ಮಕ್ಕಳಿಗೆ ವ್ಯಾವಹಾರಿಕ ಜ್ಞಾನವನ್ನು, ಉತ್ತಮ ವಾತಾವರಣವನ್ನು ಕೊಡಬಲ್ಲವರೇ ಪೋಷಕರು. ಮಗುವನ್ನು ಅಂಕಗಳನ್ನು ಗಳಿಸುವ ಯಂತ್ರವೆಂದು ತಿಳಿದು ನಿಮ್ಮ ಆಲೋಚನೆಗಳನ್ನು ಅವರ ಮೇಲೆ ಹೇರದಿರಿ ಎಂದು ರಾಜ್ಯ ತರಬೇತುದಾರರಾದ ಎನ್.ಸಿ.ಪಾಂಡುರಂಗ ಶೃಂಗೇರಿ ಇವರು ಹೇಳಿದರು. ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8, 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳ ಪೋಷಕರಿಗಾಗಿ ‘ಪರಿಣಾಮಕಾರಿ ಪೋಷಕತ್ವ’ ಎಂಬ ವಿಷಯದಲ್ಲಿ ಮಾತನಾಡುತ್ತಾ ಈ ಮೇಲಿನ ಮಾತನ್ನು ಹೇಳಿದರು. ಶಿಕ್ಷಕಿ ಕು.ನಿಶ್ಚಿತಾ ಸ್ವಾಗತಿಸಿ, ಪರಿಚಯಿಸಿ ವಂದಿಸಿದರು.

