಡಬೇಕು – ಬಾಲಕೃಷ್ಣ ಹೊಸಮನೆ

Monday, February 12th, 2018

ಮಕ್ಕಳಿಗೆ ಶಾಲೆಗಳಲ್ಲಿ ನೀಡುವ ಶೈಕ್ಷಣಿಕ ಪಠ್ಯಕ್ರಮದೊಂದಿಗೆ ಕ್ರೀಡೆ, ಲಲಿತ ಕಲೆಗಳಿಗೂ ಪ್ರಾಮುಖ್ಯತೆ ನೀಡಿದಾಗ ಭಾರತೀಯತೆಯೊಂದಿಗೆ ವ್ಯಕ್ತಿತ್ವವೂ ವಿಕಸನಗೊಳ್ಳುತ್ತದೆ. ಸಾಹಿತ್ಯಕ್ಕೂ ಕ್ರಿಯೆಗೂ ಹೊಂದಾಣಿಕೆಯಾದಾಗ ಗುರು ಶಿಷ್ಯ ಪರಂಪರೆಗೂ ಮಹತ್ವವಿದ್ದಾಗ ವಿದ್ಯಾರ್ಥಿಗಳಿಗೆ ಮನುಷ್ಯತ್ವ, ಸರಳತೆ, ಸೌಜನ್ಯತೆ, ಬದ್ಧತೆ, ಶಿಸ್ತಿನೊಂದಿಗೆ ಹಿರಿಯರನ್ನು ಗೌರವದಿಂದ ಕಾಣುವ ಜೀವನ ಸತ್ವ, ಮೌಲ್ಯಗಳನ್ನು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ವಿವೇಕಾನಂದ ಪದವಿ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಶ್ರೀ ಬಾಲಕೃಷ್ಣ ಹೊಸಮನೆ ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಗಾನ – ನಾಟ್ಯ- ವೈಭವ ಕಾರ್ಯಕ್ರಮದಲ್ಲಿ […]

ರಾಮಾಯಣ ಪರೀಕ್ಷೆ - ತಾಲೂಕಿಗೆ ಪ್ರಥಮ

ರಾಮಾಯಣ ಪರೀಕ್ಷೆ – ತಾಲೂಕಿಗೆ ಪ್ರಥಮ

Friday, February 9th, 2018

ಬೆಂಗಳೂರಿನ ಭಾರತ ಸಂಸ್ಕೃತಿ ಪ್ರತಿಷ್ಠಾನ ವತಿಯಿಂದ ನಡೆದ ರಾಜ್ಯ ಮಟ್ಟದ ರಾಮಾಯಣ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8 ನೇ ತರಗತಿ ವಿದ್ಯಾರ್ಥಿನಿ ಸಿಂಚನಾ ಟಿ. (ಬಾಲಸುಬ್ರಹ್ಮಣ್ಯ ಟಿ. ಮತ್ತು ರೇಷ್ಮಾ ಡಿ.ವಿ. ದಂಪತಿಗಳ ಪುತ್ರಿ) ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

2017-18 ನೇ ಸಾಲಿನಲ್ಲಿ ಶಾಲೆಯಿಂದ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ವಿವರ

2017-18 ನೇ ಸಾಲಿನಲ್ಲಿ ಶಾಲೆಯಿಂದ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ವಿವರ

Friday, February 9th, 2018

ನವೆಂಬರ್ 7 ರಿಂದ 12 ರವರೆಗೆ ಮಧ್ಯಪ್ರದೇಶದ ಭೂಪಾಲ್‌ನಲ್ಲಿ ನಡೆದ 17 ರ ವಯೋಮಾನದ ಬಾಲಕ-ಬಾಲಕಿಯರ ಎಸ್.ಜಿ.ಎಫ್.ಐ. (ರಾಷ್ಟ್ರೀಯ ಮಟ್ಟದ ಶಾಲಾ ಕ್ರೀಡಾಕೂಟ)ದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ವಿದ್ಯಾಭಾರತಿ ಕರ್ನಾಟಕ ವತಿಯಿಂದ ಭಾಗವಹಿಸಿರುತ್ತಾರೆ. ದೀಕ್ಷಾ ಕೆ.- 100 ಮೀ ಅಡೆತಡೆ ಓಟ, 4×100 ಮೀ ರಿಲೇ ಗಾಯತ್ರಿ – ಉದ್ದಜಿಗಿತ, ತ್ರಿವಿಧ ಜಿಗಿತ, 4×100 ಮೀ ರಿಲೇ ಚೈತ್ರಾ – 4×100 ಮೀ ರಿಲೇ ಕೃತಿ ಜಿ. ಶೆಟ್ಟಿ – 4×100 ಮೀ ರಿಲೇ ವಿಭಾ ಯು. ಎಸ್. – 3000 ಮೀ ವೇಗದ ನಡಿಗೆ […]

