ಶಾಲೆಗೆ ಸರಸ್ವತಿ ದೇವಿಯ ವಿಗ್ರಹ ಆಗಮನ

ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರತಿಷ್ಠಾಪಿಸಲಿರುವ ಸರಸ್ವತಿ ದೇವಿ ವಿಗ್ರಹದ ಮೆರವಣಿಗೆಯು ಸೆ.೨೮ರಂದು ನಡೆಯಿತು. ಕಾರ್ಕಳದಲ್ಲಿ ತಯಾರಿಸಲ್ಪಟ್ಟ ವಿಗ್ರಹವು ಸೆ. 28 ರಂದು ನೆಹರು ನಗರದಲ್ಲಿರುವ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಛೇರಿ ನರೇಂದ್ರಕ್ಕೆ ಆಗಮಿಸಿದೆ. ಸೆ. 28 ರಂದು ಬೊಳುವಾರು ವೃತ್ತದ ಬಳಿಯಿಂದ ಹೊರಟು ಮೆರವಣಿಗೆಯು ಮುಖ್ಯ ರಸ್ತೆಯ ಮೂಲಕ ಸಾಗಿ ಮಹಾಲಿಂಗೇಶ್ವರ ದೇವಸ್ಥಾನ, ವೆಂಕಟ್ರಮಣ ದೇವಸ್ಥಾನ, ಮಹಮ್ಮಾಯಿ ದೇವಸ್ಥಾನ ಹಾಗೂ ಭವಾನಿ ಶಂಕರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಬಳಿಕ ತೆಂಕಿಲ ವಿದ್ಯಾಸಂಸ್ಥೆಗೆ ಆಗಮಿಸಿತು. ಬಳಿಕ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಪ್ರತಿಷ್ಠೆ ಹಾಗೂ ಸರಸ್ವತಿ ಪೂಜೆ ನಡೆಯಿತು. ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Saraswathi procession (1)

Saraswathi procession

Saraswathi procession (3)

Saraswathi procession (2)

Highslide for Wordpress Plugin