ಪ್ರತಿಭಾ ಪುರಸ್ಕಾರ ಕಾರ್ಯಕ್ರಮ – 5-10

‘ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಇಂದು ಅನೇಕ ಸ್ಪರ್ಧಾತ್ಮಕ ಕಾರ್ಯಕ್ರಮಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡುತ್ತಿದ್ದಾರೆ’ ಎಂದು ಶಾಲೆಯಲ್ಲಿ ನಡೆದ 5ರಿಂದ 10ನೇ ತರಗತಿಯವರೆಗಿನ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಭಾಧ್ಯಕ್ಷ ಸ್ಥಾನವನ್ನು ವಹಿಸಿದ ಕೃಷಿಕರು, ಹೈನುಗಾರಿಕೆ ತಜ್ಞರು ಆಗಿರುವ ಶ್ರೀ ಈಶ್ವರ ಭಟ್ ಪೆರುವಾಜೆ ಇವರು ನುಡಿದರು.

                                                   

ಅಭ್ಯಾಗತರಾಗಿ ಆಗಮಿಸಿದ ಶಾಲಾ ಹಿರಿಯ ವಿದ್ಯಾರ್ಥಿನಿ ಶ್ರೀಮತಿ ಪೂರ್ಣಿಮಾ ಮಕ್ಕಳಿಗೆ ಶುಭ ಹಾರೈಸಿದರು.

 

 

 

 

 

 

ವೇದಿಕೆಯಲ್ಲಿ ಇನ್ನೊರ್ವ ಅಭ್ಯಾಗತರಾದ ಶಾಲಾ ಪೋಷಕರೂ ಆಗಿರುವ ಶ್ರೀಮತಿ ಗುಲಾಬಿ ಗೌಡ, ಹಿರಿಯ ಶಿಕ್ಷಕಿ ಶ್ರೀಮತಿ ರೇವತಿ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ರಮೇಶ್ಚಂದ್ರ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕು. ಲಾಸ್ಯ ಪ್ರಾರ್ಥಿಸಿ, ಕು. ಪ್ರಜ್ಞಾ ನಿಡ್ವಣ್ಣಾಯ ಸ್ವಾಗತಿಸಿ, ಕು. ದೀಕ್ಷಿತಾ ಮತ್ತು ಕು. ಪ್ರಣವ್ಯ ಬಹುಮಾನಿತರ ಪಟ್ಟಿ ವಾಚಿಸಿದರು. ಕು. ಬಿಂದುಶ್ರೀ ಧನ್ಯವಾದ ಸಮರ್ಪಿಸಿದ ಕಾರ್ಯಕ್ರಮವನ್ನು ಕು. ಗಗನ ನಿರೂಪಿಸಿದರು.

Highslide for Wordpress Plugin