Author Archive

ಭಾರತಿಯ ಸಂಸ್ಕೃತಿಯಲ್ಲಿ ವಿಜ್ಞಾನದ ಮಹತ್ವ

ಭಾರತಿಯ ಸಂಸ್ಕೃತಿಯಲ್ಲಿ ವಿಜ್ಞಾನದ ಮಹತ್ವ

Wednesday, July 4th, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ದಿನಾಂಕ ೦೪/೦೭/೨೦೧೨ ರಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಭಾರತೀಯ ಸಂಸ್ಕೃತಿಯಲ್ಲಿ ವಿಜ್ಞಾನದ ಮಹತ್ವ  ವಿಷಯದಲ್ಲಿ ಕರ್ನಾಟಕ ಸರಕಾರದ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾದ ಶ್ರೀ ಸಚ್ಚಿದನಾಂದ ಹೆಗಡೆಯವರು ಮಾತನಾಡಿದರು. ಮೂಢನಂಬಿಕೆ, ತಪಸ್ಸುಗಳಿಗೆ ವೈಜ್ಞಾನಿಕ ಆಧಾರಗಳಿವೆ ಎಂಬುದನ್ನು ವಿದ್ಯಾರ್ಥಿಗಳಲ್ಲಿ ಚರ್ಚೆಯ  ಮೂಲಕ ವಿವರಿಸಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಶ್ಯಾಂಪ್ರಸಾದ್ ಶಾಸ್ತ್ರಿಯವರು ಉಪಸ್ಥಿತರಿದ್ದರು. ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆಯವರು ಸ್ವಾಗತಿಸಿದರು.

ಗುರುಪೂರ್ಣಿಮೆ ಆಚರಣೆ

ಗುರುಪೂರ್ಣಿಮೆ ಆಚರಣೆ

Wednesday, July 4th, 2012

ದಿನಾಂಕ ೦೩.೦೭.೨೦೧೨ ರಂದು ವಿವೇಕಾನಂದ ಕನ್ನಡ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮದ ಜಂಟಿ  ಆಶ್ರಯದಲ್ಲಿ ಗುರುಪೂರ್ಣಿಮೆ ಆಚರಣೆಯು ಶಾಲೆಯ ಸಭಾಂಗಣದಲ್ಲಿ ಜರುಗಿತು.ಈ ಕಾರ್ಯಕ್ರಮದಲ್ಲಿ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕರಾದ ಶ್ರೀ ಪರೀಕ್ಷಿತ ತೋಳ್ಪಾಡಿಯವರು ಮಾತನಾಡಿ ‘ಗುರುಗಳು ವಿದ್ಯಾರ್ಥಿಗಳಿಗೆ ಜ್ಞಾನವನ್ನು ಬೆಳಂದಿಗಳಾಗಿ ಪರಿವರ್ತಿಸಿ ಕೊಡುವವರಾಗಬೇಕು’ ಎಂದು ಹೇಳಿ ಗುರುಪೂರ್ಣಿಮೆಯ ಮಹತ್ವದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಶೋಭಾ ಕೊಳತ್ತಾಯ ರವರು ಉಪಸ್ಥಿತರಿದ್ದರು. ಹಾಗೂ ಉಭಯ ಸಂಸ್ಥೆಗಳ ಮುಖ್ಯ ಗುರುಗಳು ಉಪಸ್ಥಿತರಿದ್ದರು.

ಹೊಲಿಗೆ ತರಬೇತಿ ತರಗತಿ ಪ್ರಾರಂಭ

ಹೊಲಿಗೆ ತರಬೇತಿ ತರಗತಿ ಪ್ರಾರಂಭ

Wednesday, July 4th, 2012

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ವೃತ್ತಿ ಶಿಕ್ಷಣ ತರಬೇತಿಯೂ  ದೊರೆತಾಗ ಭವಿಷ್ಯದ ಜೀವನಕ್ಕೆ ಭದ್ರ ಬುನಾದಿ ಹಾಗಿದಂತಾಗುತ್ತದೆ. ಆತ್ಮವಿಶ್ವಾಸ ವೃದ್ಧಿಸುತ್ತದೆ. ಈ ನಿಟ್ಟಿನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ ೨೭.೦೬.೨೦೧೨ರಂದು ಹೊಲಿಗೆ ತರಬೇತಿ ತರಗತಿಗಳು ಪ್ರಾರಂಭವಾದವು. ಹೊಲಿಗೆ  ತರಬೇತಿ ತರಗತಿಗಳು ಪ್ರಾರಂಭವಾದವು ಹೊಲಿಗೆ ಯಂತ್ರಗಳ ಕೊಡುಗೆಯನ್ನು ಇತ್ತವರು ಶ್ರೀ ಜಗದೀಶ್ ಬದನಾಜೆ (ಬದನಾಜೆ ಟ್ರಾನ್ಸ್ ಪೋರ್ಟ್), ಟಿ.ವಿ ರವೀಂದ್ರನ್ (ದೇವ ಟ್ರೇಡರ್ಸ್ ಏಳ್ಮುಡಿ ಪುತ್ತೂರು) ಹಾಗೂ ಪ್ರೇಮಾನಂದ್ (ದೇವ ಟ್ರೇಡರ್ಸ್ ಏಳ್ಮುಡಿ ಪುತ್ತೂರು) ಇವರು ತರಬೇತಿ ತರಗತಿಗೆ […]

