’ಚಟುವಟಿಕೆಯಿಂದ ಕೂಡಿದ ಕಲಿಕೆ ಶಾಶ್ವತ ಕಲಿಕೆ’ - ಸತ್ಯಮೂರ್ತಿ ಹೆಬ್ಬಾರ್

’ಚಟುವಟಿಕೆಯಿಂದ ಕೂಡಿದ ಕಲಿಕೆ ಶಾಶ್ವತ ಕಲಿಕೆ’ – ಸತ್ಯಮೂರ್ತಿ ಹೆಬ್ಬಾರ್

Tuesday, July 26th, 2022

ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತಕ್ಕೆ ಸಂಬಂಧಿಸಿದ ಚಟುವಟಿಕಾ ಕಾರ್ಯಗಾರದಲ್ಲಿ ವಿವಿಧ ಮಾದರಿಗಳನ್ನು ಪ್ರದರ್ಶಿಸುತ್ತಾ ಗಣಿತ ತರಗತಿಯು ಚಟುವಟಿಕೆಯುಕ್ತವಾಗಿ, ಇದ್ದಾಗ ಮಕ್ಕಳು ಕಲಿಕೆಯ ಕಡೆ ಹೆಚ್ಚಿನ ಗಮನ ಕೊಡುತ್ತಾರೆ. ಸಣ್ಣ ಪರಿಕಲ್ಪನೆಯನ್ನು ವಿವಿಧ ಮಜಲುಗಳಲ್ಲಿ ಆಲೋಚಿಸಿ ಅಭ್ಯಾಸ ನಡೆಸಿದಾಗ ಗಣಿತವೆಂದರೆ ಕಠಿಣವಲ್ಲ. ಅದು ಸಂತಸದ ರಸದೂಟ ಎಂದೆನಿಸುತ್ತದೆಯೆಂದು ಸತ್ಯಮೂರ್ತಿ ಹೆಬ್ಬಾರ್ ನುಡಿದರು. ಪಠ್ಯವಿಷಯಕ್ಕೆ ಸಂಬಂಧಿಸಿದಂತೆ ಪೈಥಾಗೊರಸ್ ಪ್ರಮೇಯಕ್ಕೆ ಸಂಬಂಧಿಸಿದ ಮಾದರಿ, ಥೇಲ್ಸ್ ಪ್ರಮೇಯ ಆಧಾರಿತ ಕಲಿಕಾ ಉಪಕರಣ, ಸ್ಪರ್ಶಕಗಳ ರಚನೆ, ತ್ರಿಕೋನಮಿತಿ ಅನುಪಾತಗಳು, ನಿರ್ದಿಷ್ಟ ಕೋನಗಳಿಗೆ ತ್ರಿಕೋನಮಿತಿ ಬೆಲೆ […]

ಯೋಧರ ಸ್ಮರಣೆ ನಿರಂತರವಾಗಿ ಮಾಡುವುದೇ ನಿಜವಾದ ದೇಶಾಭಿಮಾನ - ಕು.ಹೇಮಸ್ವಾತಿ

ಯೋಧರ ಸ್ಮರಣೆ ನಿರಂತರವಾಗಿ ಮಾಡುವುದೇ ನಿಜವಾದ ದೇಶಾಭಿಮಾನ – ಕು.ಹೇಮಸ್ವಾತಿ

Tuesday, July 26th, 2022

ಉತ್ತಮ ಜೀವನ ಮೌಲ್ಯಗಳೊಂದಿಗೆ ಶಿಸ್ತನ್ನು ಅಳವಡಿಸಿಕೊಂಡು ಶಾಲಾ ದಿನಗಳಲ್ಲಿ ವಿವಿಧ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಾಗ ಮುಂದೆ ದೇಶ ಸೇವೆಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಕಾರ್ಗಿಲ್ ವಿಜಯೋತ್ಸವವು ಒಂದೇ ದಿನಕ್ಕೆ ಸೀಮಿತವಾಗದೆ ಪ್ರತಿದಿನವು ನಮ್ಮ ದೇಶಕ್ಕಾಗಿ ಹುತಾತ್ಮರಾದ ಅನೇಕ ಸೈನಿಕರ ತ್ಯಾಗವನ್ನು ಸ್ಮರಿಸಿಕೊಂಡು ನಮ್ಮನ್ನು ನಾವು ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದೇ ನಿಜವಾದ ದೇಶಪ್ರೇಮ ಎಂದು ವಿವೇಕಾನಂದ ಪದವಿ ಕಾಲೇಜಿನ ಎನ್‌ಸಿಸಿ ವಿಭಾಗದ ಸೀನಿಯರ್ ಅಂಡರ್ ಆಫೀಸರ್ ಆಗಿರುವ ಕುಮಾರಿ ಹೇಮಸ್ವಾತಿ ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ’ಕಾರ್ಗಿಲ್ ವಿಜಯೋತ್ಸವ’ […]

ಅಟಲ್ ಟಿಂಕರಿಂಗ್ ಪ್ರಯೋಗಾಲಯದ ನೋಡಲ್ ಶಿಕ್ಷಕರ, ವಿದ್ಯಾರ್ಥಿಗಳ ಕಾರ್‍ಯಾಗಾರ

ಅಟಲ್ ಟಿಂಕರಿಂಗ್ ಪ್ರಯೋಗಾಲಯದ ನೋಡಲ್ ಶಿಕ್ಷಕರ, ವಿದ್ಯಾರ್ಥಿಗಳ ಕಾರ್‍ಯಾಗಾರ

Saturday, July 23rd, 2022

2022-23 ನೇ ಶೈಕ್ಷಣಿಕ ವರ್ಷದ ಜಿಲ್ಲೆಯ ಅಟಲ್ ಟಿಂಕರಿಂಗ್ ಪ್ರಯೋಗಾಲಯದ ನೋಡಲ್ ಶಿಕ್ಷಕರ, ವಿದ್ಯಾರ್ಥಿಗಳ ಒಂದು ದಿನದ ಕಾರ್‍ಯಾಗಾರವು 22-7-2022 ರಂದು ಸಹ್ಯಾದ್ರಿ ಇಂಜೀನಿಯರಿಂಗ್ ಕಾಲೇಜು ಅಡ್ಯಾರು, ಮಂಗಳೂರು ಇಲ್ಲಿ ನಡೆದಿರುತ್ತದೆ. ಇದು ಶೈಕ್ಷಣಿಕ ವರ್ಷದ 2ನೇ ಕಾರ್‍ಯಾಗಾರವಾಗಿದೆ. ಈ ಕಾರ್‍ಯಾಗಾರದಲ್ಲಿ Exploring Circuitory and Coding with Arduino ದ ಬಗ್ಗೆ ಇಂಜೀನಿಯರಿಂಗ್ ಪದವಿ ಮುಗಿಸಿ ಡ್ರೀಮ್‌ಕಿಟ್ ಲ್ಯಾಬ್‌ನ್ನು ನಿರ್ವಹಿಸುತ್ತಿರುವ ಪದವೀಧರರು ಪ್ರಾಯೋಗಿಕವಾಗಿ ಮಾಹಿತಿ ತಿಳಿಸಿಕೊಟ್ಟರು. ಕಾರ್ಯಾಗಾರದಲ್ಲಿ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿರುತ್ತಾರೆ.

ತಾಲೂಕು ಮಟ್ಟದ ಶಟ್ಲ್-ಬ್ಯಾಡ್ಮಿಂಟನ್ ಪಂದ್ಯಾಟ

ತಾಲೂಕು ಮಟ್ಟದ ಶಟ್ಲ್-ಬ್ಯಾಡ್ಮಿಂಟನ್ ಪಂದ್ಯಾಟ

Wednesday, July 20th, 2022

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಹಯೋಗದಲ್ಲಿ ಒಳಾಂಗಣ ಆಫೀಸರ್‍ಸ್ ಕ್ಲಬ್ ಪರ್ಲಡ್ಕದಲ್ಲಿ ನಡೆದ ತಾಲೂಕು ಮಟ್ಟದ ಶಟ್ಲ್-ಬ್ಯಾಡ್ಮಿಂಟನ್ ಪಂದ್ಯಾಟದ ಉದ್ಘಾಟನೆ ನೆರವೇರಿಸಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಲೋಕೇಶ್ ಎಸ್. ಆರ್ ಅವರು ಕ್ರೀಡಾ ಮನೋಭಾವ ವ್ಯಕ್ತಿ ವಿಕಾಸದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಸೋಲು-ಗೆಲುವುಗಳನ್ನು ಸಮಾನ ಮನಸ್ಕತೆಯಿಂದ ಸ್ವೀಕರಿಸುವ ಗುಣ ಕ್ರೀಡೆಯಲ್ಲಿ ಮನ್ನಡೆಯಲು ಸಹಕಾರಿಯಾಗಲಿದೆ ಎಂದರು. ಪಂದ್ಯಾಟದ ಸಭಾಧ್ಯಕ್ಷತೆ ವಹಿಸಿ ಶಾಲಾ ಅಧ್ಯಕ್ಷರಾದ ಶ್ರೀಯುತ ರಮೇಶ್ಚಂದ್ರ ಇವರು ಕ್ರೀಡಾ ಕ್ಷೇತ್ರದಲ್ಲಿ ನಿರಂತರತೆ […]

ಶೈಕ್ಷಣಿಕ ಸಂದರ್ಶನ

ಶೈಕ್ಷಣಿಕ ಸಂದರ್ಶನ

Monday, July 18th, 2022

ಶಾಲಾ ವೃತ್ತಿಕಾ ವಿಜ್ಞಾನ ಸಂಘದ ವತಿಯಿಂದ ಆಯೋಜಿಸಲಾದ ಶೈಕ್ಷಣಿಕ ಸಂದರ್ಶನದ ಅಂಗವಾಗಿ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿಗೆ ಶಾಲಾ ಹತ್ತನೇ ತರಗತಿ ವಿದ್ಯಾರ್ಥಿಗಳು ಭೇಟಿ ನೀಡಿದರು. ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರಾದ ಚಂದ್ರಕುಮಾರ್ ಇವರು ಕಾಲೇಜು ಶೈಕ್ಷಣಿಕ ಸ್ವರೂಪ ಹಾಗೂ ಆಸಕ್ತಿದಾಯಕ ವಿಷಯ ಆಯ್ಕೆಗಳ ಬಗ್ಗೆ ಮಾಹಿತಿ ನೀಡಿದರು. ಅನಂತರ ಕಾಲೇಜಿನ ಕಂಪ್ಯೂಟರ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಅಟೋಮೊಬೈಲ್ ಪ್ರಯೋಗ ಶಾಲೆಗಳಿಗೆ ಭೇಟಿಯನ್ನಿತ್ತ ವಿದ್ಯಾರ್ಥಿಗಳಿಗೆ ಆಯಾ ವಿಭಾಗದ ಪ್ರಾಧ್ಯಾಪಕರು ಪ್ರಯೋಗಾಲಯದ ಪ್ರಾಯೋಗಿಕ ಅನ್ವಯಗಳ ಬಗ್ಗೆ ಮಾಹಿತಿ ನೀಡಿದರು.

