ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಬದುಕಿನ ಒಂದು ಭಾಗವಾಗಿ ಗ್ರಹಿಸಬೇಕಾಗಿದೆ. ಪರೀಕ್ಷಾ ಪೂರ್ವ ತಯಾರಿಯು ಸಮರ್ಪಕವಾಗಿದ್ದು ಯಾವುದೇ ಒತ್ತಡವಿಲ್ಲದೆ ನಮ್ಮ ಸ್ನೇಹಿತನಂತೆ ಪರೀಕ್ಷೆಯನ್ನು ಕಾಣಬೇಕು. ಎಂದು ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಬಿ.ವಿ. ಸೂರ್ಯನಾರಾಯಣ ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ಮಕ್ಕಳೊಂದಿಗೆ ಪರೀಕ್ಷಾ ಪೂರ್ವ ತಯಾರಿಯ ಬಗ್ಗೆ ಸಂವಾದ ನಡೆಸಿ ಮಾತನಾಡಿದರು.
