’ಶಾಂತಿವನಟ್ರಸ್ಟ್’ಇದರ ಆಶ್ರಯದಲ್ಲಿ ನಡೆದ ’ಜ್ಞಾನಸಿಂಧು’ ಮತ್ತು’ಜ್ಞಾನ ಬಂಧು’ ಪುಸ್ತಕಾಧಾರಿತವಾಗಿ ವಿವಿಧ ಸ್ಪರ್ಧೆಗಳನ್ನು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ಇದರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಗಳಿಸಿರುತ್ತಾರೆ.

ಪ್ರಾಥಮಿಕ ವಿಭಾಗದ ಸ್ಪರ್ಧೆಗಳಲ್ಲಿ ಚಿತ್ರಕಲೆ- ಗೌತಮ್.ಎಸ್ (ದ್ವಿತೀಯ) ಇವರು ನೆಹರೂನಗರ ನಿವಾಸಿಯಾದ ಗಣೇಶ್ ಪೂಜಾರಿ ಮತ್ತು ಮಮತಾ ದಂಪತಿಗಳ ಪುತ್ರ, ಭಾಷಣ – ಪೃಥಾ(ದ್ವಿತೀಯ) ಇವರು ದಕ್ಷ ಕನ್ಸ್ಟ್ರಕ್ಷನ್ನ ಮಾಲಕರಾದ ರವೀಂದ್ರ ಪಿ. ಮತ್ತು ಉಷಾ ದಂಪತಿಗಳ ಪುತ್ರಿ, ಶ್ಲೋಕ ಕಂಠಪಾಠ – ಸಂಸ್ಕೃತಿ ಶಾಸ್ತ್ರೀ (ತೃತೀಯ) ಇವರು ಕೆದಿಲ ನಿವಾಸಿಯಾದ ದಿ.ಶ್ಯಾಮ ಪ್ರಸಾದ್ ಶಾಸ್ತ್ರೀ ಮತ್ತು ಸಂಧ್ಯಾಲಕ್ಷ್ಮೀ ದಂಪತಿಗಳ ಪುತ್ರಿ.
ಪ್ರೌಢ ಶಾಲಾ ವಿಭಾಗದ ಸ್ಪರ್ಧೆಗಳಲ್ಲಿ ಚಿತ್ರಕಲೆ-ರಾಮ್ ಪ್ರಸಾದ್(ದ್ವಿತೀಯ) ಇವರು ಪುತ್ತೂರು ನಿವಾಸಿ ಮಲ್ಲೇಶ್ ಮತ್ತು ಅನುರಾಧ ದಂಪತಿಗಳ ಪುತ್ರ. ಶ್ಲೋಕ ಕಂಠಪಾಠ-ಅರ್ಪಿತಾ ಸಿ.ಪಿ(ದ್ವಿತೀಯ) ಇವರು ಕುಂಜೂರುಪಂಜ ನಿವಾಸಿ ಚಂದ್ರಶೇಖರ ಕಲ್ಲೂರಾಯ ಮತ್ತು ಅನುರಾಧ ದಂಪತಿಗಳ ಪುತ್ರಿ.