ಗುರುನಮನ-ಅಭಿನಂದನಾ ಕಾರ್ಯಕ್ರಮ

ಗುರುನಮನ-ಅಭಿನಂದನಾ ಕಾರ್ಯಕ್ರಮ

Monday, July 18th, 2022

ದೈಹಿಕ ಶಿಕ್ಷಕನಾಗಿ ಹತ್ತಾರು ವರುಷಗಳಲ್ಲಿ ನಾನು ತರಬೇತುಗೊಳಿಸಿದ ವಿದ್ಯಾರ್ಥಿಗಳು ರಾಷ್ಟ್ರ-ಅಂತಾರಾಷ್ಟ್ರ ಮಟ್ಟಗಳಲ್ಲಿ ಗುರುತಿಸಿಕೊಂಡಿದ್ದಾರೆ. ನಾವು ನಮ್ಮಲ್ಲಿ ರೂಢಿಸಿಕೊಳ್ಳುವ ಶಿಸ್ತು-ಸಮಯ ಪ್ರಜ್ಞೆ,ವೃತ್ತಿ ಕಾಳಜಿ ಬದುಕನ್ನು ಅರ್ಥಪೂರ್ಣವಾಗಿಸುತ್ತದೆ – ದಯಾನಂದ ರೈ ಕೋರ್ಮಂಡ. ವಿವೇಕಾನಂದ ಕನ್ನಡ ಶಾಲಾ ಮಹತಿ-ಕನ್ನಡ ಸಂಘದ ವತಿಯಿಂದ 10 ನೇ ತರಗತಿಯ ಮಕ್ಕಳು ಆಯೋಜಿಸಿದ ’ಗುರು-ಅಭಿನಂದನೆ’ ಸ್ವೀಕರಿಸಿ ಶ್ರೀಯುತರು ನನ್ನ ಬದುಕಿನಲ್ಲಿ ಈ ದಿನ ಮರೆಯಲಾಗದ ದಿನ. ನನ್ನ ಮನೆಗೆ ಬಂದು ಅಭಿನಂದಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ನನ್ನ ಮನೆ-ಮನ ಪಾವನವಾದ ಅನುಭವವಾಗುತ್ತಿದೆ ಎಂದರು. ಬೆಟ್ಟಂಪಾಡಿಯ ನವೋದಯ […]

ಗುರುಪೂರ್ಣಿಮೆ -ಗುರುವಂದನೆ

ಗುರುಪೂರ್ಣಿಮೆ -ಗುರುವಂದನೆ

Saturday, July 16th, 2022

ಗುರುಪೂರ್ಣಿಮೆಯ ಅಂಗವಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಸಾಂಸ್ಕೃತಿಕ ಸಮನ್ವಯ-ಸಮಾಜ ವಿಜ್ಞಾನ ಸಂಘದಿಂದ ’ಗುರುವಂದನಾ’ ಕಾರ್ಯಕ್ರಮ ನೆರವೇರಿತು. ವಿವೇಕಾನಂದ ಪ್ರಶಿಕ್ಷಣ ಮಹಾವಿದ್ಯಾಲಯದ ದ್ವಿತೀಯ ವರ್ಷದ ಬಿಇಡಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಗುರುವಂದನಾ ಕಾರ್ಯಕ್ರಮವನ್ನು ಶಾಲಾ 9 ನೇ ತರಗತಿಯ ವಿದ್ಯಾರ್ಥಿಗಳು ಆಯೋಜಿಸಿದ್ದರು. ಪ್ರಶಿಕ್ಷಣ ವಿದ್ಯಾರ್ಥಿಗಳು ಗುರುಪೂರ್ಣಿಮೆಯ ಬಗೆಗಿನ ಹಾಡು, ನೃತ್ಯ, ಭಾಷಣ, ನೃತ್ಯರೂಪಕಗಳನ್ನು ಒಳಗೊಂಡಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಅನಂತರ ಮಕ್ಕಳು ಹೂಗುಚ್ಚ ಹಾಗೂ ಅಭಿನಂದನಾ ಪತ್ರ ನೀಡಿ ಸಮೂಹ ಗೀತೆ ಹಾಡಿದರು. ಶಾಲಾ ಆಡಳಿತ ಮಂಡಳಿ […]

ಜಿಲ್ಲಾ ಶೈಕ್ಷಣಿಕ ಸಹಮಿಲನ 2022-23

ಜಿಲ್ಲಾ ಶೈಕ್ಷಣಿಕ ಸಹಮಿಲನ 2022-23

Thursday, July 14th, 2022

ಜಿಲ್ಲಾ ಶೈಕ್ಷಣಿಕ ಸಹಮಿಲನ 2022-23 ಕಾರ್ಯಕ್ರಮವು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಆಯೋಜನೆಗೊಂಡಿತ್ತು.  ಕಾರ್ಯಕ್ರಮ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಅವರು ಉದ್ಘಾಟಿಸಿದರು. 2021-22ನೇ ಸಾಲಿನ SSLC ಮತ್ತು PUC ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಮತ್ತು ಶಾಲಾಮಟ್ಟದಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.  

ಅಟಲ್ ಪ್ರಯೋಗಾಲಯ ನಿರ್ವಹಣಾ ಕಾರ್‍ಯಾಗಾರ

ಅಟಲ್ ಪ್ರಯೋಗಾಲಯ ನಿರ್ವಹಣಾ ಕಾರ್‍ಯಾಗಾರ

Thursday, June 30th, 2022

ಅಟಲ್ ಪ್ರಯೋಗಾಲಯ ನಿರ್ವಹಣಾ ಕಾರ್‍ಯಾಗಾರ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಂಗಳೂರು ಮತ್ತು ಶ್ರೀ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು- ಇವರ ಸಹಯೋಗದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ನಡೆದ ಅಟಲ್ ಟಿಂಕರಿಂಗ್ ನೋಡಲ್ ಶಿಕ್ಷಕರ ಕಾರ್ಯಾಗಾರದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸೃಜನ-ಅಟಲ್ ಟಿಂಕರಿಂಗ್ ಪ್ರಯೋಗಾಲಯದ ನೋಡಲ್ ಶಿಕ್ಷಕರಾದ ಪುಷ್ಪಾವತಿ ಹಾಗೂ ಕೀರ್ತನ್ ಭಾಗವಹಿಸಿದರು. ಈ ಸಂದರ್ಭ ಟಿಂಕರಿಂಗ್ ಪ್ರಯೋಗಾಲಯದ ನಿರ್ವಹಣೆ, ತಾಂತ್ರಿಕ ಪರಿಚಯ, PFMS(Public Financial Management System)ನ ಕುರಿತು ಮಾಹಿತಿಯನ್ನು […]

ಶಾಲಾ ಮಂತ್ರಿಮಂಡಲ ರಚನೆ

ಶಾಲಾ ಮಂತ್ರಿಮಂಡಲ ರಚನೆ

Thursday, June 30th, 2022

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 2022-23 ರ ಶೈಕ್ಷಣಿಕ ವರ್ಷಕ್ಕೆ ಶಾಲಾ ಮಂತ್ರಿಮಂಡಲದ ರಚನೆ ಮತ್ತು ಆಯ್ಕೆಯಾದ ಮಂತ್ರಿಗಳಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಆಶಾ ಬೆಳ್ಳಾರೆ ಮತ್ತು ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಶ್ರೀಮತಿ ನಳಿನಿ ವಾಗ್ಲೆ ಪ್ರತಿಜ್ಞೆಯನ್ನು ಬೋಧಿಸಿದರು. ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ನಾಯಕಿಯಾಗಿ ಧಾತ್ರಿ ಆರ್ ರೈ, ಉಪನಾಯಕಿಯಾಗಿ ಅವನಿ ಬೆಳ್ಳಾರೆ ಹಾಗೂ ಪ್ರಾಥಮಿಕ ವಿಭಾಗದ ನಾಯಕನಾಗಿ ದವನ್ ಡಿ ಎ, ಉಪನಾಯಕನಾಗಿ ಧನುಷ್ ಡಿ ಜಿ ಆಯ್ಕೆಯಾಗಿ […]

ರಕ್ಷಕ-ಶಿಕ್ಷಕ ಸಮಿತಿ ರಚನೆ

ರಕ್ಷಕ-ಶಿಕ್ಷಕ ಸಮಿತಿ ರಚನೆ

Thursday, June 30th, 2022

‘ಪೋಷಕರು ಶಾಲೆಯ ಅವಿಭಾಜ್ಯ ಅಂಗ’ – ಶ್ರೀ ಕೃಷ್ಣ ಭಟ್ 2022-23 ನೇ ಶೈಕ್ಷಣಿಕ ಸಾಲಿನ ರಕ್ಷಕ-ಶಿಕ್ಷಕ ಸಮಿತಿಯ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಸಭೆಯು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಈ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಕ್ಷಕ-ಶಿಕ್ಷಕ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಕೃಷ್ಣ ಭಟ್ ಮಾತನಾಡಿ ’ ಶಾಲಾ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ಮಹತ್ವವಾದುದು. ನಾವು ಯಾವುದೇ ಅಂಜಿಕೆಯಿಲ್ಲದೆ ಶಾಲಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕೆಂದು ನುಡಿದರು. ಬಳಿಕ 2022-23 ನೇ ಶೈಕ್ಷಣಿಕ ಸಾಲಿನ ರಕ್ಷಕ-ಶಿಕ್ಷಕ ಸಮಿತಿಗೆ […]

