ವಿದ್ಯಾಭಾರತಿ ಕಬಡ್ಡಿ –  ರಾಜ್ಯಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ಕಬಡ್ಡಿ – ರಾಜ್ಯಮಟ್ಟಕ್ಕೆ ಆಯ್ಕೆ

Friday, August 4th, 2023

ವಿದ್ಯಾಭಾರತಿ ಕಬಡ್ಡಿ – ರಾಜ್ಯಮಟ್ಟಕ್ಕೆ ಆಯ್ಕೆ ವಿದ್ಯಾಭಾರತಿ ಕರ್ನಾಟಕ ಮತ್ತು ಶಕ್ತಿ ವಿದ್ಯಾಸಂಸ್ಥೆ ಶಕ್ತಿನಗರ ಮಂಗಳೂರು ಇವರ ಆಶ್ರಯದಲ್ಲಿ ಶಕ್ತಿ ವಿದ್ಯಾಸಂಸ್ಥೆ ಮಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕಿಶೋರವರ್ಗದ ಬಾಲಕಿಯರ ಕಬಡ್ಡಿ ತಂಡವು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ತಂಡದಲ್ಲಿ ಕೃತಿಕಾ ಜಿ ( ಶ್ರೀ ರವಿ ಮತ್ತು ಯಶೋಧ ದಂಪತಿಗಳ ಪುತ್ರಿ), ಆದ್ಯ ಬಿ.ಆರ್(ಶ್ರೀ ರಾಮಣ್ಣ ಗೌಡ ಮತ್ತು ರೇಖಾ ಪಿ ದಂಪತಿಗಳ ಪುತ್ರಿ), […]

ಪೋಷಕರ ಸಭೆ ಹಾಗೂ ಸಮಿತಿ ಸಮನ್ವಯ ಸಭೆ

ಪೋಷಕರ ಸಭೆ ಹಾಗೂ ಸಮಿತಿ ಸಮನ್ವಯ ಸಭೆ

Friday, August 4th, 2023

‘ಮಕ್ಕಳ ಮೂಲಕ ಪೋಷಕರಲ್ಲೂ ವೈಜ್ಞಾನಿಕ ಮನೋಭಾವನೆ ಬೆಳೆಸುವ ನಿಟ್ಟಿನಲ್ಲಿ ಮಕ್ಕಳಿಂದ ಪ್ರಾತ್ಯಕ್ಷಿತಗೊಂಡ ವಿಜ್ಞಾನದ ದೈನಂದಿನ ಬದುಕಿಗೆ ಸಂಬಂಧಿಸಿದ ಪ್ರಯೋಗಗಳು ನಮಗೂ ಕೆಲವಾರು ವಿಷಯಗಳನ್ನು ತಿಳಿಸಿದುವು. ಮಕ್ಕಳ ಪ್ರಯತ್ನ ಶ್ಲಾಘನೀಯ’ – ಶ್ರೀಮತಿ ಆಶಾ (ಪೋಷಕರು) ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ನಡೆದ ವಿಭಾಗವಾರು ಪೋಷಕರ ಸಭೆಯಲ್ಲಿ ಮಕ್ಕಳಿಂದ ಶ್ಲೋಕ, ಅಮೃತ ವಚನ, ಮಂಕುತಿಮ್ಮನ ಕಗ್ಗ, ದೇಶಭಕ್ತಿ ಗೀತೆ, ಕನ್ನಡ ಮತ್ತು ಆಂಗ್ಲ ಭಾಷೆಯ ಭಾಷಣ ಹಾಗೂ ವಿಜ್ಞಾನ ಪ್ರಾತ್ಯಕ್ಷಿಕೆಗಳು ಪ್ರಸ್ತುತಗೊಂಡವು. ಪೋಷಕರೊಂದಿಗೆ […]

ಯೋಗಾಸನ ಸ್ಪರ್ಧೆ ರಾಜ್ಯಮಟ್ಟಕ್ಕೆ ಆಯ್ಕೆ

ಯೋಗಾಸನ ಸ್ಪರ್ಧೆ ರಾಜ್ಯಮಟ್ಟಕ್ಕೆ ಆಯ್ಕೆ

Tuesday, August 1st, 2023

ಯೋಗಾಸನ ಸ್ಪರ್ಧೆ  ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಸರಸ್ವತಿ ವಿದ್ಯಾಲಯ ಕಡಬ ಇವರ ಸಹಯೋಗದಲ್ಲಿ ನಡೆದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದಾರೆ. ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಸಮಗ್ರ ಪ್ರಥಮ ಬಹುಮಾನ, ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಸಮಗ್ರ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಸಮಗ್ರ ಪ್ರಥಮ ಸ್ಥಾನ ಕವಿತಾ (ರಿದಮಿಕ್) ದ್ವಿತೀಯ ಸ್ಥಾನ, ಮುಕುಂದ(ರಿದಮಿಕ್) ತೃತೀಯ […]

ನೂತನ ಪಾಕ ಶಾಲೆ - ಸಾನ್ನಿಧ್ಯ-ಲೋಕಾರ್ಪಣೆ

ನೂತನ ಪಾಕ ಶಾಲೆ – ಸಾನ್ನಿಧ್ಯ-ಲೋಕಾರ್ಪಣೆ

Friday, July 14th, 2023

ಹಣದ ಹಿಂದೆ ಹೋಗುವ ಬದಲು ಗುಣದ ಹಿಂದೆ ಹೋಗುವಂತಾಗಬೇಕು – ಡಾ.ಪ್ರಭಾಕರ ಭಟ್ ಹಿಂದು ಸಮಾಜದ ನಂಬಿಕೆಗಳನ್ನು ಗಟ್ಟಿ ಮಾಡುವ ಸಂಗತಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಿಂದ ಆಗುತ್ತಿದೆ. ಹಣದ ಹಿಂದೆ ಹೋಗುವ ಬದಲು ಗುಣದ ಹಿಂದೆ ಹೋಗುವ ಮನಸ್ಸು ನಮ್ಮದಾಗಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಹೇಳಿದರು. ತೆಂಕಿಲ ವಿವೇಕನಗರದಲ್ಲಿರುವ ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶೇಷಾದ್ರಿಯಲ್ಲಿ ‘ಅನ್ನಪೂರ್ಣ’ ಯೋಜನೆಯ ನೂತನ ಪಾಕಶಾಲೆ ‘ಸಾನ್ನಿಧ್ಯ’ […]

ಸಾನ್ನಿಧ್ಯ - ಲೋಕಾರ್ಪಣೆ – ಗಣಪತಿ ಹೋಮ

ಸಾನ್ನಿಧ್ಯ – ಲೋಕಾರ್ಪಣೆ – ಗಣಪತಿ ಹೋಮ

Monday, July 10th, 2023

ಸಾನ್ನಿಧ್ಯ – ಲೋಕಾರ್ಪಣೆ – ಗಣಪತಿ ಹೋಮ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಅನ್ನಪೂರ್ಣ ಯೋಜನೆಯ ನೂತನ ಪಾಕಶಾಲೆ ‘ಸಾನ್ನಿಧ್ಯ’ ಲೋಕಾರ್ಪಣೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜು.06ರಂದು ನೆರವೇರಿತು. ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ ವಿ.ಎಸ್.ಭಟ್ ನೇತೃತ್ವದಲ್ಲಿ ಗಣಪತಿ ಹೋಮ ನಡೆದು ‘ಸಾನ್ನಿಧ್ಯ’ ಅನ್ನಪೂರ್ಣ ಪಾಕಶಾಲೆಯ ಪ್ರವೇಶೋತ್ಸವ ನೆರವೇರಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಂಪ್ಯ ಆನಂದಾಶ್ರಮ ಸೇವಾ ಟ್ರಸ್ಟ್‍ನ ಅಧ್ಯಕ್ಷೆ ಡಾ. ಗೌರಿ […]

