ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇದರ ಕನ್ನಡ ಸಂಘದ ಆಶ್ರಯದಲ್ಲಿ ಹಾ.ಸ.ಬ್ಯಾಕೋಡ ರವರು ಬರೆದ ’ಪೂ’ ಕನ್ನಡ ಕೃತಿಯನ್ನು ಶ್ರೀ ರಾಮಚಂದ್ರ ಭಟ್ ರವರು ಇಂಗ್ಲಿಷ್ಗೆ ಅನುವಾದಿಸಿದ ಪುಸ್ತಕವನ್ನು ಬಿಡುಗಡೆಗೊಳಿಸುವ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.



ಕಾರ್ಯಕ್ರಮದಲ್ಲಿ ಯುವ ಸಾಹಿತಿ ಶ್ರೀ ಹಾ.ಸ.ಬ್ಯಾಕೋಡ, ಶಿಶು ಸಾಹಿತಿ ಶ್ರೀ ಉಲ್ಲಾಸಣ್ಣ ಮತ್ತು ಉಪನ್ಯಾಸಕರಾದ ಶ್ರೀ ರಾಮಚಂದ್ರ ಭಟ್ ರವರು ಉಪಸ್ಥಿತರಿದ್ದರು. ಸಭಾಧ್ಯಕ್ಷತೆಯನ್ನು ಶಾಲಾ ಹಿರಿಯ ಶಿಕ್ಷಕಿ ಕು. ಲೀಲಾವತಿ ಹಂದ್ರಟ್ಟರವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಸ್ವಾಗತ, ಪ್ರಾಸ್ತಾವಿಕ, ಧನ್ಯವಾದ, ನಿರೂಪಣೆಯನ್ನು ಶಿಕ್ಷಕ ಶ್ರೀ ಚಂದ್ರಶೇಖರ ಸುಳ್ಯಪದವುರವರು ನೆರವೇರಿಸಿದರು.