ಭಾರತ ಸಂಸ್ಕೃತಿ ಪ್ರತಿಷ್ಠಾನ ಬೆಂಗಳೂರು ಇವರು 2019 ನೇ ಸಾಲಿನಲ್ಲಿ ನಡೆಸಿದ ರಾಮಾಯಣ-ಮಹಾಭಾರತ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಕು. ಆಕಾಂಕ್ಷ ಇವರು ರಾಮಾಯಣ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. (ಇವರು ಸುನಾದ ಸಂಗೀತಕ ಲಾಶಾಲೆಯ ಗುರುಗಳಾದ ಕಾಂಚನ ಈಶ್ವರ ಭಟ್ ಮತ್ತು ವಿಜಯಶ್ರೀ ದಂಪತಿಯ ಪುತ್ರಿ.) ಮತ್ತು ಕು. ಸುಮಾ ಭಟ್ ಸಿ. ಎಚ್. ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಹಾಗೂ ಮಹಾಭಾರತ ಪರೀಕ್ಷೆಯಲ್ಲಿ 10 ನೇ ತರಗತಿ ವಿದ್ಯಾರ್ಥಿಗಳಾದ ಶರಣ್ಯ ಎಮ್., ರಾಮನಾಥ್ ಶೆಣೈ, ಅನಘಾ ಭಟ್, ಸಿಂಚನಾ ಟಿ. ಇವರು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.ಇವರಿಗೆ ಶಿಕ್ಷಕಿ ಶ್ರೀಮತಿ ರೇವತಿ ಬಿ. ಮಾರ್ಗದರ್ಶನ ನೀಡಿರುತ್ತಾರೆ.
