2017-18 ನೇ ಸಾಲಿನಲ್ಲಿ ಬೆಳ್ಳಿಹಬ್ಬ ಆಚರಿಸಲಿರುವ ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಬೆಳ್ಳಿಹಬ್ಬ ರಚನಾ ಸಮಿತಿ ಸಭೆಯು ದಿನಾಂಕ 9-4-2016 ರಂದು ಜರುಗಿತು.
ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷರಾಗಿ ಡಾ| ಪ್ರಭಾಕರ ಭಟ್ ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಹರಿಣಿ ಪುತ್ತೂರಾಯ, ಉಪಾಧ್ಯಕ್ಷರಾಗಿ ಚನಿಲ ತಿಮ್ಮಪ್ಪ ಶೆಟ್ಟಿ, ಮಣಿಲ ಮಹಾದೇವ ಶಾಸ್ತ್ರೀ, ತ್ರಿವೇಣಿ ಪೆರ್ವೋಡಿ, ಜಯಂತ ನಡುಬೈಲು, ಶಿವರಂಜನ್, ಅನೀಶ್ ಬಡೆಕ್ಕಿಲ, ವಸಂತ ಸುವರ್ಣ ಆಯ್ಕೆಯಾಗಿರುತ್ತಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಎಸ್.ಆರ್. ರಂಗಮೂರ್ತಿ, ಕಾರ್ಯದರ್ಶಿ ಶಿವಪ್ರಸಾದ್ ಇ., ಹಿರಿಯರಾದ ಉರಿಮಜಲು ರಾಮ ಭಟ್, ಪ್ರೋ. ಎ.ವಿ. ನಾರಾಯಣ , ಶಿವರಾಮ ಭಟ್ ಕರಿಯಾಲ, ಸುಬ್ರಹ್ಮಣ್ಯ ಕೊಳತ್ತಾಯ, ರಾಧಾಕೃಷ್ಣ ಭಕ್ತ, ಎಂ.ಎಸ್. ರಘುನಾಥ ರಾವ್, ಕಜಂಪಾಡಿ ಸುಬ್ರಹ್ಮಣ್ಯ ಭಟ್, ಗುಣಪಾಲ ಜೈನ್, ರಾಮಪ್ರಸಾದ್ ಕರಿಯಾಲ, , ಜೀವಂಧರ್ ಜೈನ್, ಜನಾರ್ಧನ ಸೇಡಿಯಾಪು, ಶ್ರೀನಿವಾಸ ಪೈ, ಜಯರಾಂ ಭಟ್, ಬಿ.ವಿ. ಅರ್ತಿಕಜೆ ಶಾಲಾ ಅಧ್ಯಕ್ಷರಾದ ಡಾ| ಕೃಷ್ಣ ಭಟ್ ಕೊಂಕೋಡಿ, ಸಂಚಾಲಕರಾದ ರವೀಂದ್ರ.ಪಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಬಿರ್ಮಣ್ಣ ಗೌಡ, ಅಚ್ಯುತ ನಾಯಕ್, ರೂಪಲೇಖಾ, ಶೋಭಾ ಕೊಳತ್ತಾಯ ಹಾಗೂ ಪೋಷಕ ವೃಂದ ಮತ್ತು ಶಾಲಾ ಎಲ್ಲಾ ಶಿಕ್ಷಕ ವೃಂದದವರ ಉಪಸ್ಥಿತಿಯಲ್ಲಿ ಈ ಸಭೆಯು ನಡೆಯಿತು.