ಪ್ರೌಢಶಾಲಾ ಪ್ರತಿಭಾಕಾರಂಜಿ – ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಮತ್ತು ಸರಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಬೆಳಿಯೂರುಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ವೃತ್ತ ಮಟ್ಟದ ಪ್ರೌಢಶಾಲಾ ಪ್ರತಿಭಾಕಾರಂಜಿ- 2015-16 ರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಗಳಿಸಿದ್ದಾರೆ.

High-school

ಸ್ಪರ್ಧಾ ವಿಜೇತರು: ಅಶ್ವಿನಿ.ಯು.ನಾಯಕ್ -ಕನ್ನಡ ಭಾಷಣ(ಪ್ರಥಮ), ಆಶಿಕಾ ರೈ.ಬಿ.ಜಿ- ತುಳು ಭಾಷಣ(ಪ್ರಥಮ), ಮಿಥುನ್‌ರಾಜ್- ಯೋಗಾಸನ(ದ್ವಿತೀಯ), ಅರ್ಪಿತಾ ಸಿ.ಪಿ – ಜನಪದಗೀತೆ(ದ್ವಿತೀಯ), ಕೀರ್ತಿಕುಡ್ವ – ಭಾವಗೀತೆ(ಪ್ರಥಮ), ಅಮಿತಾ-ಕ್ಲೇಮಾಡಲಿಂಗ್ (ದ್ವಿತೀಯ), ಅಂಕಿತಾ.ವಿ.ಕೆ -ಆಶುಭಾಷಣ(ಪ್ರಥಮ), ಅಕ್ಷಯ್ ರೈ- ಮಿಮಿಕ್ರಿ(ತೃತೀಯ), ಅಂಕಿತಾ.ವಿ.ಕೆ- ಚರ್ಚಾಸ್ಪರ್ಧೆ (ದ್ವಿತೀಯ), ರಾಮಪ್ರಸಾದ್.ಕೆ-ಚಿತ್ರಕಲೆ(ಪ್ರಥಮ), ಅರ್ಪಿತಾ ಸಿ.ಪಿ – ಗಝಲ್ (ಪ್ರಥಮ), ಅಕ್ಷಯ್ ಕುಮಾರ್ ಮತ್ತುತಂಡ-ರಸಪ್ರಶ್ನೆ (ದ್ವಿತೀಯ), ಲಿಖಿತಾ ಮತ್ತುತಂಡ- ಕವ್ವಾಲಿ(ಪ್ರಥಮ), ವೀಕ್ಷಾ ಮತ್ತುತಂಡ- ಜನಪದ ನೃತ್ಯ(ಪ್ರಥಮ), ಯಶಸ್ವಿ ಮತ್ತು ತಂಡ-ಕೋಲಾಟ(ದ್ವಿತೀಯ) ಸ್ಥಾನ ಪಡೆದಿದ್ದಾರೆ. ಇದರಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಮತ್ತುತಂಡ ಕಾಣಿಯೂರಿನಲ್ಲಿ ನಡೆಯಲಿರುವ ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Highslide for Wordpress Plugin