ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸರಕಾರಿಉನ್ನತ ಹಿರಿಯ ಪ್ರಾಥಮಿಕ ಶಾಲೆ ಉಪ್ಪಿನಂಗಡಿಯಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಆರೋಗ್ಯ ವಿಷಯದಲ್ಲಿ ಆಶ್ರಯ್ ಪಿ.ವಿ (ನೈತಾಡಿ ವಿಶ್ವನಾಥಗೌಡ ಮತ್ತು ರೇವತಿ ಬಿ. ದಂಪತಿಗಳ ಪುತ್ರ) ಮತ್ತು ಅಕ್ಷಯ್ ರೈ (ನೀರ್ಪಾಡಿ ಜಗನ್ನಾಥ ರೈ ಮತ್ತು ಮೋಹಿನಿ ಜೆರೈ ದಂಪತಿಗಳ ಪುತ್ರ) ದ್ವಿತೀಯ ಸ್ಥಾನ ಮತ್ತು ನಿತ್ಯಜೀವನದಲ್ಲಿ ಗಣಿತದ ಪರಿಹಾರ ವಿಷಯದಲ್ಲಿ ತೀರ್ಥರಾಜ್ (ನರಿಮೊಗರು ಶಿವರಾಮ ಗೌಡ ಮತ್ತು ರೇವತಿ ದಂಪತಿಗಳ ಪುತ್ರ) ದ್ವಿತೀಯ ಸ್ಥಾನ ಪಡೆದಿದ್ದಾರೆ.
