ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದಿರೆ ಇದರ ಸಹಭಾಗಿತ್ವದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮೂಡಬಿದಿರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿವೇಕಾನಂದಕನ್ನಡ ಮಾಧ್ಯಮ ಶಾಲೆಯ 17 ರ ವಯೋಮಾನದ ವಿಭಾಗದಲ್ಲಿ ರಕ್ಷಿತಾ ಐ – 3000 ಮೀ ನಡಿಗೆ (ಪ್ರಥಮ) ಇವರು ಅಜೇಯನಗರದ ಈಶ್ವರಗೌಡ ಮತ್ತು ದೇವಕಿಯವರ ಪುತ್ರಿ, ಶ್ರದ್ಧಾ – 3000 ಮೀ ನಡಿಗೆ(ದ್ವಿತೀಯ)ಇವರು ಅಜೇಯನಗರ ಮನೋಜ್ಕುಮಾರ್ ಮತ್ತು ಅನುರಾಧರವರ ಪುತ್ರಿ, ಪ್ರಜ್ವಲ್- 100 ಮೀ(ದ್ವಿತೀಯ), 200 ಮೀ (ತೃತೀಯ) ಇವರು ಬಲ್ನಾಡುಜನಾರ್ಧನ ಮತ್ತು ಕುಸುಮವತಿಯವರ ಪುತ್ರ, ನವ್ಯಶ್ರೀ – ಹರ್ಡಲ್ಸ್(ದ್ವಿತೀಯ) ಇವರು ಕಾವು ಪಿಲಿಪಂಜದ ಅಣ್ಣು ಪೂಜಾರಿ ಮತ್ತು ಲೀಲಾವತಿಯವರ ಪುತ್ರಿ, ರೇಖಾ.ಕೆ – ಉದ್ದಜಿಗಿತ (ತೃತೀಯ), ಇವರು ಕಾವು ನಾಗೇಶ್ ಮತ್ತು ಕುಸುಮರವರ ಪುತ್ರಿ, ಸಂಧ್ಯಾ -ತ್ರಿವಿಧಜಿಗಿತ (ತೃತೀಯ), ಇವರು ಸಂಪ್ಯ ಕರಿಯ ಮತ್ತು ಲಲಿತಾರವರ ಪುತ್ರಿ.
ಮತ್ತು 14 ರ ವಯೋಮಾನದ ವಿಭಾಗದಲ್ಲಿ ದೀಕ್ಷಾ -80ಮೀ ಹರ್ಡಲ್ (ದ್ವಿತೀಯ), 400 ಮೀ (ದ್ವಿತೀಯ), ರಿಲೇ (ಪ್ರಥಮ) ಇವರು ಪೆರಿಗೇರಿಯ ಕಮಲಾಕ್ಷ ಮತ್ತು ಕಮಲಾಕ್ಷಿಯವರ ಪುತ್ರಿ , ಚೈತ್ರಾ.ಪಿ- ರಿಲೇ (ಪ್ರಥಮ) ಇವರು ಹಳೆನೆರೇಂಕಿಯ ಲಕ್ಷಣಗೌಡ ಮತ್ತು ಹೇಮಾಲತಾರವರ ಪುತ್ರಿ,ಯುಕ್ತಿಕಾ – ರಿಲೇ(ಪ್ರಥಮ) ಇವರು ಅನಂತಾಡಿಯ ಗಣೇಶ್ ಪೂಜಾರಿ ಮತ್ತು ಯೋಗಿನಿಯವರ ಪುತ್ರಿ, ಆಯಿಷತ್ಲ್ ಆಸಿಫಾ -ರಿಲೇ (ಪ್ರಥಮ) ಇವರು ತಿಂಗಳಾಡಿಯ ಅಬ್ದುಲ್ರಜಾಕ್ ಮತ್ತು ಅಸ್ಮ.ಕೆ ಟಿ. ರವರ ಪುತ್ರಿ. ಇವರಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ನವಂಬರ್ 24 ಮತ್ತು 25 ರಂದು ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆಯನ್ನು ಗಳಿಸಿದ್ದಾರೆ.