ಜನಪದ ನೃತ್ಯ ಪ್ರಥಮ

ಜನಪದ ನೃತ್ಯ ಪ್ರಥಮ

Tuesday, July 3rd, 2012

ದಿನಾಂಕ ೦೨/೦೬/೧೨ರಂದು ಸುಳ್ಯಪದವಿನಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲಾ  ‘ಜಾನಪದ ನೃತ್ಯ’ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ  ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿರುತ್ತಾರೆ.

ಸಾಮೂಹಿಕ ಹುಟ್ಟುಹಬ್ಬ (ಎಪ್ರಿಲ್, ಮೇ, ಜೂನ್)

ಸಾಮೂಹಿಕ ಹುಟ್ಟುಹಬ್ಬ (ಎಪ್ರಿಲ್, ಮೇ, ಜೂನ್)

Tuesday, July 3rd, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ದಿನಾಂಕ ೩೦.೦೬.೨೦೧೨ರಂದು ಎಪ್ರಿಲ್, ಮೇ, ಜೂನ್ ತಿಂಗಳಲ್ಲಿ ಜನಿಸಿದ ವಿದ್ಯಾರ್ಥಿಗಳ ಸಾಮೂಹಿಕ ಹುಟ್ಟುಹಬ್ಬವು ನೆರವೇರಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಪೋಷಕರಾದ ಶ್ರೀಮತಿ ಭಾರತಿ ಶಶಿಧರ್ ರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶ್ರೀಜಯರಾಮ್ ಭಟ್ ಮತ್ತು ಶ್ರೀ ಶ್ಯಾಂ ಪ್ರಸಾದ್ ಶಾಸ್ತ್ರೀಯವರು ವಿದ್ಯಾರ್ಥಿಗಳಿಗೆ ಹುಟ್ಟುಹಬ್ಬದ ಆಚರಣೆಯ ಮಹತ್ವದ ಬಗ್ಗೆ ತಿಳಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಮಾತಾಜಿಯಾವರು ಪ್ರಾಸ್ತಾವಿಕವಾಗಿ […]

ರಾಷ್ಟ್ರಪತಿ ಪುರಸ್ಕಾರ

ರಾಷ್ಟ್ರಪತಿ ಪುರಸ್ಕಾರ

Thursday, June 28th, 2012

ವಿವೇಕಾನಂದ ಕನ್ನಡ ಮಾಧ್ಯಮಶಾಲೆಯ ವಿದ್ಯಾರ್ಥಿಯಾದ ಪವನ್.ಎ ದಾವಣಗೆರೆಯಲ್ಲಿ ನಡೆದ ಸ್ಕೌಟ್ಸ್ ವಿಭಾಗದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತಾನೆ. ಈತ ಶಶಿ ಸ್ಟುಡಿಯೋ ಮಾಲಕ ಶ್ರೀ ಶಶಿಧರ ಮತ್ತು ಶ್ರೀಮತಿ ಭಾರತಿ ಯವರ ಪುತ್ರ. ಪ್ರಸ್ತುತ ಈತ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿ.

