“ಅಯೋಧ್ಯಾ ವಿರಾಜಮಾನ ರಾಮ” ಕಾರ್ಯಕ್ರಮ

                                                                                          

ಬಾಲರಾಮದೇವರ ಪ್ರಾಣ ಪ್ರತಿಷ್ಠಾಪನೆ ಸಂಭ್ರಮವನ್ನು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಆಚರಿಸಿದ ಕ್ಷಣಕ್ಕೆ ಶಾಲಾ ಶಿಕ್ಷಕ ಪೂರಕ ಶಿಕ್ಷಕ ವೃಂದ ವಿದ್ಯಾರ್ಥಿ ವೃಂದ ಸಾಕ್ಷಿಯಾಯಿತು.

ಶಾಲೆಯಲ್ಲಿ ಮಕ್ಕಳು ಹಾಗೂ ಶಿಕ್ಷಕರು ಶ್ರೀರಾಮ ತಾರಕ ಮಂತ್ರವನ್ನು ಪಠಿಸುತ್ತಾ ರಾಮ ಭಜನೆಯನ್ನು ಸ್ತುತಿಸಿದರು. ಆನಂತರ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಭು ರಾಮನೂರಿನ ವೈಭವದ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳುವ ವಿಡಿಯೋ ಚಿತ್ರಣದ ನೇರ ಪ್ರಸಾರವನ್ನು ತೋರಿಸಲಾಯಿತು. ಪ್ರತಿ ತರಗತಿಯ ಮಕ್ಕಳು ಹಾಗೂ ತರಗತಿ ಶಿಕ್ಷಕರಿಂದ ಪಂಚಾರತಿ ಮಾಡಿಸಿ ಪಾಯಸದೂಟ ನೀಡಲಾಯಿತು.

Highslide for Wordpress Plugin