ಪೂರ್ವ ಪ್ರಾಥಮಿಕದಿಂದ 4 ನೇ ತರಗತಿವರೆಗಿನ ಪೋಷಕರ ಸಭೆ

ಪೂರ್ವ ಪ್ರಾಥಮಿಕದಿಂದ 4 ನೇ ತರಗತಿವರೆಗಿನ ಪೋಷಕರ ಸಭೆ

Tuesday, June 21st, 2022

ಶಾಲೆ ಮತ್ತು ಪೋಷಕರ ನಡುವೆ ಇರುವ ಉತ್ತಮ ಬಾಂಧವ್ಯ ಮಗುವಿನ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಪೋಷಕರಾದ ನಮ್ಮಲ್ಲಿ ಯಾವಾಗಲೂ ಶಾಲೆ ಹಾಗೂ ಶಿಕ್ಷಕರ ಬಗ್ಗೆ ನಂಬಿಕೆ ಹಾಗೂ ಧೈರ್ಯವಿರಬೇಕು – ಗೋಪಾಲಕೃಷ್ಣ, ಕನ್ನಡ ಶಿಕ್ಷಕರು ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ’ಸಾನಿಧ್ಯ’ ಕಲಿಕಾ ಹಾದಿಯ ಪೋಷಕತ್ವ ವೇದಿಕೆಯಿಂದ ಪೂರ್ವ ಪ್ರಾಥಮಿಕದಿಂದ 4 ನೇ ತರಗತಿವರೆಗಿನ ಪೋಷಕರ ಸಭೆ ನಡೆದಿದ್ದು ಶ್ರೀಯುತರು ಅಭ್ಯಾಗತರಾಗಿ ಭಾಗವಹಿಸಿ ಪೋಷಕರಿಗೆ ಮಕ್ಕಳ ಕುರಿತು ಇರಬೇಕಾದ ಕಾಳಜಿಯ […]

8 ರಿಂದ 10 ನೇ ತರಗತಿಯವರೆಗಿನ ಪೋಷಕರ ಸಭೆ

8 ರಿಂದ 10 ನೇ ತರಗತಿಯವರೆಗಿನ ಪೋಷಕರ ಸಭೆ

Tuesday, June 21st, 2022

ನಮ್ಮ ಮಗು ಕಲಿಯುತ್ತಿರುವ ವಿದ್ಯಾಸಂಸ್ಥೆಯ ಬಗ್ಗೆ ನಮಗೆ ಅಭಿಮಾನವಿರಬೇಕು – ಪ್ರೊ.ವಿ.ಜಿ.ಭಟ್, ಪ್ರಾಂಶುಪಾಲರು ವಿವೇಕಾನಂದ ಪದವಿ ಕಾಲೇಜು ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ’ಸಾನಿಧ್ಯ’ ಕಲಿಕಾ ಹಾದಿಯ ಪೋಷಕತ್ವ ವೇದಿಕೆಯಿಂದ 8ನೇ ತರಗತಿಯಿಂದ 10 ನೇ ತರಗತಿಯವರೆಗಿನ ಪೋಷಕರ ಸಭೆ ನಡೆದಿದ್ದು ಅಭ್ಯಾಗತರಾಗಿ ಆಗಮಿಸಿದ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿ.ಜಿ.ಭಟ್ ಮಾತನಾಡಿ ಭಾಷಾ ಕಲಿಕೆ ಸೃಜನಶೀಲತೆಯಿಂದ ಕೂಡಿರಬೇಕು. ಮಕ್ಕಳಲ್ಲಿ ಸೃಜನಶೀಲತೆಯ ಪ್ರಜ್ಞೆ ಬೆಳೆಸಲು ಪೋಷಕರಾದ ನಾವು ಒಂದಷ್ಟು ವಿಚಾರಗಳನ್ನು ಕಲಿತುಕೊಳ್ಳಬೇಕು ಹಾಗೂ ಶಾಲೆಯ ಜೊತೆ […]

5 ರಿಂದ 7 ನೇ ತರಗತಿಯವರೆಗಿನ ಪೋಷಕರ ಸಭೆ

5 ರಿಂದ 7 ನೇ ತರಗತಿಯವರೆಗಿನ ಪೋಷಕರ ಸಭೆ

Tuesday, June 21st, 2022

ಮಗುವಿನ ಕಲಿಕೆಯಲ್ಲಿ ಸಣ್ಣ-ಪುಟ್ಟ ವಿಷಯಗಳ ಕಡೆಗೆ ನಾವು ನೀಡುವ ಗಮನವು ಮಹತ್ತರ ಪಾತ್ರ ವಹಿಸುತ್ತದೆ -ಡಾ|ಶೋಭಿತಾ ಸತೀಶ್, ಪ್ರಾಂಶುಪಾಲರು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ಪುತ್ತೂರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ’ಸಾನಿಧ್ಯ’ ಕಲಿಕಾ ಹಾದಿಯ ಪೋಷಕತ್ವ ವೇದಿಕೆಯಿಂದ ೫ನೇ ತರಗತಿಯಿಂದ ೭ನೇ ತರಗತಿಯವರೆಗಿನ ಪೋಷಕರ ಸಭೆ ನಡೆದಿದ್ದು ಶ್ರೀಯುತರು ಅಭ್ಯಾಗತರಾಗಿ ಆಗಮಿಸಿ ಮಾತನಾಡಿ ಮಗುವಿನ ಸಮಗ್ರ ಬೆಳವಣಿಗೆಯಲ್ಲಿ ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳು ಸಮಾನ ಮಹತ್ವವನ್ನು ಹೊಂದಿದ್ದು ಬದುಕಿನ ಸರ್ವಾಂಗೀಣ ವಿಕಾಸಕ್ಕೆ ಪೂರಕವಾಗಿರುವ ಬಗ್ಗೆ ತಿಳಿಸಿದರು. ದೀಪ […]

ಸಾಧನಾಭಿವಂದನಾ ಕಾರ್ಯಕ್ರಮ 

ಸಾಧನಾಭಿವಂದನಾ ಕಾರ್ಯಕ್ರಮ 

Thursday, June 16th, 2022

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇಲ್ಲಿ 2021-22 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ನಿವೃತ್ತ ಶಿಕ್ಷಕರಿಗೆ ಅಭಿವಂದನಾ ಸಮಾರಂಭ ಸಾಧನಾಭಿವಂದನಾ ಜೂನ್ 11 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ ಬೇಡ, ಸ್ವಾಭಿಮಾನದಿಂದ ಕನ್ನಡವನ್ನು ಕಲಿತು ಉಳಿಸಬೇಕೆಂದರು. ಮುಖ್ಯ ಅತಿಥಿಯಾಗಿದ್ದ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಸಂಚಾಲಕ ಮಣಿಲ ಮಹಾದೇವ ಶಾಸ್ತ್ರೀ ಮಾತನಾಡಿ, ಬಡವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ […]

ಶಾಲಾ ಚುನಾವಣೆ 2022-23

ಶಾಲಾ ಚುನಾವಣೆ 2022-23

Saturday, June 4th, 2022

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇಲ್ಲಿ ದಿನಾಂಕ 4-6-2022 ನೇ ಶನಿವಾರದಂದು 2022-23 ನೇ ಶೈಕ್ಷಣಿಕ ಸಾಲಿನ ಚುನಾವಣೆಯು ನಡೆಯಿತು.ಚುನಾವಣೆಯನ್ನು ಸಾರ್ವತ್ರಿಕ ಚುನಾವಣೆಯ ರೀತಿಯಲ್ಲೇ ನಡೆಸಲಾಯಿತು. ಕೈ ಗುರುತು, ಬ್ಯಾಲೆಟ್ ಪೇಪರ್‌ಗಳನ್ನು ಬಳಸಲಾಯಿತು. ಪ್ರೌಢಶಾಲಾ ವಿಭಾಗದಲ್ಲಿ ಧಾತ್ರಿ ರೈ ನಾಯಕಿಯಾಗಿ, ಅವನಿ ಬೆಳ್ಳಾರೆ ಉಪನಾಯಕಿಯಾಗಿ ಅತ್ಯಧಿಕ ಮತಗಳಿಂದ ಆಯ್ಕೆಯಾದರು. ಪ್ರಾಥಮಿಕ ಶಾಲಾ ವಿಭಾಗದಲ್ಲಿ ದವನ್ ನಾಯಕನಾಗಿ, ಧನುಷ್ ಉಪನಾಯಕನಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಶಿಕ್ಷಕರಾದ ಶ್ರೀ ರಾಮನಾಯ್ಕ ಹಾಗೂ ಚಂದ್ರಶೇಖರ ಸುಳ್ಯಪದವುರವರು ಕಾರ್ಯನಿರ್ವಹಿಸಿದರು. ಎಲ್ಲಾ ಶಿಕ್ಷಕ ವೃಂದದವರು ಚುನಾವಣಾ […]

ಎಸ್‌ಎಸ್‌ಎಲ್‌ಸಿ 2022 - ವಿದ್ಯಾರ್ಥಿಗಳಿಗೆ ಅಭಿನಂದನೆಗಳು

ಎಸ್‌ಎಸ್‌ಎಲ್‌ಸಿ 2022 – ವಿದ್ಯಾರ್ಥಿಗಳಿಗೆ ಅಭಿನಂದನೆಗಳು

Friday, May 20th, 2022
ಕನ್ನಡ ಮನ – ಮಾತು - ಮಾಧ್ಯಮ - ಒಂದು ಅವಲೋಕನ ಹಾಗೂ 10ನೇ ತರಗತಿ ಮಕ್ಕಳ ದೀಪ ಪ್ರದಾನ ಕಾರ್ಯಕ್ರಮ

