‘ಎಂಜಿನೀಯರಿಂಗ್ ನನ್ನ ಆಸಕ್ತಿಯ ಕ್ಷೇತ್ರ ಪ್ರೀತಿಯಿಂದ ಕಲಿತಾಗ ಯಾವುದೇ ಕ್ಷೇತ್ರದ ಕೆಲಸ ಭಾರವೆನಿಸುವುದಿಲ್ಲ’ ಎಂದು ನಾರಾಯಣ ಸ್ವಾಮಿ ಎಂ.ಕೆ ನುಡಿದರು. ಮಕ್ಕಳೊಂದಿಗೆ ಸಂವಾದ ನಡೆಸಿ ಐಟಿ ಕ್ಷೇತ್ರದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅಂತರ್ ರಾಷ್ಟ್ರೀಯ ಪೇಟಂಟ್(ಸ್ವಾಮ್ಯತ) ಹೊಂದಿರುವ ಶ್ರೀಯುತರು ಇಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಐ.ಟಿ, ಎನ್.ಐ.ಟಿ, ಬಿ.ಐ.ಟಿ ಕಾಲೇಜುಗಳಿಗೆ ತರಬೇತು ನೀಡುತ್ತಿದ್ದು ಮೈಸೂರಿನಲ್ಲಿ ಎಂಬಡೆಡ್ ಟೆಕ್ನಾಲಜಿ ಇನ್ಸಿಟ್ಯೂಟ್ ಹೊಂದಿರುತ್ತಾರೆ. ಶ್ರೀಯುತರನ್ನು ಶಾಲಾ ಶಿಕ್ಷಕಿ ಮಾಧವಿ ಸ್ವಾಗತಿಸಿ ಪರಿಚಯಿಸಿ ವಂದಿಸಿದರು.