ಹತ್ತನೇ ವಿದ್ಯಾರ್ಥಿಗಳೊಂದಿಗೆ - ಐ. ಕೆ. ಬೊಳುವಾರು

ಹತ್ತನೇ ವಿದ್ಯಾರ್ಥಿಗಳೊಂದಿಗೆ – ಐ. ಕೆ. ಬೊಳುವಾರು

Tuesday, June 26th, 2012

ನಾಟಕದ ಭಾವಾಭಿನಯದ ಅಂಶವನ್ನು ಶಿಕ್ಷಣರಂಗದಲ್ಲಿ ಬಳಸಿಕೊಂಡಾಗ ಕಲಿಕೆಯು ಹೇಗೆ ಆಸಕ್ತಿದಾಯಕವೂ, ಪರಿಣಾಮಕಾರಿಯೂ ಆಗಬಲ್ಲದು ಎಂಬುದನ್ನು ವಿವಿಧ ಚಟುವಟಿಕೆಗಳ ಮೂಲಕ ವಿವರಿಸುತ್ತಾ ನಾಟಕದಲ್ಲಿ ಬಳಸುವ ಕಥಾವಸ್ತುವು ವಾಸ್ತವಿಕತೆಯ ಚೌಕಟ್ಟನ್ನು ಮೀರದೆ ಸಮಾಜದ ಸ್ವಾಸ್ಥ್ಯವನ್ನು  ಕಾಪಾಡುವಂತಿರಬೇಕು ಮತ್ತು ಶಿಕ್ಷಣ-ನಾಟಕ-ಕ್ರೀಡೆ ಮೂಲಕ ಶಿಕ್ಷಣದ ಮೌಲ್ಯಗಳ  ಬಗ್ಗೆ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಐ. ಕೆ. ಬೊಳುವಾರು  ಅವರು ಕಿವಿಮಾತು ಹೇಳಿದರು.

ಅಭಿನಂದನಾ ಕಾರ್ಯಕ್ರಮ

ಅಭಿನಂದನಾ ಕಾರ್ಯಕ್ರಮ

Wednesday, June 13th, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ – ತೆಂಕಿಲ ಪುತ್ತೂರು ಇಲ್ಲಿ ದಿನಾಂಕ ೦೯.೦೬.೨೦೧೨ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ  ಶೇ ೯೬ ಫಲಿತಾಂಶ ತಂದುಕೊಟ್ಟ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು ನಡೆಯಿತು. ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ಶ್ರೀ ರವೀಂದ್ರ.ಪಿ ರವರು ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಉದ್ಯಮಿ ಶ್ರೀಮತಿ ಸುನೀತಾ ರವೀಂದ್ರರವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಮಾತುಗಳನ್ನಾಡಿದರು. ಶಾಲಾ ಪರವಾಗಿ ಶಿಕ್ಷಕ ವಿಶ್ವನಾಥ ಮೂಡೂರು ಮಾತನಾಡಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಆಶಾ ಬೆಳ್ಳಾರೆ ಸ್ವಾಗತಿಸಿ […]

ವಿಶ್ವ ಪರಿಸರ ದಿನ

ವಿಶ್ವ ಪರಿಸರ ದಿನ

Saturday, June 9th, 2012

ದಿನಾಂಕ ೦೫.೦೬.೨೦೧೨ ರಂದು ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸ್ಕೌಟ್ಸ್ – ಗೈಡ್ಸ್ ವಿದ್ಯಾರ್ಥಿಗಳು ಸ್ಕೌಟ್ಸ್ ಶಿಕ್ಷಕ ಶ್ರೀ ವಿಶ್ವನಾಥ ಮೂಡೂರು ಇವರ ನಿರ್ದೇಶನದಂತೆ ಮೊಟ್ಟೆತ್ತಡ್ಕದ ಪ್ರಗತಿಪರ ಕೃಷಿಕರಾದ ಉಪೇಂದ್ರ ಬಲ್ಯಾಯ ರವರ ಸ್ಥಳದಲ್ಲಿ ಧನ್ವಂತರಿ  ಆರ್ಯುವೇದಿಕ್ ಗಿಡಗಳ ವನವನ್ನು ನಿರ್ಮಿಸಿದರು. ದಿನೇ ದಿನೇ ಪರಿಸರ ವಿನಾಶವಾಗುವ ಈ ಸಂದರ್ಭದಲ್ಲಿ ಆರೋಗ್ಯದಾಯಕವಾದ ಅಂಶಗಳನ್ನು ಮುಂದಿಟ್ಟುಕೊಂಡು ವಿಶ್ವಪರಿಸರ ದಿನಾಚರಣೆಗೆ ಅರ್ಥಪೂರ್ಣವಾದ ಮಹತ್ವವನ್ನು ಕೊಡಬೇಕೆಂಬ ನಿಟ್ಟಿನಲ್ಲಿ, ವಿದ್ಯಾರ್ಥಿಗಳಿಗೆ ಎಳವೆಯಲ್ಲಿಯೇ ಇಂತಹ ವಿಷಯಗಳನ್ನು ತಿಳಿದುಕೊಳ್ಳಬೇಕು ಎಂಬ ಅಂಶವನ್ನು […]