ಕನ್ನಡ ಮನ – ಮಾತು – ಮಾಧ್ಯಮ – ಒಂದು ಅವಲೋಕನ ಹಾಗೂ 10ನೇ ತರಗತಿ ಮಕ್ಕಳ ದೀಪ ಪ್ರದಾನ ಕಾರ್ಯಕ್ರಮ

Thursday, April 14th, 2022

ಶಾಲಾ ಕನ್ನಡ ಸಂಘ ‘ಮಹತಿ’ಯ ಆಶ್ರಯದಲ್ಲಿ ಕನ್ನಡಮನೆ-ಮಾತು-ಮಾಧ್ಯಮ ವಿಷಯಾಧಾರಿತ ಸಂವಾದ ಕಾರ್ಯಕ್ರಮಕ್ಕೆ ಸಾಕ್ಷಿಯಾದವರು ಪ್ರಸಕ್ತ ಶೈಕ್ಷಣಿಕ ಸಾಲಿನ 9 ಹಾಗೂ 10ನೇ ತರಗತಿ ಮಕ್ಕಳು ಹಾಗೂ ಅವರ ಪೋಷಕರು, ಮುಖ್ಯ ಅಭ್ಯಾಗತರಾಗಿ ಆಹ್ವಾನಿತರಾದ ಪದಶ್ರೀ ಪುರಸ್ಕೃತ, ಆಧುನಿಕ ಭಗೀರಥ ಎಂದೇ ಕರೆಯಲ್ಪಡುತ್ತಿರುವ ಕೃಷಿ ಕ್ಷೇತ್ರದ ಸರಳ ಸಜ್ಜನಿಕೆಯ ಸಾಧಕ ಶ್ರೀಯುತ ಮಹಾಲಿಂಗ ನಾಯ್ಕ ಅವರು ಗೌರವ ಸನ್ಮಾನ ಸ್ವೀಕರಿಸಿ “ನನಗೆ ವಿಧ್ಯಾಭ್ಯಾಸವಿಲ್ಲ. ನನ್ನ ಕೆಲಸವನ್ನು ಹಳ್ಳಿಯಿಂದ ದಿಲ್ಲಿಯವರೆಗಿನ ಜನರು ಗುರುತಿಸಿ ಪ್ರಶಸ್ತಿ ನೀಡಿದ್ದಾರೆ. ಇದು ನನಗೆ ದೊರೆತ […]

'ಧ್ವನಿ ಸಂಪನ್ಮೂಲಗಳ ಪರಿಣಾಮಕಾರಿ ಅನ್ವಯ' ರಜಾ - ಮಜಾ ಅಂಚೆ ಕಾರ್ಡ್ ಬರಹ.....

‘ಧ್ವನಿ ಸಂಪನ್ಮೂಲಗಳ ಪರಿಣಾಮಕಾರಿ ಅನ್ವಯ’ ರಜಾ – ಮಜಾ ಅಂಚೆ ಕಾರ್ಡ್ ಬರಹ…..

Monday, February 28th, 2022

ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ -ಧಾರವಾಡ – ಇದೊಂದು ಕ್ರಿಯಾಶೀಲ, ಪ್ರಾಯೋಗಿಕ ಅನ್ವೇಷಣಾತ್ಮಕ ಶೈಕ್ಷಣಿಕ ಗುಣಮಟ್ಟಕ್ಕೆ ಮಕ್ಕಳನ್ನು ಪ್ರೇರೇಪಿಸುತ್ತಿರುವ ಸಂಸ್ಥೆಯಾಗಿದೆ. ಇದರ ಆರಂಭ ಹಾಗೂ ಪೂರಣ ಅನ್ನೋದು ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಹಂತಕ್ಕೆ ಜೋಡಿಕೊಂಡಿರುವ ಯೋಜನೆಗಳಾಗಿವೆ. ಕರ್ನಾಟಕದಾದ್ಯಂತ ಆಸಕ್ತ ಹಾಗೂ ಪ್ರಯೋಗಾತ್ಮಕ ಯೋಜನೆಗಳನ್ನು ಜೋಡಿಸಿ ಕೊಂಡಿರುವ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಯೋಜನೆಯ ಸಹಕಾರ- ಸಹಭಾಗಿತ್ವ ನೀಡುತ್ತಿರುವ ಧ್ವನಿ ಸಂಪನ್ಮೂಲ ಕೇಂದ್ರವು ಒಂದರಿಂದ ಏಳನೇ ತರಗತಿಯ ಪಠ್ಯ ವಿಷಯಗಳಿಗೆ ಸಂಪನ್ಮೂಲಗಳನ್ನು ಒದಗಿಸುತ್ತಿದೆ. ಈ ಸಂಪನ್ಮೂಲಗಳು ಉತ್ತಮ ಗುಣಮಟ್ಟದವುಗಳಾಗಿದ್ದು, […]

ಪೋಷಕರ ಸಭೆ

ಪೋಷಕರ ಸಭೆ

Monday, February 28th, 2022

ದಿನಾಂಕ 18 -2 -2022 ಶನಿವಾರದಂದು ಪ್ರಸಕ್ತ ಶೈಕ್ಷಣಿಕ ಸಾಲಿನ ನಾಲ್ಕನೇ ಹಂತದ ಪೋಷಕರ ಸಭೆ ಕರೆಯಲಾಗಿತ್ತು. FA-4 ಪರೀಕ್ಷೆಯ ಪ್ರಗತಿ ಪರಿಶೀಲನೆಗೆ ಕರೆಯಲಾದ ಸಭೆಗೆ ಕ್ಲಪ್ತ ಸಮಯಕ್ಕೆ ಬಂದು ತಮ್ಮ ಮಕ್ಕಳ ಪಠ್ಯ ಹಾಗೂ ಪಠ್ಯಪೂರಕ ಚಟುವಟಿಕೆಗಳ ಅವಲೋಕನದಲ್ಲಿ ಪೋಷಕರು ಭಾಗವಹಿಸಿದರು. ವಿಭಾಗಶಃ ಕರೆಯಲಾದ ಈ ಸಭೆ ಆಯಾ ತರಗತಿಯಲ್ಲಿ ಮಕ್ಕಳು, ಪೋಷಕರು ಹಾಗೂ ಶಿಕ್ಷಕರ ಸಮ್ಮುಖದಲ್ಲಿ ನಡೆಯಿತು.1ರಿಂದ 9ನೇ ತರಗತಿವರೆಗೆ ಮಕ್ಕಳ ಪೋಷಕರು ವ್ಯಕ್ತಪಡಿಸಿದ ಅಭಿಪ್ರಾಯ ಸಲಹೆಗಳು ಈ ಕೆಳಗಿನಂತಿವೆ. ಅಭಿಪ್ರಾಯ ???? ಒಂದೊಂದು […]

'ವೃತಿಕಾ' ವಿಜ್ಞಾನ ಸಂಘದಿಂದ - ʼನಮ್ಮ ಶಾಲೆ - ಹಸಿರು ಶಾಲೆʼ ಕಾರ್ಯಕ್ರಮ

‘ವೃತಿಕಾ’ ವಿಜ್ಞಾನ ಸಂಘದಿಂದ – ʼನಮ್ಮ ಶಾಲೆ – ಹಸಿರು ಶಾಲೆʼ ಕಾರ್ಯಕ್ರಮ

Tuesday, February 22nd, 2022

ಶಾಲಾ ವೃತಿಕಾ ವಿಜ್ಞಾನ ಸಂಘದ ವತಿಯಿಂದ ಪ್ರಸಕ್ತ ಶೈಕ್ಷಣಿಕ ಯೋಜನೆಗಳಲ್ಲಿ ಒಂದಾದ ‘ಹಸಿರು – ಶಾಲಾ’ ಪರಿಕಲ್ಪನೆಗೆ ವರ್ಷಾರಂಭದಲ್ಲಿ ಚಾಲನೆ ದೊರೆತಿತ್ತು. ಈ ಹಿಂದೆ ಮಕ್ಕಳು ತಮ್ಮ ಹುಟ್ಟುಹಬ್ಬದಂದು ತರಗತಿ ಗ್ರಂಥಾಲಯಕ್ಕೆ ಒಂದು ಪುಸ್ತಕ ನೀಡುವ ಪರಿಪಾಠವಿತ್ತು. ಈ ಶೈಕ್ಷಣಿಕ ವರ್ಷ ಮಗು ತನ್ನ ಹುಟ್ಟು ಹಬ್ಬದಂದು ಶಾಲಾ ವೃತಿಕಾ ವಿಜ್ಞಾನ ಸಂಘಕ್ಕೆ ಒಂದು ಗಿಡ ನೀಡಿ ಹಸಿರು ಶಾಲೆ ಯೋಜನೆಗೆ ಕೈಜೋಡಿಸುವಂತೆ ಮನವಿ ಮಾಡಲಾಗಿತ್ತು. ಅದರಂತೆ ಕೆಲವು ಪೋಷಕರು ಹೂವು, ತರಕಾರಿ, ಅಡಿಕೆ, ಬಾಳೇ ಸಸಿಗಳನ್ನು […]

ವಿದ್ಯಾಧ್ವನಿ - ಶೈಕ್ಷಣಿಕ ಅರಿವು

ವಿದ್ಯಾಧ್ವನಿ – ಶೈಕ್ಷಣಿಕ ಅರಿವು

Wednesday, February 16th, 2022

ಶಾಲಾ ಶೈಕ್ಷಣಿಕ ಯೋಜನಾ ಅರಿವು – ವೇದಿಕೆ ವತಿಯಿಂದ ಪ್ರಸಕ್ತ ಸಾಲಿನ 10 ನೇ ತರಗತಿಯ ಮಕ್ಕಳಿಗೆ ಮುಂದಿನ ಹಂತದ ಶೈಕ್ಷಣಿಕ ವಿಷಯ ಆಯ್ಕೆಯ ಬಗ್ಗೆ ಮಾರ್ಗದರ್ಶನ ನೀಡಲಾಯಿತು. ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನಿಂದ ಬಂದಂತಹ ಪ್ರಾಧ್ಯಾಪಕ ವೃಂದದವರಿಂದ ಪದವಿಪೂರ್ವ ಹಾಗೂ ತಾಂತ್ರಿಕ ತರಗತಿ ಸಂಬಂಧಿ ಆಯ್ಕಾ ವಿಷಯಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಕಾರ್ಯಾಗಾರದಲ್ಲಿ ಮುಂದಿನ ಹಂತದ ವೃತ್ತಿಪರ ಉನ್ನತ ವಿದ್ಯಾಭ್ಯಾಸದ ಬಗ್ಗೆಯೂ ಮಾಹಿತಿ ನೀಡಲಾಯಿತು. ಶಾಲಾ ಸಹ ಶಿಕ್ಷಕ ವೃಂದದವರೂ […]

