ಮಕ್ಕಳು ನಾವು ಹೇಳಿದ ಹಾಗೆ ಮಾಡುವುದಿಲ್ಲ ನಾವು ಮಾಡಿದ ಹಾಗೆ ಮಾಡುತ್ತಾರೆ. ಹಿರಿಯರ ಅನುಕರಣೆಯಿಂದಲೇ ಮಗು ವಿಕಾಸವಾಗುತ್ತದೆ ಎಂದು ಉಜಿರೆಯ ಬೆನಕ ಆಸ್ಪತ್ರೆಯ ಪಬ್ಲಿಕ್ ರಿಲೇಷನ್ ಆಫೀಸರ್ ಆಗಿರುವ ಎಸ್.ಜಿ.ಭಟ್ ಹೇಳಿದರು. ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ನಾಲ್ಕು ಮತ್ತು ಐದನೇ ತರಗತಿ ಮಕ್ಕಳ ಪೋಷಕರಿಗೆ ಪರಿಣಾಮಕಾರಿ ಪೋಷಕತ್ವ ಎಂಬ ವಿಷಯದಲ್ಲಿ ಮಾತನಾಡಿದರು. ಶಿಕ್ಷಕ ರಾಜೇಶ್ ಸ್ವಾಗತಿಸಿ, ಪರಿಚಯಿಸಿ ವಂದಿಸಿದರು.

