ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ ’ಚಿಲಿಪಿಲಿ ಚಿಣ್ಣರ ಪಾರ್ಕ್’ನ್ನು ಕೇಂದ್ರ ಕೌಶಲ ಅಭಿವೃದ್ಧಿ ರಾಜ್ಯ ಸಚಿವರಾದ ಶ್ರೀ ಅನಂತ್ಕುಮಾರ್ ಹೆಗಡೆ ಅವರು ತೆಂಗಿನಕಾಯಿ ಒಡೆದು ಉದ್ಫಾಟಿಸಿದರು. ಬಳಿಕ ಪುಟಾಣಿಗಳನ್ನು ಉಯ್ಯಾಲೆಯಲ್ಲಿ ಕುಳ್ಳಿರಿಸುವ ಮುಖಾಂತರ ಪಾರ್ಕ್ಗೆ ಚಾಲನೆ ನೀಡಿದರು. ಸಚಿವರನ್ನು ಶಾಲಾ ವಿದ್ಯಾರ್ಥಿಗಳು ಆರತಿ ಬೆಳಗಿ ತಿಲಕವಿಟ್ಟು, ವೀಳ್ಯ ನೀಡಿ ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತಿಸಿದರು.