ನಿಸರ್ಗ ಸ್ನೇಹಿ ಬದುಕು ನಮ್ಮದಾಗಲಿ – ಶಿಕ್ಷಣವು ಕೇವಲ ಶಾಲಾ ಕಟ್ಟಡದಲ್ಲಿ ನಾಲ್ಕು ಗೋಡೆಗಳ ನಡುವಣ ಪ್ರಕ್ರಿಯೆ ಆಗದೆ ನಿಸರ್ಗದೊಂದಿಗೆ ಕಲಿತು ಬೆರೆಯುವ ಅನುಭವವಾಗಬೇಕು ಎನ್ನುವ ಆಶಯದೊಂದಿಗೆ ವಿವೇಕಾನಂದ ಕನ್ನಡ ಶಾಲೆಯಲ್ಲಿ ಪೋಷಕರ ಸಹಕಾರದೊಂದಿಗೆ ’ಬಾಳೆ ತೋಟ’ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಸುಮಾರು ಇಪ್ಪತ್ತು ವಿಧದ ಬಾಳೆಯ ಗಿಡಗಳನ್ನು ನೆಡಲಾಯಿತು. ಶಾಲಾ ಪೋಷಕರು, ಶಿಕ್ಷಕರು, ಮಕ್ಕಳು ಸೇರಿಕೊಂಡು ಇದರಲ್ಲಿ ಭಾಗವಹಿಸಿದರು.