ಅಂತರಾಷ್ಟ್ರೀಯ ಕವನ ಸಂಕಲನಕ್ಕೆ ಆಯ್ಕೆ

ಅಂತರಾಷ್ಟ್ರೀಯ ಕವನ ಸಂಕಲನಕ್ಕೆ ಆಯ್ಕೆ

Wednesday, February 7th, 2018

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಂಗ್ಲಭಾಷಾ ಅಧ್ಯಾಪಕಿಯಾದ ಶ್ರೀಮತಿ ವಿದ್ಯಾ ಅನಿಲ್ ಮಲ್ಲಾರ್‌ರವರ ’ದ ಡಿವೈನ್ ಸೋಲ್ಸ್’ ಎಂಬ ಕವನವು ಅಮೆರಿಕಾದ ಇಂಟರ್‌ನ್ಯಾಶನಲ್ ಪೊಯೆಟ್ರಿ ಪ್ರೆಸ್‌ಬುಕ್‌ನಿಂದ ಪ್ರಕಟವಾಗುವ ‘ಫ್ರಂ ದ ಹಾರ್ಟ್’ ಪತ್ರಿಕೆಯ ವಾರ್ಷಿಕ ಸಂಚಿಕೆಗೆ ಆಯ್ಕೆಯಾಗಿದೆ. ಪತ್ರಿಕೆಯ ಸಂಪಾದಕರು ಈ ಕವಿತೆಯ ಅರ್ಥಗರ್ಭಿತ, ಹೃದಯ ಸ್ಪರ್ಶಿ ರಚನೆಗಾಗಿ ಆರಿಸಿಕೊಂಡಿರುತ್ತಾರೆ. ಇವರ ಈ ಕವನವು ಶಾಲೆಯ ಬೆಳ್ಳಿಹಬ್ಬದ ಸ್ಮರಣ ಸಂಚಿಕೆ ’ಸಮರ್ಪಣಾ’ದಲ್ಲಿ  ಪ್ರಕಟಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಶಾಲಾ ಮಕ್ಕಳಿಂದ ಭಜನಾ ಕಾರ್ಯಕ್ರಮ

ಶಾಲಾ ಮಕ್ಕಳಿಂದ ಭಜನಾ ಕಾರ್ಯಕ್ರಮ

Wednesday, February 7th, 2018

ವಿವೇಕಾನಂದ ಕಾಲೇಜಿನ ಆವರಣದಲ್ಲಿರುವ ಧ್ಯಾನ ಮಂದಿರದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಂದ ಭಜನಾ ಕಾರ್ಯಕ್ರಮ ನಡೆಯಿತು.

ಶಾಂತಿವನ ಟ್ರಸ್ಟ್ ಪುಸ್ತಕಾಧಾರಿತ ಸ್ಪರ್ಧೆ -  ಶಾಲೆಗೆ ಪ್ರಶಸ್ತಿ

ಶಾಂತಿವನ ಟ್ರಸ್ಟ್ ಪುಸ್ತಕಾಧಾರಿತ ಸ್ಪರ್ಧೆ –  ಶಾಲೆಗೆ ಪ್ರಶಸ್ತಿ

Wednesday, February 7th, 2018

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನಟ್ರಸ್ಟ್ (ರಿ) ಧರ್ಮಸ್ಥಳ ಇವರು ಏರ್ಪಡಿಸಿದ ’ಜ್ಞಾನ ಸಿರಿ’ ಪುಸ್ತಕಾಧಾರಿತ ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿ ಮುಖೇಶ್ ಕೃಷ್ಣ -ಪ್ರಾಥಮಿಕ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ’ಜ್ಞಾನಐಸಿರಿ’ ಪುಸ್ತಕಾಧಾರಿತ ಪ್ರೌಢ ವಿಭಾಗದ ಚಿತ್ರಕಲೆಯಲ್ಲಿ ಗೌತಮ್‌ಎಸ್.- ದ್ವಿತೀಯ ಸ್ಥಾನ ಪಡೆದಿರುತ್ತಾರೆ.

Highslide for Wordpress Plugin