ವಿದ್ಯಾಭಾರತಿ ವತಿಯಿಂದ ಶ್ರೀ ಸರಸ್ವತಿ ವಿದ್ಯಾ ಪೀಠಂ, ಶಾರದಾ ಧಾಮ, ಹೈದರಾಬಾದ್, ತೆಲಂಗಾಣದಲ್ಲಿ ನಡೆದ ದಕ್ಷಿಣ ಮಧ್ಯ ಕ್ಷೇತ್ರೀಯ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಕೀರ್ತಿ – ಎತ್ತರ ಜಿಗಿತ (ಪ್ರಥಮ) – (ಮೋನಪ್ಪ ಮತ್ತು ಲಲಿತಾ ದಂಪತಿಗಳ ಪುತ್ರಿ), ಗುಣಶ್ರೀ 80ಮೀ ಹರ್ಡಲ್ಸ್ (ಪ್ರಥಮ)- (ಶ್ರೀನಿವಾಸ್ ಮತ್ತು ಹೇಮಾವತಿ ದಂಪತಿಗಳ ಪುತ್ರಿ) , ವಿಕೃತಿ ಕುಮಾರಿ(ಗೀತಾ ರೈ ಮತ್ತು ಪ್ರವೀಣ್ ಕುಮಾರ್ ದಂಪತಿಗಳ ಪುತ್ರಿ) ನಡಿಗೆಯಲ್ಲಿ ದ್ವಿತೀಯ , ಮತ್ತು 14ರ ವಯೋಮಾನದ ಬಾಲಕಿಯರ 4 100 ಮೀ ರಿಲೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಕರಾದ ದಾಮೋದರ್, ಹರಿಣಾಕ್ಷಿ ಮತ್ತು ಕು. ಶ್ರದ್ಧಾ ಶೆಟ್ಟಿ ತರಬೇತಿ ನೀಡಿದ್ದರು.