ಸಾನಿಧ್ಯ - ಸಹ ಸ್ಪಂದನ ಯೋಜನೆ

ಸಾನಿಧ್ಯ – ಸಹ ಸ್ಪಂದನ ಯೋಜನೆ

Wednesday, February 16th, 2022

ಶಾಲಾ 8 ನೇ ತರಗತಿಯ ವಿದ್ಯಾರ್ಥಿಯಾದ ಧನುಷ್ ಸುಮಾರು 3 ತಿಂಗಳಿಂದ ಮೆದುಳು ಜ್ವರದಿಂದ ಅಸ್ವಸ್ಥ ಸ್ಥಿತಿಯಲ್ಲಿ ಇದ್ದು ಈತನ ಚಿಕಿತ್ಸೆಯ ವೆಚ್ಚಕ್ಕಾಗಿ ಶಾಲಾ ವತಿಯಿಂದ ಪೋಷಕರಲ್ಲಿ ಆರ್ಥಿಕ ರೂಪದ ಸಹಕಾರ ಕೇಳಲಾಗಿತ್ತು. ಪೂರ್ವ ಪ್ರಾಥಮಿಕದಿಂದ ಹತ್ತನೇ ತರಗತಿಯ ಮಕ್ಕಳ ಪೋಷಕರು ತತ್ಸಬಂಧಿ ವಿಷಯಕ್ಕೆ ನೀಡಿದ ಸ್ಪಂದನ ಸಹಕಾರ ಸದಾ ಸ್ಮರಣೀಯವಾಗಿದ್ದು, ಪ್ರತಿ ತರಗತಿಯಿಂದ ಸಂಗ್ರಹವಾದ ಹಣದ ಮೊತ್ತದ ವಿವರವನ್ನು ಆಡಳಿತ ಮಂಡಳಿ, ಪೋಷಕರಿಗೆ ನೀಡಲಾಯ್ತು. ತರಗತಿಗಳ ಸಂಗ್ರಹದ ಮೊತ್ತ, ವಿವೇಕಾನಂದ ವಿದ್ಯಾವರ್ಧಕ ಸಂಘ, ಶಾಲಾ ಆಡಳಿತ […]

ಪುತ್ತೂರಿನಲ್ಲಿ ಗಮಕ ಕಲಾ ಪರಿಷತ್ತಿನ ಕಾರ್ಯ ಚಟುವಟಿಕೆ ಆರಂಭ

ಪುತ್ತೂರಿನಲ್ಲಿ ಗಮಕ ಕಲಾ ಪರಿಷತ್ತಿನ ಕಾರ್ಯ ಚಟುವಟಿಕೆ ಆರಂಭ

Wednesday, February 16th, 2022

ಕರ್ನಾಟಕ ಗಮಕ ಕಲಾ ಪರಿಷತ್ತಿನ ಪುತ್ತೂರು ತಾಲೂಕು ಘಟಕದ ಪದಗ್ರಣ ಸಮಾರಂಭವು ನಡೆಯಿತು. ಇಲ್ಲಿನ ತೆಂಕಿಲ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 2021- 22 ನೆ ಸಾಲಿನ ಗಮಕ ಕಲಾ ಪರಿಷತ್ತು ಪುತ್ತೂರು ಘಟಕದ ನೂತನ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರವು ನೆರವೇರಿತು.ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಭಾಸ್ಕರ ಬಾರ್ಯ.ಉಪಾಧ್ಯಕ್ಷರಾಗಿ ಈಶ್ವರ ಭಟ್ ಗುಂಡ್ಯಡ್ಕ. ಕಾರ್ಯದರ್ಶಿಯಾಗಿ ಆಶಾ ಬೆಳ್ಳಾರೆ. ಉಪ ಕಾರ್ಯದರ್ಶಿಯಾಗಿ ಅಪೂರ್ವಗುಂಡ್ಯಡ್ಕ. ಸಂಚಾಲಕರಾಗಿ ಹರಿಣಾಕ್ಷಿ ಜೆ ಶೆಟ್ಟಿ. ಕಾರ್ಯಕ್ರಮ ಸಂಯೋಜಕರಾಗಿ ಶಾಲಾ ಸಹ ಶಿಕ್ಷಕರಾದ ವೀಣಾ ಸರಸ್ವತಿ, ಚಂದ್ರಶೇಖರ್, […]

'ಸಾನಿಧ್ಯ'  : ಮನೆ - ಮನ ಭೇಟಿಗೊಂದು ವೇದಿಕೆಗೆ ಚಾಲನೆ

‘ಸಾನಿಧ್ಯ’  : ಮನೆ – ಮನ ಭೇಟಿಗೊಂದು ವೇದಿಕೆಗೆ ಚಾಲನೆ

Wednesday, February 16th, 2022

“ಸಮಯವಿದ್ದಾಗ ಆಪ್ತರನ್ನು ಕಾಣಲು ಮಾತನಾಡಿಸಲು ಹೋಗುವ ಜನರ ಬಗೆಯೊಂದಾದರೆ, ಸಮಯ ಹೊಂದಿಸಿಕೊಂಡು ಸಹಸಂಬಂಧ ಗಟ್ಟಿಗೊಳಿಸುವವರು ಒಂದಷ್ಟು ಮಂದಿ. ನಮ್ಮ ಶಾಲೆಯಿಂದ ಮಕ್ಕಳ ಭೇಟಿ ಈ ಉದ್ದೇಶದಿಂದ ನಡೆಯಬೇಕಿದೆ. ಶಾಲೆ ಸಮಾಜದ ಬಹುಮುಖ್ಯ ಅಂಗ. ನಮ್ಮಿ ಶಾಲೆಯಲ್ಲಿ ಕಲಿತು ತೆರಳುವ ಮಕ್ಕಳು ಇಲ್ಲಿನ ಕಾರ್ಯಚಟುವಟಿಕೆಗಳ ಪ್ರತಿಬಿಂಬದಂತೆ. ವಿದ್ಯಾರ್ಥಿಯ ಜೀವನದಲ್ಲಿ ಪೋಷಕರೂ, ಶಿಕ್ಷಕರೂ, ಸಮಾಜವೂ ಪ್ರಮುಖ ಪಾತ್ರವಹಿಸುತ್ತದೆ. ಪ್ರಸ್ತುತ ದಿನಗಳಲ್ಲಿ ಮಕ್ಕಳನ್ನು ಗಮನಿಸುತ್ತಾ, ಅವರ ಪಠ್ಯ ಮತ್ತು ಪಠ್ಯಪೂರಕ ಚಟುವಟಿಕೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ. ಈ ದಿಶೆಯಿಂದ […]

ರಥಸಪ್ತಮಿ ಕಾರ್ಯಕ್ರಮ ಆಚರಣೆ

ರಥಸಪ್ತಮಿ ಕಾರ್ಯಕ್ರಮ ಆಚರಣೆ

Thursday, February 10th, 2022

ರಥಸಪ್ತಮಿಯಂದು ನಮ್ಮ ಮೈಸೋಕುವ ಬಿಸಿಲಿಗೆ ವಿಶೇಷ ಶಕ್ತಿಯಿದ್ದು ಇದು ಶಾರೀರಿಕ ಸುಸ್ಥಿತಿಗೆ ಸಹಕಾರಿಯಾಗಿದೆ. ಆದ್ದರಿಂದ ಈ ದಿನದ ಸೂರ್ಯ ನಮಸ್ಕಾರಕ್ಕೆ ವಿಶೇಷ ಪ್ರಾಶಸ್ತ್ಯವಿರುತ್ತದೆ – ವಸಂತ ಸುವರ್ಣ, ಶಾಲಾ ಸಂಚಾಲಕರು ವಿವೇಕಾನಂದ ಕನ್ನಡ ಶಾಲೆ ತೆಂಕಿಲದಲ್ಲಿ ಸೂರ್ಯ ನಮಸ್ಕಾರ ಅಭ್ಯಾಸ ಸಪ್ತಾಹದ ಉದ್ಘಾಟನೆ ಮತ್ತು ಸಮಾರೋಪ ಕಾರ್ಯಕ್ರಮ ನಡೆಯಿತು. ಶಾಲಾ ದೈಹಿಕ ಹಾಗೂ ಯೋಗಾಭ್ಯಾಸ ಶಿಕ್ಷಕರಾದ ದಾಮೋದರ್, ಹರಿಣಾಕ್ಷಿ, ರಂಗಪ್ಪ, ಗಣೇಶ್, ವೀಣಾಸರಸ್ವತಿ ಇವರ ಸಂಯೋಜನೆಯಲ್ಲಿ ದಿನಾಂಕ 31.01.2022ರಂದು ಶಾಲಾ ಏಕಲವ್ಯ ಕ್ರೀಡಾ ಪ್ರಕಲ್ಪದ ಆಯೋಜನೆಯಲ್ಲಿ ಆರಂಭಗೊಂಡು […]

