ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಇವರ ಸಹಯೋಗದಲ್ಲಿ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾಕಾರಂಜಿ ಹಾಗೂ ಕಲೋತ್ಸವವು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದಿದ್ದು ಇದರಲ್ಲಿ ಶಾಲೆಯು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಕನ್ನಡ ಭಾಷಣ- ಸಿಂಚನಾ ಟಿ (ಪ್ರಥಮ), ಹಿಂದಿ ಭಾಷಣ-ಅನಘಾ ಭಟ್(ಪ್ರಥಮ),ಸಂಸ್ಕೃತ ಭಾಷಣ- ಪಲ್ಲವಿ (ತೃತೀಯ), ತೆಲುಗು ಭಾಷಣ- ಕೌಸಲ್ಯ ಎನ್. (ಪ್ರಥಮ), ತಮಿಳು ಭಾಷಣ- ಪ್ರಜೀತ್ (ಪ್ರಥಮ), ತುಳು ಭಾಷಣ – ಅನುಜ್ಞಾ ವೈ.ಟಿ. (ತೃತೀಯ), ಕೊಂಕಣಿ ಭಾಷಣ – ರಾಮನಾಥ ಶೆಣೈ (ಪ್ರಥಮ), ಧಾರ್ಮಿಕ ಪಠಣ ಸಂಸ್ಕೃತ – ಸಹನಾ (ಪ್ರಥಮ), ಭಾವಗೀತೆ- ಪ್ರಣಮ್ಯ (ದ್ವಿತೀಯ), ಭರತನಾಟ್ಯ- ಶರಣ್ಯ (ದ್ವಿತೀಯ), ಆಶು ಭಾಷಣ- ಅನುಷಾ (ಪ್ರಥಮ), ಮಿಮಿಕ್ರಿ – ವಿಶ್ವಂಭರ (ಪ್ರಥಮ), ಗಝಲ್- ಆಕಾಂಕ್ಷ ಪಾರ್ವತಿ (ದ್ವಿತೀಯ), ಯಕ್ಷಗಾನ ವೈಯಕ್ತಿಕ- ಶ್ರೇಯ (ದ್ವಿತೀಯ), ಯಕ್ಷಗಾನ ಸಾಮೂಹಿಕ – ಪರೀಕ್ಷಿತ್ ಮತ್ತು ತಂಡ (ದ್ವಿತೀಯ), ಕಲೋತ್ಸವ ನೃತ್ಯ – ಗೌತಮಿ ಮತ್ತು ತಂಡ (ದ್ವಿತೀಯ), ಕಲೋತ್ಸವ ನಾಟಕ – ಕ್ಷಮಾ ಮತ್ತು ತಂಡ (ದ್ವಿತೀಯ), ಕಲೋತ್ಸವ ದೃಶ್ಯಕಲೆ- ಶಿಶಿರ್ ಮತ್ತು ತಂಡ (ಪ್ರಥಮ), ಕಲೋತ್ಸವ ಸಂಗೀತ- ಭವ್ಯ ಮತ್ತು ತಂಡ (ಪ್ರಥಮ) ಹಾಗೆಯೇ ಸಮಗ್ರ ಪ್ರಥಮ ಪ್ರಶಸ್ತಿಯನ್ನು ಪಡೆದು ತಾಲೂಕುಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.