ಸಂಸ್ಕೃತ ಶಬ್ಧಗಳ ತಪ್ಪು ಉಚ್ಛಾರಣೆಯು ಅರ್ಥವ್ಯತ್ಯಾಸವನ್ನುಂಟುಮಾಡುತ್ತದೆ. ಈ ನಿಟ್ಟಿನಲ್ಲಿ ಎಲ್ಲರಿಗೂ ಇದರ ಸ್ಪಷ್ಟ, ನಿರ್ದಿಷ್ಟ ಉಚ್ಛಾರಣೆಯ ಕಡೆಗೆ ಗಮನ ಅತೀ ಅಗತ್ಯವಾಗಿದೆ ಎಂದು ವಿವೇಕಾನಂದ ಪದವಿ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಡಾ.ಶ್ರೀಶ ಕುಮಾರ್ ನುಡಿದರು.
ಇವರು ವಿವೇಕಾನಂದ ಕನ್ನಡ ಮಾಧ್ಯಮದ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಭಗವದ್ಗೀತೆಯ ಶ್ಲೋಕಗಳ ಉಚ್ಛಾರಣಾ ಕ್ರಮದ ಬಗ್ಗೆ ತರಗತಿ ನಡೆಸಿದರು.