‘ಸಹಜ’ – ಮೂಲಿಕಾ ವನ ನಿರ್ಮಾಣ ಯೋಜನೆ

ಔಷಧೀಯ ಸಸ್ಯಗಳ ಸಂರಕ್ಷಣೆ ಹಾಗೂ ಬಳಕೆಯ ಅರಿವು ಶಾಲಾ ದಿನಗಳಿಂದಲೇ ಬೆಳೆಸುವ ಶಾಲಾ ಕಾರ್ಯ ಶ್ಲಾಘನೀಯ –      ಡಾ.ಹರಿಕೃಷ್ಣ ಪಾಣಾಜೆ

ವಿವೇಕಾನಂದ ವಿದ್ಯಾವರ್ಧಕ ಸಂಘದ ಮಹತ್ವಾಕಾಂಕ್ಷೆಯ ಯೋಜನೆ ‘ವಿವೇಕ ಸಂಜೀವಿನಿ’ ಯ [ಔಷಧೀಯ ಸಸ್ಯಗಳ ಸಂರಕ್ಷಣೆ, ಸಂವರ್ಧನೆ, ಬಳಕೆ ಹಾಗೂ ಜಾಗೃತಿಯ ಆಂದೋಲನ] ಆಶಯದಂತೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ‘ಸಹಜ- ಮೂಲಿಕಾ ವನ ನಿರ್ಮಾಣ ಯೋಜನೆ’ಯ ಕಾರ್ಯಕ್ರಮವನ್ನು ಶ್ರೀ ದುರ್ಗಾ ಕ್ಲಿನಿಕ್ ಪುತ್ತೂರು ಇಲ್ಲಿನ ಆರ್ಯುವೇದಿಕ್ ವೈದ್ಯರಾದ ಡಾ|ಹರಿಕೃಷ್ಣ ಪಾಣಾಜೆ ಉದ್ಫಾಟಿಸಿ ಮಾತಾನಾಡಿ ‘ಔಷಧೀಯ ಸಸ್ಯಗಳ ಸಂರಕ್ಷಣೆ ಹಾಗೂ ಬಳಕೆಯ ಅರಿವು ಶಾಲಾ ದಿನಗಳಿಂದಲೇ ಬೆಳೆಸುವ ಕಾರ್ಯ ಶ್ಲಾಘನೀಯವಾಗಿದೆ. ಈಗ ಬೆಳೆಸಿಕೊಳ್ಳುವ ಈ ರೀತಿಯ ಅಭ್ಯಾಸಗಳನ್ನು ನೀವು ಬದುಕಿನಲ್ಲಿ ಮುಂದುವರಿಸುವ ಅಗತ್ಯ ಪ್ರಯತ್ನ ಮಾಡಬೇಕು ಮತ್ತು ಸಹಜ- ಸರಳ ಪ್ರಾದೇಶಿಕ ಆಹಾರ ವಸ್ತುಗಳ ಬಗ್ಗೆ ಒಲವು ತೋರಿಸಬೇಕು’ ಎಂದರು.

                                                                                               

ಅನಂತರ ಶಾಲಾ ಮೂಲಿಕಾ ವನ ನಿರ್ಮಾಣಕ್ಕೆ ಚಾಲನೆ ನೀಡುವ ಸಲುವಾಗಿ ಬೇವಿನ ಸಸಿ ನೆಟ್ಟು ಶುಭ ಹಾರೈಸಿದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ರಮೇಶ್ಚಂದ್ರ , ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ವೀಣಾ ನಾಗೇಶ್ ತಂತ್ರಿ, ಮುಖ್ಯಗುರು ನಳಿನಿ ಮಾತಾಜಿ ಉಪಸ್ಥಿತರಿದ್ದರು. ಮಕ್ಕಳು ನೆಟ್ಟ ಗಿಡಗಳಿಗೆ ನೀರುಣಿಸುವ ಹಾಗೂ ತಿಳಿಸುವ ಹಂತಗಳ ಬಗ್ಗೆ ಸಹ-ಸಂಜೀವಿನಿಯ ಸಂಯೋಜಕರಾದ ಶ್ರೀಮತಿ ಶ್ವೇತಾ, ಶ್ರೀಮತಿ ಸ್ವಾತಿ ಶ್ರೀಮತಿ ವೀಣಾಸರಸ್ವತಿ ಮಾತಾಜಿ ಮಾಹಿತಿ ನೀಡಿದರು.

                               

                                 

                               ಶಾಲಾ ಶಿಕ್ಷಕರು, ಮಕ್ಕಳು, ಹಾಗೂ ಶಾಲಾ ಸಹಜ- ಸಂಜೀವಿನಿ ಸಮಿತಿಯ ಸದಸ್ಯರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮವನ್ನು ಸ್ವಾತಿ ಮಾತಾಜಿ ನಿರೂಪಿಸಿದರು.

Highslide for Wordpress Plugin