ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ವತಿಯಿಂದ ನಡೆಸಿದ ಜ್ಞಾನ – ವಿಜ್ಞಾನ ಮೇಳ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ತಣಿಸಂದ್ರ ಬೆಂಗಳೂರು ಇಲ್ಲಿ ನಡೆದ ರಾಷ್ಟ್ರಮಟ್ಟದ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಶ್ರಯ್ ಪಿ.ವಿ. (ವಿಶ್ವನಾಥ ಗೌಡ ಪಟ್ಟೆ ಮತ್ತು ರೇವತಿ ದಂಪತಿಯ ಪುತ್ರ) ಮತ್ತು ರಕ್ಷಿತಾ ಡಿ. (ಡೊಂಬಯ ಗೌಡ ಪಂಜಳ ಮತ್ತು ದಾಕ್ಷಾಯಿಣಿ ದಂಪತಿಯ ಪುತ್ರಿ) ತೃತೀಯ ಸ್ಥಾನ ಪಡೆದಿರುತ್ತಾರೆ.
