ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆ ಇದರ 2014-15 ರ ಜಿಲ್ಲಾ ಮಟ್ಟದ ಕ್ರೀಡಾಕೂಟವು ವಿವೇಕಾನಂದ ವಿದ್ಯಾಸಂಸ್ಥೆಗಳು ತೆಂಕಿಲ ಇದರ ಕ್ರೀಡಾಂಗಣದಲ್ಲಿ ನಡೆದಿದ್ದು ಇದರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯು 3 ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಪ್ರಶಸ್ತಿ ಪಡೆದ ತಂಡಗಳು ಕಿಶೋರ ವರ್ಗದ ಬಾಲಕರು, ಬಾಲಕಿಯರು, ಬಾಲವರ್ಗದ ಬಾಲಕಿಯರು. ಮತ್ತು ಕಿಶೋರ ವರ್ಗದ ಬಾಲಕರಲ್ಲಿ ಗುರುಪ್ರಸಾದ್ ಮತ್ತು ಯತೀಶ್ ಬಾಲಕಿಯರ ವಿಭಾಗದಲ್ಲಿ ಸೌಮ್ಯಶ್ರೀ ಮತ್ತು ಬಾಲವರ್ಗದ ಬಾಲಕಿಯರ ಶ್ರದ್ಧಾ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದಿದ್ದಾರೆ.