ಸಾನ್ನಿಧ್ಯ- ಲೋಕಾರ್ಪಣೆ– ವಾಸ್ತು ಪೂಜೆ

ಸಾನ್ನಿಧ್ಯ- ಲೋಕಾರ್ಪಣೆ– ವಾಸ್ತು ಪೂಜೆ

Monday, July 10th, 2023

ಸಾನ್ನಿಧ್ಯ- ಲೋಕಾರ್ಪಣೆ– ವಾಸ್ತು ಪೂಜೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ‘ಅನ್ನಪೂರ್ಣ’ ಯೋಜನೆಯ ನೂತನ ಪಾಕಶಾಲೆ ‘ಸಾನ್ನಿಧ್ಯ’ ಇದರ ಲೋಕಾರ್ಪಣೆ ಜು.5ರಂದು ನಡೆಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ.ವಿ.ಎಸ್ ಭಟ್ ರವರ ನೇತೃತ್ವದಲ್ಲಿ ವಾಸ್ತು ಪೂಜೆ ನಡೆಯಿತಿ. ಬೆಂಗಳೂರು ಬಯೋಟೆಕ್ ಕಂಪೆನಿಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕರಾಗಿರುವ ಡಾ. ಶಾಮ ಭಟ್ಟ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಅಚ್ಚುತ ನಾಯಕ್ ಹೆಚ್ ಉಪಸ್ಥಿತರಿದ್ದರು.   ಕಾರ್ಯಕ್ರಮದಲ್ಲಿ ಬೆಂಗಳೂರು […]

ಜನಪದ ಗೀತೆ ಸ್ಪರ್ಧೆ

ಜನಪದ ಗೀತೆ ಸ್ಪರ್ಧೆ

Tuesday, July 4th, 2023

ಶಾಲಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನ ಶ್ರೀ ದಿವಂಗತ ಬಾಲಕೃಷ್ಣ ಮಧುವನ ಇವರ ಸ್ಮರಣಾರ್ಥ ಸರ್ವೋದಯ ಪ್ರೌಢಶಾಲೆ, ಸುಳ್ಯಪದವು ಇಲ್ಲಿ ನಡೆದ ತಾಲೂಕು ಮಟ್ಟದ ಜನಪದ ಗೀತೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹರಿಣಿ, ಸುಷ್ಮಾ ಮತ್ತು ಮಂಗಳಾದುರ್ಗಾ ಇವರ  ತಂಡ  ಪ್ರೋತ್ಸಾಹಕ  ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಮೂಲಿಕಾ ವನ ಭೇಟಿ

ಮೂಲಿಕಾ ವನ ಭೇಟಿ

Thursday, June 29th, 2023

“ಪರಿಸರ ಸ್ನೇಹಿ ಬದುಕು ನಮ್ಮದಾದಾಗ ನಮ್ಮನ್ನು ನಾವು ಕಂಡುಕೊಳ್ಳಲು ಸಾಧ್ಯವಾಗುತ್ತದೆ” –ಡಾ.ರವೀಂದ್ರ ಐತಾಳರು ವಿವೇಕಾನಂದ ವಿದ್ಯಾವರ್ಧಕ ಸಂಘದ ಮಹಾತ್ವಾಕಾಂಕ್ಷೆಯ ಯೋಜನೆ ‘ವಿವೇಕ ಸಂಜೀವಿನಿ’ಯ ಅನುಷ್ಠಾನಿಕ ಭಾಗವಾಗಿ ‘ಮೂಲಿಕಾ ವನ’ ನಿರ್ಮಾಣದ ಅಂಗವಾಗಿ ಪೂರ್ವಭಾವಿ ಮಾಹಿತಿ ಪಡೆಯುವ ದೃಷ್ಟಿಯಿಂದ ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಖ್ಯಾತ ಔಷಧೀಯ ಸಸ್ಯಗಳ ಸಂರಕ್ಷಕ ಹಾಗೂ ಉರಗ ತಜ್ಞ ಡಾ. ರವೀಂದ್ರ ಐತಾಳರ ಮೂಲಿಕಾ ವನಕ್ಕೆ ಭೇಟಿ ನೀಡಿದರು. ತಮ್ಮ ಮೂಲಿಕಾ ವನದ ಪರಿಚಯ ಮಾಡಿಸಿ ಹಲವು ಜಾತಿಯ ಔಷಧೀಯ […]