73ನೇ ಗಣರಾಜ್ಯೋತ್ಸವ ಆಚರಣೆ

73ನೇ ಗಣರಾಜ್ಯೋತ್ಸವ ಆಚರಣೆ

Wednesday, January 26th, 2022

ದಿನಾಂಕ 26-01-2022ನೇ ಬುಧವಾರದಂದು ವಿವೇಕಾನಂದ ವಿದ್ಯಾಸಂಸ್ಥೆಗಳು, ವಿವೇಕನಗರ, ತೆಂಕಿಲ, ಪುತ್ತೂರು ಇದರ ಜಂಟಿ ಆಶ್ರಯದಲ್ಲಿ 73ನೇ ಗಣರಾಜ್ಯೋತ್ಸವವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಮ್ಮ ದೇಶದ ನಿವೃತ್ತ ಸೈನಿಕ ಮೇಜರ್ ಸುಬೆದಾರ್ ಶ್ರೀ ಚಂದ್ರಶೇಖರ ಅವರ ಗಣರಾಜ್ಯೋತ್ಸವದ ಧ್ವಜಾರೋಹಣಗೈದರು. ನಂತರ ಮಾತನಾಡಿದ ಅವರು ’ಇಂದು ನಾವು 73ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿದ್ದೇವೆ, ಭಾರತದ ಪ್ರಜೆಗಳಿಗಾಗಿ ಒಂದು ಚೌಕಟ್ಟನ್ನು ನಿರ್ಮಿಸಿ ಸಂವಿಧಾನವನ್ನು ರೂಪಿಸಿದ ದಿನವಾಗಿದೆ. ಇದಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ. ರಾಜೇಂದ್ರಪ್ರಸಾದ್ರವರು ನೀಡಿದ ಕೊಡುಗೆ ಅತ್ಯಂತ […]

ವಿದ್ಯಾ ಸ್ಪಂದನ

ವಿದ್ಯಾ ಸ್ಪಂದನ

Monday, January 24th, 2022

ವಿಶೇಷ ಆಹ್ವಾನಿತರ ಶಾಲಾ ಭೇಟಿ ಕಾರ್ಯಕ್ರಮದಲ್ಲಿ ಪ್ರಸ್ತುತ ಅಮೆರಿಕಾದಲ್ಲಿ ನೆಲೆಸಿರುವ ಪುತ್ತೂರಿನವರಾದ ಶ್ರೀಯುತ ವಿನಾಯಕ ಕುಡ್ವ ಇವರು ನಮ್ಮ ಶಾಲೆಗೆ ಭೇಟಿ ನೀಡಿದ್ದು ಶಾಲಾ ಪ್ರಾರ್ಥನೆ ಸರಸ್ವತಿ ವಂದನೆಯಲ್ಲಿ ಪಾಲ್ಗೊಂಡರು. ಅನಂತರ ಶಾಲಾ ಭೌತಿಕ ವ್ಯವಸ್ಥೆಯನ್ನು ಅವಲೋಕಿಸಿ, ಶೈಕ್ಷಣಿಕ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿ ಸಲಹೆ – ಮಾರ್ಗದರ್ಶನ ನೀಡಿದರು.

ECO Zone ತರಬೇತಿ

ECO Zone ತರಬೇತಿ

Wednesday, January 19th, 2022

ಕಿರ್ಲೋಸ್ಕರ್ ಮೋಟರ್ಸ್ ಕೈಗಾರಿಕಾ ವಲಯ ಬಿಡದಿ ವತಿಯಿಂದ ನಡೆದ Eco Zone ತರಬೇತಿ ಕಾರ್ಯಾಗಾರ ವಿವೇಕಾನಂದ ಕನ್ನಡ ಶಾಲಾ ಮಕ್ಕಳಿಗೆ ಆಯೋಜಿಸಲಾಗಿತ್ತು. ಸಹಶಿಕ್ಷಕಿ ಪುಷ್ಪಾವತಿ ಮತ್ತು ಗೌತಮಿ ಇವರ ಸಂಯೋಜನೆಯಲ್ಲಿ ಜರುಗಿದ ತರಬೇತಿಯನ್ನು ಇಕೋ-ಝೋನ್‌ನ ಸಂಪನ್ಮೂಲ ವ್ಯಕ್ತಿಗಳು ನಡೆಸಿಕೊಟ್ಟರು. ತರಬೇತಿಯಲ್ಲಿ ಚಿಟ್ಟೆಗಳ ಜೀವನ ಚಕ್ರ, ಆಹಾರ ಸರಪಳಿ, ಔಷಧೀಯ ಸಸ್ಯಗಳು, ಸಸ್ಯ-ಪ್ರಾಣಿ ವೈವಿಧ್ಯತೆಯನ್ನು ನಾವು ಶಾಲೆಗಳಲ್ಲಿ ಹೇಗೆ ಮಾಡಬೇಕು ಎನ್ನುವ ಪ್ರಾತ್ಯಕ್ಷಿಕಾ ಮಾಹಿತಿ ನೀಡಿದರು. ಅನಂತರ ಮಕ್ಕಳು ನಾವು ಪಡೆದ ಮಾಹಿತಿಗೆ ಅನುಗುಣವಾಗಿ ಔಷಧೀಯ ಸಸ್ಯಗಳನ್ನು ನೆಡುವುದರೊಂದಿಗೆ […]

ಮಕರ ಸಂಕ್ರಾಂತಿ ಆಚರಣೆ

ಮಕರ ಸಂಕ್ರಾಂತಿ ಆಚರಣೆ

Friday, January 14th, 2022

ಇಂದು ಮಕರ ಸಂಕ್ರಮಣ….ಪರ್ವಕಾಲ….. ಭಾರತೀಯರಲ್ಲಿ ಹಬ್ಬಗಳ ಆಚರಣಾ ಸಂಭ್ರಮಕ್ಕೆ ವೈಜ್ಞಾನಿಕ….ಧಾರ್ಮಿಕ…. ಸಾಂಸ್ಕೃತಿಕ…..ಮಹತ್ವವಿದೆ. ಎಲ್ಲಾ ಶಕ್ತಿಗಳ ಮೂಲ ಸೂರ್ಯನನ್ನು ಒಳಗೊಂಡಂತೆ ಪ್ರಕೃತಿಯ ಆರಾಧನೆಗೆ ಅನಾದಿ ಕಾಲದಿಂದಲೂ ಪೂಜನೀಯ ಸ್ಥಾನ ನೀಡುವುದರೊಂದಿಗೆ ಸಂರಕ್ಷಣಾ ಜವಾಬ್ದಾರಿ ಇರುವ ಮನುಷ್ಯನಿಗೆ ಈ ಎಲ್ಲಾ ಆಚರಣೆಗಳೂ ಸಂತೋಷದ ಜೊತೆಗೆ ಒಂದು ಪ್ರಾಕೃತಿಕ ಎಚ್ಚರಿಕೆ ನೀಡುತ್ತಿರುವುದು ಉಲ್ಲೇಖನೀಯ. ಚಿಕ್ಕಂದಿನಿಂದಲೇ ನಮ್ಮಲ್ಲಿ ಈ ಬಗೆಯ ಪ್ರಜ್ಞೆ ಮೂಡಬೇಕು.ಈ ದಿಶೆಯಿಂದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲೂ ಮಕರ ಸಂಕ್ರಾಂತಿ ಆಚರಿಸಲಾಯಿತು. ಸೂರ್ಯನ ಬೆಳಗ್ಗಿನ ಪ್ರಶಾಂತ ಕಿರಣಗಳಿಗೆ ಮೈ ಒಡ್ಡುವ […]

ವಿವೇಕಾನಂದ ಜಯಂತಿ ಪ್ರಯುಕ್ತ ಪೋಷಕರಿಗೆ ಸ್ಪರ್ಧೆ

ವಿವೇಕಾನಂದ ಜಯಂತಿ ಪ್ರಯುಕ್ತ ಪೋಷಕರಿಗೆ ಸ್ಪರ್ಧೆ

Friday, January 14th, 2022

ವಿವೇಕಾನಂದ ಜಯಂತಿ ಪ್ರಯುಕ್ತ ಪೋಷಕರಿಗೆ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶಾಲೆಯಲ್ಲಿ ಪುಸ್ತಕ ರೂಪದಲ್ಲಿ ಬಹುಮಾನ ವಿತರಿಸಲಾಯಿತು. ಇದರಲ್ಲಿ ವಿವೇಕಾನಂದ ಭಾವ ಚಿತ್ರ ಬಿಡಿಸುವುದರಲ್ಲಿ ಶ್ರೀ ಗಣೇಶ – ಪ್ರಥಮ, ರಮ್ಯ ಎನ್ – ದ್ವಿತೀಯ ಭಾಷಣ ಸ್ಪರ್ಧೆ – ಆಶಾ.ಕೆ – ಪ್ರಥಮ, ರಮ್ಯ ಎನ್ – ದ್ವಿತೀಯ ಪ್ರಬಂಧ – ಆಶಾ.ಕೆ – ಪ್ರಥಮ, ಪ್ರಸನ್ನ ಕುಮಾರಿ – ದ್ವಿತೀಯ ಕವನ ರಚನೆ – ಸುಲೋಚನ – ಪ್ರಥಮ, ರಮ್ಯ ಎನ್ – ದ್ವಿತೀಯ ಕಥಾ […]

ವಿವೇಕಾನಂದ ಜಯಂತಿ 

ವಿವೇಕಾನಂದ ಜಯಂತಿ 

Wednesday, January 12th, 2022

ವಿಶ್ವದಲ್ಲಿ ಭಾರತದ ಬಗೆಗಿನ ನಕಾರಾತ್ಮಕ ದೃಷ್ಟಿಕೋನಕ್ಕೆ ವೈಚಾರಿಕವಾಗಿ ಸಕಾರಾತ್ಮಕ  ಉತ್ತರ ನೀಡಿದ ಧೀಮಂತ ವ್ಯಕ್ತಿತ್ವ ಸ್ವಾಮಿ ವಿವೇಕಾನಂದ. ಬಾಲ್ಯದಿಂದಲೇ ಅವರ ಈ ಬಗೆಯ ಚಿಂತನೆಗಳನ್ನು ನಾವು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮ್ಮೀ ಆಚರಣೆಗೆ ಮಹತ್ವ ಬರಬೇಕು ಎಂದು ನುಡಿದವರು ಶಾಲಾ ಅಧ್ಯಕ್ಷರಾದ ಶ್ರೀ ರಮೇಶ್ಚಂದ್ರ ಇವರು. ವಿವೇಕಾನಂದ ಕನ್ನಡ ಶಾಲೆಯಲ್ಲಿ ಜನವರಿ 12 ರಂದು ಆಚರಿಸಲಾದ ವಿವೇಕಾನಂದ ಜಯಂತಿಯಂದು ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.  ಶಾಲಾ ಮಕ್ಕಳ ವಿವೇಕವಾಣಿ, ಬಾಲ್ಯದ ಕಥೆ, ಚಾಗಿ […]

10 ನೇ ತರಗತಿಯ ಮಕ್ಕಳಿಗೆ ಲಸಿಕಾ ಕಾರ್ಯಕ್ರಮ

10 ನೇ ತರಗತಿಯ ಮಕ್ಕಳಿಗೆ ಲಸಿಕಾ ಕಾರ್ಯಕ್ರಮ

Monday, January 10th, 2022

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 10 ನೇ ತರಗತಿಯ ಮಕ್ಕಳಿಗೆ ಆಯೋಜಿಸಲಾಗಿದ್ದ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ನಗರ ಸಭಾ ಅಧ್ಯಕ್ಷರಾದ ಶ್ರೀಯುತ ಜೀವಂದರ್ ಜೈನ್ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ, ಲಸಿಕಾ ಅಭಿಯಾನದ ಮಹತ್ವ ತಿಳಿಸಿದರು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿರಾದ ಶ್ರೀಮತಿ ನಿಶಾ ಹಾಗೂ ಶ್ರೀಮತಿ ಮೀನಾಕ್ಷಿ, ಶಾಲಾ ಮುಖ್ಯ ಗುರುಗಳು ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.    

