ವಿವೇಕಾನಂದ ಕನ್ನಡ ಶಾಲೆಯ ಪ್ರಸಕ್ತ ಶೈಕ್ಷಣಿಕ ವರ್ಷದ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮವು ಮೂರು ವಿಭಾಗದಲ್ಲಿ ನಡೆಯಿತು. ಹಿರಿಯ ಪ್ರಾಥಮಿಕ ವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶೋಭಾ ಕೊಳತ್ತಾಯ ಸಭಾಧ್ಯಕ್ಷರಾಗಿ ಮಕ್ಕಳಿಗೆ ಸೋಲು – ಗೆಲುವು ಸಾಮಾನ್ಯ. ಸೋತರೂ ಗೆದ್ದ ಹಾಗೆ ಮುಂದುವರಿಯಬೇಕು ಎಂದರು.
ಉಪಸಿತರಿದ್ದ ಶಿಕ್ಷಕ – ರಕ್ಷಕ ಸಂಘದ ಸದಸ್ಯರಾದ ಆಶಾ.ಕೆ.ರೈ ಮಕ್ಕಳಿಗೆ ಶುಭ ಹಾರೈಸಿದರು ಮತ್ತು ಹಿರಿಯ ವಿದ್ಯಾರ್ಥಿ ಪ್ರಜ್ವಲ್ ಚಂದ್ರ ಪ್ರತಿಭಾ ಪುರಸ್ಕಾರವು ವಾರ್ಶಿಕೋತ್ಸವದ ದಿನದಂದು ಮಾಡುವ ಬದಲು ಪ್ರತ್ಯೇಕವಾಗಿ ಮಾಡಿರುವುದು ಉತ್ತಮ ಹಾಗೂ ಇದರಲ್ಲಿ ಎಲ್ಲಾ ಮಕ್ಕಳಿಗೂ ಭಾಗವಹಿಸಲು ಅವಕಾಶ ಸಿಗುತ್ತದೆ ಎಂದರು. ವೇದಿಕೆಯಲ್ಲಿ ಹಿರಿಯ ಶಿಕ್ಷಕಿ ನಳಿನಿ ಮಾತಾಜಿ ಉಪಸ್ಥಿತರಿದ್ದರು.
