ದಿನಾಂಕ 11-08-2014 ರ ಸೋಮವಾರದಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ರಕ್ಷಾಬಂಧನ ಕಾರ್ಯಕ್ರಮ ನಡೆಸಲಾಯಿತು. ಅತಿಥಿಗಳಾಗಿ ಆಗಮಿಸಿದ ಶ್ರೀರಾಮ ಶಿಶುಮಂದಿರ, ಕಲ್ಲಡ್ಕ ಇಲ್ಲಿಯ ಗಂಗಾಮಾತಾಜಿ ಇವರು ವಿವಿಧ ಮೌಲ್ಯಯುತವಾದ ಕಥೆಗಳ ಮೂಲಕ ರಕ್ಷಾಬಂಧನ ಆಚರಣೆಯ ಅರ್ಥ, ಮಹತ್ವದ ಕುರಿತು ತಿಳಿಸಿಕೊಟ್ಟರು.


ವೇದಿಕೆಯಲ್ಲಿ ಶ್ರೀಮತಿ ಸೀಮಾ ಕೃಷ್ಣ ಪ್ರಸಾದ್ ಮತ್ತು ಶ್ರೀಮತಿ ನಳಿನಿ ಮಾತಾಜಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು ಪ್ರಾಲ್ಗೊಂಡರು, ಶ್ರೀಮತಿ ಸ್ವಾತಿ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.