೨೦೧೨-೧೩ನೇ ಸಾಲಿನ ಶಾಲಾ ಚುನಾವಣೆ

೨೦೧೨-೧೩ನೇ ಸಾಲಿನ ಶಾಲಾ ಚುನಾವಣೆ

Saturday, June 9th, 2012

ದಿನಾಂಕ ೦೬/೦೬/೨೦೧೨ ರಂದು ೨೦೧೨-೧೩ನೇ ಸಾಲಿನ ಶಾಲಾ ಚುನಾವಣೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಪ್ರೌಢಶಾಲಾ ನಾಯಕನಾಗಿ ಹತ್ತನೇ ತರಗತಿಯ ಉತ್ತಮ್.ಎನ್ ಬಹುಮತದಿಂದ ಚುನಾಯಿತರಾದರು. ಉಪನಾಯಕನಾಗಿ ಹತ್ತನೇ ತರಗತಿಯ ಪ್ರವಚನ್ ಆಯ್ಕೆಯಾದರು. ಪ್ರಾಥಮಿಕ ಶಾಲಾ ಮಟ್ಟದ ಚುನಾವಣೆಯಲ್ಲಿ ನಾಯಕಿಯಾಗಿ ಏಳನೇ ತರಗತಿಯ ಕು|ಅಂಕಿತಾ.ವಿ.ಕೆ ಮತ್ತು ಉಪನಾಯಕಿಯಾಗಿ ಏಳನೇ ತರಗತಿಯ ಕು| ಅಶ್ವಿನಿ ನಾಯಕ್ ರವರು ಆಯ್ಕೆಯಾದರು. ಶಾಲಾ ಚುನಾವಣೆಯ ಮುಖ್ಯ ಅಧಿಕಾರಿಯಾಗಿ ಹಿರಿಯ ಶಿಕ್ಷಕರಾದ ಶ್ರೀ ವಿಶ್ವನಾಥ ಮೂಡೂರು ತಮ್ಮ ಕಾರ್ಯ ನಿರ್ವಾಹಿಸಿದರು. ಶಾಲಾ ಶಿಕ್ಷಕರು […]

ಶಾಲಾ ಪ್ರವೇಶೋತ್ಸವ ಕಾರ್ಯಕ್ರಮ

ಶಾಲಾ ಪ್ರವೇಶೋತ್ಸವ ಕಾರ್ಯಕ್ರಮ

Thursday, June 7th, 2012

ದಿನಾಂಕ ೦೬-೦೬-೨೦೧೨ ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಇಲ್ಲಿ  ೨೦೧೨ – ೧೩ನೇ ಸಾಲಿನಲ್ಲಿ ಹೊಸದಾಗಿ ಸೇರಿರುವ ವಿದ್ಯಾರ್ಥಿಗಳ ಶಾಲಾಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಉದ್ಫಾಟಕರಾಗಿ ಕ್ಷೇತ್ರಸಂಪನ್ಮೂಲಕೇಂದ್ರದ ಸಮನ್ವಯಾಧಿಕಾರಿಯಾದ ಶ್ರೀ ನಂದೀಶರವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ವಿವೇಕಾನಂದ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ವೇದವ್ಯಾಸರವರು ಶಾಲೆ ಮತ್ತು ವಿದ್ಯಾರ್ಥಿಗಳ ಶ್ರೇಯಸ್ಸಿಗೊಸ್ಕರ ಶಿಕ್ಷಕರೊಂದಿಗೆ ಪೋಷಕರ ಪಾತ್ರ ಹಿರಿದಾದುದು ಎಂಬುದಾಗಿ ಹೇಳಿ ಶುಭ ಹಾರೈಕೆಯನ್ನು ಮಾಡಿದರು. ಸಭಾಧ್ಯಕ್ಷರಾಗಿ ಶಾಲಾ ಆಡಳಿತ […]

'ಮಾತೃಭಾಷಾ  ಶಿಕ್ಷಣ  ಮತ್ತು  ವಿದ್ಯಾರ್ಥಿಯ ಮನೋಸ್ಥಿತಿ’ - ಸಂವಾದ

‘ಮಾತೃಭಾಷಾ ಶಿಕ್ಷಣ ಮತ್ತು ವಿದ್ಯಾರ್ಥಿಯ ಮನೋಸ್ಥಿತಿ’ – ಸಂವಾದ

Monday, June 4th, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲದಲ್ಲಿ ದಿನಾಂಕ ೦೨/೦೬/೨೦೧೨ ರಂದು ೨೦೧೨-೧೩ನೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ‘ಮಾತೃಭಾಷಾ  ಶಿಕ್ಷಣ  ಮತ್ತು  ವಿದ್ಯಾರ್ಥಿಯ ಮನೋಸ್ಥಿತಿ ಎಂಬ ವಿಷಯದ ಬಗ್ಗೆ  ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ರವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ಈ ಸಂದರ್ಭದಲ್ಲಿ ವಿವೇಕಾನಂದ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಸಂಚಾಲಕರಾದ ಶ್ರೀ ರವೀಂದ್ರ.ಪಿ ರವರು ಉಪಸ್ಥಿತರಿದ್ದರು.              

ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಾತೃಭಾಷೆಯ ಬೋಧನೆ - ಮಾಹಿತಿ ಕಾರ್ಯಾಗಾರ

ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಾತೃಭಾಷೆಯ ಬೋಧನೆ – ಮಾಹಿತಿ ಕಾರ್ಯಾಗಾರ

Monday, June 4th, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲದಲ್ಲಿ ದಿನಾಂಕ ೦೨/೦೬/೨೦೧೨ ರಂದು ಶಿಕ್ಷಕರಿಗಾಗಿ ‘ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಾತೃಭಾಷೆಯ ಬೋಧನೆ  ಮತ್ತು  ಕಲಿಕೆಯನ್ನು ಪರಿಣಾಮಕಾರಿಯಾಗಿ ಬೋಧನೆಯವ ಬಗ್ಗೆ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್ ರವರು ಶಿಕ್ಷಕರೊಂದಿಗೆ ಸಂವಾದ ನಡೆಸಿದರು.ಈ ಸಂದರ್ಭದಲ್ಲಿ ವಿವೇಕಾನಂದ ಶಿಶುಮಂದಿರದ ಸಂಚಾಲಕರಾದ ಶ್ರೀ ಶ್ಯಾಮ್ ಪ್ರಸಾದ್ ಶಾಸ್ತ್ರಿ ರವರು ಉಪಸ್ಥಿತರಿದ್ದರು.

ಮಾಹಿತಿ ಕಾರ್ಯಗಾರ

ಮಾಹಿತಿ ಕಾರ್ಯಗಾರ

Saturday, June 2nd, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ  ದಿನಾಂಕ 01/05/2012 ರಂದು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣಾ ಇಲಾಖೆಯ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಯ ಸಮಕ್ಷಮದಲ್ಲಿ 2011-12ನೇ ಸಾಲಿನ ಶೈಕ್ಷಣಿಕ ಕಡ್ಡಾಯ ಶಿಕ್ಷಣದ ಬಗ್ಗೆ ಮಾಹಿತಿ ಸಭೆ ನಡೆಯಿತು.

ಕಂಪ್ಯೂಟರ್ ಕಾರ್ಯಾಗಾರ ತರಗತಿ ಆರಂಭ

ಕಂಪ್ಯೂಟರ್ ಕಾರ್ಯಾಗಾರ ತರಗತಿ ಆರಂಭ

Tuesday, May 22nd, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರಿಗಾಗಿ ಶೈಕ್ಷಣಿಕ ಕಂಪ್ಯೂಟರ್ ಕಾರ್ಯಾಗಾರ ತರಗತಿಗಳು ದಿನಾಂಕ ೧೫.೦೫.೨೦೧೨ ರಿಂದ ಆರಂಭಗೊಂಡಿದೆ.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 96% ಫಲಿತಾಂಶ

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 96% ಫಲಿತಾಂಶ

Tuesday, May 22nd, 2012

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು 2011-12ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ 50ವಿದ್ಯಾರ್ಥಿಗಳಲ್ಲಿ 48 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು  ಶೇಕಡಾ 96% ಫಲಿತಾಂಶ ಬಂದಿರುತ್ತದೆ. ಇದರಲ್ಲಿ 11 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ,  23 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು  08   ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, ಮತ್ತು 05 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.     ಅಮೃತ.ಪಿ – 595 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಮಾನಸ – 572 ಅಂಕಗಳೊಂದಿಗೆ ಶಾಲೆಗೆ ದ್ವಿತೀಯ […]

ಹೊಸತನದ ವೆಬ್‍ಸೈಟ್

Wednesday, May 16th, 2012

ನಮ್ಮ ಸಂಸ್ಥೆಯ ವೆಬ್‍ಸೈಟ್ ಹೊಸತನದೊಂದಿಗೆ ಶೀಘ್ರದಲ್ಲಿ ಬರಲಿದೆ.

banner

banner

Tuesday, May 8th, 2012

Hello world!

Thursday, May 3rd, 2012

Welcome to WordPress. This is your first post. Edit or delete it, then start blogging!

Highslide for Wordpress Plugin