ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಸಂಬAಧಿತ ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಶಿಶುವಾಟಿಕ ಆಚಾರ್ಯ ಪ್ರಶಿಕ್ಷಣ ವರ್ಗವನ್ನು ಸರಸ್ವತಿ ವಿದ್ಯಾಮಂದಿರ ನರಿಮೊಗರು ಇದರ ಅಧ್ಯಕ್ಷರಾದ ಅವಿನಾಶ್ ಕೊಡಂಕಿರಿಯವರು ದೀಪ ಪ್ರಜ್ವಲಿಸಿ ಉದ್ಘಾಟಿಸುತ್ತಾ ಶಿಶುಮಂದಿರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾತಾಜಿಯವರು ಅಧ್ಯಯನ ಶೀಲ, ವಿವೇಚನಾ ಸಹಿತ, ವಿಮರ್ಶಾ ಗುಣವನ್ನು ಹೊಂದಿರಬೇಕು. ಶಿಕ್ಷಕರ ಈ ಮನೋ ವೃತ್ತಿಯು ಮಕ್ಕಳ ಕ್ರಿಯಾಶೀಲತೆಯನ್ನು ಪೋಷಿಸಲು ಸಹಕಾರಿಯಾಗಿದೆ. ಮನೆ – ಶಾಲೆ ಹಾಗೂ ವಾತಾವರಣ ಅವರ ಮೇಲೆ ಧನಾತ್ಮಕ ಪರಿಣಾಮ ಬೀರುವಂತೆ ಶಿಕ್ಷಣ ನೀಡುವ ಜವಾಬ್ದಾರಿ ನಮಗಿದೆ ಎಂದರು.
ವಿದ್ಯಾಭಾರತಿಯ ಕ್ಷೇತ್ರೀಯ ಶಿಶು ಶಿಕ್ಷಣ ಸಹ ಪ್ರಮುಖರಾದ ಬೆಂಗಳೂರಿನ ತಾರಾ ಮಾತಾಜಿ ಇವರು ವಿದ್ಯಾಭಾರತಿ ಕರ್ನಾಟಕ ನಿರ್ಮಿತ ಚಟುವಟಿಕೆ ಆಧಾರಿತ ಪಠ್ಯಪುಸ್ತಕಗಳ ಬೋಧನಾ ವಿಧಾನಗಳ ಬಗ್ಗೆ ನಡೆಸಿಕೊಟ್ಟ ಜಿಲ್ಲಾಮಟ್ಟದ ಪ್ರಶಿಕ್ಷಣ ವರ್ಗದಲ್ಲಿ ವಿದ್ಯಾಭಾರತಿ ಕ್ಷೇತ್ರೀಯ ಕಾರ್ಯದರ್ಶಿಗಳಾದ ವಸಂತ ಮಾಧವ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣದ ಪ್ರಾಂತ ಪ್ರಮುಖರಾದ ವೆಂಕಟರಮಣ ಮಂಕುಡೆ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ರಮೇಶ್ಚಂದ್ರ, ಸಂಚಾಲಕರಾದ ವಸಂತ ಸುವರ್ಣ ಕೋಶಾಧಿಕಾರಿಗಳಾದ ಅಶೋಕ ಕುಂಬ್ಳೆ ಉಪಸ್ಥಿತರಿದ್ದರು.
ವಿದ್ಯಾಭಾರತಿಯ ಸಂಲಘ್ನಗೊAಡ ಶಿಶುಮಂದಿರಗಳು, ಎಲ್.ಕೆ.ಜಿ, ಯು.ಕೆ.ಜಿ ವಿಭಾಗಗಳ ಮಾತಾಜಿಯವರು ತರಬೇತಿಯ ಪ್ರಯೋಜನ ಪಡೆದುಕೊಂಡರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಕಲ್ಲಡ್ಕ ಪ್ರಭಾಕರ ಭಟ್ ಇವರು ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ ಪದಾಧಿಕಾರಿಗಳೊಂದಿಗೆ ಮಾತನಾಡುತ್ತಾ ಶಿಶುಮಂದಿರಗಳ ಶೈಕ್ಷಣಿಕ ಸ್ವರೂಪ, ಪ್ರಶಿಕ್ಷಣದ ಅಗತ್ಯತೆ, ಪೋಷಕರ ಸಹಭಾಗಿತ್ವ, ಭೌತಿಕ ವ್ಯವಸ್ಥೆಗಳ ಸುಸೂತ್ರ ನಿರ್ವಹಣೆಗಳ ಬಗ್ಗೆ ಸಂವಾದ ನಡೆಸಿದರು. ಅನಂತರದ ಸಮಾರೋಪದಲ್ಲಿ ಇವರು ಮಾತನಾಡುತ್ತಾ ಶಿಶುಮಂದಿರಗಳ ಮೂಲಾಧಾರ ಪರಿಕಲ್ಪನೆಯನ್ನು ಆರಂಭಿಸಿದ ರಾಷ್ಟಿçÃಯ ಸ್ವಯಂಸೇವಕ ಸಂಘವು ಶಿಕ್ಷಣದಲ್ಲಿ ಭಾರತೀಯತೆಯನ್ನು ಮತ್ತೆ ದೃಷ್ಟೀಕರಿಸುವ ಕೈಂಕರ್ಯದಲ್ಲಿ ಕಾರ್ಯನಿರತವಾಗಿದ್ದು ನಮಗೆಲ್ಲ ಈ ನಿಟ್ಟಿನಲ್ಲಿ ಗುರುತರವಾದ ಜವಾಬ್ದಾರಿ ಇರುತ್ತದೆ. ಬಾಲ್ಯದಿಂದಲೇ ನಮ್ಮತನದ ಶಿಕ್ಷಣ ಧನಾತ್ಮಕ ವ್ಯಕ್ತಿತ್ವ ರೂಪಿಸಲು ಭದ್ರಬುನಾದಿಯಾಗಬೇಕು ಎಂದರು.