ಭಜನಾ ಕಾರ್ಯಕ್ರಮ

ಭಜನಾ ಕಾರ್ಯಕ್ರಮ

Wednesday, January 5th, 2022

ವಿದ್ಯಾರ್ಥಿಗಳು ಕೆದಿಲ ಗ್ರಾಮದಲ್ಲಿರುವ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ದಿನಾಂಕ 25-12-2021 ಮತ್ತು ಶ್ರೀರಾಮ ಭಜನಾ ಮಂದಿರದಲ್ಲಿ 1-1-2022 ರಂದು ನಡೆದ ಶನೀಶ್ವರ ಪೂಜೆಯ ಸಂದರ್ಭದಲ್ಲಿ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 40 ವಿದ್ಯಾರ್ಥಿಗಳು, 2 ಶಿಕ್ಷಕರೂ ಭಜನೆಯಲ್ಲಿ ತೊಡಗಿಸಿಕೊಂಡಿದ್ದರು. ಶಿಸ್ತು ಬದ್ಧವಾಗಿ ಭಜನೆ ಹಾಡಿ ಅಲ್ಲಿ ನೆರೆದ ಭಕ್ತ ಬಾಂಧವರ ಗಮನ ಸೆಳೆದರು.

ಇನ್‌ಸ್ಪೈರ್ ಅವಾರ್ಡ್‌ಗೆ ಆಯ್ಕೆ

ಇನ್‌ಸ್ಪೈರ್ ಅವಾರ್ಡ್‌ಗೆ ಆಯ್ಕೆ

Thursday, December 30th, 2021

ಡಿಪಾರ್ಟ್‌ಮೆಂಟ್ ಸೈನ್ಸ್ ಆಂಡ್ ಟೆಕ್ನಾಲಜಿ ಮತ್ತು ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ಆಫ್ ಇಂಡಿಯಾ ಇದರ ವತಿಯಿಂದ ಇನ್‌ಸ್ಪೈರ್ ಅವಾರ್ಡ್ ಮಾನಕ್ 2021-22 ಕ್ಕೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿಗಳಾದ ಚಿನ್ಮಯ ಮಜಿ ಮತ್ತು ತನ್ಮಯ್ ಕೃಷ್ಣ ಆಯ್ಕೆಯಾಗಿದ್ದಾರೆ.  

ಸದೃಢ ಭಾರತ

Friday, December 17th, 2021
ಪಠ್ಯಪೂರಕ ಚಟುವಟಿಕಾ ವಿಶೇಷ ತರಗತಿಗಳ ಆರಂಭ

ಪಠ್ಯಪೂರಕ ಚಟುವಟಿಕಾ ವಿಶೇಷ ತರಗತಿಗಳ ಆರಂಭ

Thursday, December 16th, 2021

ಪ್ರಸಕ್ತ ಶೈಕ್ಷಣಿಕ ವರ್ಷದ ತರಗತಿಗಳು ಪುನರಾರಂಭವಾಗಿದ್ದು ಶಿಕ್ಷಕರಿಗೂ, ಪೋಷಕರಿಗೂ ಸಮಾಧಾನ ತಂದಿದೆ. ಮನೆಯಲ್ಲೂ, ಶಾಲೆಯಲ್ಲೂ ಮಕ್ಕಳಿಗೆ ಪೂರಕವಾದ ಆರೋಗ್ಯಕರ, ಸ್ವಚ್ಚ ಕಲಿಕಾ ವಾತಾವರಣವನ್ನು ಪುನನಿರ್ಮಾಣ ಮಾಡುವಲ್ಲಿ ಪೋಷಕರ, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು. ಶಿಕ್ಷಣದೊಂದಿಗೆ ಆಸಕ್ತ ಮಕ್ಕಳಿಗೆ ವಿಶೇಷ ತರಗತಿಗಳಾದ ಭರತನಾಟ್ಯ, ಸಂಗೀತ ಚಿತ್ರಕಲೆ, ಯಕ್ಷಗಾನ, ಕರಾಟೆ ಮುಂತಾದವುಗಳು ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಬೆಳೆಸಲು ಸಹಕಾರಿಯಾಗಿದೆ ಎಂದು ವಿದುಷಿ ಪ್ರೀತಿಕಲಾ – ನಿರ್ದೇಶಕಿ ಮೂಕಾಂಬಿಕಾ ನೃತ್ಯ ಕಲಾ ಶಾಲೆ ಪುತ್ತೂರು ತಿಳಿಸಿದರು. ಶಾಲೆಯಲ್ಲಿ ವಿದ್ವಾನ್ ದೀಪಕ್ ಕುಮಾರ್, […]

ದೌರ್ಜನ್ಯ ಮುಕ್ತಿ - ಕಾರ್ಯಕ್ರಮ

ದೌರ್ಜನ್ಯ ಮುಕ್ತಿ – ಕಾರ್ಯಕ್ರಮ

Thursday, December 16th, 2021

ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಸಹಯೋಗದೊಂದಿಗೆ ಏರ್ಪಡಿಸಲಾದ ಉಪಗ್ರಹ ಆಧಾರಿತ ತರಬೇತಿ ’ದೌರ್ಜನ್ಯ ಮುಕ್ತಿ’ ಕಾರ್ಯವನ್ನು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ವೀಕ್ಷಿಸಿ, ಕಾರ್ಯಕ್ರಮದಲ್ಲಿ ಹದಿಹರೆಯ ಮತ್ತು ಯುವ ಸಮುದಾಯದ ಅದರಲ್ಲೂ ಮುಖ್ಯವಾಗಿ ಹೆಣ್ಣುಮಕ್ಕಳಲ್ಲಿ ದೌರ್ಜನ್ಯದ ಕುರಿತು ತಿಳುವಳಿಕೆ ಹಾಗೂ ದೌರ್ಜನ್ಯದಿಂದ ಮುಕ್ತರಾಗುವ ಸಾಮರ್ಥ್ಯವನ್ನು ಬೆಳೆಸುವ ಉದ್ದೇಶವನ್ನು ತಿಳಿದುಕೊಂಡರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಗುರುಗಳು, ಶಿಕ್ಷಕವೃಂದದವರು ಉಪಸ್ಥಿತರಿದ್ದರು.

ಶ್ರದ್ಧಾಂಜಲಿ ಸಭೆ

ಶ್ರದ್ಧಾಂಜಲಿ ಸಭೆ

Tuesday, December 7th, 2021

ಪುತ್ತೂರು ಅಲ್ಲದೆ ಹತ್ತೂರಿಗೂ ಪರಿಚಿತರಾದ ಶ್ರೀ ರಾಂ ಭಟ್ ಅವರ ಸಾರ್ಥಕ್ಯದ ಬದುಕು ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಮುಂತಾದ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಆಡಳಿತಕ್ಕೆ ಸಾಕ್ಷಿಯಾಗಿದೆ. ಪುತ್ತೂರಿನ ಶೈಕ್ಷಣಿಕ ಮೈಲುಗಲ್ಲಾದ ವಿವೇಕಾನಂದ ವಿದ್ಯಾವರ್ಧಕ ಸಂಘವನ್ನು ಮುನ್ನಡೆಸಿದ ಹಿರಿಯರಿವರು. ಇಂದು ನಮ್ಮನ್ನಗಲಿದ ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ- ಶ್ರೀ ವಸಂತ ಸುವರ್ಣ – ಸಂಚಾಲಕರು ವಿವೇಕಾನಂದ ಕನ್ನಡ ಶಾಲೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶ್ರೀಯುತ ರಾಂ ಭಟ್ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಶಾಲಾ ಆಡಳಿತ ಮಂಡಳಿ ಖಜಾಂಚಿಯಾದ ಶ್ರೀಯುತ […]

ವಿದ್ಯಾಧ್ವನಿ ಶೈಕ್ಷಣಿಕ ಅರಿವು ವೇದಿಕೆಯಿಂದ ಪೋಷಕರ ಸಭೆ

ವಿದ್ಯಾಧ್ವನಿ ಶೈಕ್ಷಣಿಕ ಅರಿವು ವೇದಿಕೆಯಿಂದ ಪೋಷಕರ ಸಭೆ

Tuesday, December 7th, 2021

ವಿವೇಕಾನಂದ ಕನ್ನಡ ಶಾಲೆಯಲ್ಲಿ 1 ರಿಂದ 5 ನೇ ತರಗತಿಯ ಮಕ್ಕಳ ವಿಭಾಗಶಃ ಪೋಷಕರ ಸಭೆಯು ನಡೆಯಿತು. ಸಭೆಯಲ್ಲಿ ರಜಾ ನಂತರದ ಮಕ್ಕಳ ಶಾಲಾ ಮತ್ತು ಮನೆಯ ಕಾರ್ಯಚಟುವಟಿಕೆಗಳ ಬಗ್ಗೆ ಸಂವಾದ ನಡೆಯಿತು. ಕಲಿಕಾ ಚಟುವಟಿಕೆಗಳಿಗೆ ಇದೀಘ ಒಂದು ಬಗೆಯ ವೇಗ ದೊರೆತಿದ್ದು ಮಕ್ಕಳು ಹಾಗೂ ಪೋಷಕರು ಈ ದಿಶೆಯಲ್ಲಿ ಸಂತೋಷ ವ್ಯಕ್ತಪಡಿಸಿದರು. ವಿಷಯವಾರು ಶಿಕ್ಷಕರು ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ಧಾರವಾಡದಿಂದ ಶಾಲೆಗೆ ನೀಡುತ್ತಿರುವ ಕಲಿಕಾ-ಪೂರಕ ಸಾಮಾಗ್ರಿಗಳ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು. […]

