ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 10-7-2014 ರಂದು ಗುರುಪೂರ್ಣಿಮೆ ಆಚರಣೆ ನಡೆಯಿತು. ಶಾಲೆಯ ಹಿರಿಯ ಮಾತಾಜಿ ದುರ್ಗಾದೇವಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಫಾಟಿಸಿದರು. ವಿದ್ಯಾರ್ಥಿಗಳಾದ ಅಕ್ಷಯ್, ಆಶಿಕಾ, ಅಂಕಿತಾ, ಅಶ್ವಿನಿ ಗುರುಪೂರ್ಣಿಮೆ ಆಚರಣೆ ವಿಚಾರದ ಬಗ್ಗೆ ಭಾಷಣಗೈದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವೀಣಾಸರಸ್ವತಿ ಮಾತಾಜಿ ವೇದವ್ಯಾಸರ ಕಥೆಯನ್ನು ಮಕ್ಕಳಿಗೆ ತಿಳಿಸಿದರು. ಶಿಕ್ಷಕಿ ಪೃಥ್ವಿ ಮಾತಾಜಿ ಕಾರ್ಯಕ್ರಮ ನಿರ್ವಹಿಸಿದರು.

