ಚಂದ್ರಯಾನ -3 ರ ಯಶಸ್ವಿ ಸಾಧನೆಯ ಸಂಭ್ರಮಾಚರಣೆ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಭಾರತದ ವೈಜ್ಞಾನಿಕ ಸಾಧನೆಗಳಲ್ಲಿ ಪ್ರಮುಖ ಹಾಗೂ ಮಹತ್ವಪೂರ್ಣವಾದ ಚಂದ್ರಯಾನ 3 ರ ಯಶಸ್ವಿ ಸಾಧನೆಯ ಸಂಭ್ರಮವನ್ನು ಆಚರಿಸಲಾಯಿತು. ಭಾರತಮಾತೆಯ ಭಾವಚಿತ್ರಕ್ಕೆ ಆರತಿ ಬೆಳಗಿ, ಪುಷ್ಪಾರ್ಚನೆ ಮಾಡಿ ಜಯಘೋಷದೊಂದಿಗೆ ವಂದೇ ಮಾತರಂ ಹಾಡನ್ನು ಸಾಮೂಹಿಕವಾಗಿ ಹಾಡಲಾಯಿತು. ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಮಾತಾಜಿ ಚಂದ್ರಯಾನದ ಸಾಧನೆಗಳನ್ನು ತಿಳಿಸುತ್ತಾ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಶುಭ ಹಾರೈಕೆಯ ಮಾತುಗಳನ್ನು ಉಲ್ಲೇಖಿಸಿದರು. ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ವಸಂತ ಸುವರ್ಣ ಇವರು ಭಾರತೀಯ ಯುವಶಕ್ತಿಯಾದ ವಿದ್ಯಾರ್ಥಿಗಳು ವೈಜ್ಞಾನಿಕ ಸಾಧನೆಗಳಲ್ಲಿ ಗುರುತಿಸಿಕೊಳ್ಳುವುದರಲ್ಲಿ ಕಾರ್ಯತತ್ಪರವಾಗಬೇಕು ಎಂದು ನುಡಿದರು. ಆಡಳಿತ ಮಂಡಳಿಯ ಸದಸ್ಯರಾದ ಡಾ.ಆಶಾ, ಶ್ರೀಮತಿ ವೀಣಾ ನಾಗೇಶ ತಂತ್ರಿ ಉಪಸ್ಥಿತರಿದ್ದರು. ಪೆÇೀಷಕರು, ಶಿಕ್ಷಕರು, ಮಕ್ಕಳು ಭಾರತೀಯ ಸಾಧನೆಗೆ ಹರ್ಷ ವ್ಯಕ್ತಪಡಿಸಿದರು. ಮಧ್ಯಾಹ್ನದ ಮಕ್ಕಳ ಊಟಕ್ಕೆ ಈ ಸಂಭ್ರಮದ ಆಚರಣೆಯ ಅಂಗವಾಗಿ ಪಾಯಸ ವಿತರಿಸುವುದು ಎಂದು ತಿಳಿಸಲಾಯಿತು.                                                                                                                                                       

Highslide for Wordpress Plugin