ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯ 14 ರ ವಯೋಮಾನದ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕು. ಸಂಹಿತಾ ಶರ್ಮ ಬಿ.ಎಸ್. ಇವರು ಸ್ಟೇಟ್ ಚಾಂಪಿಯನ್ ಆಗಿ ರಾಷ್ಟ್ರ ಮಟ್ಟ (S.G.F.I) ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಟೀಮ್ ಕ್ಯಾಪ್ಟನ್ ಆಗಿ ರಾಷ್ಟ್ರಮಟ್ಟದಲ್ಲಿ ಇವರ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇವರು ರಾಜೇಶ್ಕೃಷ್ಣ ಪ್ರಸಾದ್ ಮತ್ತು ಸೀಮಾ ಶರ್ಮ ದಂಪತಿಗಳ ಪುತ್ರಿ.