’ವಿವೇಕ ಸಂಗಮ’ - ಹಿರಿಯ ವಿದ್ಯಾರ್ಥಿ ಒಕ್ಕೂಟದಿಂದ ಹತ್ತನೇ ತರಗತಿ ಮಕ್ಕಳಿಗೆ ವೃತ್ತಿಪರ ಶಿಕ್ಷಣ ಮಾರ್ಗದರ್ಶನ

’ವಿವೇಕ ಸಂಗಮ’ – ಹಿರಿಯ ವಿದ್ಯಾರ್ಥಿ ಒಕ್ಕೂಟದಿಂದ ಹತ್ತನೇ ತರಗತಿ ಮಕ್ಕಳಿಗೆ ವೃತ್ತಿಪರ ಶಿಕ್ಷಣ ಮಾರ್ಗದರ್ಶನ

Saturday, December 4th, 2021

ವಿದ್ಯಾರ್ಥಿ ಬದುಕಿನಲ್ಲಿ ನಾವು ಪ್ರೌಢಶಾಲಾ ಹಂತದಲ್ಲಿ ವೃತ್ತಿಪರ ಗುರಿ ಹೊಂದಬೇಕು. ಈ ಗುರಿ ಸಾಧನೆಗಾಗಿ ನಿರಂತರ ಪ್ರಯತ್ನ ನಡೆಯಬೇಕು. ಆ ಬಗ್ಗೆ ಸರಿಯಾದ ಮತ್ತು ಸ್ಪಷ್ಟವಾದ ಮಾಹಿತಿಯ ಅಗತ್ಯವಿದೆ. – ಪೃಥ್ವಿನಾರಾಯಣ – ಹಿರಿಯ ವಿದ್ಯಾರ್ಥಿ ವಿವೇಕಾನಂದ ಕನ್ನಡ ಶಾಲೆಯ 10 ನೇ ತರಗತಿ ಮಕ್ಕಳಿಗೆ ಈ ದಿಶೆಯಲ್ಲಿ ವಿಭಿನ್ನ ವೃತ್ತಿಯಲ್ಲಿರುವ ಶಾಲಾ ಹಿರಿಯ ವಿದ್ಯಾರ್ಥಿಗಳು ವೃತ್ತಿಪರಶಿಕ್ಷಣದ ಮಾರ್ಗದರ್ಶನ ನೀಡಿದರು. ಸ್ವ ಉದ್ಯೋಗದ ಬಗ್ಗೆ ಜಿಮ್ ತರಬೇತುದಾರರಾದ ಆದರ್ಶ ಸುವರ್ಣ, ಚಾರ್ಟಡ್ ಅಕೌಂಟನ್ಸಿಯ ಬಗ್ಗೆ ಕಾರ್ತಿಕ್ ಎಸ್, […]

ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ (NTSE ) - ತರಬೇತಿ

ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ (NTSE ) – ತರಬೇತಿ

Tuesday, November 30th, 2021

“ಹತ್ತನೇ ತರಗತಿಯ ಮಕ್ಕಳಿಗೆ NTSE ಪರೀಕ್ಷೆ ಬರೆಯಲು ಸಿಗುತ್ತಿರುವ ತರಬೇತಿ ಹಾಗೂ ಅವಕಾಶವು ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಜ್ಞಾನವನ್ನು ಹೆಚ್ಚಿಸಲು ಸಹಕಾರಿಯಾಗಲಿವೆ. ” – ಶ್ರೀ ಸತೀಶ್ ಭಟ್ ಬಿಳಿನೆಲೆ ಮುಖ್ಯಶಿಕ್ಷಕರು ಶ್ರೀರಾಮಕುಂಜೇಶ್ವರ ಪ್ರೌಢಶಾಲೆ. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ಮಕ್ಕಳಿಗೆ NTSE ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ನೀಡಿದ ಶ್ರೀಯುತರು ಈ ಪರೀಕ್ಷೆ ಬರೆಯಲಿರುವ ಪ್ರತಿ ಒಬ್ಬ ವಿದ್ಯಾರ್ಥಿ ತನ್ನ ಸಮಯ ಮತ್ತು ಕಲಿಕಾ ಸಾಮರ್ಥ್ಯವನ್ನು ತಯಾರಿಯ ಕಡೆ ನೀಡಬೇಕು ಎಂದರು.

’ಸಂವಿಧಾನ ದಿನಾಚರಣೆ’

’ಸಂವಿಧಾನ ದಿನಾಚರಣೆ’

Friday, November 26th, 2021

ಒಂದು ಮನೆಯು ಸುಸೂತ್ರವಾಗಿ ನಡೆಯಲು ಕೆಲವಾರು ಪ್ರಗತಿಪರ ನಿಯಮಗಳಿವೆ. ಒಂದು ಶಾಲೆ ಉತ್ತಮವಾಗಿ ನಡೆಯಲು ಹಲವಾರು ಶಾಲಾ ನಿಯಮಗಳಿಗೆ ಬದ್ಧರಾಗಿ ನಡೆಯಬೇಕಾಗುತ್ತದೆ. ಅದೇ ರೀತಿ ನಮ್ಮೀ ಭಾರತ ದೇಶ ವ್ಯವಸ್ಥಿತ ಹಾಗೂ ಅಭಿವೃದ್ಧಿಯತ್ತ ಮುನ್ನಡೆಯಲು ನಮ್ಮ ಸಂವಿಧಾನವೇ ನಮಗೆ ಕೈಮರವಾಗಿದೆ. ಇದು ಸರಕಾರ ಹಾಗೂ ಜನರ ನಡುವೆ ಉತ್ತಮ ಬಾಂಧವ್ಯ ಮೂಡಿಸುವ ಸೇತು ಆಗಿದೆ. – ತನ್ಮಯ್ ಕೃಷ್ಣ – ವಿದ್ಯಾರ್ಥಿ ನವಂಬರ್ 26 ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ದಿನ. ಡಾ. ಬಿ.ಆರ್ ಅಂಬೇಡ್ಕರ್ […]

ಭಾರತ್ ಸ್ಕೌಟ್ಸ್-ಗೈಡ್ಸ್, ಕರ್ನಾಟಕ-ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು

ಭಾರತ್ ಸ್ಕೌಟ್ಸ್-ಗೈಡ್ಸ್, ಕರ್ನಾಟಕ-ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು

Tuesday, November 23rd, 2021

2020-21 ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ಕರ್ನಾಟಕ ಇದರ ವತಿಯಿಂದ ಜರುಗಿದ ರಾಜ್ಯ ಪುರಸ್ಕಾರ ಪರೀಕ್ಷಾ ಶಿಬಿರವು ಬೆಥನಿ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದಿದ್ದು ಇದರಲ್ಲಿ ಉತ್ತೀರ್ಣರಾಗಿ ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಮಿಥುನ್ ವಿ.ಕೆ (ಬಲ್ನಾಡು ನಿವಾಸಿ ಕೃಷ್ಣಪ್ಪಗೌಡ ಮತ್ತು ಹರಿಣಾಕ್ಷಿ ದಂಪತಿಗಳ ಪುತ್ರ), ಅರ್ಚನಾ ಪಿ.ಕೆ ( ನಗರ ನಿವಾಸಿ ಪ್ರಭಾಕರ ಮತ್ತು ಲೀಲಾವತಿ ದಂಪತಿಗಳ ಪುತ್ರಿ), ಸಂಹಿತಾ ಶರ್ಮ ಬಿ.ಎಸ್ (ಸಾಲ್ಮರ ನಿವಾಸಿ ರಾಜೇಶ್ ಶರ್ಮ […]

ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಕಾರ್ಯಕ್ರಮ

ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಕಾರ್ಯಕ್ರಮ

Tuesday, November 23rd, 2021

ವಿವೇಕಾನಂದ ವಿದ್ಯಾವರ್ಧಕ ಸಂಘ ನಡೆಸುತ್ತಿರುವ ವಿದ್ಯಾಸಂಸ್ಥೆಗಳ ಹೆಗ್ಗುರುತು ಇಲ್ಲಿ ನೀಡುವ ಗುಣಾತ್ಮಕ ಶಿಕ್ಷಣವಾಗಬೇಕು. ಈ ದಿಶೆಯಲ್ಲಿ ಸೇವಾ ಮನೋಭಾವದೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ನುರಿತರಾದ ಸಾಮಾಜಿಕವಾಗಿ ಗುರುತಿಸಲ್ಪಡುತ್ತಿರುವ ವ್ಯಕ್ತಿಗಳು ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕರ ನಿತ್ಯ-ನಿರಂತರ ಶ್ರಮ ಹಾಗೂ ಪೋಷಕರ ಸಹಕಾರದೊಂದಿಗೆ ನಮ್ಮೀ ಶೈಕ್ಷಣಿಕಗುರಿ ಸಾಫಲ್ಯ ಹೊಂದಬೇಕು ಎಂದು ಡಾ. ಕೃಷ್ಣ ಭಟ್‌ಕೊಂಕೋಡಿ ಹೇಳಿದರು. ವಿವೇಕಾನಂದ ಕನ್ನಡ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ನೂತನ ಆಡಳಿತ ಮಂಡಳಿ ಜವಾಬ್ದಾರಿ ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಶ್ರೀಯುತರು […]

Highslide for Wordpress Plugin