ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ದಿನಾಂಕ 27-07-2013ರಂದು ವಿವೇಕಾನಂದ ಪದವಿ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಡಾ. ಶ್ರೀಶ ಕುಮಾರ್ರವರು ನೇತ್ರಾವತಿ ನದಿ ತಿರುವು ಯೋಜನೆಯ ಬಗ್ಗೆ ಮಾತನಾಡಿ ಅದರ ಒಳಿತು ಕೆಡುಕುಗಳನ್ನು ಕೆಲವೊಂದು ಸಾಕ್ಷ್ಯ ಚಿತ್ರಗಳನ್ನು ತೋರಿಸುವ ಮೂಲಕ ಪರಿಚಯ ಮಾಡಿದರು.

ಪರಿಸರ ಪ್ರೇಮಿಗಳಾದ ಸಮಾಜ ಬಾಂಧವರು ಈ ಯೋಜನೆಯು ಜಾರಿಗೊಳ್ಳದಂತೆ ಜಾಗೃತರಾಗಬೇಕೆಂದು ಕರೆ ಇತ್ತರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಮುಖ್ಯ ಗುರುಗಳು ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ಸ್ವಾತಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.