ಸಾನ್ನಿಧ್ಯ – ಲೋಕಾರ್ಪಣೆ – ಗಣಪತಿ ಹೋಮ

ಸಾನ್ನಿಧ್ಯ – ಲೋಕಾರ್ಪಣೆ – ಗಣಪತಿ ಹೋಮ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಅನ್ನಪೂರ್ಣ ಯೋಜನೆಯ ನೂತನ ಪಾಕಶಾಲೆ ‘ಸಾನ್ನಿಧ್ಯ’ ಲೋಕಾರ್ಪಣೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜು.06ರಂದು ನೆರವೇರಿತು. ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ ವಿ.ಎಸ್.ಭಟ್ ನೇತೃತ್ವದಲ್ಲಿ ಗಣಪತಿ ಹೋಮ ನಡೆದು ‘ಸಾನ್ನಿಧ್ಯ’ ಅನ್ನಪೂರ್ಣ ಪಾಕಶಾಲೆಯ ಪ್ರವೇಶೋತ್ಸವ ನೆರವೇರಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಂಪ್ಯ ಆನಂದಾಶ್ರಮ ಸೇವಾ ಟ್ರಸ್ಟ್‍ನ ಅಧ್ಯಕ್ಷೆ ಡಾ. ಗೌರಿ ಪೈ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ವಿವೇಕಾನಂದಕ್ಕೆ ತನ್ನದೇ ಆದ ಸ್ಥಾನವಿದೆ. ವಿವೇಕಾನಂದ ಸಂಸ್ಥೆ ಎನ್ನುವ ಹೆಸರಿಗೆ ಒಂದು ಹೆಮ್ಮೆಯಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳಿಗೂ ಹೆಮ್ಮೆಯಿದೆ ಎಂದು ಹೇಳಿ, ಕಾರ್ಯಕ್ರಮಕ್ಕೆ ತನ್ನನ್ನು ಆಹ್ವಾನಿಸಿ ಸನ್ಮಾನಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

                  ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ.ಎಮ್.ಕೃಷ್ಣ ಭಟ್ ಮಾತನಾಡಿ, ಸುಮಾರು 22 ಗ್ರಾಮಗಳಿಂದ ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಮಧ್ಯಾಹ್ನ ಭೋಜನದ ವ್ಯವಸ್ಥೆಯ ಆಶಯ ಆಡಳಿತ ಮಂಡಳಿ, ಶಿಕ್ಷಕರಲ್ಲಿದ್ದು ಅದು ಈಗ ಈಡೇರಿದೆ. ಹಲವು ಮಂದಿ ದಾನಿಗಳು ನಮ್ಮ ಯೋಜನೆಗೆ ನಿರೀಕ್ಷೆಗಿಂತ ಹೆಚ್ಚು ಸಹಕಾರ ನೀಡಿದ್ದಾರೆ. ಸಾನ್ನಿಧ್ಯದಲ್ಲಿ ವಿದ್ಯೆ, ಅನ್ನದ ಜೊತೆಗೆ ವಿದ್ಯಾರ್ಥಿಗಳ ಬೌದ್ಧಿಕ ಹೊಟ್ಟೆಯ ಹಸಿವು ನೀಗಿಸಲಗುತ್ತಿದ್ದು ಇಲ್ಲಿಂದ ಹೊರಹೊಮ್ಮುವ ವಿದ್ಯಾರ್ಥಿಗಳು ಸಮಾಜದ ಹಸಿವು ತಣಿಸುವಂತೆ ಬೆಳವಣಿಗೆಯಾಗಲಿ ಎಂದರು.
ಅನ್ನಪೂರ್ಣ ಯೋಜನೆಯ ಪಾಕ ಶಾಲೆ ಸಾನ್ನಿಧ್ಯಕ್ಕೆ ಸುಮಾರು ರೂ 5ಲಕ್ಷ ವೆಚ್ಚದಲ್ಲಿ ಸ್ಟೀಮ್‍ನ್ನು ಕೊಡುಗೆಯಾಗಿ ನೀಡಿದ ಆನಂದಾಶ್ರಮ ಸೇವಾ ಟ್ರಸ್ಟ್‍ನ ಅಧ್ಯಕ್ಷೆ ಡಾ.ಗೌರಿ ಪೈಯವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಆಡಳಿತ ಮಂಡಳಿ ಸದಸ್ಯೆ ಡಾ. ಆಶಾ ಸನ್ಮಾನಿತರ ಪರಿಚಯ ಮಾಡಿದರು.

   ಅನ್ನಪೂರ್ಣ ಯೋಜನೆಯ ಅಧ್ಯಕ್ಷ ಸುಹಾಸ್ ಮಜಿ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ಚಂದ್ರ ನಾಯಕ್, ಶಾಲಾ ಸಂಚಾಲಕ ವಸಂತ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪುನೀತ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕೋಶಾಧಿಕಾರಿ ಅಶೋಕ್ ಕುಂಬ್ಳೆ ವಂದಿಸಿದರು. ಶಿಕ್ಷಕಿ ವೀಣಾಸರಸ್ವತಿ ಪ್ರಾರ್ಥಿಸಿ, ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin