ವೆಂಕಟೇಶ್ವರ ಅಮೈ ಅವರಿಗೆ ಶ್ರದ್ಧಾಂಜಲಿ ಸಭೆ

ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರೂ, ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಟ್ಲ ತಾಲೂಕಿನ ಸಂಘಚಾಲಕರೂ ಆಗಿದ್ದ ಶ್ರೀ ವೆಂಕಟೇಶ್ವರ ಅಮೈ ಅವರು ಇತ್ತೀಚೆಗೆ ನಿಧನರಾಗಿದ್ದು, ಅವರಿಗೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ.ಕೃಷ್ಣ ಭಟ್‌ ಕೊಂಕೋಡಿ ಮಾತನಾಡಿ ಹಿರಿಯರಾದ ವೆಂಕಟೇಶ್ವರ ಅಮೈ ಅವರ ವ್ಯಕ್ತಿತ್ವ ಇತರರಿಗೆ ಮಾದರಿಯಾಗಿತ್ತು. ತಾಯಿ ಪ್ರೀತಿಯನ್ನು ಪ್ರತಿಯೊಬ್ಬರಲ್ಲೂ ತೋರಿಸುತ್ತಿದ್ದರು. ತನ್ನ ಪ್ರೀತಿಯ ಮಾತಿನಿಂದಲೇ ಇತರರಿಗೆ ಮಾರ್ಗದರ್ಶನ ನೀಡುತ್ತಿದ್ದರು ಎಂದರು. ಶಾಲಾ ಆಡಳಿತ ಮಂಡಳಿ ಕೋಶಾಧಿಕಾರಿ ವಸಂತ ಸುವರ್ಣ ಹಾಡಿನ ಮೂಲಕ ನುಡಿನಮನ ಸಲ್ಲಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಅಚ್ಯುತ ನಾಯಕ್, ಸಂಚಾಲಕರಾದ ವಿನೋದ್‌ ಕುಮಾರ್‌ ರೈ, ಗುತ್ತು, ಆಡಳಿತ ಮಂಡಳಿ ಸರ್ವ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದು ಮೃತರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸಿದರು.

Venkatesh Amai - Shraddanjali sabhe (4)

Venkatesh Amai - Shraddanjali sabhe (1)

Venkatesh Amai - Shraddanjali sabhe (2)

Venkatesh Amai - Shraddanjali sabhe (3)

Highslide for Wordpress Plugin