ಕೆದಿಲದಲ್ಲಿ ಗ್ರಾಮ ಸಂಜೀವಿನಿ ಕಾರ್ಯಕ್ರಮ

ಕೆದಿಲದಲ್ಲಿ ಗ್ರಾಮ ಸಂಜೀವಿನಿ ಕಾರ್ಯಕ್ರಮ

Monday, June 26th, 2023

ಕೆದಿಲದಲ್ಲಿ ಗ್ರಾಮ ಸಂಜೀವಿನಿ ಕಾರ್ಯಕ್ರಮ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶಯದಲ್ಲಿ ಔಷಧೀಯ ಸಸ್ಯಗಳ ಸಂರಕ್ಷಣೆ, ಸಂವರ್ಧನೆ, ಬಳಕೆ ಹಾಗೂ ಜಾಗೃತಿಯ ಮಹಾತ್ವಾಕಾಂಕ್ಷೆ ಯೋಜನೆ ವಿವೇಕ ಸಂಜೀವಿನಿಯ ಶಾಲಾ ಅನುಷ್ಠಾನಿಕ ಭಾಗವಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಶ್ರೀರಾಮ ಭಜನಾ ಮಂದಿರ ಕೆದಿಲ, ಊರ ನಾಗರಿಕರ ಸಹಯೋಗದಲ್ಲಿ ಗ್ರಾಮ-ಸಂಜೀವಿನಿ ಯೋಜನೆಗೆ ಚಾಲನೆ ನೀಡಿದವರು ಕೆದಿಲ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಜಯಂತಿ ಧನಂಜಯ ಶೆಟ್ಟಿ ಇವರು. ‘ಶಾಲೆಯಿಂದ ಗ್ರಾಮಗಳಲ್ಲಿ ನಡೆಯುತ್ತಿರುವ ಅನ್ಯಾನ್ಯ ಕಾರ್ಯಕ್ರಮಗಳಾದ ಬದು ನಿರ್ಮಾಣ, ಗದ್ದೆ ಕೊಯ್ಲು, […]

‘ಸಹಜ’- ಸಂಜೀವಿನಿ ಸಮಿತಿ ರಚನೆ

‘ಸಹಜ’- ಸಂಜೀವಿನಿ ಸಮಿತಿ ರಚನೆ

Saturday, June 24th, 2023

ಸಹಜ’- ಸಂಜೀವಿನಿ ಸಮಿತಿ ರಚನೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಔಷಧೀಯ ಸಸ್ಯಗಳ ಸಂರಕ್ಷಣೆ, ಸಂವರ್ಧನೆ, ಬಳಕೆ ಹಾಗೂ ಜಾಗೃತಿಯ ಮಹಾತ್ವಾಕಾಂಕ್ಷೆಯ ಯೋಜನೆ ‘ವಿವೇಕ ಸಂಜೀವಿನಿ’ಯ ಶಾಲಾ ಅನುಷ್ಠಾನಿಕ ಭಾಗವಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು. ಪ್ರಸಕ್ತ ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳಾದ ಔಷಧೀಯ ಸಸ್ಯಗಳ ಪೆÇೀಷಣಾ ಹಬ್ಬ, ಸಹಜ-ಮೂಲಿಕಾ ವನ ನಿರ್ಮಾಣ, ಕೆದಿಲ ಗ್ರಾಮದಲ್ಲಿ ನಡೆಯಲಿರುವ ಗ್ರಾಮ-ವನ ನಿರ್ಮಾಣದ ಭಾಗವಾಗಿ ಪೆÇೀಷಕರನ್ನು ಒಳಗೊಂಡಂತೆ ಸಮಿತಿ ರಚನೆ ಮಾಡಲಾಯಿತು. ಪೂರ್ವಪ್ರಾಥಮಿಕದಿಂದ ಹತ್ತನೇ ವರೆಗಿನ ತರಗತಿಗಳ […]

Highslide for Wordpress Plugin