ಷಣ್ಮುಖದೇವ ಪ್ರೌಢಶಾಲೆ, ಪೆರ್ಲಂಪಾಡಿ ಇಲ್ಲಿ ಸ್ವಾತಂತ್ರ್ಯೋತ್ಸವದ ದಿನದಂದು ’ಕರ್ಣಪರ್ವ’ದಿಂದ ಆಯ್ದ ವಿಷಯದಲ್ಲಿ ’ಕಾವ್ಯ ವಾಚನ’ ನಡೆಯಿತು. ವಾಚನವನ್ನು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಶಿಕ್ಷಕರಾದ ಶ್ರೀ ಚಂದ್ರಶೇಖರ್ ಸುಳ್ಯಪದವು, ಪ್ರವಚನವನ್ನು ಕಟೀಲು ಮೇಳದ ಹಿರಿಯ ಕಲಾವಿದ ಅಪ್ಪಕುಂಞ ಯಾದವ್ ರವರು ಗೈದರು. ಶೃತಿಯಲ್ಲಿ ಶ್ರೀ ಲಿಂಗಪ್ಪ ಗೌಡ ಪುತ್ತೂರು ಸಹಕರಿಸಿದರು.