ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಪುತ್ತೂರು ಹಾಗೂ ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ 2015-16 ನೇ ಸಾಲಿನ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ.

14 ರ ವಯೋಮಾನದ 8 ನೇತರಗತಿಯ ಪ್ರೌಢಶಾಲಾ ಬಾಲಕಿಯರ ವಿಭಾಗದ ತಂಡ ಪ್ರಶಸ್ತಿಯೊಂದಿಗೆ:
ದೀಕ್ಷಾ -80 ಮೀ ಹರ್ಡಲ್ಸ್, 400 ಮೀ ,ರಿಲೇಯಲ್ಲಿ (ಪ್ರಥಮ) ಇವರು ಪೆರಿಗೇರಿಯ ಕಮಲಾಕ್ಷ ಮತ್ತು ಕಮಲಾಕ್ಷಿಯವರ ಪುತ್ರಿ, ಯುಕ್ತಿಕಾ -100 ಮೀ, 200 ಮೀ ರಿಲೇ(ಪ್ರಥಮ) ಇವರು ಅನಂತಾಡಿಯ ಗಣೇಶ್ ಪೂಜಾರಿ ಮತ್ತು ಯೋಗಿನಿಯವರ ಪುತ್ರಿ, ಚೈತ್ರಾ.ಪಿ- 600 ಮೀ(ಪ್ರಥಮ), 400 ಮೀ (ತೃತೀಯ), ರಿಲೇ (ಪ್ರಥಮ) ಇವರು ಹಳೆನೆರೇಂಕಿಯ ಲಕ್ಷಣ ಗೌಡ ಮತ್ತು ಹೇಮಾಲತಾರವರ ಪುತ್ರಿ, ಮೋಕ್ಷಿತಾ- ಚಕ್ರ ಎಸೆತ(ಪ್ರಥಮ) ಇವರು ಪರ್ಲಡ್ಕದ ಬೀರಮಲೆಯ ಶಿವಪ್ರಸಾದ್ ಮತ್ತು ವನಿತಾರ ಪುತ್ರಿ, ಕೀರ್ತಿ ಕುಮಾರಿ- ಎತ್ತರ ಜಿಗಿತ(ದ್ವಿತೀಯ) ಇವರು ಮೂಂಡೂರು ರವಿಕುಮಾರ್ ಮತ್ತು ರೇಣುಕಾರವರ ಪುತ್ರಿ, ಧನುಷಾ ಶೆಟ್ಟಿ- ರಿಲೇ(ಪ್ರಥಮ) ಇವರು ದರ್ಬೇತ್ತಡ್ಕದ ಉದಯ ಕುಮಾರ್ ಶೆಟ್ಟಿ ಮತ್ತು ವೈಶಾಲತಾರವರ ಪುತ್ರಿ, ಮತ್ತು ಬಾಲಕರ ವಿಭಾಗದಲ್ಲಿ ತೇಜಸ್- ಚಕ್ರ ಎಸೆತ(ದ್ವಿತೀಯ), ದೂರ ಜಿಗಿತ (ಪ್ರಥಮ), 100 ಮೀ(ತೃತೀಯ)ಇವರು ದರ್ಬೆತಡ್ಕ ಶೀನ ಮತ್ತು ಜಯಂತಿಯವರ ಪುತ್ರ.
17 ರ ವಯೋಮಾನದ ಪ್ರೌಢಶಾಲಾ ಬಾಲಕಿಯರ ವಿಭಾಗದ ತಂಡ ಪ್ರಶಸ್ತಿಯೊಂದಿಗೆ:
ಅನುಷಾ.ಜಿ – 100 ಮೀ, 200 ಮೀ(ಪ್ರಥಮ), ರಿಲೇ (ದ್ವಿತೀಯ) ಇವರು ಪೆಲತ್ತಿಂಜ ಗೋಪಾಲ ಸಪಲ್ಯ ಮತ್ತು ನಳಿನಿಯವರ ಪುತ್ರಿ. ರಕ್ಷಿತಾ ಐ – 3000 ಮೀ ನಡಿಗೆ )ಪ್ರಥಮ) ಇವರು ಅಜೇಯನಗರದ ಈಶ್ವರ ಗೌಡ ಮತ್ತು ದೇವಕಿಯವರ ಪುತ್ರಿ, ಜಯಶ್ರೀ.ಬಿ – ಪೋಲ್ ವಾಲ್ಟ್(ಪ್ರಥಮ), ಎತ್ತರ ಜಿಗಿತ (ತೃತೀಯ) ಇವರು ನರಿಮೊಗರು ಬಾಬುಗೌಡ ಮತ್ತು ಲಲಿತಾರವರ ಪುತ್ರಿ, ಸಂಧ್ಯಾ – ಉದ್ದಜಿಗಿತ(ದ್ವಿತೀಯ), ತ್ರಿವಿಧ ಜಿಗಿತ(ಪ್ರಥಮ), ಇವರು ಸಂಪ್ಯ ಕರಿಯ ಮತ್ತು ಲಲಿತಾರವರ ಪುತ್ರಿ. ರೇಖಾ.ಕೆ – ಉದ್ದ ಜಿಗಿತ (ಪ್ರಥಮ), 400 ಮೀ(ಪ್ರಥಮ), 800 ಮೀ(ದ್ವಿತೀಯ), ರಿಲೇ(ದ್ವಿತೀಯ) ಇವರು ಕಾವು ನಾಗೇಶ್ ಮತ್ತು ಕುಸುಮರವರ ಪುತ್ರಿ, ನವ್ಯಶ್ರೀ – ಹರ್ಡಲ್ಸ್(ದ್ವಿತೀಯ), ತ್ರಿವಿಧ ಜಿಗಿತ(ತೃತೀಯ), ರಿಲೇ (ದ್ವಿತೀಯ) ಇವರು ಕಾವು ಪಿಲಿಪಂಜದ ಅಣ್ಣು ಪೂಜಾರಿ ಮತ್ತು ಲೀಲಾವತಿಯವರ ಪುತ್ರಿ, ಪೂಜಾಲಕ್ಷ್ಮೀ – ಎತ್ತರ ಜಿಗಿತ(ಫ್ರಥಮ), ಪೋಲ್ ವಾಲ್ಟ್(ದ್ವಿತೀಯ) ಇವರು ಕಾವು ಚಾಕೋಟೆಯ ಸಂಕಪ್ಪ ಪೂಜಾರಿ ಮತ್ತು ತಾರಾ ರವರ ಪುತ್ರಿ. ಶ್ರದ್ಧಾ – 3000 ಮೀ ನಡಿಗೆ(ದ್ವಿತೀಯ)ಇವರು ಅಜೇಯನಗರ ಮನೋಜ್ ಕುಮಾರ್ ಮತ್ತು ಅನುರಾಧರವರ ಪುತ್ರಿ, ಮತ್ತು ಬಾಲಕರ ವಿಭಾಗದಲ್ಲಿ ಪ್ರಜ್ವಲ್- 100 ೦ಮೀ, 200 ಮೀ (ಪ್ರಥಮ) ಇವರು ಬಲ್ನಾಡು ಜನಾರ್ಧನ ಮತ್ತು ಕುಸುಮವತಿಯವರ ಪುತ್ರ ಇವರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ್, ಹರಿಣಾಕ್ಷಿ, ಕು.ಮಮತಾ ತರಬೇತಿ ನೀಡಿದ್ದರು ಎಂದು ಶಾಲಾ ಮುಖ್ಯಗುರುಗಳಾದ ಆಶಾಬೆಳ್ಳಾರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.