ತೆಂಕಿಲ ವಿವೇಕಾನಂದಲ್ಲಿ ಶ್ಯಾಮ ಪ್ರಸಾದ ಶಾಸ್ತ್ರಿಯವರಿಗೆ ಶ್ರದ್ಧಾಂಜಲಿ

ಪುತ್ತೂರು: ಹುಟ್ಟುವಾಗ ಉಸಿರು ಇರುತ್ತದೆ, ಹೆಸರು ಇರುವುದಿಲ್ಲ. ಸತ್ತಾಗ ಹೆಸರು ಉಳಿಯುತ್ತದೆ ಉಸಿರು ಇರುವುದಿಲ್ಲ. ಸಮಾಜದಲ್ಲಿ ಶಾಶ್ವತ ಹೆಸರನ್ನು ಉಳಿಸಿ ಎಲ್ಲರ ಪ್ರೀತಿಗೆ ಪಾತ್ರರಾಗುತ್ತಾರೆ. ವಿವೇಕಾನಂದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ಯಾಮ ಪ್ರಸಾದ ಶಾಸ್ತ್ರಿ ಇವರು ಈ ರೀತಿಯ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ನೆನಪಿಸುತ್ತಾ ವಿವೇಕಾನಂದ ಶಾಲಾ ಆಡಳಿತ ಮಂಡಳಿ ಸಂಚಾಲಕ ರವೀಂದ್ರ ಪಿ.ರವರು ಈ ಮೇಲಿನಂತೆ ನುಡಿದರು.

20140901_152455

ಸೆ. 1 ರಂದು ತೆಂಕಿಲ ವಿವೇಕಾನಂದ ಶಾಲಾ ಆವರಣದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಡಾ. ಕೃಷ್ಣ ಭಟ್ ಕೊಂಕೋಡಿ, ಸದಸ್ಯ ಅಚ್ಚುತ ನಾಯಕ್ ಮತ್ತು ಶೋಭಾ ಕೊಳತ್ತಾಯರವರು, ಶಿಕ್ಷಕರು ಮತ್ತು ಶಾಲಾ ಮಕ್ಕಳು ಶ್ರದ್ಧಾಂಜಲಿ ಅರ್ಪಿಸಿದರು.

Highslide for Wordpress Plugin